TOP STORIES:

ನಮ್ಮ ಸಂಘಟನೆಗಳಲ್ಲಿ ನಮ್ಮವರಿಗಾಗಿ ದುಡಿಯುವ ಮನಸ್ಥಿತಿಯೊಂದಿಗೆ ನಮ್ಮಲ್ಲಿ ಪಕ್ಷಕ್ಕಿಂತ ಸಂಘ-ಸಂಸ್ಥೆಗಳ ಮೇಲೂ ಕಾಳಜಿಯಿರಲಿ…


ಬಿಲ್ಲವ ಸಮಾಜದಲ್ಲಿ ಯಾವುದೇ ವಿಷಯ ಪ್ರಸ್ತಾಪವಾದಾಗ ಪಕ್ಷ ಕೇಂದ್ರಿತವಾಗಿ ನೋಡುವ ಜಾಯಮಾನವಿದೆ. ಜಾತಿ ಆಧಾರಿತ ಬಿಲ್ಲವ ಸಂಘಗಳು ಇದಕ್ಕೆ ಹೊರತಾಗಿಲ್ಲ. ಇದು ನಮ್ಮ ದುರಂತ. ಬಹುಷ: ಬಿಲ್ಲವರಲ್ಲಿ ಇಂದು ಸಂಖ್ಯಾ ಬಲವಿದೆ ಎಂದು ಡಂಗುರ ಸಾರಿದರೂ ಬುದ್ಧಿ ಬಲ ಅರ್ಥಾತ್ ಯೋಚನೆ, ಯೋಜನೆಯಲ್ಲಿ ವಿಫಲರಾಗುತ್ತಿದ್ದಾರೆ.

ನಾರಾಯಣ ಗುರುಗಳ ಸಂದೇಶವಿದೆ ವಿದ್ಯೆಯಿಂದ ಸ್ವತಂತ್ರರಾಗಿರಿ ಸಂಘಟನೆಯಿಂದ ಬಲಯುತರಾಗಿ ಎಂದು. ಹೌದು, ವಿದ್ಯೆಯಿಂದ ನಾವು ಸ್ವತಂತ್ರರಾಗುವ ಬದಲು ನಮ್ಮ ಸ್ವಾತಂತ್ರ್ಯವನ್ನು ಪರರಿಗೆ ಧಾರೆ ಎರೆದು ಪರರ ತಂತ್ರಕ್ಕೆ ಬಲಿಯಾಗುತ್ತಿದ್ದೇವೆ. ಸಂಘಟನೆಗಳು ಬಲವ ತುಂಬುವ ಬದಲು ಹಲವು ಆಗುತ್ತಿದೆ. ಕೆಲವರ ಪ್ರಕಾರ ಸಂಘಟನೆಗಳು ಹೆಚ್ಚಾಗಬೇಕು ಅದರಿಂದ ಸಮಾಜಕ್ಕೆ ಪ್ರಯೋಜನವಿದೆ. ಹೆಚ್ಚಾಗಲಿ ಒಳ್ಳೆಯದು ಆದರೆ ನಮ್ಮ ಸಂಘಟನೆಗಳು ನಮ್ಮ ಸಮಾಜವನ್ನು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಔದ್ಯೋಗಿಕವಾಗಿ ಸಧೃಡವಾಗಿಸಲು ಸಹಕಾರಿಯಾಗಿರಬೇಕು. ಆ ಮೂಲಕ ಸಮಾಜದ ಹಿತಚಿಂತನೆಯ ಗುರಿ ಇರಬೇಕು.

ಜಾತಿಗಳು ಧರ್ಮದೊಳಗಿನ ಬಳ್ಳಿಗಳು. ಧರ್ಮ ನಮ್ಮೆಲ್ಲರಿಗೂ ಬೇಕು. ಆದರೆ ಅದು ಕೇವಲ ಬಿಲ್ಲವರಿಗಾಗಿ ಮಾತ್ರವೇ ಎಂಬ ಪ್ರಶ್ನೆಯನ್ನು ನಾವು ಮಾಡಬೇಕಾಗಿದೆ. ನಮ್ಮಲ್ಲಿ ಧರ್ಮಾಧಾರಿತ ಸಂಘಟನೆಯಲ್ಲಿ ಪ್ರಾಣತೆತ್ತವರಿದ್ದಾರೆ. ಅವರು ಯಾಕೆ ಹೋಗಬೇಕಿತ್ತು ಬೇರೆಯವರು ಇರಲಿಲ್ಲವೇ? ಇತ್ಯಾದಿ ಪ್ರಶ್ನೆಗಳು ಎಲ್ಲರೂ ಕೇಳುತ್ತೇವೆ. ಅದು ಸಾಮಾನ್ಯ. ಆದರೆ ಇದರ ಬಗ್ಗೆ ತಿಳುವಳಿಕೆ ಮೂಡಿಸುವುದು ಅನಿವಾರ್ಯ. ಆದರೆ ನಮ್ಮವ ಎಂಬ ಪ್ರಜ್ಞೆ ನಮ್ಮಲ್ಲಿರಲಿ. ಆ ಮೂಲಕ ಅಲ್ಲಿ ಪಕ್ಷ ನೋಡದೆ ಸಾಂತ್ವನ ಇಲ್ಲವೇ ಅದರ ವಿರುದ್ಧ ಬೇಕಾದ ಕ್ರಮದ ಬಗ್ಗೆ ನಮ್ಮ ಸಂಘಟನೆಗಳು ಮಾಡುತ್ತಿಲ್ಲ. ಎಲ್ಲೋ ಕೆಲವು ಬೆರಳೆಣಿಕೆಯ ಸಂಘಟನೆಗಳು ಅಥವಾ ಸ್ಥಳೀಯ ಬಿಲ್ಲವ ಸಂಘ ಧ್ವನಿ ಎತ್ತುತ್ತವೆ ನಂತರ ಅದಕ್ಕೆ ಸ್ಪಂದನೆಯೂ ಇಲ್ಲ. ಇದಕ್ಕೆ ಮೂಲ ಕಾರಣ ಸಂಘಟನೆಯ ಪ್ರಮುಖರು ಪಕ್ಷದಲ್ಲಿದ್ದಾಗ ಘಟನೆಯು ಕೆಲವೊಮ್ಮೆ ಜಾತಿಗಿಂತ ಪಕ್ಷದ ಮೇಲೆ ನಿಲ್ಲುತ್ತದೆ. ಜಾತಿಗಿಂತ ಪಕ್ಷದ ಚಿಂತನೆಯಿರುವ ವ್ಯಕ್ತಿಯು ಸಂಘಟನೆಯ ಚುಕ್ಕಾಣಿ ಹಿಡಿಯಲು ಅಸಮರ್ಥ ಅಥವಾ ಪಕ್ಷಾತೀತ ವ್ಯಕ್ತಿಗೆ ನಮ್ಮ ಸಂಘಟನೆಯ ಜವಾಬ್ದಾರಿ ವಹಿಸಬೇಕಾಗಿದೆ.

ಇತ್ತೀಚಿನ ಒಂದು ಘಟನೆಯನ್ನು ನೋಡುವುದಾದರೆ ಕಲಾವಿದ ಅರವಿಂದ್ ಬೋಳಾರ್ ಖಾಸಗಿ ವಾಹಿನಿಯಲ್ಲಿ ಜ್ಯೋತಿಷ್ಯ ಪಾತ್ರ ಮಾಡಿದಾಗ ಉಂಟಾದ ಸಮಸ್ಯೆಯ ಸಂದರ್ಭ ಖಾಸಗಿ ವಾಹಿನಿಯ ಬಗ್ಗೆ ಚಕಾರವೆತ್ತದೆ ಓರ್ವ ಕಲಾವಿದನಿಗಾದ ಅವಮಾನ ನಮಗೆ ಗೊತ್ತು. ಈ ಸಮಯದಲ್ಲಿ ನಮ್ಮವರಲ್ಲಿಯೇ ಧರ್ಮ, ಜಾತಿಯ ನಡುವಿನ ವಾದವಿವಾದಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆದಿತ್ತು. ಆದರೆ ನಮ್ಮ ಜಾತಿಯ ಪ್ರಮುಖ ಸಂಘಟನೆಗಳೆನಿಸಿಕೊಂಡವರು ಮೌನವಾಗಿದ್ದರು. ಕಲಾವಿದನಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡಲಿಲ್ಲ. ಕೆಲವರು ಮಾಡಿರಬಹುದು. ನಮ್ಮಲ್ಲಿ ಒಗ್ಗಟ್ಟಿನ ಕೊರತೆ ಇದಕ್ಕೆ ಕಾರಣವೇ? ಅಥವಾ ಯಾರು ಮುಂದೆ ಹೋಗುತ್ತಾರೆ ನಂತರ ನಾವು ಹೋಗುವ ಎಂಬ ಸೋಗಲಾಡಿತನವೇ ಎಂಬಂತಾಗಿದೆ.
ಇತರ ಜಾತಿಗಳನ್ನು ಕೊಂಡಾಡುವ ನಾವು ಅವರಿಂದ ಸಾಕಷ್ಟು ಕಲಿಯಬೇಕಾಗಿದೆ. ಚುನಾವಣಾ ಸಂದರ್ಭ ಜಾತಿಯ ಪ್ರಮುಖರನ್ನು ಒಗ್ಗೂಡಿಸಿಕೊಂಡು ನಮ್ಮ ಜಾತಿಗೆ ಪ್ರಾತಿನಿಧ್ಯ ಕೊಡಬೇಕು ಎಂಬ ಬೇಡಿಕೆ, ಜಾತಿಗೆ ಬೇಕಾದ ಸವಲತ್ತು ಪಡೆಯಲು ರಾಜ್ಯದ ಮುಖ್ಯಮಂತ್ರಿಯೇನು, ಪ್ರಧಾನಮಂತ್ರಿಯನ್ನೂ ಭೇಟಿಯಾಗಲು ತಾಕತ್ತು ಅವರಲ್ಲಿ ಇರಬೇಕಾದರೆ, ಜನಸಂಖ್ಯೆಯಲ್ಲಿ ಹೆಚ್ಚಿನ ಪ್ರಾಬಲ್ಯವಿದ್ದು, ನಮ್ಮ ಜಾತಿಯ ಮತಗಳೇ ನಿರ್ಣಾಯಕವಾಗಿರುವಾಗ ನಮ್ಮಲ್ಲಿ ತಾಕತ್ತಿಲ್ಲವೇ? ನಮಗೆ ರಾಜಕೀಯ ನಾಯಕರು ಇದ್ದರು ಚುನಾವಣಾ ಸಂದರ್ಭ ನಾರಾಯಣಗುರು ಮಂದಿರದ ಭೇಟಿಯೇನು, ಜಾತಿಯ ಪ್ರಮುಖರ ಭೇಟಿ ಮಾಡುವುದೇನು? ಗೆದ್ದ ನಂತರ ಸರ್ವರೂ ಸಮಾನರು ಎಂಬ ಧೋರಣೆ ಅವರದ್ದು. ಇದು ನಮ್ಮವರಿಗೆ ರಾಜಕೀಯ ನಾಯಕರ ಬಗೆಗಿನ ತಾತ್ಸಾರಕ್ಕೂ ಕಾರಣವಾಗಿದೆ. ನಮ್ಮಲ್ಲಿ ಜಗಜ್ಜಾಹಿರಾಗುವಂತೆ ಜನ ಸೇರಿಸಿ ಅದು ಆಗ ಬೇಕು ಇದಾಗಬೇಕೆನ್ನುತ್ತೇವೆ. ಹೇಳುವುದು ಮಾತ್ರ ಅದರ ಹಿಂದೆ ಹೋಗಿ ಒತ್ತಡ ಹಾಕಲಾರೆವು. ಅದೇ ಇತರ ಜಾತಿಯವರು ಗುಪ್ತವಾಗಿ ಅವರ ನಾಯಕರು ಮಾತ್ರ ಮುಂದೆ ಹೋಗಿ ಸಮಾಜಕ್ಕಾಗಿ ಸರಕಾರಕ್ಕೆ ಒತ್ತಡ ಹಾಕಿ ಬೇಕಾದನ್ನು ಪಡೆಯುತ್ತಾರೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ನಮ್ಮಲ್ಲಿ ಕಾರ್ಖಾನೆ, ಕಂಪನಿ, ಬ್ಯಾಂಕ್ ಇತ್ಯಾದಿಗಳಿದ್ದರೂ ಅಲ್ಲಿ ಸಿರಿವಂತರಿಗೆ ಮಣೆ. ಕೆಲವು ಜಾತಿ ಪ್ರಮುಖರು ಭಾಷಣಕ್ಕೆ ಜಾತಿ ಜಾತಿ ಎಂದು ಬೊಬ್ಬಿರಿದರು ಉದ್ಯೋಗಕ್ಕಾಗಿ ಹೋದಾಗ ಜಾತಿ ಕಾಣದು.

ಪಕ್ಷ, ಧರ್ಮಗಳಿಗೆ ಜೋತು ಬೀಳುವ ನಾವು ಜಾತಿಗಾಗಿರುವ ಸಂಘಟನೆಯನ್ನು ಸಮರ್ಥವಾಗಿ ಬಳಸುವ. ಇತರೆ ಜಾತಿಗಳು ಜಾತಿ ಮೊದಲು ಧರ್ಮ ನಂತರವೆಂದರೆ ನಾವುಗಳು ಧರ್ಮ ಮೊದಲು ಜಾತಿ ನಂತರ ಎನ್ನುತ್ತೇವೆ. ಇದಕ್ಕೆ ಕಾರಣ ಹುಡುಕಿದಾಗ ಜಾತಿ ಸಂಘಟನೆಗಳಿಂದಾದ ಪ್ರಮಾದ. ಯಾವಾಗ ಜಾತಿ ಸಂಘಟನೆಗಳು ಜಾತಿಗಾಗಿ ದುಡಿಯುವುದಿಲ್ಲವೋ ಆಗ ಯುವ ಮನಸ್ಸುಗಳು ತಮ್ಮನ್ನು ಸೆಳೆಯುವ ಧರ್ಮಾಧಾರಿತ ಸಂಘಟನೆಗಳ ಕಡೆಗೆ ಒಲವು ಹರಿಸುತ್ತಾರೆ. ಒಂದಷ್ಟು ಕಾರ್ಯಕ್ರಮಗಳನ್ನು ಮಾಡಿ, ಪ್ರಚಾರ ಬಯಸುವ ಬದಲು ಪ್ರೌಢ, ಕಾಲೇಜು ಹಂತದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಶಿಕ್ಷಣ, ಉದ್ಯೋಗದ ಬಗ್ಗೆ ಸೂಕ್ತ ಮಾರ್ಗದರ್ಶನ ಕಾರ್ಯಕ್ರಮಗಳನ್ನು ಮಾಡಿದಾಗ ನಮ್ಮಲ್ಲಿಯೂ ಬದಲಾವಣೆಯ ಪರ್ವ ಕಾಣಬಹುದು.
ಜಾತಿ ಸಂಘಟನೆಗಳ ಮೂಲಕ ತಮ್ಮ ಬೇಳೆ ಬೇಯಿಸಿಕೊಂಡು ಇತರ ಜಾತಿಯನ್ನು ಅಥವಾ ಪಕ್ಷವನ್ನು ಉದ್ಧರಿಸುವ ಬದಲು ನಮ್ಮವರನ್ನೇ ಉದ್ಧಾರ ಮಾಡುವ. ನಮಗಾಗಿ ದುಡಿಯುವ ಎಂಬ ಧ್ಯೇಯ ನಮ್ಮ ಸ್ಥಳೀಯ ಬಿಲ್ಲವ ಸಂಘಗಳಿಂದ ಹಿಡಿದು ಕೇಂದ್ರ, ರಾಷ್ಟ್ರೀಯ, ಅಖಿಲ ಭಾರತ, ಜಿಲ್ಲೆ, ರಾಜ್ಯ ಇತ್ಯಾದಿ ಹಣೆಪಟ್ಟಿ ಕಟ್ಟಿಕೊಂಡ ನಮ್ಮ ಸಂಘಟನೆಗಳಲ್ಲಿ ಇರಲಿ ಎಂಬುದು ನಮ್ಮೆಲ್ಲರ ಆಶಯ.

 

ಬರಹ: ದೀಪಕ್ ಕೆ ಬೀರ


Related Posts

ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ


Share        ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ


Read More »

ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ ಕೋಟ್ಯಾನ್‌ಗೆ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ


Share        ವಿಕ ಸುದ್ದಿಲೋಕ ಮಂಗಳೂರು ಸೌಹಾರ್ದತೆ ಬಿಂಬಿಸುವ ವರದಿಗೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ‘ಬ್ಯಾಂಡ್ ಮಂಗಳೂರು’ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ


Read More »

ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಆಯ್ಕೆ


Share        ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದ ಬಿಂಬಿಸುವ ವರದಿಗೆ ನೀಡಲಾಗುವ “ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿಗೆ ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯಕೋಟ್ಯಾನ್ ಪಡು  ಆಯ್ಕೆಯಾಗಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ 2024 ಅಕ್ಟೋಬರ್


Read More »

ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್( ರಿ) ಇದರ ನೂತನ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ ಆಯ್ಕೆ


Share        ಶ್ರೀ ಕ್ಷೇತ್ರ ಗೆಜ್ಜೆಗಿರಿಯ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ  ಚಾರಿಟೇಬಲ್ ಟ್ರಸ್ಟ್(ರಿ) ಇದರ ನೂತನ ಅಧ್ಯಕ್ಷರಾಗಿ ಬಿರ್ವ ಸೆಂಟರ್ ಇದರ ಮಾಲಕರಾದ  ಕೆ ಸಂಜೀವ ಪೂಜಾರಿ ಇವರನ್ನು ಕಂಕನಾಡಿ ಬ್ರಹ್ಮ


Read More »

8ನೇ ವಯಸ್ಸಿನಲ್ಲಿ ಕಪೋತಾಸನದ ಭಂಗಿಯಲ್ಲಿ ವಿಶ್ವ ದಾಖಲೆ ಮಾಡಿದ ಬಾಲಕಿ ಕುಮಾರಿ ಶರಣ್ಯ ಶರತ್!


Share        ಮಂಗಳೂರು, ಜೂ. 20 ಪನ್ನೀರಿನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಶರಣ್ಯ ಶರತ್ ಅವರು ತನ್ನ ಎಂಟನೆಯ ವಯಸ್ಸಿನಲ್ಲಿ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್


Read More »

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾಗಿ ಎಚ್.ಎಸ್.ಜಯರಾಜ್ ಆಯ್ಕೆ


Share        ಮಂಗಳೂರು: ಬ್ರಹ್ಮಶ್ರೀ ನಾರಾಯಣಗುರುಗಳು ಪ್ರತಿಷ್ಠಾಪಿಸಿದ ಕರ್ನಾಟಕದ ಏಕೈಕ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಆಡಳಿತ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ಜಂಟಿ ಸಭೆ ಕೇಂದ್ರದ ಮಾಜಿ ಸಚಿವ


Read More »