TOP STORIES:

FOLLOW US

ಕಡು ಬಡತನದ ಕುಟುಂಬದಲ್ಲಿ ಹುಟ್ಟಿದ ಹುಡುಗಿ ಕರ್ನಾಟಕದ ಕೋಟ್ಯಂತರ ಜನರ ಮನ ಗೆದ್ದು, ಪ್ರಸ್ತುತ ಮುಂಬೈ ಮಹಾನಗರದ ವಾಸಿಯಾಗಿದ್ದಾರೆ..ಹರಿಣಿ ನಿಲೇಶ್ ಪೂಜಾರಿ


ಕಡು ಬಡತನದ ಕುಟುಂಬದಲ್ಲಿ ಹುಟ್ಟಿದ ಹುಡುಗಿ ಕರ್ನಾಟಕದ ಕೋಟ್ಯಂತರ ಜನರ ಮನ ಗೆದ್ದು, ಪ್ರಸ್ತುತ ಮುಂಬೈ ಮಹಾನಗರದವಾಸಿಯಾಗಿದ್ದಾರೆ.

ಹರಿಣಿ ನಿಲೇಶ್ ಪೂಜಾರಿ: ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಜಗೋಳಿ    ಶ್ರೀ ರಘುನಾಥ್ ಸುವರ್ಣ ಮತ್ತುಶ್ರೀಮತಿ ಶೋಭಾ ದಂಪತಿಯ ಪುತ್ರಿ. ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಎಂಬಂತೆ ಶಾಲಾ ದಿನಗಳಲ್ಲಿಯೇ ಹರಿಣಿ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬಾಗವಹಿಸಿ ಪ್ರಶಸ್ತಿ ಪಡೆಯುತ್ತಿದ್ದರು.. ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಶಾಲೆಯಲ್ಲಿ ಮುಗಿಸಿದಹರಿಣಿ.. 12 ನೇ ತರಗತಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ.

ಹರಿಣಿ ನಿಲೇಶ್ ಪೂಜಾರಿ: ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಜಗೋಳಿ    ಶ್ರೀ ರಘುನಾಥ್ ಸುವರ್ಣ ಮತ್ತುಶ್ರೀಮತಿ ಶೋಭಾ ದಂಪತಿಯ ಪುತ್ರಿ. ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಎಂಬಂತೆ ಶಾಲಾ ದಿನಗಳಲ್ಲಿಯೇ ಹರಿಣಿ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬಾಗವಹಿಸಿ ಪ್ರಶಸ್ತಿ ಪಡೆಯುತ್ತಿದ್ದರು.. ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಶಾಲೆಯಲ್ಲಿ ಮುಗಿಸಿದಹರಿಣಿ.. 12 ನೇ ತರಗತಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ.

ಮುಂದೆ ಆಳ್ವಾಸ್ ಕಾಲೇಜು ಮೂಡಬಿದ್ರೆಯಲ್ಲಿ M. Com ಪದವಿದರೆಯಾದ ಹರಿಣಿ  ಅಲ್ಲಿಂದ ನೇರಾ ಹೊರಟಿದ್ದು ಕಲಾಜಗತ್ತಿಗೆ.. ಆವತ್ತಿನ ನಂಬರ್ ಒನ್ ಕನ್ನಡ ಕಾಮಿಡಿ ಸೀರಿಯಲ್ ಪಂಚರಂಗಿ ಪೊಂ ಪೊಂ ಸಾವಿರ ಸಂಚಿಕೆಗಳಲ್ಲಿ ಅಭಿನಯಿಸಿದ ಕೀರ್ತಿಹರಿಣಿಗಿದೆ.. ಅಲ್ಲಿಂದ ಮುಂದೆ ಹರ ಹರ ಮಹಾದೇವ ಧಾರಾವಾಹಿಯಲ್ಲಿ ಇವರು ಮಾಡಿದ ಸರಸ್ವತಿ ದೇವಿಯ ಪಾತ್ರದಿಂದಜನಮಾನಸದಲ್ಲಿ ಹರಿಣಿ ಅಚ್ಚಳಿಯದೆ ಉಳಿದರು..ಮದುಬಾಲ, ಲಕ್ಷ್ಮಿ ಬಾರಮ್ಮ,ಮದುಮಗಳು ಹೀಗೆ ಸಾಲು ಸಾಲುಧಾರಾವಾಹಿಗಳಲ್ಲಿ ಹರಿಣಿ ಮಿಂಚಿದರು

ಕಂಚಿಲ್ದಾ ಬಾಲೆ ತುಳು ಸಿನಿಮಾದಲ್ಲಿ ಬಾಲಮಾಣಿಯಾಗಿ ಅಭಿನಯಿಸಿ ತುಳುಚಿತ್ರ ರಸಿಕರಿಗೆ ಮಾತ್ರವಲ್ಲದೆ ಆದ್ಯಾತ್ಮಿಕವಾದಿಗಳಿಗೂಹತ್ತಿರ

ವಾದರೂ.. ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗೆ ಬಾಜನವಾದ ಅರ್ಜುನ್ ವೆಡ್ಸ್ ಅಮೃತ ತುಳು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿಕಾಣಿಸಿಕೊಂಡರು.. ಸುವರ್ಣ ಸೂಪರ್ ಜೋಡಿ, ಡ್ರೀಮ್ ಗರ್ಲ್ಸ್ ಹೀಗೆ ಹಲವಾರು ರಿಯಾಲಿಟಿ ಶೋಗಳಲ್ಲಿ ಬಾಗವಹಿಸಿದರು..

ಬೆಸ್ಟ್ ಕಾಮಿಡಿ ಆಕ್ಟ್ರೆಸ್ಸ್, ಬೆಸ್ಟ್ ಪರ್ಫಾರ್ಮೆನ್ಸ್, ಹೀಗೆ ಹಲವಾರು ಪ್ರಶಸ್ತಿ, ಸನ್ಮಾನಗಳು ಹರಿಣಿಯನ್ನ ಹುಡುಕಿ ಬಂದವು.

ಮುಂದೆ ಬಿಲ್ಲವ ಅಸೋಸಿಯೇಷನ್ ಮುಂಬೈ ಯುವ ವಿಭಾಗದ ಕಾರ್ಯಧ್ಯಕ್ಷರಾದ ನಿಲೇಶ್ ಪೂಜಾರಿ ಪಲಿಮಾರು ಅವರಬಾಳಸಂಗಾತಿಯಾದ ಹರಿಣಿ ಸದ್ಯಕ್ಕೆ ಕಲಾಜಗತ್ತಿನಿಂದ ದೂರವಿದ್ದರೂ ಕೂಡ ಸಾಮಾಜಿಕ ಸೇವೆಯಲ್ಲಿ ತಮ್ಮನ್ನ ತಾವುನಿರಂತರವಾಗಿ ತೊಡಗಿಸಿಕೊಂಡಿದ್ದಾರೆ..ಜೊತೆಗೆ ಬರವಣಿಗೆಯಲ್ಲಿಯೂ ಹರಿಣಿ ತಮ್ಮ ಛಾಪನ್ನ ಮೂಡಿಸುವತ್ತ ಹೆಜ್ಜೆ ಇಡುತ್ತಿದ್ದಾರೆ.. ಜೆಸಿಐ ಸಂಸ್ಥೆಯ ವಾರ್ಷಿಕ ಪುಸ್ತಕ ಚೈತನ್ಯ ಸಂಪಾದಕಿಯಾಗಿಯೂ ಹರಿಣಿ ಕಾರ್ಯನಿರ್ವಾಹಿಸಿದ್ದಾರೆ. ನಿರೂಪಕಿಯಾಗಿಯೂಹರಿಣಿಯ ಹೆಸರು ಪ್ರಸಿದ್ದಿಯಾಗಿದೆ.

2018ರಲ್ಲಿ ಮಡಿಕೇರಿಯಲ್ಲಿ ಸಂಭವಿಸಿದ ನೆರೆ ಸಂದರ್ಭದಲ್ಲಿ ಮಡಿಕೇರಿಯಲ್ಲಿಸ್ವಯಂಸೇವಕಿಯಾಗಿ ಕೆಲಸ ಮಾಡಿದ ಹರಿಣಿ, ತಮ್ಮ ಮಗಳು ಸಹನಿ ಮೊದಲ ವರ್ಷದ ಹುಟ್ಟುಹಬ್ಬವನ್ನ ಮಾನಸಿಕ ಭಿನ್ನಸಾಮರ್ಥ್ಯದ ಮಕ್ಕಳ ವಿಜೇತ ವಿಶೇಷ ಶಾಲೆಯಲ್ಲಿ ಆಚರಿಸಿ ಮೆಚ್ಚುಗೆ ಪಡೆದಿದ್ದರು..

  ಸದ್ಯ ಸಹನಿ ಸ್ಟಾರ್ ಎಂಬ ಹೆಸರಿನ ಸಂಸ್ಥೆಯ ಮುಖ್ಯಸ್ತೆ ಯಾಗಿರುವ ಹರಿಣಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳಲ್ಲಿಬಾಗಿಯಾಗುವ ಇಂಗಿತಾ ಹೊಂದಿದ್ದಾರೆ..ಹಲವಾರು ಬಾರಿ ರಕ್ತದಾನ ಶಿಬಿರ ಆಯೋಜನೆ ಮಾಡಿರುವ ಹರಿಣಿ ಸ್ವತಃ 24 ಬಾರಿರಕ್ತದಾನ ಮಾಡಿ ಸಾಮಾಜಿಕ ಕಳಕಳಿ ತೋರಿದ್ದಾರೆ..

   ಹರಿಣಿ ಅವರ ಯಶಸ್ಸಿಗೆ ಸ್ಫೂರ್ತಿಯಾದ ಅಪ್ಪ, ಅಮ್ಮ ಅಣ್ಣ ಹರಿಪ್ರಸಾದ್, ತಮ್ಮ ನಿತೇಶ್ ಜೊತೆಗೆ ಗಂಡ ನಿಲೇಶ್ ಪೂಜಾರಿಫಲಿಮಾರ್ ಅವರ ಸಹಕಾರಕ್ಕೆ ಅಭಾರಿಯಾಗಿರುವ ಹರಿಣಿ ಸದ್ಯ ಕಲಾ ಜಗತ್ತಿನಿಂದ ದೂರವಿದ್ದರೂ ಅವರೂ ನವರಾತ್ರಿಸಂದರ್ಭದಲ್ಲಿ ಮಾಡಿಸಿದ ಶಾರದೆಯಾ ಫೋಟೋಶೂಟ್ ಎಲ್ಲೆಲ್ಲೂ ಮೆಚ್ಚುಗೆಗೆ ಪಾತ್ರವಾಗಿದೆ..

  ಶಾರದೆಯ ಫೋಟೋಶೂಟ್ ಗಾಗಿ 21 ದಿನ ಕಟ್ಟುನಿಟ್ಟಿನ ವೃತ ಆಚರಿಸಿದ ಹರಿಣಿಗೆ ಶಾರದೆಯ ಆಶೀರ್ವಾದ ಮಡಿಲು ಸೇರಲಿಎನ್ನುವುದು ನಮ್ಮ ಆಶಯ..

ನವೀನ್ ಪಡ್ಡು ಇನ್ನಾ

ಕಮಲ  ಕಲಾ ವೇದಿಕೆ ಮುಂಬೈ


Share:

More Posts

Category

Send Us A Message

Related Posts

ಬಹರೈನ್ ನಲ್ಲಿ ನಡೆದ ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಬಹರೈನ್ ಇದರ ನೂತನ ಅಧ್ಯಕ್ಷರಾಗಿ ರಾಜ್ ಕುಮಾರ್ ಆಯ್ಕೆ


Share       ಮುಂಬಯಿ, (ಆರ್‌ಬಿಐ) ಜ.೧೧ : ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಬಹರೈನ್ ಇದರ ನೂತನ ಸಮಿತಿಯ ಪದಗ್ರಹನ ಹಾಗೂ ಕರ್ನಾಟಕ ಸಂಗಮ ಸಾಂಸ್ಕೃತಿಕ ಕಾರ್ಯಕ್ರಮ ಬಹರೈನ್ ನ ದಿ ಇಂಡಿಯಾನ್ ಕ್ಲಬ್ ಸಭಾಂಗಣದಲ್ಲಿ


Read More »

ಯುವವಾಹಿನಿ(ರಿ) ಕೂಳೂರು ಘಟಕ ಪದಗ್ರಹಣ ಸಮಾರಂಭದಲ್ಲಿ ಗೆಜ್ಜೆಗಿರಿ ಜಾತ್ರಾ ಮಹೋತ್ಸವದ ಆಮಂತ್ರಣ ಬಿಡುಗಡೆ


Share       ಯುವವಾಹಿನಿ(ರಿ) ಕೂಳೂರು ಘಟಕ ಪದಗ್ರಹಣ ಸಮಾರಂಭದಲ್ಲಿ ಗೆಜ್ಜೆಗಿರಿ ಜಾತ್ರಾ ಮಹೋತ್ಸವದ  ಆಮಂತ್ರಣ ಬಿಡುಗಡೆ ಗೆಜ್ಜೆಗಿರಿಯ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಯುವವಾಹಿನಿ ಪದಗ್ರಹಣ ಕಾರ್ಯಕ್ರಮದಲ್ಲಿ ಯುವ ವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷರಾದ ಲೋಕೇಶ್


