TOP STORIES:

FOLLOW US

ಬಿಲ್ಲವ ಸಂಘಟನೆಯ ವಿರುದ್ದ ಶರಣ್‌ ಪಂಪ್ವೆಲ್‌ ಆರೋಪ ಖಂಡನೀಯ – ಅಕ್ಷಿತ್‌ ಸುವರ್ಣ


ಮಂಗಳೂರು: ಎರಡು ಸಂಘಟನೆಗಳ ಮಧ್ಯದ ಮನಸ್ತಾಪದ ವಿಚಾರದಲ್ಲಿ ಬಜರಂಗದಳ ನಾಯಕರಾದ ಶರಣ್‌ ಪಂಪ್ವೆಲ್‌ ಅವರು ಸದಾ ಒಂದೇ ಜಾತಿ ಒಂದೆ ಮತ ಎಂಬ ಧ್ಯೇಯದೊಂದಿಗೆ ಕಾರ್ಯಾಚರಿಸುತ್ತಿರುವ ಬಿಲ್ಲವ ಸಂಘಟನೆಯ ಹೆಸರನ್ನು ಎಳೆದು ತಂದಿರುವುದು ಖಂಡನೀಯವಾಗಿದೆ ಎಂದು ದಕ ಜಿಲ್ಲಾ ಯುವ ಜೆಡಿಎಸ್‌ ಅಧ್ಯಕ್ಷ ಅಕ್ಷಿತ್‌ ಸುವರ್ಣ ಹೇಳಿದ್ದಾರೆ.ನಾರಾಯಣ ಗುರುಗಳ ತತ್ವದಡಿಯಲ್ಲಿ ಎಲ್ಲರೂ ಕೂಡ ಒಂದೇ ಜಾತಿ ಒಂದೇ ಧರ್ಮ ಎಂಬ ಧ್ಯೇಯದೊಂದಿಗೆ ಜಿಲ್ಲೆಯಲ್ಲಿ ಬಿಲ್ಲವ ಸಂಘಟನೆ ಕಾರ್ಯಾಚರಿಸುತ್ತಿದ್ದು ಯಾವುದೇ ರೀತಿಯ ಘರ್ಷಣೆ ಕಲಹಕ್ಕೆ ಅವಕಾಶ ಮಾಡಿಕೊಡದೆ ತನ್ನ ಪಾಡಿಗೆ ಸಮಾಜದ ಉದ್ದಾರಕ್ಕಾಗಿ ಕೆಲಸ ಮಾಡಿಕೊಂಡು ಬರುತ್ತಿದೆ. ಇತ್ತೀಚೆಗೆ ಬಜರಂಗದಳದ ನಾಯಕರಾಗಿರುವ ಶರಣ್‌ ಪಂಪ್ವೆಲ್‌ ಅವರು ಇನ್ನೊಂದು ಸಂಘಟನೆಯೊಂದಿಗೆ ನಡೆದಿರುವ ಮಾತಿನ ಕಲಹದ ವೇಳೆ ವಿನಾಕಾರಣ ಬಿಲ್ಲವ ಸಂಘಟನೆಯನ್ನು ಎಳೆದು ತಂದಿರುವುದು ಮಾಧ್ಯಮಗಳಿಂದ ತಿಳಿದುಬಂದಿದೆ. ಬಿಲ್ಲವ ಸಂಘಟನೆ ಎಂದೂ ಕೂಡ ಯಾವುದೇ ಜಾತಿ ಧರ್ಮದ ವಿಚಾರದಲ್ಲಿ ಮೂಗು ತೂರಿಸದೇ ತನ್ನ ಸಮುದಾಯದ ಉದ್ದಾರಕ್ಕೆ ಶ್ರಮಿಸುತ್ತಿರುವಾಗ ತಮ್ಮ ವೈಯುಕ್ತಿಕ ದ್ವೇಷಕ್ಕೆ ಬಿಲ್ಲವ ಸಂಘಟನೆಯ ಹೆಸರನ್ನು ಬಳಸಿಕೊಂಡಿರುವುದು ಸರಿಯಲ್ಲ. ಸಾಮಾಜಿಕ ನ್ಯಾಯದ ಅಡಿಯಲ್ಲಿ ಕೆಲಸ ಮಾಡಿಕೊಂಡು ಬಂದಿರುವಾಗ ಅನಾವಶ್ಯಕವಾಗಿ ಸಂಘಟನೆಗಳ ಹೆಸರನ್ನು ಬಳಸಿಕೊಂಡು ಸಮಾಜದಲ್ಲಿ ಘರ್ಷಣೆಗೆ ಕಾರಣವಾಗುವ ಪರಿಸ್ಥಿತಿ ಉಂಟಾಗುತ್ತದೆ ಎನ್ನುವುದನ್ನು ನಾಯಕರಾದವರು ಅರಿಯಬೇಕಾಗಿದೆ. ಇನ್ನಾದರೂ ಅನಾವಶ್ಯಕವಾಗಿ ಬಿಲ್ಲವ ಸಂಘಟನೆಯ ಹೆಸರನ್ನು ಇಲ್ಲ ಸಲ್ಲದ ವಿಚಾರಕ್ಕೆ ಎಳೆದು ತರುವುದನ್ನು ನಿಲ್ಲಿಸುವಂತೆ ಅವರು ಆಗ್ರಹಿಸಿದ್ದಾರೆ.


