TOP STORIES:

FOLLOW US

ನಮನ ಫ್ರೆಂಡ್ಸ್ ಮುಂಬಯಿ ಸಂಸ್ಥಾಪಕ ಪ್ರಭಾಕರ ಬೆಳುವಾಯಿ


ಮುಂಬಯಿ ಯಾಂತ್ರಿಕ ಬದುಕಿನ ಮದ್ಯೆ ವೃತ್ತಿಪರ ಜೀವನದ ಬಿಡುವಿಲ್ಲದ ಕಾರ್ಯ ವೈಖರಿಯಲ್ಲಿ ಹವ್ಯಾಸ ಪ್ರವೃತ್ತಿಯೊಂದಿಗೆ ತಮ್ಮನ್ನು ತಾವು ವಿಭಿನ್ನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಗಣ್ಯ ಕನ್ನಡಿಗರ ಮದ್ಯೆ ಚಿರಪರಿಚಿತರಾಗಿರುವ ಉತ್ಸಾಹಿ ಯುವಕರ ಸಾಲಿನಲ್ಲಿ ಪ್ರಭಾಕರ ಬೆಳುವಾಯಿ ಓರ್ವರು ಮುಂಬಯಿ ಮಹಾನಗರ ಕಂಡ ನಿಷ್ಠಾವಂತ ಪ್ರಾಮಾಣಿಕ ಕಲಾ ಸಂಘಟಕ.


ನಮನ ಫ್ರೆಂಡ್ಸ್ ಮುಂಬಯಿ ಇದರ ಸಂಸ್ಥಾಪಕರಾಗಿ ಕಳೆದ 15ವರ್ಷಗಳಿಂದ ಸಂಸ್ಥೆಯನ್ನು ಮಾದರಿ ಹಾಗೂ ಸಮರ್ಥವಾಗಿ ಮುನ್ನಡೆಸುವುದರ ಜೊತೆಗೆ ಮುಂಬಯಿ ಸಾಹಿತ್ಯಿಕ ಸಾಂಸ್ಕ್ರತಿಕ ಧಾರ್ಮಿಕ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತಮ್ಮನ್ನು ನಿರಂತರ ಸಕ್ರೀಯವಾಗಿರಿಸಿಕೊಂಡಿರುವ ಓರ್ವ ಅಪ್ಪಟ ಭಾಷಾಭಿಮಾನಿ ಕಲಾಪ್ರೇಮಿ.

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ಲಾಡಿ ಮನೆತನದ ದಿ. ಬಾಬು ಪೂಜಾರಿ ಮತ್ತು ಬೆಳುವಾಯಿ ಮಿತ್ತಬೆಟ್ಟು ಬರ್ಕೆ ಕೆಳಗಿನ ಮನೆ ಗೋಪಿ ಪೂಜಾರಿ ದಂಪತಿಯ ಪುತ್ರನಾಗಿ ಜನಿಸಿ ಕಳೆದ ಎರಡೂವರೆ ದಶಕಗಳ ಹಿಂದೆ ಭವಿಷ್ಯದ ಹಾದಿಗಾಗಿ ಮುಂಬಯಿ ಸೇರಿದರು. ಹೋಟೆಲ್ ವೃತ್ತಿಯೊಂದಿಗೆ ಬರವಣಿಗೆಯನ್ನು ಹವ್ಯಾಸವಾಗಿರಿಸಿಕೊಂಡು ವ್ಯಕ್ತಿ ಪರಿಚಯ ನಾಟಕ ವಿಶ್ಲೇಷಣೆ, ಕಥೆ, ಕವನ ಲೇಖನಗಳ ಮುಖೇನ ಪರಿಚಯಿಸಿಕೊಂಡಿರುವ ಇವರು ಕಳೆದ ಒಂದೂವರೆ ದಶಕಗಳ ಹಿಂದೆ ನಮನ ಫ್ರೆಂಡ್ಸ್ ಮುಂಬಯಿ ಎಂಬ ಮಿತ್ರ ಬಳಗವನ್ನು ಸ್ಥಾಪಿಸಿ ಆ ಮುಖೇನ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದ ಶ್ರೇಯಸ್ಸು ಇವರದು.


ನಗರ ಹಾಗೂ ತವರೂರ ಹಲವಾರು ಕಲಾ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಹೊಸ ವೇದಿಕೆ ಕಲ್ಪಿಸುವುದರ ಜೊತೆಗೆ ಪ್ರತಿಭಾ ಪುರಸ್ಕಾರ ಮಾತ್ರವಲ್ಲದೆ ತೆರೆಮರೆಯಲ್ಲಿರುವ ನಗರದ ಹಿರಿಯ ಸಮಾಜ ಸೇವಕರು, ಕಲಾವಿದರು, ಧಾರ್ಮಿಕ ಮುಂದಾಳುಗಳು, ಸಾಹಿತಿಗಳನ್ನು ಗುರುತಿಸಿ ಸನ್ಮಾನಿಸಿದ ಕೀರ್ತಿ ಇವರದು.
2018 ರಲ್ಲಿ ರುದ್ರ ಎಂಟರ್ಟೈನ್ಮೆಂಟ್ ಆಯೋಜಿಸಿದ ಮಿಸ್ಟರ್ ಆಂಡ್ ಮಿಸ್ ಕರಾವಳಿ- 2018 ಸೌಂದರ್ಯ ಸ್ಪರ್ಧೆ, 2019ರಲ್ಲಿ ಪುಣೆಯಲ್ಲಿ ಸೂರ್ಯ ಪೂಜಾರಿ ಕಾರ್ಕಳ ನೇತೃತ್ವದ ನಮ ತುಳುವೆರ್ ಆಯೋಜನೆಯ ಮಿಸ್ಟರ್ ಆಂಡ್ ಮಿಸ್ ಫೇಸ್ ಆಫ್ ತುಳುನಾಡು ಸೌಂದರ್ಯ ಸ್ಪರ್ಧೆಯ ಬಹುಪಾಲಿನ ಯಶಸ್ಸಿಗೆ ಅವಿರತವಾಗಿ ಶ್ರಮಿಸಿದ ಕೀರ್ತಿ ಇವರದು. ನಗರದ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ತನ್ನನ್ನು ತೊಡಗಿಸಿಕೊಂಡಿರುವ ಇವರ ಪ್ರತಿಭೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದೆ.


