TOP STORIES:

FOLLOW US

ನಮ್ಮ ಸಂಘಟನೆಗಳಲ್ಲಿ ನಮ್ಮವರಿಗಾಗಿ ದುಡಿಯುವ ಮನಸ್ಥಿತಿಯೊಂದಿಗೆ ನಮ್ಮಲ್ಲಿ ಪಕ್ಷಕ್ಕಿಂತ ಸಂಘ-ಸಂಸ್ಥೆಗಳ ಮೇಲೂ ಕಾಳಜಿಯಿರಲಿ…


ಬಿಲ್ಲವ ಸಮಾಜದಲ್ಲಿ ಯಾವುದೇ ವಿಷಯ ಪ್ರಸ್ತಾಪವಾದಾಗ ಪಕ್ಷ ಕೇಂದ್ರಿತವಾಗಿ ನೋಡುವ ಜಾಯಮಾನವಿದೆ. ಜಾತಿ ಆಧಾರಿತ ಬಿಲ್ಲವ ಸಂಘಗಳು ಇದಕ್ಕೆ ಹೊರತಾಗಿಲ್ಲ. ಇದು ನಮ್ಮ ದುರಂತ. ಬಹುಷ: ಬಿಲ್ಲವರಲ್ಲಿ ಇಂದು ಸಂಖ್ಯಾ ಬಲವಿದೆ ಎಂದು ಡಂಗುರ ಸಾರಿದರೂ ಬುದ್ಧಿ ಬಲ ಅರ್ಥಾತ್ ಯೋಚನೆ, ಯೋಜನೆಯಲ್ಲಿ ವಿಫಲರಾಗುತ್ತಿದ್ದಾರೆ.

ನಾರಾಯಣ ಗುರುಗಳ ಸಂದೇಶವಿದೆ ವಿದ್ಯೆಯಿಂದ ಸ್ವತಂತ್ರರಾಗಿರಿ ಸಂಘಟನೆಯಿಂದ ಬಲಯುತರಾಗಿ ಎಂದು. ಹೌದು, ವಿದ್ಯೆಯಿಂದ ನಾವು ಸ್ವತಂತ್ರರಾಗುವ ಬದಲು ನಮ್ಮ ಸ್ವಾತಂತ್ರ್ಯವನ್ನು ಪರರಿಗೆ ಧಾರೆ ಎರೆದು ಪರರ ತಂತ್ರಕ್ಕೆ ಬಲಿಯಾಗುತ್ತಿದ್ದೇವೆ. ಸಂಘಟನೆಗಳು ಬಲವ ತುಂಬುವ ಬದಲು ಹಲವು ಆಗುತ್ತಿದೆ. ಕೆಲವರ ಪ್ರಕಾರ ಸಂಘಟನೆಗಳು ಹೆಚ್ಚಾಗಬೇಕು ಅದರಿಂದ ಸಮಾಜಕ್ಕೆ ಪ್ರಯೋಜನವಿದೆ. ಹೆಚ್ಚಾಗಲಿ ಒಳ್ಳೆಯದು ಆದರೆ ನಮ್ಮ ಸಂಘಟನೆಗಳು ನಮ್ಮ ಸಮಾಜವನ್ನು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಔದ್ಯೋಗಿಕವಾಗಿ ಸಧೃಡವಾಗಿಸಲು ಸಹಕಾರಿಯಾಗಿರಬೇಕು. ಆ ಮೂಲಕ ಸಮಾಜದ ಹಿತಚಿಂತನೆಯ ಗುರಿ ಇರಬೇಕು.

