TOP STORIES:

FOLLOW US

ಪ.ಗೋ. ಪ್ರಶಸ್ತಿ ವಿಜೇತ ವಿಜಯ ಕೋಟ್ಯಾನ್ ಪಡು ಅವರಿಗೆ ಅಭಿನಂದನೆಗಳು


ಪ.ಗೋ. ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ ವಿಜೇತ ವಿಜಯ ಕೋಟ್ಯಾನ್ ಪಡು ಅವರಿಗೆ ಅಭಿನಂದನೆಗಳು

ವಿಜಯ್ ಕೋಟ್ಯಾನ್ ಪಡು-ಬಯೋಡೆಟಾ
ಹಿರಿಯ ವರದಿಗಾರರು,
ವಿಜಯ ಕರ್ನಾಟಕ, ಮಂಗಳೂರು

ಮಂಗಳೂರು ತಾಲೂಕಿನ ಪಡು ಬೊಂಡಂತಿಲ ಗ್ರಾಮದ ಗೋಪಾಲ ಪೂಜಾರಿ ಮತ್ತು ಕಮಲ ದಂಪತಿಗಳ ಸುಪುತ್ರನಾಗಿರುವ ವಿಜಯ್ ಕೋಟ್ಯಾನ್ ಅವರು 1978ರ ಜುಲೈ 8ರಂದು ಜನನ. ಬೊಂಡಂತಿಲ ಸಂತ ಥೋಮಸರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ, ರಾಜೇಶ್ವರ್ ಪ್ರೌಢಶಾಲೆ ಅಡ್ಯಾರ್‌ಪದವಿನಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ ಮುಗಿಸಿ, ಬಂಟ್ವಾಳ ತಾಲೂಕಿನ ಬೆಂಜನ ಪದವಿಪೂರ್ವ ಕಾಲೇಜಿನಲ್ಲಿ ಕಾಮರ್ಸ್ ವಿಭಾಗದಲ್ಲಿ ಪಿಯುಸಿ ಶಿಕ್ಷಣ ಪೂರ್ಣಗೊಳಿಸಿದರು. ತದನಂತರ ಮಂಗಳೂರಿನ ಐಟಿಐನಲ್ಲಿ ಡಿಪಿಸಿಎಸ್ (ಡಾಟಾ ಪ್ರೊಸೆಸಿಂಗ್ ಎಂಡ್ ಕಂಪ್ಯೂಟರ್ ಸಾಫ್ಟ್‌ವೇರ್) ತರಬೇತಿ ಮುಗಿಸಿದರು.
ಬಾಲ್ಯದಿಂದಲೇ ಸಂಕಷ್ಟದ ಬದುಕು ಉದ್ಯೋಗವನ್ನು ಅರಸುವತ್ತ ಮುಖಮಾಡಿದ ಕಾರಣ ಹೊಸದಿಗಂತಕ್ಕೆ ಡಿಟಿಪಿ ಆಪರೇಟರ್ ಆಗಿ 1997ನೇ ಇಸವಿಯಲ್ಲಿ ಸೇರ್ಪಡೆಯಾದರು. ಸುಮಾರು 5 ವರ್ಷಗಳ ಕಾಲ ಡಿಟಿಪಿ ಆಪರೇಟರ್ ಆಗಿದ್ದು, ಆ ಕಾಲದಲ್ಲೇ ಸಿನಿಮಾ ದಿಗಂತ, ಸಾಪ್ತಾಹಿಕಕ್ಕೆ ಬರೆಯುವ ಹವ್ಯಾಸ ಬೆಳೆಸಿಕೊಂಡರು. ತದನಂತರ ವಿಜಯ ಕರ್ನಾಟಕದಲ್ಲಿ ಉದ್ಯೋಗಾವಕಾಶ ದೊರೆತ ಕಾರಣ 2003ರಲ್ಲಿ ವಿಜಯ ಕರ್ನಾಟಕ ಸೇರಿಕೊಂಡರು. ವಿಜಯ ಕರ್ನಾಟಕದಲ್ಲಿ ಡಿಟಿಪಿ ಆಪರೇಟರ್ ಆಗಿ ಸೇರಿದ ಇವರು ಪ್ರಾರಂಭದಿಂದಲೇ ತಮ್ಮ ಬರವಣಿಗೆಯನ್ನು ಒರೆಗಚ್ಚುವ ಕೆಲಸ ಮಾಡಿದರು. ಅದಕ್ಕೆ ತಕ್ಕಂತೆ ಹಿರಿಯರ ಮಾರ್ಗದರ್ಶನವೂ ಸಿಕ್ಕಿದ್ದು, ಕ್ರೀಡೆ, ಧಾರ್ಮಿಕ, ಸಾಹಿತ್ಯ, ಸಾಂಸ್ಕೃತಿಕ ಸಂಬಂಧಿತ ವಿಶೇಷ ವರದಿಗಳನ್ನು ಮಾಡಿ ಯಶಸ್ಸು ಕಂಡರು. ಇವರ ಪ್ರತಿಭೆಯನ್ನು ಗುರುತಿಸಿದ ವಿಕ ಸಂಸ್ಥೆ ಇವರನ್ನು ಹಂತಹಂತವಾಗಿ ಉಪಸಂಪಾದಕನನ್ನಾಗಿ, ಹಿರಿಯ ಉಪಸಂಪಾದಕನನ್ನಾಗಿ ಪದೋನ್ನತಿಗೊಳಿಸಿತು. ಇದಾದ ಬಳಿಕ ವಿಜಯ್ ಕೋಟ್ಯಾನ್ ಅವರ ಜೀವನ ದಿಸೆಯೇ ಬದಲಾಯ್ತು ಅನ್ನಬಹುದು. ತಮ್ಮ ಪತ್ರಿಕೋದ್ಯಮ ಜೀವನವನ್ನು ಚಾಲೆಂಜ್ ಆಗಿ ಸ್ವೀಕರಿಸಿ ಅವಕಾಶ ಬಳಸಿ ಯಶಸ್ಸಿನಲ್ಲಿ ಹಾದಿಯಲ್ಲಿ ಮುನ್ನಡೆದರ. 2015ರಿಂದ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಹಿರಿಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಾನವೀಯ, ರಾಜಕೀಯ, ಸಾಹಿತ್ಯ, ಜನಪದೀಯ ಸಂಗತಿಗಳು, ಧಾರ್ಮಿಕ ವರದಿಗಾರಿಕೆ, ಸಾಮಾಜಿಕ ಕಳಕಳಿ, ತನಿಖಾ ವರದಿಗಳು ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಬರವಣಿಗೆ ಕೈಚಳಕ ಒಲಿಸಿಕೊಂಡವರು. ಅದರಲ್ಲೂ ತುಳುನಾಡಿನ ಜಾನಪದ ಕ್ರೀಡೆ ಕಂಬಳ, ಯಕ್ಷಗಾನ, ಗ್ರಾಮೀಣ ಕ್ರೀಡೆಗಳ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದು, ವರದಿಗಳ ಸರಮಾಲೆಯನ್ನೇ ಮಾಡಿದವರು. ಕರಾವಳಿ ಜಿಲ್ಲೆಗೆ ಕಂಟಕ ಎನಿಸಿಕೊಂಡಿರುವ ಎತ್ತಿನಹೊಳೆ ಯೋಜನಾ ಪ್ರದೇಶಕ್ಕೆ ಹೋಗಿ ಸರಣಿ ವರದಿ ಪ್ರಕಟಿಸಿ ರಾಜ್ಯ ಸರಕಾರದ ಗಮನಸೆಳೆದವರು. ಇದು ಮಾತ್ರವಲ್ಲದೆ ಜಿಲ್ಲೆಯ ಮರಳುಗಾರಿಕೆ, ಕೆಂಪು ಕಲ್ಲು, ಬಾಕ್ಸೈಟ್ ಗಣಿಗಾರಿಕೆ ದಂಧೆಯಂತಹ ಕ್ಲಿಷ್ಟಕರ ತನಿಖಾ ವರದಿಗಳನ್ನು ಬಯಲಿಗೆಳೆದು ಆಡಳಿತದ ಗಮನ ಸೆಳೆದು ತನಿಖಾ ಆದೇಶಕ್ಕೆ ಕಾರಣಕರ್ತರು.
ವರದಿಗಾರಿಕೆ ಮಾತ್ರವಲ್ಲದೆ ಪತ್ರಿಕೋದ್ಯಮದಲ್ಲಿ ಉತ್ತಮ ಸಂಘಟನಾ ಚಾತುರ್ಯ, ಕಾರ್ಯಕ್ರಮ ಆಯೋಜನೆ ಮೂಲಕ ಗಮನಸೆಳೆದವರು. ನಟನೆ, ನಿರೂಪಣೆಯಲ್ಲೂ ಒಂದು ಹೆಜ್ಜೆ ಮುಂದೆ. ಸುಮಾರು 16ವರ್ಷಗಳ ಹಿಂದೆ ತಮ್ಮೂರಿನಲ್ಲಿ ಕರಾವಳಿಯ ಮೊತ್ತಮೊದಲ ‘ಕೆಸರ್ಡೊಂಜಿ ದಿನ’ ಆಯೋಜಿಸಿದ ಹೆಗ್ಗಳಿಕೆ ಇವರದು. ಬೊಂಡಂತಿಲ ಗ್ರಾಮದಲ್ಲಿ ಸಂಘಸಂಸ್ಥೆ ಮುಖೇನ ಮಕ್ಕಳಲ್ಲಿರುವ ಪ್ರತಿಭೆಯನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ನಿರಂತರ ಕಾರ್ಯಕ್ರಮ ಆಯೋಜಿಸಿಕೊಂಡು ಬಂದವರು. ಈ ರೀತಿ ಉದ್ಯೋಗ ಕ್ಷೇತ್ರವಲ್ಲದೆ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡ ವ್ಯಕ್ತಿತ್ವ ಇವರದು.
2019ರಲ್ಲಿ ದೇರಳಕಟ್ಟೆಯಲ್ಲಿ ಭಗ್ನ ಪ್ರೇಮಿಯೊಬ್ಬನಿಂದ ಇರಿತಕ್ಕೆ ಒಳಗಾಗಿ ಅದೆಷ್ಟೋ ಕಾಲ ಜೀವಚ್ಛವವಾಗಿ ಮಲಗಿದ್ದ ಹೆಣ್ಮಗಳೊಬ್ಬಳ ಮತ್ತೆ ನಿಧಾನಕ್ಕೆ ಚೇತರಿಸಿಕೊಂಡ ಕ್ಷಣಗಳನ್ನು ಮಾನವೀಯ ನೆಲೆಯಲ್ಲಿ ವಿಜಯ್ ಕೋಟ್ಯಾನ್ ಅವರು ವರದಿ ಮಾಡಿದ್ದು, ಆ ವರದಿಗೆ ಪ.ಗೋ. ಪ್ರಶಸ್ತಿ ಒಲಿದು ಬಂದಿದೆ.
ವಿಜಯ್ ಕೋಟ್ಯಾನ್ ಅವರು ತಂದೆ-ತಾಯಿ, ಪತ್ನಿ ಸೌಮ್ಯಶ್ರೀ, ಮಗಳು ಚಾರ್ವಿ ಅಂಚನ್, ಸಹೋದರ ಕುಟುಂಬದ ಜತೆ ನೀರುಮಾರ್ಗದ ಪಡು ಬೊಂಡಂತಿಲದಲ್ಲಿ ವಾಸಿಸುತ್ತಿದ್ದಾರೆ.

ದಕ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ಪ.ಗೋ. ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ (ಪದ್ಯಾಣ ಗೋಪಾಲಕೃಷ್ಣ)ಯು ಈ ಬಾರಿ ವಿಜಯ ಕೋಟ್ಯಾನ್ ಪಡು ಅವರಿಗೆ ಲಭಿಸಿದೆ. ಅವರಿಗೆ ಅಭಿನಂದನೆಗಳು.


Share:

More Posts

Category

Send Us A Message

Related Posts

ಬಹರೈನ್ ನಲ್ಲಿ ನಡೆದ ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಬಹರೈನ್ ಇದರ ನೂತನ ಅಧ್ಯಕ್ಷರಾಗಿ ರಾಜ್ ಕುಮಾರ್ ಆಯ್ಕೆ


Share       ಮುಂಬಯಿ, (ಆರ್‌ಬಿಐ) ಜ.೧೧ : ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಬಹರೈನ್ ಇದರ ನೂತನ ಸಮಿತಿಯ ಪದಗ್ರಹನ ಹಾಗೂ ಕರ್ನಾಟಕ ಸಂಗಮ ಸಾಂಸ್ಕೃತಿಕ ಕಾರ್ಯಕ್ರಮ ಬಹರೈನ್ ನ ದಿ ಇಂಡಿಯಾನ್ ಕ್ಲಬ್ ಸಭಾಂಗಣದಲ್ಲಿ


Read More »

ಯುವವಾಹಿನಿ(ರಿ) ಕೂಳೂರು ಘಟಕ ಪದಗ್ರಹಣ ಸಮಾರಂಭದಲ್ಲಿ ಗೆಜ್ಜೆಗಿರಿ ಜಾತ್ರಾ ಮಹೋತ್ಸವದ ಆಮಂತ್ರಣ ಬಿಡುಗಡೆ


Share       ಯುವವಾಹಿನಿ(ರಿ) ಕೂಳೂರು ಘಟಕ ಪದಗ್ರಹಣ ಸಮಾರಂಭದಲ್ಲಿ ಗೆಜ್ಜೆಗಿರಿ ಜಾತ್ರಾ ಮಹೋತ್ಸವದ  ಆಮಂತ್ರಣ ಬಿಡುಗಡೆ ಗೆಜ್ಜೆಗಿರಿಯ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಯುವವಾಹಿನಿ ಪದಗ್ರಹಣ ಕಾರ್ಯಕ್ರಮದಲ್ಲಿ ಯುವ ವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷರಾದ ಲೋಕೇಶ್


Read More »

26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವಕ್ಕೆ ಪಾಲ್ಗೊಳ್ಳಲು ಕೇಂದ್ರ ಸರಕಾರದಿಂದ ಕೇಶವ ಕೋಟ್ಯಾನ್ ಅವರಿಗೆ ಆಹ್ವಾನ


Share       ಎಲ್ಲರ ಸಹಕಾರದಿಂದ ಸಾಧ್ಯವಾದ ಸಾಧನೆ. 80ನೇ ಬಡಗಬೆಟ್ಟು ವ್ಯಾಪ್ತಿಯಲ್ಲಿ ಮನೆ ಮನೆಗೆ ಕುಡಿಯುವ ನೀರು ಪೊರೈಸುವ ಕೇಂದ್ರ ಸರಕಾರದ ಮಹತ್ವಕಾಂಕ್ಷಿ ಯೋಜನೆಯನ್ನು ಸಮರ್ಥವಾಗಿ ಅನುಷ್ಠಾನ ಮಾಡುವಲ್ಲಿ ಉಡುಪಿ ಜಿಲ್ಲಾ ಪಂಚಾಯತಿ ಅಧಿಕಾರಿಗಳು, ನಮ್ಮಗ್ರಾಮ


Read More »

ಭರತನಾಟ್ಯದಲ್ಲಿ ವಿಧುಷಿ ಎಂಬ ಗೌರವ ಪಡೆದ ವಿಧುಷಿ ಅದಿತಿ ಪೂಜಾರಿ ಅವರಿಗೆ ಅಭಿನಂದನೆಗಳು


Share       ವಿಧುಷಿ ಅದಿತಿ ಪೂಜಾರಿ ಅವರಿಗೆ ಅಭಿನಂದನೆಗಳು  ನಿತ್ಯಾನಂದ ಮತ್ತು ತುಳಸಿಯವರ ಪುತ್ರಿ ಗುರು ವಿಧುಷಿ ಪ್ರತಿಮಾ ಶ್ರೀಧರ್ ಮತ್ತು ಶ್ರೀಧರ ಹೊಳ್ಳ ಅವರ ಮಾರ್ಗದರ್ಶನದಲ್ಲಿ ಭರತಾಂಜಲಿ (ಆರ್) ಕೊಟ್ಟಾರದಲ್ಲಿ ಕಲಿಕೆ ಅದಿತಿ ಅವರು


Read More »

ಅನಿತಾ ಪಿ.ತಾಕೊಡೆಯವರ ಸುವರ್ಣಯುಗ ಕೃತಿಗೆ ಡಾ. ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನ ಮುಂಬಯಿ ವತಿಯಿಂದ “ವಿಕಾಸ ಪುಸ್ತಕ ಬಹುಮಾನ”


Share       ಮುಂಬಯಿ:- ಹಿರಿಯ ಸಾಹಿತಿ, ಲೇಖಕ, ಪ್ರಾಧ್ಯಾಪಕ ಡಾ.ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನವು ಮುಂಬಯಿ ಕನ್ನಡ ಪುಸ್ತಕ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಕೊಡಮಾಡುತ್ತಾ ಬಂದ ಪುಸ್ತಕ ಬಹುಮಾನ ಯೋಜನೆಯಂತೆ 2023-24ರ ಸಾಲಿನ ವಿಕಾಸ’ ಪುಸ್ತಕ ಬಹುಮಾನಕ್ಕೆ,


Read More »

ಒಮಾನ್ ಬಿಲ್ಲವಾಸ್ ಕೂಟದ ನೂತನ ಅಧ್ಯಕ್ಷರಾಗಿ ಶ್ರೀಯುತ ಉಮೇಶ್ ಬಂಟ್ವಾಳ್ ಆಯ್ಕೆ


Share       ಬಂಟ್ವಾಳದವರಾಗಿರುವ ಉಮೇಶ್ ಬಂಟ್ವಾಳ್ ಅವರು ಮಂಗಳೂರು ವಿಶ್ವವಿದ್ಯಾಲಯ ವಾಣಿಜ್ಯ ಪದವಿಯನ್ನು ಪಡೆದಿದ್ದಾರೆ.   ಮಸ್ಕತ್ ನ ಒಮಾನ್ ದೇಶದಲ್ಲಿ ಸುಮಾರು 36 ವರ್ಷದಿಂದ ಅಲ್ ರ‌‌ವಾಸ್ ಹೋಲ್ಡಿಂಗ್ ಬಿಸಿನೆಸ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ


Read More »