TOP STORIES:

FOLLOW US

ಒಂದು ಗೌರವಯುತ ವಿದಾಯದ ವೇದಿಕೆಯತ್ತ…ಜನಾರ್ಧನ ಪೂಜಾರಿ


“ಒಂದು ಗೌರವಯುತ ವಿದಾಯದ ವೇದಿಕೆಯತ್ತ”

“ಸಾಲ ಮೇಳದ ಸಂಗ್ರಾಮ”

“ಜನಾರ್ಧನ ಪೂಜಾರಿ”

ಇದು ಕರಾವಳಿಯ ಮಾನವೀಯತೆಯ ಪ್ರಶ್ನೆ…!!

 

ಬಹು ದಿನಗಳಿಂದ ಸಾಮಾಜಿಕ ಜಾಲತಾಣದ ವೇದಿಕೆಯತ್ತ ಒಂದು ವಿಚಾರದ ಕುರಿತು ತಡಬಡಿಸುತ್ತಲೇ ಇದ್ದೇ. ಜನಾರ್ಧನ ಪೂಜಾರಿಯವರ ಸ್ವ ಪಕ್ಷಿಯವರಿಂದ ಒಂದು ಮಾತನ್ನು ನಿರೀಕ್ಷಿಸುತ್ತಿದ್ದೆ..!! ಆದರೆ ಅಲ್ಲಿಂದ ಉತ್ತರವೇ ಬರಲಿಲ್ಲ.ಕಾಯುವಿಕೆ ಸಾಕಿನ್ನು ಎಂದು ಪೂಜಾರಿಯವರ ಪಕ್ಷದ ಕಾರ್ಯಕರ್ತನಲ್ಲದಿದ್ದರು, ಭಾ.ಜ.ಪಾ. ದ ಕಾರ್ಯಕರ್ತನಾಗಿದ್ದುಕೊಂಡೆ ಈ ಬರಹವನ್ನು ನಿಮ್ಮ ಮುಂದೆ ತರಲೇಬೇಕಿತ್ತು ಅಂತನಿಸಿತು..!

ಜನಾರ್ಧನ ಪೂಜಾರಿ ದೇಶ ಕಂಡ ಭ್ರಷ್ಟಾಚಾರ ರಹಿತ ರಾಜಕಾರಣಿ ಎಂದು ನಾನು ಪುನಃ ಹೇಳುವ ಅಗತ್ಯವಿಲ್ಲವೆಂದು ಭಾವಿಸುತ್ತೇನೆ.ಅದು ಎಲ್ಲಾ ಪಕ್ಷದವರಿಗೂ ತಿಳಿದ ವಿಷಯವೇ ಆಗಿದೆ.

ಬಡ ಜನರು ಬ್ಯಾಂಕಿನ ಒಂದಿಷ್ಟು ಜ್ಞಾನವನ್ನು , ಸಾಲವನ್ನು ಎಲ್ಲರಿಗೂ ಕೊಡುವಂತೆ ಮಾಡಿದ್ದೇ ಈ ಜನಾರ್ಧನ ಪೂಜಾರಿಯವರು..!!

ಅಂದಿನ ಸರಕಾರದಲ್ಲಿ ಕೇಂದ್ರದ ಸಚಿವನಾಗಿ ಅನೇಕ ಜವಾಬ್ದಾರಿಗಳನ್ನು ಜವಾಬ್ದಾರಿಯುತವಾಗಿ ನಿಭಾಯಿಸಿ,ಕರ್ನಾಟಕ ಸರಕಾರದ ಮುಖ್ಯಮಂತ್ರಿ ಸ್ಥಾನವನ್ನು ಪ್ರೀತಿಯಿಂದ ತಿರಸ್ಕರಿಸಿದ ವ್ಯಕ್ತಿ ಇವರು..!

ಈಗಿನ ರಾಜಕೀಯದಲ್ಲಿ ಪಂಚಾಯತಿನ ಸದಸ್ಯನಾದವನು ಕೂಡ ಮಹಡಿಯ ಮೇಲೆ ಇನ್ನೊಂದು ಮನೆ ಮಾಡುವ ತನಕ ದುಡಿಯುವ ಕಾಯಕ ಯೋಗಿಗಳು ನಮ್ಮ ಮುಂದೆ ಇದ್ದಾರೆ,ಅಲ್ಲವೇ..!? ಆದರೆ ಪೂಜಾರಿಯವರು…!??

