TOP STORIES:

FOLLOW US

ಬ್ರಹ್ಮ ಶ್ರೀ ನಾರಾಯಣ ಗುರುಗಳ ಮಹಾಸಮಾಧಿ ದಿನ ಸೆಪ್ಟೆಂಬರ್21 ಇಂದು


ಮ. ವ.1104 ರ ಕನ್ನಿ 5ನೇ ದಿನ ಬೆಳಗಿನಿಂದಲೇ ಆಕಾಶವು ತೆಳುವಾದ ಮೊಡದಿಂದ ಕೂಡಿತ್ತು. ಮಧ್ಯಾಹ್ನವಾಗುತ್ತಿದ್ದಂತೆ ತುಂತುರು ಹನಿಗಳು ಬೀಳಲಾರಂಭಿಸಿದವು. ಗುರುಗಳು ಮಹಾನಿರ್ವಾಣಕ್ಕೆ ಪ್ರಾಪ್ತಿಯಾಗುವುದನ್ನು ಪ್ರಕೃತಿ ಸೂಚಿಸುವಂತೆ ತೋರುತ್ತಿತ್ತು. ಗುರುಗಳು ಪ್ರಸನ್ನರಾಗಿಯೇ ಇದ್ದರು. ಗುರುದೇವರು ಮೊದಲೇ ಸೂಚಿಸಿದ್ದಂತೆ ಆಶ್ರಮದಲ್ಲಿದ್ದ ಎಲ್ಲರಿಗೂ ಊಟವನ್ನು ಬಡಿಸಿದರು. ಪ್ರತಿಯೊಬ್ಬರ ಊಟವೂ ಆಯಿತು. ಕೆಲವು ದಿನಗಳಿಂದ ಹೆಚ್ಚಾಗಿ ಮೌನದಲ್ಲಿದ ಅವರು ಮಧ್ಯಾಹ್ನ ಶಿಷ್ಯರೊಂದಿಗೆ ಸ್ವಲ್ಪ ಮಾತನಾಡಿದರು. 3 ಗಂಟೆಯ ಸಮಯ ಆಗುತ್ತಿದ್ದಂತೆ ಶಿಷ್ಯರೊಂದಿಗೆ ತನಗೆ ಸಂಪೂರ್ಣ ಶಾಂತಿಯ ಅನುಭವ ವಾಗುತ್ತಿದೆ ಎಂದರು. ಅನೇಕ ಶಿಷ್ಯರು ಮಂತ್ರ ಪಠಣ ಮತ್ತು ಪ್ರಾರ್ಥನೆಗಳಲ್ಲಿ ನಿರತರಾಗಿದ್ದರು. 3.15 ಕ್ಕೆ ಗುರುಗಳು ಕುಳಿತುಕೊಳ್ಳಲು ಪ್ರಯತ್ನಿಸುತ್ತಿದ್ದಂತೆಯೆ ಬಳಿಯಲಿದ್ದವರ ಸಹಾಯದಿಂದ ಪದ್ಮಾಸನದಲ್ಲಿ ಕುಳಿತರು. ಶಿಷ್ಯರೆಲ್ಲರಿಗೂ ದೈವದಶಕವನ್ನು ಹಾಡಲು ಹೇಳಿದರು ದೈವದಶಕವನ್ನು ಹಾಡುತ್ತಿದ್ದಂತೆಯೇ ಹಾಗೆಯೇ ಧ್ಯಾನಸ್ಥರಾಗಿ ಕಣ್ಣುಗಳನ್ನು ನಿಧಾನವಾಗಿ ಮುಚ್ಚಿದರು. ಪದ್ಮಾಸನದಲ್ಲಿ ಧ್ಯಾನಸ್ಥರಾಗಿ ಯೋಗದಲ್ಲಿದ್ದ ಗುರುದೇವರು ಶಾಂತ ಚಿತ್ತದಿಂದ ಮಹಾಸಮಾಧಿಗೆ ಪ್ರಾಪ್ತರಾದರು.

ಮಹಾ ಸಮಾಧಿಯ ಈ ದಿನ ಕೇರಳದಲ್ಲಿ ಸಾರ್ವತ್ರಿಕ ರಜಾದಿನ. ವಿಶ್ವಾದ್ಯಂತ ಇಂದು ಸಾತ್ವಿಕ ಆಹಾರವನ್ನು ಸೇವಿಸಿ ಪೂಜೆ ಪ್ರಾರ್ಥನೆಯ ಮೂಲಕ ಗುರುಸ್ಮರಣೆ ಮಾಡುತ್ತಾರೆ ನಾವೂ ಕೂಡ ಈ ಪುಣ್ಯ ಕಾರ್ಯವನ್ನು ಮಾಡುವ.

ಥಿಯೋಸೊಫಿಕಲ್ ಸೊಸೈಟಿಯ ಎನ್ನಿಬೆಸಂಟ್ ತಮ್ಮ ಅಧಿಕೃತ ವರ್ತಮಾನ ಪತ್ರಿಕೆಯಾದ ಸನಾತನ ಧರ್ಮದಲ್ಲಿ ನಾರಾಯಣ ಗುರುಗಳು ಸಮಾಧಿಯಾದಾಗ ಹೀಗೆ ಬರೆಯುತ್ತಾರೆ. ” ಅವರೊಬ್ಬರು ಪ್ರಕಾಶಮಯ ಪೂರ್ಣ ಸೂರ್ಯನೇ ಆಗಿದ್ದರೆ… ಅವರು ಯೋಗದಲ್ಲಿ ಪತಂಜಲಿ. ಜ್ಞಾನದಲ್ಲಿ ಶಂಕರ, ತ್ಯಾಗದಲ್ಲಿ ಬುದ್ಧ, ಸ್ಥಿರತೆಯಲ್ಲಿ ನಭಿ, ಮಾನವ ಸೇವೆಯಲ್ಲಿ ಜೀಸಸ್,… ಅವರು ದೇವರು. ಮನುಷ್ಯ ರೂಪಧಾರಣೆ ಮಾಡಿದ ಅವತಾರ ಪುರುಷರಾದ ಅವರು ಮಹಿಮಾಯುಕ್ತ ತೇಜಸ್ಸಿನ ತನ್ನ ಜೀವನೊದ್ಧೇಶಗಳನ್ನು ಪೂರೈಸಿ, ಎಲ್ಲಿಂದ ಬಂದಿದ್ದರೋ ಅಲ್ಲಿಗೆ ತೆರಳಿದರು. ….ನಿಜವಾಗಿಯೂ ಅವರೊಬ್ಬ ಅವತಾರಿ. ಮನುಷ್ಯರಲ್ಲಿ ದೇವರು. ಭವಿಷತ್ತಿನ ಭಾರತ ಅವರನ್ನು ದೇವರಾಗಿ ಪೂಜಿಸುವುದು.”

(ಆಧಾರ ಶ್ರೀ ನಾರಾಯಣ ಗುರು ವಿಜಯ ದರ್ಶನ: ಬಾಬು ಶಿವಪೂಜಾರಿ)

✍ ರಾಜೇಂದ್ರ ಚಿಲಿಂಬಿ


Share:

More Posts

Category

Send Us A Message

Related Posts

ಸರ್ವಸಮಾನತೆಯ ಧಾರ್ಮಿಕ ತೆಯನ್ನು ಸಾಮಾಜಿಕ ನ್ಯಾಯದ ಪಥದಲ್ಲಿ ಮುನ್ನಡೆಸುವಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡಿದವರು ಜನಾರ್ಧನ ಪೂಜಾರಿ ಹಾಗೂ ಅವರ ಜೊತೆ ಗಟ್ಟಿಯಾಗಿ ನಿಂತವರು ಪದ್ಮರಾಜ್ ಆರ್


Share       ಸರ್ವಸಮಾನತೆಯ ಧಾರ್ಮಿಕ ತೆಯನ್ನು ಸಾಮಾಜಿಕ ನ್ಯಾಯದ ಪಥದಲ್ಲಿ ಮುನ್ನಡೆಸುವಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡಿದವರು ಜನಾರ್ಧನ ಪೂಜಾರಿ ಹಾಗೂ ಅವರ ಜೊತೆ ಗಟ್ಟಿಯಾಗಿ ನಿಂತವರು ಪದ್ಮರಾಜ್ ಆರ್ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಬ್ರಹ್ಮ


Read More »

ಬಂಟ್ವಾಳ: ಬಾಳೆಕಲ್ಲು ಗರಡಿಮನೆ ದೇವಕಿ ನಿಧನ


Share       ಬಂಟ್ವಾಳ: ಬಾಳೆಕಲ್ಲು ಗರಡಿಮನೆ ಶ್ರೀ ಕೊರಗಪ್ಪ ಪೂಜಾರಿಯವರ ಧರ್ಮಪತ್ನಿ ಶ್ರೀಮತಿ ದೇವಕಿ(85 ವ ) ಇವರು 21.10.2024 ನೇ ಸೋಮವಾರ ನಿಧನರಾಗಿದ್ದಾರೆ. ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು. ಎರಡು


Read More »

ಬಿರುವೆರ್ ಕುಡ್ಲ ಸಂಘಟನೆಯಿಂದ ಯುವವಾಹಿನಿಗೆ ಗೌರವದ ಸನ್ಮಾನ.. ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿ ಸನ್ಮಾನ ಸ್ವೀಕಾರ


Share       ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಬಿರುವೆರ್ ಕುಡ್ಲ(ರಿ) ಮಂಗಳೂರು ಸಂಘಟನಯ ದಶಮಾನೋತ್ಸವದ ಸವಿನೆನಪಿಗಾಗಿ, ರಾಜ್ಯದ ಪ್ರತಿಷ್ಠಿತ ಯುವವಾಹಿನಿ ಸಂಸ್ಥೆಯು ಕಳೆದ 36 ವರ್ಷಗಳ ಸಮಾಜಮುಖಿ ಸೇವೆಯನ್ನು ಗುರುತಿಸಿ ಗೌರವಿಸಿ ಗೌರವದ


Read More »

ದೇಯಿ ಬೈದೆತಿ- ಕೋಟಿ ಚೆನ್ನಯರ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ಎಂಬ ಪುಣ್ಯಭೂಮಿ


Share       ಗೆಜ್ಜೆಗಿರಿ ನಂದನ ಬಿತ್ತಲ್ ಎಂಬ ಹೆಸರು ಕೇಳುತ್ತಿದ್ದಂತೆ ಮೈ ರೋಮಾಂಚನಗೊಳ್ಳುತ್ತದೆ. ಕ್ಷೇತ್ರದ ಇತಿಹಾಸವನ್ನು ಕೇಳುವಾಗ ಅವಳಿ ವೀರಪುರುಷರ ಮೂಲಸ್ಥಾನ ಯಾವುದು ಎಂಬ ಪ್ರಶ್ನೆಗೂ ಉತ್ತರ ಸಿಗುತ್ತದೆ. ಅಂತಹ ಪುಣ್ಯ-ಪವಿತ್ರ ಭೂಮಿಯಲ್ಲಿ ದೇಯಿ ಬೈದೈತಿ


Read More »

” ನವ ಕರ್ನಾಟಕ ರತ್ನ ” ಪ್ರಶಸ್ತಿಗೆ ಸತೀಶ್ ಕುಮಾರ್ ಬಜಾಲ್ ಆಯ್ಕೆ


Share       ಬೆಂಗಳೂರು: ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಒಂದುಗೂಡಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಅ. 4 ಮತ್ತು 5ರಂದು ಬೆಂಗಳೂರಿನಲ್ಲಿ ಅನಿವಾಸಿ ಕನ್ನಡಿಗರ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿದ್ದು. ಅಂದು


Read More »

ಊದುಪೂಜೆಯಲ್ಲಿ ಪಿಲಿಯಾವೇಶ ಎಷ್ಟು ಸರಿ?


Share       ಇನ್ನು ಪಿಲಿಕೋಲ ನೋಡಲು ವರ್ಷಕ್ಕೊಮ್ಮೆ ಕಾಪುವಿಗೆ ಹೋಗಬೇಕಾಗಿಲ್ಲ. ಅಷ್ಟಮಿ, ಚೌತಿ, ಮಾರ್ನೆಮಿಗಳಲ್ಲಿ ನಮ್ಮೂರಿನಲ್ಲೂ ಪಿಲಿಕೋಲಗಳು ಆರಂಭವಾಗಿವೆ. ಹಿಂದೆ ಅಪೂರ್ವವಾಗಿ ಎಲ್ಲಾದರೂ ಒಂದು ಕಡೆ ಊದುಹಾಕುವಾಗ ವೇಷಸಂಕಲ್ಪಿಸಿಕೊಂಡವನಿಗೆ ಆವೇಶ ಆಗುವುದಿತ್ತು. ಹೀಗೆ ಆವೇಶವಾಗುವುದು ಶುಭಲಕ್ಷಣ


Read More »