Read More »

26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವಕ್ಕೆ ಪಾಲ್ಗೊಳ್ಳಲು ಕೇಂದ್ರ ಸರಕಾರದಿಂದ ಕೇಶವ ಕೋಟ್ಯಾನ್ ಅವರಿಗೆ ಆಹ್ವಾನ


Share       ಎಲ್ಲರ ಸಹಕಾರದಿಂದ ಸಾಧ್ಯವಾದ ಸಾಧನೆ. 80ನೇ ಬಡಗಬೆಟ್ಟು ವ್ಯಾಪ್ತಿಯಲ್ಲಿ ಮನೆ ಮನೆಗೆ ಕುಡಿಯುವ ನೀರು ಪೊರೈಸುವ ಕೇಂದ್ರ ಸರಕಾರದ ಮಹತ್ವಕಾಂಕ್ಷಿ ಯೋಜನೆಯನ್ನು ಸಮರ್ಥವಾಗಿ ಅನುಷ್ಠಾನ ಮಾಡುವಲ್ಲಿ ಉಡುಪಿ ಜಿಲ್ಲಾ ಪಂಚಾಯತಿ ಅಧಿಕಾರಿಗಳು, ನಮ್ಮಗ್ರಾಮ


Read More »

ಭರತನಾಟ್ಯದಲ್ಲಿ ವಿಧುಷಿ ಎಂಬ ಗೌರವ ಪಡೆದ ವಿಧುಷಿ ಅದಿತಿ ಪೂಜಾರಿ ಅವರಿಗೆ ಅಭಿನಂದನೆಗಳು


Share       ವಿಧುಷಿ ಅದಿತಿ ಪೂಜಾರಿ ಅವರಿಗೆ ಅಭಿನಂದನೆಗಳು  ನಿತ್ಯಾನಂದ ಮತ್ತು ತುಳಸಿಯವರ ಪುತ್ರಿ ಗುರು ವಿಧುಷಿ ಪ್ರತಿಮಾ ಶ್ರೀಧರ್ ಮತ್ತು ಶ್ರೀಧರ ಹೊಳ್ಳ ಅವರ ಮಾರ್ಗದರ್ಶನದಲ್ಲಿ ಭರತಾಂಜಲಿ (ಆರ್) ಕೊಟ್ಟಾರದಲ್ಲಿ ಕಲಿಕೆ ಅದಿತಿ ಅವರು


Read More »

ಅನಿತಾ ಪಿ.ತಾಕೊಡೆಯವರ ಸುವರ್ಣಯುಗ ಕೃತಿಗೆ ಡಾ. ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನ ಮುಂಬಯಿ ವತಿಯಿಂದ “ವಿಕಾಸ ಪುಸ್ತಕ ಬಹುಮಾನ”


Share       ಮುಂಬಯಿ:- ಹಿರಿಯ ಸಾಹಿತಿ, ಲೇಖಕ, ಪ್ರಾಧ್ಯಾಪಕ ಡಾ.ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನವು ಮುಂಬಯಿ ಕನ್ನಡ ಪುಸ್ತಕ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಕೊಡಮಾಡುತ್ತಾ ಬಂದ ಪುಸ್ತಕ ಬಹುಮಾನ ಯೋಜನೆಯಂತೆ 2023-24ರ ಸಾಲಿನ ವಿಕಾಸ’ ಪುಸ್ತಕ ಬಹುಮಾನಕ್ಕೆ,


Read More »

ಒಮಾನ್ ಬಿಲ್ಲವಾಸ್ ಕೂಟದ ನೂತನ ಅಧ್ಯಕ್ಷರಾಗಿ ಶ್ರೀಯುತ ಉಮೇಶ್ ಬಂಟ್ವಾಳ್ ಆಯ್ಕೆ


Share       ಬಂಟ್ವಾಳದವರಾಗಿರುವ ಉಮೇಶ್ ಬಂಟ್ವಾಳ್ ಅವರು ಮಂಗಳೂರು ವಿಶ್ವವಿದ್ಯಾಲಯ ವಾಣಿಜ್ಯ ಪದವಿಯನ್ನು ಪಡೆದಿದ್ದಾರೆ.   ಮಸ್ಕತ್ ನ ಒಮಾನ್ ದೇಶದಲ್ಲಿ ಸುಮಾರು 36 ವರ್ಷದಿಂದ ಅಲ್ ರ‌‌ವಾಸ್ ಹೋಲ್ಡಿಂಗ್ ಬಿಸಿನೆಸ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ


Read More »