TOP STORIES:

ತನ್ನ 8ನೇ ವಯಸ್ಸಿನಲ್ಲಿಯೇ ಕಲಾ ಮಾತೆಯನ್ನು ಒಲಿಸಿಕೊಂಡ ಪುಟಾಣಿ ಧೃತಿ ಅಂಚನ್


ತನ್ನ 8ನೇ ವಯಸ್ಸಿನಲ್ಲಿಯೇ ಕಲಾ ಮಾತೆಯನ್ನು ಒಲಿಸಿಕೊಂಡ ಪುಟಾಣಿ ಧೃತಿ ಅಂಚನ್. ಪ್ರಸಾದ್ ಮತ್ತು ಶ್ವೇತಾ ದಂಪತಿಗಳ ಮೊದಲನೆ ಮಗಳು.

ಸಾಧನೆ ಮಾಡಲು ಆತ್ಮ ವಿಶ್ವಾಸ ಬಹಳ ಮುಖ್ಯ. ಆತ್ಮ ವಿಶ್ವಾಸ ಇಲ್ಲದಿದ್ದರೆ ಸಾಧನೆಯ ಗುರಿ ಸೇರಲು ಸಾಧ್ಯವಿಲ್ಲ. ಏನೇ ಅಡ್ಡಿ ಬಂದರು ಎದುರಿಸಿ ನಿಲ್ಲುತ್ತೇವೆ ಎನ್ನುವ ಛಲ ಇದ್ದರೆ ಮಾತ್ರ ಸಾಧನೆಯ ಹಾದಿಯಲ್ಲಿ ನಡೆಯಲು ಸಾಧ್ಯ.ಹೀಗೆ ತನ್ನ ಆತ್ಮ ವಿಶ್ವಾಸದಿಂದ ಸಾಧನೆಯ ಹಾದಿಯಲ್ಲಿ ನಡೆಯುತ್ತಿರುವ ಪುಟಾಣಿ ಪ್ರತಿಭೆ ಧೃತಿ ಅಂಚನ್

ಇವರು ತನ್ನ ವಿದ್ಯಾಭ್ಯಾಸವನ್ನು ಪರಿಜ್ಞಾನ ವಿದ್ಯಾಲಯ ಸೋಮೇಶ್ವರ್ ಉಳ್ಳಾಲ ಇಲ್ಲಿ ಮಾಡುತ್ತಿದ್ದಾರೆ. ಸಣ್ಣ ಪ್ರಾಯದಲ್ಲಿಯೇ ಕ್ಯಾನ್ವಾಸ್ ಪೈಂಟಿಂಗ್ನಲ್ಲಿ ಆಸಕ್ತಿ ಹೊಂದಿರುವ ಇವರಿಗೆ ಯಾವುದೇ ಪ್ರೋತ್ಸಾಹ ಇರಲಿಲ್ಲ ಆದರೂ ಪೈಂಟಿಂಗ್ ಮಾಡುವುದು ಬಿಡಲಿಲ್ಲ. ಇವರ ಈ ಆಸಕ್ತಿ ಗೆ ತಂದೆ ತಾಯಿ ಬೆನ್ನೆಲುಬಾಗಿ ನಿಂತರು.

ಲಾಕ್ಡೌನ್ ಟೈಮ್ ನ ಬಿಡುವಿನ ವೇಳೆಯಲ್ಲಿ ತನ್ನದೇ ರೀತಿಯಲ್ಲಿ ಅನೇಕ ಚಿತ್ರಕಲೆ ಬಿಡಿಸುತ್ತಿದ್ದರು.ಆ ಸಮಯದಲ್ಲಿ ಹಂನ್ಸಲ್ ಡಿಸೋಜ ಇವರು ಧೃತಿ ಕ್ಯಾನ್ವಾಸ್ ಪೈಂಟಿಂಗ್ ತುಂಬಾ ಚೆನ್ನಾಗಿ ಮಾಡುತ್ತಾಳೆ ಅವರತ್ರ ಒಂದು ಕ್ಯಾನ್ವಾಸ್ ಪೈಂಟಿಂಗ್ ಮಾಡಿಸಿ ಎಂದಾಗ,ಅವಾಗ ಧೃತಿಯ ತಾಯಿ ಅವಳು ಯಾವುದೇ ತರಬೇತಿ ಪಡೆದಿಲ್ಲ ಎಂದರು. ಅವರೇ ತರಬೇತಿ ನೀಡುತ್ತೇವೆ ಎಂದು ಧೃತಿಯ ಬೆನ್ನು ತಟ್ಟಿ ಪ್ರೋತ್ಸಾಹ ನೀಡಿದರು. ನಂತರ ಇವರ ಪಯಣ ಹೀಗೆಯೇ ಮುಂದುವರಿಯಿತು ಮೊದಲನೆಯದಾಗಿ ಮಂತ್ರ ದೇವತೆ ಅಪ್ಪೆನ ಪೈಂಟಿಂಗ್ ಮಾಡಿದ ಇವರಿಗೆ ಡ್ಯಾನ್ಸ್ ಟೀಚರ್ ಸೂರಜ್ ಸನಿಲ್ ರವರ ಒಳ್ಳೆಯ ಪ್ರಶಂಸೆ ಪ್ರೋತ್ಸಾಹ ದೊರಕಿತು. ಈ ಪೈಂಟಿಂಗನ್ನು ಅಕ್ಷಯ ಕಲಶರಿಗೆ ತೋರಿಸಿದಾಗ ಅವರು ಅದನ್ನು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ಲಿ ಹಾಕಿ ಎಲ್ಲರ ಮನ ಮುಟ್ಟುವಂತೆ ಮಾಡಿದರು. ಮತ್ತು ನಮ್ಮ ಬಿಲ್ಲವೆರ್ ಪೇಜ್ ನ ವಿಜೇತ್ ಅಣ್ಣ ಅನೇಕ ಪೇಜ್ ನಲ್ಲಿ ಹಾಕಿದಾಗ ಇನ್ನಷ್ಟು ಪ್ರೇರಣೆ ಧೃತಿಗೆ ದೊರಕಿತು.

ಕೊರಗಜ್ಜ, ಕೋಟಿ ಚೆನ್ನಯ, ಅಪ್ಪೆ ಮಂತ್ರ ದೇವತೆ,ಅಪ್ಪೆ ಉಲ್ಲಾಲ್ದಿ ನ, ನಾರಾಯಣ ಗುರುಗಳ, ಅನೇಕ ಪ್ರಾಣಿ ಪಕ್ಷಿ ಗಳ ಚಿತ್ರವನ್ನು ಬಿಡಿಸಿ ತನ್ನ ಪ್ರತಿಭೆಯನ್ನು ಬೆಳೆಸುತ್ತಿದ್ದಾರೆ. ಇವರು ಬಿಡಿಸಿದ ಅನೇಕ ದೇವರುಗಳ ಚಿತ್ರವನ್ನು ನೋಡಿ ಮನಸೋತು ಅನೇಕರು ಖರೀದಿವನ್ನು ಮಾಡಿದ್ದಾರೆ.

ಹೀಗೆ ಈ ಪುಟಾಣಿಗೆ ಕಲೆಯ ಮೇಲಿರುವ ಆಸಕ್ತಿ ಹೀಗೆಯೇ ಮುಂದುವರಿಯಲಿ ಇನ್ನಷ್ಟು ಒಳ್ಳೆಯ ಚಿತ್ರ ಇವರ ಕೈಯಲ್ಲಿ ಮೂಡಿ ಬರಲಿ ಸರಸ್ವತಿ ದೇವಿಯ ಕೃಪೆ ಯಾವಾಗಲು ಧೃತಿಯ ಮೇಲಿರಲಿ ಇವರ ಕನಸು ನನಸಾಗಲಿ ಎಂದು ಹಾರೈಸುವ.

✍️ :ಪ್ರಶಾಂತ್ ಅಂಚನ್ ಮಸ್ಕತ್ತ್.


Related Posts

ರಾಜ್ಯದಲ್ಲಿ ರಚನೆಯಾಗಲಿರುವ ನೂತನ ಸಚಿವ ಸಂಪುಟ ಸಚಿವ ಸಂಪುಟದಲ್ಲಿ ಬಿಲ್ಲವ ಸಮಾಜಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕು


Share         ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡಬೇಕು ಬಿಲ್ಲವ ಸಮಾಜಕ್ಕೆ ನ್ಯಾಯಯುತ ಪ್ರಾತಿನಿಧ್ಯ ಒದಗಿಸಬೇಕು ಸೋಲೂರು ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಗ್ರಹ ರಾಜ್ಯದಲ್ಲಿ ರಚನೆಯಾಗಲಿರುವ


Read More »

ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಅಶೋಕ್ ಪೂಜಾರಿ ಪುನಾರಾಯ್ಕೆ


Share         ಕುಂದಾಪುರ, ಮೇ 24: ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರ ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ರವಿವಾರ ಶ್ರೀ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ಜರಗಿತು. ಕುಂದಾಪುರ ಬಿಲ್ಲವ ಸಮಾಜ ಸೇವಾ


Read More »

ನಿಸ್ವಾರ್ಥ ಸೇವೆ ಸಲ್ಲಿಸಿ “ಜನಸ್ನೇಹಿ ಪೊಲೀಸ್” ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನಮ್ಮ ಸಮಾಜದ ಹೆಮ್ಮೆ ಎಸಿಪಿ ಶ್ರೀ ಎಸ್. ಮಹೇಶ್ ಕುಮಾರ್


Share         ಶ್ರೀ ಎಸ್. ಮಹೇಶ್ ಕುಮಾರ್ ಅವರು ಕಳೆದ 25 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ “ಜನಸ್ನೇಹಿ ಪೊಲೀಸ್” ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವುದು ಅವರ ಕರ್ತವ್ಯನಿಷ್ಠೆ ಮತ್ತು ಮಾನವೀಯತೆಯ ಪ್ರತೀಕವಾಗಿದೆ. 2012ರಲ್ಲಿ


Read More »

10ನೇ ಅಖಿಲ ಭಾರತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಭಾರತ್ ಬ್ಯಾಂಕಿಗೆ ಪ್ರತಿಷ್ಠಿತ ಲೀಡಿಂಗ್ ಬ್ಯಾಂಕ್ ಅವಾರ್ಡ್.


Share         ಪುಣೆಯ ಕೊರೆಗಾಂವ್ ಪಾರ್ಕ್‌ನ ಹೋಟೆಲ್ ವೆಸ್ಟಿನ್‌ನಲ್ಲಿ ನಡೆದ 10ನೇ ಅಖಿಲ ಭಾರತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಭಾರತ್ ಬ್ಯಾಂಕಿಗೆ ಪ್ರತಿಷ್ಠಿತ “ಲೀಡಿಂಗ್ ಬ್ಯಾಂಕ್ ಅವಾರ್ಡ್” (Leading Bank Award) ನೀಡಿ ಗೌರವಿಸಲಾಯಿತು.


Read More »

ಕುದ್ರೋಳಿ ಗೋಕರ್ಣ ಕ್ಷೇತ್ರ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪದ್ಮರಾಜ್ ಆರ್. ಸ್ಪಷ್ಟನೆ


Share         ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ನಿರ್ವಹಣೆಗೆ ಪ್ರಸ್ತುತ ಇರುವ ಸಮಿತಿಯ ಹೊರತಾಗಿ ಯಾವುದೇ ಹೊಸ ಸಮಿತಿ ರಚನೆಯಾಗಿಲ್ಲ ಎಂದು ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಶನಿವಾರ ಇಲ್ಲಿ ತಿಳಿಸಿದರು. ಕ್ಷೇತ್ರದ ಅಭಿವೃದ್ಧಿ


Read More »

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »