TOP STORIES:

ಅವರು ನಾರಾಯಣ ಗುರುಗಳನ್ನು ಹಿಂದೆಯೂ ತಿರಸ್ಕರಿಸಿದ್ದರು, ಮುಂದೆಯೂ ತಿರಸ್ಕರಿಸುತ್ತಾರೆ-ದಿನೇಶ್ ಅಮೀನ್ ಮಟ್ಟು


ಗಣರಾಜ್ಯೋತ್ಸವ ಪರೇಡ್ ನಲ್ಲಿ ನಾರಾಯಣ ಗುರುಗಳ ಮೂರ್ತಿ ಇದ್ದ ಸ್ಥಬ್ದಚಿತ್ರವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ್ದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಇದನ್ನು ಯಾರೂ ವಿರೋಧಿಸಬೇಕಾಗಿಲ್ಲ, ಬದಲಿಗೆ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಆಡಳಿತಾರೂಢ ಬಿಜೆಪಿಯ ಪ್ರಾಮಾಣಿಕ ನಡವಳಿಕೆಗಾಗಿ ಎಲ್ಲರೂ ಅಭಿನಂದಿಸಬೇಕು.
ಇದೇ ರೀತಿಯ ಪ್ರಾಮಾಣಿಕತೆಯಿಂದ ಬುದ್ದ,ಬಸವ, ಅಂಬೇಡ್ಕರ್, ಕನಕ, ಕಬೀರ, ವಾಲ್ಮೀಕಿಯೂ ಸೇರಿದಂತೆ ಎಲ್ಲ ಮಹಾ ಪುರುಷರ ಬಗೆಗಿನ ತಮ್ಮ ವಿರೋಧವನ್ನು ಬಿಜೆಪಿ ಮತ್ತು ಅದರ ಸರ್ಕಾರಗಳು ಮುಕ್ತವಾಗಿ ದಾಖಲಿಸಬೇಕು ಎಂದು ನಾವೆಲ್ಲರೂ ಕೂಡಿ ಒತ್ತಾಯಿಸಬೇಕು.
ಸಾವರ್ಕರ್, ಗೋಲ್ವಾಲ್ಕರ್, ಹೆಗಡೆವಾರ್ , ಗೋಡ್ಸೆ ಸೇರಿದಂತೆ ರಾಜಕೀಯ ಹಿಂದುತ್ವದ ಪ್ರಚಾರಕರ ವಿರುದ್ದ ನಮ್ಮ ವಿರೋಧವನ್ನು ನಾವು ಹೇಗೆ ಮುಕ್ತವಾಗಿ ಮಂಡಿಸುತ್ತೇವೆಯೋ ಹಾಗೆ ಅವರು ಆತ್ಮವಂಚನೆ ಮಾಡಿಕೊಳ್ಳದೆ ನಾವು ಆದರ್ಶಪ್ರಾಯರೆಂದು ತಿಳಿದುಕೊಂಡ ಮತ್ತು ಅವರು ಮನಸ್ಸಿನೊಳಗೆ ವಿರೋಧಿಸುತ್ತಿರುವ ಮಹಾಪುರುಷರ ವಿರುದ್ದದ ತಮ್ಮ ಅಭಿಪ್ರಾಯವನ್ನು ಪ್ರಾಮಾಣಿಕತೆಯಿಂದ ಮುಕ್ತವಾಗಿ ಹೇಳಿಕೊಳ್ಳಬೇಕು.
ನಡೆಯಲಿ ಇಂತಹದ್ದೊಂದು ಸೈದ್ದಾಂತಿಕ ಸಂಘರ್ಷ. ಗಟ್ಟಿಯಾಗಿರುವುದು ಉಳಿಯುತ್ತದೆ, ಉಳಿದದ್ದು ಇತಿಹಾಸದ ಕಸದ ಬುಟ್ಟಿಗೆ ಸೇರುತ್ತದೆ. ಹೊಡೆದು, ಬಡಿದು, ಕಡಿದು ಯಾವ ಸಿದ್ದಾಂತವನ್ನೂ ನೆಲೆ ಗೊಳಿಸಲಾಗುವುದಿಲ್ಲ.
ಇಂತಹದ್ದೊಂದು ದಾರಿಯನ್ನು ಹೇಳಿಕೊಟ್ಟವರೇ ನಾರಾಯಣ ಗುರುಗಳು. ಅವರು ತನ್ನ ಜನರಿಗೆ ಉಳಿದ ಸಮಾಜ ಸುಧಾರಕರಂತೆ ದೇವಸ್ಥಾನದೊಳಗೆ ಪ್ರವೇಶ ನೀಡಿ ಎಂದು ಅಂಗಲಾಚಲಿಲ್ಲ. ಅಲ್ಲಿಯೇ ಇದ್ದ ನದಿಯೊಳಗೆ ಧುಮುಕಿ ಶಿವಲಿಂಗವನ್ನು ಎದೆಗಪ್ಪಿಕೊಂಡು ಬಂದು ಅರವಿಪುರಂನಲ್ಲಿ ಸ್ಥಾಪಿಸಿ ಇದು ನಿಮ್ಮ ಶಿವ ಎಂದು ತನ್ನ ಜನರಿಗೆ ಹೇಳಿದರು.
ಪ್ರಶ್ನಿಸಿದ ಪುರೋಹಿತರಿಗೆ ‘ನಿಮ್ಮ ಶಿವ ನಿಮ್ಮಲ್ಲಿಯೇ ಇದ್ದಾನೆ, ಇದು ಈಳವರ ಶಿವ. ನೀವು ನಿಮ್ಮ ಪಾಡಿಗೆ ನಿಮ್ಮ ದೇವರನ್ನು ಪೂಜಿಸಿ, ನನ್ನ ಜನ ಅವರು ನಂಬಿದ ದೇವರನ್ನು ಪೂಜಿಸುತ್ತಾರೆ.. ’’ ಎಂದು ಬಾಯಿ ಮುಚ್ಚಿಸಿದ್ದರು.
ಅವರು ದೇವಾಲಯದೊಳಗೆ ಜನರನ್ನು ನುಗ್ಗಿಸಲಿಲ್ಲ, ದೇವರಮೂರ್ತಿಯನ್ನು ಒಡೆದುಹಾಕಲಿಲ್ಲ, ಅರ್ಚಕರನ್ನು ಪ್ರಶ್ನಿಸಲೂ ಇಲ್ಲ.. ಇದು ಯುದ್ಧದಲ್ಲಿ ಶಸ್ತ್ರ ಪ್ರಯೋಗ ಮಾಡದೆ ಶತ್ರುವನ್ನು ನಿಶಸ್ತ್ರಗೊಳಿಸುವ ಅಪರೂಪದ ಹೋರಾಟ.
ತಿರುವಾಂಕೂರು ಸಂಸ್ಥಾನದಲ್ಲಿ ಇಂದು ಕೇಂದ್ರ ಸರ್ಕಾರದಲ್ಲಿರುವಂತಹರದ್ದೇ ಪ್ರಭುತ್ವ ಇತ್ತು. ಅವರೊಡನೆ ನಾರಾಯಣ ಗುರುಗಳು ಸಂಘರ್ಷಕ್ಕಿಳಿದಿರಲಿಲ್ಲ. ವೈಕಂ ನಲ್ಲಿ ದೇವಸ್ಥಾನದ ಎದುರಿನ ಹಾದಿಯಲ್ಲಿ ನಡೆದುಕೊಂಡು ಹೋಗುವ ಸ್ವಾತಂತ್ರ್ಯಕ್ಕಾಗಿ ನಡೆದ ಸತ್ಯಾಗ್ರಹದ ಬಗ್ಗೆಯೂ ನಾರಾಯಣ ಗುರುಗಳ ವಿರೋಧ ಇತ್ತು. ‘’ಅವರು ಕಟ್ಟಿಕೊಂಡ ದೇವಸ್ಥಾನ, ಅದರ ಎದುರಿನ ಹಾದಿಯನ್ನು ಕಟ್ಟಿಕೊಂಡು ನೀವ್ಯಾಕೆ ಬಡಿದಾಡಿಕೊಳ್ಳುತ್ತೀರಿ,ನಿಮ್ಮ ದೇವಸ್ಥಾನವನ್ನು ನೀವೇ ಕಟ್ಟಿಕೊಳ್ಳಿ’’, ಎಂದು ಹೇಳುತ್ತಿದ್ದರು ನಾರಾಯಣ ಗುರುಗಳು.
