TOP STORIES:

FOLLOW US

ಬಿರುವೆರ್ ಕುಡ್ಲ(ರಿ) ಬೆದ್ರ ಘಟಕದ ಮೂಲಕ 1325Kg ಅಕ್ಕಿಯನ್ನು ಅಸಹಾಯಕ ಕುಟುಂಬಗಳಿಗೆ ವಿತರಣೆ..


ಬಿರುವೆರ್ ಕುಡ್ಲ(ರಿ) ಬೆದ್ರ ಘಟಕದ ಮೂಲಕ 1325Kg ಅಕ್ಕಿಯನ್ನು ಅಸಹಾಯಕ ಕುಟುಂಬಗಳಿಗೆ ವಿತರಣೆ..
ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶವನ್ನು ಮುಂದಿಟ್ಟುಕೊಂಡು ಯುವ ಸಮುದಾಯವನ್ನು ಜಾತಿ ಮತಬೇಧ ಮರೆತು ಸಂಘಟನೆಯಲ್ಲಿ ತೊಡಗಿಸಿಕೊಂಡು ಅಸಹಾಯಕರ ಸೇವೆ ಮಾಡುವಂತೆ ಸಂಘಟಿತರನ್ನಾಗಿ ಮಾಡುತ್ತಿರುವ ರಾಕೇಶ್ ಪೂಜಾರಿ ಅಧ್ಯಕ್ಷೆತೆಯ “ಬಿರುವೆರ್ ಕುಡ್ಲ(ರಿ)” ಸಂಘಟನೆಯ ಸ್ಥಾಪಕಾಧ್ಯಕ್ಷರಾದ, ಯುವ ನಾಯಕ “ಉದಯ್ ಪೂಜಾರಿ”ಯವರ ಜನುಮ ದಿನದಂದು(01/06/2020) “ಬೆದ್ರ ಘಟಕ”ದ ಸಂಕಲ್ಪದಂತೆ ಅಸಹಾಯಕರ ಹಸಿವನ್ನು ನೀಗಿಸುವ ಉದ್ದೇಶದಂತೆ ಮರೋಡಿಯ ಚಂದಪ್ಪ ಪೂಜಾರಿಯವರ ಹಡಿಲು ಇದ್ದ ಸುಮಾರು 4 ಎಕ್ರೆಯಷ್ಟು ಗದ್ದೆಯನ್ನು ಘಟಕದ ಉಪಾಧ್ಯಕ್ಷರಾದ “ಕೃಷ್ಣಪ್ಪ ಪೂಜಾರಿ”ಯವರ ನೇತೃತ್ವದಲ್ಲಿ ಘಟಕದ ಸದಸ್ಯರೆಲ್ಲರ ಸಹಕಾರದೊಂದಿಗೆ ಎರಡು ಹಂತಗಳಲ್ಲಿ ಸಾಗುವಳಿ ಮಾಡಿ, ಅದರಲ್ಲಿ ದೊರೆತಂತಹ ಅಕ್ಕಿಯನ್ನು ಇಂದು 53 ಫಲಾನುಭವಿಗಳನ್ನು ಗುರುತಿಸಿ ತಲಾ 25 kg ಯಂತೆ ಒಟ್ಟು 1325 KG ಅಕ್ಕಿಯನ್ನು ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವದಂತೆ ಜಾತಿ ಮತಭೇದ ಮರೆತು ಈ ದಿನ ಸರಳವಾಗಿ ಮೂಡಬಿದ್ರೆಯ ಸಮಾಜಮಂದಿರದಲ್ಲಿ ವಿತರಿಸಲಾಯಿತು..
ಈ ನಮ್ಮ ಕಾರ್ಯವನ್ನು ಕಂಡು ಸಮಾಜಮಂದಿರದ ಆಡಳಿತ ಮಂಡಲಿಯವರು ಉಚಿತವಾಗಿ ಸಭಾಂಗಣವನ್ನು ನೀಡುವ ಮೂಲಕ ಸಹಕರಿಸಿದರು..
ನಮ್ಮ ಆಶಯದಂತೆ ಈ ಗದ್ದೆಯಲ್ಲಿ ಸಾಗುವಳಿ ಮಾಡಿ ದೊರೆತಿರುವಂತಹ ಅಕ್ಕಿಯನ್ನು ಅಸಹಾಯಕ ಕುಟುಂಬಗಳಿಗಷ್ಟೇ ಅಲ್ಲದೇ ಮೂಕ ಪ್ರಾಣಿಗಳಾದ “ಬೀದಿ ನಾಯಿಗಳಿ”ಗೆ ಪ್ರತಿನಿತ್ಯ ಅನ್ನ ನೀಡುತ್ತಿರುವ ಮಂಗಳೂರಿನ ಶ್ರೀಮತಿ “ರಜನಿ ಶೆಟ್ಟಿ” ಯವರಿಗೂ 50kg ಅಕ್ಕಿಯನ್ನು ಇತ್ತೀಚೆಗೆ ಘಟಕದ ಪರವಾಗಿ ನೀಡಿರುತ್ತೇವೆ..
ಜೊತೆಗೆ ಈ ಸಾಗುವಳಿ ಕಾರ್ಯದಲ್ಲಿ ದೊರೆತಂತಹ ಬೈ ಹುಲ್ಲನ್ನು ವೇಣೂರಿನ ಗೋಶಾಲೆ ಹಾಗೂ ಕೆಂಜಾರುವಿನ ಕಪಿಲಾ ಗೋಶಾಲೆಗಳ ಗೋವುಗಳ ಮೇವಿಗಾಗಿ ಉಚಿತವಾಗಿ ಈ ಮೊದಲೇ ನೀಡಿರುತ್ತೇವೆ..

ಈ ಕೃಷಿಕಾರ್ಯಕ್ಕೆ ಮುಂದಾದ ದಿನದಿಂದ ಇವತ್ತಿನವೆರೆಗೂ ನಮ್ಮೊಂದಿಗೆ ಕೈಜೋಡಿಸಿ ವಿವಿಧ ರೀತಿಯಲ್ಲಿ ನೆರವಾದವರೆಲ್ಲರಿಗೂ ಬಿರುವೆರ್ ಕುಡ್ಲ(ರಿ) ಬೆದ್ರ ಘಟಕದ ಪರವಾಗಿ ಮನದಾಳದ ಕೃತಜ್ಞತೆಗಳು..
ಬಿರುವೆರ್ ಕುಡ್ಲ(ರಿ) ಬೆದ್ರ ಘಟಕ

 

www.billavaswarriors.com


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »