TOP STORIES:

ಪ.ಗೋ. ಪ್ರಶಸ್ತಿ ವಿಜೇತ ವಿಜಯ ಕೋಟ್ಯಾನ್ ಪಡು ಅವರಿಗೆ ಅಭಿನಂದನೆಗಳು


ಪ.ಗೋ. ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ ವಿಜೇತ ವಿಜಯ ಕೋಟ್ಯಾನ್ ಪಡು ಅವರಿಗೆ ಅಭಿನಂದನೆಗಳು

ವಿಜಯ್ ಕೋಟ್ಯಾನ್ ಪಡು-ಬಯೋಡೆಟಾ
ಹಿರಿಯ ವರದಿಗಾರರು,
ವಿಜಯ ಕರ್ನಾಟಕ, ಮಂಗಳೂರು

ಮಂಗಳೂರು ತಾಲೂಕಿನ ಪಡು ಬೊಂಡಂತಿಲ ಗ್ರಾಮದ ಗೋಪಾಲ ಪೂಜಾರಿ ಮತ್ತು ಕಮಲ ದಂಪತಿಗಳ ಸುಪುತ್ರನಾಗಿರುವ ವಿಜಯ್ ಕೋಟ್ಯಾನ್ ಅವರು 1978ರ ಜುಲೈ 8ರಂದು ಜನನ. ಬೊಂಡಂತಿಲ ಸಂತ ಥೋಮಸರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ, ರಾಜೇಶ್ವರ್ ಪ್ರೌಢಶಾಲೆ ಅಡ್ಯಾರ್‌ಪದವಿನಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ ಮುಗಿಸಿ, ಬಂಟ್ವಾಳ ತಾಲೂಕಿನ ಬೆಂಜನ ಪದವಿಪೂರ್ವ ಕಾಲೇಜಿನಲ್ಲಿ ಕಾಮರ್ಸ್ ವಿಭಾಗದಲ್ಲಿ ಪಿಯುಸಿ ಶಿಕ್ಷಣ ಪೂರ್ಣಗೊಳಿಸಿದರು. ತದನಂತರ ಮಂಗಳೂರಿನ ಐಟಿಐನಲ್ಲಿ ಡಿಪಿಸಿಎಸ್ (ಡಾಟಾ ಪ್ರೊಸೆಸಿಂಗ್ ಎಂಡ್ ಕಂಪ್ಯೂಟರ್ ಸಾಫ್ಟ್‌ವೇರ್) ತರಬೇತಿ ಮುಗಿಸಿದರು.
ಬಾಲ್ಯದಿಂದಲೇ ಸಂಕಷ್ಟದ ಬದುಕು ಉದ್ಯೋಗವನ್ನು ಅರಸುವತ್ತ ಮುಖಮಾಡಿದ ಕಾರಣ ಹೊಸದಿಗಂತಕ್ಕೆ ಡಿಟಿಪಿ ಆಪರೇಟರ್ ಆಗಿ 1997ನೇ ಇಸವಿಯಲ್ಲಿ ಸೇರ್ಪಡೆಯಾದರು. ಸುಮಾರು 5 ವರ್ಷಗಳ ಕಾಲ ಡಿಟಿಪಿ ಆಪರೇಟರ್ ಆಗಿದ್ದು, ಆ ಕಾಲದಲ್ಲೇ ಸಿನಿಮಾ ದಿಗಂತ, ಸಾಪ್ತಾಹಿಕಕ್ಕೆ ಬರೆಯುವ ಹವ್ಯಾಸ ಬೆಳೆಸಿಕೊಂಡರು. ತದನಂತರ ವಿಜಯ ಕರ್ನಾಟಕದಲ್ಲಿ ಉದ್ಯೋಗಾವಕಾಶ ದೊರೆತ ಕಾರಣ 2003ರಲ್ಲಿ ವಿಜಯ ಕರ್ನಾಟಕ ಸೇರಿಕೊಂಡರು. ವಿಜಯ ಕರ್ನಾಟಕದಲ್ಲಿ ಡಿಟಿಪಿ ಆಪರೇಟರ್ ಆಗಿ ಸೇರಿದ ಇವರು ಪ್ರಾರಂಭದಿಂದಲೇ ತಮ್ಮ ಬರವಣಿಗೆಯನ್ನು ಒರೆಗಚ್ಚುವ ಕೆಲಸ ಮಾಡಿದರು. ಅದಕ್ಕೆ ತಕ್ಕಂತೆ ಹಿರಿಯರ ಮಾರ್ಗದರ್ಶನವೂ ಸಿಕ್ಕಿದ್ದು, ಕ್ರೀಡೆ, ಧಾರ್ಮಿಕ, ಸಾಹಿತ್ಯ, ಸಾಂಸ್ಕೃತಿಕ ಸಂಬಂಧಿತ ವಿಶೇಷ ವರದಿಗಳನ್ನು ಮಾಡಿ ಯಶಸ್ಸು ಕಂಡರು. ಇವರ ಪ್ರತಿಭೆಯನ್ನು ಗುರುತಿಸಿದ ವಿಕ ಸಂಸ್ಥೆ ಇವರನ್ನು ಹಂತಹಂತವಾಗಿ ಉಪಸಂಪಾದಕನನ್ನಾಗಿ, ಹಿರಿಯ ಉಪಸಂಪಾದಕನನ್ನಾಗಿ ಪದೋನ್ನತಿಗೊಳಿಸಿತು. ಇದಾದ ಬಳಿಕ ವಿಜಯ್ ಕೋಟ್ಯಾನ್ ಅವರ ಜೀವನ ದಿಸೆಯೇ ಬದಲಾಯ್ತು ಅನ್ನಬಹುದು. ತಮ್ಮ ಪತ್ರಿಕೋದ್ಯಮ ಜೀವನವನ್ನು ಚಾಲೆಂಜ್ ಆಗಿ ಸ್ವೀಕರಿಸಿ ಅವಕಾಶ ಬಳಸಿ ಯಶಸ್ಸಿನಲ್ಲಿ ಹಾದಿಯಲ್ಲಿ ಮುನ್ನಡೆದರ. 2015ರಿಂದ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಹಿರಿಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಾನವೀಯ, ರಾಜಕೀಯ, ಸಾಹಿತ್ಯ, ಜನಪದೀಯ ಸಂಗತಿಗಳು, ಧಾರ್ಮಿಕ ವರದಿಗಾರಿಕೆ, ಸಾಮಾಜಿಕ ಕಳಕಳಿ, ತನಿಖಾ ವರದಿಗಳು ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಬರವಣಿಗೆ ಕೈಚಳಕ ಒಲಿಸಿಕೊಂಡವರು. ಅದರಲ್ಲೂ ತುಳುನಾಡಿನ ಜಾನಪದ ಕ್ರೀಡೆ ಕಂಬಳ, ಯಕ್ಷಗಾನ, ಗ್ರಾಮೀಣ ಕ್ರೀಡೆಗಳ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದು, ವರದಿಗಳ ಸರಮಾಲೆಯನ್ನೇ ಮಾಡಿದವರು. ಕರಾವಳಿ ಜಿಲ್ಲೆಗೆ ಕಂಟಕ ಎನಿಸಿಕೊಂಡಿರುವ ಎತ್ತಿನಹೊಳೆ ಯೋಜನಾ ಪ್ರದೇಶಕ್ಕೆ ಹೋಗಿ ಸರಣಿ ವರದಿ ಪ್ರಕಟಿಸಿ ರಾಜ್ಯ ಸರಕಾರದ ಗಮನಸೆಳೆದವರು. ಇದು ಮಾತ್ರವಲ್ಲದೆ ಜಿಲ್ಲೆಯ ಮರಳುಗಾರಿಕೆ, ಕೆಂಪು ಕಲ್ಲು, ಬಾಕ್ಸೈಟ್ ಗಣಿಗಾರಿಕೆ ದಂಧೆಯಂತಹ ಕ್ಲಿಷ್ಟಕರ ತನಿಖಾ ವರದಿಗಳನ್ನು ಬಯಲಿಗೆಳೆದು ಆಡಳಿತದ ಗಮನ ಸೆಳೆದು ತನಿಖಾ ಆದೇಶಕ್ಕೆ ಕಾರಣಕರ್ತರು.
ವರದಿಗಾರಿಕೆ ಮಾತ್ರವಲ್ಲದೆ ಪತ್ರಿಕೋದ್ಯಮದಲ್ಲಿ ಉತ್ತಮ ಸಂಘಟನಾ ಚಾತುರ್ಯ, ಕಾರ್ಯಕ್ರಮ ಆಯೋಜನೆ ಮೂಲಕ ಗಮನಸೆಳೆದವರು. ನಟನೆ, ನಿರೂಪಣೆಯಲ್ಲೂ ಒಂದು ಹೆಜ್ಜೆ ಮುಂದೆ. ಸುಮಾರು 16ವರ್ಷಗಳ ಹಿಂದೆ ತಮ್ಮೂರಿನಲ್ಲಿ ಕರಾವಳಿಯ ಮೊತ್ತಮೊದಲ ‘ಕೆಸರ್ಡೊಂಜಿ ದಿನ’ ಆಯೋಜಿಸಿದ ಹೆಗ್ಗಳಿಕೆ ಇವರದು. ಬೊಂಡಂತಿಲ ಗ್ರಾಮದಲ್ಲಿ ಸಂಘಸಂಸ್ಥೆ ಮುಖೇನ ಮಕ್ಕಳಲ್ಲಿರುವ ಪ್ರತಿಭೆಯನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ನಿರಂತರ ಕಾರ್ಯಕ್ರಮ ಆಯೋಜಿಸಿಕೊಂಡು ಬಂದವರು. ಈ ರೀತಿ ಉದ್ಯೋಗ ಕ್ಷೇತ್ರವಲ್ಲದೆ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡ ವ್ಯಕ್ತಿತ್ವ ಇವರದು.
2019ರಲ್ಲಿ ದೇರಳಕಟ್ಟೆಯಲ್ಲಿ ಭಗ್ನ ಪ್ರೇಮಿಯೊಬ್ಬನಿಂದ ಇರಿತಕ್ಕೆ ಒಳಗಾಗಿ ಅದೆಷ್ಟೋ ಕಾಲ ಜೀವಚ್ಛವವಾಗಿ ಮಲಗಿದ್ದ ಹೆಣ್ಮಗಳೊಬ್ಬಳ ಮತ್ತೆ ನಿಧಾನಕ್ಕೆ ಚೇತರಿಸಿಕೊಂಡ ಕ್ಷಣಗಳನ್ನು ಮಾನವೀಯ ನೆಲೆಯಲ್ಲಿ ವಿಜಯ್ ಕೋಟ್ಯಾನ್ ಅವರು ವರದಿ ಮಾಡಿದ್ದು, ಆ ವರದಿಗೆ ಪ.ಗೋ. ಪ್ರಶಸ್ತಿ ಒಲಿದು ಬಂದಿದೆ.
ವಿಜಯ್ ಕೋಟ್ಯಾನ್ ಅವರು ತಂದೆ-ತಾಯಿ, ಪತ್ನಿ ಸೌಮ್ಯಶ್ರೀ, ಮಗಳು ಚಾರ್ವಿ ಅಂಚನ್, ಸಹೋದರ ಕುಟುಂಬದ ಜತೆ ನೀರುಮಾರ್ಗದ ಪಡು ಬೊಂಡಂತಿಲದಲ್ಲಿ ವಾಸಿಸುತ್ತಿದ್ದಾರೆ.

ದಕ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ಪ.ಗೋ. ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ (ಪದ್ಯಾಣ ಗೋಪಾಲಕೃಷ್ಣ)ಯು ಈ ಬಾರಿ ವಿಜಯ ಕೋಟ್ಯಾನ್ ಪಡು ಅವರಿಗೆ ಲಭಿಸಿದೆ. ಅವರಿಗೆ ಅಭಿನಂದನೆಗಳು.


Related Posts

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »

ಪುತ್ತೂರು:ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ರವಿಕುಮಾರ್ ಕಲ್ಕಾರ್ ನಿಧನ


Share         ಪುತ್ತೂರು: ಶಾಂತಿಗೋಡು ಕಲ್ಕಾರ್ ನಿವಾಸಿ ರವಿಕುಮಾರ್ ಕಲ್ಕಾರ್(48ವ.)ರವರು ಫೆ.15ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಸಂದರ್ಭ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ ನಡೆಸಲ್ಪಟ್ಟ ಕ್ರೀಡಾಕೂಟದಲ್ಲಿ ರವಿ ಕಲ್ಕಾರ್ ರವರು


Read More »