TOP STORIES:

ಕಾಂಗ್ರೆಸ್ ಮುಖಂಡ ಬಿ. ಜನಾರ್ದನ ಪೂಜಾರಿವರ ಬದುಕಿನ ಇನ್ನೊಂದು ಮುಖ


ಹೊರಗೆ‌  ಮಾತು ಜಾಸ್ತಿ.. ಹೆಂಡತಿ ಮಕ್ಕಳ ಜತೆ…?

ಕಾಂಗ್ರೆಸ್ ಮುಖಂಡ ಬಿ. ಜನಾರ್ದನ ಪೂಜಾರಿ ತುಂಬಾ ಮಾತನಾಡುತ್ತಾರೆ.’

ಕಾಂಗ್ರೆಸ್ ಪರ ಮತ್ತು ವಿರೋಧಿಗಳ ಬಾಯಲ್ಲಿ ಇದೇ ಮಾತು. ಆದರೆ ಮನೆಯಲ್ಲಿ ಇದಕ್ಕೆ ವ್ಯತಿರಿಕ್ತ. ಮಕ್ಕಳ ಬಳಿ ತಿಂಗಳುಗಟ್ಟಲೆಮಾತನಾಡದೆ ಇದ್ದದ್ದೂ ಉಂಟು!

ಅವರು ಮಗಳ ಜತೆ ಸರಿಯಾಗಿ ಮಾತನಾಡಿದ್ದು ಒಂದೇ ಬಾರಿಯಂತೆ. ಅದು ಮದುವೆಯ ಹಿಂದಿನ ದಿನ, ಭರ್ತಿ ಒಂದು ಗಂಟೆಮಾತನಾಡಿದ್ದಾರೆ. ಸೊಸೆಯಂದಿರ ಜತೆ ವರ್ಷಕ್ಕೆ ಒಮ್ಮೆ ಮಾತನಾಡಿದರೆ ಹೆಚ್ಚು. ಮಕ್ಕಳು ಬಿಡಿ ಮೊಮ್ಮಕ್ಕಳ ಜತೆಯೂಮಾತನಾಡುವುದಿಲ್ಲ.

ಖುದ್ದು ಅವರ ಕಿರಿ ಮಗ ದೀಪಕ್ ಪೂಜಾರಿಕನ್ನಡಪ್ರಭಜತೆ ತಂದೆಯ ಅಂತರಂಗ ತೆರೆದಿಟ್ಟ ಬಗೆ.

ತಂದೆ ಮನೆಯಲ್ಲಿ ಮಾತನಾಡುವುದೇ ಅಪರೂಪ. ಸೊಸೆಯಂದಿರ ಬಳಿ ಸರಾಸರಿ ವರ್ಷಕ್ಕೆ ಒಮ್ಮೆ ಮಾತನಾಡುತ್ತಾರೆ. ತಾಯಿ ಬಳಿಮನೆ, ಸಂಬಂಧಿಕರ ವಿಚಾರ ಮಾತನಾಡುತ್ತಾರೆ, ಆದರೆ ರಾಜಕೀಯ ಮಾತನಾಡುವುದೇ ಇಲ್ಲ‘.

ಪ್ರೀತಿ ಇಲ್ಲವೆಂದಲ್ಲ. ಬಾಯಿ ಬಿಟ್ಟು ಹೇಳುವುದಿಲ್ಲ. ಪ್ರೀತಿ, ವಿಶ್ವಾಸ ತಂದೆ ಮಾತಲ್ಲಿಲ್ಲ. ಆದರೆ, ಉದಾಹರಣೆ ಮೂಲಕತೋರ್ಪಡಿಸಿದ್ದಾರೆಎನ್ನುತ್ತಾರೆ  ದೀಪಕ್.       

ಎಲ್ಲ ಕುಟುಂಬದವರು ಒಟ್ಟಾಗಿ ಕಾರ್ ನಲ್ಲಿ ವಾರದ ಕೊನೆಯಲ್ಲಿ ಸಮಾರಂಭಗಳಿಗೆ ಹೋಗುವುದು ಮಾಮೂಲು.ಆದರೆ

ಪೂಜಾರಿ ಅವರು ತಮ್ಮ ಪತ್ನಿ, ಮಕ್ಕಳ ಜತೆ ಕಾರ್ ನಲ್ಲಿ ಮದುವೆಗೆ ಹೋಗಿದ್ದಾಗಲಿ,ಹೋಟೆಲ್ಗೆ ಹೋಗಿದ್ದಾಗಲಿ ನಾವುಜೀವಮಾನದಲ್ಲಿ ನೋಡಿಲ್ಲಎನ್ನುತ್ತಾರೆ ಪೂಜಾರಿಯವರ ನೆರೆ ಮನೆಯ ರಿಯಾಜ್.

