TOP STORIES:

ಬಣ್ಣದ ಲೋಕದಲ್ಲಿ ಚರಿತ್ರೆ ಸೃಷ್ಟಿಸುವತ್ತ….ಕಿರುತೆರೆಯ ಮುದ್ದುಲಕ್ಷ್ಮಿ ಧಾರಾವಾಹಿಯ ಡಾ||ಧ್ರುವಂತ್ ಪಾತ್ರಧಾರಿ : ಚರಿತ್ ಬಾಳಪ್ಪ ಪೂಜಾರಿ


ಭವಿಷ್ಯದ ಹಾದಿಗೆ ಸಾಧನೆಯ ನಿರಂತರತೆಯ ಬೆಳಕು ಪಸರಿಸಿ ಚಿತ್ತದಲಿ ಚಿಂತನೆಯು ಟಿಸಿಲೊಡೆದಾಗ ಸಂಕಲ್ಪಿತದೆಡೆ ಸಾಕ್ಷಾತ್ಕಾರ ಸಾಧ್ಯ. ಬದುಕಿನಲ್ಲಿ ಹಾಗೆ-ಹೀಗೆಯ ಕನವರಿಕೆಗೆ ಕನರದೆ ಗುರಿಯೆಡೆಗೆ ಸಾಗಿ ಚರಿತ್ರೆ ಸೃಷ್ಟಿಸಲು ಹೊರಟಿರೋ ಕನಸಿಗ ಚರಿತ್ ಬಾಳಪ್ಪ ಪೂಜಾರಿ ಇವರ ಬಾಲ್ಯದ ಬಗ್ಗೆ ತಿಳಿಯುವುದಾದರೆ ತಂದೆ ಬಾಳಪ್ಪ ಕೊಡಗಿನ ಕೊಡ್ಲಿಪೇಟೆಯವರು. ತಾಯಿ ಪ್ರೇಮ ದಕ್ಷಿಣ ಕನ್ನಡದ ಬಂಟ್ವಾಳದವರು.

ಚರಿತ್ ಬಂಟ್ವಾಳದಲ್ಲಿ ಹುಟ್ಟಿದರೂ ಪ್ರಾಥಮಿಕ, ಪಿಯು ಶಿಕ್ಷಣದವರೆಗೆ ಕೊಡಗನ್ನು ಆಶ್ರಯಿಸಿ ನಂತರದ ಶಿಕ್ಷಣವನ್ನು ಕರಾವಳಿಯಲ್ಲಿ ಮುಂದುವರೆಸಿದರು. ಕೊಡಗೆಂಬ ವೀರತ್ವದ ಮಣ್ಣಲ್ಲಿ ಆಡಿ ಬೆಳೆದ ಇವರಿಗೆ ಸೈನ್ಯಕ್ಕೆ ಸೇರಬೇಕು ಅಥವಾ ಸೇವಾ ಧರ್ಮದ ವೈದ್ಯನಾಗಬೇಕೆಂಬ ಹಂಬಲವಿತ್ತು. ಕಾಲೇಜು ದಿನದಲ್ಲಿ ಪಠ್ಯೇತರ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಇವರು ಮಾಡೆಲಿಂಗ್ ಮತ್ತು ನಟನಾ ಕ್ಷೇತ್ರದ ಬಗೆಗೂ ಆಸಕ್ತಿಯುತರಾದರು. ಕಬಡ್ಡಿ, ವಾಲಿಬಾಲ್, ಶಟಲ್ ಇತ್ಯಾದಿ ಕ್ರೀಡೆಗಳಲ್ಲಿ ಭಾಗಿಯಾಗಿದ್ದು, ದೈನಂದಿನ ದೈಹಿಕ ಕಸರತ್ತಿನ ಮೂಲಕ ಸದೃಢ ಮೈಕಟ್ಟು ಕೂಡ ನಟನಾ ಕ್ಷೇತ್ರಕ್ಕೆ ಪೂರಕವಾದಂತಿತ್ತು. ಮುಂದೆ ಸ್ನಾತಕೋತ್ತರ ಪದವಿಯನ್ನು ಪಡೆದು ಉದ್ಯೋಗಕ್ಕೆ ಸೇರಿ ಕೈತುಂಬ ಸಂಬಳವಿದ್ದರು, ಮನಸ್ಸು ಬಣ್ಣದ ಬದುಕಿಗೆ ಮುಖಮಾಡಿತ್ತು.

