TOP STORIES:

ದುರ್ಬಲ‌ ವರ್ಗದ ಜನರ ಕಷ್ಟಕ್ಕೆ ಸದಾ ಹೆಗಲು ನೀಡಿ ಸಹಕಾರ ನೀಡುತ್ತಿರುವ ಸಂಸ್ಥೆ ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್


ನಿರಂತರ ಸಮಾಜಮುಖಿ ಕಾರ್ಯಗಳೊಂದಿಗೆ ಸಮುದಾಯ ಹಾಗು ಸಮಾಜದಲ್ಲಿರುವ ದುರ್ಬಲ‌ ವರ್ಗದ ಜನರ ಕಷ್ಟಕ್ಕೆ ಸದಾ ಹೆಗಲು ನೀಡಿ ಸಹಕಾರ ನೀಡುತ್ತಿರುವ ಸಂಸ್ಥೆ ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್. ಮೂರು ವರ್ಷದ ಪಯಣದಲ್ಲಿ ಹಲವಾರು‌ ಸೇವಾ ಕಾರ್ಯವನ್ನು ನೀಡಿರುವ ಸಂಸ್ಥೆ ಈ ಬಾರಿ ವಿಶಿಷ್ಟ ಸೇವಾ ಯೋಜನೆಯೊಂದನ್ನು ಪೂರ್ಣಗೊಳಿಸಿ ಸಮಾಜಕ್ಕರ್ಪಿಸಿದೆ.ಕಡೇಶಿವಾಲಯ ದ ನೆತ್ತರ ಜೇರಾ ಎಂಬಲ್ಲಿನ ನಿವಾಸಿ ಶೇಖರ ಪೂಜಾರಿ ಜೇರಾ , ಕೂಲಿ ಕೆಲಸ ಮಾಡಿಕೊಂಡು ದಿನ‌ಸಾಗಿಸುತ್ತಿದ್ದು, ಪತ್ನಿ ಹಾಗು ಎರಡು ಪುಟ್ಟ ಮಕ್ಕಳ ಸಂಸಾರದ ಭಾರ ಇವರ ಮೇಲಿತ್ತು. ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಈ ಕುಟುಂಬಕ್ಕೆ ಸಣ್ಣದಾದರೂ ಸ್ವಂತ ಸೂರೊಂದು ಬೇಕೆಂಬ ಕನಸು ಹಲವಾರು ವರ್ಷಗಳಿಂದ‌ ಮನದಾಳದಲ್ಲಿತ್ತು. ಈ ನಿಟ್ಟಿನಲ್ಲಿ ಮನೆ ನಿರ್ಮಾಣ ಕಾರ್ಯಕ್ಕೆ ಮುಂದಾದರೂ ತೀವ್ರ ಆರ್ಥಿಕ ಅಡಚಣೆಯಿಂದಾಗಿ ಮನೆ ನಿರ್ಮಾಣದ 20% ಕೆಲಸವನ್ನೂ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ, ವರ್ಷಗಳೇ ಉರುಳಿದರು ಕನಸು ಕೈಗೂಡದೇ ಕೈಚೆಲ್ಲಿ ಕುಳಿತಿತ್ತು ಈ ಬಡ ಕುಟುಂಬ.

ಈ ಸಂಧರ್ಭ ಈ ಕುಟುಂಬಕ್ಕೆ ಆಶಾ ಕಿರಣವಾಗಿ‌ ಕಂಡದ್ದು ಬಿರುವೆರ್ ಕಡೇಶಿವಾಲಯ. ಕನಸು‌ ಕೈಚೆಲ್ಲಿ ಕುಳಿತಿದ್ದ ಕುಟುಂಬಕ್ಕೆ‌ ಸಂಸ್ಥೆ ಸಹಕಾರ ಮಾಡಲು‌ ನಿರ್ಧರಿಸಿತು. 3 ವರ್ಷದ ಪಯಣದಲ್ಲಿ ನಾಲ್ಕನೇ ಮನೆ ನಿರ್ಮಾಣ ಯೋಜನೆಗೆ ಕೈ ಹಾಕಿತು.

ಸರ್ವ ಸದಸ್ಯರ ಸಹಕಾರದೊಂದಗೆ, ಲಾಕ್ ಡೌನ್ ಸಂಧರ್ಭದ ಸಮಯವನ್ನು ಸದುಪಯೋಗಿಸಿಕೊಂಡ ಸಂಸ್ಥೆ ಹಲವಾರು ಶ್ರಮದಾನಗಳನ್ನು ನಡೆಸಿ ಹಾಗೂ ಟ್ರಸ್ಟ್ ನ ಸದಸ್ಯರ ಮೂಲಕವೇ ಎಲ್ಲಾ ಕೆಲಸಗಳನ್ನು ಮಾಡಿಸಿ ಸುಸಜ್ಜಿತ ಮನೆಯನ್ನು ನಿರ್ಮಿಸಿಯೇ ಬಿಟ್ಟಿತು.

ಶ್ರಮದಾನಗಳನ್ನು ಹೊರತುಪಡುಸಿ ಸುಮಾರು 1.50 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿ ದಿ.23/08/2020 ರಂದು ಸರಳ ಸಮಾರಂಭವೊಂದನ್ನು ನಡೆಸಿ ಅರ್ಥಪೂರ್ಣ ಕಾರ್ಯಕ್ರಮದೊಂದಿಗೆ ಈ ಮನೆಯನ್ನು ಹಸ್ತಾಂತರಿಸಲಾಯಿತು.

ಈ ಸಂಧರ್ಭ ಶ್ರೀ ಕ್ಷೇತ್ರ ಗೆಜ್ಜೆಗಿರಿ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ, ಮಾಜಿ ತಾಲೂಕು ಪಂಚಾಯತ್ ಸದಸ್ಯರು, ಉಧ್ಯಮಿಗಳು ಆದ ಶ್ರೀ. ಯಶವಂತ ಪೂಜಾರಿ ದೇರಾಜೆಗುತ್ತು. ಯುವ ನಾಯಕ, ಯುವ ಉಧ್ಯಮಿ ಶ್ರೀ. ಯತಿನ್ ಕುಮಾರ್ ಕಲ್ಲಡ್ಕ, ಹಾಗು ಶ್ರೀ ಕ್ಷೇತ್ರ ಬಾಕಿಲ ಇಲ್ಲಿನ ಪ್ರಮುಖರಾದ ಶ್ರೀ.ವಸಂತ ಪೂಜಾರಿ ಬಾಕಿಲಗುತ್ತು ಇವರು ಪಾಲ್ಗೊಂಡಿದ್ದರು.ಈ ಸಂಧರ್ಭ ವೇದಿಕೆಯಲ್ಲಿ ಟ್ರಸ್ಟ್ ನ ಗೌರವಾಧ್ಯಕ್ಷರಾದ ಶ್ರೀ. ಸಂಜೀವ ಪೂಜಾರಿ ದಾಸಕೋಡಿ, ಅಧ್ಯಕ್ಷರಾದ ಶ್ರೀ. ಲೋಕನಾಥ ಪೂಜಾರಿ ತಿಮರಾಜೆ ಉಪಸ್ಥಿತರಿದ್ದರು.

ಈ ಸಮಾರಂಭದಲ್ಲಿ ಯುವ ಬರಹಗಾರ ಶೈಲು ಬಿರ್ವ ಅಗತ್ತಾಡಿ, ನಿಶಿ ಪೂಜಾರಿ ಬಾಕಿಲ, ಯುವ ಉಧ್ಯಮಿ ಶ್ರೀ. ಚಿತ್ತರಂಜನ್ ಹೊಸಕಟ್ಟ, ಟ್ರಸ್ಟ್ ನ ಸಂಚಾಲಕರಾದ ಶ್ರೀ.ವಿದ್ಯಾಧರ ಪೂಜಾರಿ ಅಣ್ಣೆಂಗಳ, ಹಿರಿಯರಾದ ಶ್ರೀ. ಸಾಂತಪ್ಪ ಪೂಜಾರಿ ಪಚ್ಚಡಿಬೈಲು ಹಾಗು ಟ್ರಸ್ಟ್ ನ ಟ್ರಸ್ಟಿಗಳು, ಸದಸ್ಯರು, ಮಹಿಳಾ ಘಟಕ, ವಿದ್ಯಾರ್ಥಿ ಘಟಕದ ಸದಸ್ಯರು ಉಪಸ್ಥತರಿದ್ದರು.

ಈ ಯೋಜನೆಯ ಯಶಸ್ಸನಲ್ಲಿ ಕೈಜೋಡಿಸಿದ ಎಲ್ಲಾ ಬಂಧು ಮಿತ್ರರಿಗೂ ಟ್ರಸ್ಟ್ ನ ವತಿಯಿಂದ ಹೃದಯಾಂತರಾಳದ ಧನ್ಯವಾದಗಳು.


Related Posts

ಕಲರ್ಸ್ ಕನ್ನಡ ಬಿಗ್ ಬಾಸ್ 12ರ ಸ್ಪರ್ಧಿ ಧ್ರುವಂತ್ (ಚರಿತ್ ಬಾಳಪ್ಪ ಪೂಜಾರಿ) ಜೀವನದ ಯಶೋಗಾಥೆ


Share         ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನು ಸಹಿಸಿಕೊಂಡು, ಅವಕಾಶಗಳಿಂದ ವಂಚಿತನಾದರೂ ಧೃತಿಗೆಡದೆ, ಸಾಧನೆಯ ಹಾದಿಯಲ್ಲಿ ಹಂತ ಹಂತವಾಗಿ ಮುನ್ನಡೆಯುತ್ತ ಇಂದು ಎಲ್ಲರ ಮನಗಳಲ್ಲಿ ಮನೆ ಮಾಡಿರುವಂತಹ ನಮ್ಮೆಲ್ಲರ ಹೆಮ್ಮೆಯ ಸಾಧಕ ಧ್ರುವಂತ್ ಇವರ ಯಶಸ್ಸಿನ ಹಿಂದಿನ


Read More »

🩸 ಓಮಾನ್ ಬಿಲ್ಲವಾಸ್ ವತಿಯಿಂದ ಆಯೋಜಿಸಲಾದ ಸಾಮೂಹಿಕ ರಕ್ತದಾನ ಶಿಬಿರ 🩸 ಬೌಶರ್ ಬ್ಲಡ್ ಬ್ಯಾಂಕ್, ಘಾಲಾ ಇಲ್ಲಿ ಯಶಸ್ವಿಯಾಗಿ ನಡೆಯಿತು.


Share          ಒಂದು ಕಾಲದಲ್ಲಿ ತುಳುನಾಡಿನ ಮೂಲದವರಾದ ಬಿಲ್ಲವರು ಕೃಷಿಕರಾಗಿ ಹಾಗೂ ಬೈದರಾಗಿ ತಮ್ಮ ಪರಿಶ್ರಮ, ಶ್ರಮಸಾಧನೆ ಮತ್ತು ಸಾಮಾಜಿಕ ಜವಾಬ್ದಾರಿಗಳ ಮೂಲಕ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆದವರು. ಪ್ರಕೃತಿಯೊಂದಿಗೆ ಸಮನ್ವಯದಿಂದ ಬದುಕನ್ನು ಸಾಗಿಸುತ್ತಾ, ಪರಸ್ಪರ


Read More »

ನಾನು ಕಂಡ ಪ್ರವೀಣ್ ಪೂಜಾರಿ


Share         ನಾನು ಕಂಡ ಪ್ರವೀಣ್ ಪೂಜಾರಿ ಸಾಧಾರಣ 15 ವರ್ಷಗಳಿಂದ ನಮ್ಮ ಆತ್ಮೀಯತೆ ಬಿಲ್ಲವ ಸಮಾಜದ ಸಾಮಾನ್ಯ ಜನರಿಗೂ ಸಮಸ್ಯೆ ಬಂದಂತ ಸಂದರ್ಭದಲ್ಲಿ ವಕೀಲನಾಗಿ ಅಥವಾ ಸಾಮಾಜಿಕ ಕಾರ್ಯಕರ್ತನಾಗಿ ನ್ಯಾಯ ದೊರಕಿಸಿಕೊಟ್ಟಂತಹ ಒಬ್ಬ ನಮ್ಮ


Read More »

ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ನಿಶಾ ಪೂಜಾರಿ ಉತ್ತೀರ್ಣರಾಗಿದ್ದಾರೆ.


Share         ಮುಂಬಯಿ : ಕಾಂದಿವಲಿ ಪೂರ್ವದ ಠಾಕೂರ್ ಕಾಂಪ್ಲೆಕ್ಸ್ ನಿವಾಸಿ ನಿಶಾ ಪೂಜಾರಿ ಅವರು ಇತ್ತೀಚೆಗೆ ಸೆಪ್ಟೆಂಬರ್‌ನಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಅವರು ಕಾರ್ಕಳ


Read More »

ಬಹುಮುಖ ಪ್ರತಿಭಾವಂತೆ ಹರ್ಷಿಕಾ ಕಾಣಿಯೂರು ಅವರಿಗೆ ಅಭಿನಂದನೆಗಳು


Share         ಹರ್ಷಿಕಾ ಕಾಣಿಯೂರು ಅವರ ಬಾಲ್ಯದ ವಯಸ್ಸಿನಲ್ಲಿಯೇ ಕೃಷಿ ಕಾರ್ಯದ ಮೇಲಿನ ಆಸಕ್ತಿ ಹಾಗೂ ಶ್ರಮವನ್ನು ಗುರುತಿಸಿ ಸೈಟ್ ರೀಟಾ ವಿದ್ಯಾ ಸಂಸ್ಥೆ ಗೌರವಿಸಿದ ಕ್ಷಣ ನಿಜಕ್ಕೂ ಹೆಮ್ಮೆಯದು. 🌾🌱👏   ಅಷ್ಟೇ ಅಲ್ಲದೆ,


Read More »

ಅಕ್ಷತಾ ಪೂಜಾರಿಗೆ ಎಂಬ ಮುಗ್ದ ಯುವತಿಯ ಮೇಲೆ ಪೋಲಿಸರಿಂದ ಹಲ್ಲೆ- ವಕೀಲ‌ ಪ್ರವೀಣ್ ಪೂಜಾರಿ ಆಕ್ರೋಶ


Share         ಅಕ್ಷತಾ ಪೂಜಾರಿಗೆ ಎಂಬ ಮುಗ್ದ ಯುವತಿಯ ಮೇಲೆ ಪೋಲಿಸರಿಂದ ಹಲ್ಲೆ- ವಕೀಲ‌ ಪ್ರವೀಣ್ ಪೂಜಾರಿ ಆಕ್ರೋಶ ಉಡುಪಿ: ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯದ ಜಾರಿ ಆದೇಶವನ್ನು ಕಾರ್ಯಗತಗೊಳಿಸುವ ನೆಪದಲ್ಲಿ ಪೊಲೀಸರು ಮಹಿಳೆಯರಿದ್ದ ಮನೆಗೆ ಬೆಳ್ಳಂ


Read More »