TOP STORIES:

ಬಿಲ್ಲವರಿಂದಲೇ ಬಿಲ್ಲವರಿಗಾಗಿಯೇ ಬಿಲ್ಲವರಿಗೋಸ್ಕರವೇ ಸಿದ್ದವಾಗಿದೆ ಬಿಲ್ಲವಾಸ್ ವಾರಿಯರ್ಸ್..


ಬಿಲ್ಲವ ಸಮಾಜ ಬಂಧುಗಳೇ,

ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಬಿಲ್ಲವರು ಸಾಧನೆ ಮಾಡಿರದ ಕ್ಷೇತ್ರಗಳೇ ಇಲ್ಲ ಎಂದರೆ ತಪ್ಪಗಲಾರದು. ನಮ್ಮ ಸಮಾಜ ಬಂಧುಗಳ ಸಾಧನೆ, ಸಂಭ್ರಮಗಳು ಕೇವಲ ತುಳುನಾಡಷ್ಟೇ ಅಲ್ಲದೇ ಜಗತ್ತಿನ ಉದ್ದಗಲಕ್ಕೂ ಹಬ್ಬಿ ನಿಂತಿರುವಂಥದ್ದು. ಆದರೆ ಕೆಲ ಸಾಧಕರು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳದ ಕಾರಣ ಅಂಥವರನ್ನು ಗುರುತಿಸುವ ಜವಾಬ್ದಾರಿ ನಮ್ಮದು. ಸಾಧಕರ ಜೊತೆಗೆ ಸಂಕಷ್ಟದಲ್ಲಿರೋ ಸಮಾಜದ ಬಂಧುಗಳ ಬದುಕಿನ ಮೇಲೂ ಬೆಳಕು ಚೆಲ್ಲಬೇಕಾದ ಮತ್ತೊಂದು ಕಾರ್ಯವೂ ಅಗಬೇಕಿದೆ. ಕಷ್ಟದಲ್ಲಿರೋ ಬಿಲ್ಲವ ಬಂಧುಗಳಿಗೆ ನೆರವಿನ ಹಸ್ತ ಚಾಚುವ ಸಮಾಜಮುಖಿ ಉದ್ದೇಶವೂ ಇದೆ. ಅಂಥವರನ್ನು ಗುರುತಿಸಿ ಸಮಾಜದ ಮುಂದಿಟ್ಟರೆ ಅವರ ಬದುಕು ಹೊಸ ಬೆಳಕು ಕಾಣಬಹುದು ಅನ್ನೋ ನಂಬಿಕೆ ನಮ್ಮದು. ಹೀಗೆ ಬಿಲ್ಲವ ಸಮಾಜದ ಸಮಗ್ರ ವಸ್ತು-ವಿಚಾರಗಳ ಅನಾವರಣಕ್ಕೆ ನಾವು ಹೊಸ ವೇದಿಕೆಯೊಂದನ್ನು ಕಲ್ಪಿಸುತ್ತಿದ್ದೇವೆ. ..’ ಸದ್ಯದ ಸೋಶಿಯಲ್ ಮೀಡಿಯಾ ಜಗತ್ತಿನಲ್ಲಿ ನಮ್ಮವರನ್ನು ತಲುಪಲು ಮತ್ತು ನಮ್ಮವರ ಸಾಧನೆಯ ಜೊತೆಗೆ ಸಮಗ್ರ ಮಾಹಿತಿಗಳನ್ನು ಅನಾವರಣಗೊಳಿಸಲು ಬಿಲ್ಲವಾಸ್ ವಾರಿಯರ್ಸ್ ತಂಡ ನಿಮ್ಮೆದುರು ಬರುತ್ತಿದೆ. ಫೇಸ್ ಬುಕ್, ಇನ್ಸ್ಟಾಗ್ರಾಂ, ವೆಬ್ ಸೈಟ್ ಮೂಲಕ ನಮ್ಮ ಸಮಾಜ ಬಂಧುಗಳನ್ನು ತಲುಪುವ ಉದ್ದೇಶ ನಮ್ಮದು. ನಮ್ಮವರ ಸಾಧನೆ, ಅಭಿವೃದ್ಧಿ, ಸಂಕಷ್ಟ, ನೆರವು, ಗೆಲುವು, ಜವಾಬ್ದಾರಿ, ಪ್ರತಿಭೆ…ಹೀಗೆ ಎಲ್ಲವಕ್ಕೂ ಒಂದೇ ವೇದಿಕೆಯಾಗಲಿದೆ ‘ಬಿಲ್ಲವಾಸ್ ವಾರಿಯರ್ಸ್‌’ …ನಮ್ಮೊಳಗಿನ ಯಾವುದೇ ಕ್ಷೇತ್ರದ ವಾರಿಯರ್ಸ್‌ಗಳನ್ನೂ ಸಮಾಜದ ಮುಂದೆ ಪರಿಚಯಿಸುವ ಜೊತೆಗೆ ಅಧ್ಯಯನ, ಕಾರ್ಯ, ಕಲ್ಪನೆಗಳನ್ನು ಒಂದುಗೂಡಿಸಿ ಸಾಮಾಜಿಕ ತಾಣಗಳ ಮೂಲಕ ಸಮಾಜದ ಮುಂದಿಟ್ಟು ಫಲಿತಾಂಶ ಪಡೆಯುವ ಹಂಬಲ ನಮ್ಮದು..ಬಿಲ್ಲವ ಬಂಧುಗಳೇ ಕೈ ಜೋಡಿಸಿ, ನೀವೂ ಬರೆಯಿರಿ, ಮಾಹಿತಿ ಹಂಚಿಕೊಳ್ಳಿ…ಅತೀ ಹೆಚ್ಚಿನ ಸಂಖ್ಯೆಯಲ್ಲಿ ಶೇರ್ ಮಾಡಿ,ಲೈಕ್ ಮಾಡಿ…

