TOP STORIES:

ಬಾಡಿ ಬಿಲ್ಡರ್ ಆಗಿ ದೊಡ್ಡ ಸಾಧನೆ ಮಾಡಲು ಹೊರಟಿರುವ ಬಜ್ಪೆಯ ಪ್ರತಿಭೆ ಸಂದೀಪ್ ಪೂಜಾರಿ


ಇಂದಿನ ಯುವ ಪೀಳಿಗೆ ಫೋಕಸ್ ಮಾಡುವುದು ಜಿಮ್ ಬಗ್ಗೆ. ಕಟ್ಟು ಮಸ್ತಾದ ಬಾಡಿಗಾಗಿ ಅದೆಷ್ಟೋ ಕಸರತ್ತು ಮಾಡುತ್ತಾರೆ. ಹೀಗೆ ಬಾಡಿ ಬಿಲ್ಡರ್ ಆಗಿ ದೊಡ್ಡ ಸಾಧನೆ ಮಾಡಲು ಹೊರಟಿರುವ ಬಜ್ಪೆಯ ಪ್ರತಿಭೆ ನಮ್ಮ ಸಂದೀಪ್ ಪೂಜಾರಿ

ಬಜ್ಪೆ ಯ ಕರಂಬರ್ ಗ್ರಾಮದ ರಮೇಶ್ ಪೂಜಾರಿ ಮತ್ತು ನಳಿನಾಕ್ಷಿ ದಂಪತಿಗಳ ಮಗ ಸಂದೀಪ್ ಪೂಜಾರಿ, ಇವರು ತನ್ನ ಪ್ರಾಥಮಿಕ ಹಾಗೂ ಪ್ರೌಢ ವಿದ್ಯಾ ಭ್ಯಾಸ ವನ್ನು ಹಿರಿಯ ಪ್ರಾಥಮಿಕ ಸಂತ ಜೋಸೆಫ್ ಪಿ.ಯು. ಕಾಲೇಜು ಬಜ್ಪೆ ಇಲ್ಲಿ ಮಾಡಿ ನಂತರ ಪದವಿಯನ್ನು ಶ್ರೀ ದುರ್ಗಾ ಪರಮೇಶ್ವರಿ ಫಸ್ಟ್ ಗ್ರೇಡ್ ಕಾಲೇಜ್ ಕಟೀಲ್ ಇಲ್ಲಿ ಮಾಡಿ ಮುಗಿಸಿದರು. ಬಾಡಿ ಬಿಲ್ಡಿಂಗ್ ಬಗ್ಗೆ ತುಂಬಾನೇ ಆಸಕ್ತಿ ಹೊಂದಿರುವ ಇವರು ಪರ್ಸನಲ್ ಟ್ರೈನರ್ ಆಗಿ ಹೊರದೇಶದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.ಇವರಿಗೆ ತರಬೇತಿಯನ್ನು ರವಿ ದೇವಾಡಿಗ ಮುಕ್ಕ ನೀಡುತ್ತಿದ್ದರು

ಬಡತನದಲ್ಲಿಯೇ ಬೆಳೆದು ಮೇಲೆ ಬಂದ ಇವರಿಗೆ ತಂದೆ ತಾಯಿ ಇಬ್ಬರು ಸಹೋದರಿಯರು ಅಲ್ಲದೆ ಬೇರೆ ಯಾರ ಪ್ರೋತ್ಸಾಹ ಬೆಂಬಲ ಸಿಗಲಿಲ್ಲಿ.ಸಾಧಿಸುವ ಛಲ ಒಂದು ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುದಕ್ಕೆ ಇವರೇ ಸಾಕ್ಷಿ.

“ಜಿಮ್” ಕಸ್ಟಮರ್ ಗೆ ಟೀಚ್ ಮಾಡಿ ಕಾಂಫಿಟೇಷನ್ಗೆ ಪ್ರಿಪೇರ್ ಮಾಡುವುದು ಇವರ ಕನಸು. ಎರಡು ಮೂರು ಕಾಂಫಿಟೇಷನಲ್ಲಿ ಭಾಗವಹಿಸಿದ ಇವರಿಗೆ ಜಾಸ್ತಿ ಯಾಗಿ ಸರ್ಟಿಫೈ ಡ್ ಪರ್ಸನಲ್ ಟ್ರೈನರ್ ಆಗಿ ಸೇವೆಯನ್ನು ಸಲ್ಲಿಸುವ ಆಸೆ . ಸರ್ಟಿಫಿಕೇಟೆಡ್ ಪರ್ಸನಲ್ ಟ್ರೈನಿಂಗ್ ಮುಗಿಸಿದ ಇವರು ಇಲ್ಲಿಗಿಂತ ಹೊರದೇಶ( ಅಬ್ರಾಡ್) ದಲ್ಲಿಯೇ ಟ್ರೈನರ್ ಆಗಿ ಸೇವೆಯನ್ನು ಸಲ್ಲಿಸಿದ್ದಾರೆ

ಇಷ್ಟು ಮಾತ್ರ ಅಲ್ಲದೆ ಇವರು ಒಬ್ಬ ನಿಸ್ವಾರ್ಥ ಸಮಾಜ ಸೇವಕ ಬಡ ಜನರಿಗೆ, ಆಶ್ರಮ ಹೀಗೆ ಅನೇಕ ಕಡೆ ತನ್ನ ಕೈಲಾದಷ್ಟು ಸಹಾಯ ಮಾಡುವುದು ಅಲ್ಲದೆ 32ನೇ ಬಾರಿ ರಕ್ತ ದಾನ ಮಾಡಿದ ಯುವ ಸಮಾಜ ಸೇವಕರು ಹೌದು.

ತನ್ನದೇ ಆದ ತರಬೇತಿ ಸೆಂಟರ್ ನ್ನು ಇಟ್ಟು ಇಂದಿನ ಯುವ ಪೀಳಿಗೆಗೆ ಉತ್ತಮ ರೀತಿಯ ತರಬೇತಿ ಕೊಟ್ಟು ಸ್ಪರ್ಧೆ ಗೆ ತಯಾರಿ ಮಾಡುವ ಇವರ ಬಹು ದೊಡ್ಡ ಕನಸು ನನಸಾಗಲಿ ಹಾಗೆಯೇ ಇವರು ನಂಬಿರುವ ದೈವದೇವರುಗಳ ಅನುಗ್ರಹ ಹಾಗೂ ಕಟೀಲು ಅಮ್ಮನ ಅನುಗ್ರಹ ಸದಾ ಇವರ ಮತ್ತು ಇವರ ಕುಟುಂಬದ ಮೇಲಿರಲಿ ಇನ್ನಷ್ಟು ಸೇವೆ ಮಾಡಲು ಶಕ್ತಿ ಕೊಡಲಿ ಎಲ್ಲಾ ಒಳ್ಳೆಯದಾಗಲಿ ಎಂದು ಹಾರೈಸುವ

✍️ ನಮ್ಮ ಬಿರ್ವೆರ್ ಉಡುಪಿ

 


Related Posts

ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ


Share        ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ


Read More »

ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ ಕೋಟ್ಯಾನ್‌ಗೆ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ


Share        ವಿಕ ಸುದ್ದಿಲೋಕ ಮಂಗಳೂರು ಸೌಹಾರ್ದತೆ ಬಿಂಬಿಸುವ ವರದಿಗೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ‘ಬ್ಯಾಂಡ್ ಮಂಗಳೂರು’ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ


Read More »

ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಆಯ್ಕೆ


Share        ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದ ಬಿಂಬಿಸುವ ವರದಿಗೆ ನೀಡಲಾಗುವ “ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿಗೆ ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯಕೋಟ್ಯಾನ್ ಪಡು  ಆಯ್ಕೆಯಾಗಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ 2024 ಅಕ್ಟೋಬರ್


Read More »

ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್( ರಿ) ಇದರ ನೂತನ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ ಆಯ್ಕೆ


Share        ಶ್ರೀ ಕ್ಷೇತ್ರ ಗೆಜ್ಜೆಗಿರಿಯ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ  ಚಾರಿಟೇಬಲ್ ಟ್ರಸ್ಟ್(ರಿ) ಇದರ ನೂತನ ಅಧ್ಯಕ್ಷರಾಗಿ ಬಿರ್ವ ಸೆಂಟರ್ ಇದರ ಮಾಲಕರಾದ  ಕೆ ಸಂಜೀವ ಪೂಜಾರಿ ಇವರನ್ನು ಕಂಕನಾಡಿ ಬ್ರಹ್ಮ


Read More »

8ನೇ ವಯಸ್ಸಿನಲ್ಲಿ ಕಪೋತಾಸನದ ಭಂಗಿಯಲ್ಲಿ ವಿಶ್ವ ದಾಖಲೆ ಮಾಡಿದ ಬಾಲಕಿ ಕುಮಾರಿ ಶರಣ್ಯ ಶರತ್!


Share        ಮಂಗಳೂರು, ಜೂ. 20 ಪನ್ನೀರಿನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಶರಣ್ಯ ಶರತ್ ಅವರು ತನ್ನ ಎಂಟನೆಯ ವಯಸ್ಸಿನಲ್ಲಿ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್


Read More »

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾಗಿ ಎಚ್.ಎಸ್.ಜಯರಾಜ್ ಆಯ್ಕೆ


Share        ಮಂಗಳೂರು: ಬ್ರಹ್ಮಶ್ರೀ ನಾರಾಯಣಗುರುಗಳು ಪ್ರತಿಷ್ಠಾಪಿಸಿದ ಕರ್ನಾಟಕದ ಏಕೈಕ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಆಡಳಿತ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ಜಂಟಿ ಸಭೆ ಕೇಂದ್ರದ ಮಾಜಿ ಸಚಿವ


Read More »