TOP STORIES:

ಒಂದು ಗೌರವಯುತ ವಿದಾಯದ ವೇದಿಕೆಯತ್ತ…ಜನಾರ್ಧನ ಪೂಜಾರಿ


“ಒಂದು ಗೌರವಯುತ ವಿದಾಯದ ವೇದಿಕೆಯತ್ತ”

“ಸಾಲ ಮೇಳದ ಸಂಗ್ರಾಮ”

“ಜನಾರ್ಧನ ಪೂಜಾರಿ”

ಇದು ಕರಾವಳಿಯ ಮಾನವೀಯತೆಯ ಪ್ರಶ್ನೆ…!!

 

ಬಹು ದಿನಗಳಿಂದ ಸಾಮಾಜಿಕ ಜಾಲತಾಣದ ವೇದಿಕೆಯತ್ತ ಒಂದು ವಿಚಾರದ ಕುರಿತು ತಡಬಡಿಸುತ್ತಲೇ ಇದ್ದೇ. ಜನಾರ್ಧನ ಪೂಜಾರಿಯವರ ಸ್ವ ಪಕ್ಷಿಯವರಿಂದ ಒಂದು ಮಾತನ್ನು ನಿರೀಕ್ಷಿಸುತ್ತಿದ್ದೆ..!! ಆದರೆ ಅಲ್ಲಿಂದ ಉತ್ತರವೇ ಬರಲಿಲ್ಲ.ಕಾಯುವಿಕೆ ಸಾಕಿನ್ನು ಎಂದು ಪೂಜಾರಿಯವರ ಪಕ್ಷದ ಕಾರ್ಯಕರ್ತನಲ್ಲದಿದ್ದರು, ಭಾ.ಜ.ಪಾ. ದ ಕಾರ್ಯಕರ್ತನಾಗಿದ್ದುಕೊಂಡೆ ಈ ಬರಹವನ್ನು ನಿಮ್ಮ ಮುಂದೆ ತರಲೇಬೇಕಿತ್ತು ಅಂತನಿಸಿತು..!

ಜನಾರ್ಧನ ಪೂಜಾರಿ ದೇಶ ಕಂಡ ಭ್ರಷ್ಟಾಚಾರ ರಹಿತ ರಾಜಕಾರಣಿ ಎಂದು ನಾನು ಪುನಃ ಹೇಳುವ ಅಗತ್ಯವಿಲ್ಲವೆಂದು ಭಾವಿಸುತ್ತೇನೆ.ಅದು ಎಲ್ಲಾ ಪಕ್ಷದವರಿಗೂ ತಿಳಿದ ವಿಷಯವೇ ಆಗಿದೆ.

ಬಡ ಜನರು ಬ್ಯಾಂಕಿನ ಒಂದಿಷ್ಟು ಜ್ಞಾನವನ್ನು , ಸಾಲವನ್ನು ಎಲ್ಲರಿಗೂ ಕೊಡುವಂತೆ ಮಾಡಿದ್ದೇ ಈ ಜನಾರ್ಧನ ಪೂಜಾರಿಯವರು..!!

ಅಂದಿನ ಸರಕಾರದಲ್ಲಿ ಕೇಂದ್ರದ ಸಚಿವನಾಗಿ ಅನೇಕ ಜವಾಬ್ದಾರಿಗಳನ್ನು ಜವಾಬ್ದಾರಿಯುತವಾಗಿ ನಿಭಾಯಿಸಿ,ಕರ್ನಾಟಕ ಸರಕಾರದ ಮುಖ್ಯಮಂತ್ರಿ ಸ್ಥಾನವನ್ನು ಪ್ರೀತಿಯಿಂದ ತಿರಸ್ಕರಿಸಿದ ವ್ಯಕ್ತಿ ಇವರು..!

ಈಗಿನ ರಾಜಕೀಯದಲ್ಲಿ ಪಂಚಾಯತಿನ ಸದಸ್ಯನಾದವನು ಕೂಡ ಮಹಡಿಯ ಮೇಲೆ ಇನ್ನೊಂದು ಮನೆ ಮಾಡುವ ತನಕ ದುಡಿಯುವ ಕಾಯಕ ಯೋಗಿಗಳು ನಮ್ಮ ಮುಂದೆ ಇದ್ದಾರೆ,ಅಲ್ಲವೇ..!? ಆದರೆ ಪೂಜಾರಿಯವರು…!??

ದಶಕಗಳ ಕಾಲ ರಾಜಕೀಯದಲ್ಲಿ ಅಭಿಶಕ್ತ ದೊರೆಯಾಗಿ ವಿಜೃಂಭಿಸಿದವರು,ಇಂದು ಅವರ ಕೈಯಲ್ಲಿ ಇರೋದು ಹಳೆಯ ಮನೆ ಮಾತ್ರ..! ಬಂದ ಗೌರವ ಧನ ಯಾವುದೋ ಅನಾಥಾಶ್ರಮ,ಬಡವರ ಮನೆಯ ದಾರಿಯನ್ನು ಕೇಳಿಕೊಂಡು ಸಾಗುತ್ತಿದೆ.!

ಇವರ ಬಗ್ಗೆ ತುಂಬಾ ಬರೆಯಬೇಕೆನ್ನಿಲ್ಲ..! ಯಾಕೆಂದರೆ ಎಲ್ಲಾ ರಾಜಕೀಯ ಪ್ರಮುಖರಿಗೆ ಇಂದು ಇವರ ಕುರಿತು ಒಂದು ಗೌರವಯುತ ಗೌರವ ಇದ್ದೆ ಇದೇ ಎಂದೇ ಹೇಳಬಹುದು.! ಚುನಾವಣೆ ಬಂದಾಗ ಇವರ ಆಶೀರ್ವಾದದ ಅಭಯಕ್ಕಾದರು ಮನೆಯ ಕಡೆ ದಾರಿಯನ್ನು ನೋಡುತ್ತಾರೆ..!

ಇಂದಿನ ರಾಜಕೀಯದಲ್ಲಿ ಪೂಜಾರಿಯವರಿಗೆ ಸರಿ ಸಮಾನವಾಗಿ ನಿಲ್ಲುವ ರಾಜಕಾರಣಿ ಹುಡುಕಿದರೂ ಸಿಗಲಾರರು.!

“ಇರಲಿ ಬಿಡಿ ವಿಷಯಕ್ಕೆ ಬರೋಣ..”

ಜನಾರ್ಧನ ಪೂಜಾರಿ ಎಂಬ ಸಹೃದಯಿ ಮನಸ್ಸಿಗೆ ಗೌರವಯುತ ವಿದಾಯದ ವೇದಿಕೆಯನ್ನು ನಿರ್ಮಿಸುವ ಜವಾಬ್ದಾರಿ ನಮ್ಮ ಮೇಲಿದೆ.!
ಇದು ಕರಾವಳಿಯ ಮೇಲೆ ಬೆಟ್ಟದಷ್ಟಿದೆ..!
ಮಂಗಳೂರಿನ ಒಂದು ದೊಡ್ಡ ವೇದಿಕೆಯಲ್ಲಿ ಜನಾರ್ಧನ ಪೂಜಾರಿರವರಿಗೆ,ಕರಾವಳಿಯ ಎಲ್ಲಾ ರಾಜಕೀಯ ಪಕ್ಷದ ನಾಯಕರು,ಜಾತಿ-ಭೇದವನ್ನು ಮೀರಿ ಅದರಲ್ಲೂ ಧರ್ಮ, ಜಾತಿ ಎಂಬ ಅನ್ವರ್ಥ ನಾಮವನ್ನು ಬದಿಗೊತ್ತಿ ಗೌರವಿಸಬೇಕು,ಈ ಸಂಭ್ರಮದಲ್ಲಿ ಎಲ್ಲರೂ ಭಾಗಿಯಾಗಬೇಕು.

ಕರಾವಳಿಯಲ್ಲಿ ಧರ್ಮ ಧರ್ಮದ ನಡುವೆ ಆಳವಾದ ಕಂದಕವೇ ನಿರ್ಮಾಣವಾಗಿದೆ.! ದಿನೇ ದಿನೇ ಅದು ಬಿಗಡಾಯಿಸುತ್ತಲೇ ಇದೆ. ಇದನ್ನು ಸ್ವಲ್ಪವಾದರೂ,ಒಂದು ದಿನಕ್ಕಾದರು ಪೂಜಾರಿಯವರ ಗೌರವಯುತ ವೇದಿಕೆಯ ನಡುವೆ ಸಹಬದಿಗೆ ತರೋಣ..!!

ಜನಾರ್ಧನ ಪೂಜಾರಿಯವರಿಗೆ ಅಂದು ನಡೆಯುವ ಅಭಿಮಾನದ ಬೃಹತ್ ಕಾರ್ಯಕ್ರಮಕ್ಕೆ ಮಂಗಳೂರಿಗೆ ಮಂಗಳೂರೇ ನವ ವಧುವಿನಂತೆ ಶೃಂಗಾರಗೊಳ್ಳಬೇಕು.!
ಕರಾವಳಿ ಇಂತಹ ಕಾರ್ಯಕ್ರಮವನ್ನು ಇಷ್ಟರವರೆಗೆ ನೋಡಿರಲು ಸಾಧ್ಯವಿರಬಾರದು.ಅಂತಹ ಕಾರ್ಯ ಯೋಜನೆ ಸಿದ್ಧವಾಗಬೇಕು.ಜಾತಿ,ಮತ, ಧರ್ಮ ಮತ್ತು ಪಕ್ಷವನ್ನು ಬದಿಗೆ ಸರಿಸಿ ಸಾಮಾನ್ಯ ವ್ಯಕ್ತಿಯಾಗಿ ಆ ಸಂಭ್ರಮದಲ್ಲಿ ಭಾಗಿಯಾಗಬೇಕು. ಕಾರ್ಯಕ್ರಮದಲ್ಲಿ “ಪೂಜಾರಿಯವರೇ ಕೇಂದ್ರ ಬಿಂದು”ಆಗಿದ್ದು,ರಾಜ್ಯದ ಮುಖ್ಯಮಂತ್ರಿಯವರು ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಮತ್ತು ಕೇಂದ್ರದ ಉನ್ನತ ಸಚಿವರು ಭಾಗಿಯಾಗಬೇಕು.ಅದರ ಜೊತೆಗೆ 100 ಸಾಧಕರಿಗೆ ವಿಶೇಷ ಸನ್ಮಾನವನ್ನು ಏರ್ಪಡಿಸಬೇಕು.ಬಡತನದಿಂದ ಮೇಲೆದ್ದು ಬಂದ ಸಾಧಕರಾಗಿರಬೇಕು.

ಕಾರ್ಯಕ್ರಮದ ಪೂರ್ಣ ಜವಾಬ್ದಾರಿಯನ್ನು ” ಬಿಲ್ಲವ ಸಂಘಟನೆಗಳು” ಹೊರಬೇಕು.(ಇದು ಬಿಲ್ಲವ ಸಂಘಟನೆಗಳ ಅಸ್ಥಿತ್ವದ ಪ್ರಶ್ನೆ.) ಬಿಲ್ಲವ ಸಂಘಟನೆಗಳೇ ಹೊರಲೇಬೇಕು..!! ಅಷ್ಟೇ..
ನಿಮ್ಮ ಜೊತೆ ಎಲ್ಲಾ ಸಂಘಟನೆಗಳನ್ನು ಜೊತೆ ಸೇರಿಸಿಕೊಂಡು ಸಾಗಬೇಕು.(ದೇಶ ವಿದೇಶದಲ್ಲಿರುವ ಸಾವಿರಾರು ಸಂಘಟನೆಗಳು ಬಿಲ್ಲವರಲ್ಲಿ ಇದೆ.)

ಒಂದು ರಾಜಕೀಯ ರಹಿತ ಉತ್ತಮ ವ್ಯಕ್ತಿ ಇದರ ಮೇಲ್ವಿಚಾರಣೆಯನ್ನು ನಡೆಸಬೇಕು.

ಕರಾವಳಿ ಒಮ್ಮತ ನೀಡುವುದರಲ್ಲಿ ಸಂದೇಹವಿಲ್ಲ ..!! ಒಂದು ಉತ್ತಮ ದಿನವನ್ನು ಆಯ್ಕೆ ಮಾಡಿ ಮುಂದಿನ ದಿನಗಳಲ್ಲಿ ಕಾರ್ಯ ಪ್ರವೃತ್ತರಾಗುವುದು ಒಳ್ಳೆಯದು.. ಆದಷ್ಟು ಬೇಗ..!!

ಮುಂದೊಂದು ದಿನ ಕಣ್ಣೀರಿನ ದಾರಿಯಲ್ಲಿ ನೆನೆಯುವುದು ಬೇಡ.. ಅಲ್ಲವೇ…

wwww.billavaswarriors.com

✍️ ವಿಜೇತ್ ಪೂಜಾರಿ ಶಿಬಾಜೆ


Related Posts

ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ


Share        ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ


Read More »

ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ ಕೋಟ್ಯಾನ್‌ಗೆ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ


Share        ವಿಕ ಸುದ್ದಿಲೋಕ ಮಂಗಳೂರು ಸೌಹಾರ್ದತೆ ಬಿಂಬಿಸುವ ವರದಿಗೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ‘ಬ್ಯಾಂಡ್ ಮಂಗಳೂರು’ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ


Read More »

ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಆಯ್ಕೆ


Share        ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದ ಬಿಂಬಿಸುವ ವರದಿಗೆ ನೀಡಲಾಗುವ “ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿಗೆ ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯಕೋಟ್ಯಾನ್ ಪಡು  ಆಯ್ಕೆಯಾಗಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ 2024 ಅಕ್ಟೋಬರ್


Read More »

ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್( ರಿ) ಇದರ ನೂತನ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ ಆಯ್ಕೆ


Share        ಶ್ರೀ ಕ್ಷೇತ್ರ ಗೆಜ್ಜೆಗಿರಿಯ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ  ಚಾರಿಟೇಬಲ್ ಟ್ರಸ್ಟ್(ರಿ) ಇದರ ನೂತನ ಅಧ್ಯಕ್ಷರಾಗಿ ಬಿರ್ವ ಸೆಂಟರ್ ಇದರ ಮಾಲಕರಾದ  ಕೆ ಸಂಜೀವ ಪೂಜಾರಿ ಇವರನ್ನು ಕಂಕನಾಡಿ ಬ್ರಹ್ಮ


Read More »

8ನೇ ವಯಸ್ಸಿನಲ್ಲಿ ಕಪೋತಾಸನದ ಭಂಗಿಯಲ್ಲಿ ವಿಶ್ವ ದಾಖಲೆ ಮಾಡಿದ ಬಾಲಕಿ ಕುಮಾರಿ ಶರಣ್ಯ ಶರತ್!


Share        ಮಂಗಳೂರು, ಜೂ. 20 ಪನ್ನೀರಿನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಶರಣ್ಯ ಶರತ್ ಅವರು ತನ್ನ ಎಂಟನೆಯ ವಯಸ್ಸಿನಲ್ಲಿ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್


Read More »

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾಗಿ ಎಚ್.ಎಸ್.ಜಯರಾಜ್ ಆಯ್ಕೆ


Share        ಮಂಗಳೂರು: ಬ್ರಹ್ಮಶ್ರೀ ನಾರಾಯಣಗುರುಗಳು ಪ್ರತಿಷ್ಠಾಪಿಸಿದ ಕರ್ನಾಟಕದ ಏಕೈಕ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಆಡಳಿತ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ಜಂಟಿ ಸಭೆ ಕೇಂದ್ರದ ಮಾಜಿ ಸಚಿವ


Read More »