TOP STORIES:

FOLLOW US

ಗೆಜ್ಜೆ ಗಿರಿ ಕ್ಷೇತ್ರದ ಸೇವಾ ಕಾರ್ಯಕರ್ತ ಪ್ರವೀಣ್ ನೆಟ್ಟರ್ ಅವರ ಅಂತಿಮ ನಮನ ಕಾರ್ಯದಲ್ಲಿ ಕ್ಷೇತ್ರದ ಆಡಳಿತ ಮಂಡಳಿಯ ಪಾಲ್ಗೊಂಡ ಬಗ್ಗೆ.


ಶ್ರೀ ಕ್ಷೇತ್ರಗೆಜ್ಜೆ ಗಿರಿಯ ಸೇವಕರಾಗಿ ಕ್ಷೇತ್ರದಲ್ಲಿ ಜರಗಿದ ಅಭೂತಪೂರ್ವ, ದಾಖಲೆಯ ಭಕ್ತರು ಸಂದರ್ಶಿಸಿದ್ದ ಬ್ರಹ್ಮಕಲಶೋತ್ಸವದಲ್ಲಿತನ್ನನ್ನು ತಾನು ಸಮರ್ಪಿಸಿಕೊಂಡು   ಜವಾಬ್ದಾರಿಯುತ ಕೆಲಸಗಳನ್ನು  ಅತ್ಯುತ್ತಮವಾಗಿ ತೊಡಗಿಸಿಕೊಂಡು ಸಮಾಜಮುಖಿಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದ ನಮ್ಮೆಲ್ಲರ ಆತ್ಮೀಯ ವಿ ಪ್ರವೀಣ್ ನೆಟ್ಟರ್ ರವರ ಅಗಲುವಿಕೆಯನ್ನು ನಾವು ಅರಗಿಸಿಕೊಳ್ಳಲುಸಾಧ್ಯವಿಲ್ಲ ಇಂತಹ ವ್ಯಕ್ತಿಯನ್ನು ಕಳೆದುಕೊಂಡ ನೋವು ನಮ್ಮ ಬಿಲ್ಲವ ಸಮುದಾಯದ ಯಾವೊಬ್ಬ ವ್ಯಕ್ತಿಯು ಮರೆಯಲಾಸಾಧ್ಯರಾಕ್ಷಸೀಯ ಪ್ರವೃತ್ತಿಯ ದುಷ್ಕೃತ್ಯಗಳಿಗೆ ಯಬಲಿಯಾದ ಪ್ರವೀಣ್ ನೆಟ್ಟಾರುರವರ ಅಂತಿಮ ಯಾತ್ರೆಯಲ್ಲಿ ಶ್ರೀ ಕ್ಷೇತ್ರದ  ಆಡಳಿತಸಮಿತಿಯ ಪದಾಧಿಕಾರಿಗಳು ಪ್ರಾರಂಭದಿಂದ ಕೊನೆಯವರೆಗೂ ಸಮಾಜದ ಒಂದು ಅಮೂಲ್ಯ ಮುತ್ತನ್ನು ಕಳೆದುಕೊಂಡನೋವಿನಿಂದಲೇ ಅಂತಿಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮುದಾಯದ ವಿಧಿ ವಿಧಾನದಂತೆ ದಿವಂಗತ ಪ್ರವೀಣ್ ನೆಟ್ವರ್ ಅವರಅಂತ್ಯಕ್ರಿಯೆಯನ್ನು ನೆರವೇರಿಸಿವಲ್ಲಿ ಕ್ಷೇತ್ರದ ಗೌರವಾಧ್ಯಕ್ಷರಾದ ಜಯಂತ್ ನಡುಬೈಲ್ ಸ್ಥಳದಲ್ಲೇ ಇದ್ದು ಸೂಕ್ತ ವಾದಮಾರ್ಗದರ್ಶನ ನೀಡುತಿದ್ದರು‌. ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್ ಸೇರಿದ್ದ ಐದು ಸಾವಿರ ಕ್ಕಿಂತಲೂ ಅಧಿಕ ಪ್ರವೀಣ್ಅವರ ಆಪ್ತರು, ಸಂಘಪರಿವಾರ, ಪಕ್ಷದ ಪ್ರಮುಖರು, ಜನಪ್ರತಿನಿಧಿಗಳು, ಸಂಘಟನೆಗಳ ಮುಖಂಡರು ಕಾರ್ಯಕರ್ತರು, ಕುಟುಂಬಬಳಗ,ಅವರ ಮಿತ್ರ ವೃಂದ ಎಲ್ಲರಿಗೂ ಅಂತಿಮ ನಮನ ಸಲ್ಲಿಸಲು ಅವಕಾಶ ಕಲ್ಪಿಸಲು ಉಲ್ಲಾಸ್ ಹರಸಾಹಸ ಪಡುತಿದ್ದರು‌. ನಂತರ ಅವರ ಕುಟುಂಬಕ್ಕೂ ಆರ್ಥಿಕವಾಗಿ ಸಹಕಾರವಾಗಬೇಕು, ದುರ್ದೈವ ದಿಂದ ಕುಟುಂಬದ ದುಡಿಯುವ ಕೈಗಳೆ ಇಂದುಮರೆಯಾಗಿದೆ ಎಂದು ಪ್ರವೀಣ್ ನೆಟ್ಟಾರರವರ ಧರ್ಮ ಪತ್ನಿ ನೂತನ ಪ್ರವೀಣ್  ಯವರ ಖಾತೆಯನ್ನು ಸಾಮಾಜಿಕ ಜಾಲತಾಣದಲ್ಲಿಸಹಕಾರ ಕೋರಿ  ಹರಿಬಿಟ್ಟರು ಇದರ ಪರಿಣಾಮ ಒಂದು ಉತ್ತಮ ಮೊತ್ತ  ಸಂಗ್ರಹವಾಗಿ, ದಿವಂಗತರ ಕುಟುಂಬದ ಮುಂದಿನಜೀವನದ ನಿರ್ವಹಣೆಗೆ ಸರ್ಕಾರದ ಸಹಾಯ ಹಸ್ತವನ್ನು ಚಾಚುವ ಮಾನವೀಯ ದೃಷ್ಟಿಯಿಂದ  ಸಂದರ್ಭದಲ್ಲಿಯೋಚಿಸಿರುವುದು ಒಂದು ಉತ್ತಮ ಕೆಲಸವಾಗಿದೆ ಅಷ್ಟೇ ಅಲ್ಲದೆ ಉಸ್ತುವಾರಿ ಸಚಿವರಲ್ಲಿ ಶಾಸಕರುಗಳಲ್ಲಿ ಕುಟುಂಬಕ್ಕೆ ಹೆಚ್ಚಿನರೀತಿಯ ಸಹಕಾರವನ್ನು ಸರಕಾರದಿಂದ ನೀಡಬೇಕೆಂದು ಸಮಾಜದ ಪರವಾಗಿ ವಿನಂತಿಸಿ ಸರ್ವರ ಪ್ರೀತಿ ಚೋರ ಇಹಲೋಕತ್ಯಜಿಸಿದ ಪ್ರವೀಣ್ ಮನೆಗೆ ಮುಖ್ಯಮಂತ್ರಿಗಳು ಮತ್ತು ಗ್ರಹ ಸಚಿವರು ಭೇಟಿ ನೀಡಿ ಧೈರ್ಯ ತುಂಬ ಕೆಲಸವನ್ನು ಮಾಡಬೇಕೆಂದುಬೆಳ್ತಂಗಡಿ ಶಾಸಕರಲ್ಲಿ ಕೇಳಿಕೊಂಡರು ಜಯಂತ್ ನಡುಬೈಲ್. ಇದೆಲ್ಲವೂ ಒಬ್ಬ ಸಮಾಜದ ವ್ಯಕ್ತಿಯು ಅತ್ಯಂತ ಕಷ್ಟ ಸಂದರ್ಭದಲ್ಲಿನಮ್ಮ ಸಮಾಜದ ಶಕ್ತಿಪೀಠ ವಾದ ಶ್ರೀ ಕ್ಷೇತ್ರದ ಪದಾಧಿಕಾರಿಗಳ ಒಟ್ಟು ಸಮಾಜದ ಕಾಳಜಿಯ ಚಿಂತನೆಯ ಪ್ರತಿಫಲವಾಗಿ ಮುಖ್ಯಮಂತ್ರಿ, ಗೃಹಮಂತ್ರಿ, ರಾಷ್ಟ್ರ, ರಾಜ್ಯ, ಕೇರಳ ಬಿಜೆಪಿ ನಾಯಕರು, ಮೂರು ಸಚಿವರು ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು, ವಿಧಾನಪರಿಷತ್ ಸದಸ್ಯರು ಮಾಜಿ ಶಾಸಕರು ಬೇರೆ ಜಿಲ್ಲೆಗಳಿಂದ ಈಡಿಗ ಸಮುದಾಯದ ಶಾಸಕರು ಜಿಲ್ಲೆಯ ಹೆಚ್ಚಿನ ಜನ ಪ್ರತಿನಿಧಿಗಳು  ಎಲ್ಲರಿಗೂ ಅಂತ್ಯಕ್ರಿಯೆ  ಮತ್ತು ದುಃಖತ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು.ಸಮಾಜದ  ಮೆಚ್ಚಿಗೆಯಕಾರ್ಯ.ಕ್ಷೇತ್ರದ ಅಧ್ಯಕ್ಷರಾದ ಶ್ರೀ ಪಿತಾಂಬರ ಹೇರಾಜೆ, ಪದಾಧಿಕಾರಿಗಳಾದ ರವಿ ಪೂಜಾರಿ ಚಿಲಿಂಬಿ, ಮೋಹನ್ ದಾಸ್,ದೀಪಕ್ಕೋಟ್ಯಾನ್, ಕ್ಷೇತ್ರದ ಟ್ರಸ್ಟಿಗಳು ಮತ್ತು ಸಿಬ್ಬಂದಿ ವರ್ಗ ಬಿಲ್ಲವ ಸಮಾಜದ ಗಣ್ಯರು ಮೃತ ಪ್ರವೀಣ್ ಅವರ ಅಂತಿಮ ದರ್ಶನಪಡೆದು ಕಂಬನಿ ಮಿಡಿದರು. ಮುಂದಿನ ದಿನಗಳಲ್ಲಿ ನಮ್ಮ ಸಮಾಜದ ಯುವಕರು ಉತ್ತಮ ರೀತಿಯಲ್ಲಿ ಸಜ್ಜನ ಜೀವನವನ್ನುನಡೆಸಲು ಉತ್ತಮ ರೀತಿಯ ಸಲಹೆ, ಮಾರ್ಗದರ್ಶನವನ್ನ ಹಂತ ಹಂತವಾಗಿ ಸಮಾಜದ ಯುವಕರಿಗೆ ತಲುಪಿಸಿ ನಮ್ಮ ಸಮಾಜಕ್ಕೆಶ್ರೀ ಕ್ಷೇತ್ರದಿಂದ ಒಂದು ಉತ್ತಮ ಮಾರ್ಗದರ್ಶನವನ್ನು ನೀಡಬೇಕು ಇದೇ ರೀತಿ ಅನೇಕ ಸಂದರ್ಭಗಳಲ್ಲಿ ಅಸಹಾಯಕಪರಿಸ್ಥಿತಿಯಲ್ಲಿರುವ ಎಲ್ಲರಿಗೂ ಸಹಾಯ ಮಾಡುವ ಶಕ್ತಿಯನ್ನು ಯೋಚನೆಯನ್ನು ಶ್ರೀ ಕ್ಷೇತ್ರದ ಶಕ್ತಿಗಳು ಕರುಣಿಸಲಿ ಎಂದು ಕ್ಷೇತ್ರದಭಕ್ತರ ಕೋರಿಕೆ.


Share:

More Posts

Category

Send Us A Message

Related Posts

ಬಿರುವೆರ್ ಕುಡ್ಲ ಸಂಘಟನೆಯಿಂದ ಯುವವಾಹಿನಿಗೆ ಗೌರವದ ಸನ್ಮಾನ.. ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿ ಸನ್ಮಾನ ಸ್ವೀಕಾರ


Share       ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಬಿರುವೆರ್ ಕುಡ್ಲ(ರಿ) ಮಂಗಳೂರು ಸಂಘಟನಯ ದಶಮಾನೋತ್ಸವದ ಸವಿನೆನಪಿಗಾಗಿ, ರಾಜ್ಯದ ಪ್ರತಿಷ್ಠಿತ ಯುವವಾಹಿನಿ ಸಂಸ್ಥೆಯು ಕಳೆದ 36 ವರ್ಷಗಳ ಸಮಾಜಮುಖಿ ಸೇವೆಯನ್ನು ಗುರುತಿಸಿ ಗೌರವಿಸಿ ಗೌರವದ


Read More »

ದೇಯಿ ಬೈದೆತಿ- ಕೋಟಿ ಚೆನ್ನಯರ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ಎಂಬ ಪುಣ್ಯಭೂಮಿ


Share       ಗೆಜ್ಜೆಗಿರಿ ನಂದನ ಬಿತ್ತಲ್ ಎಂಬ ಹೆಸರು ಕೇಳುತ್ತಿದ್ದಂತೆ ಮೈ ರೋಮಾಂಚನಗೊಳ್ಳುತ್ತದೆ. ಕ್ಷೇತ್ರದ ಇತಿಹಾಸವನ್ನು ಕೇಳುವಾಗ ಅವಳಿ ವೀರಪುರುಷರ ಮೂಲಸ್ಥಾನ ಯಾವುದು ಎಂಬ ಪ್ರಶ್ನೆಗೂ ಉತ್ತರ ಸಿಗುತ್ತದೆ. ಅಂತಹ ಪುಣ್ಯ-ಪವಿತ್ರ ಭೂಮಿಯಲ್ಲಿ ದೇಯಿ ಬೈದೈತಿ


Read More »

” ನವ ಕರ್ನಾಟಕ ರತ್ನ ” ಪ್ರಶಸ್ತಿಗೆ ಸತೀಶ್ ಕುಮಾರ್ ಬಜಾಲ್ ಆಯ್ಕೆ


Share       ಬೆಂಗಳೂರು: ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಒಂದುಗೂಡಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಅ. 4 ಮತ್ತು 5ರಂದು ಬೆಂಗಳೂರಿನಲ್ಲಿ ಅನಿವಾಸಿ ಕನ್ನಡಿಗರ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿದ್ದು. ಅಂದು


Read More »

ಊದುಪೂಜೆಯಲ್ಲಿ ಪಿಲಿಯಾವೇಶ ಎಷ್ಟು ಸರಿ?


Share       ಇನ್ನು ಪಿಲಿಕೋಲ ನೋಡಲು ವರ್ಷಕ್ಕೊಮ್ಮೆ ಕಾಪುವಿಗೆ ಹೋಗಬೇಕಾಗಿಲ್ಲ. ಅಷ್ಟಮಿ, ಚೌತಿ, ಮಾರ್ನೆಮಿಗಳಲ್ಲಿ ನಮ್ಮೂರಿನಲ್ಲೂ ಪಿಲಿಕೋಲಗಳು ಆರಂಭವಾಗಿವೆ. ಹಿಂದೆ ಅಪೂರ್ವವಾಗಿ ಎಲ್ಲಾದರೂ ಒಂದು ಕಡೆ ಊದುಹಾಕುವಾಗ ವೇಷಸಂಕಲ್ಪಿಸಿಕೊಂಡವನಿಗೆ ಆವೇಶ ಆಗುವುದಿತ್ತು. ಹೀಗೆ ಆವೇಶವಾಗುವುದು ಶುಭಲಕ್ಷಣ


Read More »

ದುಬೈ: ದುಬೈ ಬಿಲ್ಲವಸ್ ಫ್ಯಾಮಿಲಿ ವತಿಯಿಂದ ನಡೆದ 170 ನೇ ಬ್ರಹ್ಮ ಶ್ರೀ ನಾರಾಯಣ ಗುರುಜಯಂತಿ


Share       ದುಬೈ: ಬಿಲ್ಲವಸ್ ಫ್ಯಾಮಿಲಿ ದುಬೈ ಇವರ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ 170 ನೇ ಗುರು ಜಯಂತಿಯು ದುಬೈ ನ ಗ್ಲೆಂಡಲೆ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ  ಭಾನುವಾರದಂದು ವಿಜೃಂಭಣೆಯಿಂದ ನಡೆಯಿತು.


Read More »

ಸಾಲುಮರದ ತಿಮ್ಮಕ್ಕ ಪ್ರಶಸ್ತಿ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ 2024 ಪ್ರಶಸ್ತಿಗೆ ಆಯ್ಕೆಯಾದ ಧನ್ವಿ ಪೂಜಾರಿ


Share       ಮರವಂತೆ : ಈ ಬಾರಿಯ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ 2024 ಪ್ರಶಸ್ತಿಗೆ ಮರವಂತೆಯ ಧನ್ವಿ ಪೂಜಾರಿ ಆಯ್ಕೆಯಾಗಿದ್ದಾರೆ. ಮರವಂತೆಯ ಜ್ಯೋತಿ ಚಂದ್ರಶೇಖರ ಪೂಜಾರಿ ಇವರ ಪುತ್ರಿಯಾಗಿದ್ದು ಪ್ರಸ್ತುತ ಜನತಾ


Read More »