TOP STORIES:

ಪದ್ಮರಾಜ್ ಟಿಕೆಟ್ ಆಕಾಂಕ್ಷಿ ಎಂದಾಗಲೇ, ಪ್ರಶ್ನೆ ಹುಟ್ಟಿತ್ತು …


ಪದ್ಮರಾಜ್ ಟಿಕೆಟ್ ಆಕಾಂಕ್ಷಿ ಎಂದಾಗಲೇ, ಪ್ರಶ್ನೆ ಹುಟ್ಟಿತ್ತು

ಪದ್ಮರಾಜ್ ರಾಜಕೀಯಕ್ಕೆ ಬರುತ್ತಾರಾ…? ಬಂದರೂ ಯಾವ ಪಕ್ಷ..? ಕೊಳಕು ರಾಜಕಾರಣಕ್ಕೆ ಪದ್ಮರಾಜ್ ರಂತಹ ವ್ಯಕ್ತಿತ್ವಸರಿಹೊಂದುತ್ತದೆಯೋ..? ಹೀಗೆ ಹತ್ತು ಹಲವಾರು ಪ್ರಶ್ನೆಗಳು

ಸಮಾಜದ ಎಲ್ಲಾ ವರ್ಗದ ಜನರೊಂದಿಗೆ ಬೆರೆತು, ಜನ ಮೆಚ್ಚಿದ ನಾಯಕನಾಗಿ, ಸಮಾಜಸೇವೆಯನ್ನೇ ಉಸಿರಾಗಿ ಇರಿಸಿಕೊಂಡಪದ್ಮರಾಜ್ ದೀನರ ಕಷ್ಟಕ್ಕೆ ಸ್ಪಂದಿಸುವ ದಾನಿಯಾಗಿ, ದಮನಿತರ ದನಿಯಾಗಿ, ಪದ್ಮರಾಜ್ ಎಂದರೆ ಕೇವಲ ವ್ಯಕ್ತಿಯಲ್ಲ ಒಂದು ಶಕ್ತಿಎಂಬ ಮಟ್ಟಕ್ಕೆ ಬೆಳೆದದ್ದು ಗುರುತತ್ವದಲ್ಲಿ ಅವರಿರಿಸಿದ ನಿಷ್ಠೆಯಿಂದಲೇ ಎಂದರೆ ತಪ್ಪಾಗಲಾರದು

ಸಮಾಜದ ಎಲ್ಲಾ ಸಮಸ್ಯೆ ಬಗೆಹರಿಸಲು ಜನಬಲ ಹಾಗೂ ಧನಬಲ ಇದ್ದರೆ ಸಾಲದು, ರಾಜಕೀಯ ಶಕ್ತಿಯೂ ಬೇಕೆಂಬ ಹಿರಿಯರಸಲಹೆಯ ಅನುಸಾರ, ರಾಜಕೀಯ ಪ್ರವೇಶಕ್ಕೂ ಸಿದ್ಧ ಎಂಬ ನಿರ್ಧಾರ ತಳೆದಾಗ, ತನ್ನ ಜನಪ್ರಿಯ ವ್ಯಕ್ತಿತ್ವ, ಇದುವರೆಗೆ ಸವೆಸಿದಹೋರಾಟದ ಹಾದಿ, ನಂಬಿಕೊಂಡು ಬಂದ ಜಾತ್ಯಾತೀತ ಸಿದ್ಧಾಂತಗಳ ಪ್ರಕಾರ ಪದ್ಮರಾಜ್ ಹೆಸರು ಚುನಾವಣಾ ಅಭ್ಯರ್ಥಿಯಾಗಿರಾಷ್ಟ್ರೀಯ ಪಕ್ಷಗಳ ಅಂಗಣಕ್ಕೆ ತಲುಪಿದ್ದು ದೇಶದಲ್ಲಿ ಪ್ರಬುದ್ಧ ರಾಜಕೀಯ ವ್ಯವಸ್ಥೆ ಬಯಸಿದ್ದ ಜನರಿಗೆ ಸಂತಸ ತಂದವಿಚಾರವಾಗಿತ್ತು.

ಜಿಲ್ಲೆಯಾದ್ಯಂತ ಜನಪ್ರಿಯತೆ ಹೊಂದಿದ್ದ ಪದ್ಮರಾಜ್ ಹೆಸರು ಲೋಕಸಭೆ ಅಥವಾ ರಾಜ್ಯಸಭೆಗೋ ಎಂಬ ಚರ್ಚೆಯಲ್ಲಿದ್ದಾಗಲೇ, ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪ್ರಾರಮ್ಯ ಪಡೆಯಲು ಪ್ರಯತ್ನಿಸುತ್ತಿದ್ದ ಪಕ್ಷಗಳಿಗೆ ಪದ್ಮರಾಜ್ ಹೆಸರು ಟ್ರಂಪ್ ಕಾರ್ಡ್ ಆಗಿಕಾಣಿಸಿದ್ದು ಕೋಮು ದಳ್ಳುರಿಯಿಂದ ಬೇಸತ್ತಿದ್ದ ಕರಾವಳಿಗೆ ಆಶಾಕಿರಣವಾಗಿ ಕಂಡಿದೆ.

ಟಿಕೆಟ್ ಸಿಗುತ್ತದೆಯೋ ಇಲ್ಲವೋ ಪದ್ಮರಾಜ್ ಅವರನ್ನು ತಮ್ಮ ನಾಯಕರೆಂದು ಜನ ಒಪ್ಪಿಯಾಗಿದೆ.  ಅಪಪ್ರಚಾರವನ್ನೆ ನಂಬಿರುವಇಂದಿನ ರಾಜಕೀಯ ಯುಗದಲ್ಲಿ ಪದ್ಮರಾಜ್ ವ್ಯಕ್ತಿತ್ವದ ಬೆಲೆ ಪುಟಕ್ಕಿಟ್ಟ ಚಿನ್ನದಂತೆ ಮಿನುಗಿ, ಅವರ ಸಮಾಜಸೇವಾ ಕೈಂಕರ್ಯಗಳುಸಾಂಗವಾಗಿ ಮುಂದುವರಿಯುವುದಂತೂ ಖಂಡಿತ

ಪದ್ಮರಾಜ್ ಗೆ ರಾಜಕೀಯ ಅವಕಾಶ ಅಗತ್ಯವಿದೆಯೋ ಇಲ್ಲವೋ ಗೊತ್ತಿಲ್ಲ ಆದರೆ ರಾಜಕೀಯಕ್ಕೆ ಪದ್ಮರಾಜ್ ಅಂತಹ ವ್ಯಕಿಗಳಅಗತ್ಯವಿರಿವುದು ಅಕ್ಷರಶಃ ಸತ್ಯ.


Related Posts

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »

ಪುತ್ತೂರು:ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ರವಿಕುಮಾರ್ ಕಲ್ಕಾರ್ ನಿಧನ


Share         ಪುತ್ತೂರು: ಶಾಂತಿಗೋಡು ಕಲ್ಕಾರ್ ನಿವಾಸಿ ರವಿಕುಮಾರ್ ಕಲ್ಕಾರ್(48ವ.)ರವರು ಫೆ.15ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಸಂದರ್ಭ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ ನಡೆಸಲ್ಪಟ್ಟ ಕ್ರೀಡಾಕೂಟದಲ್ಲಿ ರವಿ ಕಲ್ಕಾರ್ ರವರು


Read More »