TOP STORIES:

FOLLOW US

ಇನ್ನು ಮುಂದೆ ಚೀನಾಗೆ ಸರಿಸಮನಾಗಿ ಭಾರತದಿಂದಲೇ ರವಾನೆಯಾಗಲಿದೆ ಆಪಲ್‌ ಐಫೋನ್‌


ಐಫೋನ್‌ ಎಂಬ ಅಮೆರಿಕದ ಉತ್ಪನ್ನ ಜಾಗತಿಕವಾಗಿ ಪ್ರತಿಷ್ಠೆಯ ವಿಷಯವಾಗಿರುವುದು ಗೊತ್ತೇ ಇದೆ. ಇದನ್ನು ಹೆಚ್ಚಿನಪ್ರಮಾಣದಲ್ಲಿ ಚೀನಾ ತಯಾರು ಮಾಡುತ್ತದೆ. ಚೀನಾದಲ್ಲಿ ಹೆಚ್ಚಿನ ಐಫೋನ್‌ ಕಂಪನಿಗಳಿವೆ. ಭಾರತದಲ್ಲೂ ಕೂಡ ಐಫೋನ್‌ಉತ್ಪಾದನಾ ಪಾಲುದಾರ ಫಾಕ್ಸ್‌ಕಾನ್‌ ಅದನ್ನು ತಯಾರಿಸುತ್ತಿದೆ. ಆದರೆ ಇತ್ತೀಚಿನ ಬೆಳವಣಿಗೆಯೊಂದರಲ್ಲಿ ಚೀನಾದಿಂದ ಜಗತ್ತಿನಮಾರುಕಟ್ಟೆಗೆ ರವಾನೆಯಾಗುವ ಐಫೋನ್‌ ಗಳ ಸಂಖ್ಯೆಗೆ ಸರಿಸಮನಾಗಿ ಭಾರತದಲ್ಲಿ ಉತ್ಪಾದನೆಯಾದ ಐಫೋನ್‌ ಗಳನ್ನುಜಗತ್ತಿನ ಮಾರುಕಟ್ಟೆಗೆ ರವಾನಿಸುವಷ್ಟರ ಮಟ್ಟಿಗೆ ಭಾರತದ ಬೆಳೆದು ನಿಂತಿದೆ. ಹಿನ್ನೆಲೆಯಲ್ಲಿ ಜಾಗತಿಕ ಟೆಕ್‌ ದಿಗ್ಗಜ ಆಪಲ್‌ ತನ್ನ ಹೊಸ ಐಫೋನ್‌ ಆವೃತ್ತಿಯನ್ನು ಚೀನಾಗೆ ಸರಿಸಮನಾಗಿ ಭಾರತದಿಂದಲೇರವಾನಿಸಲು ಸಜ್ಜಾಗಿದೆ. . ಇದಕ್ಕೆ ಪೂರಕವೆಂಬಂತೆ ಪ್ರಮುಖ ಸೆಕ್ಯುರಿಟೀಸ್ ವಿಶ್ಲೇಷಕ, ಮಿಂಗ್ ಚಿ ಕುವೊ ಅವರು ತಮ್ಮ ಟ್ವೀಟ್ವರ್ನಲ್ಲಿಫಾಕ್ಸ್‌ಕಾನ್ ಶೀಘ್ರದಲ್ಲೇ ಚೀನಾದೊಂದಿಗೆ ಏಕಕಾಲದಲ್ಲಿ ಭಾರತದಿಂದ ಇತ್ತೀಚಿನ ಆವೃತ್ತಿಯ ಐಫೋನ್‌ಗಳನ್ನು ರವಾನಿಸಲುಪ್ರಾರಂಭಿಸಬಹುದುಎಂದಿದ್ದಾರೆ. ಮುಂದುವರೆದುಇತ್ತೀಚಿನ ಸಮೀಕ್ಷೆಯು ಭಾರತದಲ್ಲಿನ ಫಾಕ್ಸ್‌ಕಾನ್‌ನ ಐಫೋನ್ ಉತ್ಪಾದನಾಸೈಟ್ ಹೊಸ 6.1 ಐಫೋನ್ 14 ಅನ್ನು 2H22 ನಲ್ಲಿ ಮೊದಲ ಬಾರಿಗೆ ಚೀನಾದೊಂದಿಗೆ ಏಕಕಾಲದಲ್ಲಿ ಸಾಗಿಸುತ್ತದೆ ಎಂದುಸೂಚಿಸುತ್ತದೆಎಂದಿದ್ದಾರೆ.

ಕೆಲ ವರದಿಗಳ ಪ್ರಕಾರ ಆಪಲ್‌ ಕಂಪನಿಯು ಮುಂದಿನ ಪ್ರಮುಖ ಬೆಳವಣಿಗೆಯ ಚಾಲಕನಾಗಿ ಭಾರತವನ್ನು ನೋಡುತ್ತಿದ್ದು ಬೆಳವಣಿಗೆಯು ಚೈನೀಸ್ ಅಲ್ಲದ ಐಫೋನ್ ಉತ್ಪಾದನಾ ತಾಣವನ್ನು ನಿರ್ಮಿಸುವಲ್ಲಿ ಆಪಲ್‌ಗೆ ಪ್ರಮುಖ ಮೈಲಿಗಲ್ಲಾಗಿಪರಿಣಮಿಸಲಿದೆ.. ತನ್ನ ಪೂರೈಕೆಯ ಮೇಲೆ ಜಾಗತಿಕ ರಾಜಕೀಯ ಪರಿಣಾಮಗಳನ್ನು ಕಡಿಮೆ ಮಾಡಲು ಆಪಲ್‌ ಪ್ರಯತ್ನಿಸುತ್ತಿದ್ದುಮುಂದಿನ ಮಾರುಕಟ್ಟೆ ಚಾಲಕನಾಗಿ ಭಾರತವನ್ನು ಅದು ಎದುರು ನೋಡುತ್ತಿದೆ ಎಂದು ಮಿಂಗ್ ಚಿ ಕುವೊ ಕೂಡ ಟ್ವೀಟ್‌ಮಾಡಿದ್ದಾರೆ.

Apple 2017 ರಲ್ಲಿ iPhone SE ಯೊಂದಿಗೆ ಭಾರತದಲ್ಲಿ ಐಫೋನ್‌ಗಳನ್ನು ತಯಾರಿಸಲು ಪ್ರಾರಂಭಿಸಿತು. ಇದು ಪ್ರಸ್ತುತ iPhone 11, iPhone 12, ಮತ್ತು iPhone 13 ಸೇರಿದಂತೆ ಭಾರತದಲ್ಲಿ ತನ್ನ ಕೆಲವು ಅತ್ಯಾಧುನಿಕ ಐಫೋನ್‌ಗಳನ್ನು ತಯಾರಿಸುತ್ತಿದೆ. ಭಾರತದಲ್ಲಿ ಸುಮಾರು 20 ವರ್ಷಗಳ ಇತಿಹಾಸವನ್ನು ಆಪಲ್‌ ಹೊಂದಿದ್ದು 2020ರಲ್ಲಿ ಮೊದಲ ಆಪಲ್‌ ಆನ್‌ ಲೈನ್ ಸ್ಟೋರ್‌ಅನ್ನು ತೆರೆದಿದ್ದು ಮುಂದಿನ ದಿನಗಳಲ್ಲಿ ದೇಶದಲ್ಲಿ ಹೆಚ್ಚಿನ ಆನ್‌ ಲೈನ್‌ ಸ್ಟೋರ್‌ ಗಳನ್ನು ತೆರೆಯಲು ಕಂಪನಿ ಯೋಚಿಸುತ್ತದೆ ಎಂದುಕೆಲ ವರದಿಗಳು ಹೇಳಿವೆ.


Share:

More Posts

Category

Send Us A Message

Related Posts

ಗೆಜ್ಜೆಗಿರಿಯ ಮೂಲಕ ಬಿಲ್ಲವ ಸಮಾಜಕ್ಕೆ ಸಂಘಟಾನಾತ್ಮಕ ಬಲ ತುಂಬಲು ಹೊರಟ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಗೆ ಅಭಿನಂದನೆ


Share       ಬಿಲ್ಲವ ಸಮಾಜ ಸೇವಾ ಸಂಘ(ರಿ) ಕುಂದಾಪುರ ಇದರ ಅಧ್ಯಕ್ಷರಾದ ಅಶೋಕ್ ಪೂಜಾರಿ ಬಿಜಾಡಿ ಹಾಗೂ ಸಂಘದ ಪಧಾಧಿಕಾರಿಗಳು  ಬ್ರಹ್ಮ ಶ್ರೀ ನಾರಾಯಣ ಗುರುಗಳ ವಿದ್ಯೆಯಿಂದ ಸ್ವತಂತ್ರರಾಗಿರಿ ಸಂಘಟನೆಯಿಂದ  ಬಲಯುತರಾಗಿ ಎಂಬ ತತ್ವದಂತೆ  ಬಿಲ್ಲವ


Read More »

ರಕ್ತಹೀನತೆಯಿಂದ ಬಳಲುತ್ತಿರುವವರು ಹುರುಳಿ ಸೇವನೆ ಮಾಡಿ


Share       ಹುರುಳಿ ನಾಲಿಗೆಗೆ ರುಚಿ ನೀಡುವುದರ ಜೊತೆಗೆ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಏಕೆಂದರೆ ಇದು ಪೌಷ್ಠಿಕಾಂಶಗಳಿಂದ ಸಮೃದ್ಧವಾಗಿದ್ದು, ಪ್ರೋಟೀನ್, ಫೈಬರ್, ಜೀವಸತ್ವಗಳು ಮತ್ತು ಖನಿಜಗಳ ಭಂಡಾರವಾಗಿದೆ. ಇದು ದೇಹಕ್ಕೆ ಅಗತ್ಯ ಪ್ರಯೋಜನಗಳನ್ನು ನೀಡುವ ಧಾನ್ಯವಾಗಿದೆ.


Read More »

ಬಂಟ್ವಾಳ ತಾಲೂಕು ಬಿಲ್ಲವ ಸಂಘದಲ್ಲಿ ಗೆಜ್ಜೆಗಿರಿ ಜಾತ್ರೋತ್ಸವ ಸಮಾಲೋಚನಾ ಸಭೆ


Share       ಬಂಟ್ವಾಳ : ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಆಡಳಿತ ಸಮಿತಿಯ ಪದಾಧಿಕಾರಿಗಳು ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸಕ್ಕೆ ಆಮಂತ್ರಿಸಿದರು. ಗೆಜ್ಜೆಗಿರಿ ಕ್ಷೇತ್ರಾಡಳಿತ


Read More »

ಫುಡ್ ಫೆಸ್ಟ್ ನಿಂದ ಬಂದ ಹಣ ಬಡವರ್ಗಕ್ಜೆ ಮೀಸಲಿಡುತ್ತಿರುವ ಬಿರುವೆರ್ ಕುಡ್ಲ; 3 ಲಕ್ಷ ಮೌಲ್ಯದ ಕೃತಕ ಅಂಗಾಂಗ ಸಲಕರಣೆ ವಿತರಣೆ


Share       ಮಂಗಳೂರು: ಅವರೆಲ್ಲಾ ತಿಂಗಳ ಸಂಬಳಕ್ಕಾಗಿ ದುಡಿಯುವ ಯುವಕರು. ಆದ್ರೆ ದುಡಿದ ಹಣದಲ್ಲಿ ಸಮಾಜ ಸೇವೆಗಾಗಿ ಮೀಸಲಿಟ್ಟು ಸೇವಾ ಕಾರ್ಯ ನಡೆಸುತ್ತಿರುವ ಆ ತಂಡ ಮನೆಯಿಲ್ಲದವರಿಗೆ ಮನೆ,ಅನಾರೋಗ್ಯಕ್ಕೀಡಾದವರಿಗೆ ಚಿಕಿತ್ಸೆಗೆ ಹಣಕಾಸಿನ ನೆರವು,ದಿನಸಿ ಕಿಟ್ ,ಆಂಬುಲೆನ್ಸ್


Read More »

ಮಹಾ ಕುಂಭಮೇಳ: ಮಹಾಮಂಡಲೇಶ್ವರರಾಗಿ ಪಟ್ಟಾಭಿಶಕ್ತರಾದ ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಶ್ರೀ ಕರ್ನಾಟಕಕ್ಕೆ ಸಂದ ಮೊದಲ ಗೌರವ


Share       ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರದ ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಯವರಿಗೆ ಜ.31 ರಂದು ಪ್ರಯಾಗ್ ರಾಜ್ ನಲ್ಲಿ ನಡೆದ ಮಹಾ ಕುಂಬಮೇಳದಲ್ಲಿ ಉತ್ತರ


Read More »

ರಾಷ್ಟ್ರಮಟ್ಟದ ನ್ಯಾಷನಲ್ ಗೇಮ್ಸ್ -2025 ಗೆ ಕರ್ನಾಟಕ ತಂಡಕ್ಕೆ ಆಯ್ಕೆಯಾದ ಕಾಣಿಯೂರಿನ ಸೌಮ್ಯ ಪೂಜಾರಿ


Share       ಪುತ್ತೂರು: ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯಲಿರುವ 38ನೇ ನ್ಯಾಷನಲ್ ಗೇಮ್ಸ್ -2025 ರಲ್ಲಿ ರಾಷ್ಟ್ರೀಯ ಮಹಿಳೆಯರ ಕಬಡ್ಡಿ ಚಾಂಪಿಯನ್‌ಶಿಪ್ ನಲ್ಲಿ ಭಾಗವಹಿಸಲು ಕರ್ನಾಟಕ ತಂಡಕ್ಕೆ ಕಾಣಿಯೂರಿನ ಸೌಮ್ಯ ಪೂಜಾರಿ ರವರು ಆಯ್ಕೆ ಆಗಿರುತ್ತಾರೆ. ಇವರು


Read More »