TOP STORIES:

FOLLOW US

ಕೋಗಿಲೆ ಕಂಠದಿಂದ ಜನಮನ ಸೆಳೆದ ತುಳುನಾಡಿನ ಚಲನ ಚಿತ್ರ ಹಿನ್ನಲೆ ಗಾಯಕಿ ವಿದ್ಯಾ ಸುವರ್ಣ


ಸಂಗೀತವೆಂದರೆ ಈ ಲೋಕದಲ್ಲಿ ಯಾರಿಗೆ‌ ತಾನೆ ಇಷ್ಟ ಇಲ್ಲ? ಮಾನವನ ಅಂತರಾಳದ ತುಡಿತಕ್ಕೆ ಸಂಗೀತವು ಬಹಳ ಹತ್ತಿರ. ಎಂತಹದನ್ನೂ ಕರಗಿಸುವ ಶಕ್ತಿ ಸಂಗೀತಕ್ಕಿರುತ್ತದೆ.ಇನ್ನು ಸಂಗೀತ ಕ್ಷೇತ್ರದಲ್ಲಿ ಮುಖ್ಯ ಆಕರ್ಶಣೆಯೆ ಹಾಡುಗಾರ.ಹಾಡುಗಾರನ ಸ್ವರ,ಜ್ಞಾನ, ಆಲಾಪ,ಸಪ್ತಸದವರ ರಾಗಗಳ ಮೂಲಕ ಪ್ರೇಕ್ಷಕರ ಮುಂದೆ ಹೇಗೆ ಪ್ರಸ್ತುತ ಪಡಿಸುತ್ತಾರೋ ಅದರ ಮೇಲೆ ವೇದಿಕೆಯ ಇಡೀ ಪ್ರದರ್ಶನವು ಅವಲಂಬಿಸಿರುತ್ತದೆ. ಗಾಯಕನ ಈ ಅದ್ಭುತ ಕಲೆಯನ್ನು ಹೊಂದಿರುವ ಹೀಗೊಂದು ಪ್ರತಿಭೆ ತನ್ನ ಕೋಗಿಲೆ ಕಂಠದಿಂದ ಜನಮನ ಸೆಳೆದು ತುಳುನಾಡಿನ ಚಲನ ಚಿತ್ರ ಹಿನ್ನಲೆ ಗಾಯಕಿ ವಿದ್ಯಾ ಸುವರ್ಣ.

ವಿದ್ಯಾ ಸುವರ್ಣ ಇವರು ದಿ.ನೋಣಯ್ಯ ಪೂಜಾರಿ ಹಾಗೂ ಯಮುನಾ ಪೂಜಾರಿಯವರ ಪುತ್ರಿಯಾಗಿ 03-08-1993 ರಂದು ಮಂಗಳೂರಿನಲ್ಲಿ ಜನಿಸಿದರು.ಬಾಲ್ಯದಲ್ಲೇ ಸಂಗೀತದ ಮೇಲೆ ಇವರು ಅಪಾರ ಆಸಕ್ತಿ ಹೊಂದಿದ್ದರು.ಈ ಸಂಗೀತ ಆಸಕ್ತಿಯಿಂದ ಶಾಲೆಯಲ್ಲಿಯೂ ಹಲವಾರು ಸ್ಪರ್ಧೆಯಲ್ಲಿ ಭಾಗವಹಿಸಿ ಸಂಗೀತದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು.ತನ್ನ ಈ ಪ್ರತಿಭೆಯಿಂದ ಸಣ್ಣ ವಯಸ್ಸಿನಲ್ಲೇ ಎಲ್ಲರ ಮೆಚ್ಚುಗೆಯನ್ನು ಪಡೆದಿದ್ದರು.

ಒಬ್ಬ ವ್ಯಕ್ತಿಯ ಕವಲೊಡೆಯುವ ಪ್ರತಿಭೆಗೆ ಪ್ರೋತ್ಸಾಹ ನೀಡುವ ಕೈಗಳ ಅಗತ್ಯವು ಇದೆ.ವಿದ್ಯಾ ಸುವರ್ಣ ಇವರಿಗೆ ತನ್ನ ಮನೆಯವರಿಂದಲೆ ಮೊದಲ ಪ್ರೋತ್ಸಾಹ ದೊರಕಿದೆ.ಹಾಗೆಯೆ ವಿ.ಜೆ.ಹಿಸ್ರಾರ್ ತಲ್ಲಣಿ ಇವರ ಸಂಪೂರ್ಣ ಬೆಂಬಲ ಹಾಗೂ ಪ್ರೋತ್ಸಾಹವು ಸಂಗೀತ ಕ್ಷೇತ್ರದಲ್ಲಿ ಮುಂದುವರೆಯಲು ಧೈರ್ಯ ತುಂಬಿದೆ.

ಮಲ್ಲೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಸಂತ‌ ಆಂಥೋನಿ ಫೆ ಇಲ್ಲಿ ತಮ್ಮ ಪ್ರೌಢ ಶಿಕ್ಷಣ ಮುಗಿಸಿದರು ಇವರಿಗೆ ಸಂಗೀತದಲ್ಲೇ ಹೆಚ್ಚು ಆಸಕ್ತಿ ಇದ್ದ ಕಾರಣ ಕಲಿಕೆಯನ್ನು ಮುಂದುವರಿಸದೆ ಕಲಾ ಕ್ಷೇತ್ರದಲ್ಲಿ ಮುಂದುವರೆದರು.

ಹೀಗೆ ಸಂಗೀತದ ಪಯಣದಲ್ಲಿ ಸಿಕ್ಕಿದ ವೇದಿಕೆಗಳನ್ನೆಲ್ಲ ತಮ್ಮದಾಗಿಸಿಕೊಂಡು ಇವರು ಅನೇಕ ಭಕ್ತಿಗೀತೆ,ನಾಟಕಗಳಲ್ಲಿ ಧ್ವನಿ ನೀಡಿರುವರು.ಒಮಾನ್ ತುಳುವೆರ್ ಅರ್ಪಿಸಿದ ಗಾನಲೀಲೋತ್ಸವ, ಗೆಜ್ಜೆಗಿರಿಯಲ್ಲಿ ನಡೆದ ಬ್ರಹ್ಮಕಲಶೋತ್ಸವ, ಭಂಡಾರಿ ಬಿಲ್ಡರ್ಸ್ ಇವರ ಸಾರಥ್ಯದಲ್ಲಿ ನಡೆದ ಸರ್ಗಮ್ ಸಂಗೀತೋತ್ಸವ,ಒಡಿಯೂರು ರಥೋತ್ಸವ,ಗಂಗೊಳ್ಳಿಯಲ್ಲಿ ನಡೆದ ಸಂಗೀತ ಗಾನ ಸಂಭ್ರಮ,ಕುಮಟಾ ನುಡಿ ಹಬ್ಬ,ಕೋಟ ಅಮೃತೋತ್ಸವ,ವಿಶ್ವ ತುಳು ಸಮ್ಮೇಳನ,ವಿಟ್ಲ ಸ್ಟಾರ್ ನೈಟ್,ಉಡುಪಿ ಪರ್ಯಾಯ,ನರೇಂದ್ರ ಮೋದಿಯವರ ಆಗಮನ ದಿನದಂದು ಉಡುಪಿ ಮತ್ತು ಮಂಗಳೂರಿನಲ್ಲಿ ನಡೆದ ಆರ್ಯಭಟ ಪುರಸ್ಕೃತ ಜಗದೀಶ್ ಆಚಾರ್ಯ ಪುತ್ತೂರು ಇವರ ತಂಡದೊಂದಿಗೆ,ಮಾತ್ರವಲ್ಲದೆ ೧,೫೦೦ ಕ್ಕೂ ಹೆಚ್ಚು ವೇದಿಕೆಯಲ್ಲಿ‌ ಹಾಡಿರುವ ಮಂಗಳೂರಿನ ಹೆಮ್ಮೆಯ ಅಪ್ರತಿಮ ಕಲಾವಿದೆ ಇವರು.

ಇವರ ಅದ್ಭುತ ಸಿರಿಕಂಠವನ್ನು ಗುರುತಿಸಿ ಚಲನಚಿತ್ರದಲ್ಲಿಯೂ ಹಾಡು ಹಾಡಲು ಗಣೇಶ್ ಎನ್ನುವವರು ಪ್ರೋತ್ಸಾಹಿಸಿ ಇಂದು ಇವರು ಕುದುಕನ ಮದಿಮೆ, ಕಂಬಳಬೆಟ್ಟು ಭಟ್ರೇನ ಮಗಳು, ದಾಗಲ್ಬಾಜಿಳು, ಜೀವನಯಜ್ಞ,
ಗಂಧದಕುಡಿ ಮುಂತಾದ ಚಿತ್ರಗಳಲ್ಲಿ ಹಾಡಿರುತ್ತಾರೆ. ಹಾಗೆ ಮುಂದೆ ಬರುವಂತಹ ಕನ್ನಡ ಚಿತ್ರ,ನಿಶಾಚರ ಮತ್ತು ಪಿಸುಮಾತು ಎನ್ನುವ ಎರಡು ಚಿತ್ರಕ್ಕೆ ಧ್ವನಿ ನೀಡಿರುತ್ತಾರೆ.

ಸಾಧನೆಯ ಗರಿ ಏರುತ್ತಲೆ ಜನರ ಅಭಿಮಾನಕ್ಕೆ ಪಾತ್ರರಾಗಿ ಇವರು ಉತ್ತರ ಕನ್ನಡ ಕ್ಷತ್ರಿಯ ಸಮಾಜ ಬೆಂಗಳೂರು ವತಿಯಿಂದ ಸನ್ಮಾನ,ಓಮಾನ್ ತುಳುವೆರ್ ವತಿಯಿಂದ ಸನ್ಮಾನ,ಜೆ.ಸಿ.ಐ ವತಿಯಿಂದ ಗೌರವ ಸ್ಮರಣಿಕೆ,ಶ್ರೀ ಲಕ್ಷ್ಮೀ ಹೋಮ್ಸ ಆ್ಯಂಡ್ ಇನ್ಫ್ರಾಸ್ಟ್ರಕ್ಚರ್ ಉಡುಪಿ ವತಿಯಿಂದ ಗೌರವ ಸ್ಮರಣಿಕೆ,ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಕೇರಳ ಗಡಿನಾಡ ಘಟಕ ವತಿಯಿಂದ ಗೌರವ ಸ್ಮರಣಿಕೆ,ಭಾವಲಿಪಿ ಪ್ರಕಾಶನ ಸಂಸ್ಥೆಯಿಂದ ಸ್ಮರಣಿಕೆ,ಶ್ರೀ ಕ್ಷೇತ್ರ ಮಹಾದೇವಿ ಮಂದಿರ ಮೂಡುಶೆಡ್ಡೆ ವತಿಯಿಂದ ಸನ್ಮಾನ ಸ್ಮರಣಿಕೆ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಕಲ ಚೇತನರ ಹಾಗೂ ಹಿರಿಯ ನಾಗರೀಕ ಸಬಲೀಕರಣ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಇವರ ವಿಶ್ವ ವಿಕಲ ದಿನಾಚರಣೆಯ ಪ್ರಯುಕ್ತ ಗೌರವಾರ್ಥ ಸ್ಮರಣಿಕೆ,ಅಮ್ಮಾ ಗ್ರೂಪ್ ಕಮ್ಮಾಜೆ ಒಡಿಯೂರು ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಗಾನ-೨೦೨೦ ಸಂಗೀತ ರಸಸಂಜೆ ಪ್ರಯುಕ್ತ ಸ್ಮರಣಿಕೆ,ಶಿವಂ ಡಾನ್ಸ್ ಅಕಾಡೆಮಿ ವಿಟ್ಲ ಸಾಂಸ್ಕೃತಿಕ ವೈಭವ-೨೦೨೦ ಸಂಭ್ರಮದಿ ಗೌರವ ಸ್ಮರಣಿಕೆ ಹೀಗೆ ಹತ್ತು ಹಲವಾರು ಪ್ರಶಸ್ತಿ,ಪುರಸ್ಕಾರಗಳಿಗೆ ಭಾಜನರಾಗಿರುವ ತಮಗೆ ಮುಂದೆ ಹೆಚ್ಚಿನ ಬಹುಮಾನಗಳು ನಿಮ್ಮ ಪಾಲಿಗೆ ಯಶಸ್ವಿಯಾಗಿ ದೊರಕಲಿ.

ಬಾಲಿವುಡ್ ನ ಪ್ರಖ್ಯಾತ ಗಾಯಕಿಯಾದ ಶ್ರೇಯಾ ಘೋಷಾಲ್ ರವರ ಸ್ವರ ಶೈಲಿಗೆ ಹೊಂದುವ ಇವರ ಕಂಠಕ್ಕೆ ತುಳುನಾಡಿನ ಶ್ರೇಯಾ ಘೋಷಾಲ್ ಎಂದೇ ಪ್ರಖ್ಯಾತರಾಗಿರುವರು.

ಹೀಗೆ ಸಂಗೀತ ಕ್ಷೇತ್ರಕ್ಕೆ ತನ್ನ ಅಧ್ಬುತ ಸ್ವರ ಮಾಧುರ್ಯದಿಂದ ಸಾಧನೆಯ ಹಾದಿಯಲ್ಲಿ ಸಾಗುವ ಇವರು ಇನ್ನು ಹದಿ ಹರೆಯ.ನಿಮ್ಮ ಸಾಧನೆಯ ಹಾದಿಯಲ್ಲಿ ಇನ್ನೂ ಹೆಚ್ಚು ಜನ ಮನ ತಲುಪಿ ಮುಂದೊಂದು ದಿನ ರಾಷ್ಟ್ರೀಯ ಹಿನ್ನಲೆ ಗಾಯಕರ ಸಾಲಿನಲ್ಲಿ ನಿಮ್ಮ ಹೆಸರು ಮಿಂಚಲಿ.

ತೃಪ್ತಿ.ಜಿ.ಕುಂಪಲ.


Share:

More Posts

Category

Send Us A Message

Related Posts

ಬಿರುವೆರ್ ಕುಡ್ಲ ಸಂಘಟನೆಯಿಂದ ಯುವವಾಹಿನಿಗೆ ಗೌರವದ ಸನ್ಮಾನ.. ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿ ಸನ್ಮಾನ ಸ್ವೀಕಾರ


Share       ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಬಿರುವೆರ್ ಕುಡ್ಲ(ರಿ) ಮಂಗಳೂರು ಸಂಘಟನಯ ದಶಮಾನೋತ್ಸವದ ಸವಿನೆನಪಿಗಾಗಿ, ರಾಜ್ಯದ ಪ್ರತಿಷ್ಠಿತ ಯುವವಾಹಿನಿ ಸಂಸ್ಥೆಯು ಕಳೆದ 36 ವರ್ಷಗಳ ಸಮಾಜಮುಖಿ ಸೇವೆಯನ್ನು ಗುರುತಿಸಿ ಗೌರವಿಸಿ ಗೌರವದ


Read More »

ದೇಯಿ ಬೈದೆತಿ- ಕೋಟಿ ಚೆನ್ನಯರ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ಎಂಬ ಪುಣ್ಯಭೂಮಿ


Share       ಗೆಜ್ಜೆಗಿರಿ ನಂದನ ಬಿತ್ತಲ್ ಎಂಬ ಹೆಸರು ಕೇಳುತ್ತಿದ್ದಂತೆ ಮೈ ರೋಮಾಂಚನಗೊಳ್ಳುತ್ತದೆ. ಕ್ಷೇತ್ರದ ಇತಿಹಾಸವನ್ನು ಕೇಳುವಾಗ ಅವಳಿ ವೀರಪುರುಷರ ಮೂಲಸ್ಥಾನ ಯಾವುದು ಎಂಬ ಪ್ರಶ್ನೆಗೂ ಉತ್ತರ ಸಿಗುತ್ತದೆ. ಅಂತಹ ಪುಣ್ಯ-ಪವಿತ್ರ ಭೂಮಿಯಲ್ಲಿ ದೇಯಿ ಬೈದೈತಿ


Read More »

” ನವ ಕರ್ನಾಟಕ ರತ್ನ ” ಪ್ರಶಸ್ತಿಗೆ ಸತೀಶ್ ಕುಮಾರ್ ಬಜಾಲ್ ಆಯ್ಕೆ


Share       ಬೆಂಗಳೂರು: ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಒಂದುಗೂಡಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಅ. 4 ಮತ್ತು 5ರಂದು ಬೆಂಗಳೂರಿನಲ್ಲಿ ಅನಿವಾಸಿ ಕನ್ನಡಿಗರ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿದ್ದು. ಅಂದು


Read More »

ಊದುಪೂಜೆಯಲ್ಲಿ ಪಿಲಿಯಾವೇಶ ಎಷ್ಟು ಸರಿ?


Share       ಇನ್ನು ಪಿಲಿಕೋಲ ನೋಡಲು ವರ್ಷಕ್ಕೊಮ್ಮೆ ಕಾಪುವಿಗೆ ಹೋಗಬೇಕಾಗಿಲ್ಲ. ಅಷ್ಟಮಿ, ಚೌತಿ, ಮಾರ್ನೆಮಿಗಳಲ್ಲಿ ನಮ್ಮೂರಿನಲ್ಲೂ ಪಿಲಿಕೋಲಗಳು ಆರಂಭವಾಗಿವೆ. ಹಿಂದೆ ಅಪೂರ್ವವಾಗಿ ಎಲ್ಲಾದರೂ ಒಂದು ಕಡೆ ಊದುಹಾಕುವಾಗ ವೇಷಸಂಕಲ್ಪಿಸಿಕೊಂಡವನಿಗೆ ಆವೇಶ ಆಗುವುದಿತ್ತು. ಹೀಗೆ ಆವೇಶವಾಗುವುದು ಶುಭಲಕ್ಷಣ


Read More »

ದುಬೈ: ದುಬೈ ಬಿಲ್ಲವಸ್ ಫ್ಯಾಮಿಲಿ ವತಿಯಿಂದ ನಡೆದ 170 ನೇ ಬ್ರಹ್ಮ ಶ್ರೀ ನಾರಾಯಣ ಗುರುಜಯಂತಿ


Share       ದುಬೈ: ಬಿಲ್ಲವಸ್ ಫ್ಯಾಮಿಲಿ ದುಬೈ ಇವರ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ 170 ನೇ ಗುರು ಜಯಂತಿಯು ದುಬೈ ನ ಗ್ಲೆಂಡಲೆ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ  ಭಾನುವಾರದಂದು ವಿಜೃಂಭಣೆಯಿಂದ ನಡೆಯಿತು.


Read More »

ಸಾಲುಮರದ ತಿಮ್ಮಕ್ಕ ಪ್ರಶಸ್ತಿ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ 2024 ಪ್ರಶಸ್ತಿಗೆ ಆಯ್ಕೆಯಾದ ಧನ್ವಿ ಪೂಜಾರಿ


Share       ಮರವಂತೆ : ಈ ಬಾರಿಯ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ 2024 ಪ್ರಶಸ್ತಿಗೆ ಮರವಂತೆಯ ಧನ್ವಿ ಪೂಜಾರಿ ಆಯ್ಕೆಯಾಗಿದ್ದಾರೆ. ಮರವಂತೆಯ ಜ್ಯೋತಿ ಚಂದ್ರಶೇಖರ ಪೂಜಾರಿ ಇವರ ಪುತ್ರಿಯಾಗಿದ್ದು ಪ್ರಸ್ತುತ ಜನತಾ


Read More »