ಏನಾದರಾಗಲಿ ಅಂದುಕೊಂಡು ಕೆಲಸಕ್ಕೆ ಗುಡ್ ಬೈ ಹೇಳಿ ನಟನಾ ಕ್ಷೇತ್ರದತ್ತ ಪಥ ಬದಲಿಸಿದರು. ಒಂದೆರಡು ವರ್ಷ ಕಾದರೂ ಅವಕಾಶ ಇವರ ಪಾಲಿಗೆ ಒಲಿಯಲಿಲ್ಲ. ಹೆತ್ತವರ ವಿರೋಧವು ಉಂಟಾಗಿ ಮತ್ತೆ ಮನಸ್ಸು ಉದ್ಯೋಗದತ್ತ ವಾಲಿತು. ದುಡಿದರೂ ಮನಸ್ಸಿನ ಮೂಲೆಯಲ್ಲಿ ಬಣ್ಣದ ಕನಸು ಹಾಗೆಯೇ ಇತ್ತು. ರಜಾ ಸಮಯ ಗೆಳೆಯನೊಬ್ಬನ ಕರೆಯಂತೆ ‘ಲವಲವಿಕೆ’ ಧಾರವಾಹಿಯ ಆಡಿಷನ್ನಲ್ಲಿ ಭಾಗವಹಿಸಿದರು. ಅಲ್ಲಿ ಆಯ್ಕೆಯಾದರು. ಮುಂದೆ 300 ಕಂತುಗಳನ್ನು ಪೂರೈಸಿದ ಈ ಧಾರವಾಹಿಯ ‘ಲಕ್ಕಿಯ’ ಪಾತ್ರ ಜನಮಾನಸದಲ್ಲಿ ಮೆಚ್ಚುಗೆಯಾಯಿತು.

