TOP STORIES:

ಪ್ರಾತಃಸ್ಮರಣೀಯ ದೇಯಿಬೈದೆತಿ,ಕೋಟಿಚೆನ್ನಯರ ಕಾರ್ಣಿಕಕ್ಕೆ ಶರಣಾಗಿ .


ಅಗಣಿತ ಮಹಿಮಾನ್ವಿತರಾದ ಕೋಟಿ ಚೆನ್ನಯರು ಹಾಗೂ ಮಾತೆ ದೇಯಿ ಬೈದೆತಿಯ ಪುಣ್ಯ ನೆಲೆಯಾದ ಶ್ರೀ ಕ್ಷೇತ್ರ ಗೆಜ್ಜೆಗಿರಿಯು ಸಮಸ್ತ ಆಸ್ತಿಕ ಬಂಧುಗಳ ಭಕ್ತಿ,ಶ್ರದ್ದೆ,ಇಚ್ಚಾಶಕ್ತಿಯ ಕ್ಷೇತ್ರವೆನಿಸಿ ಅಭೂತಪೂರ್ವ ಜೀರ್ಣೊದ್ದಾರದೊಂದಿಗೆ ಕಂಗೊಳಿಸುತ್ತಿರುವುದು ಧನ್ಯ ಸಂಗತಿ.ವಿಶ್ವ ಬಿಲ್ಲವರ ಸ್ವಾಭಿಮಾನದ ಪ್ರತೀಕವೆಂಬಂತೆ ಈ ಸ್ಥಾನ ಬಿಂಬಿತಗೊಂಡಿದ್ದೂ ಹೆಮ್ಮೆಯ ಅಂಶ.ಸಮಸ್ತ ಭಕ್ತರ ಪವಿತ್ರ ತಾಣವಾಗಿ ದಿನದಿಂದ ದಿನಕ್ಕೆ ಉತ್ತುಂಗ ಸ್ಥಿತಿಯಲ್ಲಿದ್ದ ಇಲ್ಲಿ ಪ್ರಸಕ್ತ ಆಡಳಿತಾತ್ಮಕ ವಿಚಾರದಲ್ಲಿ ನ್ಯಾಯಾಲಯದವರೆಗೆ ಹೋಗಿರುವಂತದ್ದು ಖೇಧಕರ.
ಅಭಿಪ್ರಾಯ ವ್ಯತ್ಯಾಸ ಸಾಮಾನ್ಯವಾಗಿ ಎಲ್ಲಾ ಕಡೆಗಳಲ್ಲಿ ಮತ್ತು ಎಲ್ಲರಲ್ಲಿ ಇರುವಂತದ್ದೆ.ಆದರೆ ಅದನ್ನೆ ಮುಖ್ಯವಾಗಿಸಿಕೊಂಡು ಹಠವಾದಿತನದ ಧೋರಣೆಯು ಸಮಸ್ತ ಭಕ್ತರಿಗೆ ಹಾಗೂ ಸಮಾಜಬಾಂಧವರಿಗೆ ನೋವಿನ ಸಂಗತಿ.ಇಡೀ ಸಮಾಜ ಹಲವಾರು ಒಳಿತಿನ ನಿರೀಕ್ಷೆಗಳನ್ನಿಟ್ಟುಕೊಂಡು ಮತ್ತು ಭಕ್ತಿಯ ನೆಲೆಯಲ್ಲಿ ತನುಮನಧನ ಸಹಕಾರ ನೀಡಿದ ಐತಿಹಾಸಿಕ ಸಂದರ್ಭಗಳನ್ನು ಮತ್ತು ಭವ್ಯ ಸಮಾರಂಭಗಳನ್ನು ಮರೆತು ಇದೀಗ ಪ್ರತಿಷ್ಠೆ ಮೆರೆಯಲು ಪ್ರಯತ್ನಿಸುತ್ತಿರುವುದು ಉತ್ತಮ ಬೆಳವಣಿಗೆಯಲ್ಲ.ನ್ಯಾಯಾಲಯ ಎಂದಾಕ್ಷಣ ಅಲ್ಲಿ ನಿಯಮಾನುಸಾರವಾಗಿ ವಾದ ಪ್ರತಿವಾದದ ಬೆಳವಣಿಗೆಗಳು ಯಾವ ದಿನ ಕೊನೆಯಾಗುತ್ತದೆ ಎಂಬುದು ಸ್ಪಷ್ಟವಿಲ್ಲದ ವಿಚಾರ.ಆದುದರಿಂದ ನಮ್ಮ ಮುಖಂಡರುಗಳಾಗಲಿ,ಸ್ಥಳಕ್ಕೆ ಸಂಬಂಧ ಪಟ್ಟವರಾಗಲಿ ಎಲ್ಲಾ ಆತುರ, ಆಕ್ರೋಶಗಳನ್ನು ಕರಗಿಸಿಕೊಂಡು ಪ್ರಾತಃಸ್ಮರಣೀಯ ದೇಯಿಬೈದೆತಿ,ಕೋಟಿಚೆನ್ನಯರ ಕಾರ್ಣಿಕಕ್ಕೆ ಶರಣಾಗಿ ಎಲ್ಲ ಭಿನ್ನಮತಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವುದು ಸಮಂಜಸವಾಗಿದೆ.ಒಂದಷ್ಟು ಗೊಂದಲ ಹಾಗೂ ತಪ್ಪು ಸಂದೇಶಗಳು ಸಾರ್ವತ್ರಿಕಗೊಳ್ಳುವ ಮುಂಚೆಯೆ ನಮ್ಮ ನಡುವಿನ,ಸಹಮತ, ಸಹೋದರತ್ವ ಸಾಬೀತಾಗಲಿ.ನಾವೆಲ್ಲರೂ ಒಗ್ಗೂಡಿಕೊಂಡು ಒಳ್ಳೆಯ ಬೆಳವಣಿಗೆಗೆ ಸಾಕ್ಷಿಯಾಗೋಣ

ಪ್ರವೀಣ್ ಎಂ ಪೂಜಾರಿ
ಅಧ್ಯಕ್ಷರು
ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ(ರಿ).


Related Posts

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »

ಪುತ್ತೂರು:ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ರವಿಕುಮಾರ್ ಕಲ್ಕಾರ್ ನಿಧನ


Share         ಪುತ್ತೂರು: ಶಾಂತಿಗೋಡು ಕಲ್ಕಾರ್ ನಿವಾಸಿ ರವಿಕುಮಾರ್ ಕಲ್ಕಾರ್(48ವ.)ರವರು ಫೆ.15ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಸಂದರ್ಭ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ ನಡೆಸಲ್ಪಟ್ಟ ಕ್ರೀಡಾಕೂಟದಲ್ಲಿ ರವಿ ಕಲ್ಕಾರ್ ರವರು


Read More »