TOP STORIES:

ತುಳುನಾಡಿನ ದೈವಾರಾಧನೆ, ಭೂತಾರಾಧನೆ ಫೋಟೋ ವಿಡಿಯೋ ತೆಗೆಯುವವರೇ ಎಚ್ಚರ


ಮಂಗಳೂರು (ಜ. 12):  ತುಳುನಾಡಿನ ದೈವಾರಾಧನೆ ಮತ್ತು ಭೂತಾರಾಧನೆ ವೇಳೆ ಫೋಟೋ ವಿಡಿಯೋ ತೆಗೆಯುವವರೇ ಎಚ್ಚರ. ಇನ್ನು ಮುಂದೆ ಕರಾವಳಿಯ ದೈವ-ದೇವರುಗಳ ಆರಾಧನೆಯ ವೇಳೆ ಚಿತ್ರೀಕರಣ ನಡೆಸದಂತೆ ಹೊಸ ನಿಯಮ ಜಾರಿಗೆ ಬರಲಿದೆ!ಮಂಗಳೂರಿನಲ್ಲಿ ದೈವಗಳ ಅವಹೇಳನದ ಬೆನ್ನಲ್ಲೇ ಹಿಂದೂಪರ ಸಂಘಟನೆಗಳು ಈ ನಿಯಮ ಜಾರಿಗೆ ಒತ್ತಾಯಿಸಿದ್ದು, ಸದ್ಯದಲ್ಲೇ ದೇವಸ್ಥಾನಗಳ ಆಡಳಿತ ಮಂಡಳಿ ಮೂಲಕ ನಿಯಮ ಜಾರಿಗೆ ತರಲು ಸಿದ್ಧತೆ ನಡೆಸಿದೆ.

ಸದ್ಯ ಕರಾವಳಿ ಭಾಗದಲ್ಲಿ ಫೇಸ್ಬುಕ್, ವಾಟ್ಸಾಪ್ ತೆರೆದರೆ ಸಾಕು ಮೊದಲಿಗೆ ಕಣ್ಣಿಗೆ ಬೀಳುವುದೇ ತುಳುನಾಡಿನ ಅತ್ಯಂತ ನಂಬಿಕೆಯ ದೈವಾರಾಧನೆ ಮತ್ತು ಹತ್ತಾರು ದೈವಗಳ ಫೋಟೋಗಳು. ಇದರ ಜೊತೆಗೆ ತುಳುನಾಡಿನ ನಂಬಿಕೆಯ ನೂರಾರು ದೈವಗಳ ಹೆಸರಲ್ಲಿ ಸಾವಿರಾರು ಫೇಸ್ಬುಕ್ ಪೇಜ್ ಗಳು, ಗ್ರೂಪ್ ಸೇರಿದಂತೆ ಒಂದಷ್ಟು ಖಾತೆಗಳು ಚಾಲ್ತಿಯಲ್ಲಿವೆ. ದಿನ ಬೆಳಗಾದರೆ ಸಾಕು ಸೋಶಿಯಲ್ ಮೀಡಿಯಾದಲ್ಲಿ ತುಳುನಾಡಿನ ದೈವಗಳನ್ನು ಚಿತ್ರವಿಚಿತ್ರವಾಗಿ ಸಂಬಂಧವಿಲ್ಲದ ಮ್ಯೂಸಿಕ್ ಗಳನ್ನು ಸೇರಿಸಿ ಸಾಮಾಜಿಕ ತಾಣಗಳಲ್ಲಿ ಹರಿಬಿಡಲಾಗುತ್ತಿದೆ. ಇದರ ಜೊತೆಗೆ ಒಂದಿಷ್ಟು ಟ್ರೋಲ್ ಪೇಜ್ ಗಳಲ್ಲಿ ತಮಾಷೆಯ ವಸ್ತುವಾಗಿಯೂ ಈ ದೈವದ ಫೋಟೋ ಮತ್ತು ವಿಡಿಯೋಗಳು ಬಳಕೆಯಾಗ್ತಿದೆ. ಈ ಮಧ್ಯೆ ಇದನ್ನೇ ಬಳಸಿಕೊಂಡ ಅನ್ಯ ಧರ್ಮೀಯರು ಕೂಡ ದೈವಗಳ ಅವಹೇಳನಕ್ಕೆ ಇಳಿದಿದ್ದು, ವಿಟ್ಲದ ಸಾಲೆತ್ತೂರಿನಲ್ಲಿ ನಡೆದ ಕೊರಗಜ್ಜ ದೈವದ ವೇಷ ಹಾಕಿದ ಘಟನೆ ಸದ್ಯ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಹೊಸತಾಗಿ ಮದುವೆಯಾದ ಯುವಕ ಸಾಲೆತ್ತೂರಿನ ಹೆಣ್ಣಿನ ಮನೆಗೆ ಬರುವಾಗ ಕೊರಗಜ್ಜನ ವೇಷ ತೊಟ್ಟು ಅಸಭ್ಯವಾಗಿ ವರ್ತಿಸೋ ಮೂಲಕ ಹಿಂದೂ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದ. ಸದ್ಯ ಈ ವಿಚಾರ ಕರಾವಳಿಯಲ್ಲಿ ಎರಡು ಧರ್ಮಗಳ ಮಧ್ಯೆ ಸಂಘರ್ಷಕ್ಕೆ ಕಾರಣವಾಗಿದ್ದರೂ ಸ್ವತಃ ಮುಸ್ಲಿಂ ಧರ್ಮಗುರುಗಳೇ ಇದನ್ನ ಖಂಡಿಸಿದ್ದಾರೆ. ಅಲ್ಲದೇ ಅನ್ಯಧರ್ಮೀಯರೂ ತುಳುನಾಡಿನ ಆರಾಧ್ಯ ದೈವಗಳನ್ನ ಈ ರೀತಿ ಚಿತ್ರಿಸೋಕೆ ಕಾರಣ ಕೆಲ ಹಿಂದೂಗಳೇ ದೈವಗಳ ಹೆಸರಲ್ಲಿ ಅನಗತ್ಯ ಫೋಟೋ, ವಿಡಿಯೋ ಎಡಿಟ್ ಮಾಡ್ತಿರೋದು ಅನ್ನೋ ಆರೋಪವೂ ಇದೆ. ತುಳುನಾಡಿನಲ್ಲಿ ನಡೆಯೋ ಭೂತ ಕೋಲ, ನೇಮೋತ್ಸವ, ದೈವಾರಾಧನೆ ವೇಳೆ ದೈವಗಳ ಕುಣಿತ, ಆರಾಧನಾ ಕ್ರಮ, ನುಡಿಗಳನ್ನ ವಿಡಿಯೋ ಅಥವಾ ಫೋಟೋ ತೆಗೆದು ಹಲವರು ಸೋಶಿಯಲ್ ಮೀಡಿಯಾಗಳಲ್ಲಿ ಹರಿ ಬಿಡ್ತಿದಾರೆ.

