TOP STORIES:

FOLLOW US

ಪದ್ಮರಾಜ್ ಸರ್ ಬಗ್ಗೆ ನನಗೂ ಒಂದಿಷ್ಟು ಹೇಳಲೇಬೇಕು


ಪದ್ಮರಾಜ್ ಸರ್ ಬಗ್ಗೆ ನನಗೂ ಒಂದಿಷ್ಟು ಹೇಳಲೇಬೇಕು……

ಪದ್ಮರಾಜ್ ಸರ್ ರವರು ಕೇವಲ ವ್ಯಕ್ತಿಯಲ್ಲ, ಅವರೊಂದು ಶಕ್ತಿ.ಅವರ ಜೊತೆ ಮಾತನಾಡುವಾಗ ಆ ಶಕ್ತಿಯ ಪ್ರಭಾವ ನಮ್ಮ ಮೇಲೆ ಪ್ರವಹಿಸುತ್ತದೆ ಹಾಗೂ ವಿಶೇಷವಾದ ಭಕ್ತಿಭಾವ,ಗೌರವ ಮೂಡುತ್ತದೆ.ಅಷ್ಟೊಂದು ಆಕರ್ಷಣೀಯ ವ್ಯಕ್ತಿತ್ವ. ಅವರಾಡುವ ಮಾತುಗಳು ಕೇವಲ ಬಾಯಿಂದ ಹೊರಡುವುದಲ್ಲ,ಹ್ರದಯದಿಂದ ಮೂಡುವಂತಹದ್ದು.ಮಾತಿನಲ್ಲಿ ಎಲ್ಲಿಯೂ ಕಲ್ಮಷವಿಲ್ಲ.ನೇರ ನಡೆನುಡಿಯ,ಪ್ರೀತಿ ತುಂಬಿದ, ಸೌಜನ್ಯಯುತ ಮಾತುಗಳು ಎಂತಹವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ.ಯಾರ ಜೊತೆ ಮಾತನಾಡುವಾಗಲೂ ಮುಖದಲ್ಲಿ ಮೂಡುವ ಮಂದಹಾಸ ಮುಗುಳ್ನಗೆಯಲ್ಲಿ ಪ್ರಾಮಾಣಿಕತೆ, ಪ್ರೀತಿ ತುಂಬಿರುತ್ತದೆ.ನೊಂದವರು,ಶೋಷಿತರು ಯಾರೇ ಅವರನ್ನು ಸಂಪರ್ಕಿಸಲಿ,ಕೂಡಲೇ ಸ್ಪಂದಿಸುವ ಮಾನವೀಯ ಹ್ರದಯವಿದೆ.ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಯಾಯಿಯಾಗಿ,ಅವರ ತತ್ವಾದರ್ಶದಂತೆ ಸರ್ವಧರ್ಮೀಯರನ್ನು ಸಮಾನರಂತೆ ಕಾಣುವ ಹ್ರದಯ ವೈಶಾಲ್ಯತೆ. ಅನ್ಯಾಯಕ್ಕೊಳಗಾದ ಜನರಿಗೆ ನ್ಯಾಯ ದೊರಕಿಸಿ ಕೊಡುವ ಧೀಮಂತ ನಾಯಕ.*
_ಎಳೆಯ ಪ್ರಾಯದಲ್ಲೇ ಎಲ್ಲಾ ಸದ್ಗುಣಗಳನ್ನು ಮೈಗೂಡಿಸಿ, ನಾರಾಯಣ ಗುರುಗಳು ತಮ್ಮ ದಿವ್ಯಹಸ್ತದಿಂದ ಪ್ರತಿಷ್ಠಾಪಿಸಿದ ಕರ್ನಾಟಕ ರಾಜ್ಯದ ಏಕೈಕ ಕ್ಷೇತ್ರವಾದ ಕುದ್ರೋಳಿ ದೇವಾಲಯದಲ್ಲಿ ದೀರ್ಘಕಾಲದಿಂದ ಕೋಶಾಧಿಕಾರಿಯಾಗಿ ಆಡಳಿತ ಮಂಡಳಿಯೊಳಗಡೆ ಹಳೇ ಬೇರು,ಹೊಸ ಚಿಗುರು ಎಂಬಂತೆ ಎಲ್ಲಾ ಹಿರಿಯರ ಗೌರವಕ್ಕೆ ಪಾತ್ರರಾಗಿ,ಬಡವರ ಕಣ್ಮಣಿ – ನಡೆದಾಡುವ ದೇವರೆಂದೇ ಖ್ಯಾತರಾದ ಶ್ರೀ.ಜನಾರ್ದನ ಪೂಜಾರಿಯವರ ಮಾರ್ಗದರ್ಶನದಲ್ಲಿ ಬೆಳಗಿದ ಬಿಲ್ಲವ ಸಮಾಜದ ಕಣ್ಮಣಿಯಾಗಿ,ಯುವಕರ ಪಾಲಿಗೆ ಸ್ಪೂರ್ತಿಯ ಚಿಲುಮೆಯಾದ ಪದ್ಮರಾಜ್ ರವರಿಗೆ ನಿಜಕ್ಕೂ ಬಿಲ್ಲವ ಸಮಾಜವನ್ನು ಮುನ್ನಡೆಸುವ ಶಕ್ತಿ ಇದೆ.ಈಗಾಗಲೇ ಅದೆಷ್ಟೋ ಬಿಲ್ಲವ ಸಮಾಜದ ಸಂಘಟನೆಯೊಳಗೆ ಭಿನ್ನಮತ ತಲೆದೋರಿದಾಗ ಎಲ್ಲರೂ ಹುಡುಕಿಕೊಂಡು ಬರುವುದು ಪದ್ಮರಾಜ್ ರವರ ಬಳಿಗೆ. ಎರಡೂ ಕಡೆಯವರನ್ನು ಕುಳ್ಳಿರಿಸಿ,ತನ್ನ ಮಾತಿನ ಶಕ್ತಿಯಿಂದ ಐಕ್ಯತೆ ಸಾಧಿಸಿದ ಸಮನ್ವಯಕಾರ. ರಾಜಕೀಯದಲ್ಲಿ ಎಲ್ಲಿಯೂ ಗುರುತಿಸಿಕೊಳ್ಳದೆ,ಎಲ್ಲರ ಪ್ರೀತಿ ವಿಶ್ವಾಸಗಳಿಸಿದ ಪದ್ಮರಾಜ್ ರವರನ್ನು ಅಜಾತಶತ್ರು ಎಂದರೆ ತಪ್ಪಾಗಲಾರದು.ದೇಶದಲ್ಲೇ ಗಮನ ಸೆಳೆದಿರುವ ಕುದ್ರೋಳಿ ಕ್ಷೇತ್ರಕ್ಕೆ ಭೇಟಿ ನೀಡುವ ಲಕ್ಷಾಂತರ ಭಕ್ತಾಧಿಗಳ ನೇರ ಸಂಪರ್ಕ ಹಾಗೂ ಅವರನ್ನು ಹೆಸರು ಕರೆದು ಪ್ರೀತಿಯಿಂದ ಮಾತನಾಡಿಸುವ ಗುಣದ ಮೂಲಕ ಅವರ ನೆನಪು ಶಕ್ತಿಯ ಅಗಾಧತೆಯನ್ನು ಎತ್ತಿ ತೋರಿಸುತ್ತದೆ._
*ಇಂತಹ ಅಪಾರ ಪಾಂಡಿತ್ಯ ಹೊಂದಿದ ಪದ್ಮರಾಜ್ ರವರು ಗೋಕರ್ಣಾ ದೇವರ ದಯೆಯಿಂದ,ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರೇರಣೆಯಿಂದ ಕೊರೋನಾ ಸಂಕಷ್ಟದ ಕಾಲದಲ್ಲೂ ಯಾವ ಕ್ಷೇತ್ರದಿಂದಲೂ ಸಾಧ್ಯವಾಗದ ಕೆಲಸವನ್ನು ಪದ್ಮರಾಜ್ ರವರು ಸ್ವತಃ ಮುಂದಡಿಯಿಟ್ಟು, ಅದೆಷ್ಟೋ ಮಾನವೀಯ ಹ್ರದಯಗಳನ್ನು ಒಟ್ಟು ಸೇರಿಸಿ, ಸುಮಾರು 350 ಕ್ವಿಂಟಾಲ್ ಅಕ್ಕಿಯನ್ನು ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಸಾವಿರಾರು ಕುಟುಂಬಗಳಿಗೆ ನೇರವಾಗಿ ಮನೆ ಬಾಗಿಲಿಗೆ ತಲುಪಿಸಿದ್ದು ನಿಜಕ್ಕೂ ಅತ್ಯದ್ಭುತವಾಗಿದೆ. ಕೋರೋನಾ ನೆಪದಲ್ಲಿ ದಸರಾ ಉತ್ಸವವನ್ನು ಮಾಡಲು ಜಿಲ್ಲಾಡಳಿತ ನಿರಾಕರಿಸಿದಾಗ, ಜನರ ಪರವಾಗಿ ತಮ್ಮ ವಾದವನ್ನು ಸಮರ್ಥವಾಗಿ ಮಂಡಿಸಿ ಜಿಲ್ಲಾಧಿಕಾರಿಗಳನ್ನು ಹಾಗೂ ಜನಪ್ರತಿನಿಧಿಗಳನ್ನು ಹುಬ್ಬೇರಿಸುವಂತೆ ಮಾಡಿದ ನಿಜವಾದ ಜನನಾಯಕ.ಇವರ ಮುತುವರ್ಜಿಯಿಂದ ಹಾಗೂ ಜನಾರ್ದನ ಪೂಜಾರಿಯವರ ಮಾರ್ಗದರ್ಶನದಿಂದಲೇ ಈ ಬಾರಿ ನಮ್ಮ ದಸರಾ ನಮ್ಮ ಸುರಕ್ಷೆ ಎಂಬ ಘೋಷವಾಕ್ಯದೊಂದಿಗೆ ಯಶಸ್ವಿ ದಸರಾ ನಡೆದಿರುವುದನ್ನು ನಾವೆಂದೂ ಮರೆಯಬಾರದು.ದಸರಾ ಉತ್ಸವದಲ್ಲಿ ಹುಲಿವೇಷಕ್ಕೆ ಅನುಮತಿ ನೀಡಲು ಜಿಲ್ಲಾಡಳಿತ ನಿರಾಕರಿಸಿದಾಗ ಹುಲಿ ವೇಷ ದಸರಾ ಹಬ್ಬದ ವಿಶೇಷತೆ,ಹಿಂದೂ ಧಾರ್ಮಿಕತೆಯ ಪ್ರತೀಕವೆಂದು ಸಾರಿ ಜಿಲ್ಲಾಡಳಿತದ ಮೇಲೆ ಒತ್ತಡ ಹಾಕಿ ಹುಲಿವೇಷಕ್ಕೆ ಅವಕಾಶ ದೊರಕಿಸಿ ಕೊಟ್ಟ ನಿಜವಾದ ಧಾರ್ಮಿಕ ನಾಯಕರು. ಈ ಬಾರಿಯ ದಸರಾ ಉತ್ಸವವನ್ನು ಸವಾಲಾಗಿ ಸ್ವೀಕರಿಸಿ, ಸಂಘಸಂಸ್ಥೆಗಳನ್ನು ಹಾಗೂ ಹಿರಿಯ ಕಿರಿಯರೆನ್ನದೆ ಎಲ್ಲರನ್ನೂ ಪ್ರೀತಿಯಿಂದ ತನ್ನತ್ತ ಸೆಳೆದು,ಸ್ವಯಂಸ್ಪೂರ್ತಿಯಿಂದ ಸ್ವಯಂಸೇವಕರಾಗಿ ದುಡಿಯುವಂತೆ ಪ್ರೇರೇಪಿಸಿ, ಜಗದ್ವಿಖ್ಯಾತ ಮಂಗಳೂರು ದಸರಾವನ್ನು ಮತ್ತೊಮ್ಮೆ ಯಶಸ್ವಿಗೊಳಿಸಿ ವಿಶ್ವಭೂಪಟದಲ್ಲಿ ಅಜರಾಮರವಾಗಿ ಬೆಳಗುವಂತೆ ಮಾಡಿದ ಕಾರ್ಯದಲ್ಲಿ ಪದ್ಮರಾಜ್ ರವರು ನಿಜಕ್ಕೂ ಕೇಂದ್ರಬಿಂದು.*