ದಶಕಗಳ ಕಾಲ ರಾಜಕೀಯದಲ್ಲಿ ಅಭಿಶಕ್ತ ದೊರೆಯಾಗಿ ವಿಜೃಂಭಿಸಿದವರು,ಇಂದು ಅವರ ಕೈಯಲ್ಲಿ ಇರೋದು ಹಳೆಯ ಮನೆ ಮಾತ್ರ..! ಬಂದ ಗೌರವ ಧನ ಯಾವುದೋ ಅನಾಥಾಶ್ರಮ,ಬಡವರ ಮನೆಯ ದಾರಿಯನ್ನು ಕೇಳಿಕೊಂಡು ಸಾಗುತ್ತಿದೆ.!

ಇವರ ಬಗ್ಗೆ ತುಂಬಾ ಬರೆಯಬೇಕೆನ್ನಿಲ್ಲ..! ಯಾಕೆಂದರೆ ಎಲ್ಲಾ ರಾಜಕೀಯ ಪ್ರಮುಖರಿಗೆ ಇಂದು ಇವರ ಕುರಿತು ಒಂದು ಗೌರವಯುತ ಗೌರವ ಇದ್ದೆ ಇದೇ ಎಂದೇ ಹೇಳಬಹುದು.! ಚುನಾವಣೆ ಬಂದಾಗ ಇವರ ಆಶೀರ್ವಾದದ ಅಭಯಕ್ಕಾದರು ಮನೆಯ ಕಡೆ ದಾರಿಯನ್ನು ನೋಡುತ್ತಾರೆ..!

ಇಂದಿನ ರಾಜಕೀಯದಲ್ಲಿ ಪೂಜಾರಿಯವರಿಗೆ ಸರಿ ಸಮಾನವಾಗಿ ನಿಲ್ಲುವ ರಾಜಕಾರಣಿ ಹುಡುಕಿದರೂ ಸಿಗಲಾರರು.!

“ಇರಲಿ ಬಿಡಿ ವಿಷಯಕ್ಕೆ ಬರೋಣ..”

ಜನಾರ್ಧನ ಪೂಜಾರಿ ಎಂಬ ಸಹೃದಯಿ ಮನಸ್ಸಿಗೆ ಗೌರವಯುತ ವಿದಾಯದ ವೇದಿಕೆಯನ್ನು ನಿರ್ಮಿಸುವ ಜವಾಬ್ದಾರಿ ನಮ್ಮ ಮೇಲಿದೆ.!
ಇದು ಕರಾವಳಿಯ ಮೇಲೆ ಬೆಟ್ಟದಷ್ಟಿದೆ..!
ಮಂಗಳೂರಿನ ಒಂದು ದೊಡ್ಡ ವೇದಿಕೆಯಲ್ಲಿ ಜನಾರ್ಧನ ಪೂಜಾರಿರವರಿಗೆ,ಕರಾವಳಿಯ ಎಲ್ಲಾ ರಾಜಕೀಯ ಪಕ್ಷದ ನಾಯಕರು,ಜಾತಿ-ಭೇದವನ್ನು ಮೀರಿ ಅದರಲ್ಲೂ ಧರ್ಮ, ಜಾತಿ ಎಂಬ ಅನ್ವರ್ಥ ನಾಮವನ್ನು ಬದಿಗೊತ್ತಿ ಗೌರವಿಸಬೇಕು,ಈ ಸಂಭ್ರಮದಲ್ಲಿ ಎಲ್ಲರೂ ಭಾಗಿಯಾಗಬೇಕು.

ಕರಾವಳಿಯಲ್ಲಿ ಧರ್ಮ ಧರ್ಮದ ನಡುವೆ ಆಳವಾದ ಕಂದಕವೇ ನಿರ್ಮಾಣವಾಗಿದೆ.! ದಿನೇ ದಿನೇ ಅದು ಬಿಗಡಾಯಿಸುತ್ತಲೇ ಇದೆ. ಇದನ್ನು ಸ್ವಲ್ಪವಾದರೂ,ಒಂದು ದಿನಕ್ಕಾದರು ಪೂಜಾರಿಯವರ ಗೌರವಯುತ ವೇದಿಕೆಯ ನಡುವೆ ಸಹಬದಿಗೆ ತರೋಣ..!!

ಜನಾರ್ಧನ ಪೂಜಾರಿಯವರಿಗೆ ಅಂದು ನಡೆಯುವ ಅಭಿಮಾನದ ಬೃಹತ್ ಕಾರ್ಯಕ್ರಮಕ್ಕೆ ಮಂಗಳೂರಿಗೆ ಮಂಗಳೂರೇ ನವ ವಧುವಿನಂತೆ ಶೃಂಗಾರಗೊಳ್ಳಬೇಕು.!
ಕರಾವಳಿ ಇಂತಹ ಕಾರ್ಯಕ್ರಮವನ್ನು ಇಷ್ಟರವರೆಗೆ ನೋಡಿರಲು ಸಾಧ್ಯವಿರಬಾರದು.ಅಂತಹ ಕಾರ್ಯ ಯೋಜನೆ ಸಿದ್ಧವಾಗಬೇಕು.ಜಾತಿ,ಮತ, ಧರ್ಮ ಮತ್ತು ಪಕ್ಷವನ್ನು ಬದಿಗೆ ಸರಿಸಿ ಸಾಮಾನ್ಯ ವ್ಯಕ್ತಿಯಾಗಿ ಆ ಸಂಭ್ರಮದಲ್ಲಿ ಭಾಗಿಯಾಗಬೇಕು. ಕಾರ್ಯಕ್ರಮದಲ್ಲಿ “ಪೂಜಾರಿಯವರೇ ಕೇಂದ್ರ ಬಿಂದು”ಆಗಿದ್ದು,ರಾಜ್ಯದ ಮುಖ್ಯಮಂತ್ರಿಯವರು ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಮತ್ತು ಕೇಂದ್ರದ ಉನ್ನತ ಸಚಿವರು ಭಾಗಿಯಾಗಬೇಕು.ಅದರ ಜೊತೆಗೆ 100 ಸಾಧಕರಿಗೆ ವಿಶೇಷ ಸನ್ಮಾನವನ್ನು ಏರ್ಪಡಿಸಬೇಕು.ಬಡತನದಿಂದ ಮೇಲೆದ್ದು ಬಂದ ಸಾಧಕರಾಗಿರಬೇಕು.

ಕಾರ್ಯಕ್ರಮದ ಪೂರ್ಣ ಜವಾಬ್ದಾರಿಯನ್ನು ” ಬಿಲ್ಲವ ಸಂಘಟನೆಗಳು” ಹೊರಬೇಕು.(ಇದು ಬಿಲ್ಲವ ಸಂಘಟನೆಗಳ ಅಸ್ಥಿತ್ವದ ಪ್ರಶ್ನೆ.) ಬಿಲ್ಲವ ಸಂಘಟನೆಗಳೇ ಹೊರಲೇಬೇಕು..!! ಅಷ್ಟೇ..
ನಿಮ್ಮ ಜೊತೆ ಎಲ್ಲಾ ಸಂಘಟನೆಗಳನ್ನು ಜೊತೆ ಸೇರಿಸಿಕೊಂಡು ಸಾಗಬೇಕು.(ದೇಶ ವಿದೇಶದಲ್ಲಿರುವ ಸಾವಿರಾರು ಸಂಘಟನೆಗಳು ಬಿಲ್ಲವರಲ್ಲಿ ಇದೆ.)

ಒಂದು ರಾಜಕೀಯ ರಹಿತ ಉತ್ತಮ ವ್ಯಕ್ತಿ ಇದರ ಮೇಲ್ವಿಚಾರಣೆಯನ್ನು ನಡೆಸಬೇಕು.

ಕರಾವಳಿ ಒಮ್ಮತ ನೀಡುವುದರಲ್ಲಿ ಸಂದೇಹವಿಲ್ಲ ..!! ಒಂದು ಉತ್ತಮ ದಿನವನ್ನು ಆಯ್ಕೆ ಮಾಡಿ ಮುಂದಿನ ದಿನಗಳಲ್ಲಿ ಕಾರ್ಯ ಪ್ರವೃತ್ತರಾಗುವುದು ಒಳ್ಳೆಯದು.. ಆದಷ್ಟು ಬೇಗ..!!

