TOP STORIES:

FOLLOW US

ದಸರೆಗೆ ಮಿಂಚಿದ ಸಿಂಹ ರಿಯಲಿಸ್ಟಿಕ್ ಆರ್ಟ್ ಕಲಾವಿದೆ .ಅಂತರಾಷ್ಟ್ರೀಯ ಸೌಂದರ್ಯ ಕಲಾವಿದೆ ಚೇತನಾ ಸಾಲಿಯಾನ್


ನವರಾತ್ರಿ ವಿಶೇಷವಾಗಿ ಪೂಜಿಸಲ್ಪಡುವ ದುರ್ಗಾ ಮಾತೆಯ ವಾಹನವಾಗಿರುವ ಸಿಂಹದ ಮುಖವನ್ನು ಯುವತಿಯ ಮುಖದಲ್ಲಿ ಚಿತ್ರಿಸಿರುವ ನಗರದ ಅಂತರ್ರಾಷ್ಟ್ರೀಯ ಸೌಂದರ್ಯ ಕಲಾವಿದೆ ಚೇತನಾ ಸಾಲಿಯಾನ್ .ಸಿಂಹದ ಚಿತ್ರವನ್ನು ಇನ್ಸ್ಟಾಗ್ರಾಂನಲ್ಲಿ ಅಪ್ ಲೋಡ್ ಮಾಡಿದ 4 ದಿನದಲ್ಲೇ ಇಪ್ಪತ್ತೈದು ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ನೂರಾರು ಮಂದಿ ಫೇಸ್ ಬುಕ್ ಸೇರಿದಂತೆ ಕಮೆಂಟ್ ಹಾಕಿರುತ್ತಾರೆ. ಸೆಲೆಬ್ರಿಟಿಗಳಾದ ಪಾರು ಸೀರಿಯಲ್ ನ ಸಾಗರ್,ಅದ್ವಿತಿ ಶೆಟ್ಟಿ, ನಿಯಾ ಸಕ್ಸೇನಾ ಕೂಡ ಲೈಕ್ ಮಾಡಿದ ಪ್ರಮುಖರು.ಚೇತನಾ ಸಾಲಿಯಾನ್ ಅವರು ಇದೀಗ ಸದ್ದಿಲ್ಲದೆ ಸುದ್ದಿ ಆಗಿದ್ದಾರೆ.

ಮಂಗಳೂರು ನಗರದ ಬೆಂದೂರ್ ವೆಲ್ ಚೇತನಾ ಬ್ಯೂಟಿ ಲಾಂಗ್ ಆ್ಯಂಡ್ ಆಕಾಡೆಮಿಯ ಮುಖ್ಯಸ್ಥೆ ಅಂತರ್ರಾಷ್ಟ್ರೀಯ ಸೌಂದರ್ಯ ಕಲಾವಿದೆ, ಅಂತರ್ರಾಷ್ಟ್ರೀಯ ಮಟ್ಟದ ಸೌಂದರ್ಯ ರೂಪದರ್ಶಿ ತರಬೇತುದಾರೆ ಚೇತನಾ ಸಾಲಿಯಾನ್. ಇವರು ಕಾಲೇಜಿನಲ್ಲಿ ಹವ್ಯಾಸವಾಗಿ ಬ್ಯೂಟಿಶಿಯನ್ ಕಲೆಯನ್ನು ಕರಗತ ಮಾಡಿಗೊಂಡ ಬಿ. ಎ ಮನಶಾಸ್ತ್ರಜ್ಞ ಪದವೀದರೆ. ಉನ್ನತ ವ್ಯಾಸಂಗಕ್ಕಾಗಿ ವಿದೇಶದಲ್ಲಿ ತರಬೇತಿ ಪಡೆದಿರುವ ರಷ್ಯಾ, ಸಿಂಗಾಪುರ, ಟರ್ಕಿ, ಜರ್ಮನಿ , ದುಬೈ ವಿದೇಶಗಳಲ್ಲಿ ಇವರು ಬಹು ಬೇಡಿಕೆಯ ಪ್ರಸಿದ್ಧ ಸೌಂದರ್ಯ ಕಲಾವಿದೆ. ಸ್ವಿಜ್ಹರ್ ಲ್ಯಾಂಡ್ ನಲ್ಲಿ ಬ್ಯೂಟಿ ಕಾಸ್ಮೇಟಿಕ್ (Cidesco Zurich) ಸರ್ಟಿಫಿಕೇಶನ್ ಪಡೆದಿರುತ್ತಾರೆ , ಸರ್ಟಿಫಿಕೇಟ್ ಫಸ್ಟ್ ಮಂಗಳೂರು
ಎಕ್ಸ್ಪರ್ಟ್ ಇನ್ ಏರ್ ಬ್ರಶ್ ಮೇಕ್ಆಫ್,ಸ್ಟೇಟೆಡ್ ಬ್ಯೂಟಿ ಪ್ರೋಪೇಶನ್ 1996ರಿಂದ ಪ್ರಾರಂಭಿದರು, ಸರ್ಟಿಪೈಡ್ ಕ್ರೈಲಾನ್ ಪ್ರೊಪೆಶನಲ್ ಮೇಕ್ಆಫ್ ಆಕಾಡೆಮಿ ಬರ್ಲಿನ್, ಮಾಸ್ಟರ್ ಕ್ಲಾಸ್ ಇನ್ ಹೇರ್ ಸ್ಟೈಲ್ ಡಿ ವಾಜ್ಹನ್ ರಷ್ಯಾ, ಮಾಸ್ಟರ್ ಕ್ಲಾಸ್ ಇನ್ ಹೇರ್ ಸ್ಟೈಲ್ ಜಾರ್ಜ್ ಕಾಟ್ ದುಬೈ, ಮಾಸ್ಟರ್ ಕ್ಲಾಸ್ ಇನ್ ಬ್ರೈಡಲ್ ಮೇಕ್ಆಫ್ ಫರ್ಮ್ ಏಷಿಯನ್ ಬ್ರೈಡಲ್(sukhi sanghera)ಮಾಸ್ಟರ್ ಕ್ಲಾಸ್ ಇನ್ ಬ್ರೈಡಲ್ ಮೇಕ್ಆಫ್, ಹೇರ್ ಸ್ಟೈಲ್ ನಯೀಮ್ ಖಾನ್ ಮತ್ತು ಇರ್ಫಾನ್ ಆಲಿ ದುಬೈ ಅನೇಕ ವಿದೇಶಗಳಿಂದ ಪ್ರತಿಷ್ಠಿತ ನುರಿತ ತರಬೇತಿಯ ಪ್ರಶಸ್ತಿ ಹಾಗೇ ಅರ್ಹತಾ ಪತ್ರವನ್ನು ಪಡೆದಿರುತ್ತಾರೆ. ಅವರು ಬ್ಯೂಟಿಷಿಯನ್ ಆಗಿ 24 ವರ್ಷದ ಪರಿಣಿತೆ ಹಾಗೂ ಅನುಭವಿ ಆಗಿದ್ದು ಹಾಗೇ ಇವರು ಹಲವಾರು ಕಡೆ ಮಂಗಳೂರು,ದಾವಣಗೆರೆ,
ಧರ್ಮಸ್ಥಳ, ಬೆಂಗಳೂರು ಬ್ಯೂಟಿ ಕ್ಷೇತ್ರದ ಕುರಿತು ಸೆಮಿನಾರ್ ಕೊಟ್ಟು ಇರುವ ಅಲ್ಲದೆ ಬ್ಯೂಟಿಯನ್ ಶಿಕ್ಷಣದಲ್ಲಿ ಅಪಾರ ಆಸಕ್ತಿ ಇರುವವರಿಗೆ ಅರ್ಹತೆ ಅನುಸಾರವಾಗಿ
ಉಚಿತ ತರಬೇತಿಯ ಆಶಯ ಹಾಗೇ ಪ್ರಸ್ತುತ ಸಾಮಾಜಿಕ ಚಿಂತನೆಯ ಆಕರ್ಷಣೀಯ ಆದರ್ಶ ವ್ಯಕ್ತಿತ್ವ ಇವರದು. ಮೇಕಪ್ ಆರ್ಟ್, ಮೆಹಂದಿ ವಿನ್ಯಾಸದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದು ಇವರು ಇದನ್ನೇ ತಮ್ಮ ವೃತ್ತಿಯನ್ನಾಗಿಸಿದವರು ಏನಾದರೂ ಹೊಸತನವನ್ನು ಮಾಡಬೇಕೆಂಬ ನಿಟ್ಟಿನಲ್ಲಿ ನವರಾತ್ರಿ ಸಂಧರ್ಭದಲ್ಲಿ  ಸಿಂಹದ ಮುಖವನ್ನು ಯುವತಿಯ ಮುಖದಲ್ಲಿ ಚಿತ್ರಿಸಿ, ತಮ್ಮ ಕಲಾತ್ಮಕ ಪ್ರತಿಭೆಯನ್ನು ಪ್ರದರ್ಶಿಸಿ ಸಾಮಾಜಿಕ ಜಾಲತಾಣದ
ಇನ್ಸ್ಟಾಗ್ರಾಂ,ಫೇಸ್ಬುಕ್ನಲ್ಲಿ ,ದೇಶ,
ವಿದೇಶದಲ್ಲೂ ವಿಡಿಯೋ ವೈರಲ್ ಆಗಿರುತ್ತದೆ.

ರಿಯಾಲಿಸ್ಟಿಕ್ ಆರ್ಟ್

ಚೇತನಾರವರು ತಮ್ಮ ಶಿಷ್ಯೆ ಶಿವಮೊಗ್ಗ ಮೂಲದ *ಶ್ರೇಯಾ ಎಂ. ಭಟ್ ಮುಖದಲ್ಲಿ ರಿಯಾಲಿಸ್ಟಿಕ್ ಆರ್ಟ್ ಬಳಸಿ ಸಿಂಹದ ಚಿತ್ರ ರಚಿಸಿರುವ ಆಕೆಯ ಕೂದಲನ್ನು ಸಿಂಹದ ಮುಖದ ಸುತ್ತಲಿನ ಕೂದಲನ್ನಾಗಿ ಪರಿವರ್ತಿಸಿದ್ದಾರೆ. ಕಣ್ಣುಗಳನ್ನು ಮುಚ್ಚಿಅದರ ಮೇಲೆ ವ್ಯಾಕ್ಸ್ ಹಚ್ಚಿ ಕಣ್ಣಿನ ಹುಬ್ಬುಗಳ ಮೇಲೆ ಸಿಂಹದ ಕಣ್ಣನ್ನು ಚಿತ್ರಿಸಿ ಸುಮಾರು ಐದು ಗಂಟೆಗಳ ಅವಧಿಯಲ್ಲಿ ತಮ್ಮ ಕಲಾತ್ಮಕ ಕೈಚಳಕವನ್ನು ಮೆರೆದಿದ್ದಾರೆ. ಈ ಕಲೆಯನ್ನು ಛಾಯಾಚಿತ್ರಗ್ರಾಹಕ ವಿವೇಕ್ ಸ್ವಿಕೇರಾ ಸೆರೆ ಹಿಡಿದಿದ್ದಾರೆ.


ವಿಶೇಷವೆಂದರೆ ಈ ಕಲೆಯಲ್ಲಿ ಸಿಂಹದ ಮುಖವನ್ನು ನೈಜವಾಗಿ ಚಿತ್ರಿಸಲು ಯಾವುದೇ ರೀತಿಯ ಕೃತಕ ಕೂದಲನ್ನು ಬಳಸಿಲ್ಲ. ಅಪರೂಪದ ಫೇಸ್ ಪೇಯ್ಟಿಂಗ್ ಎಂದೇ ಕರೆಯಲ್ಪಡುವ ಈ ಕಲೆಯಲ್ಲಿ ಚೇತನಾ ಪ್ರಥಮಪ್ರಯತ್ನದಲ್ಲೇ ಸೈ ಅನ್ನಿಸಿಕೊಂಡಿದ್ದಾರೆ. ಇವರ ಕಲಾಗಾರಿಕೆ ಸಾಧನೆಯನ್ನು ಪ್ರತಿಷ್ಠಿತ ದಿನಪತ್ರಿಕೆಗಳಾದ ಉದಯವಾಣಿ,ವಿಜಯ ಕರ್ನಾಟಕ, ವಾರ್ತಾಭಾರತಿ , ಮಂಗಳೂರು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ಪೇಪರಿನಲ್ಲಿ ಪೀಠಿಕೆಯ ರೂಪದಲ್ಲಿ ಪ್ರಸಾರವಾಗಿರುತ್ತದೆ. ಹಾಗೇ
ಡಿ. ಡಿ,ಸುವರ್ಣ ಟಿವಿ, ದಿಗ್ಗಜ್ಜಯ, ಎನ್. ಎಸ್, ದೈಜಿವಲ್ಡ್, ವಿ. ಕೆ ಟಿವಿ,.ಟಿ.ವಿ.9 ಮಾಧ್ಯಮದವರೂ ಸಂದರ್ಶನ ಮಾಡಿರುವುದು ನಿಜಕ್ಕೂ ಶ್ಲಾಘನೀಯ.

ಪ್ಯಾಂಟಸ್ ಅರ್ಟ್
ಕೋಸ್ಟಲ್ ವುಡ್ ಚಿತ್ರನಟಿ ಸ್ವಸ್ತಿಕ್ ಪೂಜಾರಿ ಅವರ ತಲೆ ಮೇಲೆ 5 ಕೆ. ಜಿ ಭಾರದ ಹಲೋ ಗೋಲ್ಡನ್ ಕ್ರೌನ್
ಇಟ್ಟುಕೊಂಡು 12 ಕ್ಯಾಂಡಲ್ ಹೊತ್ತಿಸಿದ ಏಂಜಲ್ ಮಾದರಿಯ ಫ್ಯಾಂಟಸಿ ಆರ್ಟ್ ನ್ನು ಚೇತನಾರವರ ನಿರ್ದೇಶನದಲ್ಲಿ ರಚಿಸಿದ್ದು ಅದನ್ನು ಅಕ್ಟೋಬರ್ 30 ರಂದು ಬಿಡುಗಡೆ ಮಾಡಿದ್ದಾರೆ. ಅಕ್ಟೋಬರ್ 31ರಂದು ಅಂತರಾಷ್ಟ್ರೀಯ ಹೆಲೋವಿನ್ ಡೇ ಆಚರಿಸಲಾಗುತ್ತದೆ. ಈ ಸಮಸ್ತ ಸಂತರ ಪೂರ್ವದಿನ ಎಂದು ಕರೆಯಲಾಗುವುದರಿಂದ ಈ ದಿನದ ಸಂದೇಶ ಸಾರುವ ಸಲುವಾಗಿ ನಟಿ ಸ್ವಸ್ತಿಕ್ ಪೂಜಾರಿಗೆ ವಿಶೇಷವಾಗಿ ಮೇಕಪ್ ಮಾಡಲಾಗಿದೆ.

ಚೇತನಾ ಸಾಲಿಯಾನ್ ಅವರ ಹೊಸ ರೀತಿಯ ಕಲಾಗಾರಿಕೆ ಯುವಜನತೆಗೆ ಪ್ರೇರಣೆಯಾಗಲಿ ಇವರ ಸಾಧನೆಗೆ ಇನ್ನಷ್ಟು ಜೀವಂತಿಕೆ ತುಂಬಿ ದೇಶ,ವಿದೇಶದಲ್ಲಿ
ಹೆಸರು, ಶ್ರೇಯಸ್ಸು ಗಳಿಸಿರುವ ಇವರು ತುಳುನಾಡಿಗೆ ಹೆಮ್ಮೆ.


Share:

More Posts

Category

Send Us A Message

Related Posts

ಗೆಜ್ಜೆಗಿರಿಯ ಮೂಲಕ ಬಿಲ್ಲವ ಸಮಾಜಕ್ಕೆ ಸಂಘಟಾನಾತ್ಮಕ ಬಲ ತುಂಬಲು ಹೊರಟ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಗೆ ಅಭಿನಂದನೆ


Share       ಬಿಲ್ಲವ ಸಮಾಜ ಸೇವಾ ಸಂಘ(ರಿ) ಕುಂದಾಪುರ ಇದರ ಅಧ್ಯಕ್ಷರಾದ ಅಶೋಕ್ ಪೂಜಾರಿ ಬಿಜಾಡಿ ಹಾಗೂ ಸಂಘದ ಪಧಾಧಿಕಾರಿಗಳು  ಬ್ರಹ್ಮ ಶ್ರೀ ನಾರಾಯಣ ಗುರುಗಳ ವಿದ್ಯೆಯಿಂದ ಸ್ವತಂತ್ರರಾಗಿರಿ ಸಂಘಟನೆಯಿಂದ  ಬಲಯುತರಾಗಿ ಎಂಬ ತತ್ವದಂತೆ  ಬಿಲ್ಲವ


Read More »

ರಕ್ತಹೀನತೆಯಿಂದ ಬಳಲುತ್ತಿರುವವರು ಹುರುಳಿ ಸೇವನೆ ಮಾಡಿ


Share       ಹುರುಳಿ ನಾಲಿಗೆಗೆ ರುಚಿ ನೀಡುವುದರ ಜೊತೆಗೆ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಏಕೆಂದರೆ ಇದು ಪೌಷ್ಠಿಕಾಂಶಗಳಿಂದ ಸಮೃದ್ಧವಾಗಿದ್ದು, ಪ್ರೋಟೀನ್, ಫೈಬರ್, ಜೀವಸತ್ವಗಳು ಮತ್ತು ಖನಿಜಗಳ ಭಂಡಾರವಾಗಿದೆ. ಇದು ದೇಹಕ್ಕೆ ಅಗತ್ಯ ಪ್ರಯೋಜನಗಳನ್ನು ನೀಡುವ ಧಾನ್ಯವಾಗಿದೆ.


Read More »

ಬಂಟ್ವಾಳ ತಾಲೂಕು ಬಿಲ್ಲವ ಸಂಘದಲ್ಲಿ ಗೆಜ್ಜೆಗಿರಿ ಜಾತ್ರೋತ್ಸವ ಸಮಾಲೋಚನಾ ಸಭೆ


Share       ಬಂಟ್ವಾಳ : ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಆಡಳಿತ ಸಮಿತಿಯ ಪದಾಧಿಕಾರಿಗಳು ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸಕ್ಕೆ ಆಮಂತ್ರಿಸಿದರು. ಗೆಜ್ಜೆಗಿರಿ ಕ್ಷೇತ್ರಾಡಳಿತ


Read More »

ಫುಡ್ ಫೆಸ್ಟ್ ನಿಂದ ಬಂದ ಹಣ ಬಡವರ್ಗಕ್ಜೆ ಮೀಸಲಿಡುತ್ತಿರುವ ಬಿರುವೆರ್ ಕುಡ್ಲ; 3 ಲಕ್ಷ ಮೌಲ್ಯದ ಕೃತಕ ಅಂಗಾಂಗ ಸಲಕರಣೆ ವಿತರಣೆ


Share       ಮಂಗಳೂರು: ಅವರೆಲ್ಲಾ ತಿಂಗಳ ಸಂಬಳಕ್ಕಾಗಿ ದುಡಿಯುವ ಯುವಕರು. ಆದ್ರೆ ದುಡಿದ ಹಣದಲ್ಲಿ ಸಮಾಜ ಸೇವೆಗಾಗಿ ಮೀಸಲಿಟ್ಟು ಸೇವಾ ಕಾರ್ಯ ನಡೆಸುತ್ತಿರುವ ಆ ತಂಡ ಮನೆಯಿಲ್ಲದವರಿಗೆ ಮನೆ,ಅನಾರೋಗ್ಯಕ್ಕೀಡಾದವರಿಗೆ ಚಿಕಿತ್ಸೆಗೆ ಹಣಕಾಸಿನ ನೆರವು,ದಿನಸಿ ಕಿಟ್ ,ಆಂಬುಲೆನ್ಸ್


Read More »

ಮಹಾ ಕುಂಭಮೇಳ: ಮಹಾಮಂಡಲೇಶ್ವರರಾಗಿ ಪಟ್ಟಾಭಿಶಕ್ತರಾದ ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಶ್ರೀ ಕರ್ನಾಟಕಕ್ಕೆ ಸಂದ ಮೊದಲ ಗೌರವ


Share       ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರದ ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಯವರಿಗೆ ಜ.31 ರಂದು ಪ್ರಯಾಗ್ ರಾಜ್ ನಲ್ಲಿ ನಡೆದ ಮಹಾ ಕುಂಬಮೇಳದಲ್ಲಿ ಉತ್ತರ


Read More »

ರಾಷ್ಟ್ರಮಟ್ಟದ ನ್ಯಾಷನಲ್ ಗೇಮ್ಸ್ -2025 ಗೆ ಕರ್ನಾಟಕ ತಂಡಕ್ಕೆ ಆಯ್ಕೆಯಾದ ಕಾಣಿಯೂರಿನ ಸೌಮ್ಯ ಪೂಜಾರಿ


Share       ಪುತ್ತೂರು: ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯಲಿರುವ 38ನೇ ನ್ಯಾಷನಲ್ ಗೇಮ್ಸ್ -2025 ರಲ್ಲಿ ರಾಷ್ಟ್ರೀಯ ಮಹಿಳೆಯರ ಕಬಡ್ಡಿ ಚಾಂಪಿಯನ್‌ಶಿಪ್ ನಲ್ಲಿ ಭಾಗವಹಿಸಲು ಕರ್ನಾಟಕ ತಂಡಕ್ಕೆ ಕಾಣಿಯೂರಿನ ಸೌಮ್ಯ ಪೂಜಾರಿ ರವರು ಆಯ್ಕೆ ಆಗಿರುತ್ತಾರೆ. ಇವರು


Read More »