TOP STORIES:

ಜೀವನದ ಸುದೀರ್ಘ ವರ್ಷಗಳನ್ನು ಕಾರಿನಲ್ಲಿ ಚಾಲಕನಾಗಿ ಕಳೆದ ವೇಣೂರಿನ ಭೈರಣ್ಣನಿಗೊಂದು ನುಡಿ ನಮನ…


ಹುಟ್ಟಿದ್ದು ಗುರುಪುರದಲ್ಲಿ. ಜೀವನದ ಸುದೀರ್ಘ ವರ್ಷಗಳನ್ನು  ಚಾಲಕನಾಗಿ ಕಳೆದದ್ದು ವೇಣೂರಿನಲ್ಲಿ. ಸರಿ ಸುಮಾರು 56 ವರ್ಷಗಳ ನಿರಂತರ ಚಾಲಕನಾಗಿ ಸೇವೆ ಸಲ್ಲಿಸಿದ್ದು ವೇಣೂರಿನ ಮಹಾಜನತೆಗೆ !

ಭೈರಣ್ಣನೇ ಹೇಳುವಂತೆ ಅವರು ವೇಣೂರಿಗೆ ಬಂದದ್ದು ಎಪ್ರಿಲ್ 9 , 1967 ರಂದು.  ವೇಣೂರಿನ ಖ್ಯಾತ ವರ್ತಕರಾದ   ಕಿಟ್ಟೆರ್  ಎಂದೇ ಖ್ಯಾತರಾದ  ಶ್ರೀ ಖಂಡಿಗ ನರಸಿಂಹ ಪೈ ( ಕೆ.ಎನ್. ಪೈ)ಯವರ ಚಾಲಕನಾಗಿ. ವೇಣೂರಿಗೆ ಬಂದ ಮೇಲೆ ಮತ್ತೆ ಗುರುಪುರಕ್ಕೆಮರಳಲು ಮನಸಾಗದೆ ವೇಣೂರಿನಲ್ಲೇ ಕಾರು ಚಾಲಕನಾಗಿ ನೆಲೆಯಾದವರು ಭೈರಣ್ಣ.

ಕಿಟ್ಟರ ಕಾರಿನ ಬಳಿಕ ಶ್ರೀ ನಾರಾಯಣ ಹೆಗ್ಡೆಯವರ ಕಾರಿನಲ್ಲಿ ಡ್ರೈವರ್ ಆಗಿ, ನಂತರ 1970 ರಿಂದ 1974 ವರೆಗೆ  ಕೆಳಗಿನಪೇಟೆಯ ಸಹನಾ ಟೆಕ್ಸ್ ಟೈಲ್ಸ್   ಮಾಲೀಕರಾದ ಶ್ರೀಸಂಜೀವ ಸಾಲ್ಯಾನ್ ಚಾಲಕರಾಗಿದ್ದ ಭೈರಣ್ಣ ನಂತರ ಸ್ವಂತ ಕಾರು ಖರೀದಿಸಿಬಾಡಿಗೆಗೆ ಕಾರು ಓಡಿಸಲು ಆರಂಭಿಸಿದರು.

ಭೈರಣ್ಣ ಕಲಿತದ್ದು ಎರಡನೇ ತರಗತಿಯವರೆಗೆ ಮಾತ್ರ. ಮನೆಯಲ್ಲಿ ಬಡತನವಿದ್ದ ಕಾರಣ ಮೊದಲು ಕೂಲಿ ಕೆಲಸ, ಬಳಿಕವಾಮಂಜೂರಿನಲ್ಲಿ ಸ್ವಲ್ಪ ಸಮಯ ಜೊಕಿಂ ಸೆರಾವೊ ಅವರಲ್ಲಿ ಕೆಲಸ, ಮಂಗಳೂರಿನ ಕೊಟ್ಟಾರದಲ್ಲಿ ಮಾಲಿಂಗ ಶೆಟ್ಟಿಯವರಮನೆಯಲ್ಲಿ ಕಾರು ತೊಳೆದು ಅದನ್ನು ಓಡಿಸಲು ಅಭ್ಯಾಸ ಮಾಡಿ ಪರಿಣತಿ ಪಡೆದವರು.

ಭೈರಣ್ಣ ಹೇಳುವಂತೆ ಅವರು ಹುಟ್ಟಿದ್ದು 1938ನೇ ವರ್ಷದ ಮಾಯಿಡ್ ಪದಿಮೂಜಿ ಪೋಯಿನಾನಿ. ತಂದೆ ಫಕೀರ ಪೂಜಾರಿ. ತಾಯಿ ಗೌರಿ. ದಂಪತಿಗಳ ನಾಲ್ವರು ಮಕ್ಕಳಲ್ಲಿ ಭೈರಣ್ಣ ಒಬ್ಬರು.  ಗುರುಪುರದಲ್ಲಿ ಒಂದೂಕಾಲು ಎಕರೆ ಜಾಗ ಅವರ ತಂದೆಗಿದ್ದಆಸ್ತಿ.

ಭೈರಣ್ಣ ವೇಣೂರಿಗೆ ಬಂದ ಮೇಲೆ ಅನೇಕ ಮಂದಿಯ ಪ್ರಾಣವನ್ನು ಉಳಿಸಿದ ಕೀರ್ತಿ ಅವರದು. 1970 ರಿಂದ 1990   ಕಾಲದಲ್ಲಿವೇಣೂರಿನಲ್ಲಿ ಬಾಡಿಗೆ ಕಾರು ಅಂದರೆ ಅದು ಭೈರಣ್ಣನ ಕಾರು ಅನ್ನುವಷ್ಟು ಪ್ರಸಿದ್ಧರಾಗಿದ್ದವರು ಅವರು. ಅತ್ಯಂತ ವಿನಯಶೀಲ, ದಿನದ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಯಾವುದೇ ಹೊತ್ತಿನಲ್ಲಿ ಹೋಗಿ ಕರೆದರೂ ಸೇವೆಗೆ ಸದಾ ಸಿದ್ಧರಾಗಿದ್ದ ಭೈರಣ್ಣ ಯಾರೊಂದಿಗೂಸಿಡುಕಿದವರಲ್ಲ. ಎಷ್ಟೋ ಮಂದಿಯ ಮದುವೆ ದಿಬ್ಬಣ, ಆಫೀಸು ಕೆಲಸ, ಪುಣ್ಯಕ್ಷೇತ್ರ ದರ್ಶನ, ಕಾಜೂರು ಉರೂಸ್, ಅತ್ತೂರುಚರ್ಚ್ ಜಾತ್ರೆಗೆ ಜನರನ್ನು ಕರೆದೊಯ್ಯುವ ಕಾರ್ಯ,ಹಲವಾರು ಮಂದಿ ಗರ್ಭಿಣಿಯರನ್ನು ಹಾಗೂ ಅನಾರೋಗ್ಯ ಪೀಡಿತರನ್ನುಸಕಾಲಕ್ಕೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಕಾಪಾಡಿದ ಕೀರ್ತಿ ಭೈರಣ್ಣನದ್ದು.

ಕೆಲವೊಮ್ಮೆ ಭೈರಣ್ಣನ ಅಂಬಾಸಿಡರ್ ಕಾರ್ ನಿಧಾನವಾಗಿ ಹೋಗುತ್ತಿದೆಯೆಂದರೆ ಯಾರಿಗೋ ಏನೋ ಆಗಿದೆಯೆಂದೋ, ಮಣಿಪಾಲ ಆಸ್ಪತ್ರೆಗೆ ಹೊರಟಿದೆಯೆಂದೋ ಒಂದು ರೀತಿಯ ಅನೂಹ್ಯ ಭಯವೂ ಅಗುವುದಿತ್ತು!

ಕಳೆದ ಕೆಲವು ವರ್ಷಗಳಿಂದ ಕುಟುಂಬದವರು ಬಂದು ವಾರ್ಧಕ್ಯದ  ಸಮಯದಲ್ಲಿ ಗುರುಪುರದ ಮನೆಗೆ ಬರುವಂತೆಕೇಳಿಕೊಂಡರೂ ಅತ್ತ ಹೋಗಲು ಮನಸಾಗದೇ ವೇಣೂರಿನಲ್ಲಿ  ಶ್ರೀ ಕೇಶವ ಕಾಮತರ ಅಂಗಡಿಯ ಮೇಲಿದ್ದ ರೂಮಿನಲ್ಲೇವಾಸವಿದ್ದರು. ಶ್ರೀ ಕೇಶವ ಕಾಮತರ ಸುಪುತ್ರ ಶ್ರೀ ವೆಂಕಟರಮಣ ಕಾಮತರು ಕೊನೆಯವರೆಗೂ ಅವರಿಗೆ ಆಶ್ರಯವಿತ್ತುಸಹೃದಯತೆಯನ್ನು ತೋರಿದವರು. ಭೈರಣ್ಣನ ಶಿಷ್ಯರಾದ ಇಬ್ರಾಹಿಂರವರು ಭೈರಣ್ಣನನ್ನು ಅನಾರೋಗ್ಯದ ಸಮಯದಲ್ಲಿನೋಡಿಕೊಂಡು ಗುರುಭಕ್ತಿಯನ್ನು ಮೆರೆದಿದ್ದಾರೆ.

ಅವಿವಾಹಿತರಾಗಿಯೇ ಉಳಿದಿದ್ದ ಭೈರಣ್ಣ ಕೊನೆಯ ತನಕವೂ ವೇಣೂರಿನಲ್ಲಿಯೇ ಯಾರಿಗೂ ಹೊರೆಯಾಗದಂತೆ ಉಳಿದು   ಜೂನ್ 9, 2023ರಂದು ತಮ್ಮ 85 ನೇ ವಯಸ್ಸಿನಲ್ಲಿ ಭಗವಂತನ ಪಾದವನ್ನು ಸೇರಿದರು.

ವೇಣೂರಿನಲ್ಲಿ 56 ವರ್ಷಗಳ ಕಾಲ ಜನರಿಗೆ ಕಾರಿನ ಮೂಲಕ ಸೇವೆಯನ್ನು ನೀಡಿದ ಭೈರಣ್ಣನನ್ನು ಯಾವುದೇ ಸಂಘಸಂಸ್ಥೆಗಳಾಗಲೀ, ಶಾರದೋತ್ಸವ, ಗಣೇಶೋತ್ಸವ ಸಮಿತಿಯವರಾಗಲೀ ಗುರುತಿಸಿ ಗೌರವಿಸದೇ ಇದ್ದುದ್ದು ಮಾತ್ರ ವಿಷಾದನೀಯ.

ವೇಣೂರಿನ ಸ್ಮರಣೀಯ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ ಭೈರಣ್ಣನಿಗೆ ಭಾವಪೂರ್ಣ ಶ್ರದ್ಧಾಂಜಲಿ.

ಡಾ. ಸುಬ್ರಹ್ಮಣ್ಯ ಭಟ್, ಕಜೆ ಮನೆ ವೇಣೂರು

ಮಾಹಿತಿ ಆಧಾರ:

. 23-09-2022 ರಂದು ನಾನು ನಡೆಸಿದ ಮೌಖಿಕ ಸಂದರ್ಶನದ ದಾಖಲಾತಿ

. ಶ್ರೀಮತಿ ಶಶಿಪ್ರಭಾ ಟೀಚರ್ ಅವರ ಮೌ


Related Posts

ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ


Share        ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ


Read More »

ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ ಕೋಟ್ಯಾನ್‌ಗೆ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ


Share        ವಿಕ ಸುದ್ದಿಲೋಕ ಮಂಗಳೂರು ಸೌಹಾರ್ದತೆ ಬಿಂಬಿಸುವ ವರದಿಗೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ‘ಬ್ಯಾಂಡ್ ಮಂಗಳೂರು’ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ


Read More »

ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಆಯ್ಕೆ


Share        ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದ ಬಿಂಬಿಸುವ ವರದಿಗೆ ನೀಡಲಾಗುವ “ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿಗೆ ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯಕೋಟ್ಯಾನ್ ಪಡು  ಆಯ್ಕೆಯಾಗಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ 2024 ಅಕ್ಟೋಬರ್


Read More »

ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್( ರಿ) ಇದರ ನೂತನ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ ಆಯ್ಕೆ


Share        ಶ್ರೀ ಕ್ಷೇತ್ರ ಗೆಜ್ಜೆಗಿರಿಯ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ  ಚಾರಿಟೇಬಲ್ ಟ್ರಸ್ಟ್(ರಿ) ಇದರ ನೂತನ ಅಧ್ಯಕ್ಷರಾಗಿ ಬಿರ್ವ ಸೆಂಟರ್ ಇದರ ಮಾಲಕರಾದ  ಕೆ ಸಂಜೀವ ಪೂಜಾರಿ ಇವರನ್ನು ಕಂಕನಾಡಿ ಬ್ರಹ್ಮ


Read More »

8ನೇ ವಯಸ್ಸಿನಲ್ಲಿ ಕಪೋತಾಸನದ ಭಂಗಿಯಲ್ಲಿ ವಿಶ್ವ ದಾಖಲೆ ಮಾಡಿದ ಬಾಲಕಿ ಕುಮಾರಿ ಶರಣ್ಯ ಶರತ್!


Share        ಮಂಗಳೂರು, ಜೂ. 20 ಪನ್ನೀರಿನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಶರಣ್ಯ ಶರತ್ ಅವರು ತನ್ನ ಎಂಟನೆಯ ವಯಸ್ಸಿನಲ್ಲಿ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್


Read More »

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾಗಿ ಎಚ್.ಎಸ್.ಜಯರಾಜ್ ಆಯ್ಕೆ


Share        ಮಂಗಳೂರು: ಬ್ರಹ್ಮಶ್ರೀ ನಾರಾಯಣಗುರುಗಳು ಪ್ರತಿಷ್ಠಾಪಿಸಿದ ಕರ್ನಾಟಕದ ಏಕೈಕ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಆಡಳಿತ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ಜಂಟಿ ಸಭೆ ಕೇಂದ್ರದ ಮಾಜಿ ಸಚಿವ


Read More »