TOP STORIES:

ಜೀವನದ ಸುದೀರ್ಘ ವರ್ಷಗಳನ್ನು ಕಾರಿನಲ್ಲಿ ಚಾಲಕನಾಗಿ ಕಳೆದ ವೇಣೂರಿನ ಭೈರಣ್ಣನಿಗೊಂದು ನುಡಿ ನಮನ…


ಹುಟ್ಟಿದ್ದು ಗುರುಪುರದಲ್ಲಿ. ಜೀವನದ ಸುದೀರ್ಘ ವರ್ಷಗಳನ್ನು  ಚಾಲಕನಾಗಿ ಕಳೆದದ್ದು ವೇಣೂರಿನಲ್ಲಿ. ಸರಿ ಸುಮಾರು 56 ವರ್ಷಗಳ ನಿರಂತರ ಚಾಲಕನಾಗಿ ಸೇವೆ ಸಲ್ಲಿಸಿದ್ದು ವೇಣೂರಿನ ಮಹಾಜನತೆಗೆ !

ಭೈರಣ್ಣನೇ ಹೇಳುವಂತೆ ಅವರು ವೇಣೂರಿಗೆ ಬಂದದ್ದು ಎಪ್ರಿಲ್ 9 , 1967 ರಂದು.  ವೇಣೂರಿನ ಖ್ಯಾತ ವರ್ತಕರಾದ   ಕಿಟ್ಟೆರ್  ಎಂದೇ ಖ್ಯಾತರಾದ  ಶ್ರೀ ಖಂಡಿಗ ನರಸಿಂಹ ಪೈ ( ಕೆ.ಎನ್. ಪೈ)ಯವರ ಚಾಲಕನಾಗಿ. ವೇಣೂರಿಗೆ ಬಂದ ಮೇಲೆ ಮತ್ತೆ ಗುರುಪುರಕ್ಕೆಮರಳಲು ಮನಸಾಗದೆ ವೇಣೂರಿನಲ್ಲೇ ಕಾರು ಚಾಲಕನಾಗಿ ನೆಲೆಯಾದವರು ಭೈರಣ್ಣ.

ಕಿಟ್ಟರ ಕಾರಿನ ಬಳಿಕ ಶ್ರೀ ನಾರಾಯಣ ಹೆಗ್ಡೆಯವರ ಕಾರಿನಲ್ಲಿ ಡ್ರೈವರ್ ಆಗಿ, ನಂತರ 1970 ರಿಂದ 1974 ವರೆಗೆ  ಕೆಳಗಿನಪೇಟೆಯ ಸಹನಾ ಟೆಕ್ಸ್ ಟೈಲ್ಸ್   ಮಾಲೀಕರಾದ ಶ್ರೀಸಂಜೀವ ಸಾಲ್ಯಾನ್ ಚಾಲಕರಾಗಿದ್ದ ಭೈರಣ್ಣ ನಂತರ ಸ್ವಂತ ಕಾರು ಖರೀದಿಸಿಬಾಡಿಗೆಗೆ ಕಾರು ಓಡಿಸಲು ಆರಂಭಿಸಿದರು.

ಭೈರಣ್ಣ ಕಲಿತದ್ದು ಎರಡನೇ ತರಗತಿಯವರೆಗೆ ಮಾತ್ರ. ಮನೆಯಲ್ಲಿ ಬಡತನವಿದ್ದ ಕಾರಣ ಮೊದಲು ಕೂಲಿ ಕೆಲಸ, ಬಳಿಕವಾಮಂಜೂರಿನಲ್ಲಿ ಸ್ವಲ್ಪ ಸಮಯ ಜೊಕಿಂ ಸೆರಾವೊ ಅವರಲ್ಲಿ ಕೆಲಸ, ಮಂಗಳೂರಿನ ಕೊಟ್ಟಾರದಲ್ಲಿ ಮಾಲಿಂಗ ಶೆಟ್ಟಿಯವರಮನೆಯಲ್ಲಿ ಕಾರು ತೊಳೆದು ಅದನ್ನು ಓಡಿಸಲು ಅಭ್ಯಾಸ ಮಾಡಿ ಪರಿಣತಿ ಪಡೆದವರು.

ಭೈರಣ್ಣ ಹೇಳುವಂತೆ ಅವರು ಹುಟ್ಟಿದ್ದು 1938ನೇ ವರ್ಷದ ಮಾಯಿಡ್ ಪದಿಮೂಜಿ ಪೋಯಿನಾನಿ. ತಂದೆ ಫಕೀರ ಪೂಜಾರಿ. ತಾಯಿ ಗೌರಿ. ದಂಪತಿಗಳ ನಾಲ್ವರು ಮಕ್ಕಳಲ್ಲಿ ಭೈರಣ್ಣ ಒಬ್ಬರು.  ಗುರುಪುರದಲ್ಲಿ ಒಂದೂಕಾಲು ಎಕರೆ ಜಾಗ ಅವರ ತಂದೆಗಿದ್ದಆಸ್ತಿ.

ಭೈರಣ್ಣ ವೇಣೂರಿಗೆ ಬಂದ ಮೇಲೆ ಅನೇಕ ಮಂದಿಯ ಪ್ರಾಣವನ್ನು ಉಳಿಸಿದ ಕೀರ್ತಿ ಅವರದು. 1970 ರಿಂದ 1990   ಕಾಲದಲ್ಲಿವೇಣೂರಿನಲ್ಲಿ ಬಾಡಿಗೆ ಕಾರು ಅಂದರೆ ಅದು ಭೈರಣ್ಣನ ಕಾರು ಅನ್ನುವಷ್ಟು ಪ್ರಸಿದ್ಧರಾಗಿದ್ದವರು ಅವರು. ಅತ್ಯಂತ ವಿನಯಶೀಲ, ದಿನದ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಯಾವುದೇ ಹೊತ್ತಿನಲ್ಲಿ ಹೋಗಿ ಕರೆದರೂ ಸೇವೆಗೆ ಸದಾ ಸಿದ್ಧರಾಗಿದ್ದ ಭೈರಣ್ಣ ಯಾರೊಂದಿಗೂಸಿಡುಕಿದವರಲ್ಲ. ಎಷ್ಟೋ ಮಂದಿಯ ಮದುವೆ ದಿಬ್ಬಣ, ಆಫೀಸು ಕೆಲಸ, ಪುಣ್ಯಕ್ಷೇತ್ರ ದರ್ಶನ, ಕಾಜೂರು ಉರೂಸ್, ಅತ್ತೂರುಚರ್ಚ್ ಜಾತ್ರೆಗೆ ಜನರನ್ನು ಕರೆದೊಯ್ಯುವ ಕಾರ್ಯ,ಹಲವಾರು ಮಂದಿ ಗರ್ಭಿಣಿಯರನ್ನು ಹಾಗೂ ಅನಾರೋಗ್ಯ ಪೀಡಿತರನ್ನುಸಕಾಲಕ್ಕೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಕಾಪಾಡಿದ ಕೀರ್ತಿ ಭೈರಣ್ಣನದ್ದು.

ಕೆಲವೊಮ್ಮೆ ಭೈರಣ್ಣನ ಅಂಬಾಸಿಡರ್ ಕಾರ್ ನಿಧಾನವಾಗಿ ಹೋಗುತ್ತಿದೆಯೆಂದರೆ ಯಾರಿಗೋ ಏನೋ ಆಗಿದೆಯೆಂದೋ, ಮಣಿಪಾಲ ಆಸ್ಪತ್ರೆಗೆ ಹೊರಟಿದೆಯೆಂದೋ ಒಂದು ರೀತಿಯ ಅನೂಹ್ಯ ಭಯವೂ ಅಗುವುದಿತ್ತು!

ಕಳೆದ ಕೆಲವು ವರ್ಷಗಳಿಂದ ಕುಟುಂಬದವರು ಬಂದು ವಾರ್ಧಕ್ಯದ  ಸಮಯದಲ್ಲಿ ಗುರುಪುರದ ಮನೆಗೆ ಬರುವಂತೆಕೇಳಿಕೊಂಡರೂ ಅತ್ತ ಹೋಗಲು ಮನಸಾಗದೇ ವೇಣೂರಿನಲ್ಲಿ  ಶ್ರೀ ಕೇಶವ ಕಾಮತರ ಅಂಗಡಿಯ ಮೇಲಿದ್ದ ರೂಮಿನಲ್ಲೇವಾಸವಿದ್ದರು. ಶ್ರೀ ಕೇಶವ ಕಾಮತರ ಸುಪುತ್ರ ಶ್ರೀ ವೆಂಕಟರಮಣ ಕಾಮತರು ಕೊನೆಯವರೆಗೂ ಅವರಿಗೆ ಆಶ್ರಯವಿತ್ತುಸಹೃದಯತೆಯನ್ನು ತೋರಿದವರು. ಭೈರಣ್ಣನ ಶಿಷ್ಯರಾದ ಇಬ್ರಾಹಿಂರವರು ಭೈರಣ್ಣನನ್ನು ಅನಾರೋಗ್ಯದ ಸಮಯದಲ್ಲಿನೋಡಿಕೊಂಡು ಗುರುಭಕ್ತಿಯನ್ನು ಮೆರೆದಿದ್ದಾರೆ.

ಅವಿವಾಹಿತರಾಗಿಯೇ ಉಳಿದಿದ್ದ ಭೈರಣ್ಣ ಕೊನೆಯ ತನಕವೂ ವೇಣೂರಿನಲ್ಲಿಯೇ ಯಾರಿಗೂ ಹೊರೆಯಾಗದಂತೆ ಉಳಿದು   ಜೂನ್ 9, 2023ರಂದು ತಮ್ಮ 85 ನೇ ವಯಸ್ಸಿನಲ್ಲಿ ಭಗವಂತನ ಪಾದವನ್ನು ಸೇರಿದರು.

ವೇಣೂರಿನಲ್ಲಿ 56 ವರ್ಷಗಳ ಕಾಲ ಜನರಿಗೆ ಕಾರಿನ ಮೂಲಕ ಸೇವೆಯನ್ನು ನೀಡಿದ ಭೈರಣ್ಣನನ್ನು ಯಾವುದೇ ಸಂಘಸಂಸ್ಥೆಗಳಾಗಲೀ, ಶಾರದೋತ್ಸವ, ಗಣೇಶೋತ್ಸವ ಸಮಿತಿಯವರಾಗಲೀ ಗುರುತಿಸಿ ಗೌರವಿಸದೇ ಇದ್ದುದ್ದು ಮಾತ್ರ ವಿಷಾದನೀಯ.

ವೇಣೂರಿನ ಸ್ಮರಣೀಯ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ ಭೈರಣ್ಣನಿಗೆ ಭಾವಪೂರ್ಣ ಶ್ರದ್ಧಾಂಜಲಿ.

ಡಾ. ಸುಬ್ರಹ್ಮಣ್ಯ ಭಟ್, ಕಜೆ ಮನೆ ವೇಣೂರು

ಮಾಹಿತಿ ಆಧಾರ:

. 23-09-2022 ರಂದು ನಾನು ನಡೆಸಿದ ಮೌಖಿಕ ಸಂದರ್ಶನದ ದಾಖಲಾತಿ

. ಶ್ರೀಮತಿ ಶಶಿಪ್ರಭಾ ಟೀಚರ್ ಅವರ ಮೌ


Related Posts

ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ ಮಂಗಳೂರಿನಲ್ಲಿ ಸ್ಥಾಪಿಸಲು ಅಗತ್ಯ ಇರುವ ಐದು ಎಕರೆ ಜಮೀನನ್ನು ಒದಗಿಸಲಾಗುವುದು : ಮುಖ್ಯಮಂತ್ರಿ ಸಿದ್ದರಾಮಯ್ಯ


Share         ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ ಮಂಗಳೂರಿನಲ್ಲಿ ಸ್ಥಾಪಿಸಲು ಅಗತ್ಯ ಇರುವ ಐದು ಎಕರೆ ಜಮೀನನ್ನು ಒದಗಿಸಲಾಗುವುದು : ಮುಖ್ಯಮಂತ್ರಿ ಸಿದ್ದರಾಮಯ್ಯ ಉಳ್ಳಾಲ: ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ


Read More »

ವಿಶೇಷ ಮಕ್ಕಳ ಕಲೆಗಾರಿಕೆಯಿಂದ ರೂಪುಗೊಂಡ ಜನನಾಯಕ ಪದ್ಮರಾಜ್ ಆರ್. ಪೂಜಾರಿಯವರ ಭಾವಚಿತ್ರ


Share         ಕಲಾಸೇತು — ಬಂಟ್ವಾಳ ತಾಲೂಕಿನ ಕಾವಳಕಟ್ಟೆಯ ಗುರಿಮಜಲ್ ಹಿದಾಯ ವಿಶೇಷ ಮಕ್ಕಳ ವಸತಿ ಶಾಲೆ ದಶಮಾನೋತ್ಸವ ಕಾರ್ಯಕ್ರಮದಲ್ಲಿ, ವಿಶೇಷ ಮಕ್ಕಳ ಕಲೆಗಾರಿಕೆಯಿಂದ ರೂಪುಗೊಂಡ ಜನನಾಯಕ ಪದ್ಮರಾಜ್ ಆರ್. ಪೂಜಾರಿಯವರ ಭಾವಚಿತ್ರ ವನ್ನು ಶಾಲೆಯ


Read More »

ಯುವವಾಹಿನಿ ಪುತ್ತೂರು ಘಟಕದಿಂದ ಅವಿಭಜಿತ ಪುತ್ತೂರು ತಾ ಮಟ್ಟದ ಕೋಟಿ-ಚೆನ್ನಯ ಕ್ರೀಡಾಕೂಟ ಸಮಾರೋಪ.


Share         ಪುತ್ತೂರು:ವಿದ್ಯೆ, ಉದ್ಯೋಗ, ಸಂಪರ್ಕ ಧ್ಯೇಯವನ್ನೊಳಗೊಂಡ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪುತ್ತೂರು ಘಟಕ ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ವ್ಯಾಪ್ತಿಗೆ ಒಳಪಟ್ಟ ಸಮಾಜ ಬಾಂಧವರಿಗಾಗಿ


Read More »

🏆ವಿಶ್ವ ಚಾಂಪಿಯನ್ ಭಾರತ 🇮🇳🏆ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಧನಲಕ್ಷ್ಮಿ ಪೂಜಾರಿ


Share         🏆ವಿಶ್ವ ಚಾಂಪಿಯನ್ ಭಾರತ 🇮🇳🏆 ಢಾಕಾದಲ್ಲಿ ನಡೆದ 2025ರ ಕಬಡ್ಡಿ ವಿಶ್ವಕಪ್ ಟೂರ್ನಿಯಲ್ಲಿ ಚೈನೀಸ್ ತೈಪೆ ತಂಡವನ್ನು ರೋಚಕವಾಗಿ ಮಣಿಸಿ ಪ್ರತಿಷ್ಠಿತ ಕಬಡ್ಡಿ ವಿಶ್ವಕಪ್ ಟ್ರೋಫಿಯನ್ನು ಗೆದ್ದ ಭಾರತೀಯ ಮಹಿಳಾ ಕಬಡ್ಡಿ ತಂಡಕ್ಕೆ


Read More »

ಮಸ್ಕತ್ ನ ಭೀಷ್ಮ ಎಂಬ ಹೆಗ್ಗಳಿಕೆಗೆ ಪಾತ್ರರಾದ ಹಿರಿಯ ಉದ್ಯಮಿ ಶ್ರೀಯುತ ಎಸ್ ಕೆ ಪೂಜಾರಿ


Share         ಮೂಲತಃ ಗಂಜಿಮಠ ಪೆರಾರ ಎಂಬಲ್ಲಿ 1956 ರಲ್ಲಿ ಜನಿಸಿದ ಶ್ರೀಯುತರು ಕಿರಿಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಊರಿನಲ್ಲಿ ಪ್ರಾರಂಭಿಸಿ ನಂತರ ಮುಂಬೈಗೆ ಬಂದು ಕೆಲಸದ ಜೊತೆಗೆ ಹೆಚ್ಚಿನ ವಿದ್ಯಾಭ್ಯಾಸವನ್ನು ಮುಂಬೈನಲ್ಲಿ ಪ್ರಾರಂಭಿಸಿ


Read More »

ನಿರೂಪಣಾ ಕ್ಷೇತ್ರದಲ್ಲಿ ಮಿಂಚುತ್ತಿರುವ ಉದಯೋನ್ಮುಖ ಪ್ರತಿಭೆ – ಕೃತಿ ಪೂಜಾರಿ ಮೂಡುಬೆಟ್ಟು


Share           ಸಾಧನೆಯೆಂಬುದು ಯಾರೊಬ್ಬನ ಸೊತ್ತೂ ಅಲ್ಲ, ಅದು ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಭಾವದಿಂದ ಮುನ್ನಡೆಯುವ ಮನಸು ಮತ್ತು ವ್ಯಕ್ತಿಗಳ ಪಾಲಿನ ವರದಾನ. ಸಾಧನೆಯ ಮನಸ್ಸೆಂಬ ಸಸಿಗೆ ಸತತ ನೀರೆರೆದು ಪೋಷಿಸಿ, ಶ್ರಮವನ್ನು


Read More »