TOP STORIES:

ಕುಂಚದಲ್ಲಿ ಚಿತ್ರದ ನಾವಿಕನಾಗಿ,ಅಭಿನಯದಲ್ಲಿ ವಿಭಿನ್ನನಾಗಿ ನಿಂತ ಬಂಟ್ವಾಳದ “ರವಿ ಸಾಲ್ಯಾನ್”


ಬದುಕು ಎಂದರೆ ಸಮುದ್ರದ ನಡುವೆ ದೋಣಿಯಲ್ಲಿ ಸಾಗಿದ ರೀತಿಯೇ,ಹಾಯಿಗೋಲು ನಮ್ಮ ಕೈಯಲ್ಲೇ ಇದ್ದರೂ,ಒಂದೊಂದು ಸಲ ಗಾಳಿ ಬಂದ ಕಡೆ ಸಾಗಲೇ ಬೇಕು.ಇಲ್ಲದಿದ್ದರೆ ಗಾಳಿಯೇ ತನ್ನತ್ತ ತಿರುಗಿಸಿ ನಮ್ಮ ಗುರಿಯನ್ನು ವಿಚಲಿತಗೊಳಿಸುತ್ತದೆ..!

ದಾರಿ ತಪ್ಪಿದರು ಗುರಿ ತಪ್ಪಲೇಬಾರದು ಅಲ್ಲವೇ..!!

ಕಲಾವಿದನೊಳಗೊಬ್ಬ ಕಲಾವಿದನನ್ನು ಮೇಳೈಸಿದ ಕಲಾವಿದ “ರವಿ ಸಾಲ್ಯಾನ್”.

ಆನಂದ ಪೂಜಾರಿ ಮತ್ತು ಕುಸುಮಾರವರ ಎರಡನೇಯ ಮಗನಾಗಿ ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾಮದಲ್ಲಿ ಜನಿಸಿದ ರವಿ,ಪ್ರಾಥಮಿಕ ಶಿಕ್ಷಣವನ್ನು ಅಲ್ಲಿಪಾದೆಯಲ್ಲಿ ಹಾಗೂ ಪ್ರೌಢ ಶಿಕ್ಷಣವನ್ನು ಮಣಿನಾಲ್ಕೂರುವಿನಲ್ಲಿ ಪೂರ್ಣಗೊಳಿಸಿದರು.
ಎಲ್ಲರಿಗೂ ಶಾಪವಾಗಿ ಪರಿಣಮಿಸಿದ ಬಡತನ ಇವರನ್ನೂ ಕೂಡ ಬಿಡಲೇ ಇಲ್ಲ..! ಒಂದು ತುತ್ತು ಅನ್ನಕ್ಕಾಗಿ ಪರದಾಡಿದ ಉದಾಹರಣೆಯನ್ನು ಈಗಲೂ ನೆನಪಿಸಿಕೊಳ್ಳುತ್ತಾರೆ.

10ನೇಯ ತರಗತಿ ಮುಗಿದ ನಂತರ ಒಂದಿಷ್ಟೂ ಹಣಕ್ಕಾಗಿ ಬೆಂಗಳೂರಿಗೆ ಬಂದು ದುಡಿದ ದಿನ ಇವರ ಪಾಲಿನಲ್ಲಿ ಇತ್ತು..!!ತದನಂತರ ಊರಿಗೆ ಮರಳಿ ತಾಂತ್ರಿಕ ಶಿಕ್ಷಣವನ್ನು ಕೂಡ ಪಡೆದರು.

ಶಾಲಾ ದಿನಗಳಲ್ಲಿ ಇದ್ದ ಚಿತ್ರ ಕಲೆಯ ಬಗ್ಗೆ ವಿಶೇಷ ಆಸಕ್ತಿ,ಇಂದು ರವಿ ಸಾಲ್ಯಾನ್ ರವರನ್ನು ಹಲವಾರು ಪ್ರತಿಭೆಗಳ ಮಧ್ಯೆ ತನ್ನ ಇರುವಿಕೆಯನ್ನು ತೋರ್ಪಡಿಸುತ್ತಿದ್ದಾರೆ.

ತಾಂತ್ರಿಕ ಶಿಕ್ಷಣವನ್ನು ಪೂರೈಸಿದ ನಂತರ ಉದ್ಯೋಗಕ್ಕಾಗಿ ಮತ್ತೊಮ್ಮೆ ಬೆಂಗಳೂರಿನತ್ತ ಪಯಣಿಸಿ,ಪ್ರತಿಷ್ಠಿತ ಖಾಸಗಿ ಕಂಪನಿಯಾದ ಟೊಯೊಟಾದಲ್ಲಿ ಉದ್ಯೋಗಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

ಏನಾದರೂ ಸಾಧನೆ ಮಾಡಲೇಬೇಕೆಂಬ ಅತೀವ ಬಯಕೆ,ಅದರ ಜೊತೆ ಸಾಗಿದ ಹಠ,ಅದನ್ನು ಪಡೆಯಲು ಹೊತ್ತು ತಂದ ಪರಿಶ್ರಮದ ಮೂಟೆ ಇಂದು ರವಿಯವರನ್ನು ಕಲಾವಿದನೊಳಗೊಬ್ಬ ಕಲಾವಿದನನ್ನು ಹುಟ್ಟು ಹಾಕಿದೆ ಎಂದರೆ ತಪ್ಪಾಗಲಾರದು..!

ಬೆಂಗಳೂರಿನಲ್ಲಿ ನಾಗರಾಜ್ ಕೋಟೆಯವರ ಮಾರ್ಗದರ್ಶನದಲ್ಲಿ “ಬಣ್ಣ” ಸಂಸ್ಥೆಯ ಜೊತೆಯಲ್ಲಿ ‘ಜೋಗಿಯ ರಾಣಿ’ ಎಂಬ ನಾಟಕದಲ್ಲಿ ಬಣ್ಣ ಹಚ್ಚಿ ತನ್ನ ಅಭಿನಯದ ಯಾತ್ರೆಗೆ ಪೂರ್ಣ ಕುಂಭ ಸ್ವಾಗತವನ್ನು ಕೋರಿದರು.

ಅಗ್ನಿ ಸಾಕ್ಷಿ ಖ್ಯಾತಿಯ ರಾಜೇಶ್ ಧ್ರುವ ನೇತೃತ್ವದಲ್ಲಿ “ಆಮಂತ್ರಣ”ವೆಂಬ ಕಿರು ಚಿತ್ರದಲ್ಲಿ ಮೊದಲನೆಯ ಬಾರಿಗೆ ಅಭಿನಯಿಸಿದರು.

ಸ್ಟಾರ್ ಸುವರ್ಣದಲ್ಲಿ ಪ್ರಸಾರವಾದ ಗೀತಾಂಜಲಿ ಧಾರಾವಾಹಿಯಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ಸಿಲ್ಲಿ ಲಲ್ಲಿ ಮತ್ತು ಶಾಂತಮ್ ಪಾಪಂ ಧಾರಾವಾಹಿಗಳಲ್ಲಿ ನಟಿಸಿದ ಹೆಗ್ಗಳಿಕೆ ರವಿ ಅವರದು.ಹಾಗೆಯೇ ಜೀ ಕನ್ನಡದಲ್ಲಿ ಪ್ರಸಾರವಾದ “ಬ್ರಹ್ಮ ಗಂಟು” ಧಾರಾವಾಹಿಯಲ್ಲಿ ಕೂಡ ನಟಿಸಿದ್ದಾರೆ.
‘ಗರ್ನಲ್ ‘ ಎಂಬ ಕಿರು ಚಿತ್ರದಲ್ಲಿ ನಾಯಕನಾಗಿ ನಟಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾದ ರವಿಯವರು,ಕಲರ್ಸ್ ಕನ್ನಡದಲ್ಲಿ “ಮಂಗಳ ಗೌರಿ ಮದುವೆ”ಧಾರಾವಾಹಿಯಲ್ಲಿ ವಿಭಿನ್ನ ಪಾತ್ರದಲ್ಲಿ ಬಣ್ಣ ಹಚ್ಚಿದ ಹಿರಿಮೆ ಇವರದು.

ರಾಜು ಕನ್ನಡ ಮೀಡಿಯಂ ಚಲನಚಿತ್ರದಲ್ಲಿ ನಟನೆ ಹಾಗೂ ಬಿಡುಗಡೆಗೆ ಸಿದ್ಧವಾದ ಥಗ್ ಆಫ್ ರಾಮಗಢ ಎಂಬ ಚಿತ್ರದಲ್ಲೂ ಕೂಡ ಅಭಿನಯಿಸಿದ್ದಾರೆ.
“ತದನಂತರ” ಎಂಬ ರಾಜೇಶ್ ಧ್ರುವ ನಿರ್ದೇಶನದ ಚಿತ್ರದಲ್ಲಿ ಅಭಿನಯದ ಜೊತೆಗೆ ಹಾಗೆಯೇ ಮನುರವರ ನಿರ್ದೇಶನದ ಹೊಸ ಚಿತ್ರದಲ್ಲಿ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ.

ಸುಶಾಂತ್ ಶೆಟ್ಟಿ ನಿರ್ದೇಶನದ ಮಗದೊಂದು ಕಿರು ಚಿತ್ರ ಬಿಡುಗಡೆಯ ಹಂತಕ್ಕೆ ಬಂದು ನಿಂತಿದೆ.

ಪ್ರವೃತ್ತಿಯಲ್ಲಿ ಚಿತ್ರ ಕಲಾವಿದ ಆಗಿರುವ ರವಿಯವರು ತನ್ನ ಕುಂಚದಲ್ಲಿ ಹಲವಾರು ಪೆನ್ಸಿಲ್ ಚಿತ್ರ ಮತ್ತು ವಾಟರ್ ಕಲರ್ ಪೈಂಟಿಂಗ್ ನ್ನು ಮಾಡಿ ಅನೇಕ ಗಣ್ಯರನ್ನು ಮೂಕ ವಿಸ್ಮಿತನನ್ನಾಗಿ ಮಾಡಿದ ಇವರು,ಕನ್ನಡ ಮೇರು ನಟರಾದ ಶಿವರಾಜ್ ಕುಮಾರ್,ಕೇಂದ್ರ ಸಚಿವ ಅನುರಾಗ್ ಠಾಕೂರ್,ಪುನೀತ್ ರಾಜ್ ಕುಮಾರ್,ವಿಜಯೇಂದ್ರ ಯಡಿಯೂರಪ್ಪ,ರಾಜೇಶ್ ನಾಯ್ಕ್,ಉಪೇಂದ್ರ ಮತ್ತು ಸಾಲು ಮರದ ತಿಮ್ಮಕ್ಕರವರ ಮರು ಚಿತ್ರವನ್ನು ಬಿಡಿಸಿ ಅವರಿಂದಲೂ ಸೈ ಎನಿಸಿಕೊಂಡಿದ್ದಾರೆ.ಈಗಾಗಲೇ ನೂರಕ್ಕಿಂತ ಹೆಚ್ಚಿನ ಚಿತ್ರವನ್ನು ಬಿಡಿಸಿ,ವಿಭಿನ್ನ ಕಲೆಯಿಂದ ಎಲ್ಲರಿಂದ ಪ್ರಶಂಸೆಗೆ ಒಳಗಾದ ರವಿಯವರು,ಬೆಂಗಳೂರಿನ ಕೆಂಗೇರಿಯಲ್ಲಿ “ಸಾಲ್ಯಾನ್ ಗ್ಯಾಲರಿ” ಎಂಬ ಟ್ಯಾಟೂ ಸಂಸ್ಥೆಯನ್ನು ಹೊಂದಿದ್ದಾರೆ.

ಬಣ್ಣದ ಜಗತ್ತಿನಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ ರವಿಯವರು,ತನ್ನ ಕುಂಚದಲ್ಲಿ ವಿಭಿನ್ನ ಶೈಲಿಯ ಮರು ಚಿತ್ರಗಳಿಗೆ ಜೀವ ತುಂಬಿ ಜೀವ ಇರುವಂತೆ ಬಿತ್ತಿಸಿದ ಕಲಾವಿದ ಇವರು.

ರವಿಯವರ ಅಣ್ಣ ಜಯಂತ್ ಸಾಲ್ಯಾನ್ ಕೂಡ ವಿಶಿಷ್ಠ ಶೈಲಿಯ ರಂಗೋಲಿ ಕಲಾವಿದರು ಹೌದು..!
ಸಾಧನೆಯ ಹಿಂದಿನ ಕಠಿಣ ದಾರಿಯೂ ಕೂಡ ಸಾಧೆನೆಯೇ ಅಲ್ಲವೇ..!?
ಇನ್ನಷ್ಟು ವೇದಿಕೆಗಳು ಮತ್ತು ಅವಕಾಶಗಳು ರವಿಯವರಿಗೆ ಸಾಗಿ ಬರಲಿ ಎಂಬುವುದೇ ನಮ್ಮ ಆಶಯ..

ಬರಹ : ವಿಜೇತ್ ಪೂಜಾರಿ ಶಿಬಾಜೆ.


Related Posts

ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ


Share        ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ


Read More »

ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ ಕೋಟ್ಯಾನ್‌ಗೆ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ


Share        ವಿಕ ಸುದ್ದಿಲೋಕ ಮಂಗಳೂರು ಸೌಹಾರ್ದತೆ ಬಿಂಬಿಸುವ ವರದಿಗೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ‘ಬ್ಯಾಂಡ್ ಮಂಗಳೂರು’ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ


Read More »

ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಆಯ್ಕೆ


Share        ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದ ಬಿಂಬಿಸುವ ವರದಿಗೆ ನೀಡಲಾಗುವ “ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿಗೆ ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯಕೋಟ್ಯಾನ್ ಪಡು  ಆಯ್ಕೆಯಾಗಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ 2024 ಅಕ್ಟೋಬರ್


Read More »

ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್( ರಿ) ಇದರ ನೂತನ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ ಆಯ್ಕೆ


Share        ಶ್ರೀ ಕ್ಷೇತ್ರ ಗೆಜ್ಜೆಗಿರಿಯ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ  ಚಾರಿಟೇಬಲ್ ಟ್ರಸ್ಟ್(ರಿ) ಇದರ ನೂತನ ಅಧ್ಯಕ್ಷರಾಗಿ ಬಿರ್ವ ಸೆಂಟರ್ ಇದರ ಮಾಲಕರಾದ  ಕೆ ಸಂಜೀವ ಪೂಜಾರಿ ಇವರನ್ನು ಕಂಕನಾಡಿ ಬ್ರಹ್ಮ


Read More »

8ನೇ ವಯಸ್ಸಿನಲ್ಲಿ ಕಪೋತಾಸನದ ಭಂಗಿಯಲ್ಲಿ ವಿಶ್ವ ದಾಖಲೆ ಮಾಡಿದ ಬಾಲಕಿ ಕುಮಾರಿ ಶರಣ್ಯ ಶರತ್!


Share        ಮಂಗಳೂರು, ಜೂ. 20 ಪನ್ನೀರಿನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಶರಣ್ಯ ಶರತ್ ಅವರು ತನ್ನ ಎಂಟನೆಯ ವಯಸ್ಸಿನಲ್ಲಿ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್


Read More »

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾಗಿ ಎಚ್.ಎಸ್.ಜಯರಾಜ್ ಆಯ್ಕೆ


Share        ಮಂಗಳೂರು: ಬ್ರಹ್ಮಶ್ರೀ ನಾರಾಯಣಗುರುಗಳು ಪ್ರತಿಷ್ಠಾಪಿಸಿದ ಕರ್ನಾಟಕದ ಏಕೈಕ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಆಡಳಿತ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ಜಂಟಿ ಸಭೆ ಕೇಂದ್ರದ ಮಾಜಿ ಸಚಿವ


Read More »