TOP STORIES:

ಪ.ಗೋ. ಪ್ರಶಸ್ತಿ ವಿಜೇತ ವಿಜಯ ಕೋಟ್ಯಾನ್ ಪಡು ಅವರಿಗೆ ಅಭಿನಂದನೆಗಳು


ಪ.ಗೋ. ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ ವಿಜೇತ ವಿಜಯ ಕೋಟ್ಯಾನ್ ಪಡು ಅವರಿಗೆ ಅಭಿನಂದನೆಗಳು

ವಿಜಯ್ ಕೋಟ್ಯಾನ್ ಪಡು-ಬಯೋಡೆಟಾ
ಹಿರಿಯ ವರದಿಗಾರರು,
ವಿಜಯ ಕರ್ನಾಟಕ, ಮಂಗಳೂರು

ಮಂಗಳೂರು ತಾಲೂಕಿನ ಪಡು ಬೊಂಡಂತಿಲ ಗ್ರಾಮದ ಗೋಪಾಲ ಪೂಜಾರಿ ಮತ್ತು ಕಮಲ ದಂಪತಿಗಳ ಸುಪುತ್ರನಾಗಿರುವ ವಿಜಯ್ ಕೋಟ್ಯಾನ್ ಅವರು 1978ರ ಜುಲೈ 8ರಂದು ಜನನ. ಬೊಂಡಂತಿಲ ಸಂತ ಥೋಮಸರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ, ರಾಜೇಶ್ವರ್ ಪ್ರೌಢಶಾಲೆ ಅಡ್ಯಾರ್‌ಪದವಿನಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ ಮುಗಿಸಿ, ಬಂಟ್ವಾಳ ತಾಲೂಕಿನ ಬೆಂಜನ ಪದವಿಪೂರ್ವ ಕಾಲೇಜಿನಲ್ಲಿ ಕಾಮರ್ಸ್ ವಿಭಾಗದಲ್ಲಿ ಪಿಯುಸಿ ಶಿಕ್ಷಣ ಪೂರ್ಣಗೊಳಿಸಿದರು. ತದನಂತರ ಮಂಗಳೂರಿನ ಐಟಿಐನಲ್ಲಿ ಡಿಪಿಸಿಎಸ್ (ಡಾಟಾ ಪ್ರೊಸೆಸಿಂಗ್ ಎಂಡ್ ಕಂಪ್ಯೂಟರ್ ಸಾಫ್ಟ್‌ವೇರ್) ತರಬೇತಿ ಮುಗಿಸಿದರು.
ಬಾಲ್ಯದಿಂದಲೇ ಸಂಕಷ್ಟದ ಬದುಕು ಉದ್ಯೋಗವನ್ನು ಅರಸುವತ್ತ ಮುಖಮಾಡಿದ ಕಾರಣ ಹೊಸದಿಗಂತಕ್ಕೆ ಡಿಟಿಪಿ ಆಪರೇಟರ್ ಆಗಿ 1997ನೇ ಇಸವಿಯಲ್ಲಿ ಸೇರ್ಪಡೆಯಾದರು. ಸುಮಾರು 5 ವರ್ಷಗಳ ಕಾಲ ಡಿಟಿಪಿ ಆಪರೇಟರ್ ಆಗಿದ್ದು, ಆ ಕಾಲದಲ್ಲೇ ಸಿನಿಮಾ ದಿಗಂತ, ಸಾಪ್ತಾಹಿಕಕ್ಕೆ ಬರೆಯುವ ಹವ್ಯಾಸ ಬೆಳೆಸಿಕೊಂಡರು. ತದನಂತರ ವಿಜಯ ಕರ್ನಾಟಕದಲ್ಲಿ ಉದ್ಯೋಗಾವಕಾಶ ದೊರೆತ ಕಾರಣ 2003ರಲ್ಲಿ ವಿಜಯ ಕರ್ನಾಟಕ ಸೇರಿಕೊಂಡರು. ವಿಜಯ ಕರ್ನಾಟಕದಲ್ಲಿ ಡಿಟಿಪಿ ಆಪರೇಟರ್ ಆಗಿ ಸೇರಿದ ಇವರು ಪ್ರಾರಂಭದಿಂದಲೇ ತಮ್ಮ ಬರವಣಿಗೆಯನ್ನು ಒರೆಗಚ್ಚುವ ಕೆಲಸ ಮಾಡಿದರು. ಅದಕ್ಕೆ ತಕ್ಕಂತೆ ಹಿರಿಯರ ಮಾರ್ಗದರ್ಶನವೂ ಸಿಕ್ಕಿದ್ದು, ಕ್ರೀಡೆ, ಧಾರ್ಮಿಕ, ಸಾಹಿತ್ಯ, ಸಾಂಸ್ಕೃತಿಕ ಸಂಬಂಧಿತ ವಿಶೇಷ ವರದಿಗಳನ್ನು ಮಾಡಿ ಯಶಸ್ಸು ಕಂಡರು. ಇವರ ಪ್ರತಿಭೆಯನ್ನು ಗುರುತಿಸಿದ ವಿಕ ಸಂಸ್ಥೆ ಇವರನ್ನು ಹಂತಹಂತವಾಗಿ ಉಪಸಂಪಾದಕನನ್ನಾಗಿ, ಹಿರಿಯ ಉಪಸಂಪಾದಕನನ್ನಾಗಿ ಪದೋನ್ನತಿಗೊಳಿಸಿತು. ಇದಾದ ಬಳಿಕ ವಿಜಯ್ ಕೋಟ್ಯಾನ್ ಅವರ ಜೀವನ ದಿಸೆಯೇ ಬದಲಾಯ್ತು ಅನ್ನಬಹುದು. ತಮ್ಮ ಪತ್ರಿಕೋದ್ಯಮ ಜೀವನವನ್ನು ಚಾಲೆಂಜ್ ಆಗಿ ಸ್ವೀಕರಿಸಿ ಅವಕಾಶ ಬಳಸಿ ಯಶಸ್ಸಿನಲ್ಲಿ ಹಾದಿಯಲ್ಲಿ ಮುನ್ನಡೆದರ. 2015ರಿಂದ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಹಿರಿಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಾನವೀಯ, ರಾಜಕೀಯ, ಸಾಹಿತ್ಯ, ಜನಪದೀಯ ಸಂಗತಿಗಳು, ಧಾರ್ಮಿಕ ವರದಿಗಾರಿಕೆ, ಸಾಮಾಜಿಕ ಕಳಕಳಿ, ತನಿಖಾ ವರದಿಗಳು ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಬರವಣಿಗೆ ಕೈಚಳಕ ಒಲಿಸಿಕೊಂಡವರು. ಅದರಲ್ಲೂ ತುಳುನಾಡಿನ ಜಾನಪದ ಕ್ರೀಡೆ ಕಂಬಳ, ಯಕ್ಷಗಾನ, ಗ್ರಾಮೀಣ ಕ್ರೀಡೆಗಳ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದು, ವರದಿಗಳ ಸರಮಾಲೆಯನ್ನೇ ಮಾಡಿದವರು. ಕರಾವಳಿ ಜಿಲ್ಲೆಗೆ ಕಂಟಕ ಎನಿಸಿಕೊಂಡಿರುವ ಎತ್ತಿನಹೊಳೆ ಯೋಜನಾ ಪ್ರದೇಶಕ್ಕೆ ಹೋಗಿ ಸರಣಿ ವರದಿ ಪ್ರಕಟಿಸಿ ರಾಜ್ಯ ಸರಕಾರದ ಗಮನಸೆಳೆದವರು. ಇದು ಮಾತ್ರವಲ್ಲದೆ ಜಿಲ್ಲೆಯ ಮರಳುಗಾರಿಕೆ, ಕೆಂಪು ಕಲ್ಲು, ಬಾಕ್ಸೈಟ್ ಗಣಿಗಾರಿಕೆ ದಂಧೆಯಂತಹ ಕ್ಲಿಷ್ಟಕರ ತನಿಖಾ ವರದಿಗಳನ್ನು ಬಯಲಿಗೆಳೆದು ಆಡಳಿತದ ಗಮನ ಸೆಳೆದು ತನಿಖಾ ಆದೇಶಕ್ಕೆ ಕಾರಣಕರ್ತರು.
ವರದಿಗಾರಿಕೆ ಮಾತ್ರವಲ್ಲದೆ ಪತ್ರಿಕೋದ್ಯಮದಲ್ಲಿ ಉತ್ತಮ ಸಂಘಟನಾ ಚಾತುರ್ಯ, ಕಾರ್ಯಕ್ರಮ ಆಯೋಜನೆ ಮೂಲಕ ಗಮನಸೆಳೆದವರು. ನಟನೆ, ನಿರೂಪಣೆಯಲ್ಲೂ ಒಂದು ಹೆಜ್ಜೆ ಮುಂದೆ. ಸುಮಾರು 16ವರ್ಷಗಳ ಹಿಂದೆ ತಮ್ಮೂರಿನಲ್ಲಿ ಕರಾವಳಿಯ ಮೊತ್ತಮೊದಲ ‘ಕೆಸರ್ಡೊಂಜಿ ದಿನ’ ಆಯೋಜಿಸಿದ ಹೆಗ್ಗಳಿಕೆ ಇವರದು. ಬೊಂಡಂತಿಲ ಗ್ರಾಮದಲ್ಲಿ ಸಂಘಸಂಸ್ಥೆ ಮುಖೇನ ಮಕ್ಕಳಲ್ಲಿರುವ ಪ್ರತಿಭೆಯನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ನಿರಂತರ ಕಾರ್ಯಕ್ರಮ ಆಯೋಜಿಸಿಕೊಂಡು ಬಂದವರು. ಈ ರೀತಿ ಉದ್ಯೋಗ ಕ್ಷೇತ್ರವಲ್ಲದೆ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡ ವ್ಯಕ್ತಿತ್ವ ಇವರದು.
2019ರಲ್ಲಿ ದೇರಳಕಟ್ಟೆಯಲ್ಲಿ ಭಗ್ನ ಪ್ರೇಮಿಯೊಬ್ಬನಿಂದ ಇರಿತಕ್ಕೆ ಒಳಗಾಗಿ ಅದೆಷ್ಟೋ ಕಾಲ ಜೀವಚ್ಛವವಾಗಿ ಮಲಗಿದ್ದ ಹೆಣ್ಮಗಳೊಬ್ಬಳ ಮತ್ತೆ ನಿಧಾನಕ್ಕೆ ಚೇತರಿಸಿಕೊಂಡ ಕ್ಷಣಗಳನ್ನು ಮಾನವೀಯ ನೆಲೆಯಲ್ಲಿ ವಿಜಯ್ ಕೋಟ್ಯಾನ್ ಅವರು ವರದಿ ಮಾಡಿದ್ದು, ಆ ವರದಿಗೆ ಪ.ಗೋ. ಪ್ರಶಸ್ತಿ ಒಲಿದು ಬಂದಿದೆ.
ವಿಜಯ್ ಕೋಟ್ಯಾನ್ ಅವರು ತಂದೆ-ತಾಯಿ, ಪತ್ನಿ ಸೌಮ್ಯಶ್ರೀ, ಮಗಳು ಚಾರ್ವಿ ಅಂಚನ್, ಸಹೋದರ ಕುಟುಂಬದ ಜತೆ ನೀರುಮಾರ್ಗದ ಪಡು ಬೊಂಡಂತಿಲದಲ್ಲಿ ವಾಸಿಸುತ್ತಿದ್ದಾರೆ.

ದಕ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ಪ.ಗೋ. ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ (ಪದ್ಯಾಣ ಗೋಪಾಲಕೃಷ್ಣ)ಯು ಈ ಬಾರಿ ವಿಜಯ ಕೋಟ್ಯಾನ್ ಪಡು ಅವರಿಗೆ ಲಭಿಸಿದೆ. ಅವರಿಗೆ ಅಭಿನಂದನೆಗಳು.


Related Posts

ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ


Share        ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ


Read More »

ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ ಕೋಟ್ಯಾನ್‌ಗೆ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ


Share        ವಿಕ ಸುದ್ದಿಲೋಕ ಮಂಗಳೂರು ಸೌಹಾರ್ದತೆ ಬಿಂಬಿಸುವ ವರದಿಗೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ‘ಬ್ಯಾಂಡ್ ಮಂಗಳೂರು’ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ


Read More »

ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಆಯ್ಕೆ


Share        ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದ ಬಿಂಬಿಸುವ ವರದಿಗೆ ನೀಡಲಾಗುವ “ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿಗೆ ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯಕೋಟ್ಯಾನ್ ಪಡು  ಆಯ್ಕೆಯಾಗಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ 2024 ಅಕ್ಟೋಬರ್


Read More »

ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್( ರಿ) ಇದರ ನೂತನ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ ಆಯ್ಕೆ


Share        ಶ್ರೀ ಕ್ಷೇತ್ರ ಗೆಜ್ಜೆಗಿರಿಯ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ  ಚಾರಿಟೇಬಲ್ ಟ್ರಸ್ಟ್(ರಿ) ಇದರ ನೂತನ ಅಧ್ಯಕ್ಷರಾಗಿ ಬಿರ್ವ ಸೆಂಟರ್ ಇದರ ಮಾಲಕರಾದ  ಕೆ ಸಂಜೀವ ಪೂಜಾರಿ ಇವರನ್ನು ಕಂಕನಾಡಿ ಬ್ರಹ್ಮ


Read More »

8ನೇ ವಯಸ್ಸಿನಲ್ಲಿ ಕಪೋತಾಸನದ ಭಂಗಿಯಲ್ಲಿ ವಿಶ್ವ ದಾಖಲೆ ಮಾಡಿದ ಬಾಲಕಿ ಕುಮಾರಿ ಶರಣ್ಯ ಶರತ್!


Share        ಮಂಗಳೂರು, ಜೂ. 20 ಪನ್ನೀರಿನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಶರಣ್ಯ ಶರತ್ ಅವರು ತನ್ನ ಎಂಟನೆಯ ವಯಸ್ಸಿನಲ್ಲಿ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್


Read More »

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾಗಿ ಎಚ್.ಎಸ್.ಜಯರಾಜ್ ಆಯ್ಕೆ


Share        ಮಂಗಳೂರು: ಬ್ರಹ್ಮಶ್ರೀ ನಾರಾಯಣಗುರುಗಳು ಪ್ರತಿಷ್ಠಾಪಿಸಿದ ಕರ್ನಾಟಕದ ಏಕೈಕ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಆಡಳಿತ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ಜಂಟಿ ಸಭೆ ಕೇಂದ್ರದ ಮಾಜಿ ಸಚಿವ


Read More »