TOP STORIES:

ತುಳುವಿನಲ್ಲೂ ಸೈ ಎನಿಸಿಕೊಂಡ ’ಕೊಂಕಣಿ ಕೋಮೆಡಿ ಪ್ರಿನ್ಸ್’ ಪ್ರದೀಪ್ ಬಾರ್ಬೋಜಾ


ಮಹೇಶ್, ಅಕಾಶ್ ಭವನ್

ಮಂಗಳೂರು: ಕಳೆದ ವರ್ಷಾಂತ್ಯಕ್ಕೆ ಕರಾವಳಿಯ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ ಸೋಡಾ ಶರ್ಬತ್ ಹೊಸ ವರ್ಷದ ಶುಭಾರಂಭದಲ್ಲೂ ತನ್ನ ಜೈತ್ರಯಾತ್ರೆಯನ್ನು ಮುಂದುವರೆಸಿದೆ. ಬಹಳ ಸಮಯದ ನಂತರ ಉತ್ತಮ ಕಥಾಹಂದರವನ್ನು ಹೊಂದಿದ ಚಿತ್ರವೊಂದು ಬಿಡುಗಡೆಯಾದದ್ದು ಸಿನಿಪ್ರಿಯರನ್ನು ಚಿತ್ರಮಂದಿರಗಳಿಗೆ ಆಕರ್ಷಿಸುವಂತೆ ಮಾಡಿದೆ. ಇದಕ್ಕಿಂತಲೂ ಮಿಗಿಲಾಗಿ ಸೋಡಾ ಶರ್ಬತ್ ಚಿತ್ರದ ಮೂಲಕ ತುಳು ಚಿತ್ರರಂಗಕ್ಕೆ ಪ್ರತಿಭಾವಂತ ನಿರ್ದೇಶಕ ಹಾಗೂ ನಟನೋರ್ವನ ಪ್ರವೇಶವಾಗಿದೆ ಎಂದು ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

ಮೂಡಬಿದಿರೆ ಸಮೀಪದ ಪಾಲಡ್ಕ ನಿವಾಸಿಯಾದ ಪ್ರದೀಪ್ ಬರ್ಬೋಜಾ ಉಧ್ಯೋಗ ನಿಮಿತ್ತ ಕಳೆದ ಹದಿನೈದು ವರ್ಷಗಳಿಂದ ಯುಎಇಯಲ್ಲಿ ವಾಸವಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ನಾಟಕ ರಚನೆ ಹಾಗೂ ಅಭಿನಯದ ಗೀಳು ಹಚ್ಚಿಸಿಕೊಂಡ ಪ್ರದೀಪ್ ಮೂಡಬಿದ್ರೆ ಪರಿಸರದ ಸಾಂಸ್ಕೃತಿಕ ರಂಗದಲ್ಲಿ ಅತೀ ಕಿರಿವಯಸ್ಸಿನಲ್ಲಿಯೇ ವಿಶೇಷ ಸದ್ದು ಮಾಡಿದ್ದರು. ಅವರು ಬರೆದು ನಿರ್ದೇಶಿಸಿದ ತುಳು ನಾಟಕ ’ಬಂಡಲ್ ಭಾಸ್ಕರೆ’ ವಿಶೇಷ ಜನಮನ್ನಣೆಗೆ ಪಾತ್ರವಾಗಿತ್ತು. ಯುಎಇಗೆ ತಲುಪಿದ ನಂತರ ಅಲ್ಲೂ ನಾಟಕ ರಂಗದಲ್ಲಿ ಸಕ್ರೀಯವಾಗಿದ್ದ ಪ್ರದೀಪ್ ಹಲವಾರು ಕೊಂಕಣಿ ನಾಟಕಗಳನ್ನು ರಚಿಸಿ ನಿರ್ದೇಶಿದ್ದಾರೆ. ವಿದೇಶದಲ್ಲಿ ನೂರಕ್ಕಿಂತಲೂ ಹೊಸ ಕಲಾವಿದರಿಗೆ ರಂಗಕಲೆಯ ಬಗ್ಗೆ ತರಬೇತಿಯನ್ನಿತ್ತು ರಂಗಭೂಮಿಯಲ್ಲಿ ನಂತರ ಸೀರಿಯಲ್/ಸಿನೆಮಾ ಕ್ಷೇತ್ರದಲ್ಲಿ ಮಿಂಚುವಂತೆ ಮಾಡಿದ ಕೀರ್ತಿ ಪ್ರದೀಪ್ ಅವರಿಗೆ ಸಲ್ಲುತ್ತದೆ.

ಈ ಮಧ್ಯೆ 2016ರಲ್ಲಿ ’ಏಕ್ ಅಸ್ಲ್ಯಾರ್ ಏಕ್ ನಾ’ ಎಂಬ ಕೊಂಕಣಿ ಸಿನೆಮಾವನ್ನು ನಿರ್ದೇಶಿಸಿ ಅಧಿಕೃತವಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ಪ್ರದೀಪ್ ಅವರ ಮೊದಲ ಕೊಂಕಣಿ ಸಿನೆಮಾವು ಕೊಂಕಣಿ ಚಿತ್ರರಂಗದ ಅಯಾಮನ್ನೇ ಬದಲಿಸಿತು ಎಂದು ಹೇಳಬಹುದು. ನಾಟಕ ಹಾಗೂ ನಾಟಕೀಯತೆಯನ್ನು ಚಿತ್ರೀಕರಣ ಮಾಡಿ ಸಿನೆಮಾ ಎಂದು ತೋರಿಸುತ್ತಿದ್ದ ಕೊಂಕಣಿ ಜಗತ್ತಿನಲ್ಲಿ ಪ್ರದೀಪ್ ಅವರ ’ಏಕ್ ಅಸ್ಲ್ಯಾರ್ ಏಕ್ ನಾ’ ನೈಜ ಸಿನೆಮಾದತ್ತ ಮುಖಮಾಡುವಂತೆ ಮಾಡಿತು. ಕೊಂಕಣಿ ಮೂಲಭಾಷೆಯಾಗಿದ್ದುಕೊಂಡು ತುಳು-ಕನ್ನಡ ಚಿತ್ರರಂಗಲ್ಲಿ ನಟರೆನಿಸಿಕೊಂಡ ಹೆಚ್ಚಿನ ಮುಖಗಳು ಪ್ರದೀಪ್ ಬಾರ್ಬೋಜಾ ಅವರ ಕೈಕೆಳಗೆ ಪಳಗಿದವರೇ.

ಕೊಂಕಣಿ ಚಿತ್ರದ ನಂತರ ಕೆಲ ಕನ್ನಡ-ತುಳು ಚಿತ್ರಗಳಲ್ಲಿ ನಟಿಸಿದ ಪ್ರದೀಪ್ ಅವರಿಗೆ ತುಳುವಿನಲ್ಲಿ ಚಿತ್ರವೊಂದನ್ನು ನಿರ್ದೇಶಿಸುವ ಕನಸಿತ್ತು. ಇದೀಗ ಸೋಡಾ ಶರ್ಬತ್ ಮೂಲಕ ಈ ಕನಸು ಈಡೇರಿದಂತಾಗಿದೆ. ಚಿತ್ರದುದ್ದಕ್ಕೂ ತನ್ನ ವಿಭಿನ್ನ ಶೈಲಿಯ ನಟನೆಯೊಂದಿಗೆ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡ ಪ್ರದೀಪ್ ತುಳು ಚಿತ್ರರಂಗದಲ್ಲೂ ಸೈ ಎನಿಸಿಕೊಂಡಿದ್ದಾರೆ. ಸದಭಿರುಚಿಯ ಚಿತ್ರಗಳ ಕೊರತೆ ಎದ್ದು ಕಾಣುತ್ತಿದ್ದ ಸಂದರ್ಭದಲ್ಲಿ ಪ್ರದೀಪ್ ಅವರು ಇಡೀ ಸಮಾಜೆವೇ ಚರ್ಚಿಸುವಂತಹ ಸಿನೆಮಾವೊಂದನ್ನು ಮಾಡಿ ತನ್ನ ಚಾಕಚಕ್ಯತೆ ಮೆರೆದಿದ್ದಾರೆ. ಪಾಲಡ್ಕ ಎಂಬ ಪುಟ್ಟ ಹಳ್ಳಿಯಿಂದ ಬಂದ ಪ್ರತಿಭೆ ಮುಂದೊಂದು ದಿನ ತುಳು ಚಿತ್ರರಂಗದಲ್ಲಿ ಇಷ್ಟೊಂದು ಅಬ್ಬರದ ಎಂಟ್ರಿ ಕೊಡಬಹುದು ಎಂದು ಯಾರೂ ನಂಬಿರಲಿಕ್ಕಿಲ್ಲ. ಆದರೆ ಛಲವಾದಿಯಾದ ಪ್ರದೀಪ್ ಅದನ್ನು ಮಾಡಿ ತೋರಿಸಿದ್ದಾರೆ. ಸೋಡಾ ಶರ್ಬತಿನ ಗೆಲುವು ಪ್ರದೀಪ್ ಹಾಗೂ ತಂಡಕ್ಕೆ ಮಾತ್ರವಲ್ಲದೆ ತುಳುಚಿತ್ರರಂಗಕ್ಕೂ ದಕ್ಕಿದ ಗೆಲುವಾಗಿದೆ. ಮೊದಲ ಪ್ರಯತ್ನದಲ್ಲೇ ತುಳು ಸಿನಿಪ್ರಿಯರ ಹೃದಯಗಳನ್ನು ಗೆದ್ದ ಪ್ರದೀಪ್ ಅವರಿಂದ ಇನ್ನೂ ಹೆಚ್ಚಿನ ಚಿತ್ರಗಳು ಮೂಡಿಬರಲಿ ಎಂದು ಆಶಿಸೋಣ.