ನಿತೀಶ್ ಪೂಜಾರಿ ಮರೋಳಿ
ಮಂಗಳೂರು


Share:

More Posts

Category

Send Us A Message

Related Posts

ACP ರೀನಾ ಸುವರ್ಣಗೆ ಜೀ ಕನ್ನಡ ನ್ಯೂಸ್‌ ಅಚೀವರ್ಸ್‌ ಅವಾರ್ಡ್ಸ್‌- 2025


Share       3ನೇ ವಾರ್ಷಿಕೋತ್ಸವದ ಅಂಗವಾಗಿ ಜೀ ಕನ್ನಡ ನ್ಯೂಸ್‌ ವತಿಯಿಂದ, Zee Achievers Awards ಕಾರ್ಯಕ್ರಮವನ್ನು ದಿ ರಿಟ್ಸ್‌ ಕಾರ್ಲ್‌ಟರ್ನ್‌ನಲ್ಲಿ ಆಯೋಜಿಸಲಾಗಿತ್ತು, ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯಾತಿಗಣ್ಯರನ್ನು ಗುರುತಿಸಿ ಜೀ ಕನ್ನಡ


Read More »

ಮುಂಬಯಿ ಎನ್‌ಸಿಪಿ (ಎಸ್‌ಪಿ) ಈಶಾನ್ಯ ಜಿಲ್ಲಾ ನಿರೀಕ್ಷಕರಾಗಿ ಲಕ್ಷ್ಮಣ್ ಸಿ. ಪೂಜಾರಿ ಚಿತ್ರಾಪು ಆಯ್ಕೆ


Share       ಮುಂಬಯಿ, ಮಾ. 21: ಎನ್‌ಸಿಪಿ (ಎಸ್‌ಪಿ) ಈಶಾನ್ಯ (ಉತ್ತರ ಮುಂಬಯಿ) ಜಿಲ್ಲಾ ನಿರೀಕ್ಷಕರಾಗಿ ತುಳು-ಕನ್ನಡಿಗಲಕ್ಷ್ಮಣ್ ಸಿ. ಪೂಜಾರಿ ಚಿತ್ರಾಪು ಅವರನ್ನು ಪಕ್ಷದ ಅಧ್ಯಕ್ಷೆ ರಾಖಿ ಜಾಧವ್ ಅವರು ನೇಮಕ ಮಾಡಿದ್ದಾರೆ. ಮಂಗಳೂರು ಚಿತ್ರಾಪು


Read More »

ಬಿಲ್ಲವಾಸ್ ಫ್ಯಾಮಿಲಿ ದುಬೈ ಸಂಘಟನೆ ; ಉಪ ಪೊಲೀಸ್ ಅಧಿಕ್ಷಕರಾದ ಎಸ್ ಮಹೇಶ್ ಕುಮಾರ್ ರವರ ಮನದಾಳದ ಮಾತು


Share       ಬಿಲ್ಲವಾಸ್ ಫ್ಯಾಮಿಲಿ ದುಬೈ, ಸಮುದಾಯದ ಸಾಮಾಜಿಕ ಚಟುವಟಿಕೆಗಳಲ್ಲಿ ಮಂಚೂಣಿ ಯಲ್ಲಿರುವ ಸಂಘಟನೆ. ಇತ್ತೀಚೆಗೆ ಖಾಸಗಿ ಕಾರ್ಯಕ್ರಮದ ನಿಮಿತ್ತ ದುಬೈಗೆ ಪ್ರಯಾಣ ಬೆಳೆಸಿದಾಗ ಈ ಸಂಘಟನೆಯ ಕಾರ್ಯವೈಖರಿ ಯನ್ನು ಕಣ್ಣಾರೆ ನೋಡುವ ಅವಕಾಶ ಒದಗಿ


Read More »

ನಾರಾಯಣ ಗುರುಗಳ ತತ್ವದಂತೆ ಎಲ್ಲರೂ ಜೊತೆಗೂಡಿ ಮುನ್ನೆಡೆಯಬೇಕು : ಪದ್ಮರಾಜ್ ಆರ್ ಪೂಜಾರಿ


Share       ಬಂಟ್ವಾಳ: ಯುವವಾಹಿನಿ(ರಿ.) ಮಾಣಿ ಘಟಕದ 2025-26 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ ದಿನಾಂಕ 10-03-2025 ರ ಸೋಮವಾರದಂದು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದ ನೂತನ ನಿವೇಶನದಲ್ಲಿ ಜರುಗಿತು. ಪದಗ್ರಹಣ


Read More »

ಕೊಲ್ಲಿ ರಾಷ್ಟ್ರ ಕತಾ‌ರ್ ದೇಶದಲ್ಲಿ ಕತಾರ್ ಬಿಲ್ಲವಸ್ ಸಂಘದ ಮೊಟ್ಟ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಅಪರ್ಣ ಶರತ್


Share       ಕೊಲ್ಲಿ ರಾಷ್ಟ್ರ ಕತಾ‌ರ್ ದೇಶದಲ್ಲಿ ನಮ್ಮ ತುಳುವರು ಹಲವಾರು ವರ್ಷಗಳಿಂದ ವಾಸವಿದ್ದಿದ್ದು, ಇಂದಿಗೂ ತುಳುವ ಮಣ್ಣಿನ ಪ್ರೀತಿಯನ್ನು ಮರೆತಿಲ್ಲ. ತುಳುನಾಡಿನ ಸಂಸ್ಕೃತಿ, ಆಚಾರ-ವಿಚಾರಗಳನ್ನು ಮರೆಯದೆ ಇಂದಿಗೂ ತಾವು ನೆಲೆ ನಿಂತ ಮಣ್ಣಿನಲ್ಲಿ ಸಂಭ್ರಮಿಸುತ್ತಾರೆ


Read More »

ದಮ್ಮಾಮ್: ಸೌದಿ ಬಿಲ್ಲವಾಸ್ ದಮ್ಮಾಮ್ ಸಂಘದ ಮಹಾಸಭೆ


Share       ದಮ್ಮಾಮ್: ಶ್ರೀ ನಾರಾಯಣ ಗುರು ಅವರ ತತ್ವ ಸಂದೇಶಗಳನ್ನು ಅಳವಡಿಸಿಕೊಂಡು ದಮ್ಮಾಮ್ ಬಿಲ್ಲವಾಸ್ ಸೌದಿ ಅರೇಬಿಯ ಸಂಘವನ್ನು ಮುನ್ನಡೆಸಬೇಕೆಂದು ಹಾಗು ಸಮಾಜದಲ್ಲಿರುವ ಶೋಷಿತರ , ಅಸಹಾಯಕರ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಾಗು


Read More »