TOP STORIES:

FOLLOW US

ಅಮೇರಿಕಾದ ನೆಲದಲ್ಲಿ, ಭಾರತದ ಪ್ರಧಾನಿಗೆ ಆತಿಥ್ಯದ ಜವಾಬ್ದಾರಿಯನ್ನು ವಹಿಸಿಕೊಂಡ ತುಳುನಾಡ ಮನೆ ಮಗಳು ಸುಮಲ್ ಕೋಟ್ಯಾನ್


ಈ ತುಳುನಾಡಿನ ಮಣ್ಣಿನ ಗುಣವೇ ಹಾಗೇ, ಅದೇಷ್ಟೋ ಸಾಧಕರನ್ನು,ಉದ್ಯಮಿಗಳನ್ನು ಜಗತ್ತಿಗೆ ಬಳುವಳಿಯಾಗಿ ಕೊಟ್ಟ ಪುಣ್ಯ ಭೂಮಿ ಇದು. ಕೆಲವರು ಸದ್ದು ಮಾಡಿದರು,ಇನ್ನು ಕೆಲವರು ತನ್ನ ಕಾರ್ಯದಿಂದಲೇ ತನ್ನತ್ತ ತಿರುಗುವಂತೆ ಮಾಡಿದರು ಎಂಬುದನ್ನು ಹೇಳಲು ಯಾವುದೇ ಅಂಜಿಕೆಯಿಲ್ಲ.ಇಂದು ತುಳುನಾಡಿನ ಮನೆ ಮಗಳ ಸಣ್ಣ ಪರಿಚಯವನ್ನು ನಿಮ್ಮ ಎದುರಿಗೆ ತರಲೇಬೇಕು ಅನಿಸಿತು. ನಮ್ಮ ಪ್ರಧಾನಿಯಾದ ನರೇಂದ್ರ ಮೋದಿಯವರು ಇತ್ತೀಚೆಗೆ ಅಮೇರಿಕದ ಪ್ರವಾಸವನ್ನು ಕೈಗೊಂಡಿದ್ದರು.

ಪ್ರಧಾನಿ ಮತ್ತು ಭಾರತದ ಗಣ್ಯ ವ್ಯಕ್ತಿಗಳ ಆತಿಥ್ಯದ ಜವಾಬ್ದಾರಿಯನ್ನು ನಮ್ಮ ಕರಾವಳಿಯ ಆನಂದ್ ರೆಸ್ಟೋರೆಂಟ್ ಗೆ(ಆನಂದ್ ಪೂಜಾರಿ) ನೀಡಲಾಗಿತ್ತು. ಇವರು ಕ್ಯಾಪಿಟಲ್ ಹಿಲ್ ಮತ್ತು ವೈಟ್ ಹೌಸ್ಸ್ ಗೆ ಭಾರತೀಯ ಶೈಲಿಯ ಆಹಾರ ಕ್ರಮಕ್ಕೆ ಗುತ್ತಿಗೆ ಪಡೆದ ನಮ್ಮ ಹೆಮ್ಮೆಯ ಕರಾವಳಿಗರು. ಈ ಸಂದರ್ಭದಲ್ಲಿ ಸುಮಲ್ ಕೋಟ್ಯಾನ್ ಅವರು ನರೇಂದ್ರ ಮೋದಿ ಮತ್ತು ಗಣ್ಯ ವ್ಯಕ್ತಿಗಳಿಗೆ ಭಾರತೀಯ ಆತಿಥ್ಯ ನೀಡುವ ಜವಾಬ್ದಾರಿಯ ಹೊಣೆಯನ್ನು ಇವರು ವಹಿಸಿಕೊಂಡಿದ್ದರು.ಕರಾವಳಿಯ ಒಬ್ಬಳು ಮನೆ ಮಗಳು ದೂರದ ಅಮೆರಿಕದಲ್ಲಿ ಇಂತಹ ದೊಡ್ಡ ಜವಾಬ್ದಾರಿಯನ್ನು ನಿರ್ವಹಿಸಿದುದು ನಮಗೆಲ್ಲರಿಗೂ ಹೆಮ್ಮಯ ವಿಷಯವೇ. 2017 ಮತ್ತು 2021ರಲ್ಲೀ ಎರಡು ಬಾರಿ ಈ ಕಾರ್ಯವನ್ನು ಮಾಡಿದ ಸುಮಲ್ ಕೋಟ್ಯಾನ್ ರವರು ಮಂಗಳೂರಿನ ಮೇರಿ ಹಿಲ್ ನಲ್ಲಿ ಜನಿಸಿದವರು.

ಗೋಪಾಲ ಪೂಜಾರಿ ಮತ್ತು ಸುಫಲ ರವರ ಮಗಳಾಗಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಅನಾಸ್ ನಲ್ಲಿ ಪ್ರೌಢ ಶಿಕ್ಷಣವನ್ನು ಕಾರ್ಮಲ್ ಶಾಲೆಯಲ್ಲಿ ಪೂರ್ಣಗೊಳಿಸಿದರು.ಹಾಗೆಯೇ ಪಿ.ಯು.ಸಿ.ಯನ್ನು ಸೈಂಟ್ ಅಲೋಶಿಸ್,ಬಯೋಟೆಕ್ನಾಲಜಿ ಎಂಜಿನಿಯರಿಂಗ್ ನ್ನು ನಿಟ್ಟೆ ಮಂಗಳೂರಿನಲ್ಲಿ ಮುಗಿಸಿದರು.

ಅಮೆರಿಕದಲ್ಲಿ 9 ವರುಷದಿಂದ ವಾಸವಾಗಿರುವ ಸುಮಲ್ ಅವರು ಸಂದೀಪ್ ಕೋಟ್ಯಾನ್ ರವರನ್ನು ವಿವಾಹವಾಗಿ ತಮ್ಮ ದಾಂಪತ್ಯ ಜೀವನವನ್ನು ಸಾಗಿಸುತ್ತಿದ್ದಾರೆ.ಹಾಗೆಯೇ ಎರಡು ಮುದ್ದಾದ ಮಕ್ಕಳ ತಾಯಿಯಾಗಿದ್ದಾರೆ.ಹೊಟೇಲ್ ಉದ್ಯಮದಲ್ಲಿ ಅತೀವ ಆಸಕ್ತಿ ಇದ್ದ ಇವರು ಆನಂದ್ ಪೂಜಾರಿಯವರ ಆನಂದ್ ರೆಸ್ಟೋರೆಂಟ್ ನ ಜೊತೆ ಸೇರಿದರು,ಆನಂದ್ ರೆಸ್ಟೋರೆಂಟ್ 4 ಬಾರಿ ಪ್ರಧಾನಿ ಮತ್ತು ಭದ್ರತ ದಳದ ಆತಿಥ್ಯವನ್ನು ವಹಿಸಿಕೊಂಡ ಹೆಮ್ಮೆ ಇವರದು.

ಮೋದಿಯವರು ಸುಮಲ್ ಕೋಟ್ಯಾನ್ ಜೋತೆ ಹಂಚಿಕೊಂಡ ಮಾತು:

ಪ್ರಧಾನಿ ಮೋದಿಯವರು “ಮಗಳೇ” ಎಂದು ಕರೆಯುತ್ತಿದ್ದರಂತೆ, ಖುದ್ದಾಗಿ ಮೋದಿಯವರೇ ಕಳೆದ ಕಾರ್ಯಕ್ರಮದಲ್ಲಿ (2017) ನೀವೇ ಇದ್ದುದು ಅಲ್ಲವೇ ಎಂದು ಕೇಳಿದರಂತೆ. ಹಾಗೆಯೇ ಮಂಗಳೂರು ಎಂದಾಗ ಕರ್ನಾಟಕ ಎಂಬುದನ್ನು ಹೇಳಿದರಂತೆ.

ಒಬ್ಬ ಮಹಿಳೆಯಾಗಿ ಅಷ್ಟು ದೊಡ್ಡ ಕಾರ್ಯಕ್ರಮದ ಜವಾಬ್ದಾರಿಯನ್ನು ವಹಿಸಿಕೊಂಡಿರುವುದು ಕರಾವಳಿಗರ ಪಾಲಿಗೆ ಹೆಮ್ಮೆಯ ವಿಷಯವೇ. ಪ್ರಧಾನಿ ಮೋದಿಯವರ ಸರಳತೆಯನ್ನು ನೇರವಾಗಿ ಕಂಡ ಇವರು,ಇಂತಹ ಅವಕಾಶವನ್ನು ಪಡೆದು ಧನ್ಯನಾದೆ ಎನ್ನುತ್ತಾರೆ.

ವಿಜೇತ್ ಪೂಜಾರಿ ಶಿಬಾಜೆ.

 


Share:

More Posts

Category

Send Us A Message

Related Posts

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »

ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ


Share       ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ ಡಾ. ಪವಿತ್ರ ಜಿ. ಪಿ. ಹಾಗೂ ಪ್ರವೀಣ್ ಬಿ.ಎಮ್  ರವರ ಮಾರ್ಗದರ್ಶನದಲ್ಲಿ  ಡಾ. ರಶ್ಮಿ ಹರ್ಷ ಪೂಜಾರಿ ಇವರು ರಸಾಯನ ಶಾಸ್ತ್ರ ವಿಭಾಗದಲ್ಲಿ


Read More »

ದುಬೈಯಲ್ಲಿ ಯಶಸ್ವಿ ಉದ್ಯಮಿಯಾಗಿ ಲೆಕ್ಕವಿಲ್ಲದಷ್ಟು ಸೇವೆಯನ್ನು ಸಮಾಜಕ್ಕೆ ಅರ್ಪಿಸುತ್ತಿರು ಸೇವಾ ಮಾಣಿಕ್ಯ ನಿಟ್ಟೆ ಸಂದೀಪ್ ಕೋಟ್ಯಾನ್ ಕಾರ್ಕಳ..!


Share       ಅನೇಕ ಜನ ಉದ್ಯಮ ಕ್ಷೇತ್ರದ ಯಶಸ್ವಿಯಾಗಿ ಮುಂದುವರೆದ ಉದ್ಯಮಿಗಳು ಪ್ರಸ್ತುತ ದಿನಗಳಲ್ಲಿ ಸಿಗುತ್ತಾರೆ, ಆದರೆ ತಾವು ಸಂಪಾದಿಸಿರುವ ಹಣವನ್ನು ಮಾತ್ರ ಸಮಾಜದಲ್ಲಿ ಕೇವಲ ಕಾರ್ಯಕ್ರಮ ಮನೊರಂಜನೆಗಳಿಗೆ ಬಳಸಿ ರಾಜಕೀಯ ನಾಯಕರು, ಉದ್ಯಮಿಗಳನ್ನು ಕರೆದು


Read More »

ಮಂಗಳೂರಿನ ಖ್ಯಾತ ಯುರೋಲಜಿಸ್ಟ್ ಡಾ. ಸದಾನಂದ ಪೂಜಾರಿಯವರಿಗೆ ಪ್ರೈಡ್ ಆಫ್ ನ್ಯಾಷನ್ ಅವಾರ್ಡ್.


Share       ಮಂಗಳೂರು : ಕಳೆದ ವರ್ಷ ಕರ್ನಾಟಕ ಸರಕಾರದಿಂದ ಡಾ. ಬಿ.ಸಿ.ರಾಯ್ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಸದಾನಂದ ಪೂಜಾರಿಯವರಿಗೆ ಬೆಂಗಳೂರಿನ ಅಶೋಕ ಪಂಚತಾರ ಹೋಟೆಲ್ ನಲ್ಲಿ ನಡೆದ ಏಷ್ಯಾ ಟುಡೇ ಹಮ್ಮಿ ಕೊಂಡಿದ್ದ


Read More »

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ


Share       ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ ಅವರಿಗೆ ಜನುಮದಿನದ ಶುಭಾಶಯಗಳು🎂 ಅವರ ಬಗ್ಗೆ ಮಾಹಿತಿ ಡಾ.ಅಂಚನ್ ಸಿ ಕೆ, ಅಂತರರಾಷ್ಟ್ರೀಯ ವ್ಯಾಪಾರ ಮತ್ತು


Read More »

ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ


Share       ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ ಕೋಟ: ಶ್ರೀಮಾತಾ ಅಸ್ಪತ್ರೆಯ ಮಾಲಿಕರಾದ ಡಾ.ಸತೀಶ ಪೂಜಾರಿ (54) ಅವರು ಗುರುವಾರ ಬೆಳಿಗ್ಗೆ ಅವರ ಕೋಟತಟ್ಟು ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ


Read More »