ರೂಪವೇ ಇಲ್ಲದ. ದೈವಗಳಿಗೆ ಆರಾಧನೆ ವೇಳೆ ಪಾತ್ರಿಗಳು ಕಟ್ಟುವ ರೂಪಗಳನ್ನೇ ದೈವದ ಹೆಸರಿನಲ್ಲಿ ಸೋಶಿಯಲ್ ಮೀಡಿಯಾಗಳ ಮೂಲಕ ಮ್ಯೂಸಿಕ್ ಸೇರಿಸಿ ಹರಿ ಬಿಡಲಾಗ್ತಿದೆ. ಹಲವು ವರ್ಷಗಳ ಹಿಂದೆ ದೈವಗಳ ರೂಪ, ಆಕಾರಗಳ ಹೊರತಾಗಿಯೂ ಹಿಂದಿನ ಸಂಪ್ರದಾಯದಂತೆ ಆರಾಧನೆ ನಡೆಯುತ್ತಿತ್ತು. ಆದರೆ ಇದೀಗ ಮೊಬೈಲ್ ಫೋಟೋ, ವಿಡಿಯೋಗಳ ಮೂಲಕ ಕೆಟ್ಟ ಪರಿಪಾಠ ಬೆಳೆದಿದೆ. ಇದರಿಂದಲೇ ಅವುಗಳನ್ನು ನೋಡಿ ಅನ್ಯ ಧರ್ಮದವರು ಕೂಡ ಅಸಭ್ಯವಾಗಿ ವ್ಯಂಗ್ಯ ‌ಮಾಡಿ ಕೊರಗಜ್ಜ ಸೇರಿ ಇತರೆ ದೈವಗಳನ್ನ ಹಾಸ್ಯಕ್ಕೆ ಬಳಸೋ ಆರೋಪವಿದೆ. ಇದೇ ಕಾರಣಕ್ಕೆ ವಿಶ್ವಹಿಂದೂ ಪರಿಷತ್ ಬಜರಂಗದಳ ದೇವಸ್ಥಾನಗಳಲ್ಲಿ ಫೋಟೋ ಮತ್ತು ವಿಡಿಯೋ ನಿಷೇಧಿಸುವ ನಿಯಮ ತರಲು ಆಗ್ರಹಿಸಿದ್ದು,ಎಲ್ಲಾ ಸಿದ್ದತೆ ‌ನಡೆಸಿದೆ..

ಸದ್ಯ ಕರಾವಳಿಯ ಕೆಲ ದೈವಸ್ಥಾನ ಮತ್ತು ದೇವಸ್ಥಾನಗಳಲ್ಲಿ ಫೋಟೋ ಮತ್ತ್ತು ವಿಡಿಯೋ ನಿಷೇಧವಿದ್ದರೂ ಹಲವೆಡೆ ಇದಕ್ಕೆ ನಿರ್ಬಂಧ ಇಲ್ಲ. ದೈವಾರಾಧನೆ ಹಾಗೂ ನೇಮೋತ್ಸವದ ವೇಳೆ ಚಿತ್ರೀಕರಣದ ಅವಕಾಶ ಇದೆ. ಆದರೆ ವಿಟ್ಲದ ಘಟನೆ ಬಳಿಕ ಹಿಂದೂ ಪರ ಸಂಘಟನೆಗಳು ಎಚ್ಚೆತ್ತುಕೊಂಡಿದ್ದು, ಕರಾವಳಿಯ ಸಾವಿರಕ್ಕೂ ಹೆಚ್ಚು ದೈವಸ್ಥಾನಗಳಲ್ಲಿ ಚಿತ್ರೀಕರಣ ನಿಷೇಧದ ನಿಯಮ ರೂಪಿಸಲು ಒತ್ತಾಯಿಸಿದೆ. ಅದರ ಮುಂದಿನ ಭಾಗವಾಗಿ ಸದ್ಯ ಸಂಘಟನೆ ಜಾಗೃತಿ ಕಾರ್ಯಕ್ಕೆ ಮುಂದಾಗಿದ್ದು, ಎಲ್ಲಾ ದೈವಸ್ಥಾನಗಳ ಆಡಳಿತ ಮಂಡಳಿಯನ್ನ ಸಂಪರ್ಕಿಸಿದೆ.

ಅದರಂತೆ ಭೂತ, ನೇಮ ನಡೆಯುವಾಗ ಮತ್ತು ಉಳಿದ ಸಮಯದಲ್ಲೂ ದೈವಸ್ಥಾನಗಳ ಎದುರು ಬ್ಯಾನರ್ ಅಳವಡಿಸಿ ಚಿತ್ರೀಕರಣ ನಿಷೇಧಿಸಲು ನಿಯಮ ರೂಪಿಸಲು ಮುಂದಾಗಿದೆ. ಬಹುತೇಕ ಎಲ್ಲಾ ದೈವಸ್ಥಾನಗಳ ಆಡಳಿತ ಮಂಡಳಿಗಳು ಇದಕ್ಕೆ ಒಪ್ಪಿಗೆ ಸೂಚಿಸಿದ್ದು, ಮುಂದಿನ ತಿಂಗಳಿನಿಂದ ಜಾರಿಗೆ ಬರೋ ಸಾಧ್ಯತೆಯಿದೆ. ಈ ಮೂಲಕ ದೈವಾರಾಧನೆ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿ ಮತ್ತೊಬ್ಬರ ಹಾಸ್ಯದ ವಸ್ತುವಾಗುವುದನ್ನ ತಪ್ಪಿಸಲು ಹಿಂದೂ ಪರ ಸಂಘಟನೆಗಳು ಮುಂದಾಗಿದೆ.

ಇದಕ್ಕೂ ಮೊದಲು ತುಳುನಾಡಿನ ಸಂಘಟನೆಯೊಂದು ದೈವಾರಾಧನೆ ಪ್ರಚಾರ ಮಾಡುವ 72  ಸೋಶಿಯಲ್ ಮೀಡಿಯಾ ಪೇಜ್ ಗಳ ವಿರುಧ್ಧ ಪ್ರಕರಣ ದಾಖಲಿಸಿತ್ತು. ಇಷ್ಟಾದರೂ ಕೆಲವರು ದೈವ ನರ್ತನದ ವಿಡಿಯೋ ಮಾಡಿ ಅದಕ್ಕೆ ಬೇರೆ ಸಿನಿಮಾ ಹಾಡುಗಳನ್ನ ಬಳಸಿ ಎಡಿಟ್ ಮಾಡಿ ಸಾಮಾಜಿಕ ತಾಣಗಳಲ್ಲಿ ಕೆಟ್ಟದಾಗಿ ಚಿತ್ರಿಸುತ್ತಿದ್ದರು. ಇದರ ಪರಿಣಾಮವೇ ಅನ್ಯ ಧರ್ಮೀಯರು ಹಾಗೂ ಬೇರೆ ಜಿಲ್ಲೆಯ ಜನರು ಕೂಡ ತುಳುನಾಡಿನ ಆರಾಧ್ಯ ದೈವಗಳನ್ನ ಕೆಟ್ಟದಾಗಿ ಚಿತ್ರಿಸುತ್ತಿದ್ದಾರೆ ಅನ್ನೋದು ಸಂಘಟನೆಗಳ ವಾದ. ಇನ್ನು ಸಂಘಟನೆಗಳ ಈ ನಡೆಯ ಬಗ್ಗೆ ದ.ಕ ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಸಹಮತ ವ್ಯಕ್ತಪಡಿಸಿದ್ದು, ಆದ್ರೆ ಈ‌ ನಿಷೇಧ ವಿಚಾರ ಆಯಾ ದೈವಸ್ಥಾನದ ಆಡಳಿತ ಮಂಡಳಿಗೆ ಬಿಟ್ಟದ್ದು ಅಂದಿದ್ದಾರೆ.


Related Posts

ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ


Share        ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ


Read More »

ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ ಕೋಟ್ಯಾನ್‌ಗೆ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ


Share        ವಿಕ ಸುದ್ದಿಲೋಕ ಮಂಗಳೂರು ಸೌಹಾರ್ದತೆ ಬಿಂಬಿಸುವ ವರದಿಗೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ‘ಬ್ಯಾಂಡ್ ಮಂಗಳೂರು’ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ


Read More »

ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಆಯ್ಕೆ


Share        ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದ ಬಿಂಬಿಸುವ ವರದಿಗೆ ನೀಡಲಾಗುವ “ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿಗೆ ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯಕೋಟ್ಯಾನ್ ಪಡು  ಆಯ್ಕೆಯಾಗಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ 2024 ಅಕ್ಟೋಬರ್


Read More »

ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್( ರಿ) ಇದರ ನೂತನ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ ಆಯ್ಕೆ


Share        ಶ್ರೀ ಕ್ಷೇತ್ರ ಗೆಜ್ಜೆಗಿರಿಯ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ  ಚಾರಿಟೇಬಲ್ ಟ್ರಸ್ಟ್(ರಿ) ಇದರ ನೂತನ ಅಧ್ಯಕ್ಷರಾಗಿ ಬಿರ್ವ ಸೆಂಟರ್ ಇದರ ಮಾಲಕರಾದ  ಕೆ ಸಂಜೀವ ಪೂಜಾರಿ ಇವರನ್ನು ಕಂಕನಾಡಿ ಬ್ರಹ್ಮ


Read More »

8ನೇ ವಯಸ್ಸಿನಲ್ಲಿ ಕಪೋತಾಸನದ ಭಂಗಿಯಲ್ಲಿ ವಿಶ್ವ ದಾಖಲೆ ಮಾಡಿದ ಬಾಲಕಿ ಕುಮಾರಿ ಶರಣ್ಯ ಶರತ್!


Share        ಮಂಗಳೂರು, ಜೂ. 20 ಪನ್ನೀರಿನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಶರಣ್ಯ ಶರತ್ ಅವರು ತನ್ನ ಎಂಟನೆಯ ವಯಸ್ಸಿನಲ್ಲಿ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್


Read More »

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾಗಿ ಎಚ್.ಎಸ್.ಜಯರಾಜ್ ಆಯ್ಕೆ


Share        ಮಂಗಳೂರು: ಬ್ರಹ್ಮಶ್ರೀ ನಾರಾಯಣಗುರುಗಳು ಪ್ರತಿಷ್ಠಾಪಿಸಿದ ಕರ್ನಾಟಕದ ಏಕೈಕ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಆಡಳಿತ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ಜಂಟಿ ಸಭೆ ಕೇಂದ್ರದ ಮಾಜಿ ಸಚಿವ


Read More »