TOP STORIES:

ಬಿಲ್ಲವ ಅಸೋಸಿಯೇಷನ್ ಸೌದಿ ಅರೇಬಿಯಾ ಇದರ ವತಿಯಿಂದ ರಿಯಾದ್ ನಲ್ಲಿ ಬಹ್ಮಶೀ ನಾರಾಯಣ ಗುರುಗಳ 167ನೇ ಗುರು ಜಯಂತಿ ಆಚರಣೆ


ಬಿಲ್ಲವ ಅಸೋಸಿಯೇಷನ್ ಸೌದಿ ಅರೇಬಿಯಾ ಇದರ ವತಿಯಿಂದ ರಿಯಾದ್ ನಲ್ಲಿ ಬಹ್ಮಶೀ ನಾರಾಯಣ ಗುರುಗಳ 167 ನೇ ಗುರುಜಯಂತಿಯನ್ನು ಬಹಳ ವಿಜ್ರಂಭಣೆಯಿಂದ ಆಚರಿಸಲಾಯಿತು. ಇದರ ಅಂಗವಾಗಿ ಸಭಾ ಹಾಗೂ ಸಾಂಸೃತಿಕ ಕಾರ್ಯಕ್ರಮಗಳನ್ನುಆಯೋಜಿಸಲಾಗಿತ್ತು.


ಕಾರ್ಯಕ್ರಮದ ಪ್ರಾರಂಭದಲ್ಲಿಕುಶಾಲ್ ಕರ್ಕೇರ ಅವರು ಪ್ರಾಸ್ತಾವಿಕ ಭಾಷಣಗೈದರು. ಶ್ರೀಮತಿ ಶೀಬಾ ಸುಧೀರ್ ಉಳ್ಳಾಲ್, ಕೋರ್ ಸಮಿತಿ ಸದಸ್ಯರಾದಭಾಸ್ಕರ್ ಕೊಟ್ಯಾನ್, ಲೀಲಾದರ್ ಗುಜರನ್, ಸತೀಶ್ ಕುಮಾರ್ ಬಜಾಲ್, ಭಾಸ್ಕರ್ ಪೂಜಾರಿ, ಪ್ರಕಾಶ್ ಅಮೀನ್, ಸುಂದರ್ದಾಸ್ ಪೂಜಾರಿ, ಸತೀಶ್ ಅಮೀನ್ ,ಚಂದ್ರಶೇಕರ್ ಪೂಜಾರಿ , ಚೇತನ ಸದಾಶಿವ ಪೂಜಾರಿ,ರಕ್ಷಿತಾ ಜಗದೀಶ್, ಸುಮಿತ್ರಾ ಭಾಸ್ಕರ್ಇವರನ್ನು ಹಾಗೂ ಮುಖ್ಯ ಅತಿಥಿಗಳಾದ ಶ್ರೀಯುತ ಸದಾಶಿವ ಪೂಜಾರಿ, ಶೇಖರ್ ಕೋಟ್ಯಾನ್, ಉದಯ ಸನಿಲ್, ಚಂದ್ರಕಾಂತ್ಅಮೀನ್, ವಿಶ್ವನಾಥ್ ಸುವರ್ಣ , ಇವರುಗಳನ್ನು ವೇದಿಕೆಗೆ ಆಹ್ವಾನಿಸಿದರು.

ಅತಿಥಿಗಳು ದೀಪ ಬೆಳಗಿಸುವ ಮೂಲಕ ಹಾಗೂ ರಂಜಿತ್ ಕಕ್ಕಿಂಜಿ (ರಂಜು ತುಳು ರಂಗ ಪ್ರೇಮಿ) ವಿಘ್ನವಿನಾಶಕ ಶ್ಲೋಕದೂಂದಿಗೆಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತದಾನಂತರ ದಮ್ಮಾಮ್ಅಲ್ಖೋಬರ್ , ಜುಬೈಲ್ , ರಿಯಾದ್, ಅಭಾ. ಕಲಾವಿದರಿಂದ ನೃತ್ಯ, ಹಾಡುಗಳಲ್ಲದೆ. ವಿಭಿನ್ನ ರೀತಿಯ ಮನೋರಂಜನಾ 

