TOP STORIES:

FOLLOW US

ತುಳುವಿನಲ್ಲೂ ಸೈ ಎನಿಸಿಕೊಂಡ ’ಕೊಂಕಣಿ ಕೋಮೆಡಿ ಪ್ರಿನ್ಸ್’ ಪ್ರದೀಪ್ ಬಾರ್ಬೋಜಾ


ಮಹೇಶ್, ಅಕಾಶ್ ಭವನ್

ಮಂಗಳೂರು: ಕಳೆದ ವರ್ಷಾಂತ್ಯಕ್ಕೆ ಕರಾವಳಿಯ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ ಸೋಡಾ ಶರ್ಬತ್ ಹೊಸ ವರ್ಷದ ಶುಭಾರಂಭದಲ್ಲೂ ತನ್ನ ಜೈತ್ರಯಾತ್ರೆಯನ್ನು ಮುಂದುವರೆಸಿದೆ. ಬಹಳ ಸಮಯದ ನಂತರ ಉತ್ತಮ ಕಥಾಹಂದರವನ್ನು ಹೊಂದಿದ ಚಿತ್ರವೊಂದು ಬಿಡುಗಡೆಯಾದದ್ದು ಸಿನಿಪ್ರಿಯರನ್ನು ಚಿತ್ರಮಂದಿರಗಳಿಗೆ ಆಕರ್ಷಿಸುವಂತೆ ಮಾಡಿದೆ. ಇದಕ್ಕಿಂತಲೂ ಮಿಗಿಲಾಗಿ ಸೋಡಾ ಶರ್ಬತ್ ಚಿತ್ರದ ಮೂಲಕ ತುಳು ಚಿತ್ರರಂಗಕ್ಕೆ ಪ್ರತಿಭಾವಂತ ನಿರ್ದೇಶಕ ಹಾಗೂ ನಟನೋರ್ವನ ಪ್ರವೇಶವಾಗಿದೆ ಎಂದು ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

ಮೂಡಬಿದಿರೆ ಸಮೀಪದ ಪಾಲಡ್ಕ ನಿವಾಸಿಯಾದ ಪ್ರದೀಪ್ ಬರ್ಬೋಜಾ ಉಧ್ಯೋಗ ನಿಮಿತ್ತ ಕಳೆದ ಹದಿನೈದು ವರ್ಷಗಳಿಂದ ಯುಎಇಯಲ್ಲಿ ವಾಸವಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ನಾಟಕ ರಚನೆ ಹಾಗೂ ಅಭಿನಯದ ಗೀಳು ಹಚ್ಚಿಸಿಕೊಂಡ ಪ್ರದೀಪ್ ಮೂಡಬಿದ್ರೆ ಪರಿಸರದ ಸಾಂಸ್ಕೃತಿಕ ರಂಗದಲ್ಲಿ ಅತೀ ಕಿರಿವಯಸ್ಸಿನಲ್ಲಿಯೇ ವಿಶೇಷ ಸದ್ದು ಮಾಡಿದ್ದರು. ಅವರು ಬರೆದು ನಿರ್ದೇಶಿಸಿದ ತುಳು ನಾಟಕ ’ಬಂಡಲ್ ಭಾಸ್ಕರೆ’ ವಿಶೇಷ ಜನಮನ್ನಣೆಗೆ ಪಾತ್ರವಾಗಿತ್ತು. ಯುಎಇಗೆ ತಲುಪಿದ ನಂತರ ಅಲ್ಲೂ ನಾಟಕ ರಂಗದಲ್ಲಿ ಸಕ್ರೀಯವಾಗಿದ್ದ ಪ್ರದೀಪ್ ಹಲವಾರು ಕೊಂಕಣಿ ನಾಟಕಗಳನ್ನು ರಚಿಸಿ ನಿರ್ದೇಶಿದ್ದಾರೆ. ವಿದೇಶದಲ್ಲಿ ನೂರಕ್ಕಿಂತಲೂ ಹೊಸ ಕಲಾವಿದರಿಗೆ ರಂಗಕಲೆಯ ಬಗ್ಗೆ ತರಬೇತಿಯನ್ನಿತ್ತು ರಂಗಭೂಮಿಯಲ್ಲಿ ನಂತರ ಸೀರಿಯಲ್/ಸಿನೆಮಾ ಕ್ಷೇತ್ರದಲ್ಲಿ ಮಿಂಚುವಂತೆ ಮಾಡಿದ ಕೀರ್ತಿ ಪ್ರದೀಪ್ ಅವರಿಗೆ ಸಲ್ಲುತ್ತದೆ.

