TOP STORIES:

ಒಂದು ಗೌರವಯುತ ವಿದಾಯದ ವೇದಿಕೆಯತ್ತ…ಜನಾರ್ಧನ ಪೂಜಾರಿ


“ಒಂದು ಗೌರವಯುತ ವಿದಾಯದ ವೇದಿಕೆಯತ್ತ”

“ಸಾಲ ಮೇಳದ ಸಂಗ್ರಾಮ”

“ಜನಾರ್ಧನ ಪೂಜಾರಿ”

ಇದು ಕರಾವಳಿಯ ಮಾನವೀಯತೆಯ ಪ್ರಶ್ನೆ…!!

 

ಬಹು ದಿನಗಳಿಂದ ಸಾಮಾಜಿಕ ಜಾಲತಾಣದ ವೇದಿಕೆಯತ್ತ ಒಂದು ವಿಚಾರದ ಕುರಿತು ತಡಬಡಿಸುತ್ತಲೇ ಇದ್ದೇ. ಜನಾರ್ಧನ ಪೂಜಾರಿಯವರ ಸ್ವ ಪಕ್ಷಿಯವರಿಂದ ಒಂದು ಮಾತನ್ನು ನಿರೀಕ್ಷಿಸುತ್ತಿದ್ದೆ..!! ಆದರೆ ಅಲ್ಲಿಂದ ಉತ್ತರವೇ ಬರಲಿಲ್ಲ.ಕಾಯುವಿಕೆ ಸಾಕಿನ್ನು ಎಂದು ಪೂಜಾರಿಯವರ ಪಕ್ಷದ ಕಾರ್ಯಕರ್ತನಲ್ಲದಿದ್ದರು, ಭಾ.ಜ.ಪಾ. ದ ಕಾರ್ಯಕರ್ತನಾಗಿದ್ದುಕೊಂಡೆ ಈ ಬರಹವನ್ನು ನಿಮ್ಮ ಮುಂದೆ ತರಲೇಬೇಕಿತ್ತು ಅಂತನಿಸಿತು..!

ಜನಾರ್ಧನ ಪೂಜಾರಿ ದೇಶ ಕಂಡ ಭ್ರಷ್ಟಾಚಾರ ರಹಿತ ರಾಜಕಾರಣಿ ಎಂದು ನಾನು ಪುನಃ ಹೇಳುವ ಅಗತ್ಯವಿಲ್ಲವೆಂದು ಭಾವಿಸುತ್ತೇನೆ.ಅದು ಎಲ್ಲಾ ಪಕ್ಷದವರಿಗೂ ತಿಳಿದ ವಿಷಯವೇ ಆಗಿದೆ.

ಬಡ ಜನರು ಬ್ಯಾಂಕಿನ ಒಂದಿಷ್ಟು ಜ್ಞಾನವನ್ನು , ಸಾಲವನ್ನು ಎಲ್ಲರಿಗೂ ಕೊಡುವಂತೆ ಮಾಡಿದ್ದೇ ಈ ಜನಾರ್ಧನ ಪೂಜಾರಿಯವರು..!!

ಅಂದಿನ ಸರಕಾರದಲ್ಲಿ ಕೇಂದ್ರದ ಸಚಿವನಾಗಿ ಅನೇಕ ಜವಾಬ್ದಾರಿಗಳನ್ನು ಜವಾಬ್ದಾರಿಯುತವಾಗಿ ನಿಭಾಯಿಸಿ,ಕರ್ನಾಟಕ ಸರಕಾರದ ಮುಖ್ಯಮಂತ್ರಿ ಸ್ಥಾನವನ್ನು ಪ್ರೀತಿಯಿಂದ ತಿರಸ್ಕರಿಸಿದ ವ್ಯಕ್ತಿ ಇವರು..!

ಈಗಿನ ರಾಜಕೀಯದಲ್ಲಿ ಪಂಚಾಯತಿನ ಸದಸ್ಯನಾದವನು ಕೂಡ ಮಹಡಿಯ ಮೇಲೆ ಇನ್ನೊಂದು ಮನೆ ಮಾಡುವ ತನಕ ದುಡಿಯುವ ಕಾಯಕ ಯೋಗಿಗಳು ನಮ್ಮ ಮುಂದೆ ಇದ್ದಾರೆ,ಅಲ್ಲವೇ..!? ಆದರೆ ಪೂಜಾರಿಯವರು…!??

ದಶಕಗಳ ಕಾಲ ರಾಜಕೀಯದಲ್ಲಿ ಅಭಿಶಕ್ತ ದೊರೆಯಾಗಿ ವಿಜೃಂಭಿಸಿದವರು,ಇಂದು ಅವರ ಕೈಯಲ್ಲಿ ಇರೋದು ಹಳೆಯ ಮನೆ ಮಾತ್ರ..! ಬಂದ ಗೌರವ ಧನ ಯಾವುದೋ ಅನಾಥಾಶ್ರಮ,ಬಡವರ ಮನೆಯ ದಾರಿಯನ್ನು ಕೇಳಿಕೊಂಡು ಸಾಗುತ್ತಿದೆ.!

ಇವರ ಬಗ್ಗೆ ತುಂಬಾ ಬರೆಯಬೇಕೆನ್ನಿಲ್ಲ..! ಯಾಕೆಂದರೆ ಎಲ್ಲಾ ರಾಜಕೀಯ ಪ್ರಮುಖರಿಗೆ ಇಂದು ಇವರ ಕುರಿತು ಒಂದು ಗೌರವಯುತ ಗೌರವ ಇದ್ದೆ ಇದೇ ಎಂದೇ ಹೇಳಬಹುದು.! ಚುನಾವಣೆ ಬಂದಾಗ ಇವರ ಆಶೀರ್ವಾದದ ಅಭಯಕ್ಕಾದರು ಮನೆಯ ಕಡೆ ದಾರಿಯನ್ನು ನೋಡುತ್ತಾರೆ..!

ಇಂದಿನ ರಾಜಕೀಯದಲ್ಲಿ ಪೂಜಾರಿಯವರಿಗೆ ಸರಿ ಸಮಾನವಾಗಿ ನಿಲ್ಲುವ ರಾಜಕಾರಣಿ ಹುಡುಕಿದರೂ ಸಿಗಲಾರರು.!

“ಇರಲಿ ಬಿಡಿ ವಿಷಯಕ್ಕೆ ಬರೋಣ..”

ಜನಾರ್ಧನ ಪೂಜಾರಿ ಎಂಬ ಸಹೃದಯಿ ಮನಸ್ಸಿಗೆ ಗೌರವಯುತ ವಿದಾಯದ ವೇದಿಕೆಯನ್ನು ನಿರ್ಮಿಸುವ ಜವಾಬ್ದಾರಿ ನಮ್ಮ ಮೇಲಿದೆ.!
ಇದು ಕರಾವಳಿಯ ಮೇಲೆ ಬೆಟ್ಟದಷ್ಟಿದೆ..!
ಮಂಗಳೂರಿನ ಒಂದು ದೊಡ್ಡ ವೇದಿಕೆಯಲ್ಲಿ ಜನಾರ್ಧನ ಪೂಜಾರಿರವರಿಗೆ,ಕರಾವಳಿಯ ಎಲ್ಲಾ ರಾಜಕೀಯ ಪಕ್ಷದ ನಾಯಕರು,ಜಾತಿ-ಭೇದವನ್ನು ಮೀರಿ ಅದರಲ್ಲೂ ಧರ್ಮ, ಜಾತಿ ಎಂಬ ಅನ್ವರ್ಥ ನಾಮವನ್ನು ಬದಿಗೊತ್ತಿ ಗೌರವಿಸಬೇಕು,ಈ ಸಂಭ್ರಮದಲ್ಲಿ ಎಲ್ಲರೂ ಭಾಗಿಯಾಗಬೇಕು.

ಕರಾವಳಿಯಲ್ಲಿ ಧರ್ಮ ಧರ್ಮದ ನಡುವೆ ಆಳವಾದ ಕಂದಕವೇ ನಿರ್ಮಾಣವಾಗಿದೆ.! ದಿನೇ ದಿನೇ ಅದು ಬಿಗಡಾಯಿಸುತ್ತಲೇ ಇದೆ. ಇದನ್ನು ಸ್ವಲ್ಪವಾದರೂ,ಒಂದು ದಿನಕ್ಕಾದರು ಪೂಜಾರಿಯವರ ಗೌರವಯುತ ವೇದಿಕೆಯ ನಡುವೆ ಸಹಬದಿಗೆ ತರೋಣ..!!

ಜನಾರ್ಧನ ಪೂಜಾರಿಯವರಿಗೆ ಅಂದು ನಡೆಯುವ ಅಭಿಮಾನದ ಬೃಹತ್ ಕಾರ್ಯಕ್ರಮಕ್ಕೆ ಮಂಗಳೂರಿಗೆ ಮಂಗಳೂರೇ ನವ ವಧುವಿನಂತೆ ಶೃಂಗಾರಗೊಳ್ಳಬೇಕು.!
ಕರಾವಳಿ ಇಂತಹ ಕಾರ್ಯಕ್ರಮವನ್ನು ಇಷ್ಟರವರೆಗೆ ನೋಡಿರಲು ಸಾಧ್ಯವಿರಬಾರದು.ಅಂತಹ ಕಾರ್ಯ ಯೋಜನೆ ಸಿದ್ಧವಾಗಬೇಕು.ಜಾತಿ,ಮತ, ಧರ್ಮ ಮತ್ತು ಪಕ್ಷವನ್ನು ಬದಿಗೆ ಸರಿಸಿ ಸಾಮಾನ್ಯ ವ್ಯಕ್ತಿಯಾಗಿ ಆ ಸಂಭ್ರಮದಲ್ಲಿ ಭಾಗಿಯಾಗಬೇಕು. ಕಾರ್ಯಕ್ರಮದಲ್ಲಿ “ಪೂಜಾರಿಯವರೇ ಕೇಂದ್ರ ಬಿಂದು”ಆಗಿದ್ದು,ರಾಜ್ಯದ ಮುಖ್ಯಮಂತ್ರಿಯವರು ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಮತ್ತು ಕೇಂದ್ರದ ಉನ್ನತ ಸಚಿವರು ಭಾಗಿಯಾಗಬೇಕು.ಅದರ ಜೊತೆಗೆ 100 ಸಾಧಕರಿಗೆ ವಿಶೇಷ ಸನ್ಮಾನವನ್ನು ಏರ್ಪಡಿಸಬೇಕು.ಬಡತನದಿಂದ ಮೇಲೆದ್ದು ಬಂದ ಸಾಧಕರಾಗಿರಬೇಕು.

ಕಾರ್ಯಕ್ರಮದ ಪೂರ್ಣ ಜವಾಬ್ದಾರಿಯನ್ನು ” ಬಿಲ್ಲವ ಸಂಘಟನೆಗಳು” ಹೊರಬೇಕು.(ಇದು ಬಿಲ್ಲವ ಸಂಘಟನೆಗಳ ಅಸ್ಥಿತ್ವದ ಪ್ರಶ್ನೆ.) ಬಿಲ್ಲವ ಸಂಘಟನೆಗಳೇ ಹೊರಲೇಬೇಕು..!! ಅಷ್ಟೇ..
ನಿಮ್ಮ ಜೊತೆ ಎಲ್ಲಾ ಸಂಘಟನೆಗಳನ್ನು ಜೊತೆ ಸೇರಿಸಿಕೊಂಡು ಸಾಗಬೇಕು.(ದೇಶ ವಿದೇಶದಲ್ಲಿರುವ ಸಾವಿರಾರು ಸಂಘಟನೆಗಳು ಬಿಲ್ಲವರಲ್ಲಿ ಇದೆ.)

ಒಂದು ರಾಜಕೀಯ ರಹಿತ ಉತ್ತಮ ವ್ಯಕ್ತಿ ಇದರ ಮೇಲ್ವಿಚಾರಣೆಯನ್ನು ನಡೆಸಬೇಕು.

ಕರಾವಳಿ ಒಮ್ಮತ ನೀಡುವುದರಲ್ಲಿ ಸಂದೇಹವಿಲ್ಲ ..!! ಒಂದು ಉತ್ತಮ ದಿನವನ್ನು ಆಯ್ಕೆ ಮಾಡಿ ಮುಂದಿನ ದಿನಗಳಲ್ಲಿ ಕಾರ್ಯ ಪ್ರವೃತ್ತರಾಗುವುದು ಒಳ್ಳೆಯದು.. ಆದಷ್ಟು ಬೇಗ..!!

ಮುಂದೊಂದು ದಿನ ಕಣ್ಣೀರಿನ ದಾರಿಯಲ್ಲಿ ನೆನೆಯುವುದು ಬೇಡ.. ಅಲ್ಲವೇ…

wwww.billavaswarriors.com

✍️ ವಿಜೇತ್ ಪೂಜಾರಿ ಶಿಬಾಜೆ


Related Posts

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »

ಕಲರ್ಸ್ ಕನ್ನಡ ಬಿಗ್ ಬಾಸ್ 12ರ ಸ್ಪರ್ಧಿ ಧ್ರುವಂತ್ (ಚರಿತ್ ಬಾಳಪ್ಪ ಪೂಜಾರಿ) ಜೀವನದ ಯಶೋಗಾಥೆ


Share         ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನು ಸಹಿಸಿಕೊಂಡು, ಅವಕಾಶಗಳಿಂದ ವಂಚಿತನಾದರೂ ಧೃತಿಗೆಡದೆ, ಸಾಧನೆಯ ಹಾದಿಯಲ್ಲಿ ಹಂತ ಹಂತವಾಗಿ ಮುನ್ನಡೆಯುತ್ತ ಇಂದು ಎಲ್ಲರ ಮನಗಳಲ್ಲಿ ಮನೆ ಮಾಡಿರುವಂತಹ ನಮ್ಮೆಲ್ಲರ ಹೆಮ್ಮೆಯ ಸಾಧಕ ಧ್ರುವಂತ್ ಇವರ ಯಶಸ್ಸಿನ ಹಿಂದಿನ


Read More »

🩸 ಓಮಾನ್ ಬಿಲ್ಲವಾಸ್ ವತಿಯಿಂದ ಆಯೋಜಿಸಲಾದ ಸಾಮೂಹಿಕ ರಕ್ತದಾನ ಶಿಬಿರ 🩸 ಬೌಶರ್ ಬ್ಲಡ್ ಬ್ಯಾಂಕ್, ಘಾಲಾ ಇಲ್ಲಿ ಯಶಸ್ವಿಯಾಗಿ ನಡೆಯಿತು.


Share          ಒಂದು ಕಾಲದಲ್ಲಿ ತುಳುನಾಡಿನ ಮೂಲದವರಾದ ಬಿಲ್ಲವರು ಕೃಷಿಕರಾಗಿ ಹಾಗೂ ಬೈದರಾಗಿ ತಮ್ಮ ಪರಿಶ್ರಮ, ಶ್ರಮಸಾಧನೆ ಮತ್ತು ಸಾಮಾಜಿಕ ಜವಾಬ್ದಾರಿಗಳ ಮೂಲಕ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆದವರು. ಪ್ರಕೃತಿಯೊಂದಿಗೆ ಸಮನ್ವಯದಿಂದ ಬದುಕನ್ನು ಸಾಗಿಸುತ್ತಾ, ಪರಸ್ಪರ


Read More »

ನಾನು ಕಂಡ ಪ್ರವೀಣ್ ಪೂಜಾರಿ


Share         ನಾನು ಕಂಡ ಪ್ರವೀಣ್ ಪೂಜಾರಿ ಸಾಧಾರಣ 15 ವರ್ಷಗಳಿಂದ ನಮ್ಮ ಆತ್ಮೀಯತೆ ಬಿಲ್ಲವ ಸಮಾಜದ ಸಾಮಾನ್ಯ ಜನರಿಗೂ ಸಮಸ್ಯೆ ಬಂದಂತ ಸಂದರ್ಭದಲ್ಲಿ ವಕೀಲನಾಗಿ ಅಥವಾ ಸಾಮಾಜಿಕ ಕಾರ್ಯಕರ್ತನಾಗಿ ನ್ಯಾಯ ದೊರಕಿಸಿಕೊಟ್ಟಂತಹ ಒಬ್ಬ ನಮ್ಮ


Read More »

ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ನಿಶಾ ಪೂಜಾರಿ ಉತ್ತೀರ್ಣರಾಗಿದ್ದಾರೆ.


Share         ಮುಂಬಯಿ : ಕಾಂದಿವಲಿ ಪೂರ್ವದ ಠಾಕೂರ್ ಕಾಂಪ್ಲೆಕ್ಸ್ ನಿವಾಸಿ ನಿಶಾ ಪೂಜಾರಿ ಅವರು ಇತ್ತೀಚೆಗೆ ಸೆಪ್ಟೆಂಬರ್‌ನಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಅವರು ಕಾರ್ಕಳ


Read More »

ಬಹುಮುಖ ಪ್ರತಿಭಾವಂತೆ ಹರ್ಷಿಕಾ ಕಾಣಿಯೂರು ಅವರಿಗೆ ಅಭಿನಂದನೆಗಳು


Share         ಹರ್ಷಿಕಾ ಕಾಣಿಯೂರು ಅವರ ಬಾಲ್ಯದ ವಯಸ್ಸಿನಲ್ಲಿಯೇ ಕೃಷಿ ಕಾರ್ಯದ ಮೇಲಿನ ಆಸಕ್ತಿ ಹಾಗೂ ಶ್ರಮವನ್ನು ಗುರುತಿಸಿ ಸೈಟ್ ರೀಟಾ ವಿದ್ಯಾ ಸಂಸ್ಥೆ ಗೌರವಿಸಿದ ಕ್ಷಣ ನಿಜಕ್ಕೂ ಹೆಮ್ಮೆಯದು. 🌾🌱👏   ಅಷ್ಟೇ ಅಲ್ಲದೆ,


Read More »