TOP STORIES:

*ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರಿಡಲು ತುಳುನಾಡಿನ ಎಲ್ಲಾ ಗರೋಡಿಗಳು ಮತ್ತು ಸಂಘಸಂಸ್ಥೆಗಳು ಆಗ್ರಹ ಪೂರ್ವಕ ಮನವಿಯನ್ನು ಸಲ್ಲಿಸುವಂತೆ ಉಡುಪಿ ಜಿಲ್ಲಾ ಬಿಲ್ಲವ ಯುವವೇದಿಕೆ ( ರಿ) ವಿನಂತಿ.


ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುಳುನಾಡಿನ ಸತ್ಯಪುರುಷರಾದ ಕೋಟಿ ಚೆನ್ನಯರ ಹೆಸರಿಡಲು ತುಳುನಾಡಿನ ಎಲ್ಲಾ ಗರೋಡಿಗಳು ಮತ್ತು ಸಂಘಸಂಸ್ಥೆಗಳು ಆಗ್ರಹ ಪೂರ್ವಕ ಮನವಿಯನ್ನು ಸಲ್ಲಿಸುವಂತೆ ಉಡುಪಿ ಜಿಲ್ಲಾ ಬಿಲ್ಲವ ಯುವವೇದಿಕೆ ( ರಿ) ವಿನಂತಿ.

ಪಂಚವರ್ಣದ ಪುಣ್ಯಮಣ್ಣಿನಲ್ಲಿ ಸತ್ಯ,ಧರ್ಮ, ನ್ಯಾಯ, ನೀತಿಗೆ ಬದ್ದರಾಗಿ ಸತ್ಕಾರ್ಯದ ಸೇವೆಗಳನ್ನು ನಿರ್ವಹಿಸಿ ಅಮರೈಕ್ಯರಾದ ಕೋಟಿಚೆನ್ನಯರು ಸಮಸ್ತ ಜನಮಾನಸದಲ್ಲಿ ಪ್ರಾತಃಸ್ಮರಣೀಯರಾಗಿ ನೆಲೆಗೊಂಡಿದ್ದಾರೆ.ಅವಳಿ ಜಿಲ್ಲೆಯ ಸಮಗ್ರ ಉದ್ದಾರದಲ್ಲಿ ಜೋಡು ನಂದಾದೀಪವಾಗಿ ದಾರಿತೋರುತ್ತಿರುವ ಕೋಟಿಚೆನ್ನಯರ ಹೆಸರನ್ನು ಮಂಗಳೂರು ವಿಮಾನ ನಿಲ್ದಾಣಕ್ಕೆ ಇಡಬೇಕೆನ್ನುವುದು ಬಹು ಸಮಯದ ಸರ್ವಸಮ್ಮತ ಬೇಡಿಕೆಯಾಗಿದೆ.ಅರಾಧನಾ ಅಂಶವಾಗಿ ಕೋಟಿಚೆನ್ನಯರು ಜಾತ್ಯಾತೀತವಾಗಿ ಸ್ವೀಕೃತಗೊಂಡಿದ್ದಾರೆ.ಅಧಿಕಾರಸ್ಥರು ಇಚ್ಛಾಶಕ್ತಿಯಿಂದ ಮಾಡಬೇಕಿದ್ದ ಕಾರ್ಯವೊಂದು ಇನ್ನಿಲ್ಲದ ನೆಪಗಳ ನಡುವೆ ಪ್ರಸ್ತುತ ಪದೇ ಪದೇ ಸುದ್ದಿಗ್ರಾಸವಾಗುತ್ತಿರುವುದು ವಿಷಾದನೀಯ. ಕೋಟಿಚೆನ್ನಯರ ಹೆಸರಿಡುವುದಕ್ಕೆ ಪ್ರಶ್ನಾತೀತವಾದ ಅಂಶಗಳಿದೆ ಮತ್ತು ಸೂಕ್ತವೂ, ಸಮರ್ಥನೀಯವೂ ಆಗಿದೆ.
ಈ ಕುರಿತಂತೆ ನಾವು ಜಾಗೃತಿಗೊಳ್ಳುವ ಸಮಯ ಬಂದಿದ್ದು ಸಮಸ್ತ ತುಳುನಾಡಿನಾದ್ಯಂತ ಕೋಟಿಚೆನ್ನಯರ ಪವಿತ್ರ ಆರಾಧ್ಯ ತಾಣಗಳಾದ *ಗರೋಡಿ ಸ್ಥಾನದವರು* ಒಮ್ಮತದಿಂದ ಈ ಅಭಿಯಾನದ ಕುರಿತು ಮನವಿಯನ್ನು ನೀಡುವಂತಹ ನಿರ್ಣಯವನ್ನು ತಕ್ಷಣವೇ ಕೈಗೊಳ್ಳಬೇಕೆಂದು ಉಡುಪಿ ಜಿಲ್ಲಾ ಬಿಲ್ಲವ ಯುವವೇದಿಕೆಯು ವಿನಮ್ರವಾಗಿ ವಿನಂತಿಸಿಕೊಳ್ಳುತ್ತದೆ. ಎಲ್ಲಾ ಗರೋಡಿಗಳಲ್ಲಿ ಜಾತ್ಯಾತೀತ ನೆಲೆಯಲ್ಲಿ ಸತ್ಯನಿಷ್ಠವಾಗಿ ನಿಮ್ಮ ಪ್ರಯತ್ನ ಜರಗಲಿ.ಮತ್ತು ಈ ಅಗತ್ಯ ಕಾರ್ಯದ ಕುರಿತು ಯಾವುದೇ ರಾಜಕೀಯವನ್ನು ಮತ್ತು ಪ್ರತಿಷ್ಠೆಯನ್ನು ಹೊರತು ಪಡಿಸಿ ಪಕ್ಷಾತೀತವಾಗಿ ನಾವೆಲ್ಲರೂ ಸಂಘಟಿತರಾಗಿ ಮುನ್ನಡೆಯಲು ನಿರ್ಧರಿಸೋಣ..ಸಹಕಾರವಿರಲಿ.

 

ಪ್ರವೀಣ್ ಎಂ ಪೂಜಾರಿ
ಅಧ್ಯಕ್ಷರು
ಹಾಗೂ ಸರ್ವಸದಸ್ಯರು,
ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ),


Related Posts

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »

ಪುತ್ತೂರು:ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ರವಿಕುಮಾರ್ ಕಲ್ಕಾರ್ ನಿಧನ


Share         ಪುತ್ತೂರು: ಶಾಂತಿಗೋಡು ಕಲ್ಕಾರ್ ನಿವಾಸಿ ರವಿಕುಮಾರ್ ಕಲ್ಕಾರ್(48ವ.)ರವರು ಫೆ.15ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಸಂದರ್ಭ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ ನಡೆಸಲ್ಪಟ್ಟ ಕ್ರೀಡಾಕೂಟದಲ್ಲಿ ರವಿ ಕಲ್ಕಾರ್ ರವರು


Read More »