TOP STORIES:

ತನ್ನ 8ನೇ ವಯಸ್ಸಿನಲ್ಲಿಯೇ ಕಲಾ ಮಾತೆಯನ್ನು ಒಲಿಸಿಕೊಂಡ ಪುಟಾಣಿ ಧೃತಿ ಅಂಚನ್


ತನ್ನ 8ನೇ ವಯಸ್ಸಿನಲ್ಲಿಯೇ ಕಲಾ ಮಾತೆಯನ್ನು ಒಲಿಸಿಕೊಂಡ ಪುಟಾಣಿ ಧೃತಿ ಅಂಚನ್. ಪ್ರಸಾದ್ ಮತ್ತು ಶ್ವೇತಾ ದಂಪತಿಗಳ ಮೊದಲನೆ ಮಗಳು.

ಸಾಧನೆ ಮಾಡಲು ಆತ್ಮ ವಿಶ್ವಾಸ ಬಹಳ ಮುಖ್ಯ. ಆತ್ಮ ವಿಶ್ವಾಸ ಇಲ್ಲದಿದ್ದರೆ ಸಾಧನೆಯ ಗುರಿ ಸೇರಲು ಸಾಧ್ಯವಿಲ್ಲ. ಏನೇ ಅಡ್ಡಿ ಬಂದರು ಎದುರಿಸಿ ನಿಲ್ಲುತ್ತೇವೆ ಎನ್ನುವ ಛಲ ಇದ್ದರೆ ಮಾತ್ರ ಸಾಧನೆಯ ಹಾದಿಯಲ್ಲಿ ನಡೆಯಲು ಸಾಧ್ಯ.ಹೀಗೆ ತನ್ನ ಆತ್ಮ ವಿಶ್ವಾಸದಿಂದ ಸಾಧನೆಯ ಹಾದಿಯಲ್ಲಿ ನಡೆಯುತ್ತಿರುವ ಪುಟಾಣಿ ಪ್ರತಿಭೆ ಧೃತಿ ಅಂಚನ್

ಇವರು ತನ್ನ ವಿದ್ಯಾಭ್ಯಾಸವನ್ನು ಪರಿಜ್ಞಾನ ವಿದ್ಯಾಲಯ ಸೋಮೇಶ್ವರ್ ಉಳ್ಳಾಲ ಇಲ್ಲಿ ಮಾಡುತ್ತಿದ್ದಾರೆ. ಸಣ್ಣ ಪ್ರಾಯದಲ್ಲಿಯೇ ಕ್ಯಾನ್ವಾಸ್ ಪೈಂಟಿಂಗ್ನಲ್ಲಿ ಆಸಕ್ತಿ ಹೊಂದಿರುವ ಇವರಿಗೆ ಯಾವುದೇ ಪ್ರೋತ್ಸಾಹ ಇರಲಿಲ್ಲ ಆದರೂ ಪೈಂಟಿಂಗ್ ಮಾಡುವುದು ಬಿಡಲಿಲ್ಲ. ಇವರ ಈ ಆಸಕ್ತಿ ಗೆ ತಂದೆ ತಾಯಿ ಬೆನ್ನೆಲುಬಾಗಿ ನಿಂತರು.

ಲಾಕ್ಡೌನ್ ಟೈಮ್ ನ ಬಿಡುವಿನ ವೇಳೆಯಲ್ಲಿ ತನ್ನದೇ ರೀತಿಯಲ್ಲಿ ಅನೇಕ ಚಿತ್ರಕಲೆ ಬಿಡಿಸುತ್ತಿದ್ದರು.ಆ ಸಮಯದಲ್ಲಿ ಹಂನ್ಸಲ್ ಡಿಸೋಜ ಇವರು ಧೃತಿ ಕ್ಯಾನ್ವಾಸ್ ಪೈಂಟಿಂಗ್ ತುಂಬಾ ಚೆನ್ನಾಗಿ ಮಾಡುತ್ತಾಳೆ ಅವರತ್ರ ಒಂದು ಕ್ಯಾನ್ವಾಸ್ ಪೈಂಟಿಂಗ್ ಮಾಡಿಸಿ ಎಂದಾಗ,ಅವಾಗ ಧೃತಿಯ ತಾಯಿ ಅವಳು ಯಾವುದೇ ತರಬೇತಿ ಪಡೆದಿಲ್ಲ ಎಂದರು. ಅವರೇ ತರಬೇತಿ ನೀಡುತ್ತೇವೆ ಎಂದು ಧೃತಿಯ ಬೆನ್ನು ತಟ್ಟಿ ಪ್ರೋತ್ಸಾಹ ನೀಡಿದರು. ನಂತರ ಇವರ ಪಯಣ ಹೀಗೆಯೇ ಮುಂದುವರಿಯಿತು ಮೊದಲನೆಯದಾಗಿ ಮಂತ್ರ ದೇವತೆ ಅಪ್ಪೆನ ಪೈಂಟಿಂಗ್ ಮಾಡಿದ ಇವರಿಗೆ ಡ್ಯಾನ್ಸ್ ಟೀಚರ್ ಸೂರಜ್ ಸನಿಲ್ ರವರ ಒಳ್ಳೆಯ ಪ್ರಶಂಸೆ ಪ್ರೋತ್ಸಾಹ ದೊರಕಿತು. ಈ ಪೈಂಟಿಂಗನ್ನು ಅಕ್ಷಯ ಕಲಶರಿಗೆ ತೋರಿಸಿದಾಗ ಅವರು ಅದನ್ನು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ಲಿ ಹಾಕಿ ಎಲ್ಲರ ಮನ ಮುಟ್ಟುವಂತೆ ಮಾಡಿದರು. ಮತ್ತು ನಮ್ಮ ಬಿಲ್ಲವೆರ್ ಪೇಜ್ ನ ವಿಜೇತ್ ಅಣ್ಣ ಅನೇಕ ಪೇಜ್ ನಲ್ಲಿ ಹಾಕಿದಾಗ ಇನ್ನಷ್ಟು ಪ್ರೇರಣೆ ಧೃತಿಗೆ ದೊರಕಿತು.

ಕೊರಗಜ್ಜ, ಕೋಟಿ ಚೆನ್ನಯ, ಅಪ್ಪೆ ಮಂತ್ರ ದೇವತೆ,ಅಪ್ಪೆ ಉಲ್ಲಾಲ್ದಿ ನ, ನಾರಾಯಣ ಗುರುಗಳ, ಅನೇಕ ಪ್ರಾಣಿ ಪಕ್ಷಿ ಗಳ ಚಿತ್ರವನ್ನು ಬಿಡಿಸಿ ತನ್ನ ಪ್ರತಿಭೆಯನ್ನು ಬೆಳೆಸುತ್ತಿದ್ದಾರೆ. ಇವರು ಬಿಡಿಸಿದ ಅನೇಕ ದೇವರುಗಳ ಚಿತ್ರವನ್ನು ನೋಡಿ ಮನಸೋತು ಅನೇಕರು ಖರೀದಿವನ್ನು ಮಾಡಿದ್ದಾರೆ.

ಹೀಗೆ ಈ ಪುಟಾಣಿಗೆ ಕಲೆಯ ಮೇಲಿರುವ ಆಸಕ್ತಿ ಹೀಗೆಯೇ ಮುಂದುವರಿಯಲಿ ಇನ್ನಷ್ಟು ಒಳ್ಳೆಯ ಚಿತ್ರ ಇವರ ಕೈಯಲ್ಲಿ ಮೂಡಿ ಬರಲಿ ಸರಸ್ವತಿ ದೇವಿಯ ಕೃಪೆ ಯಾವಾಗಲು ಧೃತಿಯ ಮೇಲಿರಲಿ ಇವರ ಕನಸು ನನಸಾಗಲಿ ಎಂದು ಹಾರೈಸುವ.

✍️ :ಪ್ರಶಾಂತ್ ಅಂಚನ್ ಮಸ್ಕತ್ತ್.


Related Posts

ಬಿಲ್ಲವರ ಉನ್ನತಿಯಲ್ಲಿ ನಾರಾಯಣ ಗುರುಗಳ ಪಾತ್ರ ಗುರುತರವಾದುದು ಡಾ.ಮುಕೇಶ್ ಕುಮಾರ್


Share        ಮುಂಬಯಿ ಒಂದು ಕಾಲದಲ್ಲಿ ಮೇಲ್ವರ್ಗದವರಿಂದ ಅಸ್ಪ್ರಶ್ಯರೆನಿಸಿಕೊಂಡು ಸಮಾಜದಿಂದ ಬಹಿಷ್ಕೃತರಾದ ಬಿಲ್ಲವರು ಶ್ರೀಮಂತವಾದ ಸಂಸ್ಕೃತಿಯ ಹಿನ್ನೆಲೆಯಿಂದ ಬಂದವರು. ದಾರ್ಶನಿಕ ನಾರಾಯಣ ಗುರುಗಳ ಮಾರ್ಗದರ್ಶನವನ್ನೇ ಸ್ಫೂರ್ತಿಯಾಗಿಸಿಕೊಂಡು ಹಲವಾರು ಸಂಘರ್ಷಗಳನ್ನು ಎದುರಿಸಿಯೂ ಬಿಲ್ಲರು ಉನ್ನತ ಸ್ಥಾನಮಾನವನ್ನು ಗಳಿಸಿಕೊಂಡರು.


Read More »

ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ


Share        ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ


Read More »

ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ ಕೋಟ್ಯಾನ್‌ಗೆ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ


Share        ವಿಕ ಸುದ್ದಿಲೋಕ ಮಂಗಳೂರು ಸೌಹಾರ್ದತೆ ಬಿಂಬಿಸುವ ವರದಿಗೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ‘ಬ್ಯಾಂಡ್ ಮಂಗಳೂರು’ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ


Read More »

ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಆಯ್ಕೆ


Share        ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದ ಬಿಂಬಿಸುವ ವರದಿಗೆ ನೀಡಲಾಗುವ “ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿಗೆ ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯಕೋಟ್ಯಾನ್ ಪಡು  ಆಯ್ಕೆಯಾಗಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ 2024 ಅಕ್ಟೋಬರ್


Read More »

ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್( ರಿ) ಇದರ ನೂತನ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ ಆಯ್ಕೆ


Share        ಶ್ರೀ ಕ್ಷೇತ್ರ ಗೆಜ್ಜೆಗಿರಿಯ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ  ಚಾರಿಟೇಬಲ್ ಟ್ರಸ್ಟ್(ರಿ) ಇದರ ನೂತನ ಅಧ್ಯಕ್ಷರಾಗಿ ಬಿರ್ವ ಸೆಂಟರ್ ಇದರ ಮಾಲಕರಾದ  ಕೆ ಸಂಜೀವ ಪೂಜಾರಿ ಇವರನ್ನು ಕಂಕನಾಡಿ ಬ್ರಹ್ಮ


Read More »

8ನೇ ವಯಸ್ಸಿನಲ್ಲಿ ಕಪೋತಾಸನದ ಭಂಗಿಯಲ್ಲಿ ವಿಶ್ವ ದಾಖಲೆ ಮಾಡಿದ ಬಾಲಕಿ ಕುಮಾರಿ ಶರಣ್ಯ ಶರತ್!


Share        ಮಂಗಳೂರು, ಜೂ. 20 ಪನ್ನೀರಿನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಶರಣ್ಯ ಶರತ್ ಅವರು ತನ್ನ ಎಂಟನೆಯ ವಯಸ್ಸಿನಲ್ಲಿ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್


Read More »