ಅಶ್ವಿನಿ ಪ್ರಕಾಶನ ಗದಗ ಆಯೋಜಿಸಿದ ಅಖಿಲ ಕರ್ನಾಟಕ ಸ್ವರಚಿತ ಕವನ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಬಹುಮಾನ ಪಡೆದುದು ಮಾತ್ರವಲ್ಲದೆ,
ಇವರ ಸಾಮಾಜಿಕ ಹಾಗೂ ಸಾಂಸ್ಕ್ರತಿಕ ಕಳಕಳಿಯನ್ನು ಗುರುತಿಸಿ “ಸ್ತುಪ್ತ ಪ್ರತಿಭೆಗಳ ಪ್ರಕಟಕ ”
“ಪ್ರತಿಭಾ ವಲ್ಲಭ”
ಸೇರಿದಂತೆ ರಂಗ್ ಮಂಚ್ ಕಾಮ್ಗಾರ್ ಸಂಸ್ಥೆ (ರಿ )ಆಶ್ರಯದಲ್ಲಿ ಜರಗಿದ ಅನಘಾ ಇವೆಂಟ್ ಮತ್ತು ಡಿ. ಎಸ್. ಎಂಟರ್ಟೈನ್ಮೆಂಟ್ ಆಯೋಜಿಸಿದ ಹಿಂದಿ ಮರಾಠಿ ಸಿನಿಮಾ ತಂತ್ರಜ್ಞರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ “ಬ್ಯಾಕ್ ಸ್ಟೇಜ್ ಹೀರೋ -2018”
ಪ್ರಶಸ್ತಿಯನ್ನಿತ್ತು ಗೌರವಿಸಿದ್ದು ಇವರ ತೆರೆಮರೆಯ ಸಾಧನೆಗೆ ಸಂದ ಗೌರವವೇ ಆಗಿದೆ. 2019 ರಲ್ಲಿ ನಾಮಾಂಕಿತ ಇಂಗ್ಲಿಷ್ ದೈನಿಕ “ಮುಂಬಯಿ ಮಿರರ್” ಪತ್ರಿಕೆಯಲ್ಲಿ ಪ್ರಭಾಕರ ಬೆಳುವಾಯಿ ಇವರ ಸಾಧನೆಯ ಬಗ್ಗೆ ಮೆಚ್ಚುಗೆಯ ಲೇಖನ ಪ್ರಕಟಗೊಂಡಿರುವುದು ತುಳು ಕನ್ನಡಿಗರಿಗೆಲ್ಲರಿಗೂ ಹೆಮ್ಮೆಯ ವಿಷಯ.
ಈ ನಿಟ್ಟಿನಲ್ಲಿ ಬಿಡುವಿಲ್ಲದ ವೃತ್ತಿಯೊಂದಿಗೆ ಸದಾ ಸಮಾಜಮುಖಿ ಹಾಗೂ ಕಲಾ ಸೇವೆ ಮಾಡುತ್ತಿರುವ ಪ್ರಭಾಕರ ಬೆಳುವಾಯಿ ಈ ನಮನ ಫ್ರೆಂಡ್ಸ್ ಮುಂಬಯಿ ಇದರ 15ನೇ ವಾರ್ಷಿಕೋತ್ಸವ ಸಂಭ್ರಮ “ನಮನೋತ್ಸವ -2020” ಕಾರ್ಯಕ್ರಮವನ್ನು ರಾಷ್ಟ್ರ ಪ್ರೇಮ, ಮಾತೃಪ್ರೇಮ, ಕಲಾ ಪ್ರೇಮ ಎಂಬ ಪರಿಕಲ್ಪನೆ ಯಡಿ ವಿಶಿಷ್ಟ ರೀತಿಯಲ್ಲಿ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮವು ಅಭೂತಪೂರ್ವವಾಗಿ ಮೂಡಿಬಂದು ವೀಕ್ಷಕರ ಪ್ರಶಂಸೆಗೆ ಪಾತ್ರವಾಗಿದೆ.


ಈ ಕಾರ್ಯಕ್ರಮದಲ್ಲಿ ಭಾರತದ ವೀರ ಯೋಧ ಮಾಜಿ ಕಮಾಂಡರ್ ಶ್ಯಾಮರಾಜ್ ಇ. ವಿ. ಇವರಿಗೆ “ಯೋಧ ನಮನ” ಪ್ರಶಸ್ತಿ ಸೇರಿದಂತೆ ನಗರದ ವಿವಿಧ ಕ್ಷೇತ್ರದ 7 ಗಣ್ಯರಿಗೆ ಪ್ರಶಸ್ತಿ ಮಾತ್ರವಲ್ಲದೆ 7ಯುವ ಪ್ರತಿಭೆಗಳಿಗೆ “ನಮನ ಸಿರಿ ಯುವ ಪುರಸ್ಕಾರ -2020” ಪ್ರಶಸ್ತಿಯನ್ನಿತ್ತು ಗೌರವಿಸಿ ಸನ್ಮಾನಿಸಿದ ಕೀರ್ತಿಗೆ ಭಾಜಾನರಾಗಿದ್ದಾರೆ.

“ನಮನ ಫ್ರೆಂಡ್ಸ್ ಮುಂಬಯಿ” ಮಿತ್ರ ಬಳಗದಲ್ಲಿ ಯಾವುದೇ ಪದವಿ ಕಾರ್ಯಕಾರಿ ಸಮಿತಿ ಇಲ್ಲದಿದ್ದರೂ ಸರಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಾಗಿದ್ದು ಅದರ ಎಲ್ಲಾ ನಿರ್ವಹಣೆ ಯನ್ನು ಪ್ರಭಾಕರ ಬೆಳುವಾಯಿ ಇವರು ಸಮರ್ಥವಾಗಿ ನಿರ್ವಹಿಸಿಕೊಂಡು ಬಂದಿರುತ್ತಾರೆ. ಸ್ವಾಭಿಮಾನ, ಸ್ವಪ್ರಯತ್ನ, ನಿಸ್ವಾರ್ಥ ಮನದ ನಂಬಿಕೆ ನಮ್ಮೊಳಗಿದ್ದರೆ ಯಶಸ್ಸು ಖಂಡಿತಾ ನಮ್ಮ ಮಡಿಲಿನೊಳಗಿರುತ್ತದೆ ಎನ್ನುವ ಪ್ರಭಾಕರ ಬೆಳುವಾಯಿ ಸಾಮಾಜಿಕ, ಸಾಂಸ್ಕೃತಿಕ ಸೇವೆ ಮಾಡಲು ಹಣ ಆಸ್ತಿ ಸಂಪತ್ತು ಬೇಕಾಗಿಲ್ಲ ಪರರ ಬಗ್ಗೆ ಕಾಳಜಿ, ಮತ್ತು ನಿಸ್ವಾರ್ಥ ನಿರ್ಮಲ ಮನ ಇದ್ದರೆ ಸಾಕು ಅನ್ನುತ್ತಾರೆ. ವೃತ್ತಿಯೊಂದಿಗೆ ಸಮಾಜಮುಖಿ ಪ್ರವೃತ್ತಿಯೊಂದಿಗೆ ತನ್ನದೇ ಆದ ಛಾಪಿನೊಂದಿಗೆ ಮಿಂಚುತ್ತಿರುವ ಇವರ ಬಾಳು ಹಸನಾಗಿ ಸಾಗಲಿ ಸಾಮಾಜಿಕ, ಸಾಹಿತ್ಯಿಕ ಹಾಗೂ ಕಲಾಕ್ಷೇತ್ರದಲ್ಲಿ ಇವರ ಸೇವೆಯು ಇನ್ನಷ್ಟು ಸಿದ್ಧಿ ಪ್ರಸಿದ್ದಿಯೊಂದಿಗೆ ಮಿನುಗಲಿ ಎಂಬ ಆಶಯ ನಮ್ಮದು.


Share:

More Posts

Category

Send Us A Message

Related Posts

ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಪುಣೆಯ ಸಮಾಜಸೇವಕ   “ವಿಶ್ವನಾಥ ಪೂಜಾರಿ ಕಡ್ತಲ’ ಆಯ್ಕೆ


Share       ಪುಣೆ :ಪುಣೆ ಬಿಲ್ಲವ ಸಮಾಜ ಸೇವಾ ಸಂಘ ಇದರ ಅಧ್ಯಕ್ಷ ,ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಗುರುತಿಸಿಕೊಂಡಿರುವ ವಿಶ್ವನಾಥ ಪೂಜಾರಿ ಕಡ್ತಲ ಇವರು ಪ್ರತಿಷ್ಠಿತ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ -2025  ಗೆ ಆಯ್ಕೆಯಾಗಿರುತ್ತಾರೆ .


Read More »

ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ 1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ 4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ,ಶಿಲಾನ್ಯಾಸ


Share       ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ  1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ 4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ,ಶಿಲಾನ್ಯಾಸ ಯತೀವರ್ಯರು, ಸಚಿವ ಮಾಂಕಳ್ ವೈದ್ಯ, ಶಾಸಕ ಹರೀಶ್ ಪೂಂಜ, ಸೇರಿದಂತೆ ಬೆಳ್ತಂಗಡಿಯಿಂದ ಸುಮಾರು 200


Read More »

ಬೈದ್ಯೆರುಗಳಲ್ಲಿ ಲೀನವಾದ ದರ್ಶನ ಪಾತ್ರಿ ಶ್ರೀ ಸುರೇಶ್ ಪೂಜಾರಿ


Share         ಪ್ರಸಿದ್ದ ಬೈದ್ಯೇರುಗಳ ಪಾತ್ರಿಯಾದ  ಶ್ರೀ ಸುರೇಶ್ ಪೂಜಾರಿಯವರು ಅಲ್ಪಕಾಲದ  ಅಸೌಖ್ಯದ ಕಾರಣ ಇಂದು ಭಗವಂತನ ಪಾದ ಸೇರಿದರು. ಕಳತ್ತೂರು ಹಿರಿಯಣ್ಣ ಪೂಜಾರಿ ಹಾಗೂ ಶ್ರೀಮತಿ ಲೀಲಾವತಿ ಪೂಜಾರಿಯವರ ಮಗನಾದ ಶ್ರೀ ಸುರೇಶ್


Read More »

ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣರಿಗೆ ಐವತ್ತರ ಸಂಭ್ರಮ


Share       ಸಮಾಜದಲ್ಲಿ ಮಹತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿರುವ ವ್ಯಕ್ತಿ ಸಾಮಾಜಿಕವಾಗಿ ಮತ್ತು ಭಾವನಾತ್ಮಕವಾಗಿ ಸಮತೋಲನವನ್ನು ಸಾಧಿಸಿದರೆ ಮಾತ್ರ ಅವನು ಯಶಸ್ಸಿನ ಮೆಟ್ಟಿಲೇರಲು ಸಾಧ್ಯ. ‘ಸುಖ-ದುಃಖ, ಲಾಭ -ನಷ್ಟ ಸೋಲು-ಗೆಲುವನ್ನು ಸಮಾನವಾಗಿ ತೆಗೆದುಕೊಳ್ಳುವವನೇ ನಿಜವಾದ ಸುಖಿ’ ಎಂಬ


Read More »

ಮೂಡಬಿದಿರಿಯಲ್ಲೊಂದು 75 ಸಂಭ್ರಮ ಕ್ಕೆ ಸ್ನೇಹ ಸೇತುವಾದ ಸಿಂಗಾಪೂರ ಬಿಲ್ಲವ ಅಸೋಸಿಯೇಷನ್


Share       ಮೂಡಬಿದಿರಿಯಿಂದ ಸಿಂಗಪೂರಿಗೆ 🇸🇬: ಜಾಗತಿಕ ಸಮುದಾಯ ಸಂಬಂಧಗಳ ಬಲವರ್ಧನೆ: ಜಾಗತಿಕ ಸಮುದಾಯ ಸಂಬಂಧಗಳನ್ನು ಬಲಪಡಿಸುವ ದಿಕ್ಕಿನಲ್ಲಿ ಮಹತ್ವಪೂರ್ಣ ಹೆಜ್ಜೆವಹಿಸಿ, ಬಿಲ್ಲವ ಅಸೋಸಿಯೇಷನ್ ಸಿಂಗಪೂರಿನ ಸ್ಥಾಪಕರಾದ ಅಶ್ವಿತ್ ಬಂಗೇರಾ ಅವರು, ಬಿಲ್ಲವ ಅಸೋಸಿಯೇಷನ್ ಮೂಡಬಿದಿರಿಯ


Read More »

ಬಿಲ್ಲವಾಸ್ ಕತಾರ್ ನ ಇತಿಹಾಸದಲ್ಲಿ ಇನ್ನೊಂದು ಮೈಲಿಗಲ್ಲು. ಉಚಿತ ಆರೋಗ್ಯತಪಾಸಣಾ ಶಿಬಿರ ಮತ್ತು ಬಿಲ್ಲವಾಸ್ ಕತಾರ್ ನ ಅಧೀಕೃತ ಲಾಂಛನ (ಲೋಗೋ) ಬಿಡುಗಡೆ


Share       Noಹಲವು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯುತ್ತಿರುವ ಬಿಲ್ಲವಾಸ್ ಕತಾರ್ ರವರ  ವತಿಯಿಂದ ದಿನಾಂಕ ೧೧.೦೪.೨೦೨೫ ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಕಿಮ್ಸ್ ಮೆಡಿಕಲ್ ಸೆಂಟರ್, ಅಲ್ ಮಿಶಾಫ್, ಕತಾರ್ ಅವರ


Read More »