TOP STORIES:

FOLLOW US

ಪದ್ಮರಾಜ್ ಸರ್ ಬಗ್ಗೆ ನನಗೂ ಒಂದಿಷ್ಟು ಹೇಳಲೇಬೇಕು


ಪದ್ಮರಾಜ್ ಸರ್ ಬಗ್ಗೆ ನನಗೂ ಒಂದಿಷ್ಟು ಹೇಳಲೇಬೇಕು……

ಪದ್ಮರಾಜ್ ಸರ್ ರವರು ಕೇವಲ ವ್ಯಕ್ತಿಯಲ್ಲ, ಅವರೊಂದು ಶಕ್ತಿ.ಅವರ ಜೊತೆ ಮಾತನಾಡುವಾಗ ಆ ಶಕ್ತಿಯ ಪ್ರಭಾವ ನಮ್ಮ ಮೇಲೆ ಪ್ರವಹಿಸುತ್ತದೆ ಹಾಗೂ ವಿಶೇಷವಾದ ಭಕ್ತಿಭಾವ,ಗೌರವ ಮೂಡುತ್ತದೆ.ಅಷ್ಟೊಂದು ಆಕರ್ಷಣೀಯ ವ್ಯಕ್ತಿತ್ವ. ಅವರಾಡುವ ಮಾತುಗಳು ಕೇವಲ ಬಾಯಿಂದ ಹೊರಡುವುದಲ್ಲ,ಹ್ರದಯದಿಂದ ಮೂಡುವಂತಹದ್ದು.ಮಾತಿನಲ್ಲಿ ಎಲ್ಲಿಯೂ ಕಲ್ಮಷವಿಲ್ಲ.ನೇರ ನಡೆನುಡಿಯ,ಪ್ರೀತಿ ತುಂಬಿದ, ಸೌಜನ್ಯಯುತ ಮಾತುಗಳು ಎಂತಹವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ.ಯಾರ ಜೊತೆ ಮಾತನಾಡುವಾಗಲೂ ಮುಖದಲ್ಲಿ ಮೂಡುವ ಮಂದಹಾಸ ಮುಗುಳ್ನಗೆಯಲ್ಲಿ ಪ್ರಾಮಾಣಿಕತೆ, ಪ್ರೀತಿ ತುಂಬಿರುತ್ತದೆ.ನೊಂದವರು,ಶೋಷಿತರು ಯಾರೇ ಅವರನ್ನು ಸಂಪರ್ಕಿಸಲಿ,ಕೂಡಲೇ ಸ್ಪಂದಿಸುವ ಮಾನವೀಯ ಹ್ರದಯವಿದೆ.ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಯಾಯಿಯಾಗಿ,ಅವರ ತತ್ವಾದರ್ಶದಂತೆ ಸರ್ವಧರ್ಮೀಯರನ್ನು ಸಮಾನರಂತೆ ಕಾಣುವ ಹ್ರದಯ ವೈಶಾಲ್ಯತೆ. ಅನ್ಯಾಯಕ್ಕೊಳಗಾದ ಜನರಿಗೆ ನ್ಯಾಯ ದೊರಕಿಸಿ ಕೊಡುವ ಧೀಮಂತ ನಾಯಕ.*
_ಎಳೆಯ ಪ್ರಾಯದಲ್ಲೇ ಎಲ್ಲಾ ಸದ್ಗುಣಗಳನ್ನು ಮೈಗೂಡಿಸಿ, ನಾರಾಯಣ ಗುರುಗಳು ತಮ್ಮ ದಿವ್ಯಹಸ್ತದಿಂದ ಪ್ರತಿಷ್ಠಾಪಿಸಿದ ಕರ್ನಾಟಕ ರಾಜ್ಯದ ಏಕೈಕ ಕ್ಷೇತ್ರವಾದ ಕುದ್ರೋಳಿ ದೇವಾಲಯದಲ್ಲಿ ದೀರ್ಘಕಾಲದಿಂದ ಕೋಶಾಧಿಕಾರಿಯಾಗಿ ಆಡಳಿತ ಮಂಡಳಿಯೊಳಗಡೆ ಹಳೇ ಬೇರು,ಹೊಸ ಚಿಗುರು ಎಂಬಂತೆ ಎಲ್ಲಾ ಹಿರಿಯರ ಗೌರವಕ್ಕೆ ಪಾತ್ರರಾಗಿ,ಬಡವರ ಕಣ್ಮಣಿ – ನಡೆದಾಡುವ ದೇವರೆಂದೇ ಖ್ಯಾತರಾದ ಶ್ರೀ.ಜನಾರ್ದನ ಪೂಜಾರಿಯವರ ಮಾರ್ಗದರ್ಶನದಲ್ಲಿ ಬೆಳಗಿದ ಬಿಲ್ಲವ ಸಮಾಜದ ಕಣ್ಮಣಿಯಾಗಿ,ಯುವಕರ ಪಾಲಿಗೆ ಸ್ಪೂರ್ತಿಯ ಚಿಲುಮೆಯಾದ ಪದ್ಮರಾಜ್ ರವರಿಗೆ ನಿಜಕ್ಕೂ ಬಿಲ್ಲವ ಸಮಾಜವನ್ನು ಮುನ್ನಡೆಸುವ ಶಕ್ತಿ ಇದೆ.ಈಗಾಗಲೇ ಅದೆಷ್ಟೋ ಬಿಲ್ಲವ ಸಮಾಜದ ಸಂಘಟನೆಯೊಳಗೆ ಭಿನ್ನಮತ ತಲೆದೋರಿದಾಗ ಎಲ್ಲರೂ ಹುಡುಕಿಕೊಂಡು ಬರುವುದು ಪದ್ಮರಾಜ್ ರವರ ಬಳಿಗೆ. ಎರಡೂ ಕಡೆಯವರನ್ನು ಕುಳ್ಳಿರಿಸಿ,ತನ್ನ ಮಾತಿನ ಶಕ್ತಿಯಿಂದ ಐಕ್ಯತೆ ಸಾಧಿಸಿದ ಸಮನ್ವಯಕಾರ. ರಾಜಕೀಯದಲ್ಲಿ ಎಲ್ಲಿಯೂ ಗುರುತಿಸಿಕೊಳ್ಳದೆ,ಎಲ್ಲರ ಪ್ರೀತಿ ವಿಶ್ವಾಸಗಳಿಸಿದ ಪದ್ಮರಾಜ್ ರವರನ್ನು ಅಜಾತಶತ್ರು ಎಂದರೆ ತಪ್ಪಾಗಲಾರದು.ದೇಶದಲ್ಲೇ ಗಮನ ಸೆಳೆದಿರುವ ಕುದ್ರೋಳಿ ಕ್ಷೇತ್ರಕ್ಕೆ ಭೇಟಿ ನೀಡುವ ಲಕ್ಷಾಂತರ ಭಕ್ತಾಧಿಗಳ ನೇರ ಸಂಪರ್ಕ ಹಾಗೂ ಅವರನ್ನು ಹೆಸರು ಕರೆದು ಪ್ರೀತಿಯಿಂದ ಮಾತನಾಡಿಸುವ ಗುಣದ ಮೂಲಕ ಅವರ ನೆನಪು ಶಕ್ತಿಯ ಅಗಾಧತೆಯನ್ನು ಎತ್ತಿ ತೋರಿಸುತ್ತದೆ._
*ಇಂತಹ ಅಪಾರ ಪಾಂಡಿತ್ಯ ಹೊಂದಿದ ಪದ್ಮರಾಜ್ ರವರು ಗೋಕರ್ಣಾ ದೇವರ ದಯೆಯಿಂದ,ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರೇರಣೆಯಿಂದ ಕೊರೋನಾ ಸಂಕಷ್ಟದ ಕಾಲದಲ್ಲೂ ಯಾವ ಕ್ಷೇತ್ರದಿಂದಲೂ ಸಾಧ್ಯವಾಗದ ಕೆಲಸವನ್ನು ಪದ್ಮರಾಜ್ ರವರು ಸ್ವತಃ ಮುಂದಡಿಯಿಟ್ಟು, ಅದೆಷ್ಟೋ ಮಾನವೀಯ ಹ್ರದಯಗಳನ್ನು ಒಟ್ಟು ಸೇರಿಸಿ, ಸುಮಾರು 350 ಕ್ವಿಂಟಾಲ್ ಅಕ್ಕಿಯನ್ನು ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಸಾವಿರಾರು ಕುಟುಂಬಗಳಿಗೆ ನೇರವಾಗಿ ಮನೆ ಬಾಗಿಲಿಗೆ ತಲುಪಿಸಿದ್ದು ನಿಜಕ್ಕೂ ಅತ್ಯದ್ಭುತವಾಗಿದೆ. ಕೋರೋನಾ ನೆಪದಲ್ಲಿ ದಸರಾ ಉತ್ಸವವನ್ನು ಮಾಡಲು ಜಿಲ್ಲಾಡಳಿತ ನಿರಾಕರಿಸಿದಾಗ, ಜನರ ಪರವಾಗಿ ತಮ್ಮ ವಾದವನ್ನು ಸಮರ್ಥವಾಗಿ ಮಂಡಿಸಿ ಜಿಲ್ಲಾಧಿಕಾರಿಗಳನ್ನು ಹಾಗೂ ಜನಪ್ರತಿನಿಧಿಗಳನ್ನು ಹುಬ್ಬೇರಿಸುವಂತೆ ಮಾಡಿದ ನಿಜವಾದ ಜನನಾಯಕ.ಇವರ ಮುತುವರ್ಜಿಯಿಂದ ಹಾಗೂ ಜನಾರ್ದನ ಪೂಜಾರಿಯವರ ಮಾರ್ಗದರ್ಶನದಿಂದಲೇ ಈ ಬಾರಿ ನಮ್ಮ ದಸರಾ ನಮ್ಮ ಸುರಕ್ಷೆ ಎಂಬ ಘೋಷವಾಕ್ಯದೊಂದಿಗೆ ಯಶಸ್ವಿ ದಸರಾ ನಡೆದಿರುವುದನ್ನು ನಾವೆಂದೂ ಮರೆಯಬಾರದು.ದಸರಾ ಉತ್ಸವದಲ್ಲಿ ಹುಲಿವೇಷಕ್ಕೆ ಅನುಮತಿ ನೀಡಲು ಜಿಲ್ಲಾಡಳಿತ ನಿರಾಕರಿಸಿದಾಗ ಹುಲಿ ವೇಷ ದಸರಾ ಹಬ್ಬದ ವಿಶೇಷತೆ,ಹಿಂದೂ ಧಾರ್ಮಿಕತೆಯ ಪ್ರತೀಕವೆಂದು ಸಾರಿ ಜಿಲ್ಲಾಡಳಿತದ ಮೇಲೆ ಒತ್ತಡ ಹಾಕಿ ಹುಲಿವೇಷಕ್ಕೆ ಅವಕಾಶ ದೊರಕಿಸಿ ಕೊಟ್ಟ ನಿಜವಾದ ಧಾರ್ಮಿಕ ನಾಯಕರು. ಈ ಬಾರಿಯ ದಸರಾ ಉತ್ಸವವನ್ನು ಸವಾಲಾಗಿ ಸ್ವೀಕರಿಸಿ, ಸಂಘಸಂಸ್ಥೆಗಳನ್ನು ಹಾಗೂ ಹಿರಿಯ ಕಿರಿಯರೆನ್ನದೆ ಎಲ್ಲರನ್ನೂ ಪ್ರೀತಿಯಿಂದ ತನ್ನತ್ತ ಸೆಳೆದು,ಸ್ವಯಂಸ್ಪೂರ್ತಿಯಿಂದ ಸ್ವಯಂಸೇವಕರಾಗಿ ದುಡಿಯುವಂತೆ ಪ್ರೇರೇಪಿಸಿ, ಜಗದ್ವಿಖ್ಯಾತ ಮಂಗಳೂರು ದಸರಾವನ್ನು ಮತ್ತೊಮ್ಮೆ ಯಶಸ್ವಿಗೊಳಿಸಿ ವಿಶ್ವಭೂಪಟದಲ್ಲಿ ಅಜರಾಮರವಾಗಿ ಬೆಳಗುವಂತೆ ಮಾಡಿದ ಕಾರ್ಯದಲ್ಲಿ ಪದ್ಮರಾಜ್ ರವರು ನಿಜಕ್ಕೂ ಕೇಂದ್ರಬಿಂದು.*

