TOP STORIES:

ಕಾಂತಬಾರೆ ಬುದಾಬಾರೆ ತುಳುನಾಡ ಶಕ್ತಿಗಳ ಕಥೆ


ಮುಲ್ಕಿ ಸೀಮೆಯ ಅವಳಿ ವೀರರಾದ ಕಾಂತಬಾರೆ ಬೂದ ಬಾರೆಯರು ಕೋಟಿ ಚೆನ್ನಯರ ನಂತರದ ಕಾಲ ಘಟ್ಟದಲ್ಲಿ ಹುಟ್ಟಿ ತಮ್ಮದೇಯಾದ ಇತಿಹಾಸ ಸೃಷ್ಟಿಸಿದರು.ಮುಲ್ಕಿ ಸೀಮೆಯ ಸಾಮಂತರಸರ ಆಳ್ವಿಕೆಯ ಚಂದ್ರರಾಜ ಬಲ್ಲಾಳನು ಮುಲ್ಕಿ ಕೊಲ್ಲೂರಿನ ಸೀಮಂತೂರಿನಲ್ಲಿ ರಾಜ್ಯಭಾರ ಮಾಡಿಕೊಂಡಿದ್ದನು. ಅವನ ಪಟ್ಟದ ರಾಣಿ ಪುಲ್ಲ ಪೆರ್ಗಡ್ತಿ, ಮಕ್ಕಳಿಲ್ಲದ ಇವರು ಸಂತಾನ ಭಾಗ್ಯಕ್ಕಾಗಿ ಕದ್ರಿ ಮಂಜುನಾಥನಿಗೆ ಹರಕೆ ಸಲ್ಲಿಸಲು ಪರಿಹಾರ ಸಮೇತರಾಗಿ ದಂಡಿಗೆಯಲ್ಲಿ ಹೋಗುವಾಗ ಸುರತ್ಕಲ್ ಕಜೇರಿ ಎಂಬಲ್ಲಿ ಹೊಲ ಕಾಯುತ್ತಿದ್ದ ಏಳರ ಹರೆಯದ ಬಿಲ್ಲವ ಬಾಲಕಿ ಆಚು ಮಾತಿನ ಚತುರೋಕ್ತಿಗಳಿಗೆ ಮನಸೋತರು. ಹಿಂದಿರುಗಿ ಬರುವಾಗ ಅವಳ ಹಿರಿಯರ ಮನ ಒಪ್ಪಿಸಿ ಆಕೆಯನ್ನು ತಮ್ಮೊಂದಿಗೆ ಬೀಡಿಗೆ ಕರೆ ತರುತ್ತಾರೆ. ಆಕೆಯ ಜೊತೆಯಲ್ಲಿ ಬಂದ ಉಲ್ಲಾಯ ದೈವಕ್ಕೆ ಕೆಳಗಿನ ಗುಡ್ಡೆ ಮನೆಯಲ್ಲಿ ಸ್ಥಾನಕಟ್ಟಿ ಆರಾಧನೆ ಸಲ್ಲಿಸುತ್ತಾರೆ. ಮುಂದೆ ಆಕೆಯನ್ನು ತನ್ನ ಒಕ್ಕಲಾದ ವರಪಾಡಿ ಕುಂದಯ ಬಾರೆಗೆ ಮದುವೆ ಮಾಡಿ ಕೋಡುತ್ತಾರೆ. ಆಚು ಗರ್ಭವತಿಯಾಗಿ ಸೀಮಂತದ ಬಳಿಕ ತವರಿಗೆ ಹೋಗುವ ದಾರಿಯಲ್ಲಿ ಕೊಲ್ಲೂರಿನ ತಾಕಟೆ ಮರದ ಬಳಿ ಹೆರಿಗೆ ನೋವು ಕಾಣಿಸಿಕೊಂಡು ಅಲ್ಲಯೇ ದೈವಾಂಶ ಸಂಭೂತರಾದ ಅವಳಿ ಮಕ್ಕಳಿಗೆ ಜನ್ಮ ನೀಡುತ್ತಾಳೆ, ತಾಕಟೆ ಮರಕ್ಕೆ ತೊಟ್ಟಿಲು ಕಟ್ಟಿ ಶಿಶುಗಳನ್ನು ತೂಗುತ್ತಾಳೆ, ಸುದ್ದಿ ತಿಳಿದ ಪೆರ್ಗಡ್ತಿ, ಬಾಣಂತಿ & ಮಕ್ಕಳನ್ನು ಬೀಡಿಗೆ ಕರೆದೊಯ್ಯುತ್ತಾಳೆ. ಕೆಲವು ದಿನಗಳಲ್ಲಿ ಆಚು ಕೈಲಾಸವಾಸಿಯಾಗುತ್ತಾಳೆ. ರಾಣಿಯು ಅವಳಿ ಮಕ್ಕಳಿಗೆ ಕಾಂತಾಬಾರೆ ಬೂದಬಾರೆ ಎಂದು ಹೆಸರಿಟ್ಟು ಅಕ್ಕರೆಯಿಂದ ಸಲಹುತ್ತಾರೆ.

