TOP STORIES:

FOLLOW US

ಪುಷ್ಪರಾಜ್ ಅಮಿನ್ ಮತ್ತು ತಂಡದಿಂದ ಮೈಕ್ರೋ ಲೈಟ್ ಸೀ ಪ್ಲೇನ್ ತಯಾರು – ಬೇಕಿದೆ ಸರಕಾರದ ಸಹಾಯ ಹಸ್ತ


ಉಡುಪಿ: ಒಂದೆಡೆ ಸರಕಾರಗಳು ದೇಶೀಯ ಉತ್ಪನ್ನ, ಸಂಶೋಧನೆಗಳಿಗೆ ಒತ್ತು ನೀಡಿ ಸ್ವದೇಶದಲ್ಲಿ ತಯಾರಾಗುವ ಅವಿಶ್ಕಾರಗಳಿಗೆ ವೇದಿಕೆ ಒಗದಿಸಲು ಚಿಂತನೆ ನಡೆಸುತ್ತಿದೆ. ಆದರೆ ಮತ್ತೊಂದೆಡೆ ಉಡುಪಿಯ ಹೆಜಮಾಡಿ ಎಂಬ ಪುಟ್ಟ ಹಳ್ಳಿಯಲ್ಲಿ ದೇಶದಲ್ಲೇ ಮೊದಲು ಎನ್ನುವ ರೀತಿಯಲ್ಲಿ ಸಂಶೋಧನೆ ಒಂದು ನಡೆದಿದ್ದು ಸರಕಾರದ ಸಹಾಯ ಹಸ್ತದ ನಿರೀಕ್ಷೆಯಲ್ಲಿದೆ.

ಉಡುಪಿಯ ಗಡಿಭಾಗ ಹೆಜಮಾಡಿ ಎಂಬ ಪುಟ್ಟ ಗ್ರಾಮದಲ್ಲಿ ಉತ್ಸಾಹಿ ಯುವ ಪಡೆ ತಮ್ಮದೇ ಸ್ವಂತ ಬಂಡವಾಳದೊಂದಿಗೆ ದೇಶದಲ್ಲೇ ಮೊದಲು ಎಂಬಂತೆ ಮೈಕ್ರೋ ಲೈಟ್ ಸೀ ಪ್ಲೇನ್ ಒಂದನ್ನು ತಯಾರು ಮಾಡಿದ್ದಾರೆ. ಈ ಸೀ ಪ್ಲೇನ್ ದೇಶೀಯ ನಿರ್ಮಿತ ಪ್ರಥಮ ಸೀ ಪ್ಲೇನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿನ ಪುಷ್ಪರಾಜ್ ಅಮಿನ್ ಎಂಬವರು ಈ ಯೋಜನೆಯ ರೂವಾರಿ. 8 ಮಂದಿ ಯುವಕ ಯುವತಿಯರ ಜೊತೆ ಗೂಡಿ ಈ ಸೀ ಪ್ಲೇನ್ ಅನ್ನು ತಯಾರಿಸಿದ್ದು ಇಲ್ಲಿನ ಶಾಂಭವಿ ನದಿಯಲ್ಲಿ ಯಶಸ್ವಿ ಪ್ರಾಯೋಗಿಕ ಹಾರಾಟ ಕೂಡಾ ನಡೆದಿದೆ, 1 ವರ್ಷದ ಕಠಿಣ ಪರಿಶ್ರಮ ಮತ್ತು ಸಂಶೋಧನೆಯ ಫಲವಾಗಿ ಸೀ ಪ್ಲೇನ್ ನಿರ್ಮಾಣವಾಗಿದ್ದು ಸುಮಾರು 7 ರಿಂದ 8 ಲಕ್ಷ.ರೂ. ವೆಚ್ಚ ತಗುಲಿದೆ.

