TOP STORIES:

FOLLOW US

ಅಮೇರಿಕಾದ ನೆಲದಲ್ಲಿ, ಭಾರತದ ಪ್ರಧಾನಿಗೆ ಆತಿಥ್ಯದ ಜವಾಬ್ದಾರಿಯನ್ನು ವಹಿಸಿಕೊಂಡ ತುಳುನಾಡ ಮನೆ ಮಗಳು ಸುಮಲ್ ಕೋಟ್ಯಾನ್


ಈ ತುಳುನಾಡಿನ ಮಣ್ಣಿನ ಗುಣವೇ ಹಾಗೇ, ಅದೇಷ್ಟೋ ಸಾಧಕರನ್ನು,ಉದ್ಯಮಿಗಳನ್ನು ಜಗತ್ತಿಗೆ ಬಳುವಳಿಯಾಗಿ ಕೊಟ್ಟ ಪುಣ್ಯ ಭೂಮಿ ಇದು. ಕೆಲವರು ಸದ್ದು ಮಾಡಿದರು,ಇನ್ನು ಕೆಲವರು ತನ್ನ ಕಾರ್ಯದಿಂದಲೇ ತನ್ನತ್ತ ತಿರುಗುವಂತೆ ಮಾಡಿದರು ಎಂಬುದನ್ನು ಹೇಳಲು ಯಾವುದೇ ಅಂಜಿಕೆಯಿಲ್ಲ.ಇಂದು ತುಳುನಾಡಿನ ಮನೆ ಮಗಳ ಸಣ್ಣ ಪರಿಚಯವನ್ನು ನಿಮ್ಮ ಎದುರಿಗೆ ತರಲೇಬೇಕು ಅನಿಸಿತು. ನಮ್ಮ ಪ್ರಧಾನಿಯಾದ ನರೇಂದ್ರ ಮೋದಿಯವರು ಇತ್ತೀಚೆಗೆ ಅಮೇರಿಕದ ಪ್ರವಾಸವನ್ನು ಕೈಗೊಂಡಿದ್ದರು.

ಪ್ರಧಾನಿ ಮತ್ತು ಭಾರತದ ಗಣ್ಯ ವ್ಯಕ್ತಿಗಳ ಆತಿಥ್ಯದ ಜವಾಬ್ದಾರಿಯನ್ನು ನಮ್ಮ ಕರಾವಳಿಯ ಆನಂದ್ ರೆಸ್ಟೋರೆಂಟ್ ಗೆ(ಆನಂದ್ ಪೂಜಾರಿ) ನೀಡಲಾಗಿತ್ತು. ಇವರು ಕ್ಯಾಪಿಟಲ್ ಹಿಲ್ ಮತ್ತು ವೈಟ್ ಹೌಸ್ಸ್ ಗೆ ಭಾರತೀಯ ಶೈಲಿಯ ಆಹಾರ ಕ್ರಮಕ್ಕೆ ಗುತ್ತಿಗೆ ಪಡೆದ ನಮ್ಮ ಹೆಮ್ಮೆಯ ಕರಾವಳಿಗರು. ಈ ಸಂದರ್ಭದಲ್ಲಿ ಸುಮಲ್ ಕೋಟ್ಯಾನ್ ಅವರು ನರೇಂದ್ರ ಮೋದಿ ಮತ್ತು ಗಣ್ಯ ವ್ಯಕ್ತಿಗಳಿಗೆ ಭಾರತೀಯ ಆತಿಥ್ಯ ನೀಡುವ ಜವಾಬ್ದಾರಿಯ ಹೊಣೆಯನ್ನು ಇವರು ವಹಿಸಿಕೊಂಡಿದ್ದರು.ಕರಾವಳಿಯ ಒಬ್ಬಳು ಮನೆ ಮಗಳು ದೂರದ ಅಮೆರಿಕದಲ್ಲಿ ಇಂತಹ ದೊಡ್ಡ ಜವಾಬ್ದಾರಿಯನ್ನು ನಿರ್ವಹಿಸಿದುದು ನಮಗೆಲ್ಲರಿಗೂ ಹೆಮ್ಮಯ ವಿಷಯವೇ. 2017 ಮತ್ತು 2021ರಲ್ಲೀ ಎರಡು ಬಾರಿ ಈ ಕಾರ್ಯವನ್ನು ಮಾಡಿದ ಸುಮಲ್ ಕೋಟ್ಯಾನ್ ರವರು ಮಂಗಳೂರಿನ ಮೇರಿ ಹಿಲ್ ನಲ್ಲಿ ಜನಿಸಿದವರು.

ಗೋಪಾಲ ಪೂಜಾರಿ ಮತ್ತು ಸುಫಲ ರವರ ಮಗಳಾಗಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಅನಾಸ್ ನಲ್ಲಿ ಪ್ರೌಢ ಶಿಕ್ಷಣವನ್ನು ಕಾರ್ಮಲ್ ಶಾಲೆಯಲ್ಲಿ ಪೂರ್ಣಗೊಳಿಸಿದರು.ಹಾಗೆಯೇ ಪಿ.ಯು.ಸಿ.ಯನ್ನು ಸೈಂಟ್ ಅಲೋಶಿಸ್,ಬಯೋಟೆಕ್ನಾಲಜಿ ಎಂಜಿನಿಯರಿಂಗ್ ನ್ನು ನಿಟ್ಟೆ ಮಂಗಳೂರಿನಲ್ಲಿ ಮುಗಿಸಿದರು.

ಅಮೆರಿಕದಲ್ಲಿ 9 ವರುಷದಿಂದ ವಾಸವಾಗಿರುವ ಸುಮಲ್ ಅವರು ಸಂದೀಪ್ ಕೋಟ್ಯಾನ್ ರವರನ್ನು ವಿವಾಹವಾಗಿ ತಮ್ಮ ದಾಂಪತ್ಯ ಜೀವನವನ್ನು ಸಾಗಿಸುತ್ತಿದ್ದಾರೆ.ಹಾಗೆಯೇ ಎರಡು ಮುದ್ದಾದ ಮಕ್ಕಳ ತಾಯಿಯಾಗಿದ್ದಾರೆ.ಹೊಟೇಲ್ ಉದ್ಯಮದಲ್ಲಿ ಅತೀವ ಆಸಕ್ತಿ ಇದ್ದ ಇವರು ಆನಂದ್ ಪೂಜಾರಿಯವರ ಆನಂದ್ ರೆಸ್ಟೋರೆಂಟ್ ನ ಜೊತೆ ಸೇರಿದರು,ಆನಂದ್ ರೆಸ್ಟೋರೆಂಟ್ 4 ಬಾರಿ ಪ್ರಧಾನಿ ಮತ್ತು ಭದ್ರತ ದಳದ ಆತಿಥ್ಯವನ್ನು ವಹಿಸಿಕೊಂಡ ಹೆಮ್ಮೆ ಇವರದು.

ಮೋದಿಯವರು ಸುಮಲ್ ಕೋಟ್ಯಾನ್ ಜೋತೆ ಹಂಚಿಕೊಂಡ ಮಾತು:

ಪ್ರಧಾನಿ ಮೋದಿಯವರು “ಮಗಳೇ” ಎಂದು ಕರೆಯುತ್ತಿದ್ದರಂತೆ, ಖುದ್ದಾಗಿ ಮೋದಿಯವರೇ ಕಳೆದ ಕಾರ್ಯಕ್ರಮದಲ್ಲಿ (2017) ನೀವೇ ಇದ್ದುದು ಅಲ್ಲವೇ ಎಂದು ಕೇಳಿದರಂತೆ. ಹಾಗೆಯೇ ಮಂಗಳೂರು ಎಂದಾಗ ಕರ್ನಾಟಕ ಎಂಬುದನ್ನು ಹೇಳಿದರಂತೆ.

ಒಬ್ಬ ಮಹಿಳೆಯಾಗಿ ಅಷ್ಟು ದೊಡ್ಡ ಕಾರ್ಯಕ್ರಮದ ಜವಾಬ್ದಾರಿಯನ್ನು ವಹಿಸಿಕೊಂಡಿರುವುದು ಕರಾವಳಿಗರ ಪಾಲಿಗೆ ಹೆಮ್ಮೆಯ ವಿಷಯವೇ. ಪ್ರಧಾನಿ ಮೋದಿಯವರ ಸರಳತೆಯನ್ನು ನೇರವಾಗಿ ಕಂಡ ಇವರು,ಇಂತಹ ಅವಕಾಶವನ್ನು ಪಡೆದು ಧನ್ಯನಾದೆ ಎನ್ನುತ್ತಾರೆ.

ವಿಜೇತ್ ಪೂಜಾರಿ ಶಿಬಾಜೆ.

 


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »