TOP STORIES:

ನಾನು ನನ್ನದೆನ್ನುವ ಸ್ವಾರ್ಥ ಸಮಾಜದಲ್ಲಿ, ಇತರ ಪ್ರತಿಭೆಗೆ ಪ್ರೋತ್ಸಹ ಕೊಡುವ ಪ್ರದೀಪ್ ಪೂಜಾರಿ ಕುಕ್ಕಿಪಾಡಿ


ತುಳುನಾಡಿನ ಹೆಮ್ಮೆಯ ಹಾಗೂ ಬಿಲ್ಲವ ಸಮಾಜದ ಯುವ ಪ್ರತಿಭೆ ಕುಕ್ಕಿಪಾಡಿಯ ಕೊರಗಪ್ಪ ಪೂಜಾರಿ ಮತ್ತು ಯಮುನಾ ದಂಪತಿಗಳ ಮಗ ಪ್ರದೀಪ್ ಪೂಜಾರಿ ಕುಕ್ಕಿಪಾಡಿ.ಇವರು ಪ್ರಾಥಮಿಕ ಶಿಕ್ಷಣ-ಕುಕ್ಕಿಪಾಡಿ ಸಂತ ಬಾರ್ತಲೋಮಿಯರ ಸ್ಕೂಲ್, ಪ್ರೌಢ -ಸರಕಾರಿ ಪದವಿ ಪೂರ್ವ ಕಾಲೇಜು ವಾಮದಪದವು , ಕಾಲೇಜ್ -ಹೋಲಿ ರೋಸರಿ ಕಾಲೇಜು ಮೂಡಬಿದ್ರಿ ಯಲ್ಲಿ ತನ್ನ ವಿದ್ಯಾಭ್ಯಾಸ ಮುಗಿಸಿದರು.

ನಾನು ನನ್ನದೆನ್ನುವ ಸ್ವಾರ್ಥ ಸಮಾಜದಲ್ಲಿ ತನ್ನ ಪ್ರತಿಭೆಯ ಜೊತೆಗೆ ಇತರ ಪ್ರತಿಭೆಗೆ ಪ್ರೋತ್ಸಹ ಕೊಟ್ಟು ಅವರಿಗೂ ವೇದಿಕೆ ಕಲ್ಪಿಸಿಕೊಟ್ಟ ಸಾಧನೆಯ ಹಾದಿಯಲ್ಲಿ ನಡೆಯುವಂತೆ ಮಾಡಿದ ಮಹಾನ್ ಸಾಧಕ. ತಾನು ಪಟ್ಟ ಕಷ್ಟ ಇನ್ನೊಬ್ಬರು ಅನುಭವಿಸಬಾರದು ಎಂದು ಅವರ ಜೀವನದಲ್ಲಿ ಬೆಳಕಾದವರು.

ಬಾಲ್ಯದಿಂದಲೇ ನಟನೆಯಲ್ಲಿ ಆಸಕ್ತಿ ಇರುವ ಇವರಿಗೆ ನಾಯಕ ನಟನಾಗಿ ನಟಿಸುವ ಅವಕಾಶ ಸಿಕ್ಕಿತ್ತು. ಕಲಾ ಕ್ಷೇತ್ರದ ಗುರುಗಳಾದ ಅಶೋಕ್ ಹಲಾಯಿ ಇವರ ನಿರ್ದೇಶನದ ಪೂರಾ ಪೊಕ್ಕಡೆ ಚಿತ್ರದಲ್ಲಿ ನಟಿಸಿ ಸೈ ಎಣಿಸಿಕೊಂಡರು.

