TOP STORIES:

ಅಮೇರಿಕಾದ ನೆಲದಲ್ಲಿ, ಭಾರತದ ಪ್ರಧಾನಿಗೆ ಆತಿಥ್ಯದ ಜವಾಬ್ದಾರಿಯನ್ನು ವಹಿಸಿಕೊಂಡ ತುಳುನಾಡ ಮನೆ ಮಗಳು ಸುಮಲ್ ಕೋಟ್ಯಾನ್


ಈ ತುಳುನಾಡಿನ ಮಣ್ಣಿನ ಗುಣವೇ ಹಾಗೇ, ಅದೇಷ್ಟೋ ಸಾಧಕರನ್ನು,ಉದ್ಯಮಿಗಳನ್ನು ಜಗತ್ತಿಗೆ ಬಳುವಳಿಯಾಗಿ ಕೊಟ್ಟ ಪುಣ್ಯ ಭೂಮಿ ಇದು. ಕೆಲವರು ಸದ್ದು ಮಾಡಿದರು,ಇನ್ನು ಕೆಲವರು ತನ್ನ ಕಾರ್ಯದಿಂದಲೇ ತನ್ನತ್ತ ತಿರುಗುವಂತೆ ಮಾಡಿದರು ಎಂಬುದನ್ನು ಹೇಳಲು ಯಾವುದೇ ಅಂಜಿಕೆಯಿಲ್ಲ.ಇಂದು ತುಳುನಾಡಿನ ಮನೆ ಮಗಳ ಸಣ್ಣ ಪರಿಚಯವನ್ನು ನಿಮ್ಮ ಎದುರಿಗೆ ತರಲೇಬೇಕು ಅನಿಸಿತು. ನಮ್ಮ ಪ್ರಧಾನಿಯಾದ ನರೇಂದ್ರ ಮೋದಿಯವರು ಇತ್ತೀಚೆಗೆ ಅಮೇರಿಕದ ಪ್ರವಾಸವನ್ನು ಕೈಗೊಂಡಿದ್ದರು.

ಪ್ರಧಾನಿ ಮತ್ತು ಭಾರತದ ಗಣ್ಯ ವ್ಯಕ್ತಿಗಳ ಆತಿಥ್ಯದ ಜವಾಬ್ದಾರಿಯನ್ನು ನಮ್ಮ ಕರಾವಳಿಯ ಆನಂದ್ ರೆಸ್ಟೋರೆಂಟ್ ಗೆ(ಆನಂದ್ ಪೂಜಾರಿ) ನೀಡಲಾಗಿತ್ತು. ಇವರು ಕ್ಯಾಪಿಟಲ್ ಹಿಲ್ ಮತ್ತು ವೈಟ್ ಹೌಸ್ಸ್ ಗೆ ಭಾರತೀಯ ಶೈಲಿಯ ಆಹಾರ ಕ್ರಮಕ್ಕೆ ಗುತ್ತಿಗೆ ಪಡೆದ ನಮ್ಮ ಹೆಮ್ಮೆಯ ಕರಾವಳಿಗರು. ಈ ಸಂದರ್ಭದಲ್ಲಿ ಸುಮಲ್ ಕೋಟ್ಯಾನ್ ಅವರು ನರೇಂದ್ರ ಮೋದಿ ಮತ್ತು ಗಣ್ಯ ವ್ಯಕ್ತಿಗಳಿಗೆ ಭಾರತೀಯ ಆತಿಥ್ಯ ನೀಡುವ ಜವಾಬ್ದಾರಿಯ ಹೊಣೆಯನ್ನು ಇವರು ವಹಿಸಿಕೊಂಡಿದ್ದರು.ಕರಾವಳಿಯ ಒಬ್ಬಳು ಮನೆ ಮಗಳು ದೂರದ ಅಮೆರಿಕದಲ್ಲಿ ಇಂತಹ ದೊಡ್ಡ ಜವಾಬ್ದಾರಿಯನ್ನು ನಿರ್ವಹಿಸಿದುದು ನಮಗೆಲ್ಲರಿಗೂ ಹೆಮ್ಮಯ ವಿಷಯವೇ. 2017 ಮತ್ತು 2021ರಲ್ಲೀ ಎರಡು ಬಾರಿ ಈ ಕಾರ್ಯವನ್ನು ಮಾಡಿದ ಸುಮಲ್ ಕೋಟ್ಯಾನ್ ರವರು ಮಂಗಳೂರಿನ ಮೇರಿ ಹಿಲ್ ನಲ್ಲಿ ಜನಿಸಿದವರು.

ಗೋಪಾಲ ಪೂಜಾರಿ ಮತ್ತು ಸುಫಲ ರವರ ಮಗಳಾಗಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಅನಾಸ್ ನಲ್ಲಿ ಪ್ರೌಢ ಶಿಕ್ಷಣವನ್ನು ಕಾರ್ಮಲ್ ಶಾಲೆಯಲ್ಲಿ ಪೂರ್ಣಗೊಳಿಸಿದರು.ಹಾಗೆಯೇ ಪಿ.ಯು.ಸಿ.ಯನ್ನು ಸೈಂಟ್ ಅಲೋಶಿಸ್,ಬಯೋಟೆಕ್ನಾಲಜಿ ಎಂಜಿನಿಯರಿಂಗ್ ನ್ನು ನಿಟ್ಟೆ ಮಂಗಳೂರಿನಲ್ಲಿ ಮುಗಿಸಿದರು.

ಅಮೆರಿಕದಲ್ಲಿ 9 ವರುಷದಿಂದ ವಾಸವಾಗಿರುವ ಸುಮಲ್ ಅವರು ಸಂದೀಪ್ ಕೋಟ್ಯಾನ್ ರವರನ್ನು ವಿವಾಹವಾಗಿ ತಮ್ಮ ದಾಂಪತ್ಯ ಜೀವನವನ್ನು ಸಾಗಿಸುತ್ತಿದ್ದಾರೆ.ಹಾಗೆಯೇ ಎರಡು ಮುದ್ದಾದ ಮಕ್ಕಳ ತಾಯಿಯಾಗಿದ್ದಾರೆ.ಹೊಟೇಲ್ ಉದ್ಯಮದಲ್ಲಿ ಅತೀವ ಆಸಕ್ತಿ ಇದ್ದ ಇವರು ಆನಂದ್ ಪೂಜಾರಿಯವರ ಆನಂದ್ ರೆಸ್ಟೋರೆಂಟ್ ನ ಜೊತೆ ಸೇರಿದರು,ಆನಂದ್ ರೆಸ್ಟೋರೆಂಟ್ 4 ಬಾರಿ ಪ್ರಧಾನಿ ಮತ್ತು ಭದ್ರತ ದಳದ ಆತಿಥ್ಯವನ್ನು ವಹಿಸಿಕೊಂಡ ಹೆಮ್ಮೆ ಇವರದು.

ಮೋದಿಯವರು ಸುಮಲ್ ಕೋಟ್ಯಾನ್ ಜೋತೆ ಹಂಚಿಕೊಂಡ ಮಾತು:

ಪ್ರಧಾನಿ ಮೋದಿಯವರು “ಮಗಳೇ” ಎಂದು ಕರೆಯುತ್ತಿದ್ದರಂತೆ, ಖುದ್ದಾಗಿ ಮೋದಿಯವರೇ ಕಳೆದ ಕಾರ್ಯಕ್ರಮದಲ್ಲಿ (2017) ನೀವೇ ಇದ್ದುದು ಅಲ್ಲವೇ ಎಂದು ಕೇಳಿದರಂತೆ. ಹಾಗೆಯೇ ಮಂಗಳೂರು ಎಂದಾಗ ಕರ್ನಾಟಕ ಎಂಬುದನ್ನು ಹೇಳಿದರಂತೆ.

ಒಬ್ಬ ಮಹಿಳೆಯಾಗಿ ಅಷ್ಟು ದೊಡ್ಡ ಕಾರ್ಯಕ್ರಮದ ಜವಾಬ್ದಾರಿಯನ್ನು ವಹಿಸಿಕೊಂಡಿರುವುದು ಕರಾವಳಿಗರ ಪಾಲಿಗೆ ಹೆಮ್ಮೆಯ ವಿಷಯವೇ. ಪ್ರಧಾನಿ ಮೋದಿಯವರ ಸರಳತೆಯನ್ನು ನೇರವಾಗಿ ಕಂಡ ಇವರು,ಇಂತಹ ಅವಕಾಶವನ್ನು ಪಡೆದು ಧನ್ಯನಾದೆ ಎನ್ನುತ್ತಾರೆ.

ವಿಜೇತ್ ಪೂಜಾರಿ ಶಿಬಾಜೆ.

 


Related Posts

ಕವಿ ಗವಿಸಿದ್ದ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ “ಮೇಣಕ್ಕಂಟಿದ ಬತ್ತಿ” ಕವನ ಸಂಕಲನ ಬಿಡುಗಡೆ


Share         ಅ.26: ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ಕವನ ಸಂಕಲನ ಬಿಡುಗಡೆ, ಪ್ರಶಸ್ತಿ ಪ್ರದಾನ,ಸಾಹಿತ್ಯ ಚರ್ಚೆ ಮುಂಬಯಿ, ಅ.23-  ಖ್ಯಾತ ಬಂಡಾಯ ಕವಿ ಗವಿಸಿದ್ದ ಎನ್. ಬಳ್ಳಾರಿ


Read More »

ಮಂಗಳೂರು: ಅಳದಂಗಡಿಯ ಶ್ರೀಮತಿ ಅನುಷಾ ಪ್ರಸಾದ್ ಪೂಜಾರಿ ಅವರಿಗೆ ಗಣಿತಶಾಸ್ತ್ರ ವಿಷಯದಲ್ಲಿ ಪಿ.ಎಚ್.ಡಿ ಪದವಿ


Share         ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ (Manipal Institute of Technology, Manipal) ನ ಗಣಿತಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಶ್ರೀಮತಿ ಅನುಷಾ ಎಲ್ ಅವರು ಮಂಡಿಸಿದ “A study on N-Covering


Read More »

ಬ್ರಿಟನ್ ಬಿಲ್ಲವ ಬಳಗ ಯುಕೆ ದೇಶದಲ್ಲಿ ಉತ್ಸಾಹದಿಂದ ಉದ್ಘಾಟನಾ ಸಮಾರಂಭವನ್ನು ಆಯೋಜಿಸಿದೆ.


Share         ಬ್ರಿಟನ್ ಬಿಲ್ಲವ ಬಳಗ ಯುಕೆಯ ಉದ್ಘಾಟನಾ ಸಮಾರಂಭವು ಸೆಪ್ಟೆಂಬರ್ 13 ರ ಶನಿವಾರದಂದು ಕೋವೆಂಟ್ರಿ ಹಾಲಿಡೇ ಇನ್ ಎಕ್ಸ್‌ಪ್ರೆಸ್ ಹೋಟೆಲ್‌ನಲ್ಲಿ ಸಂಘದ ಆಯ್ಕೆಯಾದ ಅಧ್ಯಕ್ಷ ಡಾ. ಪಿ.ಕೆ. ಮನೋಜ್ ಪೂಜಾರಿ ಅವರ ನೇತೃತ್ವದಲ್ಲಿ


Read More »

ಬಾರ್ಕೂರು ನಾಗರ ಮಠದ ಕ್ರೀಡಾ ಬಹು ಮುಖ ಪ್ರತಿಭೆಯ ಧನ್ವಿತಪೂಜಾರಿ ಧನ್ವಿತಪೂಜಾರಿ ಅವರಿಗೆ ಮೂರು ಪ್ರಶಸ್ತಿಗಳ ಗರಿ


Share         ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ ಕಿರಿಮಂಜೇಶ್ವರ ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಕಿರಿ, ಮಂಜೇಶ್ವರ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ  ದಿನಾಂಕ 30-08-2025 ರಂದು


Read More »

ಸತತ 216 ಗಂಟೆಗಳ ಭರತನಾಟ್ಯ ಮಾಡುವುದರ ಮೂಲಕ ಗೋಲ್ಡನ್ ಬುಕ್ ವಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಬರೆಸಿಕೊಂಡ ನವರಸಧಾರ ದೀಕ್ಷಾ. ವಿ


Share         ದೀಕ್ಷಾ ವಿ. ಅವರ ಜೀವನವು ಕಲೆಯ ತಪಸ್ಸಿನ ಜೀವಂತ ಪ್ರತೀಕವಾಗಿದೆ. ತಂದೆ ಶ್ರೀ ವಿಠಲ್ ಪೂಜಾರಿ ಮತ್ತು ತಾಯಿ ಶುಭಾ ವಿಠಲ್ ಅವರ ಮಗಳಾದ ಅವರು, ಬಾಲ್ಯದಿಂದಲೇ ಕಲೆಯ ಕಡೆ ಮನಸ್ಸು ತಿರುಗಿಸಿಕೊಂಡಿದ್ದರು.


Read More »

ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರಿಗೆ ಗೋಲ್ಡನ್ ಐಕಾನಿಕ್ ಅವಾರ್ಡ್


Share         ಮಂಗಳೂರು: ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರನ್ನು ಮಂಗಳೂರಿನಲ್ಲಿ ಗೋಲ್ಡನ್ ಐಕಾನಿಕ್ ಅವಾರ್ಡ್ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಹೋಟೆಲ್ ಓಷನ್ ಪರ್ಲ್ ನಲ್ಲಿ ನಡೆದ


Read More »