ಆದರೆ ನಾರಾಯಣ ಗುರುಗಳು ಕಟ್ಟಿದ ದೇವಸ್ಥಾನಗಳನ್ನಷ್ಟೇ ಉಳಿಸಿಕೊಂಡಿರುವ ಅವರ ಅನುಯಾಯಿಗಳು ಅವರು ಹೇಳಿಕೊಟ್ಟಿರುವ ಚಿಂತನೆಯ ಪಾಠವನ್ನು ಮರೆತುಬಿಟ್ಟಿದ್ದಾರೆ.
ಮಂಗಳೂರಿನ ಕುದ್ರೋಳಿಯಲ್ಲಿ ಅಸ್ಪೃಶ್ಯ ಬಿಲ್ಲವರಿಗಾಗಿ ನಾರಾಯಣ ಗುರುಗಳೂ ಬಂದು ಸ್ಥಾಪಿಸಿದ್ದ ದೇವಸ್ಥಾನವನ್ನು ಹತ್ತಾರು ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಿಸಲಾಗಿದೆ. ಆದರೆ ಬಿಲ್ಲವರು ಧಾರ್ಮಿಕ ಪ್ರವಾಸಕ್ಕೆ ಹೋದ ರೀತಿ ಅಲ್ಲಿಗೆ ಹೋಗಿ ಕೊಂಡಾಡಿ ಸೆಲ್ಪಿ ತೆಗೆಸಿಕೊಂಡು ಬರುತ್ತಾರೆ. ಅಲ್ಲಿಂದ ಉಡುಪಿ ಮಠ, ಕಟೀಲು, ಧರ್ಮಸ್ಥಳಗಳಿಗೆ ಹೋಗಿ ತಾವು ಕಷ್ಟ ಪಟ್ಟು ದುಡಿದ ದುಡ್ಡನ್ನು ಸುರಿದು ಬರುತ್ತಾರೆ.
ಉಡುಪಿ ಮಠದ ಸ್ವಾಮಿಗಳು, ಕಟೀಲಿನ ಆಸ್ರಣ್ಣರು ಮತ್ತು ಧರ್ಮಸ್ಥಳದ ಹೆಗಡೆಯವರು ಇಲ್ಲವೆ ಅವರ ಸಮುದಾಯದವರು ಎಂದಾದರೂ ಕುದ್ರೋಳಿ ದೇವಸ್ಥಾನಕ್ಕೆ ಭಕ್ತರಂತೆ ಬಂದು ಕೈಮುಗಿದು ನಾರಾಯಣ ಗುರುಗಳಿಗೆ ನಮಿಸಿ ಹೋಗಿದ್ದಾರೆಯೇ?
ಮತ್ತೆ ಯಾಕೆ ಗಣರಾಜ್ಯೋತ್ಸವದಲ್ಲಿ ನಾರಾಯಣ ಗುರುಗಳ ಸ್ಥಬ್ದಚಿತ್ರವನ್ನು ತಿರಸ್ಕರಿಸಿದ್ದಾರೆ ಎಂದು ಗೋಳು ಹೋಯ್ಕೊಳ್ತೀರಿ? ಅವರು ನಾರಾಯಣ ಗುರುಗಳನ್ನು ಹಿಂದೆಯೂ ತಿರಸ್ಕರಿಸಿದ್ದರು, ಮುಂದೆಯೂ ತಿರಸ್ಕರಿಸುತ್ತಾರೆ. ಅವರನ್ನು ವಿರೋಧಿಸುವುದನ್ನು ಬಿಟ್ಟು ನಾರಾಯಣ ಗುರುಗಳ ಅನುಯಾಯಿಗಳು ನಿಜವಾಗಿ ತಮ್ಮನ್ನು ತಾವೇ ಪ್ರಶ್ನೆ ಮಾಡಬೇಕಾಗಿದೆ. ನಾರಾಯಣ ಗುರುಗಳನ್ನು ತಿರಸ್ಕರಿಸಿದವರನ್ನು ನಾವು ಯಾಕೆ ಪುರಸ್ಕರಿಸುತ್ತಿದ್ದೇವೆ? ಎಂದು.
ಇದಕ್ಕಾಗಿಯೇ ಕುವೆಂಪು “…ಹುಲಿಗೆ ಗುಂಡು ಹೊಡೆಯುವ ಮೊದಲು ನಿಮ್ಮ ಮೆದುಳಿಗೆ ಹೊಡೆಯಬೇಕು..” ಹೇಳಿದ್ದು.

Related Posts

ನಿರೂಪಣಾ ಕ್ಷೇತ್ರದಲ್ಲಿ ಮಿಂಚುತ್ತಿರುವ ಉದಯೋನ್ಮುಖ ಪ್ರತಿಭೆ – ಕೃತಿ ಪೂಜಾರಿ ಮೂಡುಬೆಟ್ಟು


Share           ಸಾಧನೆಯೆಂಬುದು ಯಾರೊಬ್ಬನ ಸೊತ್ತೂ ಅಲ್ಲ, ಅದು ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಭಾವದಿಂದ ಮುನ್ನಡೆಯುವ ಮನಸು ಮತ್ತು ವ್ಯಕ್ತಿಗಳ ಪಾಲಿನ ವರದಾನ. ಸಾಧನೆಯ ಮನಸ್ಸೆಂಬ ಸಸಿಗೆ ಸತತ ನೀರೆರೆದು ಪೋಷಿಸಿ, ಶ್ರಮವನ್ನು


Read More »

ಸುರತ್ಕಲ್‌ನಲ್ಲಿ ರಂಗುರಂಗಿನ ರಂಗೋತ್ಸವ ನವೀನ್ ಡಿ ಪಡೀಲ್ ಗೆ ರಂಗಚಾವಡಿ ಪ್ರಶಸ್ತಿ ಪ್ರದಾನ


Share         ಸುರತ್ಕಲ್: ರಂಗಚಾವಡಿ ಮಂಗಳೂರು ಸಾಂಸ್ಕೃತಿಕ ಸಾಂಸ್ಕೃತಿಕ ಸಂಘಟನೆ ಮತ್ತು ಸುಭಾಷಿತನಗರ  ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ ನಡೆದ ರಂಗಚಾವಡಿ ರಜತ ಸಂಭ್ರಮ ಮತ್ತು ರಂಗುರಂಗಿನ ರಂಗೋತ್ಸವ ಕಾರ್ಯಕ್ರಮ


Read More »

ಸುರತ್ಕಲ್‌ನಲ್ಲಿ ರಂಗುರಂಗಿನ ರಂಗೋತ್ಸವ ನವೀನ್ ಡಿ ಪಡೀಲ್ ಗೆ ರಂಗಚಾವಡಿ ಪ್ರಶಸ್ತಿ ಪ್ರದಾನ


Share         ಸುರತ್ಕಲ್‌ನಲ್ಲಿ ರಂಗುರಂಗಿನ ರಂಗೋತ್ಸವ   ನವೀನ್ ಡಿ ಪಡೀಲ್ ಗೆ ರಂಗಚಾವಡಿ ಪ್ರಶಸ್ತಿ ಪ್ರದಾನ   ಸುರತ್ಕಲ್: ರಂಗಚಾವಡಿ ಮಂಗಳೂರು ಸಾಂಸ್ಕೃತಿಕ ಸಾಂಸ್ಕೃತಿಕ ಸಂಘಟನೆ ಮತ್ತು ಸುಭಾಷಿತನಗರ ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್


Read More »

ಸ್ವಾಮಿಗಳ ಚಿತ್ರ ಮತ್ತು ಪ್ರತಿಮೆಯ ಮುಂದೆ ರಾಜ್ಯಪಾಲರೊಂದಿಗೆ ಇರುವ ಚಿತ್ರ


Share         ಶಿವಗಿರಿ: ರಾಜ್ಯಪಾಲ ಆರ್.ವಿ. ಅರ್ಲೆಕ್ಕರ್ ಅವರು ರಾಜಭವನದ ಅತಿಥಿ ಕೊಠಡಿಯಲ್ಲಿ ಶ್ರೀ ನಾರಾಯಣ ಗುರುಗಳ ಚಿತ್ರ ಮತ್ತು ಕಂಚಿನ ಪ್ರತಿಮೆಯನ್ನು ಸ್ವಾಮಿಗಳಿಗೆ ತೋರಿಸಿದರು. ಅತಿಥಿ ಕೊಠಡಿಯನ್ನು ಪ್ರವೇಶಿಸುವಾಗ ಮೊದಲು ನೋಡುವುದು ಗುರುಗಳ ಚಿತ್ರ.


Read More »

ಕವಿ ಗವಿಸಿದ್ದ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ “ಮೇಣಕ್ಕಂಟಿದ ಬತ್ತಿ” ಕವನ ಸಂಕಲನ ಬಿಡುಗಡೆ


Share         ಅ.26: ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ಕವನ ಸಂಕಲನ ಬಿಡುಗಡೆ, ಪ್ರಶಸ್ತಿ ಪ್ರದಾನ,ಸಾಹಿತ್ಯ ಚರ್ಚೆ ಮುಂಬಯಿ, ಅ.23-  ಖ್ಯಾತ ಬಂಡಾಯ ಕವಿ ಗವಿಸಿದ್ದ ಎನ್. ಬಳ್ಳಾರಿ


Read More »

ಮಂಗಳೂರು: ಅಳದಂಗಡಿಯ ಶ್ರೀಮತಿ ಅನುಷಾ ಪ್ರಸಾದ್ ಪೂಜಾರಿ ಅವರಿಗೆ ಗಣಿತಶಾಸ್ತ್ರ ವಿಷಯದಲ್ಲಿ ಪಿ.ಎಚ್.ಡಿ ಪದವಿ


Share         ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ (Manipal Institute of Technology, Manipal) ನ ಗಣಿತಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಶ್ರೀಮತಿ ಅನುಷಾ ಎಲ್ ಅವರು ಮಂಡಿಸಿದ “A study on N-Covering


Read More »