ಕಾರ್ಯಕ್ರಮಗಳು ಪ್ರೇಕ್ಷಕರಮನಸೂರೆಗೊಂಡವು. ಹಾಗೂ

2021-2022 ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಮಂಗಳೂರು ಅಸೋಸಿಯೇಷನ್ ಸೌದಿ ಅರೇಬಿಯಾ, ದಮ್ಮಾಮ್(MASA) ಅಧ್ಯಕ್ಷರಾದ ಸತೀಶ್ ಕುಮಾರ್ ಬಜಾಲ್ ಅವರು ಪ್ರಕಟಿಸಿದರು.ಅಧ್ಯಕ್ಷರು ಶ್ರೀಯುತಲೀಲಾದರ್ ಗುಜರನ್ , ಹಾಗೂ ಗೌರವ ಅಧ್ಯಕ್ಷರು , ಕೆ.ಸಿ.ಭಾಸ್ಕರ್ , ಉಪಾಧ್ಯಕ್ಷರುಗಳುಚೇತನಾ ಸದಾಶಿವ ಪೂಜಾರಿ, ರಕ್ಷಿತಾಜಗದೀಶ್, ಪ್ರಧಾನ ಕಾರ್ಯದರ್ಶೀ ಪ್ರಕಾಶ್ ಅಮೀನ್ , ಜೊತೆ ಸಹಕಾರ್ಯ ದರ್ಶಿ ಸುಂದರ್ ದಾಸ್  ಪೂಜಾರಿ, ಖಜಾಂಚಿ  : ಚಂದ್ರಶೇಖರ್ ಹಾಗೂ ಉಪ ಖಜಾಂಚಿ ಸುಮಿತ್ರ ಭಾಸ್ಕರ್ ಇವರೆಲ್ಲರು ಅವಿರೋಧವಾಗಿ ಆಯ್ಕೆಯಾದರು.

ಕೊರೋನದ ಕಷ್ಟ ಸಮಯದಲ್ಲಿ ರೋಗಿಗಳಿಗೆ ಹಾಗೂ ಆರ್ಥಿಕವಾಗಿ ಸಮಸ್ಯೆ ಇದ್ದವರಿಗೆ ರಾತ್ತಿ ಹಗಲು ಎನ್ನದೆ, ಅಶಕ್ತರಿಗೆ ಸಹಾಯಮಾಡಿದ ಹಾಗೂ ಸೌದಿಯಲ್ಲಿ ಕೊರೋನ ಸಮಯದಲ್ಲಿ ಮತ್ತು ಇನ್ನಿತರ ಸಮಯದಲ್ಲಿ ಮೃತ ಪಟ್ಟವರ ಮೃತ ದೇಹವನ್ನು ಎಲ್ಲಾಸರಿಯಾದ ದಾಖಲೆ ಪತ್ರ ಗಳೊಂದಿಗೆ ಅವರ ಕುಟುಂಬಕ್ಕೆ ತಲುಪಿಸುವ ಮೂಲಕ ಮಾನವೀಯತೆ ಮೆರೆದ ನಾಲ್ವರುಮಹಾನೀಯರಾದ ಶ್ರೀ ಸತೀಶ್ ಕುಮಾರ್ ಬಜಾಲ್ , ಸತೀಶ್ ಅಮೀನ್ , ಸುಂದರ್ ದಾಸ್ ಪೂಜಾರಿ, ಸುದೀರ್ ಕೊಟ್ಯಾನ್ , ಇವರೆಲ್ಲರಿಗೆಆಪತ್ಭಾಂದವರುಎಂಬ ಪುರಸ್ಕಾರ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಪ್ರಕಾಶ್ ಅಮೀನ್ , ಅವರನ್ನುರೀಯಾದ್ ಬಿಲ್ಲವಾಸ್ ನಲ್ಲಿ ಹಲವು ವರ್ಷಗಳಿಂದ ಸಕ್ರೀಯವಾಗಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಅವರಿಗೆ ಶಾಲು ಹೊದಿಸಿಸನ್ಮಾನಿಸಲಾಯಿತು ಮತ್ತು 60 ವರ್ಷ ಸಂಪೂರ್ಣ ಗೊಂಡ ಸಂಘದ ಕ್ರೀಯಾಶೀಲಾ ಹಿರಿಯರಾದ ಶ್ರೀಕಾಂತ್ ಅಮೀನ್, ಹೆಜಮಾಡಿರರಿಗೆ

ಇವರಿಗೂ. ಸಂಘದ ವತಿಯಿದ ಸನ್ಮಾನಿಸಿ ಗೌರವಿಸಲಾಯಿತು.ಸಂಪೂರ್ಣ  ಕಾರ್ಯಕ್ರಮವನ್ನು ಪ್ರವೀಣ್ ಪೂಜಾರಿ, ಕುಂಜತಬೈಲ್ಅವರು ನಿರ್ವಹಿಸಿದರು.


Related Posts

ನಿಸ್ವಾರ್ಥ ಸೇವೆ ಸಲ್ಲಿಸಿ “ಜನಸ್ನೇಹಿ ಪೊಲೀಸ್” ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನಮ್ಮ ಸಮಾಜದ ಹೆಮ್ಮೆ ಎಸಿಪಿ ಶ್ರೀ ಎಸ್. ಮಹೇಶ್ ಕುಮಾರ್


Share         ಶ್ರೀ ಎಸ್. ಮಹೇಶ್ ಕುಮಾರ್ ಅವರು ಕಳೆದ 25 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ “ಜನಸ್ನೇಹಿ ಪೊಲೀಸ್” ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವುದು ಅವರ ಕರ್ತವ್ಯನಿಷ್ಠೆ ಮತ್ತು ಮಾನವೀಯತೆಯ ಪ್ರತೀಕವಾಗಿದೆ. 2012ರಲ್ಲಿ


Read More »

10ನೇ ಅಖಿಲ ಭಾರತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಭಾರತ್ ಬ್ಯಾಂಕಿಗೆ ಪ್ರತಿಷ್ಠಿತ ಲೀಡಿಂಗ್ ಬ್ಯಾಂಕ್ ಅವಾರ್ಡ್.


Share         ಪುಣೆಯ ಕೊರೆಗಾಂವ್ ಪಾರ್ಕ್‌ನ ಹೋಟೆಲ್ ವೆಸ್ಟಿನ್‌ನಲ್ಲಿ ನಡೆದ 10ನೇ ಅಖಿಲ ಭಾರತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಭಾರತ್ ಬ್ಯಾಂಕಿಗೆ ಪ್ರತಿಷ್ಠಿತ “ಲೀಡಿಂಗ್ ಬ್ಯಾಂಕ್ ಅವಾರ್ಡ್” (Leading Bank Award) ನೀಡಿ ಗೌರವಿಸಲಾಯಿತು.


Read More »

ಕುದ್ರೋಳಿ ಗೋಕರ್ಣ ಕ್ಷೇತ್ರ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪದ್ಮರಾಜ್ ಆರ್. ಸ್ಪಷ್ಟನೆ


Share         ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ನಿರ್ವಹಣೆಗೆ ಪ್ರಸ್ತುತ ಇರುವ ಸಮಿತಿಯ ಹೊರತಾಗಿ ಯಾವುದೇ ಹೊಸ ಸಮಿತಿ ರಚನೆಯಾಗಿಲ್ಲ ಎಂದು ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಶನಿವಾರ ಇಲ್ಲಿ ತಿಳಿಸಿದರು. ಕ್ಷೇತ್ರದ ಅಭಿವೃದ್ಧಿ


Read More »

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »

ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು – ₹67 ಕೋಟಿ ವೆಚ್ಚದ ಭೂಗತ ಕೇಬಲ್ ಯೋಜನೆಗೆ ಮಂಜೂರಾತಿ


Share         ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗಿದ್ದ ತಾಂತ್ರಿಕ ಸವಾಲಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ


Read More »

ಉಡುಪಿ ಸಿಟಿ ಬಸ್‌ ಚಾಲಕನ ಮಗಳು ಶಾಲೆಗೆ ಪ್ರಥಮ ರಾಂಕ್ – ದ್ರುತಿ ಪೂಜಾರಿ ಸಾಧನೆ…


Share         ಉಡುಪಿ: ಶ್ರಮ, ಸಂಕಲ್ಪ ಮತ್ತು ಕುಟುಂಬದ ಬೆಂಬಲ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ನಗರದ ಸಿಟಿ ಬಸ್ ಚಾಲಕರ ಮಗಳು ದ್ರುತಿ ಪೂಜಾರಿ ಉತ್ತಮ ಉದಾಹರಣೆ ಆಗಿದ್ದಾಳೆ. 23/04/2026 ರಂದು ಪ್ರಕಟವಾದ


Read More »