ಈ ಮಧ್ಯೆ 2016ರಲ್ಲಿ ’ಏಕ್ ಅಸ್ಲ್ಯಾರ್ ಏಕ್ ನಾ’ ಎಂಬ ಕೊಂಕಣಿ ಸಿನೆಮಾವನ್ನು ನಿರ್ದೇಶಿಸಿ ಅಧಿಕೃತವಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ಪ್ರದೀಪ್ ಅವರ ಮೊದಲ ಕೊಂಕಣಿ ಸಿನೆಮಾವು ಕೊಂಕಣಿ ಚಿತ್ರರಂಗದ ಅಯಾಮನ್ನೇ ಬದಲಿಸಿತು ಎಂದು ಹೇಳಬಹುದು. ನಾಟಕ ಹಾಗೂ ನಾಟಕೀಯತೆಯನ್ನು ಚಿತ್ರೀಕರಣ ಮಾಡಿ ಸಿನೆಮಾ ಎಂದು ತೋರಿಸುತ್ತಿದ್ದ ಕೊಂಕಣಿ ಜಗತ್ತಿನಲ್ಲಿ ಪ್ರದೀಪ್ ಅವರ ’ಏಕ್ ಅಸ್ಲ್ಯಾರ್ ಏಕ್ ನಾ’ ನೈಜ ಸಿನೆಮಾದತ್ತ ಮುಖಮಾಡುವಂತೆ ಮಾಡಿತು. ಕೊಂಕಣಿ ಮೂಲಭಾಷೆಯಾಗಿದ್ದುಕೊಂಡು ತುಳು-ಕನ್ನಡ ಚಿತ್ರರಂಗಲ್ಲಿ ನಟರೆನಿಸಿಕೊಂಡ ಹೆಚ್ಚಿನ ಮುಖಗಳು ಪ್ರದೀಪ್ ಬಾರ್ಬೋಜಾ ಅವರ ಕೈಕೆಳಗೆ ಪಳಗಿದವರೇ.

ಕೊಂಕಣಿ ಚಿತ್ರದ ನಂತರ ಕೆಲ ಕನ್ನಡ-ತುಳು ಚಿತ್ರಗಳಲ್ಲಿ ನಟಿಸಿದ ಪ್ರದೀಪ್ ಅವರಿಗೆ ತುಳುವಿನಲ್ಲಿ ಚಿತ್ರವೊಂದನ್ನು ನಿರ್ದೇಶಿಸುವ ಕನಸಿತ್ತು. ಇದೀಗ ಸೋಡಾ ಶರ್ಬತ್ ಮೂಲಕ ಈ ಕನಸು ಈಡೇರಿದಂತಾಗಿದೆ. ಚಿತ್ರದುದ್ದಕ್ಕೂ ತನ್ನ ವಿಭಿನ್ನ ಶೈಲಿಯ ನಟನೆಯೊಂದಿಗೆ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡ ಪ್ರದೀಪ್ ತುಳು ಚಿತ್ರರಂಗದಲ್ಲೂ ಸೈ ಎನಿಸಿಕೊಂಡಿದ್ದಾರೆ. ಸದಭಿರುಚಿಯ ಚಿತ್ರಗಳ ಕೊರತೆ ಎದ್ದು ಕಾಣುತ್ತಿದ್ದ ಸಂದರ್ಭದಲ್ಲಿ ಪ್ರದೀಪ್ ಅವರು ಇಡೀ ಸಮಾಜೆವೇ ಚರ್ಚಿಸುವಂತಹ ಸಿನೆಮಾವೊಂದನ್ನು ಮಾಡಿ ತನ್ನ ಚಾಕಚಕ್ಯತೆ ಮೆರೆದಿದ್ದಾರೆ. ಪಾಲಡ್ಕ ಎಂಬ ಪುಟ್ಟ ಹಳ್ಳಿಯಿಂದ ಬಂದ ಪ್ರತಿಭೆ ಮುಂದೊಂದು ದಿನ ತುಳು ಚಿತ್ರರಂಗದಲ್ಲಿ ಇಷ್ಟೊಂದು ಅಬ್ಬರದ ಎಂಟ್ರಿ ಕೊಡಬಹುದು ಎಂದು ಯಾರೂ ನಂಬಿರಲಿಕ್ಕಿಲ್ಲ. ಆದರೆ ಛಲವಾದಿಯಾದ ಪ್ರದೀಪ್ ಅದನ್ನು ಮಾಡಿ ತೋರಿಸಿದ್ದಾರೆ. ಸೋಡಾ ಶರ್ಬತಿನ ಗೆಲುವು ಪ್ರದೀಪ್ ಹಾಗೂ ತಂಡಕ್ಕೆ ಮಾತ್ರವಲ್ಲದೆ ತುಳುಚಿತ್ರರಂಗಕ್ಕೂ ದಕ್ಕಿದ ಗೆಲುವಾಗಿದೆ. ಮೊದಲ ಪ್ರಯತ್ನದಲ್ಲೇ ತುಳು ಸಿನಿಪ್ರಿಯರ ಹೃದಯಗಳನ್ನು ಗೆದ್ದ ಪ್ರದೀಪ್ ಅವರಿಂದ ಇನ್ನೂ ಹೆಚ್ಚಿನ ಚಿತ್ರಗಳು ಮೂಡಿಬರಲಿ ಎಂದು ಆಶಿಸೋಣ.


Share:

More Posts

Category

Send Us A Message

Related Posts

ಶ್ರೀ ಸತೀಶ್ ಕುಮಾರ್ ಬಜಾಲ್ ರಿಗೆ “ ಬಿಲ್ಲವ ಸಂಜೀವಿನಿ “ ಬಿರುದು ಗೌರವ ಪ್ರಧಾನ – ಬಿಲ್ಲವ ಸಂಘ ಪುಣೆ


Share       ವರ್ಲ್ಡ್ ಬಿಲ್ಲವಾಸ್ ಪ್ರೀಮಿಯರ್ ಲೀಗ್ 2025 ನ ಅದ್ಭುತ ಕಾರ್ಯಕ್ರಮದಲ್ಲಿ ಸೌಧಿ ಬಿಲ್ಲವಾಸ್ ದಮ್ಮಾಮ್ ಸಂಘದ ಅಧ್ಯಕ್ಷರಾದ ಶ್ರೀ ಸತೀಶ್ ಕುಮಾರ್ ಅಂಚನ್ ಬಜಾಲ್ ರಿಗೆ ಬಿಲ್ಲವ ಸಂಘ ಪುಣೆ ಯು ಅತಿಥಿ


Read More »

ರಾಜೇಂದ್ರ ಚಿಲಿಂಬಿ ಯವರಿಗೆ ಕಲ್ಕೂರ ಪ್ರತಿಷ್ಠಾನದ ಆತ್ಮೀಯ ಅಭಿನಂದನೆ


Share       ಮಂಗಳೂರು: ಸಾಧಕರ ಜೊತೆ ಕದ್ರಿ ಶ್ರೀ ಮಂಜುನಾಥ ಕ್ಷೇತ್ರದ ಆಡಳಿತ ಸಮಿತಿಗೆ ನೇಮಕದ ಬಗ್ಗೆ ರಾಜೇಂದ್ರ ಚಿಲಿಂಬಿ ಯವರಿಗೆ ಕಲ್ಕೂರ ಪ್ರತಿಷ್ಠಾನದ ಆತ್ಮೀಯ ಅಭಿನಂದನೆ. ಕಲ್ಕೂರ ಪ್ರತಿಷ್ಠಾನದ ವತಿಯಿಂದ ಯುಗಾದಿ ಮಹೋತ್ಸವ, ವಿಷು


Read More »

ಪೊಲೀಸ್ ಸಬ್ ಇನ್ಸಸ್ಪೆಕ್ಟರ್ ಪ್ರದೀಪ್ ಪೂಜಾರಿಯವರಿಗೆ ಮುಖ್ಯಮಂತ್ರಿ ಚಿನ್ನದ ಪದಕ


Share       ಕೆಯ್ಯೂರು: ಕೆಯ್ಯೂರು ಗ್ರಾಮದ ಪಿ.ಎಸ್.ಐ ಪ್ರದೀಪ್ ಪೂಜಾರಿ 2023ನೇ ವರ್ಷದ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಮೂರನೇ ಬೆಟಾಲಿಯನ್ ಫೆರೆಡ್ ಗ್ರೌಂಡ್ ಕೆಎಸ್ಆರ್ಪಿ  ಕೊರಮಂಗಲ ಬೆಂಗಳೂರಿನಲ್ಲಿ ಎ.2ರಂದು ಪ್ರಶಸ್ತಿ ಪ್ರಧಾನ ನಡೆಯಲಿದೆ ಪ್ರದೀಪ್ ಪೂಜಾರಿ


Read More »

ಕದ್ರಿ ಮಂಜುನಾಥ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ರಾಜೇಂದ್ರ ಚಿಲಿಂಬಿ ಆಯ್ಕೆ


Share       ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಇವರು ಸಲ್ಲಿಸಿರುವ  ಸೇವೆಯನ್ನು ಪರಿಗಣಿಸಿ ಈ ಆಯ್ಕೆ ನಡೆದಿರುತ್ತದೆ. ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ  ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಮಾಧ್ಯಮ ವಕ್ತಾರ, ಮಂಗಳೂರು ಚಿಲಿಂಬಿ ಸ್ವಾಮಿ


Read More »

ಜವಾಹರ್ ಬಾಲ್ ಮಂಚ್ ಇದರ ದಕ್ಷಿಣ ಕನ್ನಡ ಜಿಲ್ಲಾ ಮುಖ್ಯ ಸಂಯೋಜಕರಾಗಿ ನ್ಯಾಯವಾದಿ ಶ್ರೀಮತಿ ಶೈಲಜಾ ರಾಜೇಶ್ ಆಯ್ಕೆ


Share       ಬಂಟ್ವಾಳ : ಕರ್ನಾಟಕ ಸರ್ಕಾರದ ಪ್ರತಿಷ್ಟಿತ ಕಿತ್ತೂರು ರಾಣಿ ಚೆನ್ನಮ್ಮ ಪುರಸ್ಕೃತರು, ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ರಿ ಇದರ ಸಂಸ್ಥಾಪಕರು, ಬಂಟ್ವಾಳ ತಾಲೂಕು ಬಿಲ್ಲವ ಮಹಿಳಾ ಸಮಿತಿಯ ಅಧ್ಯಕ್ಷೆ,


Read More »

ACP ರೀನಾ ಸುವರ್ಣಗೆ ಜೀ ಕನ್ನಡ ನ್ಯೂಸ್‌ ಅಚೀವರ್ಸ್‌ ಅವಾರ್ಡ್ಸ್‌- 2025


Share       3ನೇ ವಾರ್ಷಿಕೋತ್ಸವದ ಅಂಗವಾಗಿ ಜೀ ಕನ್ನಡ ನ್ಯೂಸ್‌ ವತಿಯಿಂದ, Zee Achievers Awards ಕಾರ್ಯಕ್ರಮವನ್ನು ದಿ ರಿಟ್ಸ್‌ ಕಾರ್ಲ್‌ಟರ್ನ್‌ನಲ್ಲಿ ಆಯೋಜಿಸಲಾಗಿತ್ತು, ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯಾತಿಗಣ್ಯರನ್ನು ಗುರುತಿಸಿ ಜೀ ಕನ್ನಡ


Read More »