TOP STORIES:

ಅಕ್ಕರೆಯ ಮಾತುಗಳು, ಸಕ್ಕರೆಯ ಮನಸುಳ್ಳ ಮಿಂಚುಳ್ಳಿ ನಟಿ ನವ್ಯಾ ಪೂಜಾರಿ


ಜೀವನವೆ ನಾಟಕ ರಂಗ. ನಾವೆಲ್ಲಾ ಸೃಷ್ಟಿಯ ಸೂತ್ರದ ಬೊಂಬೆಗಳು. ಸುಖ ದುಃಖಗಳ ಪರೀಕ್ಷೆಯ ನಡುವೆ ನಮ್ಮೆಲ್ಲರ ಮುಖದಲ್ಲಿ ಮಂದಹಾಸವ ಬರಿಸಲು ನಮ್ಮೆಲ್ಲರನ್ನು ಮನೊರಂಜಿಸಲು ತೆರೆಯ‌ ಮೇಲೆ ಬಣ್ಣ ಹಚ್ಚಿ ನಾಟಕ, ಸಿನಿಮಾ ರಂಗದಲ್ಲಿ ಜನರ ಮನಸೆಳೆವರು ರಂಗದ ಕಲಾವಿದರು. ಅಂತಹ ಸಿನಿಮಾ ರಂಗದಲ್ಲಿ ನಮ್ಮ ಬಿರುವ ಕುಲಕೆ ಹೆಮ್ಮೆಯ ಗುರುತಾಗಿ ಸದ್ದಿಲ್ಲದೆ ಮಿಂಚುತ್ತಿರುವ ನಗುಮುಖದ ಚೆಲುವೆ ನವ್ಯ ಪೂಜಾರಿ. ಮುಖದಲ್ಲಿ ಚೈತನ್ಯದ ಚಿಲುಮೆ, ಭೂಲೋಕದ ಅಪ್ಸರೆ, ನಕ್ಕರೆ ಮಲ್ಲಿಗೆ ಅರಳಿದಂತೆ, ಅಕ್ಕರೆಯ ಮಾತುಗಳು, ಸಕ್ಕರೆಯ ಮನಸುಳ್ಳ ಮಿಂಚುಳ್ಳಿ ನವ್ಯಾ ಪೂಜಾರಿ.

ಯಾದವ ಪೂಜಾರಿ ಹಾಗೂ ಸುಮಿತರವರ ಇಬ್ಬರು ಮಕ್ಕಳಲ್ಲಿ ಮೊದಲ ಮಗಳು ನವ್ಯಾ ಹಾಗೂ ಇವರ ತಂಗಿಯ ಹೆಸರು ಕಾವ್ಯಾ.ಈ ಸುಂದರ ಸಂಸಾರ ಪ್ರಸ್ತುತ ಸುರತ್ಕಲ್ ನಲ್ಲಿ ವಾಸವಾಗಿದ್ದಾರೆ. N.I.TK ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ ವಿಧ್ಯಾಭ್ಯಾಸ ಹಾಗೂ ನಿಟ್ಟೆ ಕರ್ನಾಟಕ ಕಾಲೇಜ್ ನಲ್ಲಿ Computer Science ವಿಭಾಗದಲ್ಲಿ ಕಲಿತು ಮೊದಲಿಗೆ ಒಂದು ಕಚೇರಿಯಲ್ಲಿ ವೃತ್ತಯನ್ನು ಮಾಡುತ್ತಿದ್ದ ಅನುಭವ ಇವರದ್ದು. ತದನಂತರ ಉಮಿಲ್ ಚಲನಚಿತ್ರದ ಆಡಿಷನ್ ನಲ್ಲಿ ಆಯ್ಕೆಯಾಗಿ ಸಿನೆಮಾ ರಂಗಕ್ಕೆ ಕಾಲಿಟ್ಟರು.

ಸಿನಿಮಾ ಕ್ಷೆತ್ರವು ಇವರಿಗೆ ಬಯಸದೆ ಬಂದ ಭಾಗ್ಯವಾಯಿತು. ಆ ಕಲೆಯ ಕಳೆ ಇವರ ಮೊಗದಲ್ಲಿ ಹೊಳೆಯುತ್ತಿತ್ತು. ಅದೇ ಕಾರಣ ಇವರಿಗೆ ಮೊದಲು ತುಳು ಸಿನೆಮಾ ಉಮಿಲ್ ಚಿತ್ರದಲ್ಲಿ ನಟಿಸಲು ಅವಕಾಶ ದೊರಕಿತು. ಸಣ್ಣ ವಯಸ್ಸಿನಲ್ಲೇ ಸಿನೆಮಾ ರಂಗದ ಪುಟ್ಟ ಕನಸು ಬೆಳೆಸಿದ್ದರೂ ಕೂಡ ವಿದ್ಯಾಭ್ಯಾಸಕ್ಕೋಸ್ಕರ ಆ ಕನಸನ್ನೇ ಮರೆತ ಇವರು ಮುಂದೆ ಜೀವನದಲ್ಲಿ ತಾನೊಬ್ಬಳು ಸಿನಮಾ ನಟಿ ಆಗುವೆ ಅಂತಹ ಅವಕಾಶ ಸಿಗಬಹುದು ಎಂದು ಅಂದುಕೊಂಡಿರಲಿಲ್ಲ. ಕಾಲದ ಮಹಿಮೆ ಯಾರು ಅರಿಯರು ಸಾಮರ್ಥ್ಯವಿದ್ದರೆ ಯಾವುದೇ ಕ್ಷೇತ್ರದಲ್ಲಿ ಅನುಭವ ರಹಿತ ಮಿಂಚಬಹುದು. ಹಾಗೇ ಇವರ ಕಥೆ ತನಗೆ ಬಯಸದೆ ಬಂದ ಅವಕಾಶವಾದರೂ ಮೊದಲ ಸಿನೆಮಾದಲ್ಲೇ ಜನರ ಮನಮುಟ್ಟಿ ಒಬ್ಬ ಅದ್ಭುತ ಕಲಾವಿದೆಯಾಗಿ ಮುಂದೆ ಈ ಕ್ಷೇತ್ರದಲ್ಲಿ ನಿರ್ದಿಷ್ಟವಾದ ಗುರಿಯೊಂದನ್ನು ಇಟ್ಟುಕೊಂಡು ನವನವೀನತೆಯಿಂದ ಭವಿಷ್ಯದ ಬಾಗಿಲ ತರೆದರು‌. ಸಿನೆಮಾ ಕ್ಷೇತ್ರಕ್ಕೆ ಕಾಲಿಡುವ ಮೊದಲು ಕಲಿಕೆಯ ಸಂದರ್ಭದಲ್ಲಿ ಇವರು ನೃತ್ಯ ಹಾಗೂ ಕ್ರೀಡಾ ಚಟುವಟಿಕೆಯಲ್ಲಿ ಅಪಾರ ಒಲವು ಹೊಂದಿ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿದ ಉತ್ಸಾಹಿ ವಿಧ್ಯಾರ್ಥಿಯಾಗಿದ್ದರು.

ಉಮಿಲ್ ಇವರ ಮೊದಲ ತುಳು ಚಲನಚಿತ್ರವಾಗಿದ್ದು.ರಂಜಿತ್ ಬಜ್ಪೆರವರ ನಿರ್ದೇಶನದಲ್ಲಿ ಡಿಸೆಂಬರ್ ೨೦೧೮ ರಂದು ಬಿಡುಗಡೆಯಾಗಿದ್ದು. ಹೊಸ ಪರಿಚಯದ ಹೆಜ್ಜೆಯ ಗುರುತು ಸದ್ದಿಲ್ಲದೆ ಸಿನೆಮಾ ರಂಗದಲ್ಲಿ ಸುದ್ಧಿ ಮಾಡ ತೊಡಗಿತು.

ತದನಂತರ ಇವರು ತ್ರಿಬಲ್ ತಲಾಕ್ ಎಂಬ ಆರ್ಟ್ ಮೂವಿಯಲ್ಲಿ ನಟಿಸಿದರು. ಇದು ಇವರ ಮೊದಲ ಆರ್ಟ್ ಮೂವಿಯಾಗಿದೆ. ಈ ಚಲನಚಿತ್ರವು ಹೊಸ ತಂಡದ ಹೊಸ ಪ್ರಯತ್ನದಲ್ಲಿ ಲಂಡನ್ ನಲ್ಲಿ ಬಿಡುಗಡೆಯಾಗಿದೆ. ಚಲನಚಿತ್ರವು ವಿಭಿನ್ನವಾಗಿದ್ದು ಬ್ಯಾರಿ ಸಂಸ್ಕೃತಿಯ ಕುರಿತಾಗಿತ್ತು. ಇದರಲ್ಲಿ ನವ್ಯಾರವರು ಒಬ್ಬ ಮುಸ್ಲಿಂ ಮಹಿಳೆಯಾಗಿ ಪಾತ್ರ ನಿರ್ವಹಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿರುವರು. ದ್ವಿರುಕ್ತಿ ಎಂಬ ಕನ್ನಡ ಚಲನಚಿತ್ರದಲ್ಲಿ ಪಾತ್ರವಹಿಸಿದ್ದು ಇದುವರೆಗಿನ ಇವರ ಮೊದಲ ಕನ್ನಡ ಚಲನಚಿತ್ರವಾಗಿದೆ.

ಸುಂದರ ಕನಸಿನೊಂದಿಗೆ ಇತ್ತೀಚಿಗೆ ತೆರೆಕಂಡ ವಿಶೇಷ ಚಲನಚಿತ್ರ ಕನಸು ಮಾರಾಟಕ್ಕಿದೆ ಎಂಬ ಸಿನೆಮಾದಲ್ಲಿಯೂ ಇವರು ಅಭಿನಯಿಸಿರು. ಚಿತ್ತದಲ್ಲಿರುವ ಉದಯೋನ್ಮುಖ ಕಲಾವಿದರ ನಡುವೆ ತಾನು ಒಬ್ಬ ಯುವ ನಟಿಯಾಗಿ ಪಾತ್ರವಹಿಸಿರುವರು.

ಸಿನೆಮಾ ರಂಗದಲ್ಲಿ ಮುಂದುವರಿಯಲು ಇವರಿಗೆ ಇವರ ಮನೆಯವರ ಅಪಾರ ಪ್ರೋತ್ಸಾಹವಿದ್ದು‌. ಇದೇ ಇವರಿಗೆ ಮುನ್ನಡೆಯಲು ದೀಕ್ಷೆ ಎನ್ನುತ್ತಾರೆ ನವ್ಯಾ ಪೂಜಾರಿಯವರು.

ಎರಡೆಕ್ರೆ, ಇಂಗ್ಲಿಷ್, ಬೋಜರಾಜ್ ಎಂ.ಬಿ.ಬಿ.ಎಸ್, ಗಬ್ಬರ್ ಸಿಂಗ್, ತುಳುನಾಡ ಮಡಿಲು, ಬಿಂದಾಸ್, ಗೂಗ್ಲಿ ಮೊದಲಾದ ಸಿನೆಮಾಗಳು ಬಿಡುಗಡೆಯಾಗಲಿದ್ದು ಈ ಉದಯೋನ್ಮುಖ ನಟಿಗೆ ಪ್ರೋತ್ಸಾಹದ ಜೊತೆಗೆ ಮತ್ತಷ್ಟು ಅವಕಾಶಗಳು ದೊರಕಲಿ. ಮುಖ್ಯವಾಗಿ ತುಳು ರಂಗದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಇವರು ಆದಷ್ಟು ತುಳು ಸಿನೆಮಾಗಳಲ್ಲಿ ನಟಿಸಲು ಬಯಸುತ್ತಾರೆ. ಹುಟ್ಟಿದ ಮಣ್ಣಿನ ಮೇಲಿನ ಅಭಿಮಾನವೇ ಇವರನ್ನು ಎತ್ತರಕ್ಕೆ ಬೆಳೆಸಲು ಕಾರಣವಾಗಬಹುದು. ಹಾಗೆಯೇ ತುಳು, ಕನ್ನಡ ಇತರ ಭಾಷಾ ರಂಗದಲ್ಲೂ ಅವಕಾಶಗಳು ನಿಮ್ಮ ಮುಡಿಗೇರಲಿ. ನಟನೆಯ ಹಾದಿಯಲ್ಲಿ ಯಶಸ್ವಿ ನಟಿಯಾಗಿ ಮಿಂಚುವ ತೌಳವ ಸಿರಿಗೆ ಸವಿನಯದ ಶುಭಾಶಯಗಳು.

✍️ ತೃಪ್ತಿ.ಜಿ.ಕುಂಪಲ


Related Posts

ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ


Share        ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ


Read More »

ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ ಕೋಟ್ಯಾನ್‌ಗೆ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ


Share        ವಿಕ ಸುದ್ದಿಲೋಕ ಮಂಗಳೂರು ಸೌಹಾರ್ದತೆ ಬಿಂಬಿಸುವ ವರದಿಗೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ‘ಬ್ಯಾಂಡ್ ಮಂಗಳೂರು’ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ


Read More »

ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಆಯ್ಕೆ


Share        ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದ ಬಿಂಬಿಸುವ ವರದಿಗೆ ನೀಡಲಾಗುವ “ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿಗೆ ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯಕೋಟ್ಯಾನ್ ಪಡು  ಆಯ್ಕೆಯಾಗಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ 2024 ಅಕ್ಟೋಬರ್


Read More »

ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್( ರಿ) ಇದರ ನೂತನ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ ಆಯ್ಕೆ


Share        ಶ್ರೀ ಕ್ಷೇತ್ರ ಗೆಜ್ಜೆಗಿರಿಯ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ  ಚಾರಿಟೇಬಲ್ ಟ್ರಸ್ಟ್(ರಿ) ಇದರ ನೂತನ ಅಧ್ಯಕ್ಷರಾಗಿ ಬಿರ್ವ ಸೆಂಟರ್ ಇದರ ಮಾಲಕರಾದ  ಕೆ ಸಂಜೀವ ಪೂಜಾರಿ ಇವರನ್ನು ಕಂಕನಾಡಿ ಬ್ರಹ್ಮ


Read More »

8ನೇ ವಯಸ್ಸಿನಲ್ಲಿ ಕಪೋತಾಸನದ ಭಂಗಿಯಲ್ಲಿ ವಿಶ್ವ ದಾಖಲೆ ಮಾಡಿದ ಬಾಲಕಿ ಕುಮಾರಿ ಶರಣ್ಯ ಶರತ್!


Share        ಮಂಗಳೂರು, ಜೂ. 20 ಪನ್ನೀರಿನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಶರಣ್ಯ ಶರತ್ ಅವರು ತನ್ನ ಎಂಟನೆಯ ವಯಸ್ಸಿನಲ್ಲಿ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್


Read More »

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾಗಿ ಎಚ್.ಎಸ್.ಜಯರಾಜ್ ಆಯ್ಕೆ


Share        ಮಂಗಳೂರು: ಬ್ರಹ್ಮಶ್ರೀ ನಾರಾಯಣಗುರುಗಳು ಪ್ರತಿಷ್ಠಾಪಿಸಿದ ಕರ್ನಾಟಕದ ಏಕೈಕ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಆಡಳಿತ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ಜಂಟಿ ಸಭೆ ಕೇಂದ್ರದ ಮಾಜಿ ಸಚಿವ


Read More »