TOP STORIES:

ನಿಮ್ಮ ವಾಟ್ಸ್​ಆಯಪ್ ಜೊತೆ ಈ ಆ್ಯಪ್ ಇದ್ದರೆ ತಕ್ಷಣ ಡಿಲೀಟ್ ಮಾಡಿ


ವಾಟ್ಸ್​ಆಯಪ್ ಪ್ಲಸ್ ಆಯಪ್ ಇಂದು ಲಕ್ಷಕ್ಕೂ ಅಧಿಕ ಮಂದಿ ಉಪಯೋಗ ಮಾಡುತ್ತಿದ್ದಾರೆ. ನೀವು ಇಂಥಹ ಅನಧಿಕೃತ ಆಯಪ್ ಅನ್ನು ಬಳಸುತ್ತಿದ್ದರೆ ತಕ್ಷಣವೇ ಅದನ್ನು ಅನ್​ಇನ್​ಸ್ಟಾಲ್ ಮಾಡಿ.

ಒಂದು ಆಯಪ್ ಫೇಮಸ್ ಆಗಿದೆ ಎಂದಾದರೆ ಅದಕ್ಕೆ ಪೂರಕವಾದ ಅಥವಾ ಥೇಟ್ ಅದರಂತೆ ಇರುವ ನಕಲಿ ಆಯಪ್​ಗಳು (Fake App) ಕೂಡ ಹುಟ್ಟಿಕೊಳ್ಳುತ್ತವೆ. ಗೂಗಲ್ ಪ್ಲೇ ಸ್ಟೋರ್​​ನಲ್ಲಿ (Goolge Play store) ಈಗಲೂ ಅಂತಹ ಅನೇಕ ಆಯಪ್​ಗಳು ರಾರಾಜಿಸುತ್ತಿವೆ. ಇಂತಹ ಫೇಕ್ ಆಯಪ್​ಗಳನ್ನು ನೀವು ಇನ್​ಸ್ಟಾಲ್ ಮಾಡಿದ್ದರೆ, ಇವು ನಿಮ್ಮಲ್ಲಿರುವ ವೈಯಕ್ತಿಕ ಮಾಹಿತಿಯನ್ನು ಕದಿಯುತ್ತದೆ, ನಿಮ್ಮ ಬ್ಯಾಂಕ್ ಮಾಹಿತಿಯನ್ನು ಕಲೆಹಾಕಿ ಹಣ ದೋಚುತ್ತದೆ. ಈರೀತಿ ಅನೇಕ ಪ್ರಕರಣಗಳು ವರದಿಯಾಗಿದ್ದು ಗೊತ್ತೇ ಇದೆ. ಸದ್ಯ ವಾಟ್ಸ್​ಆಯಪ್​ನಂತೆ ಇರುವ ವಾಟ್ಸ್​ಆಯಪ್ ಪ್ಲಸ್ (WhatsApp Plus) ಎಂಬ ಆಯಪ್ ಅನ್ನು ಅನೇಕರು ಉಪಯೋಗಿಸುತ್ತಿದ್ದಾರೆ ಎಂಬುದು ತಿಳಿದುಬಂದಿದ್ದು ಅಂಥವರಿಗೆ ಕಂಟಕ ಎದುರಾಗಿದೆ.

 

ಹೌದು, ವಾಟ್ಸ್​ಆಯಪ್ ಪ್ಲಸ್ ಆಯಪ್ ಇಂದು ಲಕ್ಷಕ್ಕೂ ಅಧಿಕ ಮಂದಿ ಉಪಯೋಗ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಒಂದೇ ಸ್ಮಾರ್ಟ್​ಫೋನಿನಲ್ಲಿ ಎರಡು ವಾಟ್ಸ್​ಆಯಪ್ ಖಾತೆ ತೆರೆಯಲು ಸಾಧ್ಯವಿಲ್ಲ. ಹೀಗಾಗಿ ಒಂದು ಮೊಬೈಲ್​ನಲ್ಲಿ ಎರಡು ಸಿಮ್ ಬಳಸುವ ಅನೇಕರು ಒಂದು ಸಿಮ್​ನಲ್ಲಿ ಅಧಿಕೃತ ವಾಟ್ಸ್​ಆಯಪ್ ಇದ್ದರೆ, ಇನ್ನೊಂದು ಸಿಮ್​ಗಾಗಿ ವಾಟ್ಸ್​ಆಯಪ್ ಪ್ಲಸ್ ಅನ್ನು ಬಳಸುತ್ತಿದ್ದಾರೆ. ನೀವು ಹೀಗೆ ಮಾಡುತ್ತಿದ್ದರೆ ತಕ್ಷಣವೇ ವಾಟ್ಸ್​ಆಯಪ್ ಪ್ಲಸ್ ಆಯಪ್ ಅನ್ನು ಡಿಲೀಟ್ ಮಾಡಿ.

 

ವಾಟ್ಸ್​ಆಯಪ್​ ಪ್ಲಸ್​ನಿಂದ ವಾಟ್ಸ್​ಆಯಪ್​ಗೆ ತಲೆನೋವಾಗುವ ಪರಿಸ್ಥಿತಿ ಎದುರಾಗಿದ್ದು, ನೀವು ವಾಟ್ಸ್​ಆಯಪ್​ ಪ್ಲಸ್ ನಂತಹ ಅನಧಿಕೃತ ಆಯಪ್ ಅನ್ನು ಬಳಸುತ್ತಿದ್ದರೆ ತಕ್ಷಣವೇ ಅದನ್ನು ಅನ್​ಇನ್​ಸ್ಟಾಲ್ ಮಾಡಿ ಎಂದು ವರದಿಯಾಗಿದೆ. ಇಲ್ಲದಿದ್ದರೆ ವಾಟ್ಸ್​ಆಯಪ್​​ ನಿಮ್ಮ ಖಾತೆಯನ್ನು ಸ್ಥಗಿತಗೊಳಿಸಬಹುದು. ವಾಟ್ಸ್​ಆಯಪ್​​ ಪ್ಲಸ್ ಒಂದು ಅನಧಿಕೃತ ಆವೃತ್ತಿಯಾಗಿದ್ದು, ಬಳಕೆದಾರರಿಗೆ ಸ್ಥಿತಿಯನ್ನು ಮರೆಮಾಚುವುದು, ಮಿತಿಗಳಿಲ್ಲದೆ ಫೋಟೋಗಳನ್ನು ಕಳುಹಿಸುವುದು, ನಿರ್ಧಿಷ್ಟ ಮಿತಿಯನ್ನು ಮೀರಿ ಗುಂಪುಗಳನ್ನು ರಚಿಸುವುದು ಮುಂತಾದ ಹೆಚ್ಚುವರಿ ವೈಶಿಷ್ಟ್ಯಗಳನ್ನು ನೀಡುತ್ತದೆ.

 

ಥರ್ಡ್ ಪಾರ್ಟಿ ಆಯಪ್​ ವಾಟ್ಸ್​ಆಯಪ್​ ಪ್ಲಸ್ ಬಳಸಿದರೆ ವಾಟ್ಸ್​ಆಯಪ್​ನಿಂದ ತಾತ್ಕಾಲಿಕ ಬ್ಯಾನ್ ಮಾಡಲಾಗುತ್ತದೆ ಎಂದು ವಾಟ್ಸ್​ಆಯಪ್ ನೀತಿ ನಿಯಮಗಳು ತಿಳಿಸುತ್ತವೆ. ಹೀಗಾಗಿ ಈ ಆಯಪ್​ಗಳನ್ನು ಬಳಸುತ್ತಿದ್ದರೆ ತಕ್ಷಣವೆ ಡಿಲೀಟ್ ಮಾಡಿ.

 

ಕಳೆದ ಆಗಸ್ಟ್ ತಿಂಗಳಲ್ಲಿ 20,70,000 ವಾಟ್ಸ್​ಆಯಪ್​ ಖಾತೆಗಳನ್ನು ಫೇಸ್​ಬುಕ್ ಒಡೆತನದ ಕಂಪನಿ ವಾಟ್ಸ್​​ಆಯಪ್ ಭಾರತದಲ್ಲಿ ನಿಷೇಧಿಸಿದೆ. ವಾಟ್ಸ್​ಆಯಪ್​ ಸುಮಾರು 420 ಕುಂದುಕೊರತೆಯ ವರದಿಗಳನ್ನು ಆಗಸ್ಟ್‌ನಲ್ಲಿ ಪಡೆದಿತ್ತು. ವಾಟ್ಸ್​​ಆಯಪ್​ ಕುರಿತಾಗಿ ಖಾತೆ ಬೆಂಬಲ (105), ನಿಷೇಧ ಮನವಿ (222), ಇತರ ಬೆಂಬಲ (34), ಉತ್ಪನ್ನ ಬೆಂಬಲ (42) ಮತ್ತು ಸುರಕ್ಷತೆ (17) ಗಳ ವಿಚಾರವಾಗಿ 420 ಬಳಕೆದಾರರ ವರದಿಗಳನ್ನು ಸ್ವೀಕರಿಸಲಾಗಿದೆ ಎಂದು ವಾಟ್ಸ್‌ಆಯಪ್ ಅನುಸರಣೆ ಡೇಟಾ ತೋರಿಸಿದೆ. ಆದಾಗ್ಯೂ, 421 ವರದಿಗಳ ಪೈಕಿ, ವಾಟ್ಸಾಪ್ 41 ಖಾತೆಗಳ ವಿರುದ್ಧ ಪರಿಹಾರ ಕ್ರಮಗಳನ್ನು ಕೂಡ ಕೈಗೊಂಡಿದೆ.

 

 


Related Posts

ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ


Share        ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ


Read More »

ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ ಕೋಟ್ಯಾನ್‌ಗೆ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ


Share        ವಿಕ ಸುದ್ದಿಲೋಕ ಮಂಗಳೂರು ಸೌಹಾರ್ದತೆ ಬಿಂಬಿಸುವ ವರದಿಗೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ‘ಬ್ಯಾಂಡ್ ಮಂಗಳೂರು’ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ


Read More »

ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಆಯ್ಕೆ


Share        ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದ ಬಿಂಬಿಸುವ ವರದಿಗೆ ನೀಡಲಾಗುವ “ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿಗೆ ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯಕೋಟ್ಯಾನ್ ಪಡು  ಆಯ್ಕೆಯಾಗಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ 2024 ಅಕ್ಟೋಬರ್


Read More »

ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್( ರಿ) ಇದರ ನೂತನ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ ಆಯ್ಕೆ


Share        ಶ್ರೀ ಕ್ಷೇತ್ರ ಗೆಜ್ಜೆಗಿರಿಯ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ  ಚಾರಿಟೇಬಲ್ ಟ್ರಸ್ಟ್(ರಿ) ಇದರ ನೂತನ ಅಧ್ಯಕ್ಷರಾಗಿ ಬಿರ್ವ ಸೆಂಟರ್ ಇದರ ಮಾಲಕರಾದ  ಕೆ ಸಂಜೀವ ಪೂಜಾರಿ ಇವರನ್ನು ಕಂಕನಾಡಿ ಬ್ರಹ್ಮ


Read More »

8ನೇ ವಯಸ್ಸಿನಲ್ಲಿ ಕಪೋತಾಸನದ ಭಂಗಿಯಲ್ಲಿ ವಿಶ್ವ ದಾಖಲೆ ಮಾಡಿದ ಬಾಲಕಿ ಕುಮಾರಿ ಶರಣ್ಯ ಶರತ್!


Share        ಮಂಗಳೂರು, ಜೂ. 20 ಪನ್ನೀರಿನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಶರಣ್ಯ ಶರತ್ ಅವರು ತನ್ನ ಎಂಟನೆಯ ವಯಸ್ಸಿನಲ್ಲಿ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್


Read More »

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾಗಿ ಎಚ್.ಎಸ್.ಜಯರಾಜ್ ಆಯ್ಕೆ


Share        ಮಂಗಳೂರು: ಬ್ರಹ್ಮಶ್ರೀ ನಾರಾಯಣಗುರುಗಳು ಪ್ರತಿಷ್ಠಾಪಿಸಿದ ಕರ್ನಾಟಕದ ಏಕೈಕ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಆಡಳಿತ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ಜಂಟಿ ಸಭೆ ಕೇಂದ್ರದ ಮಾಜಿ ಸಚಿವ


Read More »