TOP STORIES:

FOLLOW US

ನಿಸ್ವಾರ್ಥ ಸೇವೆಯಲ್ಲಿ ಭಾರತಮಾತೆಯ ನಿಸ್ವಾರ್ಥಸೇವಕ ಗಡಿನಾಡ ಯೋಧ ನವೀನ್ ಪೂಜಾರಿ


ಭಾರತಮಾತೆಯ ನಿಸ್ವಾರ್ಥಸೇವಕ ಗಡಿನಾಡ ಯೋಧ ನವೀನ್ ಪೂಜಾರಿ

“ದೇಶ ಸೇವೆಯೇ ಈಶ ಸೇವೆ” ಎಂಬ ಧ್ಯೇಯವಾಕ್ಯದಂತೆ ಭರತಪುಣ್ಯ ಭೂಮಿಯ ಮಣ್ಣಿನ ಋಣದ ಸಾರ್ಥಕತೆಯನ್ನು ನಿಜವಾದ ದೇಶಭಕ್ತಿ ಪ್ರೇಮದ ಮಂತ್ರ,ತಂತ್ರದಂತೆ ಪ್ರಾಮಾಣಿಕತೆಯ ನಿಸ್ವಾರ್ಥ ಸೇವೆಯಲ್ಲಿ ತೊಡಗಿಸಿಕೊಂಡು ಕರ್ತವ್ಯ ನಿರ್ವಹಿಸುವವರೇ ನಿಜವಾದ ದೇಶದ ಭೂಸೇನೆಯ ಸೈನಿಕರು. ಸೈನಿಕರು ಹಗಲಿರುಳು ಮಳೆ ತೀವ್ರವಾದ ಚಳಿ ಬಿಸಿಲನ್ನು ಲೆಕ್ಕಿಸದೆ, ತನ್ನ ಪ್ರಾಣವನ್ನೂ ಲೆಕ್ಕಿಸದೆ ಅಷ್ಠ ದಿಕ್ಕಿನಲ್ಲೂ ಗಡಿನಾಡ ಕಾಯುತ್ತಾ ರಾಷ್ಟ್ರ ಮಾತೆಯ ಸುರಕ್ಷತೆಗಾಗಿ ತನ್ನ ಹುಟ್ಟೂರು, ಸಕುಟುಂಬಿಕರನ್ನು ಬಿಟ್ಟು ದೂರದ ಬೇರೆ ಬೇರೆ ರಾಜ್ಯ ಪ್ರದೇಶದಲ್ಲಿ ವರ್ಗಾವಣೆಗೊಳ್ಳುತ್ತ ನಿತ್ಯಕಠಿಣ ಜೀವನ ಕ್ರಮ ಚಟುವಟಿಕೆದೊಂದಿಗೆ ನಿರಂತರವಾಗಿ ಸೇವೆಗೈಯುತ್ತ ಪ್ರಾಣತ್ಯಾಗ ಮಾಡುವವರು ಹಾಗೇ ಪ್ರಾಣತ್ಯಾಗ ಮಾಡಲು ಸಿದ್ದರಿರುವವರು ನಿಸ್ವಾರ್ಥ ಸೇವಾ ಮಾಣಿಕ್ಯರು ಅಂದರೆ ಭೂಸೇನೆಯ ನಮ್ಮ ಗಡಿನಾಡ ಸೈನಿಕರು.ಇಂದು ದೇಶದ ಪ್ರಜೆಗಳು ಯಾವುದೇ ಭಯದ ವಾತಾವರಣವಿಲ್ಲದೆ, ಸುಭದ್ರತೆ, ಸುರಕ್ಷತೆ,ನೆಮ್ಮದಿಯಿಂದ ಸುಖವಾಗಿ ನಿದ್ರಿಸಲು ಕಾರಣಿಕರ್ತರು ನಮ್ಮ ದೇಶದ ಹೆಮ್ಮೆಯ ಸೈನಿಕರು. “ದೇಶ ಸೇವೆಯೇ ಈಶ ಸೇವೆ”ಎನ್ನುವ ತತ್ವವನ್ನು ಭೂಸೇನೆ ಸೈನಿಕರು ಅಕ್ಷರಸಃ ಪಾಲಿಸುತ್ತಿದ್ದುದರಿಂದ ದೇಶದ ಮೂಲ ಶಕ್ತಿ ಆಗಿದ್ದಾರೆ.
ಭಾರತ ವಾಸಿಗಳೆಲ್ಲರೂ ಭೂಸೇನೆಗೊಂದು ಭಕ್ತಿ ಗೌರವದಿಂದ ನಮಿಸಿ ದೊಡ್ಡ ಜೈಕಾರ ,ಸಲಾಂ ಕೊಡಲೇ ಬೇಕಾಗಿದೆ.

ಇಪ್ಪತ್ತು ವರ್ಷಗಳಿಂದ ಭರತ ಮಾತೆಯ ಭೂಸೇನೆಯಲ್ಲಿ
ಪ್ರಾಮಾಣಿಕ ಸೇವೆ ಸಲ್ಲಿಸುತ್ತ ಎಲ್ಲರ ಮೆಚ್ಚುಗೆಗೆ ಪಾತ್ರರಾಗುವಂತೆ ಕಾರ್ಯ ನಿರ್ವಹಿಸುತ್ತಿರುವ ನಿಸ್ವಾರ್ಥ ದೇಶ ಸೇವಕ,ಸಾಮಾಜಿಕ ಹಿತ ಚಿಂತಕ,ದೇಶಭಕ್ತ,ಸುಸಂಸ್ಕೃತ,ಸದ್ಗುಣ,ಸಜ್ಜನ,ಗೃಹಸ್ಥ,
ಧೃಡಕಾಯದ ಆದರ್ಶ ವ್ಯಕ್ತಿತ್ವದ ಸಾಧಕ,ನಿಸ್ವಾರ್ಥ ಸೇವಾ ಮಾಣಿಕ್ಯ, ದೇಶದ ಆರಾಧಕ, ಗಡಿನಾಡ ಯೋಧರಾದ ನವೀನ್ ಪೂಜಾರಿ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕು ಬಿಳಿಯೂರು ಜನತಾ ಕಾಲನಿಯ ದಿವಂಗತ ಸೇಸಪ್ಪ ಪೂಜಾರಿ ಮತ್ತು ದಿವಂಗತ ರೋಹಿಣಿಯವರ ಐದು ಜನ ಮಕ್ಕಳಲ್ಲಿ ಮೂರನೆಯವರೇ ನವೀನ್ ಪೂಜಾರಿ.1981ರ ಜೂನ್ 15 ರಂದು ಜನಿಸಿದ ಅವರು ವಿದ್ಯಾಭ್ಯಾಸವನ್ನು ಸಮಾಜ ಪ್ರಾಥಮಿಕ ಶಾಲೆ ಮಾಣಿಯಲ್ಲಿ ಪ್ರಾಥಮಿಕ ಶಿಕ್ಷಣ, ಶ್ರೀರಾಮಚಂದ್ರ ಪದವಿಪೂರ್ವ ಕಾಲೇಜು ಅಯೋಧ್ಯಾ ನಗರ ಪೆರ್ನೆಯಲ್ಲಿ ಪದವಿ ಪೂರ್ವ ಶಿಕ್ಷಣ ಪೊರೈಸಿದ ಇವರು ಪ್ರಥಮ ಪಿಯುಸಿವರೆಗೆ ವಿದ್ಯಾಭ್ಯಾಸ ಪಡೆದಿರುತ್ತಾರೆ.

ನವೀನ್ ರವರು 2000ನೇ ಇಸವಿ ಜುಲೈ 4ರಂದು ಭಾರತೀಯ ಭೂಸೇನೆಗೆ ಕಾಲಿರಿಸಿ ಹೈದರಾಬಾದಿನಲ್ಲಿ ತರಬೇತಿ ಪಡೆದಿರುತ್ತಾರೆ. ಭೂಸೇನೆಯಲ್ಲಿ ತಮ್ಮ ನಿಸ್ವಾರ್ಥ,ಹೃದಯ ವೈಶಾಲ್ಯತೆಯ ಪ್ರಾಮಾಣಿಕ,ಸಾರ್ಥಕತೆಯ ಅವಿರತ ಶ್ರಮದ ಸೇವೆ ಕೊಟ್ಟು ಇಪ್ಪತ್ತುವರ್ಷ ಐದು ತಿಂಗಳ ಸೇವೆ ಸಲ್ಲಿಸಿ ಪ್ರಸ್ತುತ ಪಂಜಾಬಿನ ಬಟಿಂಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ನವೀನ್ ಪೂಜಾರಿಯವರು ಪ್ರಪ್ರಥಮ ಎಂಟು ವರ್ಷಗಳ ಕಾಲ ಜಮ್ಮು-ಕಾಶ್ಮೀರದಲ್ಲಿ ತುಂಬಾ ಕಠಿಣ ಕ್ಲಿಷ್ಟಕರ ಜೀವನ ಶೈಲಿಯಲ್ಲಿ ಕಾರ್ಯನಿರ್ವಹಿಸಿ ಎರಡು ವರ್ಷಗಳ ಕಾಲ ಸಿಯಾಚಿನ್ ನಲ್ಲಿ ಕಾರ್ಯ ನಿರ್ವಹಿಸಿದ್ದಾರೆ .ಇದು ಇವರ ಸರ್ವಿಸ್ ನಲ್ಲೇ ಅತ್ಯಂತ ಕಠಿಣಕರ ಜೀವನ ಅಂದರೆ ಜೀವದ ಹಂಗು ತೊರೆದು ಕರ್ತವ್ಯ ಮಾಡಿದಂತಹ ದಿನಗಳು ಅಂದರೆ ತಪ್ಪಾಗಲಾರದು. ತೀವ್ರವಾದ ಚಳಿ ಇದ್ದುದರಿಂದ ಆ ಮಂಜುಗಡ್ಡೆಯೊಂದಿಗೆ ಹರಸಾಹಸದಿಂದ ಸರಸವಾಡುತ್ತ ದೇಶ ಸೇವೆಯಲ್ಲಿ ತೊಡಗಿಸಿ ಕೊಂಡಂತಹ ಅವಸ್ಮರಣೀಯ ದಿನಗಳಿವು.ತದನಂತರ ಉಳಿದ ಹತ್ತು ವರ್ಷ ಐದು ತಿಂಗಳು ಸಾಮಾನ್ಯವಾಗಿ ಸೇವೆ ಸಲ್ಲಿಸಿರುತ್ತಾರೆ.

ನವೀನ್ ಅವರು ಪ್ರಾಮಾಣಿಕವಾಗಿ ದೇಶ ಸೇವೆ ಮಾಡಿದ ಸ್ಥಳಗಳ ಪಟ್ಟಿ ಈ ಕೆಳಗಿನಂತಿವೆ :-
2000-2001ಹೈದರಾಬಾದ್
2001-2004 ಜಮ್ಮುಕಾಶ್ಮೀರದ ನೌಶಾರ (ಇಂಡೋ- ಪಾಕ್ ಬಾರ್ಡರ್),2004-2008 ಜಮ್ಮುಕಾಶ್ಮೀರದ ಸತ್ವರಿ (ಇಂಡೋ- ಪಾಕ್ ಬಾರ್ಡರ್),2008-2012 ಸಿಕ್ಕಿಂನ ಗ್ಯಾಂಗ್ ಟೋಕ್ (ಇಂಡಿಯಾ- ಚೈನಾ ಬಾರ್ಡರ್)
2012-2018 ರಾಜಸ್ಥಾನದ ಜೋಧಪುರ,(ಇಂಡಿಯಾ- ಪಾಕ್ ಬಾರ್ಡರ್)
2018-2020 ಜಮ್ಮುಕಾಶ್ಮೀರದ ಸಿಯಾಚಿನ್(ಇಂಡಿಯಾ-ಚೈನಾ ಬಾರ್ಡರ್)
2020-2021ಪಂಜಾಬಿನ ಜಾನ್ಸಿ ಬಟಿಂಡದ(ಇಂಡಿಯಾ -ಪಾಕ್ ಬಾರ್ಡರ್)ನಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ.
ದೇಶದ ಒಳಿತಿಗಾಗಿ,ಪ್ರಜೆಗಳ ಉಳಿವಿಗಾಗಿ ತನ್ನ ಆಸೆ ಕನಸ್ಸುಗಳ ಧಾರೆ ಎರೆದು ಭಾರತಾಂಬೆಯ ಮಡಿಲಿಗಾಗಿ ತನ್ನ ಪ್ರಾಣವನ್ನೇ ಮುಡುಪಾಗಿಟ್ಟು ಸಾವು ಬದುಕಿನ ನಡುವೆ ಹೋರಾಟ ನಡೆಸಿ,ಸೇವೆಗೈಯುವ ಧೈರ್ಯವಂತಿಕೆ,ತ್ಯಾಗಮಯಿ ಜೀವನ ನಿಜಕ್ಕೂ ಪ್ರಶಂಸನೀಯ.

ನವೀನ್ ರವರ ಸಾರ್ಥಕ ದೇಶಸೇವೆಯನ್ನು ಗುರುತಿಸಿ ಪ್ರಸ್ತುತ ಒಟ್ಟಿಗೆ ಐದು ಸನ್ಮಾನ ಪ್ರಶಸ್ತಿ ಪತ್ರಗಳನ್ನು ಪಡೆದಿರುತ್ತಾರೆ. ಮೊದಲನೇ ಸನ್ಮಾನ ಜೂನ್ 10ರಂದು 2006ರಲ್ಲಿ ಬಿಳಿಯೂರು ಶಾಲೆಯಲ್ಲಿ, 2018ರಲ್ಲಿ ಜೂನ್ 28ರಂದು ಕರ್ವೆಲುನಲ್ಲಿ, 2019ನೇ ಜನವರಿ 1 ರಂದು ಮಲ್ಲಡ್ಕ ಶಾಲೆಯಲ್ಲಿ, ಜುಲೈ 27 ರಂದು ಬಿಳಿಯೂರು ಭಜನಾ ಮಂದಿರದಲ್ಲಿ 2020ರಲ್ಲಿ ಪಡೆದಿರುತ್ತಾರೆ.

ದೇಶ ಕಾಯುವ ಸೈನಿಕ ನೊಂದಿಗೆ ಸಪ್ತಪದಿ ತುಳಿದು ಬಾಳಪಯಣದ ಹೆಜ್ಜೆಯಿಟ್ಟ ಮಾವು ಚಿಗುರುವ ಕಾಲ ಅಂದರೆ ವಸಂತಮಾಸ ನಳಿನಿ. ಎಂ. ಅವರನ್ನು ಬಾಳಸಂಗಾತಿಯನ್ನಾಗಿ ಸ್ವೀಕರಿಸಿ ಪ್ರಸ್ತುತ ಓರ್ವ ನವೀಶ್.ಎನ್ ಎಂಬ ಗಂಡು ಮಗನಿದ್ದು ಇವನು ತನ್ನ ವಿದ್ಯಾಭ್ಯಾಸವನ್ನು ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ ಯಲ್ಲಿ ಪಡೆಯುತ್ತಿದ್ದಾನೆ.
ಇವರು ತನ್ನ ಮನೆಯವರ ಜೊತೆ ಅವಿನಾಭಾವ ಸಂಬಂಧವನ್ನು ಇಟ್ಟು ಕೊಳ್ಳುವುದರ ಜೊತೆಗೆ ಹಿರಿಯರನ್ನು ಸದಾ ಗೌರವಿಸುವ ಸ್ವಭಾವದವರು.ಇವರಿಗೆ ಕಬಡ್ಡಿ,ಗುಂಡೆಸತ,ವಾಲಿಬಾಲ್,ಕ್ರಿಕೆಟ್ ಆಡುವುದರಲ್ಲಿ ತುಂಬಾ ಆಸಕ್ತಿ.ಇನ್ನು ಇವರು ಕೇವಲ ಐದು ತಿಂಗಳ ಅವಧಿ ಮುಗಿದ ನಂತರ ಸೇವೆಯಿಂದ ನಿವೃತ್ತಿ ಹೊಂದಿ ನಿಸ್ವಾರ್ಥ ದೇಶ ಸೇವಕರೆನ್ನಿಸಿ ಕೊಳ್ಳುವುದರಲ್ಲಿ ಸಂಶಯವಿಲ್ಲ.

ನವೀನ್ ಅವರ ದೇಶಸೇವೆ ಇಂದಿನ ಯುವಜನತೆಗೆ ಪ್ರೇರಣೆಯಾಗಲಿ, ಮಾದರಿಯಾಗಲಿ.ಇವರನ್ನು ಮಾದರಿಯಾನ್ನಾಗಿಸಿ ಇನ್ನಷ್ಟು ಯುವಜನತೆ ಭಾರತೀಯ ಸೇನೆಯನ್ನು ಸೇರುವಂತಾಗಲಿ.
ಇವರಿಗೆ ಶ್ರೀ ಭೂನಾಡ ದೇವಿಯ ಶ್ರೀರಕ್ಷೆ, ಆಶೀರ್ವಾದ,ಆಯುರ್ ಆರೋಗ್ಯ,ಅಷ್ಟಶ್ವರ್ಯ,
ನೆಮ್ಮದಿ ಸದಾ ಕರುಣಿಸಲಿ, ಅಂತೆಯೇ ಇವರ ಉಜ್ವಲ ಭವಿಷ್ಯ ಸೂರ್ಯನಷ್ಟೇ ಪ್ರಕಾಶಿಸಲಿ,ಬಾಳಪಯಣದ ಮುಂದಿನ ಹಾದಿ ಸುಮದ ತೇರಿನಂತಿರಲಿ,ಆಸೆ ಕನಸುಗಳು ನನಸಾಗಲಿ ಎಂದು ಆಶಿಸುತ್ತಾ ತಮ್ಮ ನಿಸ್ವಾರ್ಥ ದೇಶ ಭಕ್ತಿ,ಪ್ರೇಮಕ್ಕಿದೋ ಆಧರನೀಯ ಗೌರವದ ಪ್ರಣಾಮಗಳು.

ಜೈ ಭಾರತ್ ಮಾತಾ ಕೀ ಜೈ

ಶ್ರೀಮತಿ ಅರ್ಚನ ಎಂ ಬಂಗೇರ ಕುಂಪಲ


Share:

More Posts

Category

Send Us A Message

Related Posts

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »

ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ


Share       ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ ಡಾ. ಪವಿತ್ರ ಜಿ. ಪಿ. ಹಾಗೂ ಪ್ರವೀಣ್ ಬಿ.ಎಮ್  ರವರ ಮಾರ್ಗದರ್ಶನದಲ್ಲಿ  ಡಾ. ರಶ್ಮಿ ಹರ್ಷ ಪೂಜಾರಿ ಇವರು ರಸಾಯನ ಶಾಸ್ತ್ರ ವಿಭಾಗದಲ್ಲಿ


Read More »

ದುಬೈಯಲ್ಲಿ ಯಶಸ್ವಿ ಉದ್ಯಮಿಯಾಗಿ ಲೆಕ್ಕವಿಲ್ಲದಷ್ಟು ಸೇವೆಯನ್ನು ಸಮಾಜಕ್ಕೆ ಅರ್ಪಿಸುತ್ತಿರು ಸೇವಾ ಮಾಣಿಕ್ಯ ನಿಟ್ಟೆ ಸಂದೀಪ್ ಕೋಟ್ಯಾನ್ ಕಾರ್ಕಳ..!


Share       ಅನೇಕ ಜನ ಉದ್ಯಮ ಕ್ಷೇತ್ರದ ಯಶಸ್ವಿಯಾಗಿ ಮುಂದುವರೆದ ಉದ್ಯಮಿಗಳು ಪ್ರಸ್ತುತ ದಿನಗಳಲ್ಲಿ ಸಿಗುತ್ತಾರೆ, ಆದರೆ ತಾವು ಸಂಪಾದಿಸಿರುವ ಹಣವನ್ನು ಮಾತ್ರ ಸಮಾಜದಲ್ಲಿ ಕೇವಲ ಕಾರ್ಯಕ್ರಮ ಮನೊರಂಜನೆಗಳಿಗೆ ಬಳಸಿ ರಾಜಕೀಯ ನಾಯಕರು, ಉದ್ಯಮಿಗಳನ್ನು ಕರೆದು


Read More »

ಮಂಗಳೂರಿನ ಖ್ಯಾತ ಯುರೋಲಜಿಸ್ಟ್ ಡಾ. ಸದಾನಂದ ಪೂಜಾರಿಯವರಿಗೆ ಪ್ರೈಡ್ ಆಫ್ ನ್ಯಾಷನ್ ಅವಾರ್ಡ್.


Share       ಮಂಗಳೂರು : ಕಳೆದ ವರ್ಷ ಕರ್ನಾಟಕ ಸರಕಾರದಿಂದ ಡಾ. ಬಿ.ಸಿ.ರಾಯ್ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಸದಾನಂದ ಪೂಜಾರಿಯವರಿಗೆ ಬೆಂಗಳೂರಿನ ಅಶೋಕ ಪಂಚತಾರ ಹೋಟೆಲ್ ನಲ್ಲಿ ನಡೆದ ಏಷ್ಯಾ ಟುಡೇ ಹಮ್ಮಿ ಕೊಂಡಿದ್ದ


Read More »

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ


Share       ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ ಅವರಿಗೆ ಜನುಮದಿನದ ಶುಭಾಶಯಗಳು🎂 ಅವರ ಬಗ್ಗೆ ಮಾಹಿತಿ ಡಾ.ಅಂಚನ್ ಸಿ ಕೆ, ಅಂತರರಾಷ್ಟ್ರೀಯ ವ್ಯಾಪಾರ ಮತ್ತು


Read More »

ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ


Share       ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ ಕೋಟ: ಶ್ರೀಮಾತಾ ಅಸ್ಪತ್ರೆಯ ಮಾಲಿಕರಾದ ಡಾ.ಸತೀಶ ಪೂಜಾರಿ (54) ಅವರು ಗುರುವಾರ ಬೆಳಿಗ್ಗೆ ಅವರ ಕೋಟತಟ್ಟು ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ


Read More »