TOP STORIES:

ಒಂದು ಗೌರವಯುತ ವಿದಾಯದ ವೇದಿಕೆಯತ್ತ…ಜನಾರ್ಧನ ಪೂಜಾರಿ


“ಒಂದು ಗೌರವಯುತ ವಿದಾಯದ ವೇದಿಕೆಯತ್ತ”

“ಸಾಲ ಮೇಳದ ಸಂಗ್ರಾಮ”

“ಜನಾರ್ಧನ ಪೂಜಾರಿ”

ಇದು ಕರಾವಳಿಯ ಮಾನವೀಯತೆಯ ಪ್ರಶ್ನೆ…!!

 

ಬಹು ದಿನಗಳಿಂದ ಸಾಮಾಜಿಕ ಜಾಲತಾಣದ ವೇದಿಕೆಯತ್ತ ಒಂದು ವಿಚಾರದ ಕುರಿತು ತಡಬಡಿಸುತ್ತಲೇ ಇದ್ದೇ. ಜನಾರ್ಧನ ಪೂಜಾರಿಯವರ ಸ್ವ ಪಕ್ಷಿಯವರಿಂದ ಒಂದು ಮಾತನ್ನು ನಿರೀಕ್ಷಿಸುತ್ತಿದ್ದೆ..!! ಆದರೆ ಅಲ್ಲಿಂದ ಉತ್ತರವೇ ಬರಲಿಲ್ಲ.ಕಾಯುವಿಕೆ ಸಾಕಿನ್ನು ಎಂದು ಪೂಜಾರಿಯವರ ಪಕ್ಷದ ಕಾರ್ಯಕರ್ತನಲ್ಲದಿದ್ದರು, ಭಾ.ಜ.ಪಾ. ದ ಕಾರ್ಯಕರ್ತನಾಗಿದ್ದುಕೊಂಡೆ ಈ ಬರಹವನ್ನು ನಿಮ್ಮ ಮುಂದೆ ತರಲೇಬೇಕಿತ್ತು ಅಂತನಿಸಿತು..!

ಜನಾರ್ಧನ ಪೂಜಾರಿ ದೇಶ ಕಂಡ ಭ್ರಷ್ಟಾಚಾರ ರಹಿತ ರಾಜಕಾರಣಿ ಎಂದು ನಾನು ಪುನಃ ಹೇಳುವ ಅಗತ್ಯವಿಲ್ಲವೆಂದು ಭಾವಿಸುತ್ತೇನೆ.ಅದು ಎಲ್ಲಾ ಪಕ್ಷದವರಿಗೂ ತಿಳಿದ ವಿಷಯವೇ ಆಗಿದೆ.

ಬಡ ಜನರು ಬ್ಯಾಂಕಿನ ಒಂದಿಷ್ಟು ಜ್ಞಾನವನ್ನು , ಸಾಲವನ್ನು ಎಲ್ಲರಿಗೂ ಕೊಡುವಂತೆ ಮಾಡಿದ್ದೇ ಈ ಜನಾರ್ಧನ ಪೂಜಾರಿಯವರು..!!

ಅಂದಿನ ಸರಕಾರದಲ್ಲಿ ಕೇಂದ್ರದ ಸಚಿವನಾಗಿ ಅನೇಕ ಜವಾಬ್ದಾರಿಗಳನ್ನು ಜವಾಬ್ದಾರಿಯುತವಾಗಿ ನಿಭಾಯಿಸಿ,ಕರ್ನಾಟಕ ಸರಕಾರದ ಮುಖ್ಯಮಂತ್ರಿ ಸ್ಥಾನವನ್ನು ಪ್ರೀತಿಯಿಂದ ತಿರಸ್ಕರಿಸಿದ ವ್ಯಕ್ತಿ ಇವರು..!

ಈಗಿನ ರಾಜಕೀಯದಲ್ಲಿ ಪಂಚಾಯತಿನ ಸದಸ್ಯನಾದವನು ಕೂಡ ಮಹಡಿಯ ಮೇಲೆ ಇನ್ನೊಂದು ಮನೆ ಮಾಡುವ ತನಕ ದುಡಿಯುವ ಕಾಯಕ ಯೋಗಿಗಳು ನಮ್ಮ ಮುಂದೆ ಇದ್ದಾರೆ,ಅಲ್ಲವೇ..!? ಆದರೆ ಪೂಜಾರಿಯವರು…!??

ದಶಕಗಳ ಕಾಲ ರಾಜಕೀಯದಲ್ಲಿ ಅಭಿಶಕ್ತ ದೊರೆಯಾಗಿ ವಿಜೃಂಭಿಸಿದವರು,ಇಂದು ಅವರ ಕೈಯಲ್ಲಿ ಇರೋದು ಹಳೆಯ ಮನೆ ಮಾತ್ರ..! ಬಂದ ಗೌರವ ಧನ ಯಾವುದೋ ಅನಾಥಾಶ್ರಮ,ಬಡವರ ಮನೆಯ ದಾರಿಯನ್ನು ಕೇಳಿಕೊಂಡು ಸಾಗುತ್ತಿದೆ.!

ಇವರ ಬಗ್ಗೆ ತುಂಬಾ ಬರೆಯಬೇಕೆನ್ನಿಲ್ಲ..! ಯಾಕೆಂದರೆ ಎಲ್ಲಾ ರಾಜಕೀಯ ಪ್ರಮುಖರಿಗೆ ಇಂದು ಇವರ ಕುರಿತು ಒಂದು ಗೌರವಯುತ ಗೌರವ ಇದ್ದೆ ಇದೇ ಎಂದೇ ಹೇಳಬಹುದು.! ಚುನಾವಣೆ ಬಂದಾಗ ಇವರ ಆಶೀರ್ವಾದದ ಅಭಯಕ್ಕಾದರು ಮನೆಯ ಕಡೆ ದಾರಿಯನ್ನು ನೋಡುತ್ತಾರೆ..!

ಇಂದಿನ ರಾಜಕೀಯದಲ್ಲಿ ಪೂಜಾರಿಯವರಿಗೆ ಸರಿ ಸಮಾನವಾಗಿ ನಿಲ್ಲುವ ರಾಜಕಾರಣಿ ಹುಡುಕಿದರೂ ಸಿಗಲಾರರು.!

“ಇರಲಿ ಬಿಡಿ ವಿಷಯಕ್ಕೆ ಬರೋಣ..”

ಜನಾರ್ಧನ ಪೂಜಾರಿ ಎಂಬ ಸಹೃದಯಿ ಮನಸ್ಸಿಗೆ ಗೌರವಯುತ ವಿದಾಯದ ವೇದಿಕೆಯನ್ನು ನಿರ್ಮಿಸುವ ಜವಾಬ್ದಾರಿ ನಮ್ಮ ಮೇಲಿದೆ.!
ಇದು ಕರಾವಳಿಯ ಮೇಲೆ ಬೆಟ್ಟದಷ್ಟಿದೆ..!
ಮಂಗಳೂರಿನ ಒಂದು ದೊಡ್ಡ ವೇದಿಕೆಯಲ್ಲಿ ಜನಾರ್ಧನ ಪೂಜಾರಿರವರಿಗೆ,ಕರಾವಳಿಯ ಎಲ್ಲಾ ರಾಜಕೀಯ ಪಕ್ಷದ ನಾಯಕರು,ಜಾತಿ-ಭೇದವನ್ನು ಮೀರಿ ಅದರಲ್ಲೂ ಧರ್ಮ, ಜಾತಿ ಎಂಬ ಅನ್ವರ್ಥ ನಾಮವನ್ನು ಬದಿಗೊತ್ತಿ ಗೌರವಿಸಬೇಕು,ಈ ಸಂಭ್ರಮದಲ್ಲಿ ಎಲ್ಲರೂ ಭಾಗಿಯಾಗಬೇಕು.

ಕರಾವಳಿಯಲ್ಲಿ ಧರ್ಮ ಧರ್ಮದ ನಡುವೆ ಆಳವಾದ ಕಂದಕವೇ ನಿರ್ಮಾಣವಾಗಿದೆ.! ದಿನೇ ದಿನೇ ಅದು ಬಿಗಡಾಯಿಸುತ್ತಲೇ ಇದೆ. ಇದನ್ನು ಸ್ವಲ್ಪವಾದರೂ,ಒಂದು ದಿನಕ್ಕಾದರು ಪೂಜಾರಿಯವರ ಗೌರವಯುತ ವೇದಿಕೆಯ ನಡುವೆ ಸಹಬದಿಗೆ ತರೋಣ..!!

ಜನಾರ್ಧನ ಪೂಜಾರಿಯವರಿಗೆ ಅಂದು ನಡೆಯುವ ಅಭಿಮಾನದ ಬೃಹತ್ ಕಾರ್ಯಕ್ರಮಕ್ಕೆ ಮಂಗಳೂರಿಗೆ ಮಂಗಳೂರೇ ನವ ವಧುವಿನಂತೆ ಶೃಂಗಾರಗೊಳ್ಳಬೇಕು.!
ಕರಾವಳಿ ಇಂತಹ ಕಾರ್ಯಕ್ರಮವನ್ನು ಇಷ್ಟರವರೆಗೆ ನೋಡಿರಲು ಸಾಧ್ಯವಿರಬಾರದು.ಅಂತಹ ಕಾರ್ಯ ಯೋಜನೆ ಸಿದ್ಧವಾಗಬೇಕು.ಜಾತಿ,ಮತ, ಧರ್ಮ ಮತ್ತು ಪಕ್ಷವನ್ನು ಬದಿಗೆ ಸರಿಸಿ ಸಾಮಾನ್ಯ ವ್ಯಕ್ತಿಯಾಗಿ ಆ ಸಂಭ್ರಮದಲ್ಲಿ ಭಾಗಿಯಾಗಬೇಕು. ಕಾರ್ಯಕ್ರಮದಲ್ಲಿ “ಪೂಜಾರಿಯವರೇ ಕೇಂದ್ರ ಬಿಂದು”ಆಗಿದ್ದು,ರಾಜ್ಯದ ಮುಖ್ಯಮಂತ್ರಿಯವರು ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಮತ್ತು ಕೇಂದ್ರದ ಉನ್ನತ ಸಚಿವರು ಭಾಗಿಯಾಗಬೇಕು.ಅದರ ಜೊತೆಗೆ 100 ಸಾಧಕರಿಗೆ ವಿಶೇಷ ಸನ್ಮಾನವನ್ನು ಏರ್ಪಡಿಸಬೇಕು.ಬಡತನದಿಂದ ಮೇಲೆದ್ದು ಬಂದ ಸಾಧಕರಾಗಿರಬೇಕು.

ಕಾರ್ಯಕ್ರಮದ ಪೂರ್ಣ ಜವಾಬ್ದಾರಿಯನ್ನು ” ಬಿಲ್ಲವ ಸಂಘಟನೆಗಳು” ಹೊರಬೇಕು.(ಇದು ಬಿಲ್ಲವ ಸಂಘಟನೆಗಳ ಅಸ್ಥಿತ್ವದ ಪ್ರಶ್ನೆ.) ಬಿಲ್ಲವ ಸಂಘಟನೆಗಳೇ ಹೊರಲೇಬೇಕು..!! ಅಷ್ಟೇ..
ನಿಮ್ಮ ಜೊತೆ ಎಲ್ಲಾ ಸಂಘಟನೆಗಳನ್ನು ಜೊತೆ ಸೇರಿಸಿಕೊಂಡು ಸಾಗಬೇಕು.(ದೇಶ ವಿದೇಶದಲ್ಲಿರುವ ಸಾವಿರಾರು ಸಂಘಟನೆಗಳು ಬಿಲ್ಲವರಲ್ಲಿ ಇದೆ.)

ಒಂದು ರಾಜಕೀಯ ರಹಿತ ಉತ್ತಮ ವ್ಯಕ್ತಿ ಇದರ ಮೇಲ್ವಿಚಾರಣೆಯನ್ನು ನಡೆಸಬೇಕು.

ಕರಾವಳಿ ಒಮ್ಮತ ನೀಡುವುದರಲ್ಲಿ ಸಂದೇಹವಿಲ್ಲ ..!! ಒಂದು ಉತ್ತಮ ದಿನವನ್ನು ಆಯ್ಕೆ ಮಾಡಿ ಮುಂದಿನ ದಿನಗಳಲ್ಲಿ ಕಾರ್ಯ ಪ್ರವೃತ್ತರಾಗುವುದು ಒಳ್ಳೆಯದು.. ಆದಷ್ಟು ಬೇಗ..!!

ಮುಂದೊಂದು ದಿನ ಕಣ್ಣೀರಿನ ದಾರಿಯಲ್ಲಿ ನೆನೆಯುವುದು ಬೇಡ.. ಅಲ್ಲವೇ…

wwww.billavaswarriors.com

✍️ ವಿಜೇತ್ ಪೂಜಾರಿ ಶಿಬಾಜೆ


Related Posts

ಸ್ವಾಮಿಗಳ ಚಿತ್ರ ಮತ್ತು ಪ್ರತಿಮೆಯ ಮುಂದೆ ರಾಜ್ಯಪಾಲರೊಂದಿಗೆ ಇರುವ ಚಿತ್ರ


Share         ಶಿವಗಿರಿ: ರಾಜ್ಯಪಾಲ ಆರ್.ವಿ. ಅರ್ಲೆಕ್ಕರ್ ಅವರು ರಾಜಭವನದ ಅತಿಥಿ ಕೊಠಡಿಯಲ್ಲಿ ಶ್ರೀ ನಾರಾಯಣ ಗುರುಗಳ ಚಿತ್ರ ಮತ್ತು ಕಂಚಿನ ಪ್ರತಿಮೆಯನ್ನು ಸ್ವಾಮಿಗಳಿಗೆ ತೋರಿಸಿದರು. ಅತಿಥಿ ಕೊಠಡಿಯನ್ನು ಪ್ರವೇಶಿಸುವಾಗ ಮೊದಲು ನೋಡುವುದು ಗುರುಗಳ ಚಿತ್ರ.


Read More »

ಕವಿ ಗವಿಸಿದ್ದ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ “ಮೇಣಕ್ಕಂಟಿದ ಬತ್ತಿ” ಕವನ ಸಂಕಲನ ಬಿಡುಗಡೆ


Share         ಅ.26: ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ಕವನ ಸಂಕಲನ ಬಿಡುಗಡೆ, ಪ್ರಶಸ್ತಿ ಪ್ರದಾನ,ಸಾಹಿತ್ಯ ಚರ್ಚೆ ಮುಂಬಯಿ, ಅ.23-  ಖ್ಯಾತ ಬಂಡಾಯ ಕವಿ ಗವಿಸಿದ್ದ ಎನ್. ಬಳ್ಳಾರಿ


Read More »

ಮಂಗಳೂರು: ಅಳದಂಗಡಿಯ ಶ್ರೀಮತಿ ಅನುಷಾ ಪ್ರಸಾದ್ ಪೂಜಾರಿ ಅವರಿಗೆ ಗಣಿತಶಾಸ್ತ್ರ ವಿಷಯದಲ್ಲಿ ಪಿ.ಎಚ್.ಡಿ ಪದವಿ


Share         ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ (Manipal Institute of Technology, Manipal) ನ ಗಣಿತಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಶ್ರೀಮತಿ ಅನುಷಾ ಎಲ್ ಅವರು ಮಂಡಿಸಿದ “A study on N-Covering


Read More »

ಬ್ರಿಟನ್ ಬಿಲ್ಲವ ಬಳಗ ಯುಕೆ ದೇಶದಲ್ಲಿ ಉತ್ಸಾಹದಿಂದ ಉದ್ಘಾಟನಾ ಸಮಾರಂಭವನ್ನು ಆಯೋಜಿಸಿದೆ.


Share         ಬ್ರಿಟನ್ ಬಿಲ್ಲವ ಬಳಗ ಯುಕೆಯ ಉದ್ಘಾಟನಾ ಸಮಾರಂಭವು ಸೆಪ್ಟೆಂಬರ್ 13 ರ ಶನಿವಾರದಂದು ಕೋವೆಂಟ್ರಿ ಹಾಲಿಡೇ ಇನ್ ಎಕ್ಸ್‌ಪ್ರೆಸ್ ಹೋಟೆಲ್‌ನಲ್ಲಿ ಸಂಘದ ಆಯ್ಕೆಯಾದ ಅಧ್ಯಕ್ಷ ಡಾ. ಪಿ.ಕೆ. ಮನೋಜ್ ಪೂಜಾರಿ ಅವರ ನೇತೃತ್ವದಲ್ಲಿ


Read More »

ಬಾರ್ಕೂರು ನಾಗರ ಮಠದ ಕ್ರೀಡಾ ಬಹು ಮುಖ ಪ್ರತಿಭೆಯ ಧನ್ವಿತಪೂಜಾರಿ ಧನ್ವಿತಪೂಜಾರಿ ಅವರಿಗೆ ಮೂರು ಪ್ರಶಸ್ತಿಗಳ ಗರಿ


Share         ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ ಕಿರಿಮಂಜೇಶ್ವರ ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಕಿರಿ, ಮಂಜೇಶ್ವರ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ  ದಿನಾಂಕ 30-08-2025 ರಂದು


Read More »

ಸತತ 216 ಗಂಟೆಗಳ ಭರತನಾಟ್ಯ ಮಾಡುವುದರ ಮೂಲಕ ಗೋಲ್ಡನ್ ಬುಕ್ ವಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಬರೆಸಿಕೊಂಡ ನವರಸಧಾರ ದೀಕ್ಷಾ. ವಿ


Share         ದೀಕ್ಷಾ ವಿ. ಅವರ ಜೀವನವು ಕಲೆಯ ತಪಸ್ಸಿನ ಜೀವಂತ ಪ್ರತೀಕವಾಗಿದೆ. ತಂದೆ ಶ್ರೀ ವಿಠಲ್ ಪೂಜಾರಿ ಮತ್ತು ತಾಯಿ ಶುಭಾ ವಿಠಲ್ ಅವರ ಮಗಳಾದ ಅವರು, ಬಾಲ್ಯದಿಂದಲೇ ಕಲೆಯ ಕಡೆ ಮನಸ್ಸು ತಿರುಗಿಸಿಕೊಂಡಿದ್ದರು.


Read More »