ಮುಂದೊಂದು ದಿನ ಕಣ್ಣೀರಿನ ದಾರಿಯಲ್ಲಿ ನೆನೆಯುವುದು ಬೇಡ.. ಅಲ್ಲವೇ…

wwww.billavaswarriors.com

✍️ ವಿಜೇತ್ ಪೂಜಾರಿ ಶಿಬಾಜೆ


Share:

More Posts

Category

Send Us A Message

Related Posts

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »

ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ


Share       ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ ಡಾ. ಪವಿತ್ರ ಜಿ. ಪಿ. ಹಾಗೂ ಪ್ರವೀಣ್ ಬಿ.ಎಮ್  ರವರ ಮಾರ್ಗದರ್ಶನದಲ್ಲಿ  ಡಾ. ರಶ್ಮಿ ಹರ್ಷ ಪೂಜಾರಿ ಇವರು ರಸಾಯನ ಶಾಸ್ತ್ರ ವಿಭಾಗದಲ್ಲಿ


Read More »

ದುಬೈಯಲ್ಲಿ ಯಶಸ್ವಿ ಉದ್ಯಮಿಯಾಗಿ ಲೆಕ್ಕವಿಲ್ಲದಷ್ಟು ಸೇವೆಯನ್ನು ಸಮಾಜಕ್ಕೆ ಅರ್ಪಿಸುತ್ತಿರು ಸೇವಾ ಮಾಣಿಕ್ಯ ನಿಟ್ಟೆ ಸಂದೀಪ್ ಕೋಟ್ಯಾನ್ ಕಾರ್ಕಳ..!


Share       ಅನೇಕ ಜನ ಉದ್ಯಮ ಕ್ಷೇತ್ರದ ಯಶಸ್ವಿಯಾಗಿ ಮುಂದುವರೆದ ಉದ್ಯಮಿಗಳು ಪ್ರಸ್ತುತ ದಿನಗಳಲ್ಲಿ ಸಿಗುತ್ತಾರೆ, ಆದರೆ ತಾವು ಸಂಪಾದಿಸಿರುವ ಹಣವನ್ನು ಮಾತ್ರ ಸಮಾಜದಲ್ಲಿ ಕೇವಲ ಕಾರ್ಯಕ್ರಮ ಮನೊರಂಜನೆಗಳಿಗೆ ಬಳಸಿ ರಾಜಕೀಯ ನಾಯಕರು, ಉದ್ಯಮಿಗಳನ್ನು ಕರೆದು


Read More »

ಮಂಗಳೂರಿನ ಖ್ಯಾತ ಯುರೋಲಜಿಸ್ಟ್ ಡಾ. ಸದಾನಂದ ಪೂಜಾರಿಯವರಿಗೆ ಪ್ರೈಡ್ ಆಫ್ ನ್ಯಾಷನ್ ಅವಾರ್ಡ್.


Share       ಮಂಗಳೂರು : ಕಳೆದ ವರ್ಷ ಕರ್ನಾಟಕ ಸರಕಾರದಿಂದ ಡಾ. ಬಿ.ಸಿ.ರಾಯ್ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಸದಾನಂದ ಪೂಜಾರಿಯವರಿಗೆ ಬೆಂಗಳೂರಿನ ಅಶೋಕ ಪಂಚತಾರ ಹೋಟೆಲ್ ನಲ್ಲಿ ನಡೆದ ಏಷ್ಯಾ ಟುಡೇ ಹಮ್ಮಿ ಕೊಂಡಿದ್ದ


Read More »

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ


Share       ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ ಅವರಿಗೆ ಜನುಮದಿನದ ಶುಭಾಶಯಗಳು🎂 ಅವರ ಬಗ್ಗೆ ಮಾಹಿತಿ ಡಾ.ಅಂಚನ್ ಸಿ ಕೆ, ಅಂತರರಾಷ್ಟ್ರೀಯ ವ್ಯಾಪಾರ ಮತ್ತು


Read More »

ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ


Share       ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ ಕೋಟ: ಶ್ರೀಮಾತಾ ಅಸ್ಪತ್ರೆಯ ಮಾಲಿಕರಾದ ಡಾ.ಸತೀಶ ಪೂಜಾರಿ (54) ಅವರು ಗುರುವಾರ ಬೆಳಿಗ್ಗೆ ಅವರ ಕೋಟತಟ್ಟು ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ


Read More »