ಜಾತಿಗಳು ಧರ್ಮದೊಳಗಿನ ಬಳ್ಳಿಗಳು. ಧರ್ಮ ನಮ್ಮೆಲ್ಲರಿಗೂ ಬೇಕು. ಆದರೆ ಅದು ಕೇವಲ ಬಿಲ್ಲವರಿಗಾಗಿ ಮಾತ್ರವೇ ಎಂಬ ಪ್ರಶ್ನೆಯನ್ನು ನಾವು ಮಾಡಬೇಕಾಗಿದೆ. ನಮ್ಮಲ್ಲಿ ಧರ್ಮಾಧಾರಿತ ಸಂಘಟನೆಯಲ್ಲಿ ಪ್ರಾಣತೆತ್ತವರಿದ್ದಾರೆ. ಅವರು ಯಾಕೆ ಹೋಗಬೇಕಿತ್ತು ಬೇರೆಯವರು ಇರಲಿಲ್ಲವೇ? ಇತ್ಯಾದಿ ಪ್ರಶ್ನೆಗಳು ಎಲ್ಲರೂ ಕೇಳುತ್ತೇವೆ. ಅದು ಸಾಮಾನ್ಯ. ಆದರೆ ಇದರ ಬಗ್ಗೆ ತಿಳುವಳಿಕೆ ಮೂಡಿಸುವುದು ಅನಿವಾರ್ಯ. ಆದರೆ ನಮ್ಮವ ಎಂಬ ಪ್ರಜ್ಞೆ ನಮ್ಮಲ್ಲಿರಲಿ. ಆ ಮೂಲಕ ಅಲ್ಲಿ ಪಕ್ಷ ನೋಡದೆ ಸಾಂತ್ವನ ಇಲ್ಲವೇ ಅದರ ವಿರುದ್ಧ ಬೇಕಾದ ಕ್ರಮದ ಬಗ್ಗೆ ನಮ್ಮ ಸಂಘಟನೆಗಳು ಮಾಡುತ್ತಿಲ್ಲ. ಎಲ್ಲೋ ಕೆಲವು ಬೆರಳೆಣಿಕೆಯ ಸಂಘಟನೆಗಳು ಅಥವಾ ಸ್ಥಳೀಯ ಬಿಲ್ಲವ ಸಂಘ ಧ್ವನಿ ಎತ್ತುತ್ತವೆ ನಂತರ ಅದಕ್ಕೆ ಸ್ಪಂದನೆಯೂ ಇಲ್ಲ. ಇದಕ್ಕೆ ಮೂಲ ಕಾರಣ ಸಂಘಟನೆಯ ಪ್ರಮುಖರು ಪಕ್ಷದಲ್ಲಿದ್ದಾಗ ಘಟನೆಯು ಕೆಲವೊಮ್ಮೆ ಜಾತಿಗಿಂತ ಪಕ್ಷದ ಮೇಲೆ ನಿಲ್ಲುತ್ತದೆ. ಜಾತಿಗಿಂತ ಪಕ್ಷದ ಚಿಂತನೆಯಿರುವ ವ್ಯಕ್ತಿಯು ಸಂಘಟನೆಯ ಚುಕ್ಕಾಣಿ ಹಿಡಿಯಲು ಅಸಮರ್ಥ ಅಥವಾ ಪಕ್ಷಾತೀತ ವ್ಯಕ್ತಿಗೆ ನಮ್ಮ ಸಂಘಟನೆಯ ಜವಾಬ್ದಾರಿ ವಹಿಸಬೇಕಾಗಿದೆ.

ಇತ್ತೀಚಿನ ಒಂದು ಘಟನೆಯನ್ನು ನೋಡುವುದಾದರೆ ಕಲಾವಿದ ಅರವಿಂದ್ ಬೋಳಾರ್ ಖಾಸಗಿ ವಾಹಿನಿಯಲ್ಲಿ ಜ್ಯೋತಿಷ್ಯ ಪಾತ್ರ ಮಾಡಿದಾಗ ಉಂಟಾದ ಸಮಸ್ಯೆಯ ಸಂದರ್ಭ ಖಾಸಗಿ ವಾಹಿನಿಯ ಬಗ್ಗೆ ಚಕಾರವೆತ್ತದೆ ಓರ್ವ ಕಲಾವಿದನಿಗಾದ ಅವಮಾನ ನಮಗೆ ಗೊತ್ತು. ಈ ಸಮಯದಲ್ಲಿ ನಮ್ಮವರಲ್ಲಿಯೇ ಧರ್ಮ, ಜಾತಿಯ ನಡುವಿನ ವಾದವಿವಾದಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆದಿತ್ತು. ಆದರೆ ನಮ್ಮ ಜಾತಿಯ ಪ್ರಮುಖ ಸಂಘಟನೆಗಳೆನಿಸಿಕೊಂಡವರು ಮೌನವಾಗಿದ್ದರು. ಕಲಾವಿದನಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡಲಿಲ್ಲ. ಕೆಲವರು ಮಾಡಿರಬಹುದು. ನಮ್ಮಲ್ಲಿ ಒಗ್ಗಟ್ಟಿನ ಕೊರತೆ ಇದಕ್ಕೆ ಕಾರಣವೇ? ಅಥವಾ ಯಾರು ಮುಂದೆ ಹೋಗುತ್ತಾರೆ ನಂತರ ನಾವು ಹೋಗುವ ಎಂಬ ಸೋಗಲಾಡಿತನವೇ ಎಂಬಂತಾಗಿದೆ.
ಇತರ ಜಾತಿಗಳನ್ನು ಕೊಂಡಾಡುವ ನಾವು ಅವರಿಂದ ಸಾಕಷ್ಟು ಕಲಿಯಬೇಕಾಗಿದೆ. ಚುನಾವಣಾ ಸಂದರ್ಭ ಜಾತಿಯ ಪ್ರಮುಖರನ್ನು ಒಗ್ಗೂಡಿಸಿಕೊಂಡು ನಮ್ಮ ಜಾತಿಗೆ ಪ್ರಾತಿನಿಧ್ಯ ಕೊಡಬೇಕು ಎಂಬ ಬೇಡಿಕೆ, ಜಾತಿಗೆ ಬೇಕಾದ ಸವಲತ್ತು ಪಡೆಯಲು ರಾಜ್ಯದ ಮುಖ್ಯಮಂತ್ರಿಯೇನು, ಪ್ರಧಾನಮಂತ್ರಿಯನ್ನೂ ಭೇಟಿಯಾಗಲು ತಾಕತ್ತು ಅವರಲ್ಲಿ ಇರಬೇಕಾದರೆ, ಜನಸಂಖ್ಯೆಯಲ್ಲಿ ಹೆಚ್ಚಿನ ಪ್ರಾಬಲ್ಯವಿದ್ದು, ನಮ್ಮ ಜಾತಿಯ ಮತಗಳೇ ನಿರ್ಣಾಯಕವಾಗಿರುವಾಗ ನಮ್ಮಲ್ಲಿ ತಾಕತ್ತಿಲ್ಲವೇ? ನಮಗೆ ರಾಜಕೀಯ ನಾಯಕರು ಇದ್ದರು ಚುನಾವಣಾ ಸಂದರ್ಭ ನಾರಾಯಣಗುರು ಮಂದಿರದ ಭೇಟಿಯೇನು, ಜಾತಿಯ ಪ್ರಮುಖರ ಭೇಟಿ ಮಾಡುವುದೇನು? ಗೆದ್ದ ನಂತರ ಸರ್ವರೂ ಸಮಾನರು ಎಂಬ ಧೋರಣೆ ಅವರದ್ದು. ಇದು ನಮ್ಮವರಿಗೆ ರಾಜಕೀಯ ನಾಯಕರ ಬಗೆಗಿನ ತಾತ್ಸಾರಕ್ಕೂ ಕಾರಣವಾಗಿದೆ. ನಮ್ಮಲ್ಲಿ ಜಗಜ್ಜಾಹಿರಾಗುವಂತೆ ಜನ ಸೇರಿಸಿ ಅದು ಆಗ ಬೇಕು ಇದಾಗಬೇಕೆನ್ನುತ್ತೇವೆ. ಹೇಳುವುದು ಮಾತ್ರ ಅದರ ಹಿಂದೆ ಹೋಗಿ ಒತ್ತಡ ಹಾಕಲಾರೆವು. ಅದೇ ಇತರ ಜಾತಿಯವರು ಗುಪ್ತವಾಗಿ ಅವರ ನಾಯಕರು ಮಾತ್ರ ಮುಂದೆ ಹೋಗಿ ಸಮಾಜಕ್ಕಾಗಿ ಸರಕಾರಕ್ಕೆ ಒತ್ತಡ ಹಾಕಿ ಬೇಕಾದನ್ನು ಪಡೆಯುತ್ತಾರೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ನಮ್ಮಲ್ಲಿ ಕಾರ್ಖಾನೆ, ಕಂಪನಿ, ಬ್ಯಾಂಕ್ ಇತ್ಯಾದಿಗಳಿದ್ದರೂ ಅಲ್ಲಿ ಸಿರಿವಂತರಿಗೆ ಮಣೆ. ಕೆಲವು ಜಾತಿ ಪ್ರಮುಖರು ಭಾಷಣಕ್ಕೆ ಜಾತಿ ಜಾತಿ ಎಂದು ಬೊಬ್ಬಿರಿದರು ಉದ್ಯೋಗಕ್ಕಾಗಿ ಹೋದಾಗ ಜಾತಿ ಕಾಣದು.

ಪಕ್ಷ, ಧರ್ಮಗಳಿಗೆ ಜೋತು ಬೀಳುವ ನಾವು ಜಾತಿಗಾಗಿರುವ ಸಂಘಟನೆಯನ್ನು ಸಮರ್ಥವಾಗಿ ಬಳಸುವ. ಇತರೆ ಜಾತಿಗಳು ಜಾತಿ ಮೊದಲು ಧರ್ಮ ನಂತರವೆಂದರೆ ನಾವುಗಳು ಧರ್ಮ ಮೊದಲು ಜಾತಿ ನಂತರ ಎನ್ನುತ್ತೇವೆ. ಇದಕ್ಕೆ ಕಾರಣ ಹುಡುಕಿದಾಗ ಜಾತಿ ಸಂಘಟನೆಗಳಿಂದಾದ ಪ್ರಮಾದ. ಯಾವಾಗ ಜಾತಿ ಸಂಘಟನೆಗಳು ಜಾತಿಗಾಗಿ ದುಡಿಯುವುದಿಲ್ಲವೋ ಆಗ ಯುವ ಮನಸ್ಸುಗಳು ತಮ್ಮನ್ನು ಸೆಳೆಯುವ ಧರ್ಮಾಧಾರಿತ ಸಂಘಟನೆಗಳ ಕಡೆಗೆ ಒಲವು ಹರಿಸುತ್ತಾರೆ. ಒಂದಷ್ಟು ಕಾರ್ಯಕ್ರಮಗಳನ್ನು ಮಾಡಿ, ಪ್ರಚಾರ ಬಯಸುವ ಬದಲು ಪ್ರೌಢ, ಕಾಲೇಜು ಹಂತದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಶಿಕ್ಷಣ, ಉದ್ಯೋಗದ ಬಗ್ಗೆ ಸೂಕ್ತ ಮಾರ್ಗದರ್ಶನ ಕಾರ್ಯಕ್ರಮಗಳನ್ನು ಮಾಡಿದಾಗ ನಮ್ಮಲ್ಲಿಯೂ ಬದಲಾವಣೆಯ ಪರ್ವ ಕಾಣಬಹುದು.
ಜಾತಿ ಸಂಘಟನೆಗಳ ಮೂಲಕ ತಮ್ಮ ಬೇಳೆ ಬೇಯಿಸಿಕೊಂಡು ಇತರ ಜಾತಿಯನ್ನು ಅಥವಾ ಪಕ್ಷವನ್ನು ಉದ್ಧರಿಸುವ ಬದಲು ನಮ್ಮವರನ್ನೇ ಉದ್ಧಾರ ಮಾಡುವ. ನಮಗಾಗಿ ದುಡಿಯುವ ಎಂಬ ಧ್ಯೇಯ ನಮ್ಮ ಸ್ಥಳೀಯ ಬಿಲ್ಲವ ಸಂಘಗಳಿಂದ ಹಿಡಿದು ಕೇಂದ್ರ, ರಾಷ್ಟ್ರೀಯ, ಅಖಿಲ ಭಾರತ, ಜಿಲ್ಲೆ, ರಾಜ್ಯ ಇತ್ಯಾದಿ ಹಣೆಪಟ್ಟಿ ಕಟ್ಟಿಕೊಂಡ ನಮ್ಮ ಸಂಘಟನೆಗಳಲ್ಲಿ ಇರಲಿ ಎಂಬುದು ನಮ್ಮೆಲ್ಲರ ಆಶಯ.

 

ಬರಹ: ದೀಪಕ್ ಕೆ ಬೀರ


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »