TOP STORIES:

ತುಳುವಿನಲ್ಲೂ ಸೈ ಎನಿಸಿಕೊಂಡ ’ಕೊಂಕಣಿ ಕೋಮೆಡಿ ಪ್ರಿನ್ಸ್’ ಪ್ರದೀಪ್ ಬಾರ್ಬೋಜಾ


ಮಹೇಶ್, ಅಕಾಶ್ ಭವನ್

ಮಂಗಳೂರು: ಕಳೆದ ವರ್ಷಾಂತ್ಯಕ್ಕೆ ಕರಾವಳಿಯ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ ಸೋಡಾ ಶರ್ಬತ್ ಹೊಸ ವರ್ಷದ ಶುಭಾರಂಭದಲ್ಲೂ ತನ್ನ ಜೈತ್ರಯಾತ್ರೆಯನ್ನು ಮುಂದುವರೆಸಿದೆ. ಬಹಳ ಸಮಯದ ನಂತರ ಉತ್ತಮ ಕಥಾಹಂದರವನ್ನು ಹೊಂದಿದ ಚಿತ್ರವೊಂದು ಬಿಡುಗಡೆಯಾದದ್ದು ಸಿನಿಪ್ರಿಯರನ್ನು ಚಿತ್ರಮಂದಿರಗಳಿಗೆ ಆಕರ್ಷಿಸುವಂತೆ ಮಾಡಿದೆ. ಇದಕ್ಕಿಂತಲೂ ಮಿಗಿಲಾಗಿ ಸೋಡಾ ಶರ್ಬತ್ ಚಿತ್ರದ ಮೂಲಕ ತುಳು ಚಿತ್ರರಂಗಕ್ಕೆ ಪ್ರತಿಭಾವಂತ ನಿರ್ದೇಶಕ ಹಾಗೂ ನಟನೋರ್ವನ ಪ್ರವೇಶವಾಗಿದೆ ಎಂದು ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

ಮೂಡಬಿದಿರೆ ಸಮೀಪದ ಪಾಲಡ್ಕ ನಿವಾಸಿಯಾದ ಪ್ರದೀಪ್ ಬರ್ಬೋಜಾ ಉಧ್ಯೋಗ ನಿಮಿತ್ತ ಕಳೆದ ಹದಿನೈದು ವರ್ಷಗಳಿಂದ ಯುಎಇಯಲ್ಲಿ ವಾಸವಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ನಾಟಕ ರಚನೆ ಹಾಗೂ ಅಭಿನಯದ ಗೀಳು ಹಚ್ಚಿಸಿಕೊಂಡ ಪ್ರದೀಪ್ ಮೂಡಬಿದ್ರೆ ಪರಿಸರದ ಸಾಂಸ್ಕೃತಿಕ ರಂಗದಲ್ಲಿ ಅತೀ ಕಿರಿವಯಸ್ಸಿನಲ್ಲಿಯೇ ವಿಶೇಷ ಸದ್ದು ಮಾಡಿದ್ದರು. ಅವರು ಬರೆದು ನಿರ್ದೇಶಿಸಿದ ತುಳು ನಾಟಕ ’ಬಂಡಲ್ ಭಾಸ್ಕರೆ’ ವಿಶೇಷ ಜನಮನ್ನಣೆಗೆ ಪಾತ್ರವಾಗಿತ್ತು. ಯುಎಇಗೆ ತಲುಪಿದ ನಂತರ ಅಲ್ಲೂ ನಾಟಕ ರಂಗದಲ್ಲಿ ಸಕ್ರೀಯವಾಗಿದ್ದ ಪ್ರದೀಪ್ ಹಲವಾರು ಕೊಂಕಣಿ ನಾಟಕಗಳನ್ನು ರಚಿಸಿ ನಿರ್ದೇಶಿದ್ದಾರೆ. ವಿದೇಶದಲ್ಲಿ ನೂರಕ್ಕಿಂತಲೂ ಹೊಸ ಕಲಾವಿದರಿಗೆ ರಂಗಕಲೆಯ ಬಗ್ಗೆ ತರಬೇತಿಯನ್ನಿತ್ತು ರಂಗಭೂಮಿಯಲ್ಲಿ ನಂತರ ಸೀರಿಯಲ್/ಸಿನೆಮಾ ಕ್ಷೇತ್ರದಲ್ಲಿ ಮಿಂಚುವಂತೆ ಮಾಡಿದ ಕೀರ್ತಿ ಪ್ರದೀಪ್ ಅವರಿಗೆ ಸಲ್ಲುತ್ತದೆ.

ಈ ಮಧ್ಯೆ 2016ರಲ್ಲಿ ’ಏಕ್ ಅಸ್ಲ್ಯಾರ್ ಏಕ್ ನಾ’ ಎಂಬ ಕೊಂಕಣಿ ಸಿನೆಮಾವನ್ನು ನಿರ್ದೇಶಿಸಿ ಅಧಿಕೃತವಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ಪ್ರದೀಪ್ ಅವರ ಮೊದಲ ಕೊಂಕಣಿ ಸಿನೆಮಾವು ಕೊಂಕಣಿ ಚಿತ್ರರಂಗದ ಅಯಾಮನ್ನೇ ಬದಲಿಸಿತು ಎಂದು ಹೇಳಬಹುದು. ನಾಟಕ ಹಾಗೂ ನಾಟಕೀಯತೆಯನ್ನು ಚಿತ್ರೀಕರಣ ಮಾಡಿ ಸಿನೆಮಾ ಎಂದು ತೋರಿಸುತ್ತಿದ್ದ ಕೊಂಕಣಿ ಜಗತ್ತಿನಲ್ಲಿ ಪ್ರದೀಪ್ ಅವರ ’ಏಕ್ ಅಸ್ಲ್ಯಾರ್ ಏಕ್ ನಾ’ ನೈಜ ಸಿನೆಮಾದತ್ತ ಮುಖಮಾಡುವಂತೆ ಮಾಡಿತು. ಕೊಂಕಣಿ ಮೂಲಭಾಷೆಯಾಗಿದ್ದುಕೊಂಡು ತುಳು-ಕನ್ನಡ ಚಿತ್ರರಂಗಲ್ಲಿ ನಟರೆನಿಸಿಕೊಂಡ ಹೆಚ್ಚಿನ ಮುಖಗಳು ಪ್ರದೀಪ್ ಬಾರ್ಬೋಜಾ ಅವರ ಕೈಕೆಳಗೆ ಪಳಗಿದವರೇ.

ಕೊಂಕಣಿ ಚಿತ್ರದ ನಂತರ ಕೆಲ ಕನ್ನಡ-ತುಳು ಚಿತ್ರಗಳಲ್ಲಿ ನಟಿಸಿದ ಪ್ರದೀಪ್ ಅವರಿಗೆ ತುಳುವಿನಲ್ಲಿ ಚಿತ್ರವೊಂದನ್ನು ನಿರ್ದೇಶಿಸುವ ಕನಸಿತ್ತು. ಇದೀಗ ಸೋಡಾ ಶರ್ಬತ್ ಮೂಲಕ ಈ ಕನಸು ಈಡೇರಿದಂತಾಗಿದೆ. ಚಿತ್ರದುದ್ದಕ್ಕೂ ತನ್ನ ವಿಭಿನ್ನ ಶೈಲಿಯ ನಟನೆಯೊಂದಿಗೆ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡ ಪ್ರದೀಪ್ ತುಳು ಚಿತ್ರರಂಗದಲ್ಲೂ ಸೈ ಎನಿಸಿಕೊಂಡಿದ್ದಾರೆ. ಸದಭಿರುಚಿಯ ಚಿತ್ರಗಳ ಕೊರತೆ ಎದ್ದು ಕಾಣುತ್ತಿದ್ದ ಸಂದರ್ಭದಲ್ಲಿ ಪ್ರದೀಪ್ ಅವರು ಇಡೀ ಸಮಾಜೆವೇ ಚರ್ಚಿಸುವಂತಹ ಸಿನೆಮಾವೊಂದನ್ನು ಮಾಡಿ ತನ್ನ ಚಾಕಚಕ್ಯತೆ ಮೆರೆದಿದ್ದಾರೆ. ಪಾಲಡ್ಕ ಎಂಬ ಪುಟ್ಟ ಹಳ್ಳಿಯಿಂದ ಬಂದ ಪ್ರತಿಭೆ ಮುಂದೊಂದು ದಿನ ತುಳು ಚಿತ್ರರಂಗದಲ್ಲಿ ಇಷ್ಟೊಂದು ಅಬ್ಬರದ ಎಂಟ್ರಿ ಕೊಡಬಹುದು ಎಂದು ಯಾರೂ ನಂಬಿರಲಿಕ್ಕಿಲ್ಲ. ಆದರೆ ಛಲವಾದಿಯಾದ ಪ್ರದೀಪ್ ಅದನ್ನು ಮಾಡಿ ತೋರಿಸಿದ್ದಾರೆ. ಸೋಡಾ ಶರ್ಬತಿನ ಗೆಲುವು ಪ್ರದೀಪ್ ಹಾಗೂ ತಂಡಕ್ಕೆ ಮಾತ್ರವಲ್ಲದೆ ತುಳುಚಿತ್ರರಂಗಕ್ಕೂ ದಕ್ಕಿದ ಗೆಲುವಾಗಿದೆ. ಮೊದಲ ಪ್ರಯತ್ನದಲ್ಲೇ ತುಳು ಸಿನಿಪ್ರಿಯರ ಹೃದಯಗಳನ್ನು ಗೆದ್ದ ಪ್ರದೀಪ್ ಅವರಿಂದ ಇನ್ನೂ ಹೆಚ್ಚಿನ ಚಿತ್ರಗಳು ಮೂಡಿಬರಲಿ ಎಂದು ಆಶಿಸೋಣ.


Related Posts

ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ


Share        ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ


Read More »

ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ ಕೋಟ್ಯಾನ್‌ಗೆ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ


Share        ವಿಕ ಸುದ್ದಿಲೋಕ ಮಂಗಳೂರು ಸೌಹಾರ್ದತೆ ಬಿಂಬಿಸುವ ವರದಿಗೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ‘ಬ್ಯಾಂಡ್ ಮಂಗಳೂರು’ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ


Read More »

ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಆಯ್ಕೆ


Share        ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದ ಬಿಂಬಿಸುವ ವರದಿಗೆ ನೀಡಲಾಗುವ “ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿಗೆ ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯಕೋಟ್ಯಾನ್ ಪಡು  ಆಯ್ಕೆಯಾಗಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ 2024 ಅಕ್ಟೋಬರ್


Read More »

ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್( ರಿ) ಇದರ ನೂತನ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ ಆಯ್ಕೆ


Share        ಶ್ರೀ ಕ್ಷೇತ್ರ ಗೆಜ್ಜೆಗಿರಿಯ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ  ಚಾರಿಟೇಬಲ್ ಟ್ರಸ್ಟ್(ರಿ) ಇದರ ನೂತನ ಅಧ್ಯಕ್ಷರಾಗಿ ಬಿರ್ವ ಸೆಂಟರ್ ಇದರ ಮಾಲಕರಾದ  ಕೆ ಸಂಜೀವ ಪೂಜಾರಿ ಇವರನ್ನು ಕಂಕನಾಡಿ ಬ್ರಹ್ಮ


Read More »

8ನೇ ವಯಸ್ಸಿನಲ್ಲಿ ಕಪೋತಾಸನದ ಭಂಗಿಯಲ್ಲಿ ವಿಶ್ವ ದಾಖಲೆ ಮಾಡಿದ ಬಾಲಕಿ ಕುಮಾರಿ ಶರಣ್ಯ ಶರತ್!


Share        ಮಂಗಳೂರು, ಜೂ. 20 ಪನ್ನೀರಿನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಶರಣ್ಯ ಶರತ್ ಅವರು ತನ್ನ ಎಂಟನೆಯ ವಯಸ್ಸಿನಲ್ಲಿ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್


Read More »

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾಗಿ ಎಚ್.ಎಸ್.ಜಯರಾಜ್ ಆಯ್ಕೆ


Share        ಮಂಗಳೂರು: ಬ್ರಹ್ಮಶ್ರೀ ನಾರಾಯಣಗುರುಗಳು ಪ್ರತಿಷ್ಠಾಪಿಸಿದ ಕರ್ನಾಟಕದ ಏಕೈಕ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಆಡಳಿತ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ಜಂಟಿ ಸಭೆ ಕೇಂದ್ರದ ಮಾಜಿ ಸಚಿವ


Read More »