Share:

More Posts

Category

Send Us A Message

Related Posts

ಬೈದ್ಯೆರುಗಳಲ್ಲಿ ಲೀನವಾದ ದರ್ಶನ ಪಾತ್ರಿ ಶ್ರೀ ಸುರೇಶ್ ಪೂಜಾರಿ


Share         ಪ್ರಸಿದ್ದ ಬೈದ್ಯೇರುಗಳ ಪಾತ್ರಿಯಾದ  ಶ್ರೀ ಸುರೇಶ್ ಪೂಜಾರಿಯವರು ಅಲ್ಪಕಾಲದ  ಅಸೌಖ್ಯದ ಕಾರಣ ಇಂದು ಭಗವಂತನ ಪಾದ ಸೇರಿದರು. ಕಳತ್ತೂರು ಹಿರಿಯಣ್ಣ ಪೂಜಾರಿ ಹಾಗೂ ಶ್ರೀಮತಿ ಲೀಲಾವತಿ ಪೂಜಾರಿಯವರ ಮಗನಾದ ಶ್ರೀ ಸುರೇಶ್


Read More »

ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣರಿಗೆ ಐವತ್ತರ ಸಂಭ್ರಮ


Share       ಸಮಾಜದಲ್ಲಿ ಮಹತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿರುವ ವ್ಯಕ್ತಿ ಸಾಮಾಜಿಕವಾಗಿ ಮತ್ತು ಭಾವನಾತ್ಮಕವಾಗಿ ಸಮತೋಲನವನ್ನು ಸಾಧಿಸಿದರೆ ಮಾತ್ರ ಅವನು ಯಶಸ್ಸಿನ ಮೆಟ್ಟಿಲೇರಲು ಸಾಧ್ಯ. ‘ಸುಖ-ದುಃಖ, ಲಾಭ -ನಷ್ಟ ಸೋಲು-ಗೆಲುವನ್ನು ಸಮಾನವಾಗಿ ತೆಗೆದುಕೊಳ್ಳುವವನೇ ನಿಜವಾದ ಸುಖಿ’ ಎಂಬ


Read More »

ಮೂಡಬಿದಿರಿಯಲ್ಲೊಂದು 75 ಸಂಭ್ರಮ ಕ್ಕೆ ಸ್ನೇಹ ಸೇತುವಾದ ಸಿಂಗಾಪೂರ ಬಿಲ್ಲವ ಅಸೋಸಿಯೇಷನ್


Share       ಮೂಡಬಿದಿರಿಯಿಂದ ಸಿಂಗಪೂರಿಗೆ 🇸🇬: ಜಾಗತಿಕ ಸಮುದಾಯ ಸಂಬಂಧಗಳ ಬಲವರ್ಧನೆ: ಜಾಗತಿಕ ಸಮುದಾಯ ಸಂಬಂಧಗಳನ್ನು ಬಲಪಡಿಸುವ ದಿಕ್ಕಿನಲ್ಲಿ ಮಹತ್ವಪೂರ್ಣ ಹೆಜ್ಜೆವಹಿಸಿ, ಬಿಲ್ಲವ ಅಸೋಸಿಯೇಷನ್ ಸಿಂಗಪೂರಿನ ಸ್ಥಾಪಕರಾದ ಅಶ್ವಿತ್ ಬಂಗೇರಾ ಅವರು, ಬಿಲ್ಲವ ಅಸೋಸಿಯೇಷನ್ ಮೂಡಬಿದಿರಿಯ


Read More »

ಬಿಲ್ಲವಾಸ್ ಕತಾರ್ ನ ಇತಿಹಾಸದಲ್ಲಿ ಇನ್ನೊಂದು ಮೈಲಿಗಲ್ಲು. ಉಚಿತ ಆರೋಗ್ಯತಪಾಸಣಾ ಶಿಬಿರ ಮತ್ತು ಬಿಲ್ಲವಾಸ್ ಕತಾರ್ ನ ಅಧೀಕೃತ ಲಾಂಛನ (ಲೋಗೋ) ಬಿಡುಗಡೆ


Share       Noಹಲವು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯುತ್ತಿರುವ ಬಿಲ್ಲವಾಸ್ ಕತಾರ್ ರವರ  ವತಿಯಿಂದ ದಿನಾಂಕ ೧೧.೦೪.೨೦೨೫ ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಕಿಮ್ಸ್ ಮೆಡಿಕಲ್ ಸೆಂಟರ್, ಅಲ್ ಮಿಶಾಫ್, ಕತಾರ್ ಅವರ


Read More »

“ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಅವಾರ್ಡ್ ” ಪ್ರತಿಭಾ ಕುಳಾಯಿ ಆಯ್ಕೆ 


Share       ಮಂಗಳೂರು: ಸಮಾಜ ಸೇವೆಗಾಗಿ ಕುಳಾಯಿ ಫೌಂಡೇಶನ್ ರಚಿಸಿ ೫೦೦ಕ್ಕೂ ಹೆಚ್ಚು ಮಹಿಳೆ ಮತ್ತು ಮಕ್ಕಳಿಗೆ ಬದುಕು ಕಟ್ಟಿಕೊಡುತ್ತಿರುವ, ಯುವ ರಾಜಕಾರಣಿ ಪ್ರತಿಭಾ ಕುಳಾಯಿ, ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಅವಾರ್ಡ್ಸ್ ಗೆ ಆಯ್ಕೆಯಾಗಿದ್ದಾರೆ. ರಷ್ಯಾದ


Read More »

ವಿದೇಶದ ಇಸ್ರೇಲ್ ನಲ್ಲಿದ್ದು ತುಳುನಾಡಿನ ಸಂಕಷ್ಟದ ಕುಟುಂಬಕ್ಕೆ ಆರ್ಥಿಕ ಶಕ್ತಿ ತುಂಬಿದ ಮಹನೀಯ ವ್ಯಕ್ತಿ ದಿನಕರ ಪೂಜಾರಿ


Share       ನಾನು ನನ್ನವರು ಎಂಬ ಈ ಕಾಲ ಘಟ್ಟದಲ್ಲಿ ಸಮಾನ ಮನಸ್ಕರ ಜೊತೆ  ಸೇರಿ ದುಡಿದದ್ದರಲ್ಲಿ ಸ್ವಲ್ಪ ಪಾಲನ್ನು ಸಮಾಜಕ್ಕಾಗಿ ವಿನಿಯೋಗಿಸುವ ಮಹೋನ್ನತ ಕಾರ್ಯಗೈಯುತ್ತಿರುವ ವ್ಯಕ್ತಿ ದಿನಕರ ಪೂಜಾರಿ. ವಿದೇಶದಲ್ಲಿದ್ದು ಸಂಕಷ್ಟದ ಕುಟುಂಬಕ್ಕೆ ಆರ್ಥಿಕ


Read More »