ನಂತರದಲ್ಲಿ ಪೆರ್ಗಡ್ತಿಗೂ ಮಕ್ಕಳಾಗುತ್ತದೆ. ಅವಳಿ ಮಕ್ಕಳು ಅಂದಿನ ಪ್ರಸಿದ್ಥ ಗುರುಕುಲವಾಗಿದ್ದ ಹಳೆಯಂಗಡಿ ಹತ್ತಿರದ ದೈಬಿತ್ತಿಲ್ (ಸಸಿಹಿತ್ತಿಲು) ಸಾಮಂತ ಗರಡಿಯಲ್ಲಿ ಯುದ್ಥ ವಿದ್ಯಾ ಪಾರಂಗತರಾಗುತ್ತಾರೆ. ಪ್ರಾಯಬದ್ಥರಾಗಿ ಮುಲ್ಕಿ ಸೀಮೆಯ ಗಡಿ ರಕ್ಷಣೆ ಮಾಡುತ್ತಾ, ಶತ್ರುಗಳ ತಂಟೆ ನಿವಾರಿಸುತ್ತಾ ಅರಸರ ಎಡಬಲವಾಗುತ್ತಾರೆ. ಮಾಗಣೆಯಲ್ಲಿ ಹೊಲಗಳನ್ನು ನಿರ್ಮಿಸಿ ಕೃಷಿ ಕಾಯಕ ಮಾಡಿ ಇತರರಿಗೂ ನೆರವಾಗುತ್ತಾರೆ. ಸಾಮಂತರ ರಾಜ್ಯಭಾರ ಸುಸೂತ್ರಗೊಳಿಸಲು, ಗುತ್ತು ಭಾವಗಳನ್ನು ನಿರ್ಮಿಸಿ ಪಹರೆಯವರನ್ನು ನೇಮಿಸಿ ಬೊಕ್ಕಸಕ್ಕೆ ಕಂದಾಯ ಸಂದಾಯದ ಏರ್ಪಾಡು ಮಾಡುತ್ತಾರೆ. ಅರಸರಿಂದ ಕೊಲ್ಲೂರ ಗುಡ್ಡೆಯ ಮರ್ದನಾಯ್ಗರಿಗೆ ಗಡಿ ಪಟ್ಟವನ್ನು ಮಾಡಿಸುತ್ತಾರೆ. ಬಲ್ಲಾಳರು ವಿಧಿವಶರಾದಾಗ ಸೀಮೆಯ ಆಡಳಿತದಲ್ಲಿ ಪೆರ್ಗಡ್ತಿಗೆ ಬೆಂಬಲವಾಗಿ ನಿಂತು ಆಕೆಯ ಮಗಳಾದ ದುಗ್ಗುವಿಗೆ ಐಕಳ ಬಾವದ ಬೀಸಬನ್ನಾರನೊಂದಿಗೆ ವಿವಾಹ ಮಾಡಿಸುತ್ತಾರೆ. ರಾಜ್ಯದ ಮೇಲೆ ದಂಡೆತ್ತಿ ಬಂದ ಮೂಡಬಿದಿರೆಯ ಚೌಟ ಅರಸು ಕುಬೇರನನ್ನು ಎದುರಿಸಿ ವೀರ ದುಗ್ಗಣ್ಣ ಕೊಂಡೆಯನ್ನು ಕೊಂದು ಕುಬೇರನನ್ನು ಸೋಲಿಸುತ್ತಾರೆ.

ಪೆರ್ಗಡ್ತಿ ಪುತ್ರ ಚೆನ್ನರಾಯ ಸಾವಂತನಿಗೆ ಪಟ್ಟ ಕಟ್ಟಿಸಿ, ಪರಂಗಡಿ(ಹಳೆಯಂಗಡಿ) ಬಳಿಯ ಪಡು ಪಣಂಬೂರಿನಲ್ಲಿ ನೂತನ ಅರಮನೆ ನಿರ್ಮಿಸಿ, ತಾವು ಸೀಮೆಯ ಕಾವಲಿಗೆ ನಿಲ್ಲುತ್ತಾರೆ. ಕಾರ್ಕಳದ ಬೈಲಸೂಡ ಅರಸರಿಗೆ ಯುದ್ಥದಲ್ಲಿ ನೆರವಾಗಿ ಜಯ ಒದಗಿಸುತ್ತರೆ. ತಮ್ಮ ಜೊತೆಯಲ್ಲಿ ಬಂದ ಉಳ್ಳಾಯ ಜುಮಾದಿ ಸಾರಮಾನ್ಯ ದೈವಗಳಿಗೆ ಉಳೆಪಾಡಿ ಗುಡ್ಡೆಯಲ್ಲಿ ಸ್ಥಾನ ಕಟ್ಟಿಸಿ ಆರಾಧಿಸುತ್ತಾರೆ. ಗುಡ್ಡೆನಾಯ್ಗರಿಗೆ ನೂರ ಒಂದು ಮುಡಿ ಸಾಗುವಳಿ ಜಮೀನು ಮಾಡಿಕೊಡುತ್ತಾರೆ. ಕೆಳಗಿನ ಗುಡ್ಡೆಯಲ್ಲಿ ಕಾಡು ಕಡಿದು ಏಳು ಎಕರೆ ಬಾಕಿಮಾರು ಗದ್ದೆಗೆ ಪುನಾರು ಪುಚ್ಚಾಡಿ ಬೈಲಿನಿಂದ ಕಾಲುವೆ ನಿರ್ಮಿಸಿ ನೀರು ಒದಗಿಸುತ್ತಾರೆ. ಪಡುಪಣಂಬೂರುನಲ್ಲಿಯೂ ಇಂತಹುದೆ ಕೃಷಿ ಕಾಯಕ ಹಾಗೂ ನೀರಾವರಿ ಏರ್ಪಡಿಸುತ್ತಾರೆ.

ಅಸಾಮಾನ್ಯ ವೀರರಾಗಿ ಮೆರೆದ ಈ ಅವಳಿ ವೀರರು ಕಾಯಬಿಟ್ಟು ಮಾಯಸೇರಿದ ಬಳಿಕ ಅವರನ್ನು ಕಾರಣಿಕ ಪುರುಷರೆಂದು ಆರಾಧಿಸಲಾಯಿತು. ಮುಲ್ಕಿ ಉಳೆಪಾಡಿ ಮಿತ್ತಗುಡ್ಡೆಯಲ್ಲಿ ಕಾಂತಬಾರೆ ಬೂದಬಾರೆ ಗರಡಿಯಿದೆ. ಅವರು ಸ್ಥಾಪಿಸಿದ ದೈವಗಳ ಗರಡಿಯಿದೆ. ಗುಡ್ಡೆ ಸಾನದ ಮನೆಯಲ್ಲಿ ಬಾರೆಯರ ಪಟ್ಟದ ಉಂಗುರ& ಅವರು ಯುದ್ಥಗಳಲ್ಲಿ ಬಳಸುತ್ತಿದ್ದ ಬಿಲ್ಲು ಬಾಣಗಳು ಮುಂತಾದ ಮುವತ್ತೆರಡೂ ಆಯುಧಗಳನ್ನು ರಕ್ಷಿಸಿ ಇಡಲಾಗಿದೆ. ಅವರು ಧರಿಸುತ್ತಿದ್ದ ಉಡುಪುಗಳನ್ನು ಈಗಲೂ ಕಾಯ್ದಿರಿಸಲಾಗಿದೆ. ಅವರ ಕಾಲದ ಆಯತಾಕಾರದ ಮರದ ಪೆಟ್ಟಿಗೆಯೂ ಇದೆ. ವರ್ಷಾವಧಿ ಕಾವೇರಿ ಸಂಕ್ರಮಣದಂದು ಇವುಗಳನ್ನು ಹೊರಗೆ ತೆಗೆದು ಪೂಜೆ ಪುರಸ್ಕಾರ ಸಲ್ಲಿಸಲಾಗುತ್ತದೆ. ಅವರ ಬಿಲ್ಲುಗಳು 7ಅಡಿಗಳಷ್ಟು ಉದ್ದವಿರುವುದನ್ನು ಗಮನಿಸಿದರೆ ಈ ಅವಳಿ ವೀರರು ಆಜಾನುಬಾಹು ದೇಹ ಪ್ರಕೃತಿಯವರಾಗಿದ್ದರೆಂದು ತಿಳಿಯುತ್ತದೆ. ಇವರ ಕಾರ್ಯಕ್ಷೇತ್ರದ ಪ್ರದೇಶದ ಉದ್ದಗಲಕ್ಕೂ ಕಂಡು ಬರುವ ಕುರುಗಳು ಅವರ ಪವಾಡ ಸದೃಶ ಸಾಧನೆಗಳ ಅವಶೇಷಗಳು, ಅವರ ಆರಾಧನಾ ಕೇಂದ್ರಗಳು,ಸೀಮಂತೂರು & ಏಳಿಂಜೆಯಲ್ಲಿ ದೊರೆತಿರುವ ವೀರಗಲ್ಲು, ಅವರ ಕುರಿತಾದ ಜನ ಜನಿತ ಕಥೆಗಳು, ಪಾಡ್ದನಗಳೂ ಐತಿಹ್ಯದ ಮಹತ್ವದ ದಾಖಲೆಗಳಾಗಿದೆ.

Credits: ತುಳುನಾಡ ಬಿಲ್ಲವರು
-(ರಮಾನಾಥ ಕೋಟೆಕಾರ್)

ಪೆ.ಟೈ:- ಸುದರ್ಶನ್ ಪೂಜಾರಿ ಶ್ರೀ ದುರ್ಗಾ.

Email us: billavaswarriors@gmail.com

www.billavaswarriors.com


Related Posts

ನಿಸ್ವಾರ್ಥ ಸೇವೆ ಸಲ್ಲಿಸಿ “ಜನಸ್ನೇಹಿ ಪೊಲೀಸ್” ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನಮ್ಮ ಸಮಾಜದ ಹೆಮ್ಮೆ ಎಸಿಪಿ ಶ್ರೀ ಎಸ್. ಮಹೇಶ್ ಕುಮಾರ್


Share         ಶ್ರೀ ಎಸ್. ಮಹೇಶ್ ಕುಮಾರ್ ಅವರು ಕಳೆದ 25 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ “ಜನಸ್ನೇಹಿ ಪೊಲೀಸ್” ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವುದು ಅವರ ಕರ್ತವ್ಯನಿಷ್ಠೆ ಮತ್ತು ಮಾನವೀಯತೆಯ ಪ್ರತೀಕವಾಗಿದೆ. 2012ರಲ್ಲಿ


Read More »

10ನೇ ಅಖಿಲ ಭಾರತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಭಾರತ್ ಬ್ಯಾಂಕಿಗೆ ಪ್ರತಿಷ್ಠಿತ ಲೀಡಿಂಗ್ ಬ್ಯಾಂಕ್ ಅವಾರ್ಡ್.


Share         ಪುಣೆಯ ಕೊರೆಗಾಂವ್ ಪಾರ್ಕ್‌ನ ಹೋಟೆಲ್ ವೆಸ್ಟಿನ್‌ನಲ್ಲಿ ನಡೆದ 10ನೇ ಅಖಿಲ ಭಾರತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಭಾರತ್ ಬ್ಯಾಂಕಿಗೆ ಪ್ರತಿಷ್ಠಿತ “ಲೀಡಿಂಗ್ ಬ್ಯಾಂಕ್ ಅವಾರ್ಡ್” (Leading Bank Award) ನೀಡಿ ಗೌರವಿಸಲಾಯಿತು.


Read More »

ಕುದ್ರೋಳಿ ಗೋಕರ್ಣ ಕ್ಷೇತ್ರ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪದ್ಮರಾಜ್ ಆರ್. ಸ್ಪಷ್ಟನೆ


Share         ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ನಿರ್ವಹಣೆಗೆ ಪ್ರಸ್ತುತ ಇರುವ ಸಮಿತಿಯ ಹೊರತಾಗಿ ಯಾವುದೇ ಹೊಸ ಸಮಿತಿ ರಚನೆಯಾಗಿಲ್ಲ ಎಂದು ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಶನಿವಾರ ಇಲ್ಲಿ ತಿಳಿಸಿದರು. ಕ್ಷೇತ್ರದ ಅಭಿವೃದ್ಧಿ


Read More »

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »

ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು – ₹67 ಕೋಟಿ ವೆಚ್ಚದ ಭೂಗತ ಕೇಬಲ್ ಯೋಜನೆಗೆ ಮಂಜೂರಾತಿ


Share         ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗಿದ್ದ ತಾಂತ್ರಿಕ ಸವಾಲಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ


Read More »

ಉಡುಪಿ ಸಿಟಿ ಬಸ್‌ ಚಾಲಕನ ಮಗಳು ಶಾಲೆಗೆ ಪ್ರಥಮ ರಾಂಕ್ – ದ್ರುತಿ ಪೂಜಾರಿ ಸಾಧನೆ…


Share         ಉಡುಪಿ: ಶ್ರಮ, ಸಂಕಲ್ಪ ಮತ್ತು ಕುಟುಂಬದ ಬೆಂಬಲ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ನಗರದ ಸಿಟಿ ಬಸ್ ಚಾಲಕರ ಮಗಳು ದ್ರುತಿ ಪೂಜಾರಿ ಉತ್ತಮ ಉದಾಹರಣೆ ಆಗಿದ್ದಾಳೆ. 23/04/2026 ರಂದು ಪ್ರಕಟವಾದ


Read More »