TOP STORIES:

FOLLOW US

ತುಳು ಸತ್ಯ ಅನಾವರಣದ ಮಹಾಶಕ್ತಿ ಡಾ. ವೆಂಕಟರಾಜ ಪುಣಿಂಚಿತ್ತಾಯ!


ತುಳುವರಿಗೆ ಕುವೆಂಪು, ದ. ರಾ. ಬೇಂದ್ರೆ, ಮಾಸ್ತಿ ಇಂತಹ ಕನ್ನಡ ಕವಿಗಳ ಹೆಸರು ಚಿರಪರಿಚಿತ. ಆಗಾಗ ಅವರ ಕವಿತೆಗಳನ್ನು, ಸಾಹಿತ್ಯಗಳನ್ನು ಓದಿ ಖುಷಿ ಪಡುತ್ತೇವೆ. ಅದರೆ ತುಳು ಕವಿಗಳ ಬಗ್ಗೆ ಕೇಳಿದರೆ ಮಾತ್ರ ಯಾಕೋ ಮುಖ ಮುಖ ನೋಡುತ್ತೇವೆ.

ಯಾರೊಬ್ಬರ ಪರಿಚಯವೂ ನಮಗಿಲ್ಲ. ಅವರ ಬರಹಗಳು ಕವಿತೆಗಳನ್ನಂತೂ ನೋಡಿಯೇ ಇರಲಿಕ್ಕಿಲ್ಲ. ಅನೇಕ ಕವಿಗಳು ಅಥವಾ ಸಾಹಿತಿಗಳು ತುಳು ಭಾಷೆಯಲ್ಲಿ ತುಳು ಭಾಷೆಗಾಗಿ ಅನರ್ಘ್ಯ ಸೇವೆ ಸಲ್ಲಿಸಿದ್ದಾರೆ. ಅಂಥವರಲ್ಲೇ ಒಬ್ಬರು ಡಾ. ವೆಂಕಟರಾಜ ಪುಣಿಚಿತ್ತಾಯ!

ಪುಣಿಚಿತ್ತಾಯರು ಸಾಹಿತಿ ಮಾತ್ರವಲ್ಲ ಸಂಶೋಧಕರು. ತುಳು ಸಾಹಿತ್ಯ ಸಂಶೋಧನೆಯಲ್ಲಿ ಅಗಾಧ ಸಾಧನೆ ಮಾಡಿರುವ ಪುಣಿಂಚಿತ್ತಾಯರು ತುಳುವಿನಲ್ಲಿ ಶಿಷ್ಟ ಸಾಹಿತ್ಯ ಪರಂಪರೆಯೇ ಇರಲಿಲ್ಲ ಎಂಬ ವಾದವನ್ನು ಅಲ್ಲಗಳೆದು 4 ಅತಿ ಪ್ರಾಚೀನ ತಾಡವಾಲೆ ಗ್ರಂಥಗಳನ್ನು ಪತ್ತೆಹಚ್ಚಿ ಅವುಗಳನ್ನು ಕನ್ನಡಕ್ಕೆ ಲಿಪ್ಯಂತರಗೊಳಿಸಿ ವಿಸ್ತಾರವಾದ ಪೀಠಿಕೆ, ಅಡಿಟಿಪ್ಪಣಿ, ಅರ್ಥ ಕೋಶಗಳೊಂದಿಗೆ ಸಂಪಾದಿಸುವ ಮೂಲಕ ತುಳು ಭಾಷೆಗೆ ಭಾರತದ ಇತರ 20 ಭಾಷೆಗಳ ಸಾಲಿನಲ್ಲಿ ಸಮಾನ ಸ್ಥಾನವನ್ನು ದೊರಕಿಸಿಕೊಟ್ಟ ಶ್ರೇಯಸ್ಸು ಹೊಂದಿದ್ದಾರೆ. ಶ್ರೀ ಭಾಗವತೊ, ಕಾವೇರಿ, ದೇವಿ ಮಹಾತ್ಮೆ, ತುಳು ಮಹಾಭಾರತೋ ಈ ಪ್ರಾಚೀನ ತುಳು ಗ್ರಂಥಗಳಾಗಿವೆ. ಹೆಂಗಸರ ಬಾಯಿಯಿಂದ ಕೇಳಿದ ತುಳು ಹಾಡುಗಳ ಬೆನ್ನು ಹತ್ತಿ ಹೋಗಿ ತುಳುವಿಗೂ ಲಿಪಿ ಇದೆ ಎಂದು ತೋರಿಸಿದ ಡಾ. ವೆಂಕಟರಾಜ ಪುಣಿಂಚಿತ್ತಾಯರ ಸಾಧನೆ ತುಳುನಾಡು ಯಾವತ್ತೂ ಮರೆಯಲಾಗದ್ದು.

ಎಲ್ಲ ದ್ರಾವಿಡ ಭಾಷೆಗಳಂತೆ ಸಂಶೋಧನೆಯ ಶಾಸ್ತ್ರೀಯ ಚೌಕಟ್ಟಿನಲ್ಲಿ ತುಳುವಿನ ಬಗ್ಗೆ ಮೊದಲು ಆಸಕ್ತಿ ತೋರಿಸಿದ್ದು ಇಂಗ್ಲಿಷರು. ಆದರೆ, ತುಳುವಿನ ಮೂಲದ ಜಾಡು ಹುಡುಕಿ ಹೊರಟವರು ಪುಣಿಂಚಿತ್ತಾಯರು.

ಅವರನ್ನು ಸಂಶೋಧಕರನ್ನಾಗಿಸಿದ್ದು ಹೊರಗಿನದ್ದಲ್ಲ, ಒಳಗಿನ ಒತ್ತಡ. ಗದ್ದೆಯಲ್ಲಿ ಕಾಯಕ ನಡೆಸುತ್ತಿದ್ದ ಹತ್ತಾರು ಹೆಂಗಸರ ಬಾಯಿಯಿಂದ ಕೇಳಿದ ತುಳು ಹಾಡುಗಳು ಅವರಲ್ಲಿ ಮೂಡಿಸಿದ ಆಸಕ್ತಿ ‘ಶ್ರೀ ಭಾಗವತೋ’ದಂಥ ಪ್ರಾಚೀನ ತುಳು ಕಾವ್ಯದ ಹುಡುಕಾಟ ಸತತ ಸಂಶೋಧನ ಕಾಯಕದ ವರೆಗೆ ತಂದು ನಿಲ್ಲಿಸಿತು.

ಸಂಶೋಧನೆ ಸ್ವಭಾವವನ್ನು ಮೂಲಭೂತವಾಗಿಯೇ ಹೊಂದಿದ್ದ ಪುಣಿಂಚಿತ್ತಾಯರನ್ನು ಪಂಚ ದ್ರಾವಿಡ ಭಾಷೆಗಳ ಪೆಕಿ ತುಳುವನ್ನು ಉಳಿದು ಮಿಕ್ಕ 4ಕ್ಕೂ ಲಿಪಿಯಿದೆ. ಹಾಗಿದ್ದರೆ ತುಳುವಿಗೂ ಲಿಪಿ ಇದ್ದಿರಲೇಬೇಕು ಎಂಬ ಜಿಜ್ಞಾಸೆ ಕಾಡುತ್ತಲೇ ಇತ್ತು. ಪುಣಿಂಚಿತ್ತಾಯರು ಒಮ್ಮೆ ಮಧೂರಿನ ಶಿವನಾರಾಯಣ ಸರಳಾಯ ಅವರ ನಿವಾಸಕ್ಕೆ ತೆರಳಿದ್ದ ವೇಳೆ ಮಾತಿನ ನಡುವೆ ಸರಳಾಯರು ತಂದು ತೋರಿದ ತಾಡವಾಲೆ ಗ್ರಂಥವೇ ಹೊಸ ಅಧ್ಯಾಯ ಬರೆಯಿತು. ಆ ಕೃತಿ ತುಳು ಮಹಾಕಾವ್ಯ ‘ಶ್ರೀಭಾಗವತೋ’.

16ನೇ ಶತಮಾನದ ಅಂದಾಜಿನಲ್ಲಿ ಕವಿ ವಿಷ್ಣುತುಂಗ ಈ ಕತಿ ರಚಿಸಿದ್ದರು. ಇದರ ಜಾಡು ಹಿಡಿದು ಹೋದ ವರು ಕೋಯಿಕೋಡ್ ವಿವಿ ಸಂಸ್ಕೃತ ಗ್ರಂಥಾಲಯದಲ್ಲಿ ಅನಾಥವಾಗಿದ್ದ ತುಳು ಕಾವ್ಯ ‘ಕಾವೇರಿ’ಯನ್ನು ಪತ್ತೆ ಹಚ್ಚಿದರು. ನಂತರ ದೇವಿ ಮಹಾತ್ಮೆ, ನಾಟಿ ವೆದ್ಯ ಪದ್ಧತಿಯ ಚರ್ಚೆಗಳಿರುವ ಗ್ರಂಥವೊಂದನ್ನೂ ಹುಡುಕಿದರು.

ತುಳು ಪಾಡ್ದನಗಳನ್ನು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿದ್ದು ತುಳು ಜಾನಪದ ಲೋಕದಲ್ಲಿ ಅಜರಾಮರರನ್ನಾಗಿಸಿದೆ.

Inputs: Beauty of Tulunadu


Share:

More Posts

Category

Send Us A Message

Related Posts

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »

ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ


Share       ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ ಡಾ. ಪವಿತ್ರ ಜಿ. ಪಿ. ಹಾಗೂ ಪ್ರವೀಣ್ ಬಿ.ಎಮ್  ರವರ ಮಾರ್ಗದರ್ಶನದಲ್ಲಿ  ಡಾ. ರಶ್ಮಿ ಹರ್ಷ ಪೂಜಾರಿ ಇವರು ರಸಾಯನ ಶಾಸ್ತ್ರ ವಿಭಾಗದಲ್ಲಿ


Read More »

ದುಬೈಯಲ್ಲಿ ಯಶಸ್ವಿ ಉದ್ಯಮಿಯಾಗಿ ಲೆಕ್ಕವಿಲ್ಲದಷ್ಟು ಸೇವೆಯನ್ನು ಸಮಾಜಕ್ಕೆ ಅರ್ಪಿಸುತ್ತಿರು ಸೇವಾ ಮಾಣಿಕ್ಯ ನಿಟ್ಟೆ ಸಂದೀಪ್ ಕೋಟ್ಯಾನ್ ಕಾರ್ಕಳ..!


Share       ಅನೇಕ ಜನ ಉದ್ಯಮ ಕ್ಷೇತ್ರದ ಯಶಸ್ವಿಯಾಗಿ ಮುಂದುವರೆದ ಉದ್ಯಮಿಗಳು ಪ್ರಸ್ತುತ ದಿನಗಳಲ್ಲಿ ಸಿಗುತ್ತಾರೆ, ಆದರೆ ತಾವು ಸಂಪಾದಿಸಿರುವ ಹಣವನ್ನು ಮಾತ್ರ ಸಮಾಜದಲ್ಲಿ ಕೇವಲ ಕಾರ್ಯಕ್ರಮ ಮನೊರಂಜನೆಗಳಿಗೆ ಬಳಸಿ ರಾಜಕೀಯ ನಾಯಕರು, ಉದ್ಯಮಿಗಳನ್ನು ಕರೆದು


Read More »

ಮಂಗಳೂರಿನ ಖ್ಯಾತ ಯುರೋಲಜಿಸ್ಟ್ ಡಾ. ಸದಾನಂದ ಪೂಜಾರಿಯವರಿಗೆ ಪ್ರೈಡ್ ಆಫ್ ನ್ಯಾಷನ್ ಅವಾರ್ಡ್.


Share       ಮಂಗಳೂರು : ಕಳೆದ ವರ್ಷ ಕರ್ನಾಟಕ ಸರಕಾರದಿಂದ ಡಾ. ಬಿ.ಸಿ.ರಾಯ್ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಸದಾನಂದ ಪೂಜಾರಿಯವರಿಗೆ ಬೆಂಗಳೂರಿನ ಅಶೋಕ ಪಂಚತಾರ ಹೋಟೆಲ್ ನಲ್ಲಿ ನಡೆದ ಏಷ್ಯಾ ಟುಡೇ ಹಮ್ಮಿ ಕೊಂಡಿದ್ದ


Read More »

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ


Share       ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ ಅವರಿಗೆ ಜನುಮದಿನದ ಶುಭಾಶಯಗಳು🎂 ಅವರ ಬಗ್ಗೆ ಮಾಹಿತಿ ಡಾ.ಅಂಚನ್ ಸಿ ಕೆ, ಅಂತರರಾಷ್ಟ್ರೀಯ ವ್ಯಾಪಾರ ಮತ್ತು


Read More »

ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ


Share       ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ ಕೋಟ: ಶ್ರೀಮಾತಾ ಅಸ್ಪತ್ರೆಯ ಮಾಲಿಕರಾದ ಡಾ.ಸತೀಶ ಪೂಜಾರಿ (54) ಅವರು ಗುರುವಾರ ಬೆಳಿಗ್ಗೆ ಅವರ ಕೋಟತಟ್ಟು ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ


Read More »