TOP STORIES:

FOLLOW US

ಬನ್ನಾಡಿ ಗರೋಡಿ ಚಾಂಪ ಪೂಜಾರಿ ಎಂಬ ಹಿರಿಯರೊಬ್ಬರ ಬಗ್ಗೆ -ವಸಂತ್ ಗಿಳಿಯಾರ್


ಬನ್ನಾಡಿ ಗರೋಡಿ ಚಾಂಪ ಪೂಜಾರಿ ಎಂಬ ಹಿರಿಯರೊಬ್ಬರ ಬಗ್ಗೆ
-ವಸಂತ್ ಗಿಳಿಯಾರ್

ಇವತ್ತು ಚಾಂಪ ಪೂಜಾರಿಯವರಿಲ್ಲ! ಆದರೆ ಅವರ ಹೆಸರು ಉಳಿದಿದೆ, ಧರ್ಮಸ್ಥಳ ಎಂದರೆ ನಮ್ಮ ಭಾಗದಲ್ಲಿ ಎಂದಿಗೂ ನೆನಪಾಗುವ ಹೆಸರದು. ಧರ್ಮಸ್ಥಳದ ಸತ್ಯ, ಧರ್ಮ,ನ್ಯಾಯ,ನೀತಿ ಎಂಬ ಆಶಯಗಳನ್ನೇ ಬದುಕಿ ತನ್ನ ಬದುಕನ್ನೇ ಸತ್ಯವೃತವಾಗಿಸಿಕೊಂಡು ಕಾಯವನ್ನ ಗಂದದ ಕೊರಡಿನಂತೆ ಸವೆಸಿದ ಕೀರ್ತಿಶೇಷರು ಚಾಂಪ ಪೂಜಾರಿ.

ಆ ಕಾಲದಲ್ಲಿ ಈ ಊರಿನಿಂದ ಧರ್ಮಸ್ಥಳಕ್ಕೆ ಹೋಗಬೇಕಿದ್ದರೆ, ಖಾವಂದರ ನ್ಯಾಯ ಛಾವಡಿಯಲ್ಲಿ ವಾಗ್ ಕಲಹ ಪರಿಹಾರವಾಗಬೇಕಿದ್ದರೆ, ಸಸೂತ್ರವಾಗಿ ಮಂಜುನಾಥ ಸ್ವಾಮಿಯ ದರ್ಶನವಾಗಬೇಕಿದ್ದರೆ, ಯಾವ ದಿನ ಬೇಕಿದ್ದರೂ ಧರ್ಮಸ್ಥಳಕ್ಕೆ ಹೋಗಿ ಸುರಕ್ಷಿತವಾಗಿ ಮರಳ ಬಲ್ಲೆ ಎಂಬ ವಿಶ್ವಾಸ ಆ ಕಾಲದ ಭಕ್ತ ಕುಟುಂಬಗಳಿಗೆ ಬಂದದ್ದಿದ್ದರೆ ಈ ಭಾಗದಲ್ಲಿ ಅದೆಲ್ಲದಕ್ಕೂ ಏಕೈಕ ಹೆಸರು ಬನ್ನಾಡಿ ಚಾಂಪ ಪೂಜಾರಿಯವರದ್ದು.

ಚಾಂಪ ಫುಜಾರಿ ಎಂದರೆ ತೆಂಕಣದ ಧರ್ಮದೊಡೆಯನ ಹೃದಯ ಮಂದಿರದಲ್ಲಿಟ್ಟು ಪೂಜಿಸಿದ ಪುಣ್ಯಾತ್ಮ. ಅವರಿಗೆ ಪೂಜ್ಯ ಖಾವಂದರೆಂದರೆ ರಾಮನ ಮುಂದೆ ಹನುಮ ಭಾಗಿದಂತಹ ನಿಷ್ಠೆ, ಅವರದ್ದು ನಿಷ್ಕಳಂಕ ಮನಸ್ಸು, ಪರಿಶುಭ್ರ ಚಾರಿತ್ರ್ಯ. ಬನ್ನಾಡಿ ಗರೋಡಿಯ ಪೂಜೆಯವರಾಗಿದ್ದ ಚಾಂಪ ಫೂಜಾರಿಯವರ ಪೂಜೆಗೆ, ಯಾವ ದೈವವೂ ನಲಿದು, ಒಲಿದು ಬರಬೇಕು, ಅಂಥಹ ತಾದಾತ್ಮ್ಯತೆ

ಚಾಂಪ ಪೂಜಾರಿ ತನ್ನ ವ್ಯಾನಿನ ಮೂಲಕ ಬನ್ನಾಡಿ, ಗಿಳಿಯಾರು,ಕಾವಡಿ, ವಡ್ಡರ್ಸೆ,ಕೋಟ, ಪಡುಕರೆ,ಉಪ್ಲಾಡಿ ಹೀಗೆ ಪುಟ್ಟ ಪುಟ್ಟ ಊರಿನ ದಾರಿಗಳೂ ಧರ್ಮಸ್ಥಳಕ್ಕೆ ಬೆಸೆಯುವ ಸೇತುವೆಯಾದವರು.ಧರ್ಮಸ್ಥಳದ ಪೂಜ್ಯ ಖಾವಂದರಿಗೆ ಇಂದಿಗೂ ಚಾಂಪ ಪೂಜಾರಿಯವರ ಮೇಲೆ ಅಪಾರ ಪ್ರೀತಿ ನೆನೆಕೆ, ಖಾವಂದರ ಹೃದಯ ಗೆದ್ದವರು ಚಾಂಪ ಪೂಜಾರಿ. ಅವರ ನಗೆಯೇ ಒಂದು ಪ್ರೀತಿಯ ಕಡಲು ಈ ಪೋಟೋದಲ್ಲೆ ನೋಡಿ ಅವರ ಮುಖದಲ್ಲಿನ ತೇಜೋಪೂರ್ಣ ವರ್ಚಸ್ಸು.

ಚಾಂಪ ಪೂಜಾರಿ ಒಂದರ್ಥದಲ್ಲಿ ಅಕ್ಷರವಿಲ್ಲದ, ಜಗದ ಅರಿವಿಲ್ಲದ ಆ ಕಾಲದ ಮುಗ್ದ ಕುಟುಂಬದ ಪಾಲಿಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನಮ್ಮ ಭಾಗದ ದ್ವಾರವೇ ಆಗಿದ್ದರು. ನಾಡಿದ್ದು ಅಭಿಮತ ಸಂಭ್ರಮಕ್ಕೆ ನೀವು ಬರುವುದಾದರೆ ’ಬನ್ನಾಡಿ ಚಾಂಪ ಪೂಜಾರಿ ಮಹಾದ್ವಾರದ ಮೂಲಕವೇ ಬರಬೇಕು. ಹೌದು, ಅಭಿಮತ ಸಂಭ್ರಮದ ಮಹಾದ್ವಾರಕ್ಕೆ ಚಾಂಪ ಪೂಜಾರಿಯವರ ಹೆಸರನ್ನ ಇರಿಸಲಿದ್ದೇವೆ. ಇದು ನಾವು ಅವರನ್ನ ಗೌರವದಿಂದ ನೆನೆಯುವ ಪರಿ. ಬರುತ್ತೀರಿ ತಾನೆ?

ಬನ್ನಿ ಗಿಳಿಯಾರಿಗೆ;ತೀರ ನಿಮ್ಮದೇ ಎನಿಸುವ ಊರಿಗೆ !

ಫೋಟೋ ಕೃಪೆ, ಅವರ ಮೊಮ್ಮಗ ಬಿಗ್ ಬಾಸ್ Dhanraj Cm ❤

Vasanth Giliyar


Share:

More Posts

Category

Send Us A Message

Related Posts

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »

ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ


Share       ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ ಡಾ. ಪವಿತ್ರ ಜಿ. ಪಿ. ಹಾಗೂ ಪ್ರವೀಣ್ ಬಿ.ಎಮ್  ರವರ ಮಾರ್ಗದರ್ಶನದಲ್ಲಿ  ಡಾ. ರಶ್ಮಿ ಹರ್ಷ ಪೂಜಾರಿ ಇವರು ರಸಾಯನ ಶಾಸ್ತ್ರ ವಿಭಾಗದಲ್ಲಿ


Read More »

ದುಬೈಯಲ್ಲಿ ಯಶಸ್ವಿ ಉದ್ಯಮಿಯಾಗಿ ಲೆಕ್ಕವಿಲ್ಲದಷ್ಟು ಸೇವೆಯನ್ನು ಸಮಾಜಕ್ಕೆ ಅರ್ಪಿಸುತ್ತಿರು ಸೇವಾ ಮಾಣಿಕ್ಯ ನಿಟ್ಟೆ ಸಂದೀಪ್ ಕೋಟ್ಯಾನ್ ಕಾರ್ಕಳ..!


Share       ಅನೇಕ ಜನ ಉದ್ಯಮ ಕ್ಷೇತ್ರದ ಯಶಸ್ವಿಯಾಗಿ ಮುಂದುವರೆದ ಉದ್ಯಮಿಗಳು ಪ್ರಸ್ತುತ ದಿನಗಳಲ್ಲಿ ಸಿಗುತ್ತಾರೆ, ಆದರೆ ತಾವು ಸಂಪಾದಿಸಿರುವ ಹಣವನ್ನು ಮಾತ್ರ ಸಮಾಜದಲ್ಲಿ ಕೇವಲ ಕಾರ್ಯಕ್ರಮ ಮನೊರಂಜನೆಗಳಿಗೆ ಬಳಸಿ ರಾಜಕೀಯ ನಾಯಕರು, ಉದ್ಯಮಿಗಳನ್ನು ಕರೆದು


Read More »

ಮಂಗಳೂರಿನ ಖ್ಯಾತ ಯುರೋಲಜಿಸ್ಟ್ ಡಾ. ಸದಾನಂದ ಪೂಜಾರಿಯವರಿಗೆ ಪ್ರೈಡ್ ಆಫ್ ನ್ಯಾಷನ್ ಅವಾರ್ಡ್.


Share       ಮಂಗಳೂರು : ಕಳೆದ ವರ್ಷ ಕರ್ನಾಟಕ ಸರಕಾರದಿಂದ ಡಾ. ಬಿ.ಸಿ.ರಾಯ್ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಸದಾನಂದ ಪೂಜಾರಿಯವರಿಗೆ ಬೆಂಗಳೂರಿನ ಅಶೋಕ ಪಂಚತಾರ ಹೋಟೆಲ್ ನಲ್ಲಿ ನಡೆದ ಏಷ್ಯಾ ಟುಡೇ ಹಮ್ಮಿ ಕೊಂಡಿದ್ದ


Read More »

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ


Share       ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ ಅವರಿಗೆ ಜನುಮದಿನದ ಶುಭಾಶಯಗಳು🎂 ಅವರ ಬಗ್ಗೆ ಮಾಹಿತಿ ಡಾ.ಅಂಚನ್ ಸಿ ಕೆ, ಅಂತರರಾಷ್ಟ್ರೀಯ ವ್ಯಾಪಾರ ಮತ್ತು


Read More »

ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ


Share       ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ ಕೋಟ: ಶ್ರೀಮಾತಾ ಅಸ್ಪತ್ರೆಯ ಮಾಲಿಕರಾದ ಡಾ.ಸತೀಶ ಪೂಜಾರಿ (54) ಅವರು ಗುರುವಾರ ಬೆಳಿಗ್ಗೆ ಅವರ ಕೋಟತಟ್ಟು ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ


Read More »