TOP STORIES:

ಕೋಗಿಲೆ ಕಂಠದಿಂದ ಜನಮನ ಸೆಳೆದ ತುಳುನಾಡಿನ ಚಲನ ಚಿತ್ರ ಹಿನ್ನಲೆ ಗಾಯಕಿ ವಿದ್ಯಾ ಸುವರ್ಣ


ಸಂಗೀತವೆಂದರೆ ಈ ಲೋಕದಲ್ಲಿ ಯಾರಿಗೆ‌ ತಾನೆ ಇಷ್ಟ ಇಲ್ಲ? ಮಾನವನ ಅಂತರಾಳದ ತುಡಿತಕ್ಕೆ ಸಂಗೀತವು ಬಹಳ ಹತ್ತಿರ. ಎಂತಹದನ್ನೂ ಕರಗಿಸುವ ಶಕ್ತಿ ಸಂಗೀತಕ್ಕಿರುತ್ತದೆ.ಇನ್ನು ಸಂಗೀತ ಕ್ಷೇತ್ರದಲ್ಲಿ ಮುಖ್ಯ ಆಕರ್ಶಣೆಯೆ ಹಾಡುಗಾರ.ಹಾಡುಗಾರನ ಸ್ವರ,ಜ್ಞಾನ, ಆಲಾಪ,ಸಪ್ತಸದವರ ರಾಗಗಳ ಮೂಲಕ ಪ್ರೇಕ್ಷಕರ ಮುಂದೆ ಹೇಗೆ ಪ್ರಸ್ತುತ ಪಡಿಸುತ್ತಾರೋ ಅದರ ಮೇಲೆ ವೇದಿಕೆಯ ಇಡೀ ಪ್ರದರ್ಶನವು ಅವಲಂಬಿಸಿರುತ್ತದೆ. ಗಾಯಕನ ಈ ಅದ್ಭುತ ಕಲೆಯನ್ನು ಹೊಂದಿರುವ ಹೀಗೊಂದು ಪ್ರತಿಭೆ ತನ್ನ ಕೋಗಿಲೆ ಕಂಠದಿಂದ ಜನಮನ ಸೆಳೆದು ತುಳುನಾಡಿನ ಚಲನ ಚಿತ್ರ ಹಿನ್ನಲೆ ಗಾಯಕಿ ವಿದ್ಯಾ ಸುವರ್ಣ.

ವಿದ್ಯಾ ಸುವರ್ಣ ಇವರು ದಿ.ನೋಣಯ್ಯ ಪೂಜಾರಿ ಹಾಗೂ ಯಮುನಾ ಪೂಜಾರಿಯವರ ಪುತ್ರಿಯಾಗಿ 03-08-1993 ರಂದು ಮಂಗಳೂರಿನಲ್ಲಿ ಜನಿಸಿದರು.ಬಾಲ್ಯದಲ್ಲೇ ಸಂಗೀತದ ಮೇಲೆ ಇವರು ಅಪಾರ ಆಸಕ್ತಿ ಹೊಂದಿದ್ದರು.ಈ ಸಂಗೀತ ಆಸಕ್ತಿಯಿಂದ ಶಾಲೆಯಲ್ಲಿಯೂ ಹಲವಾರು ಸ್ಪರ್ಧೆಯಲ್ಲಿ ಭಾಗವಹಿಸಿ ಸಂಗೀತದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು.ತನ್ನ ಈ ಪ್ರತಿಭೆಯಿಂದ ಸಣ್ಣ ವಯಸ್ಸಿನಲ್ಲೇ ಎಲ್ಲರ ಮೆಚ್ಚುಗೆಯನ್ನು ಪಡೆದಿದ್ದರು.

ಒಬ್ಬ ವ್ಯಕ್ತಿಯ ಕವಲೊಡೆಯುವ ಪ್ರತಿಭೆಗೆ ಪ್ರೋತ್ಸಾಹ ನೀಡುವ ಕೈಗಳ ಅಗತ್ಯವು ಇದೆ.ವಿದ್ಯಾ ಸುವರ್ಣ ಇವರಿಗೆ ತನ್ನ ಮನೆಯವರಿಂದಲೆ ಮೊದಲ ಪ್ರೋತ್ಸಾಹ ದೊರಕಿದೆ.ಹಾಗೆಯೆ ವಿ.ಜೆ.ಹಿಸ್ರಾರ್ ತಲ್ಲಣಿ ಇವರ ಸಂಪೂರ್ಣ ಬೆಂಬಲ ಹಾಗೂ ಪ್ರೋತ್ಸಾಹವು ಸಂಗೀತ ಕ್ಷೇತ್ರದಲ್ಲಿ ಮುಂದುವರೆಯಲು ಧೈರ್ಯ ತುಂಬಿದೆ.

ಮಲ್ಲೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಸಂತ‌ ಆಂಥೋನಿ ಫೆ ಇಲ್ಲಿ ತಮ್ಮ ಪ್ರೌಢ ಶಿಕ್ಷಣ ಮುಗಿಸಿದರು ಇವರಿಗೆ ಸಂಗೀತದಲ್ಲೇ ಹೆಚ್ಚು ಆಸಕ್ತಿ ಇದ್ದ ಕಾರಣ ಕಲಿಕೆಯನ್ನು ಮುಂದುವರಿಸದೆ ಕಲಾ ಕ್ಷೇತ್ರದಲ್ಲಿ ಮುಂದುವರೆದರು.

ಹೀಗೆ ಸಂಗೀತದ ಪಯಣದಲ್ಲಿ ಸಿಕ್ಕಿದ ವೇದಿಕೆಗಳನ್ನೆಲ್ಲ ತಮ್ಮದಾಗಿಸಿಕೊಂಡು ಇವರು ಅನೇಕ ಭಕ್ತಿಗೀತೆ,ನಾಟಕಗಳಲ್ಲಿ ಧ್ವನಿ ನೀಡಿರುವರು.ಒಮಾನ್ ತುಳುವೆರ್ ಅರ್ಪಿಸಿದ ಗಾನಲೀಲೋತ್ಸವ, ಗೆಜ್ಜೆಗಿರಿಯಲ್ಲಿ ನಡೆದ ಬ್ರಹ್ಮಕಲಶೋತ್ಸವ, ಭಂಡಾರಿ ಬಿಲ್ಡರ್ಸ್ ಇವರ ಸಾರಥ್ಯದಲ್ಲಿ ನಡೆದ ಸರ್ಗಮ್ ಸಂಗೀತೋತ್ಸವ,ಒಡಿಯೂರು ರಥೋತ್ಸವ,ಗಂಗೊಳ್ಳಿಯಲ್ಲಿ ನಡೆದ ಸಂಗೀತ ಗಾನ ಸಂಭ್ರಮ,ಕುಮಟಾ ನುಡಿ ಹಬ್ಬ,ಕೋಟ ಅಮೃತೋತ್ಸವ,ವಿಶ್ವ ತುಳು ಸಮ್ಮೇಳನ,ವಿಟ್ಲ ಸ್ಟಾರ್ ನೈಟ್,ಉಡುಪಿ ಪರ್ಯಾಯ,ನರೇಂದ್ರ ಮೋದಿಯವರ ಆಗಮನ ದಿನದಂದು ಉಡುಪಿ ಮತ್ತು ಮಂಗಳೂರಿನಲ್ಲಿ ನಡೆದ ಆರ್ಯಭಟ ಪುರಸ್ಕೃತ ಜಗದೀಶ್ ಆಚಾರ್ಯ ಪುತ್ತೂರು ಇವರ ತಂಡದೊಂದಿಗೆ,ಮಾತ್ರವಲ್ಲದೆ ೧,೫೦೦ ಕ್ಕೂ ಹೆಚ್ಚು ವೇದಿಕೆಯಲ್ಲಿ‌ ಹಾಡಿರುವ ಮಂಗಳೂರಿನ ಹೆಮ್ಮೆಯ ಅಪ್ರತಿಮ ಕಲಾವಿದೆ ಇವರು.

ಇವರ ಅದ್ಭುತ ಸಿರಿಕಂಠವನ್ನು ಗುರುತಿಸಿ ಚಲನಚಿತ್ರದಲ್ಲಿಯೂ ಹಾಡು ಹಾಡಲು ಗಣೇಶ್ ಎನ್ನುವವರು ಪ್ರೋತ್ಸಾಹಿಸಿ ಇಂದು ಇವರು ಕುದುಕನ ಮದಿಮೆ, ಕಂಬಳಬೆಟ್ಟು ಭಟ್ರೇನ ಮಗಳು, ದಾಗಲ್ಬಾಜಿಳು, ಜೀವನಯಜ್ಞ,
ಗಂಧದಕುಡಿ ಮುಂತಾದ ಚಿತ್ರಗಳಲ್ಲಿ ಹಾಡಿರುತ್ತಾರೆ. ಹಾಗೆ ಮುಂದೆ ಬರುವಂತಹ ಕನ್ನಡ ಚಿತ್ರ,ನಿಶಾಚರ ಮತ್ತು ಪಿಸುಮಾತು ಎನ್ನುವ ಎರಡು ಚಿತ್ರಕ್ಕೆ ಧ್ವನಿ ನೀಡಿರುತ್ತಾರೆ.

ಸಾಧನೆಯ ಗರಿ ಏರುತ್ತಲೆ ಜನರ ಅಭಿಮಾನಕ್ಕೆ ಪಾತ್ರರಾಗಿ ಇವರು ಉತ್ತರ ಕನ್ನಡ ಕ್ಷತ್ರಿಯ ಸಮಾಜ ಬೆಂಗಳೂರು ವತಿಯಿಂದ ಸನ್ಮಾನ,ಓಮಾನ್ ತುಳುವೆರ್ ವತಿಯಿಂದ ಸನ್ಮಾನ,ಜೆ.ಸಿ.ಐ ವತಿಯಿಂದ ಗೌರವ ಸ್ಮರಣಿಕೆ,ಶ್ರೀ ಲಕ್ಷ್ಮೀ ಹೋಮ್ಸ ಆ್ಯಂಡ್ ಇನ್ಫ್ರಾಸ್ಟ್ರಕ್ಚರ್ ಉಡುಪಿ ವತಿಯಿಂದ ಗೌರವ ಸ್ಮರಣಿಕೆ,ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಕೇರಳ ಗಡಿನಾಡ ಘಟಕ ವತಿಯಿಂದ ಗೌರವ ಸ್ಮರಣಿಕೆ,ಭಾವಲಿಪಿ ಪ್ರಕಾಶನ ಸಂಸ್ಥೆಯಿಂದ ಸ್ಮರಣಿಕೆ,ಶ್ರೀ ಕ್ಷೇತ್ರ ಮಹಾದೇವಿ ಮಂದಿರ ಮೂಡುಶೆಡ್ಡೆ ವತಿಯಿಂದ ಸನ್ಮಾನ ಸ್ಮರಣಿಕೆ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಕಲ ಚೇತನರ ಹಾಗೂ ಹಿರಿಯ ನಾಗರೀಕ ಸಬಲೀಕರಣ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಇವರ ವಿಶ್ವ ವಿಕಲ ದಿನಾಚರಣೆಯ ಪ್ರಯುಕ್ತ ಗೌರವಾರ್ಥ ಸ್ಮರಣಿಕೆ,ಅಮ್ಮಾ ಗ್ರೂಪ್ ಕಮ್ಮಾಜೆ ಒಡಿಯೂರು ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಗಾನ-೨೦೨೦ ಸಂಗೀತ ರಸಸಂಜೆ ಪ್ರಯುಕ್ತ ಸ್ಮರಣಿಕೆ,ಶಿವಂ ಡಾನ್ಸ್ ಅಕಾಡೆಮಿ ವಿಟ್ಲ ಸಾಂಸ್ಕೃತಿಕ ವೈಭವ-೨೦೨೦ ಸಂಭ್ರಮದಿ ಗೌರವ ಸ್ಮರಣಿಕೆ ಹೀಗೆ ಹತ್ತು ಹಲವಾರು ಪ್ರಶಸ್ತಿ,ಪುರಸ್ಕಾರಗಳಿಗೆ ಭಾಜನರಾಗಿರುವ ತಮಗೆ ಮುಂದೆ ಹೆಚ್ಚಿನ ಬಹುಮಾನಗಳು ನಿಮ್ಮ ಪಾಲಿಗೆ ಯಶಸ್ವಿಯಾಗಿ ದೊರಕಲಿ.

ಬಾಲಿವುಡ್ ನ ಪ್ರಖ್ಯಾತ ಗಾಯಕಿಯಾದ ಶ್ರೇಯಾ ಘೋಷಾಲ್ ರವರ ಸ್ವರ ಶೈಲಿಗೆ ಹೊಂದುವ ಇವರ ಕಂಠಕ್ಕೆ ತುಳುನಾಡಿನ ಶ್ರೇಯಾ ಘೋಷಾಲ್ ಎಂದೇ ಪ್ರಖ್ಯಾತರಾಗಿರುವರು.

ಹೀಗೆ ಸಂಗೀತ ಕ್ಷೇತ್ರಕ್ಕೆ ತನ್ನ ಅಧ್ಬುತ ಸ್ವರ ಮಾಧುರ್ಯದಿಂದ ಸಾಧನೆಯ ಹಾದಿಯಲ್ಲಿ ಸಾಗುವ ಇವರು ಇನ್ನು ಹದಿ ಹರೆಯ.ನಿಮ್ಮ ಸಾಧನೆಯ ಹಾದಿಯಲ್ಲಿ ಇನ್ನೂ ಹೆಚ್ಚು ಜನ ಮನ ತಲುಪಿ ಮುಂದೊಂದು ದಿನ ರಾಷ್ಟ್ರೀಯ ಹಿನ್ನಲೆ ಗಾಯಕರ ಸಾಲಿನಲ್ಲಿ ನಿಮ್ಮ ಹೆಸರು ಮಿಂಚಲಿ.

ತೃಪ್ತಿ.ಜಿ.ಕುಂಪಲ.


Related Posts

ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ


Share        ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ


Read More »

ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ ಕೋಟ್ಯಾನ್‌ಗೆ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ


Share        ವಿಕ ಸುದ್ದಿಲೋಕ ಮಂಗಳೂರು ಸೌಹಾರ್ದತೆ ಬಿಂಬಿಸುವ ವರದಿಗೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ‘ಬ್ಯಾಂಡ್ ಮಂಗಳೂರು’ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ


Read More »

ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಆಯ್ಕೆ


Share        ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದ ಬಿಂಬಿಸುವ ವರದಿಗೆ ನೀಡಲಾಗುವ “ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿಗೆ ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯಕೋಟ್ಯಾನ್ ಪಡು  ಆಯ್ಕೆಯಾಗಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ 2024 ಅಕ್ಟೋಬರ್


Read More »

ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್( ರಿ) ಇದರ ನೂತನ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ ಆಯ್ಕೆ


Share        ಶ್ರೀ ಕ್ಷೇತ್ರ ಗೆಜ್ಜೆಗಿರಿಯ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ  ಚಾರಿಟೇಬಲ್ ಟ್ರಸ್ಟ್(ರಿ) ಇದರ ನೂತನ ಅಧ್ಯಕ್ಷರಾಗಿ ಬಿರ್ವ ಸೆಂಟರ್ ಇದರ ಮಾಲಕರಾದ  ಕೆ ಸಂಜೀವ ಪೂಜಾರಿ ಇವರನ್ನು ಕಂಕನಾಡಿ ಬ್ರಹ್ಮ


Read More »

8ನೇ ವಯಸ್ಸಿನಲ್ಲಿ ಕಪೋತಾಸನದ ಭಂಗಿಯಲ್ಲಿ ವಿಶ್ವ ದಾಖಲೆ ಮಾಡಿದ ಬಾಲಕಿ ಕುಮಾರಿ ಶರಣ್ಯ ಶರತ್!


Share        ಮಂಗಳೂರು, ಜೂ. 20 ಪನ್ನೀರಿನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಶರಣ್ಯ ಶರತ್ ಅವರು ತನ್ನ ಎಂಟನೆಯ ವಯಸ್ಸಿನಲ್ಲಿ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್


Read More »

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾಗಿ ಎಚ್.ಎಸ್.ಜಯರಾಜ್ ಆಯ್ಕೆ


Share        ಮಂಗಳೂರು: ಬ್ರಹ್ಮಶ್ರೀ ನಾರಾಯಣಗುರುಗಳು ಪ್ರತಿಷ್ಠಾಪಿಸಿದ ಕರ್ನಾಟಕದ ಏಕೈಕ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಆಡಳಿತ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ಜಂಟಿ ಸಭೆ ಕೇಂದ್ರದ ಮಾಜಿ ಸಚಿವ


Read More »