ಹೀಗೆ ಅನೇಕ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶದಿಂದ ತಾನು ಬಣ್ಣ ಅಚ್ಚುವ ಬದಲು ಇತರ ಪ್ರತಿಭೆಗೆ ಅವಕಾಶ ಕೊಡಲು ಅಪ್ಪು ಎನ್ನುವ ನೃತ್ಯ ತಂಡ ರಚಿಸಿ ಉಚಿತ ನೃತ್ಯ ತರಬೇತಿ ನೀಡುತ್ತಿದ್ದರು.ಇವರು ಅನೇಕ ಕಿರು ಚಿತ್ರ ನಿರ್ದೇಶನ ಮಾಡಿ ಯಶಸ್ವೀ ನಿರ್ದೇಶಕರು ಎನಿಸಿಕೊಂಡಿದ್ದಾರೆ. ಮನಸ್ದ ಪೊರ್ಲು, ಸಸ್ಪೆನ್ಸ್ ಮೂವಿ, ನಂಬುಗೆ, ಅಂಗಲಪು, ಆಪರೇಷನ್ ತುಳುನಾಡ ಹೀಗೆ ಅನೇಕ ಕಿರುಚಿತ್ರ ಮಾಡಿದ್ದಾರೆ. ನಿರ್ದೇಶಕ ಮಾತ್ರ ಅಲ್ಲ ಗ್ಲಾಮರ್ ಡಿಸೈನ್ ಆಗಿಯೂ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಗ್ಲಾಮರ್ ಶಾಟ್ಸ್ ನಲ್ಲಿ ಹಲವಾರು ಕಿರುಚಿತ್ರ ನಿರ್ಮಾಣ ಮಾಡಿ ಹೊಸ ಪ್ರತಿಭೆ ಅವಕಾಶ ಮಾಡಿಕೊಟ್ಟ ಕಲಾ ಪೋಷಕರು ಹೌದು, ಇವರ ಈ ಸಾಧನೆಗೆ ಫ್ಯಾಮಿಲಿ, ಫ್ರೆಂಡ್ಸ್ ಜೊತೆಗೆ ತ್ರಿಶಾಲ್ ಶೆಟ್ಟಿ, ಶಶಿಂದ್ರ ಜಂಕಳ, ನಾವೆಲ್, ತಿಲಕ್, ವಿದ್ಯಾ ಹೀಗೆ ಅನೇಕರ ಸಂಪೂರ್ಣ ಸಹಕಾರ ಸಿಕ್ಕಿತ್ತು.

ಬಂಟ್ವಾಳ ತಾಲ್ಲೂಕಿನ ಜನರಿಗೆ ಮಾಹಿತಿ ನೀಡಲು ಸೂಕ್ತ ನ್ಯೂಸ್ ಚಾನಲ್ ಅನ್ನು ಯು ಟ್ಯೂಬ್ ನಲ್ಲಿ ಆರಂಭಿಸಿ ಜನರಿಗೆ ಸೂಕ್ತ ಮಾಹಿತಿ ತಲುಪುವಂತೆ ಮಾಡಿದರು ಮತ್ತು ನೊಂದ ಬಡ ಜನರ ನೋವಿನ ವರದಿಯನ್ನು ಈ ಚಾನಲ್ ಮೂಲಕ ಸಂಘ ಸಂಸ್ಥೆಗಳಿಗೆ ತಲುಪುವಂತೆ ಮಾಡಿ ಬಡವರ ಪಾಲಿಗೆ ಆಶಾ ಕಿರಣವಾದರು.

ತಮ್ಮ ನಿಸ್ವಾರ್ಥ ಸೇವೆಯಿಂದ ಸೇವೆ ಮಾಡುವ ಇವರ ಬಾಳು ಬೆಳಕಾಗಲಿ ಮತ್ತು ಕಲಾ ಮಾತೆಯ ಅನುಗ್ರಹದಿಂದ ಇನ್ನಷ್ಟು ಒಳ್ಳೆಯ ಕಿರು ಚಿತ್ರ , ಸಿನಿಮಾ ಮಾಡಿ ಪ್ರಶಸ್ತಿ ಪುರಸ್ಕಾರ ಇವರ ಮುಡಿಗೇರುವಂತೆ ಮಾಡಲಿ.

ಬರಹ: ಪ್ರಶಾಂತ್ ಅಂಚನ್ – ಮಸ್ಕತ್ತ್


Related Posts

ನಿರೂಪಣಾ ಕ್ಷೇತ್ರದಲ್ಲಿ ಮಿಂಚುತ್ತಿರುವ ಉದಯೋನ್ಮುಖ ಪ್ರತಿಭೆ – ಕೃತಿ ಪೂಜಾರಿ ಮೂಡುಬೆಟ್ಟು


Share           ಸಾಧನೆಯೆಂಬುದು ಯಾರೊಬ್ಬನ ಸೊತ್ತೂ ಅಲ್ಲ, ಅದು ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಭಾವದಿಂದ ಮುನ್ನಡೆಯುವ ಮನಸು ಮತ್ತು ವ್ಯಕ್ತಿಗಳ ಪಾಲಿನ ವರದಾನ. ಸಾಧನೆಯ ಮನಸ್ಸೆಂಬ ಸಸಿಗೆ ಸತತ ನೀರೆರೆದು ಪೋಷಿಸಿ, ಶ್ರಮವನ್ನು


Read More »

ಸುರತ್ಕಲ್‌ನಲ್ಲಿ ರಂಗುರಂಗಿನ ರಂಗೋತ್ಸವ ನವೀನ್ ಡಿ ಪಡೀಲ್ ಗೆ ರಂಗಚಾವಡಿ ಪ್ರಶಸ್ತಿ ಪ್ರದಾನ


Share         ಸುರತ್ಕಲ್: ರಂಗಚಾವಡಿ ಮಂಗಳೂರು ಸಾಂಸ್ಕೃತಿಕ ಸಾಂಸ್ಕೃತಿಕ ಸಂಘಟನೆ ಮತ್ತು ಸುಭಾಷಿತನಗರ  ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ ನಡೆದ ರಂಗಚಾವಡಿ ರಜತ ಸಂಭ್ರಮ ಮತ್ತು ರಂಗುರಂಗಿನ ರಂಗೋತ್ಸವ ಕಾರ್ಯಕ್ರಮ


Read More »

ಸುರತ್ಕಲ್‌ನಲ್ಲಿ ರಂಗುರಂಗಿನ ರಂಗೋತ್ಸವ ನವೀನ್ ಡಿ ಪಡೀಲ್ ಗೆ ರಂಗಚಾವಡಿ ಪ್ರಶಸ್ತಿ ಪ್ರದಾನ


Share         ಸುರತ್ಕಲ್‌ನಲ್ಲಿ ರಂಗುರಂಗಿನ ರಂಗೋತ್ಸವ   ನವೀನ್ ಡಿ ಪಡೀಲ್ ಗೆ ರಂಗಚಾವಡಿ ಪ್ರಶಸ್ತಿ ಪ್ರದಾನ   ಸುರತ್ಕಲ್: ರಂಗಚಾವಡಿ ಮಂಗಳೂರು ಸಾಂಸ್ಕೃತಿಕ ಸಾಂಸ್ಕೃತಿಕ ಸಂಘಟನೆ ಮತ್ತು ಸುಭಾಷಿತನಗರ ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್


Read More »

ಸ್ವಾಮಿಗಳ ಚಿತ್ರ ಮತ್ತು ಪ್ರತಿಮೆಯ ಮುಂದೆ ರಾಜ್ಯಪಾಲರೊಂದಿಗೆ ಇರುವ ಚಿತ್ರ


Share         ಶಿವಗಿರಿ: ರಾಜ್ಯಪಾಲ ಆರ್.ವಿ. ಅರ್ಲೆಕ್ಕರ್ ಅವರು ರಾಜಭವನದ ಅತಿಥಿ ಕೊಠಡಿಯಲ್ಲಿ ಶ್ರೀ ನಾರಾಯಣ ಗುರುಗಳ ಚಿತ್ರ ಮತ್ತು ಕಂಚಿನ ಪ್ರತಿಮೆಯನ್ನು ಸ್ವಾಮಿಗಳಿಗೆ ತೋರಿಸಿದರು. ಅತಿಥಿ ಕೊಠಡಿಯನ್ನು ಪ್ರವೇಶಿಸುವಾಗ ಮೊದಲು ನೋಡುವುದು ಗುರುಗಳ ಚಿತ್ರ.


Read More »

ಕವಿ ಗವಿಸಿದ್ದ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ “ಮೇಣಕ್ಕಂಟಿದ ಬತ್ತಿ” ಕವನ ಸಂಕಲನ ಬಿಡುಗಡೆ


Share         ಅ.26: ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ಕವನ ಸಂಕಲನ ಬಿಡುಗಡೆ, ಪ್ರಶಸ್ತಿ ಪ್ರದಾನ,ಸಾಹಿತ್ಯ ಚರ್ಚೆ ಮುಂಬಯಿ, ಅ.23-  ಖ್ಯಾತ ಬಂಡಾಯ ಕವಿ ಗವಿಸಿದ್ದ ಎನ್. ಬಳ್ಳಾರಿ


Read More »

ಮಂಗಳೂರು: ಅಳದಂಗಡಿಯ ಶ್ರೀಮತಿ ಅನುಷಾ ಪ್ರಸಾದ್ ಪೂಜಾರಿ ಅವರಿಗೆ ಗಣಿತಶಾಸ್ತ್ರ ವಿಷಯದಲ್ಲಿ ಪಿ.ಎಚ್.ಡಿ ಪದವಿ


Share         ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ (Manipal Institute of Technology, Manipal) ನ ಗಣಿತಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಶ್ರೀಮತಿ ಅನುಷಾ ಎಲ್ ಅವರು ಮಂಡಿಸಿದ “A study on N-Covering


Read More »