TOP STORIES:

FOLLOW US

ಗೆಜ್ಜೆ ಗಿರಿ ಕ್ಷೇತ್ರದ ಸೇವಾ ಕಾರ್ಯಕರ್ತ ಪ್ರವೀಣ್ ನೆಟ್ಟರ್ ಅವರ ಅಂತಿಮ ನಮನ ಕಾರ್ಯದಲ್ಲಿ ಕ್ಷೇತ್ರದ ಆಡಳಿತ ಮಂಡಳಿಯ ಪಾಲ್ಗೊಂಡ ಬಗ್ಗೆ.


ಶ್ರೀ ಕ್ಷೇತ್ರಗೆಜ್ಜೆ ಗಿರಿಯ ಸೇವಕರಾಗಿ ಕ್ಷೇತ್ರದಲ್ಲಿ ಜರಗಿದ ಅಭೂತಪೂರ್ವ, ದಾಖಲೆಯ ಭಕ್ತರು ಸಂದರ್ಶಿಸಿದ್ದ ಬ್ರಹ್ಮಕಲಶೋತ್ಸವದಲ್ಲಿತನ್ನನ್ನು ತಾನು ಸಮರ್ಪಿಸಿಕೊಂಡು   ಜವಾಬ್ದಾರಿಯುತ ಕೆಲಸಗಳನ್ನು  ಅತ್ಯುತ್ತಮವಾಗಿ ತೊಡಗಿಸಿಕೊಂಡು ಸಮಾಜಮುಖಿಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದ ನಮ್ಮೆಲ್ಲರ ಆತ್ಮೀಯ ವಿ ಪ್ರವೀಣ್ ನೆಟ್ಟರ್ ರವರ ಅಗಲುವಿಕೆಯನ್ನು ನಾವು ಅರಗಿಸಿಕೊಳ್ಳಲುಸಾಧ್ಯವಿಲ್ಲ ಇಂತಹ ವ್ಯಕ್ತಿಯನ್ನು ಕಳೆದುಕೊಂಡ ನೋವು ನಮ್ಮ ಬಿಲ್ಲವ ಸಮುದಾಯದ ಯಾವೊಬ್ಬ ವ್ಯಕ್ತಿಯು ಮರೆಯಲಾಸಾಧ್ಯರಾಕ್ಷಸೀಯ ಪ್ರವೃತ್ತಿಯ ದುಷ್ಕೃತ್ಯಗಳಿಗೆ ಯಬಲಿಯಾದ ಪ್ರವೀಣ್ ನೆಟ್ಟಾರುರವರ ಅಂತಿಮ ಯಾತ್ರೆಯಲ್ಲಿ ಶ್ರೀ ಕ್ಷೇತ್ರದ  ಆಡಳಿತಸಮಿತಿಯ ಪದಾಧಿಕಾರಿಗಳು ಪ್ರಾರಂಭದಿಂದ ಕೊನೆಯವರೆಗೂ ಸಮಾಜದ ಒಂದು ಅಮೂಲ್ಯ ಮುತ್ತನ್ನು ಕಳೆದುಕೊಂಡನೋವಿನಿಂದಲೇ ಅಂತಿಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮುದಾಯದ ವಿಧಿ ವಿಧಾನದಂತೆ ದಿವಂಗತ ಪ್ರವೀಣ್ ನೆಟ್ವರ್ ಅವರಅಂತ್ಯಕ್ರಿಯೆಯನ್ನು ನೆರವೇರಿಸಿವಲ್ಲಿ ಕ್ಷೇತ್ರದ ಗೌರವಾಧ್ಯಕ್ಷರಾದ ಜಯಂತ್ ನಡುಬೈಲ್ ಸ್ಥಳದಲ್ಲೇ ಇದ್ದು ಸೂಕ್ತ ವಾದಮಾರ್ಗದರ್ಶನ ನೀಡುತಿದ್ದರು‌. ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್ ಸೇರಿದ್ದ ಐದು ಸಾವಿರ ಕ್ಕಿಂತಲೂ ಅಧಿಕ ಪ್ರವೀಣ್ಅವರ ಆಪ್ತರು, ಸಂಘಪರಿವಾರ, ಪಕ್ಷದ ಪ್ರಮುಖರು, ಜನಪ್ರತಿನಿಧಿಗಳು, ಸಂಘಟನೆಗಳ ಮುಖಂಡರು ಕಾರ್ಯಕರ್ತರು, ಕುಟುಂಬಬಳಗ,ಅವರ ಮಿತ್ರ ವೃಂದ ಎಲ್ಲರಿಗೂ ಅಂತಿಮ ನಮನ ಸಲ್ಲಿಸಲು ಅವಕಾಶ ಕಲ್ಪಿಸಲು ಉಲ್ಲಾಸ್ ಹರಸಾಹಸ ಪಡುತಿದ್ದರು‌. ನಂತರ ಅವರ ಕುಟುಂಬಕ್ಕೂ ಆರ್ಥಿಕವಾಗಿ ಸಹಕಾರವಾಗಬೇಕು, ದುರ್ದೈವ ದಿಂದ ಕುಟುಂಬದ ದುಡಿಯುವ ಕೈಗಳೆ ಇಂದುಮರೆಯಾಗಿದೆ ಎಂದು ಪ್ರವೀಣ್ ನೆಟ್ಟಾರರವರ ಧರ್ಮ ಪತ್ನಿ ನೂತನ ಪ್ರವೀಣ್  ಯವರ ಖಾತೆಯನ್ನು ಸಾಮಾಜಿಕ ಜಾಲತಾಣದಲ್ಲಿಸಹಕಾರ ಕೋರಿ  ಹರಿಬಿಟ್ಟರು ಇದರ ಪರಿಣಾಮ ಒಂದು ಉತ್ತಮ ಮೊತ್ತ  ಸಂಗ್ರಹವಾಗಿ, ದಿವಂಗತರ ಕುಟುಂಬದ ಮುಂದಿನಜೀವನದ ನಿರ್ವಹಣೆಗೆ ಸರ್ಕಾರದ ಸಹಾಯ ಹಸ್ತವನ್ನು ಚಾಚುವ ಮಾನವೀಯ ದೃಷ್ಟಿಯಿಂದ  ಸಂದರ್ಭದಲ್ಲಿಯೋಚಿಸಿರುವುದು ಒಂದು ಉತ್ತಮ ಕೆಲಸವಾಗಿದೆ ಅಷ್ಟೇ ಅಲ್ಲದೆ ಉಸ್ತುವಾರಿ ಸಚಿವರಲ್ಲಿ ಶಾಸಕರುಗಳಲ್ಲಿ ಕುಟುಂಬಕ್ಕೆ ಹೆಚ್ಚಿನರೀತಿಯ ಸಹಕಾರವನ್ನು ಸರಕಾರದಿಂದ ನೀಡಬೇಕೆಂದು ಸಮಾಜದ ಪರವಾಗಿ ವಿನಂತಿಸಿ ಸರ್ವರ ಪ್ರೀತಿ ಚೋರ ಇಹಲೋಕತ್ಯಜಿಸಿದ ಪ್ರವೀಣ್ ಮನೆಗೆ ಮುಖ್ಯಮಂತ್ರಿಗಳು ಮತ್ತು ಗ್ರಹ ಸಚಿವರು ಭೇಟಿ ನೀಡಿ ಧೈರ್ಯ ತುಂಬ ಕೆಲಸವನ್ನು ಮಾಡಬೇಕೆಂದುಬೆಳ್ತಂಗಡಿ ಶಾಸಕರಲ್ಲಿ ಕೇಳಿಕೊಂಡರು ಜಯಂತ್ ನಡುಬೈಲ್. ಇದೆಲ್ಲವೂ ಒಬ್ಬ ಸಮಾಜದ ವ್ಯಕ್ತಿಯು ಅತ್ಯಂತ ಕಷ್ಟ ಸಂದರ್ಭದಲ್ಲಿನಮ್ಮ ಸಮಾಜದ ಶಕ್ತಿಪೀಠ ವಾದ ಶ್ರೀ ಕ್ಷೇತ್ರದ ಪದಾಧಿಕಾರಿಗಳ ಒಟ್ಟು ಸಮಾಜದ ಕಾಳಜಿಯ ಚಿಂತನೆಯ ಪ್ರತಿಫಲವಾಗಿ ಮುಖ್ಯಮಂತ್ರಿ, ಗೃಹಮಂತ್ರಿ, ರಾಷ್ಟ್ರ, ರಾಜ್ಯ, ಕೇರಳ ಬಿಜೆಪಿ ನಾಯಕರು, ಮೂರು ಸಚಿವರು ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು, ವಿಧಾನಪರಿಷತ್ ಸದಸ್ಯರು ಮಾಜಿ ಶಾಸಕರು ಬೇರೆ ಜಿಲ್ಲೆಗಳಿಂದ ಈಡಿಗ ಸಮುದಾಯದ ಶಾಸಕರು ಜಿಲ್ಲೆಯ ಹೆಚ್ಚಿನ ಜನ ಪ್ರತಿನಿಧಿಗಳು  ಎಲ್ಲರಿಗೂ ಅಂತ್ಯಕ್ರಿಯೆ  ಮತ್ತು ದುಃಖತ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು.ಸಮಾಜದ  ಮೆಚ್ಚಿಗೆಯಕಾರ್ಯ.ಕ್ಷೇತ್ರದ ಅಧ್ಯಕ್ಷರಾದ ಶ್ರೀ ಪಿತಾಂಬರ ಹೇರಾಜೆ, ಪದಾಧಿಕಾರಿಗಳಾದ ರವಿ ಪೂಜಾರಿ ಚಿಲಿಂಬಿ, ಮೋಹನ್ ದಾಸ್,ದೀಪಕ್ಕೋಟ್ಯಾನ್, ಕ್ಷೇತ್ರದ ಟ್ರಸ್ಟಿಗಳು ಮತ್ತು ಸಿಬ್ಬಂದಿ ವರ್ಗ ಬಿಲ್ಲವ ಸಮಾಜದ ಗಣ್ಯರು ಮೃತ ಪ್ರವೀಣ್ ಅವರ ಅಂತಿಮ ದರ್ಶನಪಡೆದು ಕಂಬನಿ ಮಿಡಿದರು. ಮುಂದಿನ ದಿನಗಳಲ್ಲಿ ನಮ್ಮ ಸಮಾಜದ ಯುವಕರು ಉತ್ತಮ ರೀತಿಯಲ್ಲಿ ಸಜ್ಜನ ಜೀವನವನ್ನುನಡೆಸಲು ಉತ್ತಮ ರೀತಿಯ ಸಲಹೆ, ಮಾರ್ಗದರ್ಶನವನ್ನ ಹಂತ ಹಂತವಾಗಿ ಸಮಾಜದ ಯುವಕರಿಗೆ ತಲುಪಿಸಿ ನಮ್ಮ ಸಮಾಜಕ್ಕೆಶ್ರೀ ಕ್ಷೇತ್ರದಿಂದ ಒಂದು ಉತ್ತಮ ಮಾರ್ಗದರ್ಶನವನ್ನು ನೀಡಬೇಕು ಇದೇ ರೀತಿ ಅನೇಕ ಸಂದರ್ಭಗಳಲ್ಲಿ ಅಸಹಾಯಕಪರಿಸ್ಥಿತಿಯಲ್ಲಿರುವ ಎಲ್ಲರಿಗೂ ಸಹಾಯ ಮಾಡುವ ಶಕ್ತಿಯನ್ನು ಯೋಚನೆಯನ್ನು ಶ್ರೀ ಕ್ಷೇತ್ರದ ಶಕ್ತಿಗಳು ಕರುಣಿಸಲಿ ಎಂದು ಕ್ಷೇತ್ರದಭಕ್ತರ ಕೋರಿಕೆ.


Share:

More Posts

Category

Send Us A Message

Related Posts

ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಪುಣೆಯ ಸಮಾಜಸೇವಕ   “ವಿಶ್ವನಾಥ ಪೂಜಾರಿ ಕಡ್ತಲ’ ಆಯ್ಕೆ


Share       ಪುಣೆ :ಪುಣೆ ಬಿಲ್ಲವ ಸಮಾಜ ಸೇವಾ ಸಂಘ ಇದರ ಅಧ್ಯಕ್ಷ ,ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಗುರುತಿಸಿಕೊಂಡಿರುವ ವಿಶ್ವನಾಥ ಪೂಜಾರಿ ಕಡ್ತಲ ಇವರು ಪ್ರತಿಷ್ಠಿತ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ -2025  ಗೆ ಆಯ್ಕೆಯಾಗಿರುತ್ತಾರೆ .


Read More »

ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ 1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ 4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ,ಶಿಲಾನ್ಯಾಸ


Share       ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ  1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ 4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ,ಶಿಲಾನ್ಯಾಸ ಯತೀವರ್ಯರು, ಸಚಿವ ಮಾಂಕಳ್ ವೈದ್ಯ, ಶಾಸಕ ಹರೀಶ್ ಪೂಂಜ, ಸೇರಿದಂತೆ ಬೆಳ್ತಂಗಡಿಯಿಂದ ಸುಮಾರು 200


Read More »

ಬೈದ್ಯೆರುಗಳಲ್ಲಿ ಲೀನವಾದ ದರ್ಶನ ಪಾತ್ರಿ ಶ್ರೀ ಸುರೇಶ್ ಪೂಜಾರಿ


Share         ಪ್ರಸಿದ್ದ ಬೈದ್ಯೇರುಗಳ ಪಾತ್ರಿಯಾದ  ಶ್ರೀ ಸುರೇಶ್ ಪೂಜಾರಿಯವರು ಅಲ್ಪಕಾಲದ  ಅಸೌಖ್ಯದ ಕಾರಣ ಇಂದು ಭಗವಂತನ ಪಾದ ಸೇರಿದರು. ಕಳತ್ತೂರು ಹಿರಿಯಣ್ಣ ಪೂಜಾರಿ ಹಾಗೂ ಶ್ರೀಮತಿ ಲೀಲಾವತಿ ಪೂಜಾರಿಯವರ ಮಗನಾದ ಶ್ರೀ ಸುರೇಶ್


Read More »

ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣರಿಗೆ ಐವತ್ತರ ಸಂಭ್ರಮ


Share       ಸಮಾಜದಲ್ಲಿ ಮಹತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿರುವ ವ್ಯಕ್ತಿ ಸಾಮಾಜಿಕವಾಗಿ ಮತ್ತು ಭಾವನಾತ್ಮಕವಾಗಿ ಸಮತೋಲನವನ್ನು ಸಾಧಿಸಿದರೆ ಮಾತ್ರ ಅವನು ಯಶಸ್ಸಿನ ಮೆಟ್ಟಿಲೇರಲು ಸಾಧ್ಯ. ‘ಸುಖ-ದುಃಖ, ಲಾಭ -ನಷ್ಟ ಸೋಲು-ಗೆಲುವನ್ನು ಸಮಾನವಾಗಿ ತೆಗೆದುಕೊಳ್ಳುವವನೇ ನಿಜವಾದ ಸುಖಿ’ ಎಂಬ


Read More »

ಮೂಡಬಿದಿರಿಯಲ್ಲೊಂದು 75 ಸಂಭ್ರಮ ಕ್ಕೆ ಸ್ನೇಹ ಸೇತುವಾದ ಸಿಂಗಾಪೂರ ಬಿಲ್ಲವ ಅಸೋಸಿಯೇಷನ್


Share       ಮೂಡಬಿದಿರಿಯಿಂದ ಸಿಂಗಪೂರಿಗೆ 🇸🇬: ಜಾಗತಿಕ ಸಮುದಾಯ ಸಂಬಂಧಗಳ ಬಲವರ್ಧನೆ: ಜಾಗತಿಕ ಸಮುದಾಯ ಸಂಬಂಧಗಳನ್ನು ಬಲಪಡಿಸುವ ದಿಕ್ಕಿನಲ್ಲಿ ಮಹತ್ವಪೂರ್ಣ ಹೆಜ್ಜೆವಹಿಸಿ, ಬಿಲ್ಲವ ಅಸೋಸಿಯೇಷನ್ ಸಿಂಗಪೂರಿನ ಸ್ಥಾಪಕರಾದ ಅಶ್ವಿತ್ ಬಂಗೇರಾ ಅವರು, ಬಿಲ್ಲವ ಅಸೋಸಿಯೇಷನ್ ಮೂಡಬಿದಿರಿಯ


Read More »

ಬಿಲ್ಲವಾಸ್ ಕತಾರ್ ನ ಇತಿಹಾಸದಲ್ಲಿ ಇನ್ನೊಂದು ಮೈಲಿಗಲ್ಲು. ಉಚಿತ ಆರೋಗ್ಯತಪಾಸಣಾ ಶಿಬಿರ ಮತ್ತು ಬಿಲ್ಲವಾಸ್ ಕತಾರ್ ನ ಅಧೀಕೃತ ಲಾಂಛನ (ಲೋಗೋ) ಬಿಡುಗಡೆ


Share       Noಹಲವು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯುತ್ತಿರುವ ಬಿಲ್ಲವಾಸ್ ಕತಾರ್ ರವರ  ವತಿಯಿಂದ ದಿನಾಂಕ ೧೧.೦೪.೨೦೨೫ ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಕಿಮ್ಸ್ ಮೆಡಿಕಲ್ ಸೆಂಟರ್, ಅಲ್ ಮಿಶಾಫ್, ಕತಾರ್ ಅವರ


Read More »