TOP STORIES:

FOLLOW US

ಬನ್ನಾಡಿ ಗರೋಡಿ ಚಾಂಪ ಪೂಜಾರಿ ಎಂಬ ಹಿರಿಯರೊಬ್ಬರ ಬಗ್ಗೆ -ವಸಂತ್ ಗಿಳಿಯಾರ್


ಬನ್ನಾಡಿ ಗರೋಡಿ ಚಾಂಪ ಪೂಜಾರಿ ಎಂಬ ಹಿರಿಯರೊಬ್ಬರ ಬಗ್ಗೆ
-ವಸಂತ್ ಗಿಳಿಯಾರ್

ಇವತ್ತು ಚಾಂಪ ಪೂಜಾರಿಯವರಿಲ್ಲ! ಆದರೆ ಅವರ ಹೆಸರು ಉಳಿದಿದೆ, ಧರ್ಮಸ್ಥಳ ಎಂದರೆ ನಮ್ಮ ಭಾಗದಲ್ಲಿ ಎಂದಿಗೂ ನೆನಪಾಗುವ ಹೆಸರದು. ಧರ್ಮಸ್ಥಳದ ಸತ್ಯ, ಧರ್ಮ,ನ್ಯಾಯ,ನೀತಿ ಎಂಬ ಆಶಯಗಳನ್ನೇ ಬದುಕಿ ತನ್ನ ಬದುಕನ್ನೇ ಸತ್ಯವೃತವಾಗಿಸಿಕೊಂಡು ಕಾಯವನ್ನ ಗಂದದ ಕೊರಡಿನಂತೆ ಸವೆಸಿದ ಕೀರ್ತಿಶೇಷರು ಚಾಂಪ ಪೂಜಾರಿ.

ಆ ಕಾಲದಲ್ಲಿ ಈ ಊರಿನಿಂದ ಧರ್ಮಸ್ಥಳಕ್ಕೆ ಹೋಗಬೇಕಿದ್ದರೆ, ಖಾವಂದರ ನ್ಯಾಯ ಛಾವಡಿಯಲ್ಲಿ ವಾಗ್ ಕಲಹ ಪರಿಹಾರವಾಗಬೇಕಿದ್ದರೆ, ಸಸೂತ್ರವಾಗಿ ಮಂಜುನಾಥ ಸ್ವಾಮಿಯ ದರ್ಶನವಾಗಬೇಕಿದ್ದರೆ, ಯಾವ ದಿನ ಬೇಕಿದ್ದರೂ ಧರ್ಮಸ್ಥಳಕ್ಕೆ ಹೋಗಿ ಸುರಕ್ಷಿತವಾಗಿ ಮರಳ ಬಲ್ಲೆ ಎಂಬ ವಿಶ್ವಾಸ ಆ ಕಾಲದ ಭಕ್ತ ಕುಟುಂಬಗಳಿಗೆ ಬಂದದ್ದಿದ್ದರೆ ಈ ಭಾಗದಲ್ಲಿ ಅದೆಲ್ಲದಕ್ಕೂ ಏಕೈಕ ಹೆಸರು ಬನ್ನಾಡಿ ಚಾಂಪ ಪೂಜಾರಿಯವರದ್ದು.

ಚಾಂಪ ಫುಜಾರಿ ಎಂದರೆ ತೆಂಕಣದ ಧರ್ಮದೊಡೆಯನ ಹೃದಯ ಮಂದಿರದಲ್ಲಿಟ್ಟು ಪೂಜಿಸಿದ ಪುಣ್ಯಾತ್ಮ. ಅವರಿಗೆ ಪೂಜ್ಯ ಖಾವಂದರೆಂದರೆ ರಾಮನ ಮುಂದೆ ಹನುಮ ಭಾಗಿದಂತಹ ನಿಷ್ಠೆ, ಅವರದ್ದು ನಿಷ್ಕಳಂಕ ಮನಸ್ಸು, ಪರಿಶುಭ್ರ ಚಾರಿತ್ರ್ಯ. ಬನ್ನಾಡಿ ಗರೋಡಿಯ ಪೂಜೆಯವರಾಗಿದ್ದ ಚಾಂಪ ಫೂಜಾರಿಯವರ ಪೂಜೆಗೆ, ಯಾವ ದೈವವೂ ನಲಿದು, ಒಲಿದು ಬರಬೇಕು, ಅಂಥಹ ತಾದಾತ್ಮ್ಯತೆ

ಚಾಂಪ ಪೂಜಾರಿ ತನ್ನ ವ್ಯಾನಿನ ಮೂಲಕ ಬನ್ನಾಡಿ, ಗಿಳಿಯಾರು,ಕಾವಡಿ, ವಡ್ಡರ್ಸೆ,ಕೋಟ, ಪಡುಕರೆ,ಉಪ್ಲಾಡಿ ಹೀಗೆ ಪುಟ್ಟ ಪುಟ್ಟ ಊರಿನ ದಾರಿಗಳೂ ಧರ್ಮಸ್ಥಳಕ್ಕೆ ಬೆಸೆಯುವ ಸೇತುವೆಯಾದವರು.ಧರ್ಮಸ್ಥಳದ ಪೂಜ್ಯ ಖಾವಂದರಿಗೆ ಇಂದಿಗೂ ಚಾಂಪ ಪೂಜಾರಿಯವರ ಮೇಲೆ ಅಪಾರ ಪ್ರೀತಿ ನೆನೆಕೆ, ಖಾವಂದರ ಹೃದಯ ಗೆದ್ದವರು ಚಾಂಪ ಪೂಜಾರಿ. ಅವರ ನಗೆಯೇ ಒಂದು ಪ್ರೀತಿಯ ಕಡಲು ಈ ಪೋಟೋದಲ್ಲೆ ನೋಡಿ ಅವರ ಮುಖದಲ್ಲಿನ ತೇಜೋಪೂರ್ಣ ವರ್ಚಸ್ಸು.

ಚಾಂಪ ಪೂಜಾರಿ ಒಂದರ್ಥದಲ್ಲಿ ಅಕ್ಷರವಿಲ್ಲದ, ಜಗದ ಅರಿವಿಲ್ಲದ ಆ ಕಾಲದ ಮುಗ್ದ ಕುಟುಂಬದ ಪಾಲಿಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನಮ್ಮ ಭಾಗದ ದ್ವಾರವೇ ಆಗಿದ್ದರು. ನಾಡಿದ್ದು ಅಭಿಮತ ಸಂಭ್ರಮಕ್ಕೆ ನೀವು ಬರುವುದಾದರೆ ’ಬನ್ನಾಡಿ ಚಾಂಪ ಪೂಜಾರಿ ಮಹಾದ್ವಾರದ ಮೂಲಕವೇ ಬರಬೇಕು. ಹೌದು, ಅಭಿಮತ ಸಂಭ್ರಮದ ಮಹಾದ್ವಾರಕ್ಕೆ ಚಾಂಪ ಪೂಜಾರಿಯವರ ಹೆಸರನ್ನ ಇರಿಸಲಿದ್ದೇವೆ. ಇದು ನಾವು ಅವರನ್ನ ಗೌರವದಿಂದ ನೆನೆಯುವ ಪರಿ. ಬರುತ್ತೀರಿ ತಾನೆ?

ಬನ್ನಿ ಗಿಳಿಯಾರಿಗೆ;ತೀರ ನಿಮ್ಮದೇ ಎನಿಸುವ ಊರಿಗೆ !

ಫೋಟೋ ಕೃಪೆ, ಅವರ ಮೊಮ್ಮಗ ಬಿಗ್ ಬಾಸ್ Dhanraj Cm ❤

Vasanth Giliyar


Share:

More Posts

Category

Send Us A Message

Related Posts

ACP ರೀನಾ ಸುವರ್ಣಗೆ ಜೀ ಕನ್ನಡ ನ್ಯೂಸ್‌ ಅಚೀವರ್ಸ್‌ ಅವಾರ್ಡ್ಸ್‌- 2025


Share       3ನೇ ವಾರ್ಷಿಕೋತ್ಸವದ ಅಂಗವಾಗಿ ಜೀ ಕನ್ನಡ ನ್ಯೂಸ್‌ ವತಿಯಿಂದ, Zee Achievers Awards ಕಾರ್ಯಕ್ರಮವನ್ನು ದಿ ರಿಟ್ಸ್‌ ಕಾರ್ಲ್‌ಟರ್ನ್‌ನಲ್ಲಿ ಆಯೋಜಿಸಲಾಗಿತ್ತು, ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯಾತಿಗಣ್ಯರನ್ನು ಗುರುತಿಸಿ ಜೀ ಕನ್ನಡ


Read More »

ಮುಂಬಯಿ ಎನ್‌ಸಿಪಿ (ಎಸ್‌ಪಿ) ಈಶಾನ್ಯ ಜಿಲ್ಲಾ ನಿರೀಕ್ಷಕರಾಗಿ ಲಕ್ಷ್ಮಣ್ ಸಿ. ಪೂಜಾರಿ ಚಿತ್ರಾಪು ಆಯ್ಕೆ


Share       ಮುಂಬಯಿ, ಮಾ. 21: ಎನ್‌ಸಿಪಿ (ಎಸ್‌ಪಿ) ಈಶಾನ್ಯ (ಉತ್ತರ ಮುಂಬಯಿ) ಜಿಲ್ಲಾ ನಿರೀಕ್ಷಕರಾಗಿ ತುಳು-ಕನ್ನಡಿಗಲಕ್ಷ್ಮಣ್ ಸಿ. ಪೂಜಾರಿ ಚಿತ್ರಾಪು ಅವರನ್ನು ಪಕ್ಷದ ಅಧ್ಯಕ್ಷೆ ರಾಖಿ ಜಾಧವ್ ಅವರು ನೇಮಕ ಮಾಡಿದ್ದಾರೆ. ಮಂಗಳೂರು ಚಿತ್ರಾಪು


Read More »

ಬಿಲ್ಲವಾಸ್ ಫ್ಯಾಮಿಲಿ ದುಬೈ ಸಂಘಟನೆ ; ಉಪ ಪೊಲೀಸ್ ಅಧಿಕ್ಷಕರಾದ ಎಸ್ ಮಹೇಶ್ ಕುಮಾರ್ ರವರ ಮನದಾಳದ ಮಾತು


Share       ಬಿಲ್ಲವಾಸ್ ಫ್ಯಾಮಿಲಿ ದುಬೈ, ಸಮುದಾಯದ ಸಾಮಾಜಿಕ ಚಟುವಟಿಕೆಗಳಲ್ಲಿ ಮಂಚೂಣಿ ಯಲ್ಲಿರುವ ಸಂಘಟನೆ. ಇತ್ತೀಚೆಗೆ ಖಾಸಗಿ ಕಾರ್ಯಕ್ರಮದ ನಿಮಿತ್ತ ದುಬೈಗೆ ಪ್ರಯಾಣ ಬೆಳೆಸಿದಾಗ ಈ ಸಂಘಟನೆಯ ಕಾರ್ಯವೈಖರಿ ಯನ್ನು ಕಣ್ಣಾರೆ ನೋಡುವ ಅವಕಾಶ ಒದಗಿ


Read More »

ನಾರಾಯಣ ಗುರುಗಳ ತತ್ವದಂತೆ ಎಲ್ಲರೂ ಜೊತೆಗೂಡಿ ಮುನ್ನೆಡೆಯಬೇಕು : ಪದ್ಮರಾಜ್ ಆರ್ ಪೂಜಾರಿ


Share       ಬಂಟ್ವಾಳ: ಯುವವಾಹಿನಿ(ರಿ.) ಮಾಣಿ ಘಟಕದ 2025-26 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ ದಿನಾಂಕ 10-03-2025 ರ ಸೋಮವಾರದಂದು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದ ನೂತನ ನಿವೇಶನದಲ್ಲಿ ಜರುಗಿತು. ಪದಗ್ರಹಣ


Read More »

ಕೊಲ್ಲಿ ರಾಷ್ಟ್ರ ಕತಾ‌ರ್ ದೇಶದಲ್ಲಿ ಕತಾರ್ ಬಿಲ್ಲವಸ್ ಸಂಘದ ಮೊಟ್ಟ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಅಪರ್ಣ ಶರತ್


Share       ಕೊಲ್ಲಿ ರಾಷ್ಟ್ರ ಕತಾ‌ರ್ ದೇಶದಲ್ಲಿ ನಮ್ಮ ತುಳುವರು ಹಲವಾರು ವರ್ಷಗಳಿಂದ ವಾಸವಿದ್ದಿದ್ದು, ಇಂದಿಗೂ ತುಳುವ ಮಣ್ಣಿನ ಪ್ರೀತಿಯನ್ನು ಮರೆತಿಲ್ಲ. ತುಳುನಾಡಿನ ಸಂಸ್ಕೃತಿ, ಆಚಾರ-ವಿಚಾರಗಳನ್ನು ಮರೆಯದೆ ಇಂದಿಗೂ ತಾವು ನೆಲೆ ನಿಂತ ಮಣ್ಣಿನಲ್ಲಿ ಸಂಭ್ರಮಿಸುತ್ತಾರೆ


Read More »

ದಮ್ಮಾಮ್: ಸೌದಿ ಬಿಲ್ಲವಾಸ್ ದಮ್ಮಾಮ್ ಸಂಘದ ಮಹಾಸಭೆ


Share       ದಮ್ಮಾಮ್: ಶ್ರೀ ನಾರಾಯಣ ಗುರು ಅವರ ತತ್ವ ಸಂದೇಶಗಳನ್ನು ಅಳವಡಿಸಿಕೊಂಡು ದಮ್ಮಾಮ್ ಬಿಲ್ಲವಾಸ್ ಸೌದಿ ಅರೇಬಿಯ ಸಂಘವನ್ನು ಮುನ್ನಡೆಸಬೇಕೆಂದು ಹಾಗು ಸಮಾಜದಲ್ಲಿರುವ ಶೋಷಿತರ , ಅಸಹಾಯಕರ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಾಗು


Read More »