Related Posts

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »

ಕಲರ್ಸ್ ಕನ್ನಡ ಬಿಗ್ ಬಾಸ್ 12ರ ಸ್ಪರ್ಧಿ ಧ್ರುವಂತ್ (ಚರಿತ್ ಬಾಳಪ್ಪ ಪೂಜಾರಿ) ಜೀವನದ ಯಶೋಗಾಥೆ


Share         ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನು ಸಹಿಸಿಕೊಂಡು, ಅವಕಾಶಗಳಿಂದ ವಂಚಿತನಾದರೂ ಧೃತಿಗೆಡದೆ, ಸಾಧನೆಯ ಹಾದಿಯಲ್ಲಿ ಹಂತ ಹಂತವಾಗಿ ಮುನ್ನಡೆಯುತ್ತ ಇಂದು ಎಲ್ಲರ ಮನಗಳಲ್ಲಿ ಮನೆ ಮಾಡಿರುವಂತಹ ನಮ್ಮೆಲ್ಲರ ಹೆಮ್ಮೆಯ ಸಾಧಕ ಧ್ರುವಂತ್ ಇವರ ಯಶಸ್ಸಿನ ಹಿಂದಿನ


Read More »

🩸 ಓಮಾನ್ ಬಿಲ್ಲವಾಸ್ ವತಿಯಿಂದ ಆಯೋಜಿಸಲಾದ ಸಾಮೂಹಿಕ ರಕ್ತದಾನ ಶಿಬಿರ 🩸 ಬೌಶರ್ ಬ್ಲಡ್ ಬ್ಯಾಂಕ್, ಘಾಲಾ ಇಲ್ಲಿ ಯಶಸ್ವಿಯಾಗಿ ನಡೆಯಿತು.


Share          ಒಂದು ಕಾಲದಲ್ಲಿ ತುಳುನಾಡಿನ ಮೂಲದವರಾದ ಬಿಲ್ಲವರು ಕೃಷಿಕರಾಗಿ ಹಾಗೂ ಬೈದರಾಗಿ ತಮ್ಮ ಪರಿಶ್ರಮ, ಶ್ರಮಸಾಧನೆ ಮತ್ತು ಸಾಮಾಜಿಕ ಜವಾಬ್ದಾರಿಗಳ ಮೂಲಕ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆದವರು. ಪ್ರಕೃತಿಯೊಂದಿಗೆ ಸಮನ್ವಯದಿಂದ ಬದುಕನ್ನು ಸಾಗಿಸುತ್ತಾ, ಪರಸ್ಪರ


Read More »

ನಾನು ಕಂಡ ಪ್ರವೀಣ್ ಪೂಜಾರಿ


Share         ನಾನು ಕಂಡ ಪ್ರವೀಣ್ ಪೂಜಾರಿ ಸಾಧಾರಣ 15 ವರ್ಷಗಳಿಂದ ನಮ್ಮ ಆತ್ಮೀಯತೆ ಬಿಲ್ಲವ ಸಮಾಜದ ಸಾಮಾನ್ಯ ಜನರಿಗೂ ಸಮಸ್ಯೆ ಬಂದಂತ ಸಂದರ್ಭದಲ್ಲಿ ವಕೀಲನಾಗಿ ಅಥವಾ ಸಾಮಾಜಿಕ ಕಾರ್ಯಕರ್ತನಾಗಿ ನ್ಯಾಯ ದೊರಕಿಸಿಕೊಟ್ಟಂತಹ ಒಬ್ಬ ನಮ್ಮ


Read More »

ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ನಿಶಾ ಪೂಜಾರಿ ಉತ್ತೀರ್ಣರಾಗಿದ್ದಾರೆ.


Share         ಮುಂಬಯಿ : ಕಾಂದಿವಲಿ ಪೂರ್ವದ ಠಾಕೂರ್ ಕಾಂಪ್ಲೆಕ್ಸ್ ನಿವಾಸಿ ನಿಶಾ ಪೂಜಾರಿ ಅವರು ಇತ್ತೀಚೆಗೆ ಸೆಪ್ಟೆಂಬರ್‌ನಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಅವರು ಕಾರ್ಕಳ


Read More »

ಬಹುಮುಖ ಪ್ರತಿಭಾವಂತೆ ಹರ್ಷಿಕಾ ಕಾಣಿಯೂರು ಅವರಿಗೆ ಅಭಿನಂದನೆಗಳು


Share         ಹರ್ಷಿಕಾ ಕಾಣಿಯೂರು ಅವರ ಬಾಲ್ಯದ ವಯಸ್ಸಿನಲ್ಲಿಯೇ ಕೃಷಿ ಕಾರ್ಯದ ಮೇಲಿನ ಆಸಕ್ತಿ ಹಾಗೂ ಶ್ರಮವನ್ನು ಗುರುತಿಸಿ ಸೈಟ್ ರೀಟಾ ವಿದ್ಯಾ ಸಂಸ್ಥೆ ಗೌರವಿಸಿದ ಕ್ಷಣ ನಿಜಕ್ಕೂ ಹೆಮ್ಮೆಯದು. 🌾🌱👏   ಅಷ್ಟೇ ಅಲ್ಲದೆ,


Read More »