TOP STORIES:

FOLLOW US

ಮಂಗಳೂರಿನ ಅದ್ಭುತ ಕಲೆಗಾರ ಬಿ.ಎಸ್.ಎನ್.ಎಲ್ ಕಛೇರಿ ಕಾವಲುಗಾರ – ದಯಾನಂದ ಪಿ. ಅಂಚನ್


ಪ್ರತಿಭೆಗೆ ವಯಸ್ಸಿನ ಮೀತಿಯಾಗಲಿ ಮಾಡುವ ಕೆಲಸವಾಗಲಿ ಅಡ್ಡಿಯಾಗುವುದಿಲ್ಲ. ಆಸಕ್ತಿ ಇದ್ದರೆ ಸಾಕು ಸಮಯ ವ್ಯರ್ಥ ಮಾಡದೆಸಿಕ್ಕ ಬಿಡುವಿನ ಸಮಯದಲ್ಲಿ ಪ್ರತಿಭೆಯ ಅನಾವರಣ ಮಾಡಬಹುದು ಎಂಬುದಕ್ಕೆ ಉತ್ತಮ ಉದಾಹರಣೆ ನಮ್ಮ ನಡುವೆಮಂಗಳೂರಿನ ಬಿ.ಎಸ್.ಎನ್. ಎಲ್ ಕಛೇರಿಯಲ್ಲಿ ಕಾವಲುಗಾರರಾಗಿ ಬಿಡುವಿನ ವೇಳೆಯಲ್ಲಿ ಅಲ್ಲೇ ಮೂಲೆಯಲ್ಲಿ ಖುರ್ಚಿಯಲ್ಲಿಕುಳಿತು ಬಿಳಿ ಹಾಳೆಯಲ್ಲಿ ಚಿತ್ರ ಬಿಡಿಸುತ್ತ, ಗೋಡೆಯಲ್ಲಿ ತಮ್ಮ ಮೊಬೈಲ್ ಮೂಲಕ ಶೇಡೋ ಪ್ಲೇ ಮಾಡುವ ವಿಶಿಷ್ಟ ಕಲಾವಿದಹಾಗೇ ಎಲ್ಲಾರಲ್ಲೂ ಪ್ರೀತಿಯಿಂದ ಮಾತನಾಡುವ ಅಪರೂಪದ ವ್ಯಕ್ತಿ ದಯಾನಂದ ಪಿ. ಅಂಚನ್. ಚಿಕ್ಕದಿರುವಾಗ ತಮ್ಮ ಮನೆಯ ಸಮೀಪದಲ್ಲಿದ್ದ ಗೋವಿಂದ ಪೈ ಅನ್ನುವವರು ಶೇಡೋ ಪ್ಲೇ ಮೂಲಕ ಗೋಡೆಯಲ್ಲಿ ಕೈಚಲನೆ ಬಳಸಿಬೆಳಕಿನ ನೆರಳಿನಲ್ಲಿ ಮೂಡಿಸುತ್ತಿದ್ದ ಹಕ್ಕಿಗಳು,ಪ್ರಾಣಿಗಳ, ಮನುಷ್ಯನನ್ನು ನೋಡುತ್ತಾ ನೋಡುತ್ತಾ ತಾವು ನಿಧಾನವಾಗಿಆಸಕ್ತಿಯಿಂದ ಸತತ ಪ್ರಯತ್ನ ಪಟ್ಟು ಶೇಡೋ ಪ್ಲೇ ಮೂಲಕ ಗಿಳಿ, ಬಾತುಕೋಳಿ, ಕೊಕ್ಕರೆ, ಮನುಷ್ಯ,ಸಿಂಹ ಹೀಗೆ ಕಲಿತರು ಹಾಗೂಮನಸ್ಸಿದ್ದರೆ ಹೇಗೆದರೂ ಕಲಿಯಬಹುದು ತಾವು ಮೊದಲು ಕೆಲಸ ಮಾಡುತ್ತಿದ್ದ ರೈಸ್ ಮಿಲ್ ನಲ್ಲಿ ಬರುತ್ತಿದ್ದ ಧೂಳಿನಲ್ಲೇ ಚಿತ್ರಬಿಡಿಸುತ್ತಾ ನಂತರ ಕಾಗದದ ಮೇಲೆ ಚಿತ್ರಗಳನ್ನು ಬಿಡಿಸಲು ಪ್ರಾರಂಭಿಸಿದರು. ಅನೇಕ ವ್ಯಕ್ತಿಗಳ ಮುಖದ ಚಿತ್ರಗಳನ್ನು ಬಿಡಿಸಿದ್ದಾರೆ.

