TOP STORIES:

FOLLOW US

ಬಣ್ಣದ ಲೋಕದಲ್ಲಿ ಚರಿತ್ರೆ ಸೃಷ್ಟಿಸುವತ್ತ….ಕಿರುತೆರೆಯ ಮುದ್ದುಲಕ್ಷ್ಮಿ ಧಾರಾವಾಹಿಯ ಡಾ||ಧ್ರುವಂತ್ ಪಾತ್ರಧಾರಿ : ಚರಿತ್ ಬಾಳಪ್ಪ ಪೂಜಾರಿ


ಭವಿಷ್ಯದ ಹಾದಿಗೆ ಸಾಧನೆಯ ನಿರಂತರತೆಯ ಬೆಳಕು ಪಸರಿಸಿ ಚಿತ್ತದಲಿ ಚಿಂತನೆಯು ಟಿಸಿಲೊಡೆದಾಗ ಸಂಕಲ್ಪಿತದೆಡೆ ಸಾಕ್ಷಾತ್ಕಾರ ಸಾಧ್ಯ. ಬದುಕಿನಲ್ಲಿ ಹಾಗೆ-ಹೀಗೆಯ ಕನವರಿಕೆಗೆ ಕನರದೆ ಗುರಿಯೆಡೆಗೆ ಸಾಗಿ ಚರಿತ್ರೆ ಸೃಷ್ಟಿಸಲು ಹೊರಟಿರೋ ಕನಸಿಗ ಚರಿತ್ ಬಾಳಪ್ಪ ಪೂಜಾರಿ ಇವರ ಬಾಲ್ಯದ ಬಗ್ಗೆ ತಿಳಿಯುವುದಾದರೆ ತಂದೆ ಬಾಳಪ್ಪ ಕೊಡಗಿನ ಕೊಡ್ಲಿಪೇಟೆಯವರು. ತಾಯಿ ಪ್ರೇಮ ದಕ್ಷಿಣ ಕನ್ನಡದ ಬಂಟ್ವಾಳದವರು.

ಚರಿತ್ ಬಂಟ್ವಾಳದಲ್ಲಿ ಹುಟ್ಟಿದರೂ ಪ್ರಾಥಮಿಕ, ಪಿಯು ಶಿಕ್ಷಣದವರೆಗೆ ಕೊಡಗನ್ನು ಆಶ್ರಯಿಸಿ ನಂತರದ ಶಿಕ್ಷಣವನ್ನು ಕರಾವಳಿಯಲ್ಲಿ ಮುಂದುವರೆಸಿದರು. ಕೊಡಗೆಂಬ ವೀರತ್ವದ ಮಣ್ಣಲ್ಲಿ ಆಡಿ ಬೆಳೆದ ಇವರಿಗೆ ಸೈನ್ಯಕ್ಕೆ ಸೇರಬೇಕು ಅಥವಾ ಸೇವಾ ಧರ್ಮದ ವೈದ್ಯನಾಗಬೇಕೆಂಬ ಹಂಬಲವಿತ್ತು. ಕಾಲೇಜು ದಿನದಲ್ಲಿ ಪಠ್ಯೇತರ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಇವರು ಮಾಡೆಲಿಂಗ್ ಮತ್ತು ನಟನಾ ಕ್ಷೇತ್ರದ ಬಗೆಗೂ ಆಸಕ್ತಿಯುತರಾದರು. ಕಬಡ್ಡಿ, ವಾಲಿಬಾಲ್, ಶಟಲ್ ಇತ್ಯಾದಿ ಕ್ರೀಡೆಗಳಲ್ಲಿ ಭಾಗಿಯಾಗಿದ್ದು, ದೈನಂದಿನ ದೈಹಿಕ ಕಸರತ್ತಿನ ಮೂಲಕ ಸದೃಢ ಮೈಕಟ್ಟು ಕೂಡ ನಟನಾ ಕ್ಷೇತ್ರಕ್ಕೆ ಪೂರಕವಾದಂತಿತ್ತು. ಮುಂದೆ ಸ್ನಾತಕೋತ್ತರ ಪದವಿಯನ್ನು ಪಡೆದು ಉದ್ಯೋಗಕ್ಕೆ ಸೇರಿ ಕೈತುಂಬ ಸಂಬಳವಿದ್ದರು, ಮನಸ್ಸು ಬಣ್ಣದ ಬದುಕಿಗೆ ಮುಖಮಾಡಿತ್ತು.

ಏನಾದರಾಗಲಿ ಅಂದುಕೊಂಡು ಕೆಲಸಕ್ಕೆ ಗುಡ್ ಬೈ ಹೇಳಿ ನಟನಾ ಕ್ಷೇತ್ರದತ್ತ ಪಥ ಬದಲಿಸಿದರು. ಒಂದೆರಡು ವರ್ಷ ಕಾದರೂ ಅವಕಾಶ ಇವರ ಪಾಲಿಗೆ ಒಲಿಯಲಿಲ್ಲ. ಹೆತ್ತವರ ವಿರೋಧವು ಉಂಟಾಗಿ ಮತ್ತೆ ಮನಸ್ಸು ಉದ್ಯೋಗದತ್ತ ವಾಲಿತು. ದುಡಿದರೂ ಮನಸ್ಸಿನ ಮೂಲೆಯಲ್ಲಿ ಬಣ್ಣದ ಕನಸು ಹಾಗೆಯೇ ಇತ್ತು. ರಜಾ ಸಮಯ ಗೆಳೆಯನೊಬ್ಬನ ಕರೆಯಂತೆ ‘ಲವಲವಿಕೆ’ ಧಾರವಾಹಿಯ ಆಡಿಷನ್ನಲ್ಲಿ ಭಾಗವಹಿಸಿದರು. ಅಲ್ಲಿ ಆಯ್ಕೆಯಾದರು. ಮುಂದೆ 300 ಕಂತುಗಳನ್ನು ಪೂರೈಸಿದ ಈ ಧಾರವಾಹಿಯ ‘ಲಕ್ಕಿಯ’ ಪಾತ್ರ ಜನಮಾನಸದಲ್ಲಿ ಮೆಚ್ಚುಗೆಯಾಯಿತು.

‘ಅಮ್ಮ’ ಧಾರಾವಾಹಿಯಲ್ಲಿ ‘ನವೀನ’ ನಾಗಿ ಮಿಂಚಿದ್ದಾರೆ. ಉತ್ತಮ ನಟನೆಗಾಗಿ ”ಅತ್ಯುತ್ತಮ ನಟ ಪ್ರಶಸ್ತಿ”ಯ ಗರಿಯು ಇವರಿಗೆ ದೊರೆಯಿತು. ‘ಸರ್ಪ ಸಂಬಂಧ’ ಧಾರಾವಾಹಿಯ ನಂತರ ಸ್ಟಾರ್ ಸುವರ್ಣ ಚಾನೆಲ್ನ 700 ಕಂತು ಪೂರೈಸಿದ ‘ಮುದ್ದುಲಕ್ಷ್ಮಿ’ ಧಾರಾವಾಹಿಯಲ್ಲಿ ‘ಡಾ|| ಧ್ರುವಂತ್’ ಪಾತ್ರಧಾರಿಯಾಗಿ ಜನ-ಮನ ಗೆದ್ದಿದ್ದಾರೆ. ಕನ್ನಡ, ಮಲೆಯಾಳಿ, ತಮಿಳು ಭಾಷೆಯ ಜಾಹೀರಾತುಗಳಲ್ಲಿಯೂ ನಟಿಸಿದ್ದಾರೆ. ಇವರು ಸಿನಿಮಾ ಕ್ಷೇತ್ರಕ್ಕೂ ಪಾದರ್ಪಣೆ ಮಾಡಿರುತ್ತಾರೆ. ಕರ್ಮಯೋಗಿ ಚಲನಚಿತ್ರದೊಂದಿಗೆ, ಹಲವಾರು ಚಿತ್ರಗಳಲ್ಲಿ ನಟಿಸುವ ಬಗ್ಗೆ ಮಾತುಕತೆಯೂ ನಡೆದಿದೆ. ಆಸಕ್ತಿಗೆ ಸದಾ ಬೆನ್ನೆಲುಬಾಗಿ ಪತ್ನಿ ಮಂಜುಶ್ರೀ ಅವರಿದ್ದಾರೆ. ತನಗೆ ಬಂದ ಪಾತ್ರಗಳಿಗೆ ಶ್ರದ್ಧಾಪೂರ್ವಕವಾಗಿ ಜೀವ ತುಂಬುತ್ತಿರುವ ಚರಿತ್ ಅವಕಾಶ ನೀಡಿದ ನಿರ್ಮಾಪಕರು, ನಿರ್ದೇಶಕರಿಗೆ ಸದಾ ಚಿರ ಋಣಿಯಾಗಿದ್ದಾರೆ. ತಾನು ಆಸೆ ಪಟ್ಟಂತಹ ಈ ಕ್ಷೇತ್ರಕ್ಕೆ ಶ್ರಮಪಟ್ಟು ಕಾರ್ಯನಿರ್ವಹಿಸುತ್ತೇನೆ ಎಂಬ ಗಟ್ಟಿತನದ ಮಾತಿನ ಚರಿತ್ ಬಾಳಪ್ಪ ಪೂಜಾರಿ ರವರ ಬಣ್ಣದ ಬದುಕಿಗೆ ಶುಭವಾಗಲಿ ಎಂದು ಹಾರೈಸೋಣ.

✍️ ದೀಪಕ್ ಬೀರ ಪಡುಬಿದ್ರಿ


Share:

More Posts

Category

Send Us A Message

Related Posts

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »

ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ


Share       ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ ಡಾ. ಪವಿತ್ರ ಜಿ. ಪಿ. ಹಾಗೂ ಪ್ರವೀಣ್ ಬಿ.ಎಮ್  ರವರ ಮಾರ್ಗದರ್ಶನದಲ್ಲಿ  ಡಾ. ರಶ್ಮಿ ಹರ್ಷ ಪೂಜಾರಿ ಇವರು ರಸಾಯನ ಶಾಸ್ತ್ರ ವಿಭಾಗದಲ್ಲಿ


Read More »

ದುಬೈಯಲ್ಲಿ ಯಶಸ್ವಿ ಉದ್ಯಮಿಯಾಗಿ ಲೆಕ್ಕವಿಲ್ಲದಷ್ಟು ಸೇವೆಯನ್ನು ಸಮಾಜಕ್ಕೆ ಅರ್ಪಿಸುತ್ತಿರು ಸೇವಾ ಮಾಣಿಕ್ಯ ನಿಟ್ಟೆ ಸಂದೀಪ್ ಕೋಟ್ಯಾನ್ ಕಾರ್ಕಳ..!


Share       ಅನೇಕ ಜನ ಉದ್ಯಮ ಕ್ಷೇತ್ರದ ಯಶಸ್ವಿಯಾಗಿ ಮುಂದುವರೆದ ಉದ್ಯಮಿಗಳು ಪ್ರಸ್ತುತ ದಿನಗಳಲ್ಲಿ ಸಿಗುತ್ತಾರೆ, ಆದರೆ ತಾವು ಸಂಪಾದಿಸಿರುವ ಹಣವನ್ನು ಮಾತ್ರ ಸಮಾಜದಲ್ಲಿ ಕೇವಲ ಕಾರ್ಯಕ್ರಮ ಮನೊರಂಜನೆಗಳಿಗೆ ಬಳಸಿ ರಾಜಕೀಯ ನಾಯಕರು, ಉದ್ಯಮಿಗಳನ್ನು ಕರೆದು


Read More »

ಮಂಗಳೂರಿನ ಖ್ಯಾತ ಯುರೋಲಜಿಸ್ಟ್ ಡಾ. ಸದಾನಂದ ಪೂಜಾರಿಯವರಿಗೆ ಪ್ರೈಡ್ ಆಫ್ ನ್ಯಾಷನ್ ಅವಾರ್ಡ್.


Share       ಮಂಗಳೂರು : ಕಳೆದ ವರ್ಷ ಕರ್ನಾಟಕ ಸರಕಾರದಿಂದ ಡಾ. ಬಿ.ಸಿ.ರಾಯ್ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಸದಾನಂದ ಪೂಜಾರಿಯವರಿಗೆ ಬೆಂಗಳೂರಿನ ಅಶೋಕ ಪಂಚತಾರ ಹೋಟೆಲ್ ನಲ್ಲಿ ನಡೆದ ಏಷ್ಯಾ ಟುಡೇ ಹಮ್ಮಿ ಕೊಂಡಿದ್ದ


Read More »

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ


Share       ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ ಅವರಿಗೆ ಜನುಮದಿನದ ಶುಭಾಶಯಗಳು🎂 ಅವರ ಬಗ್ಗೆ ಮಾಹಿತಿ ಡಾ.ಅಂಚನ್ ಸಿ ಕೆ, ಅಂತರರಾಷ್ಟ್ರೀಯ ವ್ಯಾಪಾರ ಮತ್ತು


Read More »

ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ


Share       ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ ಕೋಟ: ಶ್ರೀಮಾತಾ ಅಸ್ಪತ್ರೆಯ ಮಾಲಿಕರಾದ ಡಾ.ಸತೀಶ ಪೂಜಾರಿ (54) ಅವರು ಗುರುವಾರ ಬೆಳಿಗ್ಗೆ ಅವರ ಕೋಟತಟ್ಟು ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ


Read More »