ನಿತೀಶ್ ಪೂಜಾರಿ ಮರೋಳಿ
ಮಂಗಳೂರು


Share:

More Posts

Category

Send Us A Message

Related Posts

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »

ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ


Share       ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ ಡಾ. ಪವಿತ್ರ ಜಿ. ಪಿ. ಹಾಗೂ ಪ್ರವೀಣ್ ಬಿ.ಎಮ್  ರವರ ಮಾರ್ಗದರ್ಶನದಲ್ಲಿ  ಡಾ. ರಶ್ಮಿ ಹರ್ಷ ಪೂಜಾರಿ ಇವರು ರಸಾಯನ ಶಾಸ್ತ್ರ ವಿಭಾಗದಲ್ಲಿ


Read More »

ದುಬೈಯಲ್ಲಿ ಯಶಸ್ವಿ ಉದ್ಯಮಿಯಾಗಿ ಲೆಕ್ಕವಿಲ್ಲದಷ್ಟು ಸೇವೆಯನ್ನು ಸಮಾಜಕ್ಕೆ ಅರ್ಪಿಸುತ್ತಿರು ಸೇವಾ ಮಾಣಿಕ್ಯ ನಿಟ್ಟೆ ಸಂದೀಪ್ ಕೋಟ್ಯಾನ್ ಕಾರ್ಕಳ..!


Share       ಅನೇಕ ಜನ ಉದ್ಯಮ ಕ್ಷೇತ್ರದ ಯಶಸ್ವಿಯಾಗಿ ಮುಂದುವರೆದ ಉದ್ಯಮಿಗಳು ಪ್ರಸ್ತುತ ದಿನಗಳಲ್ಲಿ ಸಿಗುತ್ತಾರೆ, ಆದರೆ ತಾವು ಸಂಪಾದಿಸಿರುವ ಹಣವನ್ನು ಮಾತ್ರ ಸಮಾಜದಲ್ಲಿ ಕೇವಲ ಕಾರ್ಯಕ್ರಮ ಮನೊರಂಜನೆಗಳಿಗೆ ಬಳಸಿ ರಾಜಕೀಯ ನಾಯಕರು, ಉದ್ಯಮಿಗಳನ್ನು ಕರೆದು


Read More »

ಮಂಗಳೂರಿನ ಖ್ಯಾತ ಯುರೋಲಜಿಸ್ಟ್ ಡಾ. ಸದಾನಂದ ಪೂಜಾರಿಯವರಿಗೆ ಪ್ರೈಡ್ ಆಫ್ ನ್ಯಾಷನ್ ಅವಾರ್ಡ್.


Share       ಮಂಗಳೂರು : ಕಳೆದ ವರ್ಷ ಕರ್ನಾಟಕ ಸರಕಾರದಿಂದ ಡಾ. ಬಿ.ಸಿ.ರಾಯ್ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಸದಾನಂದ ಪೂಜಾರಿಯವರಿಗೆ ಬೆಂಗಳೂರಿನ ಅಶೋಕ ಪಂಚತಾರ ಹೋಟೆಲ್ ನಲ್ಲಿ ನಡೆದ ಏಷ್ಯಾ ಟುಡೇ ಹಮ್ಮಿ ಕೊಂಡಿದ್ದ


Read More »

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ


Share       ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ ಅವರಿಗೆ ಜನುಮದಿನದ ಶುಭಾಶಯಗಳು🎂 ಅವರ ಬಗ್ಗೆ ಮಾಹಿತಿ ಡಾ.ಅಂಚನ್ ಸಿ ಕೆ, ಅಂತರರಾಷ್ಟ್ರೀಯ ವ್ಯಾಪಾರ ಮತ್ತು


Read More »

ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ


Share       ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ ಕೋಟ: ಶ್ರೀಮಾತಾ ಅಸ್ಪತ್ರೆಯ ಮಾಲಿಕರಾದ ಡಾ.ಸತೀಶ ಪೂಜಾರಿ (54) ಅವರು ಗುರುವಾರ ಬೆಳಿಗ್ಗೆ ಅವರ ಕೋಟತಟ್ಟು ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ


Read More »