ಮಾಡುವ ಕಾಯಕದೊಂದಿಗೆ ಹವ್ಯಾಸವನ್ನು ಬಿಡದೆ ಅನೇಕ ವರ್ಷಗಳಿಂದ ಮುಂದುವರಿಸಿಕೊಂಡು ಹೋಗುತ್ತಿರುವ ದಯಾನಂದಪಿ.ಅಂಚನ್.ವೃತ್ತಿಯಲ್ಲಿ ತಾವು ಮಂಗಳೂರಿನಲ್ಲಿರುವ ಬಿ.ಎಸ್.ಎನ್.ಎಲ್ ಕಛೇರಿಯಲ್ಲಿ ಬೆಳಗ್ಗೆ ಕಾವಲುಗಾರರು ಆದರೆಹವ್ಯಾಸವಾಗಿ ಅಧ್ಬುತವಾಗಿ ಚಿತ್ರಗಳನ್ನು ಬಿಡಿಸುವ ಕಲಾ ಆರಾಧಕರು.ಯಾರು ಆಶ್ಚರ್ಯವೆಂದರೆ ಚಿತ್ರಕಲೆ,ಶೇಡೋ ಪ್ಲೇಯಾರಲ್ಲೂ ಕಲಿಯದೆ ತಾವೇ ಸ್ವತಃ ಆಸಕ್ತಿಯಿಂದ ಅನೇಕ ವರ್ಷಗಳ ಪರಿಶ್ರಮದಿಂದ ಕಲಿತುಕೊಂಡು ತಮ್ಮ ಹವ್ಯಾಸವನ್ನುಉದ್ಯೋಗದ ಜೊತೆಗೆ ಬೆಳೆಸುತ್ತಾ ಅಧ್ಬುತವಾಗಿ ವಿವಿಧ ವ್ಯಕ್ತಿಗಳ,ಹಲವು ಸಾಧಕರ ಮುಖಗಳ ಚಿತ್ರಗಳನ್ನು ಬಿಡಿಸುತ್ತಾ, ಮೊಬೈಲ್ಬೆಳಕಿನಲ್ಲೇ ಗೋಡೆಗಳ ಮೇಲೆ ಹಕ್ಕಿ,ಹುಲಿ, ಮನುಷ್ಯ ಮಾತಾನಾಡುವುದು ರೀತಿ ಶೇಡೋ ಪ್ಲೇ ಮಾಡಿ ತೋರಿಸುವ ಸರಳ ವ್ಯಕ್ತಿದಯಾನಂದ ಪಿ. ಅಂಚನ್

ಯಾರೇ ಅವರನ್ನು ಮಾತನಾಡಿಸಿ ಅವರ ಕಲೆಯ ಬಗ್ಗೆ ಕೇಳಿದಾಗ ಪ್ರೀತಿಯಿಂದ ಬಿಡಿಸಿದ ಚಿತ್ರಗಳನ್ನು ,ಶೇಡೋ ಪ್ಲೇ ತೋರಿಸಿಅಚ್ಚರಿ ಪಡಿಸುತ್ತಾರೆ. ಸಾಧಿಸಲು ಛಲ ಹಾಗೂ ಶ್ರದ್ಧೆ ಇದ್ದರೆ ಸಾಕು. ಸ್ವಂತ ತಾವೇ ಆಸಕ್ತಿಯಿಂದ ಕಲಿತು ಇಂದಿಗೂ ಉಳಿಸಿಕೊಂಡುಬಂದಿರುವ ಅವರ ಕಲೆಯ ಮೇಲಿನ ಪ್ರೀತಿ ನಿಜಕ್ಕೂ ಪ್ರೇರಣೆ ನೀಡುವಂತದ್ದು ಹಾಗೂ ಇಂತಹ ಎಲೆಮರೆಯ ಕಾಯಿಯಂತಿರುವಅನೇಕರನ್ನು ಗುರುತಿಸಿ ಅವರಿಗೆ ಇನ್ನಷ್ಟು ಪ್ರೋತ್ಸಾಹಿಸೋಣ. ಯಾವಾಗಲಾದರೂ ಬಿ.ಎಸ್.ಎನ್.ಎಲ್ ಮಂಗಳೂರಿನ ಕಛೇರಿಗೆಹೋದಾಗ ಅಲ್ಲೇ ಹೊರಗೆ ಕುಳಿತು ಸಮಯ ಸಿಕ್ಕಾಗ ಎಳೆಎಳೆಯಾಗಿ ಚಿತ್ರವನ್ನು ಬಿಡಿಸುತ್ತಾ ಅದರಲ್ಲೇ ಖುಷಿ ಪಡುವ ದಯಾನಂದಪಿ. ಅಂಚನ್ ಅವರನ್ನು ಮಾತನಾಡಿಸಲು ಮರೆಯದಿರಿ.


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »