TOP STORIES:

FOLLOW US

ಬ್ರಹ್ಮ ಶ್ರೀ ನಾರಾಯಣ ಗುರುಗಳ ಮಹಾಸಮಾಧಿ ದಿನ ಸೆಪ್ಟೆಂಬರ್21 ಇಂದು


ಮ. ವ.1104 ರ ಕನ್ನಿ 5ನೇ ದಿನ ಬೆಳಗಿನಿಂದಲೇ ಆಕಾಶವು ತೆಳುವಾದ ಮೊಡದಿಂದ ಕೂಡಿತ್ತು. ಮಧ್ಯಾಹ್ನವಾಗುತ್ತಿದ್ದಂತೆ ತುಂತುರು ಹನಿಗಳು ಬೀಳಲಾರಂಭಿಸಿದವು. ಗುರುಗಳು ಮಹಾನಿರ್ವಾಣಕ್ಕೆ ಪ್ರಾಪ್ತಿಯಾಗುವುದನ್ನು ಪ್ರಕೃತಿ ಸೂಚಿಸುವಂತೆ ತೋರುತ್ತಿತ್ತು. ಗುರುಗಳು ಪ್ರಸನ್ನರಾಗಿಯೇ ಇದ್ದರು. ಗುರುದೇವರು ಮೊದಲೇ ಸೂಚಿಸಿದ್ದಂತೆ ಆಶ್ರಮದಲ್ಲಿದ್ದ ಎಲ್ಲರಿಗೂ ಊಟವನ್ನು ಬಡಿಸಿದರು. ಪ್ರತಿಯೊಬ್ಬರ ಊಟವೂ ಆಯಿತು. ಕೆಲವು ದಿನಗಳಿಂದ ಹೆಚ್ಚಾಗಿ ಮೌನದಲ್ಲಿದ ಅವರು ಮಧ್ಯಾಹ್ನ ಶಿಷ್ಯರೊಂದಿಗೆ ಸ್ವಲ್ಪ ಮಾತನಾಡಿದರು. 3 ಗಂಟೆಯ ಸಮಯ ಆಗುತ್ತಿದ್ದಂತೆ ಶಿಷ್ಯರೊಂದಿಗೆ ತನಗೆ ಸಂಪೂರ್ಣ ಶಾಂತಿಯ ಅನುಭವ ವಾಗುತ್ತಿದೆ ಎಂದರು. ಅನೇಕ ಶಿಷ್ಯರು ಮಂತ್ರ ಪಠಣ ಮತ್ತು ಪ್ರಾರ್ಥನೆಗಳಲ್ಲಿ ನಿರತರಾಗಿದ್ದರು. 3.15 ಕ್ಕೆ ಗುರುಗಳು ಕುಳಿತುಕೊಳ್ಳಲು ಪ್ರಯತ್ನಿಸುತ್ತಿದ್ದಂತೆಯೆ ಬಳಿಯಲಿದ್ದವರ ಸಹಾಯದಿಂದ ಪದ್ಮಾಸನದಲ್ಲಿ ಕುಳಿತರು. ಶಿಷ್ಯರೆಲ್ಲರಿಗೂ ದೈವದಶಕವನ್ನು ಹಾಡಲು ಹೇಳಿದರು ದೈವದಶಕವನ್ನು ಹಾಡುತ್ತಿದ್ದಂತೆಯೇ ಹಾಗೆಯೇ ಧ್ಯಾನಸ್ಥರಾಗಿ ಕಣ್ಣುಗಳನ್ನು ನಿಧಾನವಾಗಿ ಮುಚ್ಚಿದರು. ಪದ್ಮಾಸನದಲ್ಲಿ ಧ್ಯಾನಸ್ಥರಾಗಿ ಯೋಗದಲ್ಲಿದ್ದ ಗುರುದೇವರು ಶಾಂತ ಚಿತ್ತದಿಂದ ಮಹಾಸಮಾಧಿಗೆ ಪ್ರಾಪ್ತರಾದರು.

ಮಹಾ ಸಮಾಧಿಯ ಈ ದಿನ ಕೇರಳದಲ್ಲಿ ಸಾರ್ವತ್ರಿಕ ರಜಾದಿನ. ವಿಶ್ವಾದ್ಯಂತ ಇಂದು ಸಾತ್ವಿಕ ಆಹಾರವನ್ನು ಸೇವಿಸಿ ಪೂಜೆ ಪ್ರಾರ್ಥನೆಯ ಮೂಲಕ ಗುರುಸ್ಮರಣೆ ಮಾಡುತ್ತಾರೆ ನಾವೂ ಕೂಡ ಈ ಪುಣ್ಯ ಕಾರ್ಯವನ್ನು ಮಾಡುವ.

ಥಿಯೋಸೊಫಿಕಲ್ ಸೊಸೈಟಿಯ ಎನ್ನಿಬೆಸಂಟ್ ತಮ್ಮ ಅಧಿಕೃತ ವರ್ತಮಾನ ಪತ್ರಿಕೆಯಾದ ಸನಾತನ ಧರ್ಮದಲ್ಲಿ ನಾರಾಯಣ ಗುರುಗಳು ಸಮಾಧಿಯಾದಾಗ ಹೀಗೆ ಬರೆಯುತ್ತಾರೆ. ” ಅವರೊಬ್ಬರು ಪ್ರಕಾಶಮಯ ಪೂರ್ಣ ಸೂರ್ಯನೇ ಆಗಿದ್ದರೆ… ಅವರು ಯೋಗದಲ್ಲಿ ಪತಂಜಲಿ. ಜ್ಞಾನದಲ್ಲಿ ಶಂಕರ, ತ್ಯಾಗದಲ್ಲಿ ಬುದ್ಧ, ಸ್ಥಿರತೆಯಲ್ಲಿ ನಭಿ, ಮಾನವ ಸೇವೆಯಲ್ಲಿ ಜೀಸಸ್,… ಅವರು ದೇವರು. ಮನುಷ್ಯ ರೂಪಧಾರಣೆ ಮಾಡಿದ ಅವತಾರ ಪುರುಷರಾದ ಅವರು ಮಹಿಮಾಯುಕ್ತ ತೇಜಸ್ಸಿನ ತನ್ನ ಜೀವನೊದ್ಧೇಶಗಳನ್ನು ಪೂರೈಸಿ, ಎಲ್ಲಿಂದ ಬಂದಿದ್ದರೋ ಅಲ್ಲಿಗೆ ತೆರಳಿದರು. ….ನಿಜವಾಗಿಯೂ ಅವರೊಬ್ಬ ಅವತಾರಿ. ಮನುಷ್ಯರಲ್ಲಿ ದೇವರು. ಭವಿಷತ್ತಿನ ಭಾರತ ಅವರನ್ನು ದೇವರಾಗಿ ಪೂಜಿಸುವುದು.”

(ಆಧಾರ ಶ್ರೀ ನಾರಾಯಣ ಗುರು ವಿಜಯ ದರ್ಶನ: ಬಾಬು ಶಿವಪೂಜಾರಿ)

✍ ರಾಜೇಂದ್ರ ಚಿಲಿಂಬಿ


Share:

More Posts

Category

Send Us A Message

Related Posts

ACP ರೀನಾ ಸುವರ್ಣಗೆ ಜೀ ಕನ್ನಡ ನ್ಯೂಸ್‌ ಅಚೀವರ್ಸ್‌ ಅವಾರ್ಡ್ಸ್‌- 2025


Share       3ನೇ ವಾರ್ಷಿಕೋತ್ಸವದ ಅಂಗವಾಗಿ ಜೀ ಕನ್ನಡ ನ್ಯೂಸ್‌ ವತಿಯಿಂದ, Zee Achievers Awards ಕಾರ್ಯಕ್ರಮವನ್ನು ದಿ ರಿಟ್ಸ್‌ ಕಾರ್ಲ್‌ಟರ್ನ್‌ನಲ್ಲಿ ಆಯೋಜಿಸಲಾಗಿತ್ತು, ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯಾತಿಗಣ್ಯರನ್ನು ಗುರುತಿಸಿ ಜೀ ಕನ್ನಡ


Read More »

ಮುಂಬಯಿ ಎನ್‌ಸಿಪಿ (ಎಸ್‌ಪಿ) ಈಶಾನ್ಯ ಜಿಲ್ಲಾ ನಿರೀಕ್ಷಕರಾಗಿ ಲಕ್ಷ್ಮಣ್ ಸಿ. ಪೂಜಾರಿ ಚಿತ್ರಾಪು ಆಯ್ಕೆ


Share       ಮುಂಬಯಿ, ಮಾ. 21: ಎನ್‌ಸಿಪಿ (ಎಸ್‌ಪಿ) ಈಶಾನ್ಯ (ಉತ್ತರ ಮುಂಬಯಿ) ಜಿಲ್ಲಾ ನಿರೀಕ್ಷಕರಾಗಿ ತುಳು-ಕನ್ನಡಿಗಲಕ್ಷ್ಮಣ್ ಸಿ. ಪೂಜಾರಿ ಚಿತ್ರಾಪು ಅವರನ್ನು ಪಕ್ಷದ ಅಧ್ಯಕ್ಷೆ ರಾಖಿ ಜಾಧವ್ ಅವರು ನೇಮಕ ಮಾಡಿದ್ದಾರೆ. ಮಂಗಳೂರು ಚಿತ್ರಾಪು


Read More »

ಬಿಲ್ಲವಾಸ್ ಫ್ಯಾಮಿಲಿ ದುಬೈ ಸಂಘಟನೆ ; ಉಪ ಪೊಲೀಸ್ ಅಧಿಕ್ಷಕರಾದ ಎಸ್ ಮಹೇಶ್ ಕುಮಾರ್ ರವರ ಮನದಾಳದ ಮಾತು


Share       ಬಿಲ್ಲವಾಸ್ ಫ್ಯಾಮಿಲಿ ದುಬೈ, ಸಮುದಾಯದ ಸಾಮಾಜಿಕ ಚಟುವಟಿಕೆಗಳಲ್ಲಿ ಮಂಚೂಣಿ ಯಲ್ಲಿರುವ ಸಂಘಟನೆ. ಇತ್ತೀಚೆಗೆ ಖಾಸಗಿ ಕಾರ್ಯಕ್ರಮದ ನಿಮಿತ್ತ ದುಬೈಗೆ ಪ್ರಯಾಣ ಬೆಳೆಸಿದಾಗ ಈ ಸಂಘಟನೆಯ ಕಾರ್ಯವೈಖರಿ ಯನ್ನು ಕಣ್ಣಾರೆ ನೋಡುವ ಅವಕಾಶ ಒದಗಿ


Read More »

ನಾರಾಯಣ ಗುರುಗಳ ತತ್ವದಂತೆ ಎಲ್ಲರೂ ಜೊತೆಗೂಡಿ ಮುನ್ನೆಡೆಯಬೇಕು : ಪದ್ಮರಾಜ್ ಆರ್ ಪೂಜಾರಿ


Share       ಬಂಟ್ವಾಳ: ಯುವವಾಹಿನಿ(ರಿ.) ಮಾಣಿ ಘಟಕದ 2025-26 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ ದಿನಾಂಕ 10-03-2025 ರ ಸೋಮವಾರದಂದು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದ ನೂತನ ನಿವೇಶನದಲ್ಲಿ ಜರುಗಿತು. ಪದಗ್ರಹಣ


Read More »

ಕೊಲ್ಲಿ ರಾಷ್ಟ್ರ ಕತಾ‌ರ್ ದೇಶದಲ್ಲಿ ಕತಾರ್ ಬಿಲ್ಲವಸ್ ಸಂಘದ ಮೊಟ್ಟ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಅಪರ್ಣ ಶರತ್


Share       ಕೊಲ್ಲಿ ರಾಷ್ಟ್ರ ಕತಾ‌ರ್ ದೇಶದಲ್ಲಿ ನಮ್ಮ ತುಳುವರು ಹಲವಾರು ವರ್ಷಗಳಿಂದ ವಾಸವಿದ್ದಿದ್ದು, ಇಂದಿಗೂ ತುಳುವ ಮಣ್ಣಿನ ಪ್ರೀತಿಯನ್ನು ಮರೆತಿಲ್ಲ. ತುಳುನಾಡಿನ ಸಂಸ್ಕೃತಿ, ಆಚಾರ-ವಿಚಾರಗಳನ್ನು ಮರೆಯದೆ ಇಂದಿಗೂ ತಾವು ನೆಲೆ ನಿಂತ ಮಣ್ಣಿನಲ್ಲಿ ಸಂಭ್ರಮಿಸುತ್ತಾರೆ


Read More »

ದಮ್ಮಾಮ್: ಸೌದಿ ಬಿಲ್ಲವಾಸ್ ದಮ್ಮಾಮ್ ಸಂಘದ ಮಹಾಸಭೆ


Share       ದಮ್ಮಾಮ್: ಶ್ರೀ ನಾರಾಯಣ ಗುರು ಅವರ ತತ್ವ ಸಂದೇಶಗಳನ್ನು ಅಳವಡಿಸಿಕೊಂಡು ದಮ್ಮಾಮ್ ಬಿಲ್ಲವಾಸ್ ಸೌದಿ ಅರೇಬಿಯ ಸಂಘವನ್ನು ಮುನ್ನಡೆಸಬೇಕೆಂದು ಹಾಗು ಸಮಾಜದಲ್ಲಿರುವ ಶೋಷಿತರ , ಅಸಹಾಯಕರ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಾಗು


Read More »