ಮಂಗಳೂರು ಅಷೋಷಿಯೆಶನ್ (MASA)
ಸೌದಿ ಅರೇಬಿಯಾ ದಮ್ಮಾಮ್ ಇದರ ಅಧ್ಯಕ್ಷರಾದ ಶ್ರೀ ಸತೀಶ್ ಕುಮಾರ್ ಬಜಾಲ್ ಸಹಿತ ನಾಲ್ವರಿಗೆ ‘ಆಪಾಧ್ಭಾಂದವ ‘ ಪುರಸ್ಕಾರ
ಬಿಲ್ಲವ ಅಷೋಷಿಯೆಶನ್ ಸೌದಿ ಅರೇಬಿಯಾ ಇದರ ವತಿಯಿಂದ ರಿಯಾದ್ ನಲ್ಲಿ ಬಹ್ಮಶೀ ನಾರಾಯಣ ಗುರುಗಳ 167 ನೇಯಗುರು ಜಯಂತಿಯನ್ನು ಬಹಳ ವಿಜ್ರಂಭನೆಯಿಂದ ಆಚರಿಸಲಾಯಿತು. ಅದರ ಅಂಗವಾಗಿ ಸಭಾ ಹಾಗೂ ಸಾಂಸೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ತದನಂತರ
ಕೊರೋನದ ಕಷ್ಟ ಸಮಯದಲ್ಲಿ ರೋಗಿಗಳಿಗೆ ಹಾಗೂ ಆರ್ಥಿಕವಾಗಿ ಸಮಸ್ಯೆ ಇದ್ದವರಿಗೆ ರಾತ್ತಿ ಹಗಲು ಎನ್ನದೆ,ಅಶಕ್ತರಿಗೆ ಸಹಾಯ ಮಾಡಿದ ಹಾಗೂ ಸೌದಿಯಲ್ಲಿ ಕೊರೋನ ಸಮಯದಲ್ಲಿ ಮತ್ತು ಇನ್ನಿತರ ಸಮಯದಲ್ಲಿ ಮೃತ ಪಟ್ಟವರ ಮೃತದೇಹವನ್ನು ಎಲ್ಲಾ ಸರಿಯಾದ ದಾಖಲೆ ಪತ್ರ ಗಳೊಂದಿಗೆ ಅವರ ಕುಟುಂಬಕ್ಕೆ ತಲುಪಿಸುವ ಮೂಲಕ ಮಾನವೀಯತೆ ಮೆರೆದನಾಲ್ವರು ಮಹಾನೀಯರಾದ
ಶ್ರೀ ಸತೀಶ್ ಕುಮಾರ್ ಬಜಾಲ್ ದಮ್ಮಾಮ್, ಸತೀಶ್ ಅಮೀನ್ ರಿಯಾದ್, ಸುಂದರದಾಸ್ ಪೂಜಾರಿ ಜುಬೈಲ್ , ಸುಧೀರ್ಕೋಟ್ಯಾನ ರಿಯಾದ್ ಇವರೆಲ್ಲರಿಗೆ “ಆಪತ್ಭಾಂದವರು “ ಎಂಬ ಪುರಸ್ಕಾರ ನೀಡಿ ಗೌರವಿಸಲಾಯಿತು.