TOP STORIES:

FOLLOW US

“ಕಸ್ತೂರಿ ಕನ್ನಡ” ಬಹರೈನ್ ಎಫ್.ಎಂ. ರೇಡಿಯೋ ಕಾರ್ಯಕ್ರಮದ ರೂವಾರಿ ಕಮಲಾಕ್ಷ ಅಮೀನ್ ರವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ


ಬಹರೈನ್ ದ್ವೀಪ ರಾಷ್ಟ್ರದಲ್ಲಿ ಸುಮಾರು ಮೂರು ದಶಕದಿಂದ ಕನ್ನಡತುಳು ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತಾ ಬಂದಿದ್ದ ಶ್ರೀಕಮಲಾಕ್ಷ ಅಮೀನ್ ರವರ ಬಹುಮುಖೀ ಸೇವೆಯನ್ನು ಸರಕಾರವು ಗುರುತಿಸಿ  ದಕ್ಷಿಣ ಕನ್ನಡ ಜಿಲ್ಲಾ ಮಟ್ಟದಲ್ಲಿರಾಜ್ಯೋತ್ಸವಪ್ರಶಸ್ತಿಯನ್ನು ನೀಡಿ ಗೌರವಿಸಲು ನಿರ್ಧರಿಸಿದೆ. 1991ರಲ್ಲಿ ಬಹರೈನ್ ಗೆ ಬಂದಿದ್ದಕಮಲ್ನಂತರ ಹಿಂದೆ ತಿರುಗಿ ನೋಡಿಲ್ಲ. ಕನ್ನಡ ನಾಟಕಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ ಸುಧೆ, ಕನ್ನಡತುಳು ಸಮ್ಮೇಳನಗಳು, ಹೀಗೆ ಎಲ್ಲಾಕಾರ್ಯಕ್ರಮಗಳಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದರು. ಬಹರೈನ್ ಉತ್ಕೃಷ್ಟ ನಿರೂಪಕನೆಂಬ ಹೆಗ್ಗಳಿಕೆಗಳ ಮಧ್ಯೆ ಬಹರೈನ್ರೇಡಿಯೋದಲ್ಲಿಕಸ್ತೂರಿ ಕನ್ನಡವೆಂಬ ಕನ್ನಡ ಎಫ್.ಎಂ. ರೇಡಿಯೋವನ್ನೂ ಪ್ರಾರಂಭಿಸಿದ ಕೀರ್ತಿ ಇವರದ್ದು. ಇದೇ ಎಫ್.ಎಂ. ನಲ್ಲಿ  ಜಯಮಾಲಾ ಹಾಗೂ ಆಗ ಕಾರ್ಮಿಕ ಸಚಿವರಾಗಿದ್ದ ಆಸ್ಕರ್ ಫೆರ್ನಾಂಡಿಸ್ ರನ್ನು ಸಂದರ್ಶಿಸಿದ್ದರು. ಇವರ ಸ್ಪಷ್ಟ ಹಾಗೂಶುದ್ಧ ಕನ್ನಡದ ನಿರೂಪಣೆಯನ್ನು ಮೆಚ್ಚಿಕೊಂಡವರ ಸಾಲಿನಲ್ಲಿ ಶ್ರೀ ಬಿ. ಎಸ್. ಯೆಡಿಯೂರಪ್ಪ, ಶ್ರೀ ಅಭಯಚಂದ್ರ ಜೈನ್, ಕ್ಯಾಪ್ಟನ್ಗಣೇಶ್ ಕಾರ್ಣಿಕ್, ಮುಂತಾದವರು ಸೇರುತ್ತಾರೆ.

ಕರಾವಳಿ ಜಿಲ್ಲೆಗಳ ಕೆಲವೊಂದು ಕುಟುಂಬಗಳಿಗಾಗಿ ದ್ವೀಪದಲ್ಲಿ ಧನ ಸಂಗ್ರಹಿಸಿ ನೆರವಾದ ಹಿನ್ನೆಲೆಯೂ ಇವರದ್ದಾಗಿದೆ. ಕನ್ನಡ ಭಾಷೆಹಾಗೂ ಸಂಸ್ಕೃತಿಯನ್ನು ಅಚ್ಚುಕಟ್ಟಾಗಿ ಪ್ರಸ್ತುತಪಡಿಸಿ, ಕನ್ನಡದ ಕಂಪನ್ನು ಬಹರೈನ್ ದೇಶದಲ್ಲಿ ಪಸರಿಸುವಲ್ಲಿ ಇವರ ಕೊಡುಗೆದೊಡ್ಡಮಟ್ಟದಲ್ಲಿದೆ. ಕನ್ನಡ ಸಿನೆಮಾ ರಂಗದಲ್ಲಿ ಬಹಳಷ್ಟು ಮೇರು ಕಲಾವಿದರೊಡನೆ ಇವರಿಗೆ ನಿಕಟ ಸಂಪರ್ಕವಿದೆ.

ಕಳೆದ ದಶಕದಲ್ಲಿ ಇವರು ಗೆಳೆಯರೊಡನೆ ಹುಟ್ಟು ಹಾಕಿದನಮ್ಮ ಕನ್ನಡವೇದಿಕೆಯು ಬಹರೈನ್ ನಲ್ಲಿ ಉತ್ಕೃಷ್ಟ ಮಟ್ಟದ ಕನ್ನಡಸಾಂಸ್ಕೃತಿಕ ಹಾಗೂ ಸಂಗೀತ ಕಾರ್ಯಕ್ರಮಗಳನ್ನು ನೀಡಿದೆ. ಸ್ಯಾಂಡಲ್ ವುಡ್ ಶ್ರೀನಾಥ್, ನೆನಪಿರಲಿ ಪ್ರೇಮ್, ಗುರು ಕಿರಣ್, ದರ್ಶನ್, ರವಿ ಶಂಕರ್, ಅನುರಾಧ ಭಟ್ ರಂತಹಾ ದಿಗ್ಗಜರನ್ನು ಆಹ್ವಾನಿಸಿ ಕಾರ್ಯಕ್ರಮ ಹಮ್ಮಿಕೊಂಡಿದೆ.

ಮಡದಿ ಸೋನಲ್, ಮಕ್ಕಳಾದ ರಿಶಾನ್ ಮತ್ತು ಚಿರಾಗ್ ರನ್ನೊಳಗೊಂಡ ಸುಖೀ ಸಂಸಾರ ಇವರದ್ದು. ಬಹರೈನ್ ನಿಂದದಕ್ಷಿಣಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಪ್ರಥಮ ಕನ್ನಡಿಗ ಇವರು.

ಅಭಿನಂದನೆಗಳು ಕಮಲ್. ಬಹರೈನ್ ಕನ್ನಡಿಗರ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲು. ಇತಿಹಾಸ ತಾನಾಗಿನಿರ್ಮಾಣವಾಗುವದಿಲ್ಲ. ಸಾಧಕರಿಂದ ನಿರ್ಮಿಸಲ್ಪಡುತ್ತದೆ.


Share:

More Posts

Category

Send Us A Message

Related Posts

ಶಾಸಕ ಸುನಿಲ್ ಕುಮಾರ್ ಸಹೋದರ ಸುಜಿತ್‌ ಕುಮಾರ್‌ ನಿಧನ


Share       ಕಾರ್ಕಳ: ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಸಹೋದರ ಸುಜಿತ್ ಕುಮಾರ್ (53) ಶುಕ್ರವಾರ (ಮೇ 23) ಅನಾರೋಗ್ಯದಿಂದ ನಿಧನರಾಗಿದ್ದಾರೆ.   ಅಂತಿಮ ವಿಧಿ ವಿಧಾನವು ಇಂದು ಶುಕ್ರವಾರ ನೆಕ್ಲಾಜೆ ಮನೆಯಲ್ಲಿ ಸಂಜೆ 6


Read More »

ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಪುಣೆಯ ಸಮಾಜಸೇವಕ   “ವಿಶ್ವನಾಥ ಪೂಜಾರಿ ಕಡ್ತಲ’ ಆಯ್ಕೆ


Share       ಪುಣೆ :ಪುಣೆ ಬಿಲ್ಲವ ಸಮಾಜ ಸೇವಾ ಸಂಘ ಇದರ ಅಧ್ಯಕ್ಷ ,ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಗುರುತಿಸಿಕೊಂಡಿರುವ ವಿಶ್ವನಾಥ ಪೂಜಾರಿ ಕಡ್ತಲ ಇವರು ಪ್ರತಿಷ್ಠಿತ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ -2025  ಗೆ ಆಯ್ಕೆಯಾಗಿರುತ್ತಾರೆ .


Read More »

ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ 1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ 4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ,ಶಿಲಾನ್ಯಾಸ


Share       ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ  1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ 4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ,ಶಿಲಾನ್ಯಾಸ ಯತೀವರ್ಯರು, ಸಚಿವ ಮಾಂಕಳ್ ವೈದ್ಯ, ಶಾಸಕ ಹರೀಶ್ ಪೂಂಜ, ಸೇರಿದಂತೆ ಬೆಳ್ತಂಗಡಿಯಿಂದ ಸುಮಾರು 200


Read More »

ಬೈದ್ಯೆರುಗಳಲ್ಲಿ ಲೀನವಾದ ದರ್ಶನ ಪಾತ್ರಿ ಶ್ರೀ ಸುರೇಶ್ ಪೂಜಾರಿ


Share         ಪ್ರಸಿದ್ದ ಬೈದ್ಯೇರುಗಳ ಪಾತ್ರಿಯಾದ  ಶ್ರೀ ಸುರೇಶ್ ಪೂಜಾರಿಯವರು ಅಲ್ಪಕಾಲದ  ಅಸೌಖ್ಯದ ಕಾರಣ ಇಂದು ಭಗವಂತನ ಪಾದ ಸೇರಿದರು. ಕಳತ್ತೂರು ಹಿರಿಯಣ್ಣ ಪೂಜಾರಿ ಹಾಗೂ ಶ್ರೀಮತಿ ಲೀಲಾವತಿ ಪೂಜಾರಿಯವರ ಮಗನಾದ ಶ್ರೀ ಸುರೇಶ್


Read More »

ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣರಿಗೆ ಐವತ್ತರ ಸಂಭ್ರಮ


Share       ಸಮಾಜದಲ್ಲಿ ಮಹತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿರುವ ವ್ಯಕ್ತಿ ಸಾಮಾಜಿಕವಾಗಿ ಮತ್ತು ಭಾವನಾತ್ಮಕವಾಗಿ ಸಮತೋಲನವನ್ನು ಸಾಧಿಸಿದರೆ ಮಾತ್ರ ಅವನು ಯಶಸ್ಸಿನ ಮೆಟ್ಟಿಲೇರಲು ಸಾಧ್ಯ. ‘ಸುಖ-ದುಃಖ, ಲಾಭ -ನಷ್ಟ ಸೋಲು-ಗೆಲುವನ್ನು ಸಮಾನವಾಗಿ ತೆಗೆದುಕೊಳ್ಳುವವನೇ ನಿಜವಾದ ಸುಖಿ’ ಎಂಬ


Read More »

ಮೂಡಬಿದಿರಿಯಲ್ಲೊಂದು 75 ಸಂಭ್ರಮ ಕ್ಕೆ ಸ್ನೇಹ ಸೇತುವಾದ ಸಿಂಗಾಪೂರ ಬಿಲ್ಲವ ಅಸೋಸಿಯೇಷನ್


Share       ಮೂಡಬಿದಿರಿಯಿಂದ ಸಿಂಗಪೂರಿಗೆ 🇸🇬: ಜಾಗತಿಕ ಸಮುದಾಯ ಸಂಬಂಧಗಳ ಬಲವರ್ಧನೆ: ಜಾಗತಿಕ ಸಮುದಾಯ ಸಂಬಂಧಗಳನ್ನು ಬಲಪಡಿಸುವ ದಿಕ್ಕಿನಲ್ಲಿ ಮಹತ್ವಪೂರ್ಣ ಹೆಜ್ಜೆವಹಿಸಿ, ಬಿಲ್ಲವ ಅಸೋಸಿಯೇಷನ್ ಸಿಂಗಪೂರಿನ ಸ್ಥಾಪಕರಾದ ಅಶ್ವಿತ್ ಬಂಗೇರಾ ಅವರು, ಬಿಲ್ಲವ ಅಸೋಸಿಯೇಷನ್ ಮೂಡಬಿದಿರಿಯ


Read More »