“ಸಣ್ಣದಿಂದಲೇ ನನಗೆ ವಿಮಾನ ಹಾರಿಸಬೇಕು ಎಂಬ ಆಸೆ ಇದ್ದಿತ್ತು. ಕಳೆದ ಕೆಲ ವರ್ಷಗಳಲ್ಲಿ ಸಣ್ಣ ಸಣ್ಣ ವಿಮಾನದ ಮಾಡೆಲ್‌‌ಗಳನ್ನು ಮಾಡಿದ್ದೇನೆ. ಹಲವಾರು ಮಕ್ಕಳಿಗೆ ತರಬೇತಿಯನ್ನು ಕೂಡಾ ನೀಡಿದ್ದೇನೆ. ಓರ್ವ ವ್ಯಕ್ತಿ ಕುಳಿತುಕೊಂಡು ಹೋಗುವಂತಹ ವಿಮಾನ ಮಾಡಬೇಕು ಎಂಬ ಆಸೆ ಇದ್ದಿತ್ತು. ಆದರೆ ವಿಮಾನ ಮಾಡುವುದು ತುಂಬಾ ಕಷ್ಟಕರ. ಆಕಾಶದಲ್ಲಿ ಹಾರುವ ವಿಮಾನ ತಯಾರಿಸಲು ಜಾಗದ ಕೊರತೆ ಮತ್ತು ಹಣದ ಅವಶ್ಯಕತೆ ಕೂಡಾ ಇತ್ತು ಹೀಗಾಗಿ ನೀರಿನಲ್ಲಿ ಹೋಗುವ ವಿಮಾನವನ್ನು ತಯಾರಿಸಿದೆವು. ನನ್ನ ಮನೆಯ ಹತ್ತಿರವೇ ನದಿ ಇರುವುದರಿಂದ ಇದರ ಪ್ರಾಯೋಗಿಕ ಪ್ರಯೋಗಕ್ಕೆ ಮತ್ತು ಇನ್ನಿತರ ಕೆಲಸಕ್ಕೆ ಕೂಡಾ ಸುಲಭವಾಗಿತ್ತು. ಈ ಯೋಜನೆಗೆ ಸಹಕಾರಿಯಾಗುವಂತೆ ಸರಕಾರ ನಮಗೆ ಒಂದು ಸಣ್ಣ ಮಟ್ಟದ ವರ್ಕ್ ಶಾಪ್ ಮತ್ತು ಅಗತ್ಯ ಸವಲತ್ತುಗಳನ್ನು ಒದಗಿಸಿ ಕೊಡಬೇಕು” ಎನ್ನುತ್ತಾರೆ ಈ ತಂಡದ ಮುಖ್ಯಸ್ಥರು ಮತ್ತು ಮಾರ್ಗದರ್ಶಕರು ಆದ ಪುಷ್ಪರಾಜ್ ಅಮಿನ್.

ಈ ಇಡೀ ಸೀ ಪ್ಲೇನ್ ತಯಾರಾದದ್ದು ಪುಷ್ಪರಾಜ್ ಅವರ ಮನೆಯ ಅಂಗಳ ಗದ್ದೆ, ಮತ್ತು ತೋಟದಲ್ಲಿ. ಯಾವುದೇ ದೊಡ್ಡ ವರ್ಕ್ ಶಾಪ್ ಇಲ್ಲದೇ, ಆಧುನಿಕ ಉಪಕಣಗಳು ಇಲ್ಲದೇ ತಮ್ಮಲ್ಲಿ ಲಭ್ಯವಿರುವ ಉಪಕರಣಗಳನ್ನು ಬಳಸಿ ಈ ಸೀ ಪ್ಲೇನ್ ಅನ್ನು ತಯಾರು ಮಾಡಿದ್ದಾರೆ, ತಂಡದಲ್ಲಿ ಪುಷ್ಪರಾಜ್ ಅಮೀನ್ ಸೇರಿದಂತೆ, ಟ್ರೈನಿ ಪೈಲಟ್ ವಿನಯಾ ಯು, ಯಾಚ್ ಕ್ಯಾಪ್ಟನ್ ವಸುರಾಜ್ ಅಮಿನ್, ವೃತ್ತಿಪರ ಡ್ರೋನ್‌‌ ಆಪರೇಟರ್ ಅಭಿಷೇಕ್ ಎಂ ಕೋಟ್ಯಾನ್, ಏರೋನಾಟಿಕಲ್ ವಿದ್ಯಾರ್ಥಿ ಉತ್ಸವ್ ಉಮೇಶ್, ಏರೋನಾಟಿಕಲ್ ಪ್ರಾಧ್ಯಾಪಕ ಶಯನಿ ರಾವ್, ರೇಶ್ಮಾ ಬಂಗೇರ, ಅಶ್ವಿನಿ ರಾವ್ ಸೇರಿದ್ದಾರೆ.

“ಈ ಸೀ ಪ್ಲೇನ್ 190 ಕೆಜಿ ಇದ್ದು, ಓರ್ವ ಪೈಲಟ್ ಕುಳಿತುಕೊಂಡು ಸಂಚರಿಸಲು ಸಾಧ್ಯವಿದೆ. ನಮ್ಮ ಪ್ರಥಮ ಪ್ರಯತ್ನದಲ್ಲೇ ನಾವು ಯಶಸನ್ನು ಕಂಡಿದ್ದೇವೆ. ನಮ್ಮ ದೇಶದಲ್ಲಿ ಇಷ್ಟು ಕಡಿಮೆ ವೆಚ್ಚ ಮತ್ತು ಸಮಯದಲ್ಲಿ ತಯಾರಾಗಿರುವ ಪ್ರಥಮ ವಿಮಾನ ಇದು. ಇದನ್ನು ದ್ವೀಪಗಳ ನಡುವೆ ಸಂಚಾರಕ್ಕೆ, ನೆರೆ ಸಂಧರ್ಭದಲ್ಲಿ ಪರಿಹಾರ ಕಾರ್ಯಕ್ಕೆ, ಪ್ರವಾಸೋದ್ಯಮಕ್ಕೆ, ಬಳಕೆ ಮಾಡಬಹುದು. ಆದರೆ ಸರಿಯಾದ ವರ್ಕ್ ಶಾಪ್, ಉಪಕರಣಗಳು ಇಲ್ಲದೇ ಈ ಪ್ರಯೋಗ ಯಶಸ್ವಿಯಾಗಿದೆ” ಎನ್ನುತ್ತಾರೆ ತಂಡದ ಸದಸ್ಯ ಶಯನಿ ರಾವ್.

ದೃತಿ ಮೈಕ್ರೋಲೈಟ್ ಸೀ ಪ್ಲೇನ್ ಎಂದು ಇದನ್ನು ಹೆಸರಿಸಲಾಗಿದ್ದು ಸುಮಾರು 120 ಕೆಜಿ ಭಾರವಿದೆ. 33 ಹೆಚ್.ಪಿ ಮೋಟಾರ್ ಅನ್ನು ಈ ಸೀ ಪ್ಲೇನ್‌‌ಗಾಗಿ ಬಳಸಲಾಗಿದೆ. ಗ್ರೇಡ್ ಅಲುಮಿನಿಯಂ, ಫೋಮ್, ಫೈಬರ್ ಬಟ್ಟೆ, ನೈಲಾನ್ ಬಟ್ಟೆ ಮತ್ತು ಇನ್ನಿತರ ಸಾಮಾಗ್ರಿಗಳನ್ನು ಈ ಸೀ ಪ್ಲೇನ್ ತಯಾರಿಯಲ್ಲಿ ಬಳಸಲಾಗಿದೆ. ತಂಡವು ಸೂಕ್ತ ಪರಿಕರ, ವ್ಯವಸ್ಥೆಗಳು ಲಭ್ಯವಾದಲ್ಲಿ ಮುಂದಿನ ದಿನಗಳಲ್ಲಿ 4,610 ಸೀಟರ್ ಸೀ ಪ್ಲೇನ್ ಗಳನ್ನು ತಯಾರಿಸಲು ಕೂಡಾ ಯೋಜನೆ ಹಾಕಿಕೊಳ್ಳುತ್ತಿದೆ.

ಈ ಪ್ರಯೋಗಕ್ಕೆ ಆಗಿರುವ ಖರ್ಚು ವೆಚ್ಚ ಎಲ್ಲವನ್ನೂ ತಂಡದ ಸದಸ್ಯರು, ಸ್ನೇಹಿತರು, ಮತ್ತು ಸಾಲ ಮಾಡುವ ಮೂಲಕ ನಿಭಾಯಿಸಿದ್ದಾರೆ.

ಈ ಮೊದಲು ಗುಜರಾತಿನ ಅಹಮದಾಬಾದ್‌ನಲ್ಲಿ ವಿದೇಶದಿಂದ ತರಿಸಿದ್ದ ಸೀ ಪ್ಲೇನ್ ಅನ್ನು ಪ್ರಧಾನಿ ಮೋದಿಯವರು ಉದ್ಘಾಟನೆ ಮಾಡಿ ಅದರಲ್ಲಿ ಪ್ರಯಾಣವನ್ನು ಕೂಡಾ ಮಾಡಿದ್ದರು. ಆದರೆ ದೇಶೀಯ ನಿರ್ಮಿತ ಪ್ರಥಮ ಸೀ ಪ್ಲೇನ್‌ಗೆ ಇದೀಗ ಅಗತ್ಯ ಬೆಂಬಲ ಬೇಕಾಗಿದೆ. ಸರಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಗಮನಹರಿಸಿ ಈ ಯುವ ಅವಿಷ್ಕಾರಿಗಳಿಗೆ ನೆರವಾಗಬೇಕಿದೆ.


Share:

More Posts

Category

Send Us A Message

Related Posts

ಬಿರುವೆರ್ ಕುಡ್ಲ ಸಂಘಟನೆಯಿಂದ ಯುವವಾಹಿನಿಗೆ ಗೌರವದ ಸನ್ಮಾನ.. ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿ ಸನ್ಮಾನ ಸ್ವೀಕಾರ


Share       ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಬಿರುವೆರ್ ಕುಡ್ಲ(ರಿ) ಮಂಗಳೂರು ಸಂಘಟನಯ ದಶಮಾನೋತ್ಸವದ ಸವಿನೆನಪಿಗಾಗಿ, ರಾಜ್ಯದ ಪ್ರತಿಷ್ಠಿತ ಯುವವಾಹಿನಿ ಸಂಸ್ಥೆಯು ಕಳೆದ 36 ವರ್ಷಗಳ ಸಮಾಜಮುಖಿ ಸೇವೆಯನ್ನು ಗುರುತಿಸಿ ಗೌರವಿಸಿ ಗೌರವದ


Read More »

ದೇಯಿ ಬೈದೆತಿ- ಕೋಟಿ ಚೆನ್ನಯರ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ಎಂಬ ಪುಣ್ಯಭೂಮಿ


Share       ಗೆಜ್ಜೆಗಿರಿ ನಂದನ ಬಿತ್ತಲ್ ಎಂಬ ಹೆಸರು ಕೇಳುತ್ತಿದ್ದಂತೆ ಮೈ ರೋಮಾಂಚನಗೊಳ್ಳುತ್ತದೆ. ಕ್ಷೇತ್ರದ ಇತಿಹಾಸವನ್ನು ಕೇಳುವಾಗ ಅವಳಿ ವೀರಪುರುಷರ ಮೂಲಸ್ಥಾನ ಯಾವುದು ಎಂಬ ಪ್ರಶ್ನೆಗೂ ಉತ್ತರ ಸಿಗುತ್ತದೆ. ಅಂತಹ ಪುಣ್ಯ-ಪವಿತ್ರ ಭೂಮಿಯಲ್ಲಿ ದೇಯಿ ಬೈದೈತಿ


Read More »

” ನವ ಕರ್ನಾಟಕ ರತ್ನ ” ಪ್ರಶಸ್ತಿಗೆ ಸತೀಶ್ ಕುಮಾರ್ ಬಜಾಲ್ ಆಯ್ಕೆ


Share       ಬೆಂಗಳೂರು: ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಒಂದುಗೂಡಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಅ. 4 ಮತ್ತು 5ರಂದು ಬೆಂಗಳೂರಿನಲ್ಲಿ ಅನಿವಾಸಿ ಕನ್ನಡಿಗರ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿದ್ದು. ಅಂದು


Read More »

ಊದುಪೂಜೆಯಲ್ಲಿ ಪಿಲಿಯಾವೇಶ ಎಷ್ಟು ಸರಿ?


Share       ಇನ್ನು ಪಿಲಿಕೋಲ ನೋಡಲು ವರ್ಷಕ್ಕೊಮ್ಮೆ ಕಾಪುವಿಗೆ ಹೋಗಬೇಕಾಗಿಲ್ಲ. ಅಷ್ಟಮಿ, ಚೌತಿ, ಮಾರ್ನೆಮಿಗಳಲ್ಲಿ ನಮ್ಮೂರಿನಲ್ಲೂ ಪಿಲಿಕೋಲಗಳು ಆರಂಭವಾಗಿವೆ. ಹಿಂದೆ ಅಪೂರ್ವವಾಗಿ ಎಲ್ಲಾದರೂ ಒಂದು ಕಡೆ ಊದುಹಾಕುವಾಗ ವೇಷಸಂಕಲ್ಪಿಸಿಕೊಂಡವನಿಗೆ ಆವೇಶ ಆಗುವುದಿತ್ತು. ಹೀಗೆ ಆವೇಶವಾಗುವುದು ಶುಭಲಕ್ಷಣ


Read More »

ದುಬೈ: ದುಬೈ ಬಿಲ್ಲವಸ್ ಫ್ಯಾಮಿಲಿ ವತಿಯಿಂದ ನಡೆದ 170 ನೇ ಬ್ರಹ್ಮ ಶ್ರೀ ನಾರಾಯಣ ಗುರುಜಯಂತಿ


Share       ದುಬೈ: ಬಿಲ್ಲವಸ್ ಫ್ಯಾಮಿಲಿ ದುಬೈ ಇವರ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ 170 ನೇ ಗುರು ಜಯಂತಿಯು ದುಬೈ ನ ಗ್ಲೆಂಡಲೆ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ  ಭಾನುವಾರದಂದು ವಿಜೃಂಭಣೆಯಿಂದ ನಡೆಯಿತು.


Read More »

ಸಾಲುಮರದ ತಿಮ್ಮಕ್ಕ ಪ್ರಶಸ್ತಿ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ 2024 ಪ್ರಶಸ್ತಿಗೆ ಆಯ್ಕೆಯಾದ ಧನ್ವಿ ಪೂಜಾರಿ


Share       ಮರವಂತೆ : ಈ ಬಾರಿಯ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ 2024 ಪ್ರಶಸ್ತಿಗೆ ಮರವಂತೆಯ ಧನ್ವಿ ಪೂಜಾರಿ ಆಯ್ಕೆಯಾಗಿದ್ದಾರೆ. ಮರವಂತೆಯ ಜ್ಯೋತಿ ಚಂದ್ರಶೇಖರ ಪೂಜಾರಿ ಇವರ ಪುತ್ರಿಯಾಗಿದ್ದು ಪ್ರಸ್ತುತ ಜನತಾ


Read More »