TOP STORIES:

FOLLOW US

ತುಳುನಾಡಿನ ಸೇವಾ ಮಾಣಿಕ್ಯ ಸತೀಶ್ ಉಳ್ಳಾಲ್ ದುಬೈ


 

ನಮ್ಮ ತುಳುನಾಡಿನಲ್ಲಿ ಅದೆಷ್ಟೋ ಸೇವಾ ಸಾಧಕರಿದ್ದಾರೆ. ಇವತ್ತು ನಾವು ಪರಿಚಯ ಮಾಡುವ ಸೇವಾ ಮಾಣಿಕ್ಯ ಸತೀಶ್ ಉಳ್ಳಾಲ್ ದುಬೈ.

ಶ್ರೀ ಬಂಟಪ್ಪ ಪೂಜಾರಿ ಮತ್ತು ಶ್ರೀಮತಿ ಮುತ್ತು ಪೂಜಾರಿ ದಂಪತಿಗಳ ಮುದ್ದಿನ ಮೂರನೇ ಮಗ ಸತೀಶ್ ಉಳ್ಳಾಲ್, ಇವರು ಪ್ರಾಥಮಿಕ ಶಿಕ್ಷಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉಳ್ಳಾಲ ಮತ್ತು ಪ್ರೌಢ ಶಿಕ್ಷಣವನ್ನು ಭಾರತ್ ಪ್ರೌಢ ಶಾಲೆಯಲ್ಲಿ ಉನ್ನತ ಶ್ರೇಣಿಯಲ್ಲಿ ಮುಗಿಸಿರುವರು,ವೃತ್ತಿ ಶಿಕ್ಷಣವನ್ನು (ಡ್ರಾಫ್ಟ್ ಮೆಕ್ಯಾನಿಕ್ )ಕೈಗಾರಿಕ ತರಬೇತಿ ಕೇಂದ್ರ ಕದ್ರಿಯಲ್ಲಿ ಮಾಡಿದರು, 1988ರಲ್ಲಿ ಆಂಗ್ಲ ಭಾಷೆ ಬೆರಳಚ್ಚು ಪರೀಕ್ಷೆಯಲ್ಲಿ ಪ್ರಥಮ ಸ್ಥಾನವನ್ನು ಮುಡಿಗೇರಿಸಿಕೊಂಡರು, ಅದಲ್ಲದೆ ಭಾರತನಾಟ್ಯ ಕಲಾವಿದರು ಆಗಿರುವರು. 1994 ರಲ್ಲಿ ಜ್ಯೋತಿ ಕಾಲೇಜ್ ನಲ್ಲಿ ನಡೆದ ಜೂನಿಯರ್ ವಿಭಾಗದ ಪರೀಕ್ಷೆಯನ್ನು ಬರೆದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ, ಮಂಗಳೂರಿನ ಪುರಭವನ, ಹಾಗೂ ಉಡುಪಿಯ ಹಲವಾರು ಕಡೆ ಪ್ರದರ್ಶನ ನೀಡಿ ಜನ ಮೆಚ್ಚುಗೆ ಗಳಿಸಿದ್ದಾರೆ.

ಇವರು ತನ್ನ ವಿದ್ಯಾಭ್ಯಾಸ ಮುಗಿಸಿದ ನಂತರ ಜೀವನಕ್ಕಾಗಿ ಪ್ರೈವೇಟ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡರು, ನಂತರ “ಮಝಗಾಂ ಡಾಕ ” 11ವರ್ಷ ಸೇವೆಯನ್ನು ಸಲ್ಲಿಸಿದ ಇವರು 1995ರಲ್ಲಿ ಅಮೇರಿಕಾ ಮೂಲದ “ಮೆಕ್ಡರ್ ಮೋಟ್ ” ಎಂಬ ಸಂಸ್ಥೆಯಲ್ಲಿ ಸೀನಿಯರ್ ಪ್ರಿನ್ಸಿಪಾಲ್ ಡಿಸೈನರ್ ಆಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಇವರು ಕೇವಲ ತನ್ನ ಏಳಿಗೆಗಾಗಿ ಮಾತ್ರವಲ್ಲದೆ ಸಮಾಜದ ಏಳಿಗೆಯನ್ನು ಬಯಸಿ ಸಮಾಜ ಸೇವೆಯ ಮಾಡುತ್ತ ಒಬ್ಬ ಸಮಾಜದಲ್ಲಿ ಓರ್ವ ಉತ್ತಮ ವ್ಯಕ್ತಿ ಎಂದೆನಿಸಿಕೊಂಡಿರುವರು

ಉಳ್ಳಾಲದ ಗೋಕರ್ಣನಾಥ ಸಂಘದಲ್ಲಿ 10 ವರ್ಷ ಸೇವೆ, ಬಿಲ್ಲವಾಸ್ ದುಬೈ ಸಂಘದಲ್ಲಿ ಸಕ್ರಿಯ ಕಾರ್ಯಕರ್ತರಾಗಿ 16 ವರ್ಷ ಸೇವೆ, ಪ್ರಸ್ತುತ ಅಭಿರುದ್ದಿ ಅಧಿಕಾರಿಯಾಗಿ ಸಂಘದ ಮುಖಾಂತರ ಅನೇಕ ಬಡ ವಿದ್ಯಾರ್ಥಿಗಳಿಗೆ ಹಣದ ಸಹಾಯ ಮಾಡುವುದರಲ್ಲಿ ಮೊದಲಿಗರು ಆಗಿರುತ್ತಾರೆ. ಬಿರ್ವೆರ್ ಕುಡ್ಲ ದುಬೈ ವಿಂಗ್ ಎಸ್ಕ್ಯೂಟ್ ಆಗಿ, ಮಂಗಳೂರು ಫ್ರೆಂಡ್ಸ್ ದುಬೈ ದೋಸ್ತಿ ಸಂಘದಲ್ಲಿ ಅಧ್ಯಕ್ಷರು ಆಗಿ, ದುಬೈ ವರಮಹಾಲಕ್ಷ್ಮಿ ಪೂಜೆಯ ಸಮಿತಿ ಸ್ಥಾಪಕರಾಗಿ, ಯಕ್ಷಗಾನ ಕೂಟ, ನಾಟಕ ರಂಗ ಧ್ವನಿ ಪ್ರತಿಷ್ಠಾನ, ಯಕ್ಷ ಮಿತ್ರರು, ಗಮ್ಮತ್ ಕಲಾವಿದರು, ತುಳು ಪಾತೆರ್ಗ ತುಳು ಒರಿಪಾಗ ಪ್ರಸ್ತುತ ಬಿಲ್ಲವಾಸ್ ದುಬೈ ಇದರ ವಾಯ್ಸ್ ಪ್ರೆಸಿಡೆಂಟ್ ಆಗಿ ಹೀಗೆಯೇ ಅನೇಕ ಸಂಘ ಸಂಸ್ಥೆಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ

ಇವರು ಮಾಡಿರುವ ಸೇವೆಗೆ ಅನೇಕ ಗೌರವ ಸನ್ಮಾನವನ್ನು ಪಡೆದಿರುತ್ತಾರೆ. ಉಲ್ಲಾಳೆರೆನ ಶ್ರೀ ನಾರಾಯಣ ಗುರು ಸಂಘ ಕಾಟಿಪಳ್ಳ, ವೀರನಾರಾಯಣ ಗೇಮ್ಸ್ ಟೀಮ್ ಕುಲಶೇಖರ, ಬಿಲ್ಲವಾಸ್ ಸಂಘ ದುಬೈ, ಶ್ರೀ ಗುರು ಚಾರಿಟೇಬಲ್ ಟ್ರಸ್ಟ್ ಸುರತ್ಕಲ್ ಇಂತಹ ಹಲವಾರು ಸಂಸ್ಥೆಗಳಿಂದ ಸನ್ಮಾನಕ್ಕೆ ಭಾಜನರಾಗಿರುತ್ತಾರೆ.
ನಟನೆಯಲ್ಲಿ ಆಸಕ್ತಿ ಹೊಂದಿರ ಇವರು ಕಲಾ ಪೋಷಕರು ಆಗಿ ಪ್ರತಿಭೆಗಳಿಗೆ ಬೆನ್ನು ತಟ್ಟಿ ಪ್ರೋತ್ಸಾಹ ಕೊಟ್ಟು ಸರಸ್ವತಿಯ ಸೇವೆಯನ್ನು ಮಾಡುತ್ತಾ ಇರುವರು
ಬಿಲ್ಲವ ಸಮಾಜ ಏಳಿಗೆ ಮಾತ್ರ ಅಲ್ಲದೆ ಎಲ್ಲಾ ಸಮಾಜದಲ್ಲಿಯೂ ತನ್ನ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ್ದಾರೆ
ಇಷ್ಟು ಮಾತ್ರ ಅಲ್ಲದೆ ಗೆಳೆಯರ ಜೊತೆ ಸೇರಿ 6ಹೆಣ್ಣು ಮಕ್ಕಳಿಗೆ ಮದುವೆಗೆ ಮಾಂಗಲ್ಯ ಸರ ಮತ್ತು ಹಣದ ಸಹಾಯ ಮಾಡಿರುವರು, ಅದೆಷ್ಟೋ ಕೂಲಿ ಕಾರ್ಮಿಕರಿಗೆ ಸರಿಯಾದ ಕೆಲಸ ಸಿಗುವ ವರೆಗೆ ಸಂಪೂರ್ಣ ಖರ್ಚು ಶ್ರೀಯುತರು ನೋಡಿಕೊಂಡಿರುತ್ತಾರೆ.
ಹೊರದೇಶದಲ್ಲಿ ತುಳುನಾಡಿನ ಆಚಾರ ವಿಚಾರಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಜನ ಮನ ಗೆದ್ದಿದ್ದ ಇವರು 2012ರಲ್ಲಿ “ಅಪ್ಪೆ ಭಾಷೆ” ಪುಸ್ತಕ 6 ಜನ ಫ್ರೆಂಡ್ಸ್ ಸೇರಿ 2000 ಪುಸ್ತಕ ಬಿಡುಗಡೆ ಮಾಡಿ ಜನರಿಂದ “ತುಳುವ ಮಾಣಿಕ್ಯ” ಎಂಬ ಬಿರುದು ಪಡೆದರು.ದುಬೈನಲ್ಲಿ ನಡೆದ ತುಳು ಪರ್ಬ ಎಂಬ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಸ್ಪರ್ಧೆ ಇವರ ಟೀಮ್ ಬಿಲ್ಲವಾಸ್ ದುಬೈ ಪ್ರಥಮ ಸ್ಥಾನ ಪಡೆದಿರುತ್ತದೆ.

ಕೋರೋಣದಿಂದ ಇಡಿ ಜಗತ್ತೇ ತತ್ತರಿಸಿ ಹೋದ ಸಮಯದಲ್ಲಿ ದುಬೈನಲ್ಲಿ ಬ್ಲಡ್ ಸೆಂಟರ್ ರಕ್ತದ ಅವಶ್ಯಕತೆ ಇರುವಾಗ 60ಜನರ ಕರೆದುಕೊಂಡು ಹೋಗಿ ರಕ್ತದಾನ ಮಾಡಿಸುವಲ್ಲಿ ಯಶಸ್ವೀಯಾಗಿರುವರು
ಮುಗ್ದ ಮನಸ್ಸಿನ ಇವರು ಮಾಡೋ ಸೇವೆಗೆ ತುಳುನಾಡು, ತುಳುಭಾಷೆ ಮೇಲಿರುವ ಅಭಿಮಾನಕ್ಕೆ ದೇವರ ಅನುಗ್ರಹ ಸದಾ ಇರಲಿ ಕಟೀಲು ದುರ್ಗಾ ಪರಮೇಶ್ವರಿ ಅಮ್ಮ ಇವರಿಗೆ ಆರೋಗ್ಯ ಆಯುಷ್ಯ, ಸಂಪತ್ತು, ಎಲ್ಲಾ ಕೊಟ್ಟು ಕಾಪಾಡಲಿ ಇವರ ಸೇವೆ ಹೀಗೆಯೇ ಮುಂದುವರಿಯಲಿ ಎಂದು ಹಾರೈಸುವ

 

ಬರಹ:✍️ ಪ್ರಶಾಂತ್ ಅಂಚನ್ ಮಸ್ಕತ್ತ್


Share:

More Posts

Category

Send Us A Message

Related Posts

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »

ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ


Share       ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ ಡಾ. ಪವಿತ್ರ ಜಿ. ಪಿ. ಹಾಗೂ ಪ್ರವೀಣ್ ಬಿ.ಎಮ್  ರವರ ಮಾರ್ಗದರ್ಶನದಲ್ಲಿ  ಡಾ. ರಶ್ಮಿ ಹರ್ಷ ಪೂಜಾರಿ ಇವರು ರಸಾಯನ ಶಾಸ್ತ್ರ ವಿಭಾಗದಲ್ಲಿ


Read More »

ದುಬೈಯಲ್ಲಿ ಯಶಸ್ವಿ ಉದ್ಯಮಿಯಾಗಿ ಲೆಕ್ಕವಿಲ್ಲದಷ್ಟು ಸೇವೆಯನ್ನು ಸಮಾಜಕ್ಕೆ ಅರ್ಪಿಸುತ್ತಿರು ಸೇವಾ ಮಾಣಿಕ್ಯ ನಿಟ್ಟೆ ಸಂದೀಪ್ ಕೋಟ್ಯಾನ್ ಕಾರ್ಕಳ..!


Share       ಅನೇಕ ಜನ ಉದ್ಯಮ ಕ್ಷೇತ್ರದ ಯಶಸ್ವಿಯಾಗಿ ಮುಂದುವರೆದ ಉದ್ಯಮಿಗಳು ಪ್ರಸ್ತುತ ದಿನಗಳಲ್ಲಿ ಸಿಗುತ್ತಾರೆ, ಆದರೆ ತಾವು ಸಂಪಾದಿಸಿರುವ ಹಣವನ್ನು ಮಾತ್ರ ಸಮಾಜದಲ್ಲಿ ಕೇವಲ ಕಾರ್ಯಕ್ರಮ ಮನೊರಂಜನೆಗಳಿಗೆ ಬಳಸಿ ರಾಜಕೀಯ ನಾಯಕರು, ಉದ್ಯಮಿಗಳನ್ನು ಕರೆದು


Read More »

ಮಂಗಳೂರಿನ ಖ್ಯಾತ ಯುರೋಲಜಿಸ್ಟ್ ಡಾ. ಸದಾನಂದ ಪೂಜಾರಿಯವರಿಗೆ ಪ್ರೈಡ್ ಆಫ್ ನ್ಯಾಷನ್ ಅವಾರ್ಡ್.


Share       ಮಂಗಳೂರು : ಕಳೆದ ವರ್ಷ ಕರ್ನಾಟಕ ಸರಕಾರದಿಂದ ಡಾ. ಬಿ.ಸಿ.ರಾಯ್ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಸದಾನಂದ ಪೂಜಾರಿಯವರಿಗೆ ಬೆಂಗಳೂರಿನ ಅಶೋಕ ಪಂಚತಾರ ಹೋಟೆಲ್ ನಲ್ಲಿ ನಡೆದ ಏಷ್ಯಾ ಟುಡೇ ಹಮ್ಮಿ ಕೊಂಡಿದ್ದ


Read More »

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ


Share       ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ ಅವರಿಗೆ ಜನುಮದಿನದ ಶುಭಾಶಯಗಳು🎂 ಅವರ ಬಗ್ಗೆ ಮಾಹಿತಿ ಡಾ.ಅಂಚನ್ ಸಿ ಕೆ, ಅಂತರರಾಷ್ಟ್ರೀಯ ವ್ಯಾಪಾರ ಮತ್ತು


Read More »

ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ


Share       ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ ಕೋಟ: ಶ್ರೀಮಾತಾ ಅಸ್ಪತ್ರೆಯ ಮಾಲಿಕರಾದ ಡಾ.ಸತೀಶ ಪೂಜಾರಿ (54) ಅವರು ಗುರುವಾರ ಬೆಳಿಗ್ಗೆ ಅವರ ಕೋಟತಟ್ಟು ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ


Read More »