ನನ್ನ ಎರಡನೇ ಅಣ್ಣ ತೀರಿ ಹೋದಾಗ ತಂದೆ ತುಂಬಾ ಖಿನ್ನರಾಗಿದ್ದರು. ಐದು ವರ್ಷಗಳ ಕಾಲ ದುಃಖದಿಂದ ಹೊರ ಬಂದಿರಲಿಲ್ಲ. ಮಕ್ಕಳ ಮೇಲೆ ಎಷ್ಟು ಪ್ರೀತಿ ಇದೆ ಎನ್ನುವುದು ನಮಗೆ ಆಗ ಸಂಪೂರ್ಣ ಗೊತ್ತಾಗಿತ್ತು ಎನ್ನುತ್ತಾರೆ ದೀಪಕ್.

ರಾಜಕೀಯ ಮನೆ ಒಳಗೆ ಬಿಡುವುದಿಲ್ಲ. ಕಾರ್ಯಕರ್ತರಿಗೂ ಸರ್ಕ್ಯುಟ್ ಹೌಸ್ಗೆ ಬರ ಹೇಳುತ್ತಾರೆ. ನಮ್ಮ ಹುದ್ದೆ, ಬಡ್ತಿ ಬಗ್ಗೆಕೇಳುವುದೇ ಇಲ್ಲ. ಇನ್ನು ಶಿಫಾರಸು ಕನಸಲ್ಲಿಯೂ ಅಸಾಧ್ಯ. ಬಹಳ ಹಿಂದೆ ನಮ್ಮ ಕಚೇರಿಯ ಸಹಾಯಕರ ಸಂಬಂಧಿಗೆ ಉದ್ಯೋಗಬೇಕಾಗಿತ್ತು. ತಂದೆ ಬಳಿ ಹೋದೆ, ಕೆಲಸ ಮಾಡಿಸಿದರು.

ಮತ್ತೊಮ್ಮೆ ಬೇರೊಬ್ಬರಿಗೆ ಉದ್ಯೋಗ ನೀಡುವಂತೆ ಕೇಳಿದಾಗ ಚೆನ್ನಾಗಿ ಬೈಯ್ದರು. ‘ನೀನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆಬಂದಿರಬಹುದು. ಆದರೆ ನಿನ್ನ ಬಳಿ ಕೆಲಸ ಮಾಡಿಸಿಕೊಳ್ಳುವವರು ದುರುಪಯೋಗ ಮಾಡಿಕೊಳ್ಳುತ್ತಾರೆ. ಇದೇ ಕೊನೆ, ಇನ್ನೊಂದುಬಾರಿ ಇಂಥ ವಿಚಾರದಲ್ಲಿ ಬರಬೇಡಎಂದು ಗದರಿದ್ದರು. ಇದು ಜೀವನದ ಪಾಠ ನನಗೆಎನ್ನುತ್ತಾರೆ ದೀಪಕ್

ಸೋನಿಯಾ ಚಪ್ಪಲಿ ಕಾದದ್ದು!

ಕುದ್ರೋಳಿ ದೇವಸ್ಥಾನದಲ್ಲಿ ಶತಮಾನೋತ್ಸವ ಸಂಭ್ರಮಕ್ಕೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯೇ ಬಂದಿದ್ದರು. ಸೋನಿಯಾ ಗಾಂಧಿ ಚಪ್ಪಲಿ ಮೇಲೆ ನಿಗಾ ಇರಿಸಲು ಅತ್ಯಂತ ವಿಶ್ವಾಸಿ ಒಬ್ಬನಿಗೆ ಸೂಚಿಸಿ ಎಂದು ಭದ್ರತಾ ಸಿಬ್ಬಂದಿ ಪೂಜಾರಿ ಬಳಿಹೇಳಿದರು.  ಪೂಜಾರಿ ಆಚೆ ಈಚೆ ನೋಡಿದರು, ಕಾರ್ಯಕರ್ತರ, ನಾಯಕರ ಬಳಿ ಹೇಳಲು ಆಗದು, ಅವರು ಒಪ್ಪಿದರೂ ಭದ್ರತೆಸಿಬ್ಬಂದಿಗೂ ನಂಬಿಕೆ ಬಾರದು. ಯಾರಾದರೂ ಚಪ್ಪಲಿ ಅಡಿ ಬಾಂಬ್ ಇಟ್ಟರೆ. ಹೀಗಾಗಿ ತಮ್ಮ ಮಗನನ್ನೇ ಕರೆದು ಚಪ್ಪಲಿಕಾಯುವಂತೆ ಹೇಳಿದರು.

ನಾನು ಚಪ್ಪಲಿಯನ್ನು ಅನೇಕ ಗಂಟೆಗಳ ಕಾಲ ಕಣ್ಣಿಟ್ಟು ಕಾದೆ. ಮರುದಿನ ನನ್ನನ್ನು ಕರೆದ ತಂದೆ, ಬೇಸರ ಆಯಿತೇಎಂದುಪ್ರಶ್ನಿಸಿದರು. ನಾನು ಸುಮ್ಮನಿದ್ದೆ. ಆದರೆ ನನಗೆ ಬೇಸರವಾಗಿರುವುದು ತಂದೆಗೆ ಅರ್ಥ ಆಗಿತ್ತು.

ನೋಡು ಕಾರ್ಯಕರ್ತರು, ಮುಖಂಡರಿಗೆ ಹೇಳಿದರೆ ಅವರಿಗೂ ಬೇಸರ ಆಗಬಹುದು. ತನ್ನ ಮಗ ಇರುವಾಗ ಕಾರ್ಯಕರ್ತರಿಗೆಹೇಳಿದರು ಎಂಬ ಅಪವಾದವೂ ಬರಬಹುದು. ನೀನಾದರೆ ನನ್ನ ಮಗ, ನಿನಗೆ ಪರಿಸ್ಥಿತಿ ವಿವರಿಸಬಲ್ಲೆಎಂದರು. ಇದು ನಮ್ಮ ತಂದೆವಿಶಾಲ ಮನಸ್ಸು ಎನ್ನುತ್ತಾರೆ ದೀಪಕ್.

ಮಕ್ಕಳ ಕರೆಯೋದು ಬೆಲ್ ಮೂಲಕ!

ಎಲ್ಲರೂ ಮಕ್ಕಳನ್ನು ಮುದ್ದಿನ ಹೆಸರು ಹೇಳಿ ಕರೆಯುತ್ತಾರೆ. ಆದರೆ ಪೂಜಾರಿ ತಮ್ಮ ಮಕ್ಕಳನ್ನು ಕರೆಯಲು ಕೈ ಬೆಲ್ಮಾಡಿಸಿಕೊಂಡಿದ್ದಾರೆ. ಒಂದು ಬೆಲ್ ಮಾಡಿದರೆ ಸಾಕು ಮಕ್ಕಳು ದಡದಡನೆ ಕೆಳಗೆ ಇಳಿದು ಬಂದು ಕೈಕಟ್ಟಿ ನಿಲ್ಲುತ್ತಾರೆ. ‘ತಂದೆನಮ್ಮನ್ನು ಹೆಸರೆತ್ತಿ ಕರೆಯೋದಿಲ್ಲ. ಬೆಲ್ ಮಾಡುತ್ತಾರೆ, ತಕ್ಷಣ ನಾವು ಹೋಗುತ್ತೇವೆಎನ್ನುತ್ತಾರೆ ದೀಪಕ್.

:ಜಿತೇಂದ್ರ ಕುಂದೇಶ್ವರ


Related Posts

ಕವಿ ಗವಿಸಿದ್ದ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ “ಮೇಣಕ್ಕಂಟಿದ ಬತ್ತಿ” ಕವನ ಸಂಕಲನ ಬಿಡುಗಡೆ


Share         ಅ.26: ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ಕವನ ಸಂಕಲನ ಬಿಡುಗಡೆ, ಪ್ರಶಸ್ತಿ ಪ್ರದಾನ,ಸಾಹಿತ್ಯ ಚರ್ಚೆ ಮುಂಬಯಿ, ಅ.23-  ಖ್ಯಾತ ಬಂಡಾಯ ಕವಿ ಗವಿಸಿದ್ದ ಎನ್. ಬಳ್ಳಾರಿ


Read More »

ಮಂಗಳೂರು: ಅಳದಂಗಡಿಯ ಶ್ರೀಮತಿ ಅನುಷಾ ಪ್ರಸಾದ್ ಪೂಜಾರಿ ಅವರಿಗೆ ಗಣಿತಶಾಸ್ತ್ರ ವಿಷಯದಲ್ಲಿ ಪಿ.ಎಚ್.ಡಿ ಪದವಿ


Share         ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ (Manipal Institute of Technology, Manipal) ನ ಗಣಿತಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಶ್ರೀಮತಿ ಅನುಷಾ ಎಲ್ ಅವರು ಮಂಡಿಸಿದ “A study on N-Covering


Read More »

ಬ್ರಿಟನ್ ಬಿಲ್ಲವ ಬಳಗ ಯುಕೆ ದೇಶದಲ್ಲಿ ಉತ್ಸಾಹದಿಂದ ಉದ್ಘಾಟನಾ ಸಮಾರಂಭವನ್ನು ಆಯೋಜಿಸಿದೆ.


Share         ಬ್ರಿಟನ್ ಬಿಲ್ಲವ ಬಳಗ ಯುಕೆಯ ಉದ್ಘಾಟನಾ ಸಮಾರಂಭವು ಸೆಪ್ಟೆಂಬರ್ 13 ರ ಶನಿವಾರದಂದು ಕೋವೆಂಟ್ರಿ ಹಾಲಿಡೇ ಇನ್ ಎಕ್ಸ್‌ಪ್ರೆಸ್ ಹೋಟೆಲ್‌ನಲ್ಲಿ ಸಂಘದ ಆಯ್ಕೆಯಾದ ಅಧ್ಯಕ್ಷ ಡಾ. ಪಿ.ಕೆ. ಮನೋಜ್ ಪೂಜಾರಿ ಅವರ ನೇತೃತ್ವದಲ್ಲಿ


Read More »

ಬಾರ್ಕೂರು ನಾಗರ ಮಠದ ಕ್ರೀಡಾ ಬಹು ಮುಖ ಪ್ರತಿಭೆಯ ಧನ್ವಿತಪೂಜಾರಿ ಧನ್ವಿತಪೂಜಾರಿ ಅವರಿಗೆ ಮೂರು ಪ್ರಶಸ್ತಿಗಳ ಗರಿ


Share         ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ ಕಿರಿಮಂಜೇಶ್ವರ ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಕಿರಿ, ಮಂಜೇಶ್ವರ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ  ದಿನಾಂಕ 30-08-2025 ರಂದು


Read More »

ಸತತ 216 ಗಂಟೆಗಳ ಭರತನಾಟ್ಯ ಮಾಡುವುದರ ಮೂಲಕ ಗೋಲ್ಡನ್ ಬುಕ್ ವಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಬರೆಸಿಕೊಂಡ ನವರಸಧಾರ ದೀಕ್ಷಾ. ವಿ


Share         ದೀಕ್ಷಾ ವಿ. ಅವರ ಜೀವನವು ಕಲೆಯ ತಪಸ್ಸಿನ ಜೀವಂತ ಪ್ರತೀಕವಾಗಿದೆ. ತಂದೆ ಶ್ರೀ ವಿಠಲ್ ಪೂಜಾರಿ ಮತ್ತು ತಾಯಿ ಶುಭಾ ವಿಠಲ್ ಅವರ ಮಗಳಾದ ಅವರು, ಬಾಲ್ಯದಿಂದಲೇ ಕಲೆಯ ಕಡೆ ಮನಸ್ಸು ತಿರುಗಿಸಿಕೊಂಡಿದ್ದರು.


Read More »

ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರಿಗೆ ಗೋಲ್ಡನ್ ಐಕಾನಿಕ್ ಅವಾರ್ಡ್


Share         ಮಂಗಳೂರು: ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರನ್ನು ಮಂಗಳೂರಿನಲ್ಲಿ ಗೋಲ್ಡನ್ ಐಕಾನಿಕ್ ಅವಾರ್ಡ್ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಹೋಟೆಲ್ ಓಷನ್ ಪರ್ಲ್ ನಲ್ಲಿ ನಡೆದ


Read More »