ಧನ್ಯವಾದಗಳು
ಟೀಂ ಬಿಲ್ಲವಾಸ್ ವಾರಿಯರ್ಸ್‌

ಫೇಸ್ ಬುಕ್, ಇನ್ಸ್ಟಾಗ್ರಾಂ, ವೆಬ್ ಸೈಟ್ ಲಿಂಕ್

Follow us on Instagram

Username: billavaswarriors
https://www.instagram.com/billavaswarriors

Follow Facebook Page:
https://m.facebook.com/billavawarriors/

www.billavasworriors.com


Related Posts

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »

ಕಲರ್ಸ್ ಕನ್ನಡ ಬಿಗ್ ಬಾಸ್ 12ರ ಸ್ಪರ್ಧಿ ಧ್ರುವಂತ್ (ಚರಿತ್ ಬಾಳಪ್ಪ ಪೂಜಾರಿ) ಜೀವನದ ಯಶೋಗಾಥೆ


Share         ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನು ಸಹಿಸಿಕೊಂಡು, ಅವಕಾಶಗಳಿಂದ ವಂಚಿತನಾದರೂ ಧೃತಿಗೆಡದೆ, ಸಾಧನೆಯ ಹಾದಿಯಲ್ಲಿ ಹಂತ ಹಂತವಾಗಿ ಮುನ್ನಡೆಯುತ್ತ ಇಂದು ಎಲ್ಲರ ಮನಗಳಲ್ಲಿ ಮನೆ ಮಾಡಿರುವಂತಹ ನಮ್ಮೆಲ್ಲರ ಹೆಮ್ಮೆಯ ಸಾಧಕ ಧ್ರುವಂತ್ ಇವರ ಯಶಸ್ಸಿನ ಹಿಂದಿನ


Read More »

🩸 ಓಮಾನ್ ಬಿಲ್ಲವಾಸ್ ವತಿಯಿಂದ ಆಯೋಜಿಸಲಾದ ಸಾಮೂಹಿಕ ರಕ್ತದಾನ ಶಿಬಿರ 🩸 ಬೌಶರ್ ಬ್ಲಡ್ ಬ್ಯಾಂಕ್, ಘಾಲಾ ಇಲ್ಲಿ ಯಶಸ್ವಿಯಾಗಿ ನಡೆಯಿತು.


Share          ಒಂದು ಕಾಲದಲ್ಲಿ ತುಳುನಾಡಿನ ಮೂಲದವರಾದ ಬಿಲ್ಲವರು ಕೃಷಿಕರಾಗಿ ಹಾಗೂ ಬೈದರಾಗಿ ತಮ್ಮ ಪರಿಶ್ರಮ, ಶ್ರಮಸಾಧನೆ ಮತ್ತು ಸಾಮಾಜಿಕ ಜವಾಬ್ದಾರಿಗಳ ಮೂಲಕ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆದವರು. ಪ್ರಕೃತಿಯೊಂದಿಗೆ ಸಮನ್ವಯದಿಂದ ಬದುಕನ್ನು ಸಾಗಿಸುತ್ತಾ, ಪರಸ್ಪರ


Read More »

ನಾನು ಕಂಡ ಪ್ರವೀಣ್ ಪೂಜಾರಿ


Share         ನಾನು ಕಂಡ ಪ್ರವೀಣ್ ಪೂಜಾರಿ ಸಾಧಾರಣ 15 ವರ್ಷಗಳಿಂದ ನಮ್ಮ ಆತ್ಮೀಯತೆ ಬಿಲ್ಲವ ಸಮಾಜದ ಸಾಮಾನ್ಯ ಜನರಿಗೂ ಸಮಸ್ಯೆ ಬಂದಂತ ಸಂದರ್ಭದಲ್ಲಿ ವಕೀಲನಾಗಿ ಅಥವಾ ಸಾಮಾಜಿಕ ಕಾರ್ಯಕರ್ತನಾಗಿ ನ್ಯಾಯ ದೊರಕಿಸಿಕೊಟ್ಟಂತಹ ಒಬ್ಬ ನಮ್ಮ


Read More »

ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ನಿಶಾ ಪೂಜಾರಿ ಉತ್ತೀರ್ಣರಾಗಿದ್ದಾರೆ.


Share         ಮುಂಬಯಿ : ಕಾಂದಿವಲಿ ಪೂರ್ವದ ಠಾಕೂರ್ ಕಾಂಪ್ಲೆಕ್ಸ್ ನಿವಾಸಿ ನಿಶಾ ಪೂಜಾರಿ ಅವರು ಇತ್ತೀಚೆಗೆ ಸೆಪ್ಟೆಂಬರ್‌ನಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಅವರು ಕಾರ್ಕಳ


Read More »

ಬಹುಮುಖ ಪ್ರತಿಭಾವಂತೆ ಹರ್ಷಿಕಾ ಕಾಣಿಯೂರು ಅವರಿಗೆ ಅಭಿನಂದನೆಗಳು


Share         ಹರ್ಷಿಕಾ ಕಾಣಿಯೂರು ಅವರ ಬಾಲ್ಯದ ವಯಸ್ಸಿನಲ್ಲಿಯೇ ಕೃಷಿ ಕಾರ್ಯದ ಮೇಲಿನ ಆಸಕ್ತಿ ಹಾಗೂ ಶ್ರಮವನ್ನು ಗುರುತಿಸಿ ಸೈಟ್ ರೀಟಾ ವಿದ್ಯಾ ಸಂಸ್ಥೆ ಗೌರವಿಸಿದ ಕ್ಷಣ ನಿಜಕ್ಕೂ ಹೆಮ್ಮೆಯದು. 🌾🌱👏   ಅಷ್ಟೇ ಅಲ್ಲದೆ,


Read More »