‘ಅಮ್ಮ’ ಧಾರಾವಾಹಿಯಲ್ಲಿ ‘ನವೀನ’ ನಾಗಿ ಮಿಂಚಿದ್ದಾರೆ. ಉತ್ತಮ ನಟನೆಗಾಗಿ ”ಅತ್ಯುತ್ತಮ ನಟ ಪ್ರಶಸ್ತಿ”ಯ ಗರಿಯು ಇವರಿಗೆ ದೊರೆಯಿತು. ‘ಸರ್ಪ ಸಂಬಂಧ’ ಧಾರಾವಾಹಿಯ ನಂತರ ಸ್ಟಾರ್ ಸುವರ್ಣ ಚಾನೆಲ್ನ 700 ಕಂತು ಪೂರೈಸಿದ ‘ಮುದ್ದುಲಕ್ಷ್ಮಿ’ ಧಾರಾವಾಹಿಯಲ್ಲಿ ‘ಡಾ|| ಧ್ರುವಂತ್’ ಪಾತ್ರಧಾರಿಯಾಗಿ ಜನ-ಮನ ಗೆದ್ದಿದ್ದಾರೆ. ಕನ್ನಡ, ಮಲೆಯಾಳಿ, ತಮಿಳು ಭಾಷೆಯ ಜಾಹೀರಾತುಗಳಲ್ಲಿಯೂ ನಟಿಸಿದ್ದಾರೆ. ಇವರು ಸಿನಿಮಾ ಕ್ಷೇತ್ರಕ್ಕೂ ಪಾದರ್ಪಣೆ ಮಾಡಿರುತ್ತಾರೆ. ಕರ್ಮಯೋಗಿ ಚಲನಚಿತ್ರದೊಂದಿಗೆ, ಹಲವಾರು ಚಿತ್ರಗಳಲ್ಲಿ ನಟಿಸುವ ಬಗ್ಗೆ ಮಾತುಕತೆಯೂ ನಡೆದಿದೆ. ಆಸಕ್ತಿಗೆ ಸದಾ ಬೆನ್ನೆಲುಬಾಗಿ ಪತ್ನಿ ಮಂಜುಶ್ರೀ ಅವರಿದ್ದಾರೆ. ತನಗೆ ಬಂದ ಪಾತ್ರಗಳಿಗೆ ಶ್ರದ್ಧಾಪೂರ್ವಕವಾಗಿ ಜೀವ ತುಂಬುತ್ತಿರುವ ಚರಿತ್ ಅವಕಾಶ ನೀಡಿದ ನಿರ್ಮಾಪಕರು, ನಿರ್ದೇಶಕರಿಗೆ ಸದಾ ಚಿರ ಋಣಿಯಾಗಿದ್ದಾರೆ. ತಾನು ಆಸೆ ಪಟ್ಟಂತಹ ಈ ಕ್ಷೇತ್ರಕ್ಕೆ ಶ್ರಮಪಟ್ಟು ಕಾರ್ಯನಿರ್ವಹಿಸುತ್ತೇನೆ ಎಂಬ ಗಟ್ಟಿತನದ ಮಾತಿನ ಚರಿತ್ ಬಾಳಪ್ಪ ಪೂಜಾರಿ ರವರ ಬಣ್ಣದ ಬದುಕಿಗೆ ಶುಭವಾಗಲಿ ಎಂದು ಹಾರೈಸೋಣ.

✍️ ದೀಪಕ್ ಬೀರ ಪಡುಬಿದ್ರಿ


Related Posts

ಬಿಲ್ಲವಾಸ್ ಕತಾರ್ ನ ಸ್ವರ ಲಹರಿಗೆ ಸ್ವರ ಸೇರಿಸಿ ಕುಣಿದು ಕುಪ್ಪಳಿಸಿದ ಜನಸ್ತೋಮ


Share        ಬಿಲ್ಲವಾಸ್ ಕತಾರ್  ಆಯೋಜಿಸಿದ  ಸ್ವರ ಲಹರಿ, ಸಂಗೀತ ಸಂಜೆ ಕಾರ್ಯಕ್ರಮ  ದಿನಾಂಕ  ಮೇ 30, 2025 ರಂದು ಡಿ.ಪಿ.ಎಸ್. ಎಂ.ಐ.ಎಸ್ ಅಲ್ ವಕ್ರ   ಸಭಾಂಗಣದಲ್ಲಿ ನವ ಇತಿಹಾಸವನ್ನು ಸೃಷ್ಟಿಸಿತು.  ಅದ್ಭುತ ಸಂಗೀತ


Read More »

ಬಿಕ್ಕಳಿಕೆ ಬಂದಾಗ ಈ ಸರಳ ಟೆಕ್ನಿಕ್ ಟ್ರೈ ಮಾಡಿ ನೋಡಿ, ತಕ್ಷಣ ಕಡಿಮೆಯಾಗುತ್ತೆ


Share        ಬಿಕ್ಕಳಿಕೆ ಯಾರಿಗೆ ಬರಲ್ಲ ಹೇಳಿ? ಅದರಲ್ಲಿಯೂ ಈ ಬಿಕ್ಕಳಿಕೆ ಯಾರನ್ನೂ ಹೇಳಿ, ಕೇಳಿ ಬರುವಂತದ್ದಲ್ಲ. ಆದರೆ ಅವು ಬಂದಾಗ ಎಲ್ಲರ ಮುಂದೆ ಮುಜುಗರ ಆಗುವುದು ಮಾತ್ರ ತಪ್ಪುವುದಿಲ್ಲ. ಏಕೆಂದರೆ ಇದು ಯಾವಾಗ ಬೇಕಾದರೂ


Read More »

ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಗೆಜೆಟೆಡ್ ಅಧಿಕಾರಿಯಾಗಿ ಆಯ್ಕೆಯಾದ ಸುದೀಪ್ ರಾಜ್ ಮನೆಗೆ ಸೌದಿ ಬಿಲ್ಲಾವಾಸ್ ಅಧ್ಯಕ್ಷರಾದ ಸತೀಶ್ ಕುಮಾರ್ ಬಜಾಲ್ ಭೇಟಿ


Share        ಮಂಗಳೂರು: ಕೇಂದ್ರ ಲೋಕಸೇವಾ ಆಯೋಗ (UPSC) ನಡೆಸಲಾದ ಪರೀಕ್ಷೆಯಲ್ಲಿ ಲೆಫ್ಟಿನೆಂಟ್ (ವರ್ಗ -1 )ಗೆಜೆಟೆಡ್ ಅಧಿಕಾರಿ ಯಾಗಿ ಆಯ್ಕೆಯಾದ ಮಂಗಳೂರಿನ ಚಿಲಿಂಬಿ ಆದರ್ಶನಗರದ ಸುದೀಪ್ ರಾಜ್ ಅವರ ಮನೆಗೆ ತೆರಳಿ ಸೌದಿ ಬಿಲ್ಲಾವಾಸ್


Read More »

UPSC ನಡೆಸಲಾದ ಪರೀಕ್ಷೆಯಲ್ಲಿ. ಲೆಫ್ಟಿನೆಂಟ್ (ವರ್ಗ -1 )ಗೆಜೆಟೆಡ್ ಅಧಿಕಾರಿ ಯಾಗಿ ಸುದೀಪ್ ರಾಜ್ ಆಯ್ಕೆ


Share        ಕೇಂದ್ರ ಲೋಕಸೇವಾ ಆಯೋಗ (UPSC), ಮೇ 23, 2025 ರಂದು ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್ (CDS) ಪರೀಕ್ಷೆ (II), 2024 ರ ಅಂತಿಮ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಅದರಲ್ಲಿ ನಮ್ಮ ಬಿಲ್ಲವ


Read More »

ಮೊಂಟೆಪದವು ಕೋಡಿಯಲ್ಲಿ ಗುಡ್ಡ ಕುಸಿತ; ಪದ್ಮರಾಜ್ ಆರ್.ಪೂಜಾರಿ ಭೇಟಿ ಮಾಡಿ ಸಾಂತ್ವನ


Share        ಮಂಗಳೂರು: ಕರ್ನಾಟಕದ ಕರಾವಳಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಭೂಕುಸಿತ ಸಂಭವಿಸಿ ಮೂವರು ಸಾವನ್ನಪ್ಪಿದ್ದಾರೆ. ಒಬ್ಬ ಮಹಿಳೆ ಮತ್ತು ಆಕೆಯ ಮಗುವನ್ನು ಅವಶೇಷಗಳಿಂದ ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ


Read More »

ಶಾಸಕ ಸುನಿಲ್ ಕುಮಾರ್ ಸಹೋದರ ಸುಜಿತ್‌ ಕುಮಾರ್‌ ನಿಧನ


Share        ಕಾರ್ಕಳ: ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಸಹೋದರ ಸುಜಿತ್ ಕುಮಾರ್ (53) ಶುಕ್ರವಾರ (ಮೇ 23) ಅನಾರೋಗ್ಯದಿಂದ ನಿಧನರಾಗಿದ್ದಾರೆ.   ಅಂತಿಮ ವಿಧಿ ವಿಧಾನವು ಇಂದು ಶುಕ್ರವಾರ ನೆಕ್ಲಾಜೆ ಮನೆಯಲ್ಲಿ ಸಂಜೆ 6


Read More »