TOP STORIES:

FOLLOW US

ನಾಡು ಕಂಡ ಧೀಮಂತ ರಾಜಕಾರಣಿ ಮಾಜಿ ಮುಖ್ಯಮಂತ್ರಿ ದಿ!! ಎಸ್ ಬಂಗಾರಪ್ಪ ಜನುಮ ದಿನದಂದು ಗೌರವ ಪೂರ್ವಕ ನಮನಗಳು


ಬಂಗಾರಪ್ಪಾಜಿಯವರ ಸ್ಮರಣೋತ್ಸವದ ಅಂಗವಾಗಿ ಈ ಲೇಖನ.

ಎಸ್, ಬಂಗಾರಪ್ಪ ಅಂದರೆ ಸಾರೆಕೊಪ್ಪ ಬಂಗಾರಪ್ಪ ಅಂತ ಅರ್ಥ. ಸಾರೆಕೊಪ್ಪ ಎಂಬುದು ಅಂಚೆ ವಿಳಾಸ.

ಇವರ ಹುಟ್ಟೂರು ಶಿವಮೊಗ್ಗ* ಜಿಲ್ಲೆಯ *ಸೊರಬ* ತಾಲೂಕಿನ *ಕುಬಟೂರು* ಎಂಭ ಕುಗ್ರಾಮ. ಇವರ ತಂದೆಯ ಹೆದರು *ಕಲ್ಲಪ್ಪ.* ಮತ್ತು ತಾಯಿಯ ಹೆಸರು *ಕಲ್ಲಮ್ಮ* ಎಂದು. ಇವರಿಗೆ ಈ ಹೆಸರು ಬರಲು ಕಾರಣ *ಕಾರವಾರ* ಜಿಲ್ಲೆಯ *ಶಿರ್ಶಿ* ತಾಲೂಕಿನ *ಕದಂಭರು* ಆಳಿದ *ಬನವಾಸಿಯ* ಹತ್ತಿರ ಕೇವಲ ಮೂರು ಕಿ.ಮೀ. ದಲ್ಲಿ *ಗುಡ್ನಾಪುರ* ಎಂಬ ಹಳ್ಳಿ ಇದೆ. ಈ ಹಳ್ಳಿಯ ಪಕ್ಕದಲ್ಲಿ *ದೊಡ್ಡದಾದ ಕೆರೆಯೊಂದಿದೆ* ಸದಾ ವರ್ಷವಿಡೀ ನೀರಿನಿಂದ ತುಂಬಿರುವ ಈ ಕೆರೆಯ ಮಧ್ಯಭಾಗದಲ್ಲಿ *ಬಂಗಾರೇಶ್ವರ ದೇವಾಲಯವಿದೆ.* ಅಲ್ಲಿ *ಶಿವನ* ಅವತಾರ *ಬಂಗಾರೇಶ್ವರ* ನೆಲೆಸಿದ್ದಾನೆ.

 

*ಕಲ್ಲಪ್ಪ* ಮತ್ತು *ಕಲ್ಲಮ್ಮ* ದಂಪತಿಗಳಿಗೆ ಬಹಳ ದಿನವಾದರೂ ಗಂಡು ಸಂತಾನವಾಗುವುದಿಲ್ಲ ಆಗ ಮನೆದೇವರು *ಹುಚ್ಚುರಾಯೇಶ್ವರ ಸ್ವಾಮಿ {ಆಂಜನೇಯ ಸ್ವಾಮಿ}* ನೆನೆಯುತ್ತಾ ಈ ಬಂಗಾರೇಶ್ವರ ದೇವರಿಗೆ ಹರಕೆ ಹೊತ್ತರಂತೆ ಗಂಡು ಮಗು ಜನಿಸಿದರೆ ನಿನ್ನ ಹೆಸರೇ ನಾಮಕರಣ ಮಾಡುತ್ತೇವೆ ಅಂತ.ಆ ನಂತರದಲ್ಲಿ ಕಲ್ಲಮ್ಮನವರು ನವಮಾಸ ತುಂಬಿ ಮಗುವಿಗೆ ಜನ್ಮ ನೀಡಿದಾಗ ಗಂಡಯ ಮಗು ಆಗಿತ್ತಂತೆ ಹರಕೆಯ ಪ್ರಕಾರ ಆ ಗಂಡು ಮಗುವಿಗೆ *ಬಂಗಾರೇಶ್ವರನ* ಆಶಿರ್ವಾದದಿಂದ ಜನಿಸಿದ್ದಕ್ಕೆ *ಬಂಗಾರಪ್ಪ* ಎಂದು ನಾಮಕರಣ ಮಾಡಿದರಂತೆ. ಇವರೇ ನಾಡುಕಂಡ ಧೀಮಂತ ವ್ಯಕ್ತಿ , ಬಡವರ ಬಂಧು *ಈಡಿಗ ಸಮುದಾಯದ ಆಶಾಕಿರಣ ಬಂಗಾರಪ್ಪನವರು.*

 

ಅದೇ ರೀತಿಯಾಗಿ *ಬಂಗಾರಪ್ಪನವರ* ಸಹೋದರಿಯರು *ದೊಡ್ಡ ಕೆರಿಯಮ್ಮ* ಮತ್ತು *ಸಣ್ಣ ಕೆರಿಯಮ್ಮ* ಎಂದು. *ಬಂಗಾರೇಶ್ವರ* ದೇವಾಲಯದ ಪಕ್ಕ ಇರುವ *ಗುಡ್ನಾಪುರ* ಎಂಬ ಕುಗ್ರಾಮದ ಪಕ್ಕ ಕೆರೆ ಇದೆಯಲ್ಲ, ಅಲ್ಲಿ *ಬಂಗಾರೇಶ್ವರ ಸ್ವಾಮಿಯ ಜೊತೆಗೆ ಶಕ್ತಿಸ್ವರೂಪಿಣಿ ಆದಿಶಕ್ತಿ ಅಮ್ಮನಾಗಿ ಕೆರೆಯಲ್ಲಿರುವುದರಿಂದ ಕೆರೆಯಮ್ಮಳಾಗಿ ದರ್ಶನ ಕೊಡುತ್ತಿದ್ದಾಳೆ.*

 

ಆದ್ದರಿಂದ *ಬಂಗಾರಪ್ಪನವರ* ತಂದೆ ತಾಯಿ ತಮ್ಮ ಹೆಣ್ಣಮಕ್ಕಳಿಗೆ *ದೊಡ್ಡ ಕೆರೆಯಮ್ಮ,,, ಸಣ್ಣ ಕೆರೆಯಮ್ಮ* ಎಂದು ನಾಮಕರಣ ಮಾಡಿದ್ದಾರೆ.

ಬಂಗಾರಪ್ಪನವರು ಈಡಿಗ ಜಾತಿಗೆ ಸೇರಿದವರು. ಈಡಿಗ ಜಾತಿಯ ಉಪಜಾತಿಯಾದ ದೀವರು ಸಮುದಾಯಕ್ಕೆ ಸೇರಿದವರು.ಇವರ ಧರ್ಮ ಪತ್ನಿಯ ಹೆಸರು *ಶಕುಂತಲ. ಇವರದು ಕಾರವಾರ ಜಿಲ್ಲೆಯ ಶಿರ್ಶಿ ತಾಲೂಕಿನ ಮಳಲಗಾಂವ್ಎಂಬ ಹಳ್ಳಿ.ಇವರದು ಸಹಿತ ಈಡಿಗ ಸಮುದಾಯದ ಉಪಜಾತಿ ನಾಯ್ಕ ಕುಟುಂಬದವರು.

 

ಬಂಗಾರಪ್ಪನವರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.

ಇವರ ಒಬ್ಬ ಪುತ್ರಿಯನ್ನು ಇದೇ ಸಮುದಾಯದ ಕನ್ನಡದ ಮುತ್ತು ಪದ್ಮಬೂಷಣ ಡಾ ! ರಾಜಕುಮಾರ ಅವರ ಪುತ್ರ ಶಿವರಾಜಕುಮಾರ ಮದುವೆಯಾಗಿದ್ದಾರೆ.

ಇನ್ನೋರ್ವ ಪುತ್ರಿ ಹೆಸರಾಂತ ದಿನಪತ್ರಿಕೆ ಪ್ರಜಾವಾಣಿಯ ಮಾಲಾಕರನ್ನು ಮಡದಿಯಾಗಿದ್ದಾರೆ.

ಬಂಗಾರಪ್ಪನವರು ತಮ್ಮ ರಾಜಕೀಯ ಅಕಾಂಕ್ಷೆಗೆ ಕಲಾವಿದರನ್ನು ಎಂದೂ ಬಳಸಿಕೊಳ್ಳಲಿಲ್ಲ. *ಡಾ ! ರಾಜ್* ಅವರನ್ನು ಒಂದು ದಿನವೂ ತಮ್ಮ ರಾಜಕೀಯ ಪ್ರಚಾರಕ್ಕೆ ಬರುವಂತೆ ಆಹ್ವಾನಿಸಲಿಲ್ಲ.

ಮಿರಿ ಮಿರಿ ಮಿಂಚುವ ಶರ್ಟ್ ಬಿಳಿ ಪ್ಯಾಂಟ್ ಬಿಳಿ ಚಪ್ಪಲಿ ಅಥವಾ ಶೂ, ಕಣ್ಣಿಗೆ ಕೂಲಿಂಗ್ ಕನ್ನಡಕ, ಕೈಯಲ್ಲಿ ಕನ್ನಡಕ ಇಡುವ ಬಾಕ್ಸ್ ಇದು *ಬಂಗಾರಪ್ಪನವರ* ಸಾರ್ವಜನಿಕ ವಸ್ತ್ರ ಸಂಹಿತೆ. ವೇದಿಕೆ ಮೇಲಿರುವಾಗಲಂತೂ ದೂರದಲ್ಲಿ ನಿಂತು ನೋಡುವವರಿಗೆ ಗುರುತು ಹಿಡಿಯಲು *ಮಿಂಚು ಅಚ್ಚಕೆಂಪು, ತಿಳಿನೀಲಿ, ಅಚ್ಚನೀಲಿ,ಶರ್ಟ್ ದರಿಸುತ್ತಿದ್ದರು.

ಬಂಗಾರಪ್ಪನವರನ್ನು ಈ ದಿನ ಮನದಲ್ಲಿ ಸ್ಮರಿಸಿಕೊಳ್ಳುತ್ತಾ ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಹಾರೈಸೋಣ.

ವಿಷಯ ಸಂಗ್ರಹ : ಆಂಜನೇಯ.ಟಿ.{ ಈಡಿಗ }

ಅಗಡಿ ಹಾವೇರಿ

9113604162


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »