TOP STORIES:

FOLLOW US

ದೆಹಲಿಯಲ್ಲಿ ಬಿ.ಜನಾರ್ಧನ ಪೂಜಾರಿಯವರನ್ನು ಭೇಟಿ ಮಾಡಿದಾಗ


ನನಗೆ ದೆಹಲಿಗೆ ಹೋಗುವ ಅವಕಾಶ ಸಿಕ್ಕಿತು 2006 ರಲ್ಲಿ. ಆಗ ನಾನು ಕರ್ನಾಟಕ ತುಳುಸಾಹಿತ್ಯ ಅಕಾಡೆಮಿ ಸದಸ್ಯನಾಗಿದ್ದೆ. ಅಮೇರಿಕದ ಸಾಂಸ್ಕೃತಿಕ ಸಂಘದವರಿಗೆ ನಮ್ಮ ದೈವಾರಾಧನೆ ಕುರಿತು ತಿಳಿಸುವ ಜವಾಬ್ದಾರಿಯಿತ್ತು. ಅದಕ್ಕಾಗಿ ತುಳುನಾಡಿನಕೋಲ ಹೇಗಿರುತ್ತದೆ ಎನ್ನುವುದನ್ನು ಮನವರಿಕೆ ಮಾಡಿಕೊಡುವ ಉದ್ದೇಶ. ಅದಕ್ಕಾಗಿ ತುಳು ಸಾಹಿತ್ಯ ಅಕಾಡೆಮಿಯಿಂದ ತಂಡವನ್ನುದೆಹಲಿಗೆ ಒಯ್ಯುವ ಹೊಣೆ ನನಗೆ. ಸರಿ ನನ್ನೊಂದಿಗೆ ನಾಲ್ಕು ಜನರ ತಂಡವಿತ್ತು. ನಾವು ದೆಹಲಿ ತಲುಪಿ ಕರ್ನಾಟಕ ಸಂಘದಲ್ಲಿಉಳಿದುಕೊಂಡಿದ್ದೆ.

ಒಂದು ದಿನ ಮುಂಜಾನೆ ನಾನು ಕುತೂಹಲಕ್ಕಾಗಿ ದೆಹಲಿಯಲ್ಲಿದ್ದ ಮತ್ತು ಆಗ ರಾಜ್ಯ ಸಭಾ ಸದಸ್ಯರಾಗಿದ್ದ ಬಿ.ಜನಾರ್ಧನಪೂಜಾರಿಯವರಿಗೆ ಫೋನ್ ಮಾಡಿದೆ. ಆಕಡೆಯಿಂದ ದೂರವಾಣಿ ಕರೆ ತೆಗೆದುಕೊಂಡರು. ‘ಸಾರ್ ನಾನು ಚಿದಂಬರಎಂದೆ. ‘ ಹೋಎಲ್ಲಿದ್ದೀರಿಪ್ರಶ್ನೆ ಬಂತು. ‘ನಾನು ದೆಹಲಿಗೆ ಬಂದೆಎಂದೆ. ‘ಯಾವಾಗ ಬಂದಿರಿಎಂದರು. ‘ ಸಾರ್ ಮೂರು ದಿನವಾಯ್ತುಎಂದೆ. ‘ಛೇ ಛೇ ಮೂರು ದಿನವಾದರೂ ಯಾಕೆ ನನಗೆ ಹೇಳಲಿಲ್ಲ ?, ಯಾವಾಗ ಹೋಗುತ್ತೀರಿ ?’ ಮತ್ತೆ ಪ್ರಶ್ನೆ. ‘ಇಲ್ಲ ಸಾರ್ ನಾಳೆಹೋಗುತ್ತೀನಿ’. ‘ ಹಾಗಾದರೆ ಈಗಲೇ ಬನ್ನಿ ನನ್ನ ಮನೆಗೆಎಂದವರೇ ಮನೆಯ ವಿಳಾಸ ಹೇಳಿದರು.‘ ಏನಾದರೂ ಸಮಸ್ಯೆಯಾದರೆಫೋನ್ ಮಾಡಿ, ಕಾಯುತ್ತೇನೆಎಂದು ಫೋನ್ ಇಟ್ಟರು.

ಈಗ ನನಗೆ ಸಮಸ್ಯೆ, ಅಲ್ಲಿಗೆ ಹೋಗುವುದು ಹೇಗೆಂದು. ಸರಿ ನಾನು ನನ್ನ ಗೆಳೆಯ ಡಾ. ಪುರುಷೋತ್ತಮ ಬಿಳಿಮಲೆ (ದೆಹಲಿಯಕರ್ನಾಟಕ ಸಂಘದ ಅಧ್ಯಕ್ಷ)ಯನ್ನು ಕೇಳಿ ವಿಳಾಸ ತಿಳಿಸಿದೆ. ಅವರು ಹೇಳಿದಂತೆ ಟ್ಯಾಕ್ಸಿ ಮಾಡಿಕೊಳ್ಳುವುದು ಅನಿವಾರ್ಯವಾಗಿತ್ತು. ಅವರಿಗೇ ಹೇಳಿದೆ ಟ್ಯಾಕ್ಸಿ ಮಾಡಿಕೊಡಿ ಯಾಕೆಂದರೆ ನಾನು ಕೇಳಿದರೆ ಬಾಡಿಗೆ ದುಬಾರಿ ಹೇಳಬಹುದೆಂದೆ. ಅವರೇ ತಕ್ಷಣ ಒಂದುಟ್ಯಾಕ್ಸಿಗೆ ಫೋನ್ ಮಾಡಿ ಬರಲು ಹೇಳಿದರು. ಟ್ಯಾಕ್ಸಿ ಬಂತು.

ನಾನು ಬಿ.ಜನಾರ್ಧನ ಪೂಜಾರಿ ಮನೆಗೆ ಹೋಗಬೇಕು ಪೂಜಾರಿಜೀ ಯೇ ಬಹುತ್ ಅಚ್ಛಾ ಆಧ್ಮಿ, ವೋ ತೋತೋ ಸಬ್ಕೋಮಾಲೂಮ್ ಹೈಎಂದ ಟ್ಯಾಕ್ಸಿ ಡ್ರೈವರ್. ನನಗೆ ಅಚ್ಚರಿ. ಜನಾರ್ಧನ ಪೂಜಾರಿ ಮನುಷ್ಯನಿಗೂ ಪರಿಚಯವಲ್ಲಾ ಎಂದು.

ಟ್ಯಾಕ್ಸಿ ಹೊರಟಿತು ಪೂಜಾರಿ ಮನೆಗೆ. ಟ್ಯಾಕ್ಸಿ ಡ್ರೈವರ್ ಗೂ ಯಾಕೋ ಸಂಶವಾಯಿತು. ಅಲ್ಲಿದ್ದವರನ್ನು ವಿಚಾರಿಸಿದ. ಆತ ಬಂದಜಾಗ ಸರಿಯಾಗಿತ್ತು. ಮತ್ತೆ ಆತ ನನಗೆ ಹೇಳಿದ ನಾನು ತುಂಬಾ ದಿನವಾಯ್ತು ಬಂದು. ಅದಕಾಗಿಯೇ ಅಲ್ಲೇ ಇದ್ದಾರೋ ಬದಲಾಗಿಬೇರೆ ಎಲ್ಲಿಗಾದರೂ ಹೋಗಿದ್ದಾರೋ ಎಂದು ಕೇಳಿದೆ, ನಿಮಗೆ ತೊಂದರೆಯಾಗಲಿಲ್ಲ ತಾನೇ ಕೇಳಿದ. ನಾನು ಇಲ್ಲ ಎಂದೆ. ಟ್ಯಾಕ್ಸಿಯನ್ನು ಸರಿಯಾಗಿ ಪೂಜಾರಿಯವರಿದ್ದ ಮನೆಯ ಮುಂದೆ ನಿಲ್ಲಿಸಿ ಗೇಟ್ ತೆಗೆದು ಹೋಗಿ ಎಂದ.

ನಾನು ಅಳುಕುತ್ತಲೇ ನಿಧಾನವಾಗಿ ಗೇಟ್ ತೆಗೆದುಕೊಂಡು ಹೋದೆ. ಅದು ದೊಡ್ಡ ಮನೆ. ನಾಲ್ಕು ಸುತ್ತಲೂ ಕಾಂಪೌಂಡ್. ವಿಶಾಲವಾದ ಜಾಗದಲ್ಲಿತ್ತು ಮನೆ. ಹೊರಗಿನಿಂದ ಗಲಾಟೆ, ಜನಜಂಗುಳಿಯಿಲ್ಲ, ಪ್ರಶಾಂತವಾದ ವಾತಾವರಣ. ಸಮಯ ಬೆಳಿಗ್ಗೆ 11 ಗಂಟೆಯಾಗಿತ್ತು. ನಾನು ಮನೆಯ ಕಾಲಿಂಗ್ ಬೆಲ್ ಒತ್ತಿದೆ. ಸ್ವಲ್ಪ ಸಮಯದಲ್ಲಿ ಬಾಗಿಲು ತೆರೆದುಕೊಂಡಿತು. ‘ಕ್ಯಾ ಚಾಯಿಯೇಪ್ರಶ್ನೆಓರ್ವ ಅಪರಿಚಿತ ವ್ಯಕ್ತಿಯಿಂದ. ನಾನು ಬಿ.ಜನಾರ್ಧನ ಪೂಜಾರಿ ಕೋ ಮಿಲ್ನೇಕೇಲಿಯೇ ಆಯೇಎಂದೆ. ತಕ್ಷಣ ಒಳಗೆ ಬರಲುಹೇಳಿದರು. ಅವರು ಸ್ನಾನ ಮಾಡುತ್ತಿದ್ದಾರೆ, ಕೂತುಕೊಳ್ಳಿ ಎಂದು ಒಳಗೆ ಹೋದರು. ಸ್ವಲ್ಪ ಹೊತ್ತಲ್ಲಿ ಬಂದುಚಹಾ, ಕಾಫಿ ಏನುತೆಗೆದುಕೊಳ್ಳುತ್ತೀರಿಎಂದರು. ಬೇಡಾ ಬಿಡಿ ಎಂದೆ, ಆದರೂ ಒತ್ತಾಯ ಮಾಡಿದಾಗ ಚಹಾ ಎಂದೆ. ಸ್ವಲ್ಪಹೊತ್ತಲ್ಲಿ ಚಹಾ ಬಂತು. ಕುಡಿದು ಅಲ್ಲಿದ್ದ ಪೇಪರ್ ನೋಡುತ್ತಾ ಕುಳಿತೆ.

ಸ್ವಲ್ಪ ಸಮಯದ ಬಳಿಕ ಬಿ.ಜನಾರ್ಧನ ಪೂಜಾರಿ ಬಂದರು . ಶುದ್ಧ ಬಿಳಿ ಪ್ಯಾಂಟ್, ಬಿಳಿ ಅಂಗಿ ಧರಿಸಿದ್ದರು. ಕನ್ನಡವನ್ನುಬಟ್ಟೆಯಿಂದ ಉಜ್ಜಿಕೊಂಡು ನಗುತ್ತಲೇ ಬಂದರು. ‘ದಾನೆಗೇ ಬರಿಯೆರೆ ಕಷ್ಟ ಆಂಡ್’ (ಏನಂತೆ ಬರಲು ಕಷ್ಟವಾಯಿತೇ). ನಾನುಇಲ್ಲವೆಂದೆ. ಆಮೇಲೆ ಪೂಜಾರಿಯವರಿಂದ ಚಹಾ ಕುಡಿಯಲು ಒತ್ತಾಯ. ನಾನು ಕುಡಿದೆ ಎಂದರು ಒಪ್ಪಲಿಲ್ಲ ಮತ್ತೆ ಕುಡಿಯಿರಿಎಂದು ಚಹಾ ತರಿಸಿದರು.

ಹಾಗೆ ಮಾತಾಡುತ್ತಾ ಕುಳಿತೆವು. ಸ್ಥಳೀಯ ರಾಜಕೀಯದ ಕುರಿತೇ ಮಾತು. ನಾವಿಬ್ಬರೇ ಕುಳಿತುಕೊಂಡಿದ್ದೆವು, ಅಲ್ಲಿಗೆ ಬೇರೆ ಯಾರೂಬರಲಿಲ್ಲ. ಸದ್ದುಗದ್ದಲವಿಲ್ಲದೆ ಮಾತನಾಡಿದೆವು. ಪೂಜಾರಿ ಮಕ್ಕಳ ಕುರಿತು ವಿಚಾರಿಸಿದರು. ಯಾಕೆ ಬಂದದ್ದು ಪ್ರಶ್ನೆಗೆ ವಿವರಿಸಿದೆ. ಸುಮಾರು ಒಂದು ಗಂಟೆ ಕಾಲ ಮಾತನಾಡಿದೆವು. ನಾನು ಹೊರಟು ನಿಂತೆ. ಪೂಜಾರಿಯವರು ಊಟ ಮಾಡಿಕೊಂಡು ಹೋಗಲುಒತ್ತಾಯಿಸಿದರು. ನಾನು ಬೇಡವೆಂದು ಹೇಳಿ ಮತ್ತೆ ಅಮೇರಿಕಾ ತಂಡವನ್ನು ಭೇಟಿ ಮಾಡುವ ನೆಪಕೊಟ್ಟು ಹೊರಡಲು ಬಯಸಿದೆ.

ಸರಿ ಪೂಜಾರಿಯವರು ಸಮ್ಮತಿಸಿದರು. ನಾನಿನ್ನು ಬರ್ತ್ತೇನೆ ಎಂದು ಕೈಮುಗಿದೆ. ‘ಇಲ್ಲಾ ಇಲ್ಲಾ ಬನ್ನಿಎನ್ನುತ್ತಾ ನನ್ನೊಂದಿಗೆ ಗೇಟ್ವರೆಗೂ ಬರಲು ಸಜ್ಜಾದರು. ನಾನುಬೇಡ ಸಾರ್ ನಾನು ಹೊಗ್ತೇನೆಎಂದರು ಕೇಳಲಿಲ್ಲ. ‘ನೀವು ನನ್ನ ಗೆಸ್ಟ್ ಬನ್ನಿಎನ್ನುತ್ತಾನಡೆದುಕೊಂಡು ಬಂದು ಅವರೇ ಗೇಟ್ ತೆಗೆದು ಟ್ಯಾಕ್ಸಿ ತನಕ ಬಂದು ನನ್ನ ಟ್ಯಾಕ್ಸಿ ಅಲ್ಲಿಂದ ಹೊರಟ ಮೇಲೆ ಗೇಟ್ ಹಾಕಿಕೊಂಡರು.

ಒಬ್ಬ ಕೇಂದ್ರ ಸಚಿವರಾಗಿದ್ದವರು ಹೇಗೆ ನಡೆದುಕೊಂಡರು ಎನ್ನುವುದನ್ನು ತಿಳಿಸಲು ಇಷ್ಟೆಲ್ಲಾ ಹೇಳಬೇಕಾಯಿತು. ಪೂಜಾರಿಯವರುಮುಂಗೋಪಿ, ಸಿಡುಕಿನವರು ಎನ್ನುವ ಅಭಿಪ್ರಾಯ ಎಷ್ಟು ಸಹಜ ಮತ್ತು ಎಷ್ಟು ಸುಳ್ಳು ಎನ್ನುವುದೇ ನನಗೆ ಅರ್ಥವಾಗಲಿಲ್ಲ. ಸಿಡುಕಿನ ವ್ಯಕ್ತಿಯಲ್ಲೂ ಎಂಥ ಗುಣಗಳಿರುತ್ತವೆ, ಎಷ್ಟು ಮನುಷ್ಯತ್ವ ಇರುತ್ತದೆ ಅಂದುಕೊಂಡೆ. ನನ್ನನ್ನು ಮನೆಯಿಂದ ಬೀಳ್ಕೊಟ್ಟಾಗನನ್ನೊಂದಿಗೆ ಬಂದ ಬಿ.ಜನಾರ್ಧನ ಪೂಜಾರಿಯವರಲ್ಲೂ ಇಷ್ಟೊಂದು ಸೌಜನ್ಯವಿದೆಯಲ್ಲ ಎಂದುಕೊಂಡೆ.

ಚಿದಂಬರ ಬೈಕಂಪಾಡಿ


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »